ಕಾವ್ಯ ಸಂಗಾತಿ

ಚೇತನ

ಡಾ. ನಿರ್ಮಲ ಬಟ್ಟಲ

ಮಾಗಿಯ ಚಳಿಯ ನಸುಕಲಿ
ಮುಸುಕು ಸರಿಸಿ….
ನಲ್ಲನ ಬಿಗಿ ಅಪ್ಪುಗೆಯ
ಬಿಸಿಯಿಂದ ಕೊಸರಿ
ನಡುಗುತ…..
ಕುದಿಯಸರಿಗೆ
ಏಲಕ್ಕಿ ಶುಂಠಿ
ಒಂದಿಷ್ಟು ಚಹಾದ ಎಲೆಯ
ಒಗರಿಗೊಂದಿಷ್ಟು ಇರಲಿ
ಪ್ರೀತಿಯ ಸಕ್ಕರೆ
ಹದವಾಗಿ ಬೇರೆಯೆ
ಗಾಢ ಬಣ್ಣ ಪರಿಮಳ
ಮುದಗೊಳಿಸೆ ಮನ
ರುಚಿ ಬರಲು ಗಟ್ಟಿ
ಹಾಲು ಬೆರೆಸಿ
ನಲ್ಲನ ಕೈಗಿಟ್ಟರೆ
ಬಿಸಿ ಬಿಸಿಯಾಗಿ ತುಟಿಗಿಟ್ಟು
ಸವಿದ ಸಿಹಿ ಜೇನು
ನಲ್ಲನ ಮುಖದಿ ಮುಗುಳು ನಗೆ
ಚಳಿಯ ನಡುಕ ಸರಿದು
ದಿನದ ಆರಂಭಕ್ಕೆ ಸ್ಪೂರ್ತಿ ಚೇತನ….!
ಚಹಾ ನಿನ್ನೊಂದಿಗೆ ದಿನದಾರಂಭ
ನೂತನ….!!
——————————————

3 thoughts on “

Leave a Reply

Back To Top