ಅನುರಾಧ ಜನಾರ್ದನ್ ನೆಟ್ಟಾರು ಕವಿತೆ-ಬಾಳು ಬೆಳಕಾಗಲಿ

ಕಾವ್ಯಸಂಗಾತಿ

ಅನುರಾಧ ಜನಾರ್ದನ್ ನೆಟ್ಟಾರು

ಬಾಳು ಬೆಳಕಾಗಲಿ

ಮಣ್ಣಿಂಬ ಸಿರಿಯಲಿ ಕನಸುಗಳ ಬಿತ್ತಿದರು
ತನ್ನೊಡಲ ಹಸನುಗೊಳಿಸಿ ಜಗಕೆ ಬೆಳಕಾದವರು
ನೇಸರನ ತಾಪವನುಹೃದಯದಲಿ ಬೆಳಗಿಸಿ
ದಣಿದ ತನುವಲ್ಲು ಅಮೃತವ ಸಿಂಪಡಿಸಿದವರು

ಆತ್ಮವಿಶ್ವಾಸದಿ ಬೀಜವನು ಬಿತ್ತಿ
ಕಾಯುತಿಹರು ಸುಡುತಿದ್ದರೂ ನೆತ್ತಿ
ಶ್ರಮದ ಫಲಗಳು ಇನ್ನೆಲ್ಲೋ ಸೋರುತ್ತಿವೆ
ಬೆವರ ಹನಿಗಳು ನೋವಿನ ಕತೆ ಹೇಳುತಿವೆ!!

ನೊಗ ಹಿಡಿದ ಬದುಕಿನ ಬಂಡಿಯದು ಸಾಗುತ್ತಿದೆ
ಗಾಲಿಗಳಿಗೆ ನ್ಯಾಯದ ಶಕ್ತಿ ತುಂಬೋಣ
ಪ್ರಾಂಜಲ ಮನದ ಕೂಗದು ಕೇಳುತ್ತಿದೆ
ಆ ಬದುಕು ಹಸನಾಗಿರಲು ದೇವರಿಗೆ ನಮಿಸೋಣ


ಅನುರಾಧ ಜನಾರ್ದನ್ ನೆಟ್ಟಾರು

Leave a Reply

Back To Top