ಡಾ.ಡೋ.ನಾ.ವೆಂಕಟೇಶ-ಪ್ರಾಂಜಲ ಪ್ರತಿಜ್ಞೆ

ಕಾವ್ಯಸಂಗಾತಿ

ಡಾ.ಡೋ.ನಾ.ವೆಂಕಟೇಶ-

ಪ್ರಾಂಜಲ ಪ್ರತಿಜ್ಞೆ

ಅಂಜಲೀ ಬದ್ಧಳಾಗಿ,
ಉದರದೊಳ ದುಃಖದ
ಮಡುವಿಂದ ಕ್ರುದ್ಧಳಾಗಿ
ಕೇಳಿದಳು ಆ ತಾಯಿ-

ಓ ವಿದ್ರೋಹಿಯೇ ಯಾಕಾಗಿ
ನನ್ನ ಒಡಲ ಬರಿದು ಮಾಡಿದೆ
ಯಾಕಾಗಿ ನನ್ನ ದೇಶದ ವೀರ
ಯೋಧನನ್ನ ಈಗಾಗಲೇ ಅಮರನಾಗಿಸಿದೆ !

ಬರಿದಾದ ಈ ಒಡಲ ಪ್ರತಿಜ್ಞೆ ಕೇಳು
ಈ ನೆಲ ಜಲದ ದ್ರೋಹಿಯೇ-
ನನ್ನ
ಪ್ರಾಂಜಲನ
ಕೊಂದ ದುಷ್ಟ ವಿದ್ರೋಹಿಯೇ
ಅಗಣಿತ ಪ್ರಾಂಜಲರು ಮತ್ತೆ ಮತ್ತೆ ಉದ್ಭವಿಸಿ ನನ್ನ ಭಾರತದಾಂಬೆಯ

ಉದರದೂಳಗಿಂದ ಸಿಗಿದಟ್ಟುವರು ನಿನ್ನ ಈ
ಧರೆಯೊಳಗಿನಿಂದ ನಿನ್ನ ಈ
ದುರ್ದೆಶೆಯ ಕ್ರೌರ್ಯಗಳ
ಹೀನ ಕಾಯಗಳನ್ನ
ಪ್ರತಿ ಧ್ವನಿಸುವರು ಆಕಾಶದಿಂದ-

ಜೈ ಪ್ರಾಂಜಲ ಜೈ
ಜೈ ಭಾರತಾಂಬೆ ಜೈ
ಹರಸುವರು
ಹೃದಯ ತುಂಬಿದ ಬಂಧದಿಂದ
ಹೂ ಮಳೆ ಹರಿಸುವರು ಪ್ರತಿ
ಭಾರತೀಯನ ಮನದಾಳದಿಂದ!!

————————–

ಡಾ.ಡೋ.ನಾ.ವೆಂಕಟೇಶ

9 thoughts on “ಡಾ.ಡೋ.ನಾ.ವೆಂಕಟೇಶ-ಪ್ರಾಂಜಲ ಪ್ರತಿಜ್ಞೆ

  1. ದಿವಂಗತ Captain ಪ್ರಾಂಜಾಲರಿಗೆ ಭಾವಪೂರ್ಣ ಶ್ರದ್ಧಾಂಜಲಿಗಳು.

  2. ಪ್ರಾಂಜಲರಿಗೆ ಹೃದಯಾಂತರಾಳದಿಂದ ಬಂದ ಭಾವ ಪೂರ್ಣ ನಮನ.,

Leave a Reply

Back To Top