Category: ಕಾವ್ಯಯಾನ

ಕಾವ್ಯಯಾನ

ಇನ್ನೆಷ್ಟು ತ್ಯಾಗ ಮಾಡಬೇಕು.

ಕವಿತೆ ಇನ್ನೆಷ್ಟು ತ್ಯಾಗ ಮಾಡಬೇಕು. ಅನಿಲ ಕಾಮತ ಒಡಲಲ್ಲಿ ನಿನ್ನ ಕುಲದ ಕುಡಿಯನುಜತವಾಗಿಸಿಕೊಂಡಿರುವೆನಿನ್ನ ಕೆಣಕಿಸಿ ಜನರುಉಡಾಫೆಯ ನಗು ನಕ್ಕರುನಿನ್ನನ್ನು ನಾನು ಸಂತೈಸಿರುವೆ ತಾಳ್ಮೆ ಕಳೆದುಕೊಂಡುಸೋತ ಮೊಗವ ಹೊತ್ತುಮನೆಯ ಮೂಲೆ ಸಂಧಿಯಲಿಕೂತಾಗ ನಗುವಲ್ಲೇ ತೇಲಿಸಿದ್ದೇನೆ ಮದಿರೆಯಲಿ ಮಿಂದೆದ್ದಾಗನಿನ್ನ ಮರ್ಯಾದೆ ಮುಕ್ಕಾಗದ ಹಾಗೆನಟಿಸಿದ್ದೇನೆಕೋಪಾಗ್ನಿಗೆ ಬೆನ್ನ ಮೇಲಿನಬರೆಗಳು ನಿನ್ನನ್ನೇ ದಿಟ್ಟಿ ಸುತ್ತಿವೆ ನಿನ್ನ ಬರುವಿಕೆಗಾಗಿಅದೆಷ್ಟು ಇರುಳನ್ನುಏಕಾಂತದಲ್ಲೇ ಕಳೆದಿದ್ದೇನೆನಿನ್ನ ಕಾಮದ ಜ್ವಾಲಾಮುಖಿಗೆಸುಟ್ಟು ಕರಕಲಾಗಿದ್ದೇನೆನಿನಗಾಗಿ ಇನ್ನೆಷ್ಟು ತ್ಯಾಗ ಮಾಡಬೇಕು… ***********************

ಹನಿಗಳು

ಹನಿಗಳು ಭಾರತಿ ರವೀಂದ್ರ ಕೆಂಪಿನ ಮುತ್ತು ಬೆಳಗಿನಿಂದ ಕೆಂಪಾದಕೆನ್ನೆಯೊಂದಿಗೆ ನನ್ನವರಿಗೆ ಖುಷಿಯೇಖುಷಿ, ಬಿಡಿಸಿ ಹೇಳಲಿಹೇಗೆ? ಆ ಕೆಂಪಿಗೆಕಾರಣ ನಾನಲ್ಲಇಡೀ ರಾತ್ರಿ ಸೊಳ್ಳೆ ಕೊಟ್ಟ ಮುತ್ತಿನ ಪ್ರಭಾವ ಅಂತಾ ನೆನಪು ನಸು ನಾಚುತ ನಲ್ಲೆಕೇಳಿದಳು. ನೆನಪಿದೆಯಾ ನಿಮಗೆನಾ ಮೊದಲ ಬಾರಿಮಾಡಿದ ಹಲ್ವಾ…ಮೊಗದಿ ನಗು ಸೂಸಿಮನದಲ್ಲಿ ಅಂದು ಕೊಂಡೆ ಹೇಗೆ ಕಣೆಮರೆಯಲು ಸಾಧ್ಯಕಾಗದ ಅಂಟಿಸೋಅಂಟಿನ ಹಾಗೆ ಬಳಸಿದ್ದೆಅಂತಾ… ಮುಡಿದ ಮಲ್ಲಿಗೆ ಮದುವೆ ಮನೆಯಲ್ಲಿಮುಡಿ ತುಂಬಾ ಮಲ್ಲಿಗೆದಂಡೆ ಮುಡಿದವಳ ನಡೆ ಬಲು ಸೊಕ್ಕಿನದು,ಪಾಪ ಅದೇನಾಯಿತೋ ಗದ್ದಲದಿ ಅವಸರದಿಓಡಿ ಬರೋ ಹುಡುಗನಕೈಲಿ ದಂಡೆ […]

ದೀಪಾವಳಿ

ಕವಿತೆ ದೀಪಾವಳಿ ವಿದ್ಯಾಶ್ರೀ ಅಡೂರ್ ಮನಗಳ ನಡುವಿನ ತಮಗಳ ಕಳೆಯಲಿಬೆಳಕಿನ ಹಬ್ಬ ದೀಪಾವಳಿನೀಗದ ಬೆಳಕು ತುಂಬುತ ಬದುಕಲಿಕಳೆಯಲಿ ಕತ್ತಲ ಅಸುರನ ಧಾಳಿ ಬಗೆಬಗೆ ಖಾದ್ಯದ ಚಪಲವ ಮನದಲಿಹುಟ್ಟಿಸುವಂತ ಖಾನಾವಳಿಸುಡುಮದ್ದಿನಲಿ ಪರಿಸರ ಕೆಡಿಸದೆಮಾಡದೆ ಇರೋಣ ಹಾವಳಿ ಹಿಂದಿನ ದಿನಗಳ ಹಬ್ಬದ ನೆನಪುಬಿಟ್ಟಿದೆ ಮನದಲಿ ಕಚಗುಳಿಹಿಂದೆಗೂ ಮುಂದೆಗೂ ಕೊಂಡಿಗಳಾಗುತಹರಡುವ ಹಬ್ಬದ ಬಳುವಳಿ. ****************************

ಯಾಕೆ ಪ್ರೀತಿ ಬಿತ್ತಿದೆ ನನ್ನೆದೆಯ ಹೊಲದಲ್ಲಿ

ಕವಿತೆ ಯಾಕೆ ಪ್ರೀತಿ ಬಿತ್ತಿದೆ ನನ್ನೆದೆಯ ಹೊಲದಲ್ಲಿ ನಾಗರಾಜ್ ಹರಪನಹಳ್ಳಿ ಯಾಕೆ ಪ್ರೀತಿ ಬಿತ್ತಿದೆ ನನ್ನೆದೆಯ ಹೊಲದಲ್ಲಿ ; ಅದಕೆ ನಾಮಗುವಿನಂತೆ ‌ನಿನ್ನ ಎದೆಗೊತ್ತಿಕೊಂಡೇ ಇರುವೆ ಜಗದ ತುಂಬಾ ಮುಗಿಲ ಬೆಳಕ ಯಾಕೆ ತುಂಬಿದೆ ಒಲವೇಅದಕೆ ನಾಅವಳ ಜಗದ ಕತ್ತಲೆಯಲ್ಲೂ ದೂರ ಇರುವ ಅವಳಹುಡುಕುತಿರುವೆ ನೂರಾರು ಬಣ್ಣಬಣ್ಣದ ಹೂಗಳ ಯಾಕೆ ಈ ಭೂಮಿಗೆ ಕಳಿಸಿದೆ ಒಲವೇಅದಕೆ ನಾ ; ಅವಳ ಕನಸುಗಳಿಗೆ ಬಣ್ಣ ತುಂಬಿದೆ ಯಾಕೆ ಪ್ರತಿ ಉಸಿರಿಗೂ ನಿನ್ನ ಹೆಸರ ಬರೆದೆ ಒಲವೇಅದಕೆ ನಾನಿನ್ನ ಧ್ಯಾನಿಸುವೆ […]

ಶುಭ ದೀಪಾವಳಿ

ಕವಿತೆ ಶುಭ ದೀಪಾವಳಿ ಮುರಳಿ ಹತ್ವಾರ್ ಒಣಗುವ ಮುನ್ನವೇ ಉದುರಿದ ಹಸಿ-ಹಸಿಯ ಎಲೆಗಳ ರಾಶಿ ಇಬ್ಬನಿಯ ತಬ್ಬಿದ ನೆಲವ ತುಂಬಿದೆ ಯಾವ ಹಸಿವಿನ ಹೊಟ್ಟೆಯ ಹೊಂಚೋ? ನಡುಗುತ ಸೊರಗಿವೆ ಬೋಳು ಮರಗಳು ಆಳದ ಬೇರಿಗೂ ಕರಗಿ ಹೋಗುವ ಚಿಂತೆಯಾವ ಕಾರಿರುಳ ರಕ್ಕಸ ಸಂಚೋ ? ಹಣತೆ ಹಣತೆಗಳ ಕಿರಣಗಳ ಬಾಣ ಬಂಧಿಸಲಿ ಭಯದ ಎಲ್ಲ ನೆರಳುಗಳ, ಹೊಸೆದ ಬೆಳಕಿನ ಶರ ಪಂಜರದಲಿ  ಒಲುಮೆಯ ಅಭಯದ ಆ ಬಯಲಲಿ ಮತ್ತೆ ಚಿಗುರಲಿ ಬಯಕೆಯ ಹಸಿರು ಹೊಸ ನಗೆಯ ತುಂಬಿ ಮುಖ ಪಂಕಜದಲಿ *******************

ವಿರಹ ತಾಪ

ಕವಿತೆ ವಿರಹ ತಾಪ ನಿ.ಶ್ರೀಶೈಲ ಹುಲ್ಲೂರು ತಿರುತಿರುಗಿ ಒರಗುತಿದೆಭಾವಲಹರಿಯ ಬುಗುರಿನಲಿವಿನಲು ಹಸಿಗಾಯಹೀಗೇಕೆ ಎದೆ ನಗರಿ ? ಎನಿತೆನಿತೊ ಆಸೆಗಳಹೊತ್ತ ಒಡಲಿನ ತುಡಿತನಿನ್ನೊಲವಿನಮಲಿನಲೆತೊಪ್ಪೆಯಾಗಿದೆ ಮಿಡಿತ ಬಾನು ರಂಗೇರಿದರುಬಿಡದು ಕಡಲಿನ ಮೊರೆತಕತ್ತಲೆಯನಪ್ಪಿದ ಕಣ್ಬೆಳಕಲು ನೆನಪಿನದೆ ಇರಿತ ಹಿಡಿದಷ್ಟು ಉಕ್ಕುವುದುಹಾಲ ನೊರೆಯಂತೆನೀನಿರದ ಈ ಬದುಕುನೀರಿರದ ಕೆರೆಯಂತೆ ಬಳಲಿದರು ತೆವಳುತಿದೆನಿನ್ನೆಡೆಗೆ ಈ ದೇಹಅದಾವ ಪರಿ ಸೆಳೆದೆ ನೀನರಳುತಿದೆ ಮೋಹ ಸುಖದ ಸುಗ್ಗಿಯನೆಲ್ಲಮಾಡುತಿಹೆ ಕನಸಿನಲಿಹುರಿದು ಮುಕ್ಕುವೆ ಏಕೆಸೊಗಸಿರದ ಮನಸಿನಲಿ ಕಂಕಣಬಲವಿಲ್ಲೆನಗೆ ನೀನೋಡಿ ಬಂದು ಬಿಡುಬರದಿದ್ದರೆ ಬೇಗ ಕೈಯಾರೆ ಕೊಂದು ಬಿಡು **********************************

ಅನುಬಂಧ

ಕವಿತೆ ಅನುಬಂಧ ಅಕ್ಷತಾ ಜಗದೀಶ ಆ ನೀಲಿ ‌ಆಗಸದಿ ಚಿತ್ತಾರ ಮೂಡಿಸಲೇನು…..ಮೌನದಲಿ ಅಡಗಿದ ಭಾವನೆಗಳಮಾತಿನಲ್ಲಿ ಬಹಿರಂಗ‌ ಪಡಿಸಲೇನು…. ಎಲ್ಲಾ ಆಸೆಗಳ , ಎಲ್ಲಾ ಕನಸುಗಳಎಲ್ಲೆಲ್ಲೂ ಓಡುವ ಮನದೊಳಗೆಬಂಧಿಸಿರುವೇ ಈಗ…… ಬರೆವ ಕವಿತೆಯೋಳಗೆಮನದ ಮಾತು ಕುಣಿದಾಡಿ…ಪದಗಳೊಡನೆ‌ ಪುಟಿದೆದ್ದುರಾಗದಲಿ‌ ಬೆರೆತು ಅರಳಿದಾಗ..ಆಹಾ ಸಂತೋಷವೇ…!ಎಂಥಹ ಆಹ್ಲಾದವು.. ಚೂರು ಪ್ರೀತಿ ಭಾವದೊಳು ಬೆರೆತಾಗಸುಂದರ ಬಾಳಿನ ಪ್ರಾರಂಭ ಆಗ..ಇರಲೀ ಹೀಗೆ ಈ ಬಂಧ..ಮರೆಯಲಾರದ ಅನುಬಂಧ. *************************

ಸ್ವೀಕರಿಸುವೆಯಾ?

ಕವಿತೆ ಸ್ವೀಕರಿಸುವೆಯಾ? ಚಂದ್ರು ಪಿ ಹಾಸನ್ ಇಂದ್ರನ ಬನದಲ್ಲಿ ಅರಳಿದಓ ಅಂದದ ಚೆಂದದ ಹೂವೆಚಂದ್ರನ ಬರುವಿಕೆಗೆ ಕಾದಿರುವೆಯಾ? ಚಿಟ್ಟೆಗಳು ಒಟ್ಟೊಟ್ಟಾಗಿ ಒಮ್ಮೆಲೆಹಿಗ್ಗುತಲಿ ನುಗ್ಗುತಿರಲಿ ಬಗ್ಗದೆಮುಖ ಮರೆಮಾಚಿ ನಿಂತೆಯಾ? ಮುಂಜಾವ ಭಾಸ್ಕರನು ಬೆಳ್ಳಿರಥವೇರಿಚೆಲ್ಲಿಹನು ಅವನ ಹೊನ್ನ ಬೆಳಕನ್ನುಚೆಲುವ ತೋರದೆ ಹೋಗುವೆಯಾ? ರವಿ ರಶ್ಮಿಯನ್ನು ಸ್ವೀಕರಿಸದೆತಮವನ್ನೇ ತನ್ನಲ್ಲಿ ಆವರಿಸಿಕೊಂಡುಯಾರಿಗಾಗಿ ಅರಳುತ್ತಿರುವೆಯಾ? ನನಗಾಗಿ ನೀ ಕಾದಿದ್ದರೆ ಸಾಕುಬೇರೇನು ನಿನ್ನಿಂದ ಬೇಡೆನಗೆಪ್ರೀತಿಗಾಗಿ ಹುಡುಕಿದೆ ನೀಡುವೆಯಾ? ನೆಲೆಸುವೆ ಹೃದಯದಲ್ಲಿ ಸ್ವೀಕರಿಸುವೆಯಾ? ********************************

ದೀಪಗಳ ಸಾಲು

ಕವಿತೆ ದೀಪಗಳ ಸಾಲು ಸುವಿಧಾ ಹಡಿನಬಾಳ ಹಚ್ಚೋಣ ಸುತ್ತೆಲ್ಲಾ ದೀಪಗಳ ಸಾಲುಹೊದೆಸೋಣ ಎಲ್ಲರಿಗೂ ಪ್ರೀತಿಯ ಶಾಲು ಬೆಳಕಿಂದೆ ಜಗವು ಬೆಳಗುತಿಹುದುಅನ್ಯಾಯ ಹಿಂಸೆಯಲಿ ದಹಿಸುತಿಹುದುಜ್ಞಾನದ ಬೆಳಕಿನಲಿ ತೆರೆಯಲಿಕಣ್ಣುವಾಸಿಯಾಗಲಿ ಮನದ ಕಲ್ಮಶದ ಹುಣ್ಣು ಜಗವ ಹಿಂಡುತಿಹ ‌ಅನಾರೋಗ್ಯ ದೂರಾಗಲಿಎಲ್ಲರೂ ತಿಂದುಂಡು ನೆಮ್ಮದಿಯಾಗಿರಲಿ ನೆಲಕಚ್ಚಿದ ಆರ್ಥಿಕತೆ ಮತ್ತೆ ಚೈತನ್ಯಗೊಳ್ಳಲಿದುಡಿಯುವ ಕೈಗಳಿಗೆ ಕೆಲಸವು ಲಭಿಸಲಿ ದಿನವೂ ಮೊರೆವ ಬಾಂಬು ಗುಂಡುಗಳ ಸದ್ದಡಗಲಿಆತಂಕವಾದಿಗಳ ಹೃದಯದ ಕತ್ತಲೆ ಕಳೆಯಲಿ ಬದುಕೆಂಬ ಅನಿಶ್ಚಿತ ಪಯಣದಲಿಸಕಲರ ಸಹಕಾರ ಋಣಭಾರವಿದೆಏಕೆ ವ್ಯಾಜ್ಯ, ಕಲಹ ಜೀವನದಲಿಪಯಣ ಸಾಗಲಿ ಹೊಂದಾಣಿಕೆ ಸಮರಸದಲಿ ಒಂದು […]

ದಿವ್ಯ ಅನಿಕೇತನ

ಕವಿತೆ ದಿವ್ಯ ಅನಿಕೇತನ ನೂತನ ದೇಹ ಆತ್ಮಗಳು ಮಾತಾಡಿಕೊಂಡವುನನ್ನೊಳಗೆ ನೀನೊನಿನ್ನೊಳಗೆ ನಾನೊ? ಯಾರೊಳಗೆ ಯಾರಿದ್ದರೇನುಇದ್ದೂ ಇರದಂತೆ ಇರುವವರೆಷ್ಟಿಲ್ಲ !ರೇಷಿಮೆಯ ಸಣ್ಣ ಅಂಚಿನ ಪತ್ತಲನಿಟ್ಟುಸಿರ ಬಿಡುವುದ ಕಾಣದಂತೆ ನಾವೀರ್ವರು ಒಂದಾದ ಕ್ಷಣಕ್ಕೆಹುಣ್ಣಿಮೆಯೇ ಸಾಕ್ಷಿಛಾಯೆ ಕನವರಿಸುತ್ತಾಳೆನೂರ್ಕಾಲದ ಬಾಳಿಗೆ ಹೊರನೋಟಕ್ಕೆ ಒಂದಾದರೆಒಳ ಹರಿವಿಗೆ ಒಂದು ನಾನು ನೀನೆಂಬಗಡಿಯಿರದ ಗೂಡಿನಲಿಜೇನು ಸವಿ ಹೀರಲುದೇಹದೊಲುಮೆಯಲಿಆತ್ಮಜ್ಯೋತಿ ಬೆಳಗಬೇಕು ಸದಾ ಆತ್ಮ ಬಿರಿದು ಕಣಕಣದಲಿ ಬೆಳೆದುಮಿಲನವ ಮೀರಿ ನಿಂತುಈಗ ಸರ್ವವ್ಯಾಪಿಬೇಧವಿರದ, ಬಂಧವೂ ಇರದದಿವ್ಯ ಅನಿಕೇತನ **************************

Back To Top