ಕಾತ್ಯಾಯಿನಿ ಕುಂಜಿಬೆಟ್ಟು ಇವರಿಗೆ

‘ ಡಾ. ಡಿ. ಎಸ್ ಕರ್ಕಿ ಕಾವ್ಯ ಪ್ರಶಸ್ತಿ’

ಪ್ರಸಿದ್ಧ ಕನ್ನಡ ಕವಿ ಡಾ. ಡಿ. ಎಸ್ ಕರ್ಕಿ ಅವರ ಹೆಸರಿನಲ್ಲಿ
ಬೆಳಗಾವಿಯ ಡಾ. ಡಿ. ಎಸ್ ಕರ್ಕಿ ಪ್ರತಿಷ್ಠಾನವು ನೀಡುತ್ತಿರುವ ಕಾವ್ಯ ಪ್ರಶಸ್ತಿಗೆ 2021 ನೇ ಸಾಲಿನಲ್ಲಿ,
ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಬರೆದ ‘ಅವನು ಹೆಣ್ಣಾಗಬೇಕು’ ಎಂಬ ಕೃತಿಯು ಆಯ್ಕೆಯಾಗಿರುತ್ತದೆ.

ಇದೇ ಬರುವ ಡಿಸೆಂಬರ್ 18ರಂದು ಬೆಳಗಾವಿಯಲ್ಲಿ ನಡೆಯಲಿರುವ
ಡಾ. ಡಿ ಎಸ್ ಕರ್ಕಿಯವರ 114ನೇ ಜನ್ಮದಿನದ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಪ್ರತಿಷ್ಠಾನ ಪ್ರಕಟಿಸಿರುತ್ತದೆ.

ಪ್ರಸ್ತುತ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಅವರು ಉಡುಪಿಯ ಎo.ಜಿ.ಎo ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Leave a Reply

Back To Top