ಶ್ರೀಕಾಂತಯ್ಯ ಮಠ ಕವಿತೆ-ಅಂತ್ಯ ವಿಶ್ವಾಸ ಉಳಿಯಲಿಲ್ಲ

ಕಾವ್ಯ ಸಂಗಾತಿ

ಅಂತ್ಯ ವಿಶ್ವಾಸ ಉಳಿಯಲಿಲ್ಲ

ಶ್ರೀಕಾಂತಯ್ಯ ಮಠ

ಬಯಲು ಖಾಲಿಯಿತ್ತು
ಮನಸ್ಸು ಕಾದಿತ್ತು
ಅಲ್ಲಿಯವರೆಗೂ ಕನಸು ಹಿಡಿದಿಟ್ಟಿತು
ನಂಬಿಕೆಯ ಮೇಲೆ ಕಾಲು ನಿಂತಿತ್ತು

ದೂರ ಊರಿನ ಕೂಗು
ಕೇಳದೆ ಕಿವಿ ಕಿವುಡಾಗಿತ್ತು
ಅಲ್ಲಿಯವರೆಗೂ ಮೌನ ಹೊರಟಿತ್ತು.
ಬೇಸರ ಬಂದರೂ ಅವಸರ ವೇಗದಲ್ಲಿತ್ತು.

ಮಾತಿನ ಸಭೆ ಕರೆದಿದ್ದೆ
ವಿಚಾರಗಳು ತಿಳಿಬೇಕಿತ್ತು
ಹಳೆ ಯೋಚನೆ ಬಂದು ಹೋಗಿತ್ತು.
ಏನು ಹೇಳಲಿ ಒಂದು ಸಂದೇಹ ಎದೆಯಲ್ಲಿ ಹೊಕ್ಕಿತ್ತು.

ಆಲೋಚನೆ ಮೀರಿ ಮಾತು ಬಂದಿದ್ದವು
ಗುದ್ದಾಡಿ ನಿರ್ಧಾರಕ್ಕೆ ಬಂದು ಮುಕ್ತಾಯದ ಹಂತ ಕಂಡಿತ್ತು.
ಆರಂಭ ಚೆನ್ನಾಗಿರಲಿಲ್ಲ ಅಂತ್ಯ ವಿಶ್ವಾಸ ಉಳಿಸಲಿಲ್ಲ.

ಕೊನೆಗೆ ಒಂದಾಗಲಿಲ್ಲ
ಎರಡು ಕನಸು ಸುಳ್ಳಾದವು
ಭಾವ ಬದಲಾಗಿ ಭಾವನೆ ಬಂಧಿಸದೆ ಮನದ ಏಕಾಂತ ಹೆಚ್ಚಾಗಿತ್ತು.

ಕಾಣದ ದೈವಕ್ಕೆ ಮೊರೆ ಹೋದೆ
ಕಾಣುವ ಕೈ ಮುಗಿದು ಬಂದೆ
ಕಾಯಬೇಕೆನಿಸಿತು
ಹೆಜ್ಜೆ ಮುಂದಾಕಿ ಹೊರಟೆ
ಭರವಸೆಯೊಂದೆ ನನ್ನಲ್ಲಿತ್ತು.


———————–


Leave a Reply

Back To Top