ಡಾ.ಕಸ್ತೂರಿ ದಳವಾಯಿ-ನಿನ್ನೂಟ್ಟಿಗೆ

ಕಾವ್ಯಸಂಗಾತಿ

ಡಾ.ಕಸ್ತೂರಿ ದಳವಾಯಿ-

ನಿನ್ನೂಟ್ಟಿಗೆ

ಹೃದಯದ ಹಂಬಲ
ನಿಮ್ಮ ಬೆಂಬಲದಿಂದ
ನಂಬಿ ಬಾಳ ದೋಣಿ
ಒಲುಮೆಯಲೀ
ನಡೆಸಿರುವೆ
ನಿನ್ನೊಟ್ಟಿಗೆ
ಒಡೆಯನೆ
ಹೃದಯದೀಪ
ಬೆಳದಿಂಗಳ
ಬೆಳಕಲ್ಲಿ
ನಿನ್ನರಸಿ
ಬಯಸಿ ಬಂದೆ
ವಿಧಿ ತಂದ ವಧುವಾಗಿ
ಕೈ ಹಿಡಿದು ಬಂದವಳು
ನಾನು.ಧರ್ಮ.ಅರ್ಥ. ಕಾಮ.ಮೋಕ್ಷದ
ಬಾಳ ಪಯಣದಿ
ಹೊಂಗನಸ
ಕಾಣುವೆ
ಕಣ್ಮರೆಯಾಗುವವರಗೆ
ಕೈ್ ಹಣೆಗೆ ಹಚ್ಚಿ
ನನ್ನ ದೇವನೆ
ಬಸವನ ಉಸಿರನ ಉಸಿರಲ್ಲಿಡಗಿದ
ನೀವೆ ಪಾವನ
ನನ್ನ ಜೀವವೆ.!

————–

ಡಾ.ಕಸ್ತೂರಿ ದಳವಾಯಿ

Leave a Reply

Back To Top