ಅಂಕಣ ಬರಹ

ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ

ಸಾವಿಲ್ಲದ ಶರಣರು

ಕುರುಡರ ಬಾಳಿನ ಬೆಳಕು   

ಡಾ ಪುಟ್ಟರಾಜ ಗವಾಯಿಗಳು

ಅನಾಥರು ಅಬಲರು ಕುರುಡರು ಏನಿಲ್ಲದೆ ಬಳಲಿದ ಕಂದಮ್ಮಗಳು ಮುಂದೆ ಭಾರತದ  ಸರ್ವ  ಶ್ರೇಷ್ಠ ಸಂಗೀತ ಮತ್ತು ಸಾಹಿತ್ಯ ದಿಗ್ಗಜರೆನಿಸಿಕೊಳ್ಳುತ್ತಾರೆ ಎಂದು ಯಾರು ಅಂದು ಕೊಂಡಿರಲಿಲ್ಲ. ನನ್ನ ಲೇಖನದ ಕಥಾನಾಯಕ ಪರಮಪೂಜ್ಯ ಡಾ ಪುಟ್ಟರಾಜ ಗವಾಯಿಗಳ

ಜೀವನ ಸಂಘರ್ಷ ನಿಜಕ್ಕೂ ನಮಗೆಲ್ಲ ಅಚ್ಚರಿ ಮೂಡಿಸುತ್ತದೆ.

ಎರಡು ವರುಷದ ಕಂದಮ್ಮ  ಎಲ್ಲವನ್ನೂ ಕಳೆದುಕೊಂಡು ಅನಾಥ ಸ್ಥಿತಿಯಲ್ಲಿರುವಾಗ ಅವರ ಪಾಲಿಗೆ ದೊರೆತವರೇ ಶ್ರೀ ಪಂಚಾಕ್ಶರಿ ಗವಾಯಿಗಳು ಶ್ರೀ ವೀರೇಶವರ ಪುಣ್ಯಾಶ್ರಮ ಗದಗ.

 ಕರ್ನಾಟಕದ ನಾಟಕ ಮತ್ತು ಸಂಗೀತಕ್ಕೆ ಹೊಸ ರೂಪವನ್ನು ಕೊಟ್ಟವರು ಡಾ ಪುಟ್ಟರಾಜ ಗವಾಯಿಗಳು 

  ಬಾಲ್ಯದಲ್ಲಿ ಎರಡು ವರ್ಷಕ್ಕೆ ತಂದೆ ಹಾಗು ತಾಯಿಯನ್ನು ಕಳೆದುಕೊಂಡು ಅನಾಥನಾದ ಪುಟ್ಟಯ್ಯನನ್ನು ಸೋದರಮಾವ ಚಂದ್ರಶೇಖರಯ್ಯ ಬೆಳೆಸಿದರು. ಎಂಟು ವರ್ಷದವರೆಗೆ ತನ್ನಲ್ಲಿದ್ದ ಸಂಗೀತಜ್ಞಾನವನ್ನು ಮಗುವಿಗೆ ನೀಡಿದರು. ಆ ಬಳಿಕ ನವಲಗುಂದದ ಗವಿಮಠಕ್ಕೆ ಕರೆತಂದು ಅಲ್ಲಿ ಬಂದಿದ್ದ ಪಂಚಾಕ್ಷರಿ ಗವಾಯಿಗಳ ಉಡಿಯಲ್ಲಿ ಪುಟ್ಟಯ್ಯನನ್ನು ಹಾಕಿದರು. ಈ ಅಂಧ ಗುರು ಹಾಗು ಅಂಧ ಶಿಷ್ಯ ಸಂಗೀತ ಪ್ರಪಂಚವನ್ನು ಬೆಳಗುತ್ತಾರೆಂದು ಆಗ ಯಾರು ತಿಳಿದಿರಲಿಲ್ಲ. ತಮ್ಮ ಗುರು ಕಲಿತಂತೆಯೇ ಪುಟ್ಟರಾಜರೂ ಸಹ ಸುತ್ತಲಿನ ಪಂಡಿತರಿಂದ ಸಂಗೀತವನ್ನು, ಸಂಗೀತ ವಾದ್ಯ ಗಳನ್ನು ಅಲ್ಲದೆ, ಸಂಸ್ಕೃತ ಹಾಗು ಕನ್ನಡದ ವ್ಯಾಕರಣ ಮೊದಲಾದವ ಸಹ ಕಲಿತರು. ತಮ್ಮೊಂದಿಗೆ ಜೊತೆಯಾಗಿ ಕಲಿಯುತ್ತಿದ್ದ ಇತರ ಬಾಲಕರಿಗೆ ತಾವೇ ಪಾಠ ಹೇಳಿಕೊಡುವಷ್ಟು ಪರಿಣತರಾದರು. ಕರ್ನಾಟಕ ಹಾಗೂ ಹಿಂದುಸ್ತಾನಿ ಸಂಗೀತಗಳಲ್ಲಿ ಅಲ್ಲದೆ, ಪುಟ್ಟರಾಜರು ತಬಲಾ,ಹಾರ್ಮೋನಿಯಮ್,ಪಿಟೀಲು, ಸಾರಂಗಿ, ಶಹನಾಯಿ ಮೊದಲಾದ ವಾದ್ಯಗಳನ್ನು ನುಡಿಸುವದರಲ್ಲೂ ಸಹ ಪರಿಣತರಾದರು.

ಪೀಠಾಧಿಪತಿ

ಕೇವಲ ೮ ವರ್ಷದ ಬಾಲಕರಾಗಿದ್ದಾಗ ಸಂಗೀತ ಕಲಿಕೆಯ ವಿದ್ಯಾರ್ಥಿಯಾಗಿ ಆಶ್ರಮದ ಮಡಿಲಿಗೆ ಬಿದ್ದ ಪುಟ್ಟರಾಜ ಗವಾಯಿಗಳು ಗುರುಗಳ ಆಶೀರ್ವಾದ, ನಿಷ್ಠೆ-ವಿಶ್ವಾಸ, ಸ್ವತ್ಛಂದ ಮನಸ್ಸಿನೊಂದಿಗೆ ಆಶ್ರಮದ ಪೀಠಾಧಿಪತಿ ಸ್ಥಾನಕ್ಕೇರಿದರು. ೧೯೪೪ರಲ್ಲಿ ವೀರೇಶ್ವರ ಪುಣ್ಯಾಶ್ರಮದ ಭಾರ ಹೊತ್ತ ಪುಟ್ಟರಾಜ ಗವಾಯಿ ಅವರು ತಮ್ಮ ವೈಯಕ್ತಿಕ ಬದುಕನ್ನು ಬದಿಗಿರಿಸಿ ಆಶ್ರಮದ ಅಭಿವೃದ್ಧಿ, ಅಂಧ-ಅನಾಥರ ಕಾಳಜಿಯಲ್ಲಿಯೇ ಶಿವನನ್ನು ಕಂಡರು. ‘ಕಾಯಕವೇ ಕೈಲಾಸವಯ್ಯ’ ಎಂಬ ಶರಣರ ವಾಣಿಯನ್ನು ಅಕ್ಷರಶಃ ಅನುಷ್ಠಾನಗೊಳಿಸಿದರು.

ಅರವತ್ತೆರಡು ವರ್ಷಗಳ ನಿರಂತರ ಸೇವೆ ಪರಿಶ್ರಮದಿಂದಾಗಿ ಡಾ ಪುಟ್ಟರಾಜ ಗವಾಯಿಗಳು

ಕುರುಡರ ಬಾಳಿನ ನಂದಾ ದೀಪವಾದರು.

ದಿನಚರಿ

ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ನಿತ್ಯಕರ್ಮ ಹಾಗೂ ಯೋಗದ ಅನಂತರ ಬಾವಿ ನೀರಿನ ಮಜ್ಜನದೊಂದಿಗೆ ಮಡಿಯಾಗಿ ಪೂಜಾ ಕೋಣೆ ಸೇರಿದರೆ ಸಾಕು ಹೊರಗಿನ ಜಗತ್ತನ್ನೆ ಮರೆಯುತ್ತಿದ್ದರು. ಪೂಜಾ ಕೋಣೆಯಲ್ಲಿ ತ್ರಿಕಾಲ ನಿಷ್ಠರಾಗಿ ನಾಲ್ಕೈದು ಗಂಟೆಗಳವರೆಗೆ ಆರಾಧ್ಯದೈವದಲ್ಲಿ ತನ್ಮಯರಾಗಿ ಪುಟ್ಟರಾಜರು ಕೈಗೊಳ್ಳುತ್ತಿದ್ದ ಇಷ್ಟಲಿಂಗ ಅರ್ಚನೆ. ಇಷ್ಟಲಿಂಗ ಪೂಜೆಯನ್ನು ದಿನದಲ್ಲಿ ಎರಡು ಬಾರಿ ಮಾಡುತ್ತಿದ್ದರು.ಪುಟ್ಟರಾಜರು ಇಷ್ಟಲಿಂಗ ಪೂಜೆ ವಿಷಯದಲ್ಲಿಯೂ ಅಷ್ಟೇ ಖ್ಯಾತರಾಗಿದ್ದರು. ಮಕ್ಕಳಿಗೆ ಪಾಠ , ಇತರರಿಗೆ ಹೇಳಿ ಪುರಾಣ, ಪೌರಾಣಿಕ ನಾಟಕಗಳನ್ನು ಉಕ್ತ ಲೇಖನವಾಗಿಸಲು ಮಾರ್ಗದರ್ಶನ. ಆಶ್ರಮಕ್ಕೆ ಬಂದ ಭಕ್ತಾದಿಗಳ ಕುಶಲೋಪರಿ ವಿಚಾರಣೆ. ಆಶ್ರಮದ ಮಕ್ಕಳ ಆಟ-ಊಟ-ಉಪಚಾರ ಹಾಗೂ ಅನಾರೋಗ್ಯ ಕಾಡಿದರೆ ಮಕ್ಕಳ ದೇಖ್ ರೇಖ್.

ಇಷ್ಟಲಿಂಗ ಪೂಜೆ

ವೀರೇಶ್ವರ ಪುಣ್ಯಾಶ್ರಮದಲ್ಲಿ ಪುಟ್ಟರಾಜ ಗವಾಯಿಗಳು ಪೂಜಾಕಾರ್ಯ ವಿಭೂತಿ, ಗಂಧ, , ಪುಷ್ಪ, ಬಿಲ್ವಪತ್ರಿ,ಬೆಳ್ಳಿಯ ಬೋಗಾಣಿ, ಕರ್ಪೂರ, ರುದ್ರಾಕ್ಷಿ ಮಾಲೆ-ಕಿರೀಟ, ಊದುಬತ್ತಿ, ಪಂಚಾಮೃತ, ಜೋಡು ಗಂಟೆಗಳನ್ನು ಕ್ರಮಬದ್ಧವಾಗಿ ಜೋಡಿಸಿಡಲಾಗುತ್ತಿತ್ತು. ಪದ್ಮಾಸನದಲ್ಲಿನ ಗುರುಗಳ ಮಂತ್ರ ಪಠನ, ಜೋಡುಗಂಟೆಯ ಪೂಜಾಕಾರ್ಯ ನೋಡುವುದೇ ಒಂದು ಭಾಗ್ಯವಾಗಿತ್ತು. ನಿತ್ಯವೂ ಮೂರು ಸಲ ಸುಮಾರು ೪ರಿಂದ ೫ ತಾಸು ರುದ್ರಾಭಿಷೇಕ, ಜಪದೊಂದಿಗೆ ಪೂಜೆ ಮಾಡುತ್ತಿದ್ದ ಪುಟ್ಟರಾಜ ಗವಾಯಿ ಅನಂತರ ಪ್ರಸಾದ ಸೇವಿಸಿ ಹೊರಬರುತ್ತಿದ್ದರು.

ಸಂಗೀತ ರಿಯಾಜ್ ಮತ್ತು ಪಾಠ

ಬೆಳಿಗ್ಗೆ ೪ ಗಂಟೆಗೆ ಎದ್ದು ಪಂಚಾಕ್ಷರಿ ಗವಾಯಿಗಳನ್ನು ನೆನೆಸಿ ರಿಯಾಜ್ ಮಾಡುವದು. ಬೆಳಿಗ್ಗೆ ಹಾಗೂ ಸಂಜೆ ಸುಮಾರು ೪ ತಾಸು ಮಕ್ಕಳಿಗೆ ಸಂಗೀತದ ಪಾಠ.

ಪುಟ್ಟರಾಜ ಗವಾಯಿಗಳ ಕೊಡುಗೆ

ನೂರಾರು ಅಂಧ ಅನಾಥ ವಿಕಲಚೇತನ ಮಕ್ಕಳಿಗೆ ಪುಟ್ಟರಾಜ ಗವಾಯಿಗಳು ಸಂಗೀತಾಭ್ಯಾಸ ನೀಡುತ್ತಿದ್ದರು. ಅಂಧತ್ವದ ಶಾಪವನ್ನು ಗ್ರಹಿಸಿದ್ದ ಗವಾಯಿಗಳು ಅವರಿಗೆ ಸ್ವತಂತ್ರವಾಗಿ ಬದುಕುಸಾಗಿಸಲು ಆತ್ಮ ವಿಶ್ವಾಸ ತುಂಬುವುದಲ್ಲದೆ ಜೀವನೋಪಾಯಕ್ಕಾಗಿ ಸಂಗೀತ ಹಾಗೂ ಪ್ರವಚನ, ಪುರಾಣ ಕಲೆಯನ್ನು ಕಲಿಸುತ್ತಿದ್ದರು. ಆಳವಾಗಿ ಅಧ್ಯಯನ ಮಾಡಿ ಸಾಧನೆಗೈದವರು ಶ್ರೇಷ್ಠ ಗಾಯಕರಾಗಿ ಹೊರಹೊಮ್ಮಿದ್ದಾರೆ, ಸಾಧಾರಣ ಪ್ರತಿಭೆ ಹೊಂದಿದವರು ಹೇಗೋ ಜೀವನ ನಡೆಸಲು ಗುರುಗಳು ಕೃಪೆ ತೋರಿದರು. ಆದರೆ ಪುಟ್ಟರಾಜರಿಗೆ ವೈಯುಕ್ತಿಕ ಕೀರ್ತಿ ಹಾಗೂ ಹಣ ಬೇಕಾಗಿರಲಿಲ್ಲ ತಮ್ಮಂತೆ ಅಸಹಾಯಕ ಸ್ಥಿತಿಯಲ್ಲಿರುವ ಲಕ್ಷಾಂತರ ವಿಕಲಚೇತನರಿಗೆ ತಾವು ಸಂಪಾದಿಸಿದ ವಿದ್ಯೆಯನ್ನು ಧಾರೆ ಎರೆಯಲಾರಂಬಿಸಿದರು. ಇಷ್ಟನ್ನೇ ಸಾಧಿಸಿದ್ದರೆ ಗವಾಯಿಗಳು ಒಬ್ಬ ಶ್ರೇಷ್ಠ ಸಂಗೀತ ಗುರುಗಳಾಗುತ್ತಿದ್ದರು. ಆದರೆ ಲಿಂಗ ಪೂಜಾ ನಿಷ್ಟೆಯಿಂದ ವಿಶೇಷ ಆಧ್ಯಾತ್ಮಿಕ ಶಕ್ತಿಯನ್ನು ಮೈಗೂಡಿಸಿಕೊಂಡರು. ಲಿಂಗಾಯತ ಧರ್ಮದ ಏಕತೆ ಸಾರುವ, ಕರಸ್ಥಲಕೆ ಬಂದು ಚುಳುಕಾದ ಇಷ್ಟಲಿಂಗದ ಶಕ್ತಿಯನ್ನು ಅರಿತುಕೊಂಡು, ಲಿಂಗಪೂಜೆ ಮಾಡುತ್ತಾ ಕಠಿಣ ವೃತ ನಿಯಮಗಳನ್ನು ಎಂತಹ ಸಂದರ್ಭದಲ್ಲಿಯೂ ಪಾಲಿಸಿಕೊಂಡು ಸ್ವತಃ ದೇವರಾದರು.

ಆಡಳಿತದ ಮೇಲುಸ್ತುವಾರಿ

ಆಶ್ರಮದ ದೈನಂದಿನ ಖರ್ಚು-ವೆಚ್ಚ ಸರಿದೂಗಿಸಲು ಹಾನಗಲ್ ಕುಮಾರಸ್ವಾಮಿಗಳು ತಮ್ಮ ಗುರುಗಳಿಗೆ ನೀಡಿದ್ದ ಜೋಳಿಗೆ ಹೆಗಲಿಗೇರಿಸಿ ಊರೂರು ಸಂಚಾರ, ನಿರಂತರ ಪ್ರವಾಸ ಪುಟ್ಟಯ್ಯಜ್ಜನವರ ಬದುಕಾಗಿತ್ತು. ೯೭ ವರ್ಷದ ವಯೋಸಹಜ ಕಾಯಿಲೆಗಳಿಂದ ಅವರು ಬಳಲಿದರೂ ಈ ನಡಾವಳಿಗೆ ಯಾವತ್ತೂ ಚ್ಯುತಿ ಬರಲಿಲ್ಲ. ಗುರು ಪಂಚಾಕ್ಷರಿ ನೀಡಿದ ಮಾರ್ಗ ದಂಡ ಯಾವತ್ತೂ ಕೈಯಲ್ಲಿ ಹಿಡಿದು ಪುಟ್ಟಯ್ಯಜ್ಜ ನಡೆದರೆ ‘ನಡೆದಾಡುವ ದೇವರು’ ಎಂಬುವುದರಲ್ಲಿ ಯಾವುದೇ ಅತಿಶಯೋಕ್ತಿ ಕಾಣುತ್ತಿರಲಿಲ್ಲ.

ಗವಾಯಿಗಳ ವ್ಯಕ್ತಿತ್ವ

ಬಂಗಾರ, ಉಡುಗೆ, ಊಟದ ವಿಷಯಗಳಲ್ಲಿ ಪುಟ್ಟರಾಜರು ಎಂದು ವ್ಯಾಮೋಹಿಗಳಾಗಿರಲಿಲ್ಲ. ಭಕ್ತರ ಸಂತಸದಲ್ಲಿ ಆತ್ಮ ತೃಪ್ತಿಯನ್ನು ಕಾಣುತ್ತಿದ್ದರು. ಪುಟ್ಟರಾಜರು ಸರ್ವಸಂಗ ಪರಿತ್ಯಾಗಿಗಳು, ಸಾಧಕರು ಆದರೆ ರುದ್ರಾಕ್ಷಿ ಸರ , ಮೈತುಂಬ ಬಂಗಾರ, ಕೈತುಂಬ ಚಿನ್ನದ ಉಂಗುರ ಗಳನ್ನು ಧರಿಸಿ ,ಮಗುವಿನ ಮುಗ್ಧನಗುವಿನ ಸಾರ್ಥ್ಯಕ್ಯವು ಗವಾಯಿಗಳ ವ್ಯಕ್ತಿತ್ವದಲ್ಲಿ ಇತ್ತು. ಇಲ್ಲೂ, ಆ ಎಲ್ಲ ಅಲಂಕೃತ ಆಭರಣಗಳು ಪುಟ್ಟರಾಜರಿಗೆ ಬೇಕಿಲ್ಲ. ಅದನ್ನು ಕಂಡು ಸಂಭ್ರಮಿಸುವ ಭಕ್ತರಿಗೆ ಬೇಕಿತ್ತು.ವ್ಯಕ್ತಿಯ ವ್ಯಕ್ತಿತ್ವದ ಆಳವನ್ನು ಅರಿಯುವ ವಿಶಾಲತೆ ಬೇಕು. ಮೇಲೆ ಗೋಚರಿಸುವ ಸಂಗತಿಗಳ ಮೂಲಕ ವ್ಯಕ್ತಿಗಳನ್ನು ಅಳೆಯುವದು ಅಸಾಧ್ಯ ಎಂಬುವುದಕ್ಕೆ ಪುಟ್ಟರಾಜರೆ ಸಾಕ್ಷಿಯಾದರು.

ಸಾಧನೆ

ಸಂಗೀತ ಸಾಹಿತ್ಯ ಹಾಗೂ ಆದ್ಯಾತ್ಮದಲ್ಲಿ ಅವರು ತೋರಿದ ಶ್ರದ್ಧೆ ಅನನ್ಯವಾದುದು. ಒಬ್ಬ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ಯಾವುದಾದರು ಒಂದು ಕ್ಷೇತ್ರದಲ್ಲಿ ಯಶ ಸಾಧಿಸಬಹುದು ಎಂಬ ತಾರ್ಕಿಕ ಲೆಕ್ಕಾಚಾರವನ್ನು ಅಲ್ಲಗಳೆದು ಎಲ್ಲ ಕ್ಷೇತ್ರಗಳಲ್ಲಿ ಹಿಡಿತ ಸಾಧಿಸಿದರು. ಸಂಗೀತದ ಎಲ್ಲ ವಾದ್ಯಗಳನ್ನು ಏಕಕಾಲಕ್ಕೆ ನುಡಿಸಿ ಕೇಳುಗರನ್ನು ಬೆರಗುಗೊಳಿಸುತ್ತಿದ್ದರು. ನವ ರಸಗಳನ್ನು ಮೇಳೈಸಿ ಪ್ರವಚನ ನೀಡುತ್ತಾ ಸಂಗೀತ ವಾದ್ಯಗಳನ್ನು ಪ್ರಸಂಗಕ್ಕೆ ತಕ್ಕಂತೆ ಬಳಸಿ ಪ್ರವಚನದ ಮೆರುಗನ್ನು ಹೆಚ್ಚಿಸುತ್ತಿದ್ದರು. ಹಿಂದೂಸ್ತಾನಿ ಹಾಗೂ ಕರ್ನಾಟಕ ಸಮಗೀತದಲ್ಲಿ ಪ್ರಭುತ್ವ ಸಾಧಿಸಿದ ಏಕಮೇವ ದಿಗ್ಗಜರೆನಿಸಿಕೊಂಡರು. ತಮ್ಮ ಗುರು ಪಂಚಾಕ್ಷರಿ ಗವಾಯಿಗಳ ನಿಧನದ ನಂತರ “ಶ್ರೀ ವೀರೇಶ್ವರ ಪುಣ್ಯಾಶ್ರಮ”ವನ್ನು ಮುನ್ನಡೆಯಿಸಿಕೊಂಡು ಹೋದವರು ಪುಟ್ಟರಾಜ ಗವಾಯಿಗಳು. ಸಂಗೀತ ಸಾಧನೆಯಲ್ಲದೆ, ಪುಟ್ಟರಾಜರು ಪುರಾಣರಚನೆ ಹಾಗು ಸುಮಾರು ೩೫ ನಾಟಕಗಳನ್ನೂ ರಚಿಸಿದ್ದಾರೆ.

ಪತ್ರಿಕಾ

೧೯೬೯ ನವೆಂಬರ ೧೦ರಂದು ,“ಪಂಚಾಕ್ಷರವಾಣಿ” ಎನ್ನುವ ಮಾಸಪತ್ರಿಕೆಯನ್ನು ಪ್ರಾರಂಭಿಸಿ ಪತ್ರಿಕಾಪ್ರಪಂಚಕ್ಕೂ ಸಹ ಪುಟ್ಟರಾಜರು ಕಾಲಿಟ್ಟರು.

ವಾದ್ಯಗಳು

‘ಉಭಯ ಗಾಯನ ವಿಶಾರದ’ (ಹಿಂದೂಸ್ತಾನಿ, ಕರ್ನಾಟಕ ಸಂಗೀತ), ‘ಸಕಲ ವಾದ್ಯ ಕಂಠೀರವ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಗವಾಯಿಯವರು ಸಾರಂಗಿ, ಪಿಟೀಲು, ವೀಣೆ, ಮೆಂಡೋಲಿಯನ್, ಸರೋದ್, ತಬಲಾ, ಹಾರ್ಮೋನಿಯಂ, ಸಂತೂರ್, ಸಿತಾರ್ ಮತ್ತಿತರ ವಾದ್ಯಗಳನ್ನು ಅತ್ಯಂತ ಸುಶ್ರಾವ್ಯವಾಗಿ, ಲೀಲಾಜಾಲವಾಗಿ ನುಡಿಸುವುದರಲ್ಲಿ ನಿಪುಣರಾಗಿದ್ದರು.

ಸನ್ಮಾನ

ಪುಟ್ಟರಾಜ ಗವಾಯಿಗಳ ಸಾಧನೆ ಹಾಗು ಸಲ್ಲಿಸಿದ ಸೇವೆಗಾಗಿ ಅವರಿಗೆ ಸಂದಿರುವ ಪುರಸ್ಕಾರಗಳು ಅನೇಕ. • ೧೯೫೯ರಲ್ಲಿ ಸುತ್ತೂರು ಮಠದಿಂದ “ಸಾಹಿತ್ಯ ಸಂಗೀತ ಕಲಾಪ್ರವೀಣ” ಪ್ರಶಸ್ತಿ • ೧೯೬೫ರಲ್ಲಿ ಬನವಾಸಿ ವಿರಕ್ತ ಮಠದಿಂದ “ಸಮಾಜ ಸೇವಾ ಧುರೀಣ” ಪ್ರಶಸ್ತಿ • ೧೯೭೦ರಲ್ಲಿ ಶ್ರೀ ಮ.ನಿ.ಪ್ರ. ನೀಲಲೋಚನ ಸ್ವಾಮಿಗಳಿಂದ “ತ್ರಿಭಾಷಾ ಕವಿರತ್ನ ಪ್ರಶಸ್ತಿ” • ೧೯೭೫ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರದಾನ • ೧೯೭೬ರಲ್ಲಿ ಮೂರುಸಾವಿರ ಮಠ, ಹುಬ್ಬಳ್ಳಿ ಇವರಿಂದ “ಸಾಹಿತ್ಯ ಸಂಗೀತ ಕಲಾಚಕ್ರವರ್ತಿ” ಪ್ರಶಸ್ತಿ • ೧೯೮೧ರಲ್ಲಿ ಮುರುಘಾಮಠ,ಧಾರವಾಡ ಇವರಿಂದ “ಧರ್ಮಭೂಷಣ” ಪ್ರಶಸ್ತಿ • ೧೯೮೯ರಲ್ಲಿ ಶ್ರೀ ಶಾಂತಲಿಂಗೇಶ್ವರ ಸಂಸ್ಥಾನಮಠ, ಆಷ್ಟಗಿ ಇವರಿಂದ “ಕಲಾಜನಕ” ಪ್ರಶಸ್ತಿ

ಸಂದ ಪ್ರಶಸ್ತಿ, ಪುರಸ್ಕಾರಗಳು

೧೯೭೦ರಲ್ಲಿ ರಾಜ್ಯೋತ್ಸವ ಪ್ರಶಸ್ತಿ-

೧೯೭೫ರಲ್ಲಿಕರ್ನಾಟಕ ವಿವಿ ಗೌರವ ಡಾಕ್ಟರೇಟ್

೧೯೯೮ರಲ್ಲಿರಾಜ್ಯ ಸರ್ಕಾರದ ಕನಕ ಪುರಂದರ ಪ್ರಶಸ್ತಿ

೧೯೯೮ರಲ್ಲಿಕನ್ನಡ ವಿವಿಯಿಂದ ‘ನಾಡೋಜ’

೧೯೯೯ರಲ್ಲಿಕೇಂದ್ರ ಸಾಹಿತ್ಯ ನಾಟಕ ಅಕಾಡೆಮಿ ಪ್ರಶಸ್ತಿ

೨೦೦೨ರಲ್ಲಿ‘ಬಸವಶ್ರೀ’ ಪ್ರಶಸ್ತಿ

೨೦೦೦ರಲ್ಲಿಕೇಂದ್ರ ಸಾಮಾಜಿಕ ನ್ಯಾಯ ಮತ್ತು ಕಲ್ಯಾಣ ಇಲಾಖೆ ಪ್ರಶಸ್ತಿ

೧೯೯೩ರಲ್ಲಿದಸರಾ ಸಂಗೀತ ವಿದ್ವಾನ್ ಪ್ರಶಸ್ತಿ

೧೯೯೧ರಲ್ಲಿಶಿಕ್ಷಣ ಇಲಾಖೆಯ ಪ್ರಶಸ್ತಿ

೧೯೬೧ರಲ್ಲಿ ಹಿಂದಿಯಲ್ಲಿ ‘ಬಸವಪುರಾಣ’ ರಚಿಸಿದ ಪುಟ್ಟರಾಜರಿಗೆ ರಾಷ್ಟ್ರಪತಿ ಡಾ. ಬಾಬು ರಾಜೇಂದ್ರ ಪ್ರಸಾದ್ ಅವರಿಂದ ಸತ್ಕಾರ

೨೦೦೭ರಲ್ಲಿ ಮಧ್ಯಪ್ರದೇಶ ಸರ್ಕಾರದ ಅತ್ಯುನ್ನತ ಪ್ರಶಸ್ತಿಯಾದ ಕಾಳಿದಾಸ ಸಮ್ಮಾನ್

[೨೦೧೦] ರಲ್ಲಿ ಪದ್ಮಭೂಷಣ ಪ್ರಶಸ್ತಿ

ತುಲಾಭಾರ

ಪುಟ್ಟರಾಜರು ತುಲಾಭಾರಗಳ ಚಕ್ರವರ್ತಿಗಳು. ಪುಟ್ಟರಾಜರು ತುಲಾಭಾರಗಳ ಚಕ್ರವರ್ತಿಗಳು. ರಾಜ್ಯ ಹಾಗು ಹೊರ ರಾಜ್ಯ ಮತ್ತು ಉತ್ತದ ಕರ್ನಾಟಕದ ಬಹುತೇಕ ಗ್ರಾಮಮಗಳ ಎಲ್ಲಾ ವರ್ಗದ ಭಕ್ತಸಮೂಹ ಒಟ್ಟು ೨೨೮೦ಕ್ಕೂ ಅಧಿಕ ತುಲಾಭಾರಗಳು ನಡೆದಿದ್ದು, ಆ ಮೂಲಕ ಬಂದ ಹಣವೆಲ್ಲ ಅಂಧ, ಅನಾಥ, ಅಂಗವಿಕಲ ವಿದ್ಯಾರ್ಥಿಗಳ ವಸತಿ, ಊಟ ಮತ್ತಿತರ ಸೌಲಭ್ಯಕ್ಕಾಗಿ ವ್ಯಯಿಸಿರುವುದು ವಿಶೇಷ. ಪುಟ್ಟರಾಜರಿಗೆ ಸಂದ ತುಲಾಭಾರ ಗಿನ್ನೆಸ್ ದಾಖಲೆಗಳ ಪುಸ್ತಕ ಮತ್ತು ಲಿಮ್ಕಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾಗಿದೆ.

ಅಪೂರ್ಣ ತುಲಾಭಾರ

ಪೂರ್ವ ನಿಗದಿಯಂತೆ ಶ್ರೀಗಳ ೯೭ನೇ ಜನ್ಮದಿನದ ಅಂಗವಾಗಿ ಅದ್ದೂರಿ ಸುವರ್ಣ ತುಲಾಭಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಈಗಾಗಲೇ ಸುವರ್ಣ ತುಲಾಭಾರ ನಡೆಸಲು ಅಗತ್ಯ ಸಿದ್ಧತೆಗಳು ಶುರುವಾಗಿದೆ. ನಾಡು ಕಂಡರಿಯದ ಅದ್ದೂರಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಶ್ರೀಗಳಿಗೆ ಗುರುವಂದನೆ ಸಲ್ಲಿಸಲಾಗುವುದು ಎಂದು ಸಚಿವರು ಹೇಳಿದ್ದರು 

ಶಿಷ್ಯ ವೃಂದ

ಪಂಡಿತ್ ಬಸವರಾಜ್ ರಾಜಗುರು, ಪಂಡಿತ್ ಫಕ್ಕಿರೇಶ ಅಗಡಿ, ಪಂಡಿತ್ ಪಂಚಾಕ್ಷರಿ ಸ್ವಾಮಿ ಮತ್ತಿಕಟ್ಟಿ, ಎಂ.ವೆಂಕಟೇಶ ಕುಮಾರ್, ಬಸವರಾಜ್ ಗೋನಾಳ, ಡಿ.ಕುಮಾರದಾಸ್, ಫಕೀರೇಶ ಕಣವಿ, ಶಿವರಾಜ್ ಗವಾಯಿ, ಸಿದ್ಧರಾಮ ಗವಾಯಿ ಕೋರವಾರ್, ಶ್ರೀ.ಮತ್ತು ಶ್ರೀಮತಿ ಬಿ.ಎಸ್. ಮಠ ದಂಪತಿ,ಶಿವಬಸಯ್ಯ ಚರಂತಿಮಠ ಕಾಡಶೆಟ್ಟಿಹಳ್ಳಿ ಮತ್ತಿತರರು ಪುಣ್ಯಾಶ್ರಮದಲ್ಲಿಯೇ ಅಭ್ಯಾಸ ಮಾಡಿ ಖ್ಯಾತಿಗೆ ಒಳಗಾದವರಲ್ಲಿ ಪ್ರಮುಖರು.

ವರನಟನಿಗೆ ಪುಟ್ಟರಾಜ ಗವಾಯಿಗಳ ಪಾಠ

ಕನ್ನಡದ ಮೇರು ನಟ, ನಟ ಸಾರ್ವಭೌಮ ಡಾ.ರಾಜಕುಮಾರ ಅವರಿಗೆ ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ಮೂರು ತಿಂಗಳು ಇದ್ದು ಸಂಗೀತ ಅಭ್ಯಾಸ ಮಾಡಿದ್ದಾರೆ.ಅಂಧ ಅನಾಥ ಮಕ್ಕಳ ಪಾಲಿಗೆ ಬೆಳಕಾಗಿ ಅವರ ಬದುಕಿನಲ್ಲಿ ಹೊಸ ಬಾಷ್ಯ ಬರೆದ ಪುಟ್ಟರಾಜ ಗವಾಯಿಗಳ ಬಗ್ಗೆ ರಾಜ್‌ರಿಗೆ ವಿಶೇಷ ಭಕ್ತಿ ಇತ್ತು. ನಾಡಿನಲ್ಲಿ ಸ್ಮರಣೀಯ ಸೇವೆಯಲ್ಲಿ ಅವಿರತವಾಗಿ ಶ್ರಮಿಸುತ್ತಿರುವ ವೀರೇಶ್ವರ ಪುಣ್ಯಾಶ್ರಮದ ಅಂಧ ಮಕ್ಕಳ ನೆರವಿಗೆಗಾಗಿ ವರನಟ ೧೯೮೨ರಲ್ಲಿ ಗದುಗಿನಲ್ಲಿ ರಸಮಂಜರಿ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಪವಿತ್ರ ಸ್ಥಳವಾದ ಪುಣ್ಯಾಶ್ರದಲ್ಲಿ ಅಂಧರಿಂದ ಪ್ರತಿಧ್ವನಿಸುತ್ತಿದ್ದ ಸಂಗೀತದ ಸ್ವರಗಳು ಕಂಡು ಆಶ್ಚರ್ಯಚಕಿತರಾದ ಡಾ.ರಾಜ್ ಅವರು ವೀರೇಶ್ವರ ಪುಣ್ಯಾಶ್ರಮದಲ್ಲಿ ೩ ತಿಂಗಳುಕಾಲ ಉಳಿದುಕೊಂಡು ಪೂಜ್ಯರಿಂದ ಸಂಗೀತ ಅಭ್ಯಾಸ ಮಾಡಿದ್ದನ್ನು ಪುಣ್ಯಾಶ್ರಮದ ಭಕ್ತರು ಇಂದಿಗೂ ಮೆಲುಕು ಹಾಕುತ್ತಾರೆ. ಶ್ರೀಮಠದ ಬಗ್ಗೆ ರಾಜ್‌ಗೆ ಇದ್ದ ಅಭಿಮಾನದ ಕಾರಣದಿಂದ ಮುಂದೆ ‘ಗಾನಯೋಗಿ ಪಂಡಿತ ಪಂಚಾಕ್ಷರ ಗವಾಯಿ’ ಹೆಸರಿನಲ್ಲಿ ನಿರ್ಮಾಣವಾದ ಕನ್ನಡ ಚಲನಚಿತ್ರದಲ್ಲಿ ಗಾಯಕರಾಗಿ ‘ಗಾನಯೋಗಿ ಗುರುವೇ’ ಎನ್ನುವ ಗೀತೆಯನ್ನು ಹಾಡುವ ಮೂಲಕ ‘ಸಾವಿರದ ಶರಣು…’ ಗವಾಯಿಗಳಿಗೆ ತಮ್ಮ ಭಕ್ತಿಯನ್ನು ಸಮರ್ಪಿಸಿದರು. ರಾಜ್ ತಮ್ಮ ಸುಮಧುರ ಕಂಠದಿಂದ ಸುಶ್ರಾವ್ಯವಾಗಿ ಹಾಡಿದ ‘ಗಾನಯೋಗಿ ಗುರುವೇ’ ಗೀತೆ ಇವತ್ತಿಗೂ ಜನಮಾನಸದಲ್ಲಿ ಉಳಿದಿದ್ದು, ಗದುಗಿನ ತುಂಬಾ ಯಾವುದೇ ಸ್ಥಳದಲ್ಲೂ ಶುಕ್ರವಾರ ಈ ಹಾಡು ಮಾರ್ಧನಿಸುತ್ತಿತ್ತು.

ವೀರೇಶ್ವರ ಆಶ್ರಮದಲ್ಲಿ ಚಿಕಿತ್ಸೆ

ಗವಾಯಿಗಳಿಗ ವೀರೇಶ್ವರ ಆಶ್ರಮದಲ್ಲಿ ಚಿಕಿತ್ಸೆ, ಗದಗ, ಬೆಳಗಾವಿಯಲ್ಲಿ ವೈದ್ಯಕೀಯ ಚಿಕಿತ್ಸೆ ಫಲಿಸದೇ ಅವರನ್ನು ಗದುಗಿಗೆ ಕರೆ ತರುವ ವ್ಯವಸ್ಥೆಯಾಗಿತ್ತು.ಆಶ್ರಮಕ್ಕೆ ಕಾಲಿಟ್ಟ ಕೂಡಲೇ ಪುಟ್ಟರಾಜ ಗವಾಯಿಗಳು ಚೇತರಿಸಿಕೊಂಡು ವೈದ್ಯರಿಗೆ ಅಚ್ಚರಿ ಮೂಡಿಸಿದರು. ಪ್ರತಿದಿನ ಹಗಲು ರಾತ್ರಿ ಭಕ್ತರು ಪೂಜ್ಯರ ದರ್ಶನ ಮಾಡಿದರು. ಐದು ದಿನಗಳ ಕಾಲ ಭಕ್ತರಿಗೆ ಮುಕ್ತ ದರ್ಶನ ನೀಡುವ ಇಚ್ಚಾ ಶಕ್ತಿ ಅವರಲ್ಲಿತ್ತೆಂದು ತೋರುತ್ತದೆ. ಕಳೆದ ಹಲವು ದಿನಗಳಿಂದ ತೀವ್ರ ಅಸ್ವಸ್ಥರಾಗಿದ್ದ ಅವರು ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದರು. ಸೋಮವಾರ ತೀವ್ರ ಅನಾರೋಗ್ಯಕ್ಕೆ ಒಳಗಾದ ಅವರನ್ನು ಬೆಳಗಾವಿ ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಯ ನಂತರ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದ್ದರಿಂದ ಅವರ ಅಶಯದಂತೆ ಗದಗಿನ ವೀರೇಶ್ವರ ಆಶ್ರಮಕ್ಕೆ ಕರೆದುಕೊಂಡು ಬರಲಾಗಿತ್ತು. ಆಸ್ಪತ್ರೆ ಯಲ್ಲಿ ದೇಹತ್ಯಾಗ ಮಾಡುವ ಮನಸ್ಸಿಲ್ಲದೆ ತಾವು ಕಟ್ಟಿ ಬೆಳೆಸಿದ ಆಶ್ರಮದಲ್ಲಿ ನಿಶ್ಚಿಂತೆಯಿಂದ ದೇಹ ಬಿಟ್ಟರು. ವೀರೇಶ್ವರ ಪುಣ್ಯಾಶ್ರಮದಲ್ಲಿ ಗವಾಯಿಗಳಿಗೆ ಪಾರ್ಥಿವ ಶರೀರಕ್ಕೆ ಧಾರ್ಮಿಕ ವಿಧಿ-ವಿಧಾನಗಳ ಅನುಸಾರವಾಗಿ ಪೂಜೆ ನೆರವೇರಿಸಿದ ನಂತರ ಭಕ್ತರ ದರ್ಶನಕ್ಕಾಗಿ ಕೆ.ಎಚ್.ಪಾಟೀಲ ಕ್ರೀಡಾಂಗಣದಲ್ಲಿ ಇಡಲಾಯಿತು. ಹಾವೇರಿ, ಧಾರವಾಡ, ಬಾಗಲಕೋಟೆ, ಕೊಪ್ಪಳ, ಬಳ್ಳಾರಿ ಮತ್ತಿತರ ಕಡೆಗಳಿಂದ ಲಕ್ಷಾಂತರ ಮಂದಿ ಭಕ್ತರು ಆಗಮಿಸಿ ಗುರುವಿನ ದರ್ಶನ ಪಡೆದರು. ಕರ್ನಾಟಕದ ಇತಿಹಾಸದಲ್ಲಿ ಇಷ್ಟೊಂದು ಜನ ಸೇರಿದ ಉದಾಹರಣೆಗಳಿಲ್ಲವಂತೆ. ಯಾವುದೆ ರೀತಿಯ ಗಲಾಟೆ ಇಲ್ಲದೆ ಗದಗ ಭಕ್ತರು ನೆರದಿದ್ದ ಜನರಿಗೆ ಊಟ ಹಾಗೂ ನೀರಿನ ವ್ಯವಸ್ಥೆ ಕಲ್ಪಿಸಿದರು. ದಾನಿಗಳ ಈ ಸ್ವಯಂ ಪ್ರೇರಿತ ಸೇವೆಯಲ್ಲಿ ಗವಾಯಿಗಳ ಸಾಧನೆ ಇದೆ, ಆಧುನಿಕ ಪವಾಡವಿದೆ. ಲಕ್ಷ ದುಡಿದವರು ಐವತ್ತು ಸಾವಿರ ರೂಪಾಯೀ  ಖರ್ಚು ಮಾಡಿದರೆ ಹತ್ತು ರೂಪಾಯೀ  ದುಡಿದವರು ಐದು ರೂಪಾಯೀ  ಖರ್ಚು ಮಾಡಿ ತಮ್ಮ ಭಕ್ತಿ ಮೆರೆದರು. ಒಂದು ರೂಪಾಯಿಗೆ ಜಗಳವಾಡುವ ಆಟೋದವರು ಪುಕ್ಕಟೆಯಾಗಿ ಜನರನ್ನು ಕರೆತಂದರು. ಹಣಕೊಟ್ಟರೂ ಸೇರದ ಜನ ಅಪಾರ ಸಂಖ್ಯೆಯಲ್ಲಿ ನೆರೆದು ರಾಜಕಾರಣಿಗಳನ್ನು ಬೆಚ್ಚಿಬಿಳಿಸಿದರು.ಕೊನೆಗೂ ಪರಮ ಪೂಜ್ಯರ ಪ್ರಾಣ ಪಕ್ಷಿ ಹಾರಿ ಹೋಯಿತು. ೧೭-೦೯-೨೦೧೦ ರಂದು ಮದ್ಯಾಹ್ನಪುಟ್ಟರಾಜ ಗವಾಯಿಯವರು ಲಿಂಗೈಕ್ಯರಾದರು.

ಅಹೋರಾತ್ರಿ ಶಿಷ್ಯರ ಗಾಯನ

ಪಂಡಿತ ಪುಟ್ಟರಾಜ ಗವಾಯಿಗಳ ಶಿಷ್ಯ ಎಂ.ವೆಂಕಟೇಶ ಕುಮಾರ, ನರಸಿಂಹ ವಡವಾಟು ಸೇರಿದಂತೆ ರಾಷ್ಟ್ರ- ಅಂತರರಾಷ್ಟ್ರೀಯ ಖ್ಯಾತಿ ಹೊಂದಿರುವ ಕಲಾವಿದರು ಅಹೋರಾತ್ರಿ ಗಾಯನ ಮಾಡುವುದರೊಂದಿಗೆ ಗುರುವಿಗೆ ಅಂತಿಮ ನಮನ ಸಲ್ಲಿಸಿದರು.

ಅಂತಿಮ ನಮನ

ಗವಾಯಿಗಳ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಲು ನೆರೆದ ಭಕ್ತ ಜನ,ಗದಗ ಸಪ್ಟಂಬರ್ ೧೮,೨೦೧೦ ಗವಾಯಿಗಳ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಲು ನಡೆದಾಡುವ ದೇವರು ಎಂದೇ ಖ್ಯಾತರಾಗಿರುವ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಗದಗಿಗೆ ಬಂದಿದ್ದರು. ಗದಗ ಜಿಲ್ಲಾ ಕ್ರೀಡಾಂಗಣದಲ್ಲಿ ಪಂ! ಪುಟ್ಟರಾಜ ಗವಾಯಿ ಅವರಿಗೆ ಅಂತಿಮ ನಮನ ಸಲ್ಲಿಸಿದ ಅನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುಟ್ಟರಾಜ ಗವಾಯಿ ಅವರು ಅಂಧ ಹಾಗೂ ಅನಾಥರ ಕಣ್ಮಣಿ ಆಗಿದ್ದರು ಎಂದರು. ಗವಾಯಿ ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರಕ್ಕಾಗಿ ಸುಮಾರು ೪೫೦ ಮಂದಿ ಸ್ವಾಮೀಜಿಗಳು ಪಂಚಾಕ್ಷರಿ ಗವಾಯಿ ಅವರ ಗದ್ದುಗೆ ಸಮೀಪದಲ್ಲಿಯೇಲಿಂಗಾಯತ  ಧಾರ್ಮಿಕ ವಿಧಿವಿಧಾನಗಳ ಮೂಲಕ ಸಮಾಧಿಯ ಸಿದ್ದತೆ ನಡೆಸಿದ್ದರು. ಸಮಾಧಿಯ ಶುದ್ದೀಕರಣ, ಪೂಜೆಗೆ ಆಕಳ ಹಾಲು, ಮೊಸರನ್ನು ಬಳಸಲಾಗಿತ್ತು. ಲಿಂಗಾಯತ  ಧರ್ಮದ ಅನುಸಾರವಾಗಿ ರುದ್ರಾ ಭಿಷೇಕ ಪಾದೋದಕ ಪ್ರಸಾದಗಳ ಮೂಲಕ ಗವಾಯಿ ಅವರ ಅಂತ್ಯಸಂಸ್ಕಾರವನ್ನು ಸಕಲ ಸರಕಾರಿ ಗೌರವದೊಂದಿಗೆ ನೆರವೇರಿಸಲಾಯಿತು.  ಚಿರನಿದ್ರೆಗೆ ಜಾರಿದ ಸಂಗೀತ ಸಾಮ್ರಾಟ ಪಂಡಿತ ಪುಟ್ಟರಾಜ ಗವಾಯಿ ಅವರ ಪಾರ್ಥಿವ ಶರೀರವನ್ನು ವೀರೇಶ್ವರ ಪುಣ್ಯಾಶ್ರಮದ ಆವರಣದಲ್ಲಿ ಇರುವ ಪಂಡಿತ ಪಂಚಾಕ್ಷರ ಗವಾಯಿಗಳ ಗದ್ದುಗೆಯ ಪಕ್ಕದಲ್ಲಿಯೇ ಸಕಲ ಧಾರ್ಮಿಕ ವಿಧಿವಿಧಾನ ಹಾಗೂ ಸರಕಾರಿ ಗೌರವಗಳೊಂದಿಗೆ ಶನಿವಾರ ಸಂಜೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಸರ್ಕಾರಿ ರಜೆ ಘೋಷಣೆ

ಪುಟ್ಟರಾಜರ ಅಂತ್ಯಕ್ರಿಯೆ ಹಿನ್ನಲೆಯಲ್ಲಿ ಸೆ. 18ರಂದು ಶನಿವಾರ ಗದಗ ಜಿಲ್ಲೆಯಾದ್ಯಂತ ಶಾಲಾ, ಕಾಲೇಜು ಹಾಗೂ ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಲಾಗಿತ್ತು. ಗದಗ, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳಿಗೆ ರಜಾ ಘೋಷಿಸಲಾಗಿತ್ತು.ರಾಜ್ಯಾದ್ಯಂತ ಸರಕಾರಿ ರಜಾ : ಪುಟ್ಟರಾಜರ ಗೌರವಾರ್ಥವಾಗಿ ಇಂದು ರಾಜ್ಯಾದ್ಯಂತ ಶಾಲಾ, ಕಾಲೇಜು, ಕಚೇರಿಗಳಿಗೆ ರಾಜ್ಯ ಸರಕಾರ ಗೌರವ ಘೋಷಿಸಿತ್ತು .

ಪುಟ್ಟರಾಜ ಗವಾಯಿ ಸ್ಮಾರಕ

ಪುಟ್ಟರಾಜರ ಕಂಚಿನ ಪುತ್ಥಳಿ ೬ ಅಕ್ಟೋಬರ್ ೨೦೧೦ -ಪುಟ್ಟರಾಜರ ಕಂಚಿನ ಪುತ್ಥಳಿ ವಾಹನಕ್ಕೆ ಪೂಜೆ ಗದಗ: ಗುಜರಾತ್‌ ರಾಜ್ಯದ ಅಹಮದಾಬಾದ್‌ನಲ್ಲಿ ರೂಪ ತಳೆದ ಗುಜರಾತ್ ರಾಜ್ಯದ ಅಹಮದಾಬಾದ್ ನಿವಾಸಿ ಜಾಸು(ಕಂಚಿನ ಮಹಿಳೆ ಎಂದೇ ಪ್ರಖ್ಯಾತಿ ) ಶಿಲ್ಪಿಯವರಿಂದ ನಿರ್ಮಿಸಿದ ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳ ೧೫ ಅಡಿ ಎತ್ತರದ ೧.೫೦ ಟನ್‌ ಭಾರದ ಕಂಚಿನ ಪುತ್ಥಳಿ ಹೊತ್ತು ತಂದ ವಾಹನ ನಗರದ ವೀರೇಶ್ವರ ಪುಣ್ಯಾಶ್ರಮಕ್ಕೆ ಆಗಮಿಸಿತು.ವಾಹನಕ್ಕೆ ಪೂಜೆ ಸಲ್ಲಿಸಿ ಬರ ಮಾಡಿಕೊಂಡರು. ಗವಾಯಿಗಳು ಲಿಂಗೈಕ್ಯರಾದ ನಂತರ ಕೇವಲ ೨೦ ದಿನಗಳಲ್ಲಿ ಪುತ್ಥಳಿಯನ್ನು ನಿರ್ಮಾಣ ಮಾಡಿಕೊಟ್ಟಿದ್ದಾರೆ ಎನ್ನುವುದೇ ಅವರ ಪ್ರೌಢಿ ಮೆಗೆ ಸಾಕ್ಷಿಯಾಗಿದೆ. ಪುತ್ಥಳಿ ನಿರ್ಮಾಣಕ್ಕೆ ತಗುಲಿರುವ ವೆಚ್ಚ ೧೯ ಲಕ್ಷ ರೂಪಾಯಿಗಳು. ೯ ಅಕ್ಟೋಬರ್ ೨೦೧೦ – ಪಂಡಿತ ಪುಟ್ಟರಾಜರ ೧೫ ಅಡಿಯ ಕಂಚಿನ ಪುತ್ಥಳಿಯನ್ನು ೯ ಅಕ್ಟೋಬರ್ ೨೦೧೦ರ ಮಧ್ಯಾನ್ಹ ೧೨.೧೫ಕ್ಕೆ ಗದಗದ ಭೂಮರಡ್ಡಿ ವೃತ್ತದ ಸಮೀಪ ಅನಾವರಣಗೊಂಡಿದೆ. ಖಾದಿ ವಸ್ತ್ರ ಧರಿಸಿ, ತಲೆಯ ಮೇಲೆ ಪೇಟ ತೊಟ್ಟು, ಕೈಯಲ್ಲೊಂದು ಕೋಲು ಹಿಡಿದು ಸ್ಥಿತಪ್ರಜ್ಞೆಯಲ್ಲಿ ನಿಂತಿರುವ ಭಂಗಿಯಲ್ಲಿ ಮೂಡಿರುವ ಗವಾಯಿ, ಜಗತ್ತಿನ ಶಾಂತಿ ಹಾಗೂ ನೆಮ್ಮದಿಗೆ ಕಣ್ಮುಚ್ಚಿ ಧ್ಯಾನಿಸುವಂತೆ ಕಾಣುತ್ತಾರೆ. [೭]

ಪವಾಡ

ಪುಟ್ಟರಾಜ ಗವಾಯಿಗಳು ಬದುಕಿದ್ದಾಗ ಅನೇಕ ಪವಾಡಗಳನ್ನು ಮಾಡಿದ್ದರು ಎಂದು ಅವರ ಶಿಷ್ಯವೃಂದದವರು ನೆನಪು ಮಾಡಿಕೊಳ್ಳುತ್ತಾರೆ. ಅದರಂತೆ ಕಂಚಿನ ಪುತ್ಥಳಿ ನಿರ್ಮಾಣ ಜಾಗದಲ್ಲೂ ಕೂಡ ಘಟಿಸಿರುವ ವಿಸ್ಮಯವನ್ನು ಕಂಡು ಎಲ್ಲರೂ ‘ಗವಾಯಿ ಜೀವಂತವಿದ್ದಾರೆ, ನಮ್ಮನ್ನು ಬಿಟ್ಟು ಹೋಗಿಲ್ಲ’ ಎಂದರು. ಗವಾಯಿಗಳನ್ನು ಬೇರೆ ಊರಿನ ಜನರು ಆಮಂತ್ರಿಸಿದರೆ “ನಿಮ್ಮೂರಿನಲ್ಲಿ ಬಾವಿ ನೀರು ಇರಬೇಕು. ಬಿಲ್ವಪತ್ರಿ ಹಾಗೂ ಬನ್ನಿಪತ್ರಿ ಇದ್ದರೆ ಮಾತ್ರ ಬರುತ್ತೇನೆ” ಎನ್ನುತ್ತಿದ್ದರಂತೆ. ಏಕೆಂದರೆ ಗವಾಯಿ ಬಿಲ್ಪಪತ್ರಿ ಹಾಗೂ ಬನ್ನಿಪತ್ರಿ ಇಲ್ಲದೆ ಶಿವಪೂಜೆ- ಇಷ್ಟಲಿಂಗ ಪೂಜೆ ಮಾಡುತ್ತಿರಲಿಲ್ಲ. ಬಾವಿ ನೀರು ಬಿಟ್ಟು ಬೇರೆ ಯಾವ ನೀರನ್ನು ಕುಡಿಯುತ್ತಿರಲಿಲ್ಲ.ಈಗ ಕಂಚಿನ ಪುತ್ಥಳಿ ಸ್ಥಾಪನೆಯಾಗಿರುವ ಜಾಗದಲ್ಲೂ ಬನ್ನಿಪತ್ರಿ, ಬಿಲ್ವಪತ್ರಿ ಗಿಡವಿದೆ. ಬಾವಿ ಇದೆ. ಇದರಿಂದ ಗವಾಯಿ ಗದುಗನ್ನು ಬಿಟ್ಟು ಹೋಗಿಲ್ಲ ಎನ್ನುತ್ತಾರೆ ಅವರ ಅಸಂಖ್ಯಾತ ಶಿಷ್ಯವೃಂದ.

ಹುಟ್ಟೂರಲ್ಲಿ ಪುಟ್ಟಯ್ಯನಿಗೊಂದು ಶಾಶ್ವತ ನೆಲೆ

ಪುಟ್ಟರಾಜ ಗವಾಯಿಗಳ ಹುಟ್ಟೂರು ಹಾವೇರಿ ತಾಲೂಕು ದೇವಗಿರಿ ಜನತೆ ಗ್ರಾಮದ ಗಿರಿ ಮಲ್ಲೇಶ್ವರನ ಸನ್ನಿಧಿಯಲ್ಲಿ ‘ಪುಟ್ಟಯ್ಯ’ನಿಗೊಂದು ಶಾಶ್ವತ ನೆಲೆ ಕಲ್ಪಿಸುವತ್ತ ಮುನ್ನಡೆದಿದ್ದಾರೆ.

ಪುಟ್ಟರಾಜರ ಮೂರ್ತಿ

ಪುಟ್ಟರಾಜರ ಮೂರ್ತಿ ಪ್ರತಿಷ್ಠಾಪನೆ ಗೊಳ್ಳಲಿರುವ ಪತ್ರೀವನ ಗ್ರಾಮದ ಜನತೆ ಮುನ್ನಡೆದಿದ್ದಾರೆ. ಹಾಗೂ ೧ ಕೋ.ರೂ. ವೆಚ್ಚದ ಸುಂದರ ಸಾಂಸ್ಕೃತಿಕ ಭವನ ಮತ್ತು ಶ್ವೇತ ವರ್ಣದ ಶಿಲೆಯಲ್ಲಿ ಪುಟ್ಟರಾಜ ಗವಾಯಿಗಳ ದೇವಸ್ಥಾನ ನಿರ್ಮಿಸುವ ದೃಢ ಸಂಕಲ್ಪ ಗ್ರಾಮಸ್ಥರು ಹೊಂದಿದ್ದಾರೆ.

ದೇವಗಿರಿಯಲ್ಲಿ ಪತ್ರೀವನ

‘ಪುಟ್ಟಯ್ಯಜ್ಜ’ನ ಹೆಸರನ್ನು ನೆಪವಾಗಿಸುವ ಭವನವಾಗದೆ ಆತನ ಕನಸಿನ ಸಾಮ್ರಾಜ್ಯವನ್ನು ನನಸಾಗಿಸುವ ಸುಪ್ರಸಿದ್ಧ ಸಂಗೀತಶಾಲೆ ಜೊತೆಗೆ ಧಾರ್ಮಿಕ, ಸಾಮಾಜಿಕ ಹಾಗೂ ಆಧ್ಯಾತ್ಮಕ ಕೇಂದ್ರವಾಗಿ, ಪ್ರವಾಸಿಗರನ್ನು ಆಕಸುವ ಸುಂದರ ಯಾತ್ರಾ ಸ್ಥಳವಾಗಿ ಹೊರಹೊಮ್ಮಬೇಕು ಎನ್ನುವ ಉದ್ಧೇಶ ಹೊಂದಲಾಗಿದೆ ಎನ್ನುವುದು. ಈಗಾಗಲೆ ನಾಲ್ಕುಏಕರೆ ವಿಶಾಲವಾದ ಜಾಗದಲ್ಲಿ ಪತ್ರಿಗಿಡ ಹಾಗೂ ಬನ್ನಿಗಿಡ ಜೊತೆಗೆ ವಿವಿಧ ಬಗೆಯ ಹೂಗಿಡಗಳನ್ನು ಬೆಳಸಲಾಗಿದ್ದು ಈ ಪವಿತ್ರ ವನದಲ್ಲಿ ಪುಟ್ಟಯ್ಯಜ್ಜನ ಪುತ್ಥಳಿ ಪ್ರತಿಷ್ಠಾಪಿಸುವ ಹಾಗೂ ಸಾಂಸ್ಕೃತಿಕ ಭವನದಮುಂಭಾಗ ಸುಂದರಸಂಗೀತ ಕಾರಂಜಿ ನಿರ್ಮಿಸುವ ರೂಪರೇಷೆ ಯೋಜಿಸಲಾಗಿದೆ.

.ಗವಾಯಿಗಳ ವ್ಯಕ್ತಿತ್ವ

ಬಂಗಾರ, ಉಡುಗೆ, ಊಟದ ವಿಷಯಗಳಲ್ಲಿ ಪುಟ್ಟರಾಜರು ಎಂದು ವ್ಯಾಮೋಹಿಗಳಾಗಿರಲಿಲ್ಲ. ಭಕ್ತರ ಸಂತಸದಲ್ಲಿ ಆತ್ಮ ತೃಪ್ತಿಯನ್ನು ಕಾಣುತ್ತಿದ್ದರು. ಪುಟ್ಟರಾಜರು ಸರ್ವಸಂಗ ಪರಿತ್ಯಾಗಿಗಳು, ಸಾಧಕರು ಆದರೆ ರುದ್ರಾಕ್ಷಿ ಸರ , ಮೈತುಂಬ ಬಂಗಾರ, ಕೈತುಂಬ ಚಿನ್ನದ ಉಂಗುರಗಳನ್ನು ಧರಿಸಿ ,ಮಗುವಿನ ಮುಗ್ಧನಗುವಿನ ಸಾರ್ಥ್ಯಕ್ಯವನ್ನು ಗವಾಗಳ ವ್ಯಕ್ತಿತ್ವದಲ್ಲಿ ಇಲ್ಲು.ಆ ಎಲ್ಲ ಅಲಂಕೃತ ಆಭರಣಗಳು ಪುಟ್ಟರಾಜರಿಗೆ ಬೇಕಿಲ್ಲ. ಅದನ್ನು ಕಂಡು ಸಂಭ್ರಮಿಸುವ ಭಕ್ತರಿಗೆ ಬೇಕಿತ್ತು.ವ್ಯಕ್ತಿಯ ವ್ಯಕ್ತಿತ್ವದ ಆಳವನ್ನು ಅರಿಯುವ ವಿಶಾಲತೆ ಬೇಕು. ಮೇಲೆ ಗೋಚರಿಸುವ ಸಂಗತಿಗಳ ಮೂಲಕ ವ್ಯಕ್ತಿಗಳನ್ನು ಅಳೆಯುವದು ಅಸಾಧ್ಯ ಎಂಬುವದಕ್ಕೆ ಪುಟ್ಟರಾಜರೆ ಸಾಕ್ಷಿಯಾದರು.

ರಚನೆಗಳು

ಸಂಗೀತ ಸಾಹಿತ್ಯ ಹಾಗೂ ಆದ್ಯಾತ್ಮದಲ್ಲಿ ಅವರು ತೋರಿದ ಶ್ರದ್ಧೆ ಅನನ್ಯವಾದುದು. ಒಬ್ಬ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ಯಾವುದಾದರು ಒಂದು ಕ್ಷೇತ್ರದಲ್ಲಿ ಯಶ ಸಾಧಿಸಬಹುದು ಎಂಬ ಲೆಕ್ಕಾಚಾರವನ್ನು ಅಲ್ಲಗಳೆದು ಎಲ್ಲ ಕ್ಷೇತ್ರಗಳಲ್ಲಿ ಹಿಡಿತ ಸಾಧಿಸಿದರು. ಸಂಗೀತದ ಎಲ್ಲ ವಾದ್ಯಗಳನ್ನು ಏಕಕಾಲಕ್ಕೆ ನುಡಿಸಿ ಕೇಳುಗರನ್ನು ಬೆರಗುಗೊಳಿಸುತ್ತಿದ್ದರು. ನವ ರಸಗಳನ್ನು ಮೇಳೈಸಿ ಪ್ರವಚನ ನೀಡುತ್ತಾ ಸಂಗೀತ ವಾದ್ಯಗಳನ್ನು ಪ್ರಸಂಗಕ್ಕೆ ತಕ್ಕಂತೆ ಬಳಸಿ ಪ್ರವಚನದ ಮೆರುಗನ್ನು ಹೆಚ್ಚಿಸುತ್ತಿದ್ದರು. ಹಿಂದೂಸ್ತಾನಿ ಹಾಗೂ ಕರ್ನಾಟಕಿ ಸಮಗೀತದಲ್ಲಿ ಪ್ರಭುತ್ವ ಸಾಧಿಸಿದ ಏಕಮೇವ ದಿಗ್ಗಜರೆನಿಸಿಕೊಂಡರು. ತಮ್ಮ ಪಂಚಾಕ್ಷರಿ ಗವಾಯಿಗಳ ನಿಧನದ ನಂತರ “ಶ್ರೀ ವೀರೇಶ್ವರ ಪುಣ್ಯಾಶ್ರಮ”ವನ್ನು ಮುನ್ನಡೆಯಿಸಿಕೊಂಡು ಹೋದವರು ಪುಟ್ಟರಾಜ ಗವಾಯಿಗಳು. ಸಂಗೀತ ಸಾಧನೆಯಲ್ಲದೆ, ಪುಟ್ಟರಾಜರು ಪುರಾಣರಚನೆ ಹಾಗು ಸುಮಾರು ೩೫ ನಾಟಕಗಳನ್ನೂ ರಚಿಸಿದ್ದಾರೆ. ಅವುಗಳಲ್ಲಿ ಪ್ರಮುಖವಾದವು ಇಂತಿವೆ:

ಸೊಲ್ಲಾಪುರದ ಸಿದ್ದರಾಮೇಶ

ಸತಿ ಸುಕನ್ಯಾ

ರಾಜಶೇಖರ ವಿಳಾಸ

ಶ್ರೀಕೃಷ್ಣ ಗಾರುಡಿಗ

ನವಯುಗದೆಡೆಗೆ

ರತ್ನಹಾರ

ಘೂಷ್ಮಾ

ಸವತಿ ಮತ್ಸರ

ನಲ್ಲೂರು ನಂಬೆಕ್ಕ

ಅಸ್ಪ್ರಷ್ಯೋದ್ಧಾರ

ದೇವರ ದುಡ್ಡು

ಕನ್ನಡದಲ್ಲಿ ರಚಿಸಿದ ಪ್ರಮುಖ ಪುರಾಣಗಳು

ಕಲಬುರ್ಗಿ ಶರಣಬಸವೇಶ್ವರ ಪುರಾಣ

ಶಿವಲಿಂಗೇಶ್ವರ ಪುರಾಣ

ಅಂಕಲಗಿ ಅಡವಿ ಸಿದ್ಧೇಶ್ವರ ಪುರಾಣ

ಚೆನ್ನಬಸವ ಸ್ವಾಮೀಜಿ ಪುರಾಣ

ಹಾವೇರಿ ಶಿವಬಸವ ಸ್ವಾಮಿ ಪುರಾಣ

ಅಕ್ಕಮಹಾದೇವಿ ಪುರಾಣ

ಗಂಜೀಗಟ್ಟಿ ಚರಮೂರ್ತೇಶ್ವರ ಪುರಾಣ

ಯೋಗಿರಾಜ ಪುರಾಣ

ತ್ರಿಷಷ್ಠಿ ಪುರಾತನರ ಪುರಾಣ

ಗುಳೇದ ಗಾದಿಲಿಂಗೇಶ್ವರ ಪುರಾಣ

ಗುರುಸಿದ್ದೇಶ್ವರ ಪುರಾಣ

ವೀರಭದ್ರೇಶ್ವರ ಪುರಾಣ

ಮುಂಡರಗಿ ಅನ್ನದಾನೇಶ್ವರ ಪುರಾಣ

ಹೇಮರೆಡ್ಡಿ ಮಲ್ಲಮ್ಮ ಪುರಾಣ

ಗುಡ್ಡಾಪೂರ ದಾನಮ್ಮದೇವಿ ಪುರಾಣ

ಚಿಕೇನಕೊಪ್ಪದ ಚೆನ್ನವೀರ ಶರಣರ ಪುರಾಣ

ನಾಲ್ವತವಾಡ ವೀರೇಶ್ವರ ಶರಣರ ಪುರಾಣ

ಹಿಂದಿಯಲ್ಲಿ ರಚಿಸಿದ ಕೃತಿಗಳು

ಬಸವೇಶ್ವರ ಪುರಾಣ

ಸಿದ್ಧಲಿಂಗ ವಿಜಯ ಪುರಾಣ

ಸಿದ್ಧಾಂತ ಶಿಖಾಮಣಿ

ಕುಮಾರ ಮಹಾ ಶಿವಯೋಗಿ

ಗುರು ಪಂಚಾಕ್ಷರ ಶಿವಯೋಗಿ ಚರಿತ್ರೆ

ಸಂಸ್ಕೃತದಲ್ಲಿ ರಚಿಸಿದ ಕೃತಿಗಳು

ಶ್ರೀಮದ್ ಕುಮಾರಗೀತ

ಲಿಂಗಾಷ್ಟಕಂ

ಪಂಚಾಕ್ಷರ ಸುಪ್ರಭಾತಂ

ಶ್ರೀರುದ್ರ ತಾತ್ಪರ್ಯ

ಕುಮಾರ ವಿಲಾಸ ಕಾವ್ಯಂ

ಲಿಂಗ ಸೂಕ್ತಂ

ಸಂಗೀತ ಕೃತಿಗಳು

ಸಂಗೀತ ಶಾಸ್ತ್ರಜ್ಞಾನ

ಗಾನ ಸುಧಾ’ ಭಾಗ-೧, ೨

ತಾಲ ಪಂಚಾಕ್ಷರಿ

ಪ್ರಮುಖ ನಾಟಕಗಳು

ನೆಲ್ಲೂರು ನೆಂಬಕ್ಕ

ಶಿವಶರಣ ಚೆನ್ನಯ್ಯ

ಶ್ರೀ ಭಗವಾನ್ ಬಸವೇಶ್ವರ

ಶ್ರೀ ಗುರು ದರ್ಶನ

ಹಾನಗಲ್ಲ ಕುಮಾರೇಶ್ವರ ಮಹಾತ್ಮೆ

ಶಿವಯೋಗಿ ಸಿದ್ಧರಾಮೇಶ್ವರ

ಶಿವಶರಣ ಮೋಳಗಿ ಮಾರಯ್ಯ

ಶಿರಹಟ್ಟಿ ಶ್ರೀ ಫಕೀರೇಶ್ವರ ಮಹಾತ್ಮೆ

ಶಿವಶರಣೆ ಉಡತಡಿ ಅಕ್ಕಮಹಾದೇವಿ

ದೇವರದುಡ್ಡು

ಸತಿ ಸುಕನ್ಯ

ದಾನವೀರ ಶಿರಸಂಗಿ

ಲಿಂಗರಾಜರು

ಮಿಂಚು

ಸವತಿ ಮಾತ್ಸರ್ಯ

ಶ್ರೀ ರಾಜಶೇಖರ ವಿಲಾಸ

ಮಹಾರತಿ ಭೀಷ್ಮ

ಕೊಟ್ಟೂರು ಬಸವೇಶ್ವರ

ಸ್ತ್ರೀ ಪ್ರೇಮ

ಮಗನ ಪ್ರೇಮ

ಶ್ರೀ ಕೃಷ್ಣ ಗಾರುಡಿ

ಅಪ್ರಕಟಿತ ನಾಟಕ

ಗೂಷ್ಮಾದೇವಿ

ಬ್ರೇಲ್ ಲಿಪಿಯ ಕೃತಿ

ಭಗವದ್ಗೀತೆ

ಹಿಂದಿ ಕೃತಿಗಳು

ಹಿಂದಿ ಚೀಸ್‌ಗಳು

ಇತರ ಕೃತಿಗಳು

ಚಂಪೂ ಕಾವ್ಯ

ಅಷ್ಟಾವರಣ ಕಥಾ ಕೀರ್ತನ ಮಾಲಿಕೆ

ಹಾನಗಲ್ಲ ಶ್ರೀ ಕುಮಾರ ಶಿವಯೋಗಿ

ತತ್ವ ಬೋಧಾಮೃತ

ಕದರಿ ರೇಮಯ್ಯ

ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ನಾಮಾವಳಿ

ಶ್ರೀ ಪಂಚಾಕ್ಷರಿ ಗವಾಯಿ

ಪ್ರಸಾದ ಮಹಿಮೆ

ಶ್ರೀ ಗುರುವಚನ ಪ್ರಭ

ಭಾವ ಮಂದಾಕಿನಿ

ವ್ಯಾಖ್ಯಾನ ರತ್ನ ಮಾಲಿಕೆ

ಗುರು ವಚನ ಪ್ರಭ

ಇಂತಹ ಕ್ಷೇತ್ರಗಳಿಗೆ ಸಾಕಷ್ಟು ಪರಿಶ್ರಮದಿಂದ ದುಡಿದು ಕಾಯಕವೇ ತಮಗೆ ಕೈಲಾಸವೆಂದು ನಂಬಿದ ಡಾ ಪುಟ್ಟರಾಜ ಗವಾಯಿಗಳು ಬಯಲಲ್ಲಿ ಬಯಲಾದರೂ.


ಡಾ ಶಶಿಕಾಂತ ಪಟ್ಟಣ ರಾಮದುರ್ಗ 

ಡಾ ಶಶಿಕಾಂತ ಪಟ್ಟಣ – ಇವರು ಮೂಲತಃ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸ್ವಾತಂತ್ರ ಹೋರಾಟದ ಮನೆತನದಲ್ಲಿ ಜನಿಸಿದರು. ತಮ್ಮ ಪ್ರಾಥಮಿಕ ಪ್ರೌಢ ಶಿಕ್ಷಣವನ್ನು ಸೈನಿಕ ಶಾಲೆವಿಜಯಪುರದಲ್ಲಿ ಪೂರೈಸಿದರು. ವೃತ್ತಿಯಲ್ಲಿ ಔಷಧ ವಿಜ್ಞಾನಿ ಪ್ರವೃತ್ತಿಯಲ್ಲಿ ಸಾಹಿತಿ ವಿಮರ್ಶಕ ಸಂಶೋಧಕ ಮತ್ತು ಹೊರತಾಗಾರರು. ಇವರು ಇಲ್ಲಿಯವರೆಗೆ 37 ಪುಸ್ತಕಗಳನ್ನು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ.ಇವರ ಗಾಂಧಿಗೊಂದು ಪತ್ರ ಡಾ ಡಿ ಎಸ ಕರ್ಕಿ ಸಾಹಿತ್ಯ ಪ್ರತಿಷ್ಠಾನದ 2022 ಶಾಲಿನ ಶ್ರೇಷ್ಠ ಕವನ ಸಂಕಲನ ಪ್ರಶಸ್ತಿ ಪಡೆದಿದ್ದಾರೆ. ಜನೆವರಿ 2023 ರಲ್ಲಿ ಡಾ ಎಂ ಎಂ ಕಲಬುರ್ಗಿ ಅವರ ಸಮಗ್ರ ಸಾಹಿತ್ಯ ಪ್ರಶಸ್ತಿ ಪಡೆದಿದ್ದಾರೆ. ಪ್ರಸಕ್ತ ಸಂಗಾತಿಯಲ್ಲಿ ಸಾವಿಲ್ಲದ ಶರಣರು ಎಂಬ ಮಾಲಿಕೆಯಲ್ಲಿ ಪ್ರತಿ ವಾರ ತಮ್ಮ ಲೇಖನವನ್ನು ಪ್ರಕಟಿಸುವರು, ಅವರ ಜ್ಞಾನ ವಿದ್ವತ್ತು ಅನುಭವಗಳನ್ನು ಮುಂಬರುವ ದಿನಗಳಲ್ಲಿ ಓದಿ ಆನಂದಿಸಿರಿ

11 thoughts on “

  1. ಡಾ.ಪುಟ್ಟರಾಜ ಗವಾಯಿಗಳ ಸಮಗ್ರ. ಚಿಂತನೆ ನ‌ಮ್ಮ ಕಣ್ಣು ತೆರೆಸಿತು.ಅನಂತ ಶರಣಾರ್ಥಿಗಳು

  2. ನಮ್ಮ ಗದುಗಿನವರಾದ..
    ಕುರುಡರ ಬಾಳಿನ ಬೆಳಕು… ಡಾ || ಪುಟ್ಟರಾಜ
    ಗವಾಯಿಗಳ ಬಗೆಗೆ … ಸಾವಿಲ್ಲದ ಶರಣರು
    ಮಾಲಿಕೆಯಲ್ಲಿ … ಅತ್ಯಂತ ಸವಿಸ್ತಾರವಾಗಿ ಅವರ ಜೀವನದ ಪ್ರತಿಯೊಂದು ಘಟ್ಟಗಳನ್ನು
    ವಿವರಿಸಿದ್ದೀರಿ.. ಸರ್
    ಧನ್ಯವಾದಗಳು ತಮಗೆ

  3. ಅಬ್ಬಾ ನಡೆದಾಡುವ ದೇವರು ಪುಟ್ಟರಾಜ ಗವಾಯಿ ಗಳ ಸುಧೀರ್ಘ ಜೀವನ ಚರಿತ್ರೆ ಅವರ ಹುಟ್ಟು,ಸಾಧನೆ, ಕೃತಿಗಳು, ಪವಾಡ, ಕೊನೆಯ ದಿನಗಳು ಒಂದೂ ಬಿಡದೆ ಸಾವಿಲ್ಲದ ಶರಣರ ಬದುಕನ್ನು ಸುಂದರವಾಗಿ ಚಿತ್ರಿಸಿದ್ದಿರಿ
    ಆ ಶರಣರು ಧಾರವಾಡದ ನಮ್ಮ ಮನೆಗೆ ಅವರ ಪಾದ ಸ್ಪರ್ಶ ಆಗಿದೆ ಎಂದು ತಿಳಿಸಲು ಹೆಮ್ಮೆ ಮತ್ತು ಸಂತೋಷ ವೆನಿಸುತ್ತದೆ

Leave a Reply

Back To Top