ಕಾವ್ಯ ಸಂಗಾತಿ

Free Photo: Renowned Kannada literature personality Professor  Chandrashekhar Patil

ನಿಲ್ಲು ಶಾಲ್ಮಲೆ ನಿಲ್ಲು
ಇಷ್ಟೊಂದು ಅವಸರವ ಏಕೆ

ಬಂಡಾಯ ಕಹಳೆಯ ಎತ್ತಿದ ಧ್ವನಿ
ಜವರಾಯನ ಜೊತೆ ಏಕೆ ಎತ್ತಲಿಲ್ಲ

ಕುಂಟ ಕೂರುವತ್ತಿಯ ಕೈ ಹಿಡಿಯುವ
ಆಸರೆಯಾಗಿ ನಿಲ್ಲುವ ಭರವಸೆಯ ಬೆರಗುಗಾರ

ನಿಲ್ಲು ಶಾಲ್ಮಲೆ ನಿಲ್ಲು
ಇಷ್ಟೊಂದು ಅವಸರವ ಏಕೆ

ಅರ್ಧ ಸತ್ಯದ ಹುಡಗಿಯನ್ನು ಮುಂದಿಟ್ಟು
ಪೂರ್ಣ ಸತ್ಯ ಹೇಳದೆ ಹೀಗೆ ಹೊದರೆ ಹೇಗೆ

ಆದಿಗೆ ಪಂಪ ಅಂತ್ಯಕ್ಕೆ ಚಂಪಾವಾಗಿ
ಚೆಂದದ ನಗೆ ಬೀರಿ ನಿಂತ ಶಾಲುಧಾರಿ ಚಂಪಾ

ಪ್ರೀತಿಯ ಜ್ವಾಲೆಯಲ್ಲಿ ಎಲ್ಲರನ್ನೂ ಸಿಕ್ಕಿಸಿ
ದ್ವೇಷಕ್ಕೂ ಕಾರಣ ಹುಡುಕಿಸಿ ಹೊರಟವನೆ

ಕನ್ನಡ ಕನ್ನಡ ಬನ್ನಿ ನಮ್ಮ ಸಂಗಡವೆಂದು
ಹೀಗೆ ಹೇಳದೆ ಹೊರಟರೆ ಹೇಗೆ

ನಿಲ್ಲು ಶಾಲ್ಮಲೆ ನಿಲ್ಲು
ಇಷ್ಟೊಂದು ಅವಸರವ ಏಕೆ


ಡಾ.ಸುಜಾತಾ.ಸಿ


Leave a Reply

Back To Top