ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ಅನುರಾಧ ಜನಾರ್ದನ್ ನೆಟ್ಟಾರು

ಬಾಳು ಬೆಳಕಾಗಲಿ

ಮಣ್ಣಿಂಬ ಸಿರಿಯಲಿ ಕನಸುಗಳ ಬಿತ್ತಿದರು
ತನ್ನೊಡಲ ಹಸನುಗೊಳಿಸಿ ಜಗಕೆ ಬೆಳಕಾದವರು
ನೇಸರನ ತಾಪವನುಹೃದಯದಲಿ ಬೆಳಗಿಸಿ
ದಣಿದ ತನುವಲ್ಲು ಅಮೃತವ ಸಿಂಪಡಿಸಿದವರು

ಆತ್ಮವಿಶ್ವಾಸದಿ ಬೀಜವನು ಬಿತ್ತಿ
ಕಾಯುತಿಹರು ಸುಡುತಿದ್ದರೂ ನೆತ್ತಿ
ಶ್ರಮದ ಫಲಗಳು ಇನ್ನೆಲ್ಲೋ ಸೋರುತ್ತಿವೆ
ಬೆವರ ಹನಿಗಳು ನೋವಿನ ಕತೆ ಹೇಳುತಿವೆ!!

ನೊಗ ಹಿಡಿದ ಬದುಕಿನ ಬಂಡಿಯದು ಸಾಗುತ್ತಿದೆ
ಗಾಲಿಗಳಿಗೆ ನ್ಯಾಯದ ಶಕ್ತಿ ತುಂಬೋಣ
ಪ್ರಾಂಜಲ ಮನದ ಕೂಗದು ಕೇಳುತ್ತಿದೆ
ಆ ಬದುಕು ಹಸನಾಗಿರಲು ದೇವರಿಗೆ ನಮಿಸೋಣ


ಅನುರಾಧ ಜನಾರ್ದನ್ ನೆಟ್ಟಾರು

About The Author

Leave a Reply

You cannot copy content of this page

Scroll to Top