ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ವೈ ಎಂ ಯಾಕೊಳ್ಳಿ ಅವರ ಕವಿತೆ “ಅರವತ್ತರಾಚೆಯವನ ತುಂಟ ಪದ್ಯಗಳು”

ಕಾವ್ಯ ಸಂಗಾತಿ ವೈ ಎಂ ಯಾಕೊಳ್ಳಿ “ಅರವತ್ತರಾಚೆಯವನ ತುಂಟ ಪದ್ಯಗಳು” ೧ಪ್ರೀತಿನಿನ್ನ ಹತ್ತರ ಎಷ್ಟರ ಐತಿಅಂತಾಳ ಆಕಿ !ಅಯ್ಯೋ ಮಾರಾಯಾಅದೆಲ್ಲಿ ಐತಿ ಅಂತಾಳ ಈಕಿ? ೨ಸಾಕು ಬಿಡು‌ ಮಾರಾಯ್ತಿಒಮ್ಮೆ‌ ಪ್ರೀತಿ‌ ಮಾಡಿದ್ನಿಮತ್ತ ಅದನ್ನ‌ ನೆನೆಸಿ‌ನೆನೆಸಿಈಗ್ಯಾಕ ಜೀಂವ ನೀ ತಿಂತಿದಿ ೩ಔಷದ ಇಲ್ಲದ ರೋಗಪ್ರೀತಿ,ಅದನ್ನು ತಿಳದೂ  ತಿಳದೂಮಾಡತೈತಲ್ಲ ಈ ಲೋಕಕ್ಕಎಂಥಾ ಹುಚ್ಚ ಹಿಡದೈತಿ! ೪ಹತ್ತಿರ ಬರಬೇಡ ಅಂತಆರನೂರ ಕೊಟ್ಟಗೋದ್ರೇಜ್ ಕೀಲಿ ಹಾಕಿನಿಕನಸನ್ಯಾಗ ಗೊತ್ತಿಲ್ಲದಾಂಗಕೀಲಿ‌ ಮುರದಾಳಏನ ಅನಬೇಕರಿ ಆಕಿಗಿ ೫ಬರಿ ಬ್ಯಾಡರಿ ಅಜ್ಜನಿವ್ ಮುದಕಾರಾಗಿರಿಅಂತ ಹುಡುಗರ ವರಾತಹೌದುಬರುದುಲ್ಲಲ್ಲ ನಮಗಇದನಬಿಟ್ಟ  ಬ್ಯಾರೆ  ಕವಿತಾ! ೬ನಾವು ಬರೆಯುವವರುಬರೆದು ಹುಚ್ಚ ರಾಗತೆವಿನಿವ್  ಅನುಭವಿಸಿತಿರಿಅನುಭವಿಸಿ ಧನ್ಯರಾಗತಿರಿ ೭ಹೆಂಡತಿ ಹತ್ತರ ಇದ್ದರಒಂದೆ ಸಮ ಬೈಗಳಬೇಜಾರಇವನ್ ಮನಸು ಇಲ್ಲೆ ಇಲ್ಲಿಅಂತಆಕಿದ ಒಂದ ತಕರಾರ ೮ಮುಗದ ಮಾತಿಗೆ ಯಾಕಅಳತೆರಿ ಸ್ವಾಮಿ ಇರೋದನ್ನುಚಂದಾಂಗಿ ಅನುಭವಿಸ್ರಿ !ನಿಮ್ಮನ್ನ ಬಿಟ್ಟ ಹೋದವರುಖಂಡಿತವಾಗೂ ಅಲ್ಲಿನೂ ಚಂದಅದಾರ್ರಿ!! ೯ಜೀವನ ಅಂದರಮೊದಮೊದಲ ಕಳಕೊಳ್ಳೊದುಪಡಕೋಳ್ಳೊದರಿ!ನಂತರ  ಎಲ್ಲಾನೂಬಿಟ್ಕೊತಹೋಗೂದರಿ!! ೧೦ಇದೆಂಥಾ ಕವಿತಾಒಂದ‌ ಲಯ ಇಲ್ಲ, ಪ್ರಾಸ ಇಲ್ಲಅಂತಾನ ವಿಮರ್ಶಕ!ನಿವ್ ಏನ್ ಚಂದ ಬರದಿರಿಅಂತಾಳ ವಿಮರ್ಶಕಿ!! ವೈ.ಎಂ.ಯಾಕೊಳ್ಳಿ ʼ

ವೈ ಎಂ ಯಾಕೊಳ್ಳಿ ಅವರ ಕವಿತೆ “ಅರವತ್ತರಾಚೆಯವನ ತುಂಟ ಪದ್ಯಗಳು” Read Post »

ಕಾವ್ಯಯಾನ

“ಹುತಾತ್ಮರ ದಿನ” ಡಾ ತಾರಾ ಬಿ ಎನ್ ಧಾರವಾಡ

ಕಾವ್ಯ ಸಂಗಾತಿ ಡಾ ತಾರಾ ಬಿ ಎನ್ ಧಾರವಾಡ “ಹುತಾತ್ಮರ ದಿನ” ಭವ್ಯ ಭಾರತದ ವೀರ ಯೋಧರನೆನಪುಗಳ  ಲಗ್ಗೆಹೃದಯಗಳಲ್ಲಿ ಹಚ್ಚಿದ ಜ್ಯೋತಿಮನಸ್ಸಿನ ಹೊನ್ನೆಳೆಯಿಂದ,ಭೂ ಮಾತೆಯ ಹೃದಯ ಕರುಣೆತನ್ನೋಡಲಿನಲ್ಲಿವೀರರ ರಕ್ತದ ಕಂಗುಳಿಯಿಂದ. ಮೂಕವಾಗಿ ರೋಧಿಸಿದ ಈ ಹದಿನಾಲ್ಕನೆಯ  ದಿನ,ಸ್ಮರಣೆಯ ಸುಗಂಧವೊಂದುಪಸರಿಸಿ ಹರಡಿಹುದುಹುತಾತ್ಮರ ಹೆಜ್ಜೆಯ ನೋವುಇನ್ನೂ ನಮ್ಮೊಳಗೇ ಗುನುಗುತ್ತಿದೆ. ಪುಲ್ವಾಮದ ಕರುಣ ಕಥೆಯಲಿವೀರರ ಉಸಿರಿನ ಉರಿಯೇ ಉಳಿದು,ಭಾರತ ತಾಯಿಯ ಮಡಿಲಲ್ಲಿಅಮರ ಗಾಥೆಯಾಗಿ ಮಿಂಚಿತು.ಆ ಆತಂಕದ ನೆಲದಲಿ ಸುರಿದ ರಕ್ತ ರಾಷ್ಟ್ರಧ್ವಜದ ಕೆಂಪು ಗಟ್ಟಿಯಾಗಿ,ಅಮರ ವೀರರ ತ್ಯಾಗ ಕಥೆಭಾರತೀಯರ ಹೃದಯದಲಿಬರೆಯಲ್ಪಟ್ಟ ಕಣ್ಣೀರ ವ್ಯಥೆವೀರರ ಶೌರ್ಯಗಾಥೆಗಗನಕೆ ಏರಿದ  ಗರ್ವದ ಗೀತೆ, ಜೀವ ಕೊಟ್ಟು ಜಗ ಕಾಯ್ದಸ್ವಾತಂತ್ರ್ಯದ ಪವಿತ್ರ ಪಾಠ.ವೀರಗತಿ ಭಾವನ ಪಟ್ಟಪ್ರತಿ ಗಾಳಿಯಲಿ ಉಸಿರು,ಪ್ರತಿ ಹೃದಯದ ತಾಳದಲಿ ಅವರ ಧೈರ್ಯದ  ಮಿಡಿತ ಭೂದೇವಿ  ಕಣ್ಣೀರಿನ ಹನಿಮುತ್ತಾಗಿ ಮಣ್ಣಿನಲಿ ಮಿನುಗಿ,ದೇಶಪ್ರೇಮದ ದೀಪ ಬೆಳಗಿಸಿಹೊಸ ಪೀಳಿಗೆಗೆ ದಾರಿ ತೋರಿತು. ಹುತಾತ್ಮರೆ! ನಿಮ್ಮ ತ್ಯಾಗದ ನೆನಪುನಮ್ಮ ಬದುಕಿನ ಬೆಳಕಾಗಲಿ,ನಿಮ್ಮ ಅಮರ ಆತ್ಮಶಕ್ತಿನಮ್ಮ ಸಂಕಲ್ಪದ ಶಕ್ತಿಯಾಗಲಿ.ಫೆಬ್ರವರಿ ಹದಿನಾಲ್ಕು ದಿನದಲಿನಮಿಸುವೆವು ನಮನಗಳ ಮಾಲೆ, ಭಾರತ ತಾಯಿಯ ವೀರಪುತ್ರರೇನಿಮ್ಮ ನೆನಪು ಶಾಶ್ವತನಿಮ್ಮ ತ್ಯಾಗ ಸೇವೆ ನಿಶ್ಚಿತನಿಮ್ಮ ಸೇವೆ  ಶ್ರೀದೇವಿಗೆ  ಹಿತನೀವೇ ಸದಾ ಎಲ್ಲರ ಪರಮಾಪ್ತನಿಮಗಿದೋ ಕೋಟಿ ವಂದನೆ.ಜೈ ಹಿಂದ್ ಡಾ ತಾರಾ ಬಿ ಎನ್ ಧಾರವಾಡ

“ಹುತಾತ್ಮರ ದಿನ” ಡಾ ತಾರಾ ಬಿ ಎನ್ ಧಾರವಾಡ Read Post »

ಕಾವ್ಯಯಾನ

ಪರವಿನಬಾನು ಯಲಿಗಾರ ಅವರ ಕವಿತೆ “ರವಿ …ಮೀಟ್ಸ್…. ಬಾನು”

ಕಾವ್ಯ ಸಂಗಾತಿ ಪರವಿನಬಾನು ಯಲಿಗಾರ “ರವಿ …ಮೀಟ್ಸ್…. ಬಾನು” ನೀ ಬರುವ ಸಮಯ ಕೆಂಪೇರುವುದುನನ್ನ ಮೂಡಣದ ಕೆನ್ನೆ ,ನೀ ಬರುವ ಸಂಭ್ರಮ ಹೇಳ ತೀರದು ,ನನ್ನ ಹರುಷದ ಬಾಗಿಲು ತೆರೆಯುವಕೀಲಿ ನೀನು, ಮೆಲ್ಲನೆ ಉಲಿಯಲೆ ನಲ್ಲ , ನಿನ್ನ ಹೆಸರು   ….ರವಿ ….ರವಿ…..ರವಿ….. ಮಂದ ಶೀತಲ ಗಾಳಿ ,ಇಬ್ಬನಿಯ ಮಣಿ ಮಾಲೆ ಹಸುರಿನ ಮೇಲೆ ,ಅರಳಿ ನಿಂತ ಹೊಸ ಕುಸುಮ ,ಹಕ್ಕಿಯ ಚಿಲಿ ಪಿಲಿ ನಾದ ,ನಿನ್ನ ಸ್ವಾಗತ ಕೊರುವವು ,ನೀ ತಂಪ ಸುಸುತ ,ಮಂದಹಾಸ ಬಿರುತ ,ಸ್ವರ್ಣ ವರ್ಣದ ತೇರ ಏರಿ  ಬರುವೆ ….. ತುಸು ಹೊತ್ತು ಸರಿಯುತ್ತಿರೆಅದೇನು ರೋಷವೊ ?ಅದೆಂಥಹ ಮೋಹವೊ ?ಕಾಯಿಸಿ , ಕಂಗೆಡಿಸಿ ,ಬೇಯಿಸಿ , ಬೇಂಡಾಗಿಸುವೆಅದೇನು ಹುಚ್ಚು ಪ್ರೇಮವೊ ನಿನ್ನದು ,ಇರುವ ಸ್ವಲ್ಪ ಹೊತ್ತಲ್ಲೆ ನನ್ನೊಡನೆಸರಸ , ವಿರಸ  ಮತ್ತೆ ಸರಸ…. ನೀ ಮರಳುವಾ ಸಮಯ ಕೆಂಪಾಗಿಸುವೆನನ್ನ ಪಡುವಣದ ಕೆನ್ನೆಇಡೀ ದಿನ ನನ್ನ ಗೋಳಾಡಿಸಿಹೋಗುವಾಗ ರಮಿಸಿ , ಮುದ್ದಿಸಿ ,ತಬ್ಬಿ ತಂಪನೆರೆಯುವೆನಿನ್ನ ಪ್ರೇಮದ ಪರಿಯ ನಾನರಿಯೆ ?ನೀ ನನ್ನವನೆಂಬ ಖುಷಿ ನನ್ನದುನೀ ನನಗಾಗೆ ಇರುವೆ ಎಂಬ ಜಂಭ ನನ್ನದುನಾ ನಿನ್ನ ಬೆಳಕಿನಲಿ ನಲಿಯುವೆ , ನಾ ನಿನ್ನವಳೆಂಬ ತೃಪ್ತಿ ನನ್ನದು…… ನೀ ಮರೆಯಾಗುವೆ ಇರುಳಿಗೆನಾ ಬೇಸರದಿ ಮುಖ ಕಪ್ಪು ಮಾಡಿಕೊಂಡುಮುದುರಿ ಮಂಕಾಗುವೆಮತ್ತೆ ನಾಳೆ ನಿನ್ನ  ಬರುವಿಕೆಗಾಗಿಕನವರಿಸಿ ಕಾಯುವ ನಾನು ನೀಲಿಬಾನು …ಬಾನು….ಬಾನು…. ಪರವಿನಬಾನು ಯಲಿಗಾರ  

ಪರವಿನಬಾನು ಯಲಿಗಾರ ಅವರ ಕವಿತೆ “ರವಿ …ಮೀಟ್ಸ್…. ಬಾನು” Read Post »

ಕಾವ್ಯಯಾನ

ಟಿ.ಪಿ.ಉಮೇಶ್ ಚಿತ್ರದುರ್ಗ ಅವರ ಕವಿತೆ “ನಾನು ಕವಿ! ನಿನ್ನ ಸೃಷ್ಟಿಕರ್ತ!!”

ಕಾವ್ಯ ಸಂಗಾತಿ ಟಿ.ಪಿ.ಉಮೇಶ್ ಚಿತ್ರದುರ್ಗ “ನಾನು ಕವಿ! ನಿನ್ನ ಸೃಷ್ಟಿಕರ್ತ!!” ಒಲವೇ ನಾನು ಕವಿನಿನ್ನ ಬದುಕಿನ ಕವಿತೆಗಳನ್ನು ಬರೆಯುವ ಲೇಖನಿ!ನಿನ್ನ ನಗುವಿನ ಅಮಲನ್ನೆಲ್ಲ ಹಿಡಿದಿಡುವ ಪ್ರೇಮಿ!ಅಕ್ಷರಗಳಿಗೆ ತಮ್ಮದೇ ಆದ ಪ್ರಿತಿಶಕ್ತಿ ಇದೆ;ಅದನ್ನೆಲ್ಲ ಒಟ್ಟುಗೂಡಿಸಿ ಅಂದದ ಎರಕ ಹೊಯ್ದು;ಒಲವಿನ ಮಿಂಚ ಪೂಸಿನೀ ಯುಗಯುಗಗಳಿಗು ಹೊಳೆಯುವಂತೆ ಮಾಡುವೆ!ಕಂಡವರೆಲ್ಲ ಯಾರ ಸೃಷ್ಟಿ ಅದ್ಭುತವಿದೆಂದು ಅಚ್ಚರಿಪಡುವರು!ಪದಗಳ ಮಾಂತ್ರಿಕತೆಯಲ್ಲಿ ನಿನ್ನ ಸಾಮಾನ್ಯ ಸೌಂದರ್ಯ ಅಸಾಮಾನ್ಯವಾಗುವುದು!ನಿನ್ನನ್ನು ಜಗತ್ತಿನೆಲ್ಲ ಸುಂದರ ಕಲಾಕೃತಿಗಳ ರೂಪಕವೆಂದು ಬಣ್ಣಿಸುವರು!ಇನ್ನು ಮುಂದೆ ನಿನ್ನ ಹೊರತು ಪ್ರೀತಿ ಮೀಮಾಂಸೆ ಅರ್ಥಪೂರ್ಣವಾಗದೆಂದು ಗುನುಗುವರು! ಒಲವೇನಾನು ನಿನಗೆ ಈ ಜಗತ್ತನ್ನೇ ತೋರಿಸಿದೆನೀನೇ ಜಗತ್ತಿನ ಬೇಳಕೆಂದು ಕಾಣಿಸಿದೆನಿನಗೆ ನಿನ್ನ ಪ್ರೀತಿಯ ಶಕ್ತಿ ತೋರಿಸಿದೆನಿನಗೆ ನಿನ್ನ ಜೀವನ ಔನ್ನತ್ಯ ಕಾಣಿಸಿದೆ ಆ ಮಳೆಬಿಲ್ಲ ಬಗ್ಗಿಸಿ ನಿನ್ನ ಹುಬ್ಬಾಗಿಸಿದೆನೀಲಾಗಸದ ಹೊಳಪ ನಿನ್ನ ರಂಗಾಗಿಸಿದೆಚಂದಿರನ ತಂಪ ನಿನ್ನ ಎದೆಗೂಡಾಗಿಸಿದೆನೇಸರನ ಬಿಸಿಯ ನಿನ್ನ ಚೈತನ್ಯವಾಗಿಸಿದೆನಕ್ಷತ್ರಗಳ ಜೋಡಿ ಕಣ್ಗಳಿಗಿಳಿಸಿ ಸಿಂಗರಿಸಿದೆಜಗದ ಮಧುರ ರಾಗಗಳ ತುಟಿಗಳಿಗಂಟಿಸಿದೆವಿಶ್ವದಿರುಳ ದೃಶ್ಯಕಾವ್ಯಗಳ ನಿನ್ನ ಹೆರಳಾಗಿಸಿದೆಇರುವೆಲ್ಲ ಮೃದುತ್ವ ತಂದಿಟ್ಟು ಹೃದ್ಯವಾಗಿಸಿದೆನಾನು ನಿನ್ನ ಪ್ರೇಮಿನಿನ್ನಂದವನ್ನೆಲ್ಲ ಕಾಪಿಡುವ ಧರ್ಮಿನಿನಗಾಗಿಯೆ ಮಿಡುಕಾಡುವ ಕರ್ಮಿ ಪ್ರಿಯೇನಾನು ನಿನ್ನ ಕವಿಯೆನಿನ್ನ ಹೃದಯದ ಬಡಿತ ಬಲ್ಲೆನಿನ್ನ ಉತ್ಸಾಹಗಳ ಎಲ್ಲೆ ಬಲ್ಲೆಮರೆವಿನ ನಿನ್ನ ಜೀವನ ಕಥನಗಳ ಬಲ್ಲೆಸ್ಮರಣೆಯ ಒಲವ ಹೆಜ್ಜೆಗಳನ್ನೆಲ್ಲ ಬಲ್ಲೆ ನಿನ್ನ ಪಿಸುಮಾತ ಸಪ್ಪಳ ನಾನಷ್ಟೆ ಕೇಳಿ ಬರೆದಿಡುವೆನಿನ್ನ ಕಣ್ರೆಪ್ಪೆಗಳ ಗುರಿ ನಾನಷ್ಟೆ ಹಿಡಿದು ಪಳಗಿಸುವೆಜಗದೆಲ್ಲ ನಂಬಿಕೆಗೆ ನಿನ್ನನ್ನೇ ಆಧಾರವಾಗಿಸಬಲ್ಲೆಜಗದೆಲ್ಲ ಪ್ರಾರ್ಥನೆಗಳಿಗೆ ಚುಂಬಕವಾಗಿಸಬಲ್ಲೆ ಹೇ ಮನವೇನಿನ್ನ ಭಯ ನಡುಕಗಳ ನಾನರಿಯಬಲ್ಲೆ;ನನ್ನ ಪದಗಳು ಅವನ್ನೆಲ್ಲ ತಣಿಸಿ ನಿವಾರಿಸವವು!ನಿನ್ನ ಅನುಕಂಪ ಅನುರಾಗಗಳ ಕಾಣಬಲ್ಲೆ;ನನ್ನ ಹಾಡುಗಳು ಅವುಗಳ ಅಂದವಾಗಿಸುವವು!ನಿನ್ನ ಬಯಕೆಗಳ ನರಳಿಕೆಗಳ ಅರ್ಥೈಸಬಲ್ಲೆ;ನನ್ನ ಸಾಲುಗಳು ಅವನ್ನೆಲ್ಲ ಸಾಕ್ಷಾತ್ಕರಿಸುವವು! ಪ್ರಿಯೆನನ್ನ ಮಾತು ಕೇಳು;ನಿನ್ನೆಲ್ಲ ಗುರಿಯಿರದ ನಡಿಗೆಗೆ ದಾರಿ ನಾನು!ನಿನ್ನೆಲ್ಲ ಜೀವನ ಶ್ರೇಷ್ಟತೆಗೆ ದುಡಿಮೆ ನಾನು!ನಿನ್ನೆಲ್ಲ ಪ್ರೀತಿ ಉಳಿತಾಯದ ಕೀಲಿಕೈ ನಾನು!ನಾನು ಕವಿನಿನನ್ನಷ್ಟೇ ಪ್ರೇಮಿಸುವೆನಿನ್ನನ್ನಷ್ಟೆ ಧ್ಯಾನಿಸುವೆನಿನ್ನನ್ನಷ್ಟೆ ಆಲಾಪಿಸುವೆನಿನ್ನಲ್ಲಷ್ಟೆ ಐಕ್ಯಗೊಳ್ಳುವೆ ಟಿ.ಪಿ.ಉಮೇಶ್ ಚಿತ್ರದುರ್ಗ

ಟಿ.ಪಿ.ಉಮೇಶ್ ಚಿತ್ರದುರ್ಗ ಅವರ ಕವಿತೆ “ನಾನು ಕವಿ! ನಿನ್ನ ಸೃಷ್ಟಿಕರ್ತ!!” Read Post »

ಇತರೆ

“ಬಣ್ಣಗಳ ಭಾವತರಂಗ” ವಿಶೇಷ ಲೇಖನ ಶ್ರೀದೇವಿ ಗುಮ್ಮಗೋಳ

ಬಣ್ಣಗಳ ಸಂಗಾತಿ ಶ್ರೀದೇವಿ ಗುಮ್ಮಗೋಳ “ಬಣ್ಣಗಳ ಭಾವತರಂಗ” ಹೋಳಿ ಹುಣ್ಣವಿ ಬಣ್ಣದ ಹಬ್ಬ. ಬಣ್ಣ-ಬಣ್ಣಗಳ ಚಿತ್ತಾರದ ಹಬ್ಬ. ಕಣ್ಣುಗಳಿಗೆ ಇಂಪು, ಬಿಸಿಲಿನ ಬೆಗೆಗೆ ಬೆಂದ ದೇಹಕ್ಕೆ ತಂಪೆರಚುವ ಹಬ್ಬ.  ಭಾವನೆಗಳ ಭಾವತರಂಗ-ಭಾವಂತರಂಗ.  ರಂಗುರಂಗಿನಲಿ ಕುಣಿದು ಕುಪ್ಪಳಿಸುವ ಹಬ್ಬ.          ಈ ಹಬ್ಬದಲ್ಲಿ ಪ್ರೀತಿಯ ಪ್ರತೀಕರಾದ ರತಿ ಮನ್ಮಥನನ್ನ ಕುಳ್ಳರಿಸಿ ಪೂಜೆ ಮಾಡುವದು ಐತಿಹಾಸಿಕ, ಧಾರ್ಮಿಕ ಹಿನ್ನಲೆಯುಳ್ಳದ್ದು  ಒಂದು ಕಡೆಯಾದರೆ ಮತ್ತೊಂದು ಕಡೆ ಒಬ್ಬರಿಗೊಬ್ಬರು ಬಣ್ಣ ಎರಚಿ ಆನಂದ ಪಡುವ ಹಬ್ಬ.      ಬಣ್ಣಗಳು ನಮ್ಮ ಭಾರತೀಯ ಧರ್ಮ, ಸಂಸ್ಕೃತಿ, ಸಂಪ್ರದಾಯಗಳಲ್ಲಿ ಬೇರೆ ಬೇರೆ ಸ್ಥಿತಿಗತಿಗಳಲ್ಲಿ ಬೆರೆತು ಹೋಗಿದೆ.  ನಮ್ಮ ದೇಶ ಬಟ್ಟೆಗಳ ವ್ಯಾಪಾರದಲ್ಲಿ ಬ್ರೀಟೀಷರ ಕಾಲಕ್ಕಿಂತಲೂ  ಮೊದಲು ಪ್ರಪಂಚದಲ್ಲಿಯೇ ಮುಂಚೂಣಿಯಲ್ಲಿತ್ತು.  ಅದರಲ್ಲೂ ವಿವಿಧ ರೀತಿಯ ಬಣ್ಣದ ಬಟ್ಟೆಗಳು ಪ್ರಪಂಚದಲ್ಲಿ ಎಲ್ಲಿಯೂ ಅಲ್ಲದೇ ನಮ್ಮ ದೇಶದಲ್ಲಿಯೇ ತಯಾರಾಗುತ್ತಿದ್ದವು. ಬಣ್ಣದ ಬಟ್ಟೆಗಳು ಇಲ್ಲಿಂದ ಪ್ರಪಂಚದ ಎಲ್ಲಡಗೆ ರಪ್ತಾಗುತ್ತಿದ್ದವು.     ಹೋಳಿ ಆಡುವ ವಿವಿಧ ಬಣ್ಣಗಳು ಮಾನವನ ಜೀವನದಲ್ಲಿ ರಂಗುರಂಗಿನ ವೈವಿದ್ಯಮಯ ಲೋಕವನ್ನ ಅನಾವರಣಗೊಳಿಸುತ್ತದೆ. ಬಣ್ಣಗಳು ಮಾನವನ ಪ್ರತಿಗಳಿಗೆಯಲ್ಲು ಹಾಸುಹೊಕ್ಕಾಗಿವೆ.  ಪ್ರತಿಯೊಂದು ಬಣ್ಣವು ವ್ಯಕ್ತಿ, ಕಾಯಕ, ಗುಣ-ಸ್ವಭಾವ ಸೂಚಕಗಳಾಗುವದರವ ಮೂಲಕ ಸಮಾಜದಲ್ಲಿ ಬೆರತುಹೋಗಿವೆ. ಇಂದ್ರಧನುಷ್ ದ ಬಣ್ಣಗಳಂತೆ ಬಣ್ಣ ವೈವಿದ್ದತೆಯನ್ನು, ಸಂಪತ್ತು, ಸಂಸಾರ, ಸಮೃದ್ಧಿಯ ಪ್ರತೀಕ.   ಪ್ರತಿಯೊಂದು ಬಣ್ಣದ ವಿಶೇಷತೆಯನ್ನ ತಿಳಿಯೋಣ ಬನ್ನಿ       ಕೆಂಪ ಕೆಸರಿ ಅಂತ ತಕ್ಷಣ ನೆನಪಾಗುದು ಒಂದಕಡೆ ರಕ್ತ ಆದರ ಇನ್ನೊಂದು ಕಡೆ  ಸನ್ಯಾಸಿಯ ಬಟ್ಟೆ, ದುರ್ಗಾ ಮೂರ್ತಿ‌.   ಒಂದ ಕಡೆ ಬೀಬತ್ಸ ಇನ್ನೊಂದು ತ್ಯಾಗ, ಭಕ್ತಿ, ಭಾವದ ಪರವಸೆ.  ಕೆಂಪು ಸನ್ಯಾಸಿಯ ವ್ಯಕ್ತಿಯ ಕಾಯಕದ ಸೂಚಕ. ದುರ್ಗಾ ಮಾತೆಗೆ ಉಡಿಸುವ ಕೆಂಪು ಸೀರೆ ಶಕ್ತಿ, ಶೌರ್ಯ ಹಾಗೂ ವಿಜಯದ ಸಂಕೇತ,  ತ್ಯಾಗ, ಭಕ್ತಿಯ ಗುಣಸೂಚಕವಾಗಿದೆ.  ಯುವಕ ಯುವತಿಯರು ಕೆಂಪು ಗುಲಾಬಿ ಹೂವನ್ನು ಕೊಟ್ಟು  ಪ್ರೀತಿ ವ್ಯಕ್ತ ಪಡಿಸುವ ಪ್ರೀತಿ ಭಾವ ಸೂಚಕವು ಹೌದು. ಮದುವೆಯ ಅಕ್ಷತೆಯಲ್ಲಿ ಮದುಮಗಳು ಉಡುವ ಕೆಂಪು ಸೀರೆ ಪ್ರೀತಿ, ಸಂಬಂದಗಳ ಬೆಸುಗೆ. ಮದುವೆಯಾದ ಹೆಣ್ಣು ಹಚ್ಚುವ ಕುಂಕುಮ ಸೌಭಾಗ್ಯದ ಪ್ರತೀಕ.   ಹಸಿರು ಅಂತ ತಕ್ಷಣ ಕಣ್ಣ ಮುಂದ ಬರುವದು ಹಚ್ಚ ಹಸಿರಿನ ಗಿಡಗಳು, ರೈತನ ಟವೆಲ್, ಹಸಿರು ತರಕಾರಿಗಳು.  ಹಸಿರು ರೈತನ ವ್ಯಕ್ತಿ ಮತ್ತು ಕಾಯಕ ಸೂಚಕವಾದರೆ,  ಸಮೃದ್ದಿ, ಸ್ವಾಸ್ಥ್ಯಗಳೆ ಹಸಿರಿನ ಗುಣ ಸೂಚಕದ ಉಸಿರು.  ಹೆಣ್ಣುಮಕ್ಕಳಿಗೆ ಮೈ ನೆರೆದಾಗ, ಸೀಮಂತದಲ್ಲಿ, ಹೊಸತಾಗಿ ಮದುವೆಯಾಗಿ ತವರ ಮನೆಗೆ ಕಾಲಿಡುವ ಸೊಸೆಗೆ ಉಡಿಸುವ ಹಸಿರು ಸೀರೆ, ಹಸಿರು ಬಳೆ ಫಲವಂತಿಕೆ ಪ್ರತೀಕ. ಮಳೆಯಾದ ಮೇಲೆ ಪ್ರಕೃತಿಯ ಬೆಟ್ಟ ಗುಡ್ಡ, ಹೊಲ ಗದ್ದೆ ಹಸಿರಿನಿಂದ ಕಂಗೋಳಿಸಿದಾಗ ಭೂತಾಯಿ ಹಸಿರು ಸೀರೆ ಉಟ್ಟು ನರ್ತಿಸುವಂತೆ ಭಾಸವಾಗುತ್ತದೆ.    ಕಪ್ಪು ಅಂದಾಗ ಕಣ್ಣ ಮುಂದೆ ರಾತ್ರಿಯ ಕರಾಳತೆ, ಅಂದಕಾರದ ಚಾಯೆ ಆವರಿಸಿಕೊಳ್ಳತ್ತದೆ. ಮುಸುಕುದಾರಿ ಉಗ್ರವಾದಿಗಳು, ಕಳ್ಳರು, ದರೋಡೆಕೊರ ವ್ಯಕ್ಯಿಯ ಕಪ್ಪು ಮುಖವಾಡಗಳು ನಮ್ಮನ್ನ ಬಯದ ಬಾವಕ್ಕೆ ತಳ್ಳುತ್ತವೆ.  ಇದು ಅಜ್ಞಾನ, ಅನೀತಿ, ಅನಾಚಾರದ ಗುಣ ಸೂಚಕ. ಮಕ್ಕಳಿಗೆ ಕರಿ ಬಟ್ಟೆ ದರಿಸಬಾರದು ಅಂತ ಹಿರಿಯರು ಹೇಳುವದನ್ನ ನಾವೆಲ್ಲಾ ಕೇಳಿದ್ದೇವೆ.  ಹಾಗೇಯೇ ಜನಪದದಲ್ಲಿ ‘ಕರಿ ಸಿರಿ ಉಡಬೇಡ ಕಡಿವಾಣ ಬಿಡಬೇಡ’ ಅಂತ ಹೆಣ್ಣಿಗೆ ಹೇಳುವದರ ಮೂಲಕ ಕಪ್ಪು ಬಣ್ಣ ಕೆಡುಕಿನ ಮೂಲ ಎಂದು ಸಲಹೆ ನೀಡುತ್ತದೆ. ಕಪ್ಪನ್ನ ಕಾಲಾ ಜಾದೂ, ಮಾಟ ಮಂತ್ರಗಳಲ್ಲೂ ಕೂಡ ಬಳಸಲಾಗುತ್ತದೆ. ಇಲ್ಲಿ ಕಪ್ಪು ನಕಾರಾತ್ಮಕದ ಸಂಕೇತ.  ಆದರೆ ವಕೀಲರು ತೊಡುವ ಕಪ್ಪು ಕೋಟು ಕಾಯಕದ ಸೂಚಕ.  ಸಮಾಜದಲ್ಲಿಯ ಅನ್ಯಾಯವನ್ನ ಅಳಿಸಿ ನ್ಯಾಯ ಒದಗಿಸುವದು ಈ ವಕೀಲ ವೃತ್ತಿಯ ಧರ್ಮ. ಅಯ್ಯಪ್ಪ ಸ್ವಾಮಿಗಳು ಧರಿಸುವ ಬಟ್ಟೆ ಕೂಡಾ ಕಪ್ಪು. ಇಲ್ಲಿ ಇದು ನಮ್ಮಲ್ಲಿರುವ ಕೆಟ್ಟು ಗುಣಗಳನ್ನ, ಕೆಟ್ಟ ಚಟಗಳನ್ನ ದೂರ ಮಾಡಿ ಸರಿ ದಾರಯೆಡೆಗೆ ನಡೆಸುವಂತೆ ಮಾಡಲು ತೊಡುವ ದೃಡಸಂಕಲ್ಪವಿದ್ದಂತೆ.   ಹೀಗಾಗಿ ಕಪ್ಪು ಇಲ್ಲಿ ನಕಾರಾತ್ಮಕ ಅಲ್ಲ ಸಕಾರಾತ್ಮಕದ ಸಂಕೇತ. ಒಂದು ಕಡೇ ರಾಧೆ ಕೃಷ್ಣನ ಕಪ್ಪು ಬಣ್ಣವನ್ನು ಚೇಡಿಸುವಾಗ ಕೃಷ್ಣ ಹೇಳುತ್ತಾನೆ “ನೀನು ಕಣ್ಣು ಮುಚ್ಚಿದಾಗ ಕಾಣುವದೆಲ್ಲಾ ಕಪ್ಪು. ಅದನ್ನ ಹೇಗೆ ತಪ್ಪಿಸುವೇ” ಎಂದು ಮರು ಪ್ರಶ್ನಿಸುವ ಮೂಲಕ. ಕಪ್ಪು ಅನ್ನುವದು ಎಲ್ಲವನ್ನು ಆಕರ್ಷಿಸುವ, ಒಳಗೊಂಡ ಕಬಂಧ ಬಾಹು ಎನ್ನುವದನ್ನ ಹೇಳ ಹೊರಟಿರುವನು. ಅದನ್ನೆ  ವಿಜ್ಞಾನ ಬ್ರಹ್ಮಾಂಡದಲ್ಲಿ ಕಪ್ಪು ಕುಳಿ ಇರುವದನ್ನ ಕಂಡು ಹಿಡಿದಿದೆ. ಇದು ಎಲ್ಲವನ್ನ ತನ್ನೊಳಗೆ ಆಕರ್ಸಿಸುತ್ತದೆ ಎಂದು ಹೇಳಿದ್ದಾರೆ.  ಬಿಳಿ ಬಣ್ಣ ನೆನಪಿಸುವದು ಸ್ಚಚ್ಚಂದ ಬಿಳಿ ಮೋಡಗಳು, ಬೆಳ್ಳನೆ ಹಾಲು, ಶ್ವೇತ ಹಂಸ ಹೀಗೆ ಬೆಳೆಯುತ್ತ ಹೋಗುತ್ತದೆ.  ವಿಧವೆ, ಸನ್ಯಾಸಿನಿಯರ  ವ್ಯಕ್ತಿ ಸೂಚಕವಾದ ಬಿಳಿ ಬಣ್ಣ ರಾಜಕೀಯದಲ್ಲಿ ಸಚಿವರುಗಳು ದರಿಸುವ ಬಿಳಿ ಜುಬ್ಬಾ ಕಾಯಕ ಸೂಚಕ.  ಬಿಳಿ ಸತ್ಯ, ಶಾಂತತೆ, ನಿರ್ಮಲತೆಯ, ಪವಿತ್ರತೆಯ ಸ್ವಭಾವ ಸೂಚಕ. ಇಂತಹ ಭಾವ ಸೂಚಕದ ಬಟ್ಟೆ ಧರಿಸಿದ ಎಷ್ಟು ರಾಜಕಾರಣಿಗಳು ಎಷ್ಟರ ಮಟ್ಟಿಗೆ ಆ ಗುಣಗಳನ್ನ ತಮ್ಮ ರಾಜಕೀಯದಲ್ಲಿ ಅಳವಡಿಸಿಕೊಂಡಿದ್ದಾರೆ ಅನ್ನುವದು ಎಲ್ಲರಿಗೂ ತಿಳಿದ ವಿಷಯ.  ಬಿಳಿ ಇದು ವ್ಯಕ್ತಿ ಮರಣ ಹೊಂದಿದಾಗ ಅವನ ಮೇಲೆ ಹೊದಿಸುವ ಬಟ್ಟೆ, ಅಂತ್ಯಕ್ರೀಯೇಯಲ್ಲಿ ಸಂಬಂಧಿಗಳು ಧರಿಸುವ ಬಟ್ಟೆ ಕೂಡ ಬಿಳಿಯದೆ.  ಇಲ್ಲಿ ಬಿಳಿ  ಮೌನದ ಸೂಚಕ ಒಂದು ಕಡೆಯಾದರೆ.  ಮಾನವನ ಬದುಕಿನ ಎಲ್ಲವು ಮುಗಿದ ಮೇಲೆ ಉಳಿಯುವ ಖಾಲಿತನದ,  ಪ್ರಾಣ ನೀಗಿ ಬಯಲಿನಲ್ಲಿ ಆತ್ಮ ಪರಮಾತ್ಮನಲ್ಲಿ ಲೀನವಾಗುವ ಅಗೋಚರತೆ, ಅಗಮ್ಯತೆಯ ಯಾಣ. ಕಪ್ಪು ತನ್ನೊಳಗೆ ಎಲ್ಲವನ್ನೂ ನುಂಗಿದರೆ.  ಬಿಳಿಯ ಬೆಳಕು ಎಲ್ಲವನ್ನು ಹೊರ ಚಾಚುತ್ತದೆ. ಪ್ರಕಾಶಿಸುತ್ತದೆ.    ಹಳದಿ ಬಣ್ಣ ಅರಿಷಣ, ಮದುವೆಯಲ್ಲಿ ವದು ವರರಿಗೆ ಅರಿಷಣದ ಲೇಪನ, ಜಾತ್ರೆ,  ಹಬ್ಬ- ಹರಿದಿನಗಳಲ್ಲಿ ಎರಚುವ ಹಳದಿ ಬಂಡಾರ ಮಂಗಲ, ಶುಭದ ಸಂಕೇತ.  ಹಳದಿ ಸ್ನೇಹದ ಸೂಚಕವು ಹೌದು.  ಹಳದಿ ಇದು ನಮ್ಮ ತಾಯಿ ಭುವನೇಶ್ವರಿ ಕೈಯಲ್ಲಿ ನಮ್ಮ ಕರ್ನಾಟಕದ ಬಾವುಟದಲ್ಲಿರುವ ಹಳದಿ ಬಣ್ಣ ಶಾಂತಿ, ಸಹನೆ ಮತ್ತು ಸ್ನೇಹದ ಸಂಕೇತ.    ನೀಲಿ ಅಂದಾಗ ಶುಬ್ರವಾದ ನೀಲಿ ಆಕಾಶ,‌ ನೀಲ ಕಡಲ ಕಣ್ಣ ಮುಂದೆ ಬರುತ್ತದೆ. ಶ್ರಮಿಕ ಅಂದರೆ ಜವಾನ, ಸ್ವೀಪರ್, ಕಾರ್ಮಿಕರು ಧರಿಸುವ ಬಟ್ಟೆ ನೆನಪಾಗುವದು.  ನಮ್ಮ ದೇಶದ ವಾಯು ಸೈನದಲ್ಲಿ ಸೈನಿಕರು ಧರಿಸುವ ಬಣ್ಣವು  ನೀಲಿಯೇ. ನಮ್ಮ ದೇಶದ ರಾಷ್ಟ್ರ ದ್ವಜದಲ್ಲಿ ಮದ್ಯದಲ್ಲಿ ಇರುವ ಚಕ್ರವು ನಿಲಿ ಬಣ್ಣದ್ದು.  ಈ ನೀಲಿ ಶ್ರಮಿಕ, ಸೈನಿಕನ ವ್ಯಕ್ತಿ ಸೂಚಕವಾದರೆ, ಇನ್ನೊಂದು ಕಡೆ ಆಕಾಶದ ಹಾಗೆ ವಿಶಾಲತೆ, ಚಲನೆಯ ಬದುಕನ್ನ ತೋರಿಸುಕೊಡುತ್ತದೆ. ಹಾಗೇಯೇ ಶ್ರಮಿಕನ ಕಾಯಕವೇ ಕೈಲಾಸ ಎಂಬ ಮಂತ್ರ, ಕಾಲ, ಸಮಯದ ಮಹತ್ವ ಸಾರುವ ಗುಣ ಸೂಚಕವು ಹೌದು.ಹೋಳಿ ಹುಣ್ಣವಿ ಬಣ್ಣದ ಹಬ್ಬ. ಬಣ್ಣ-ಬಣ್ಣಗಳ ಚಿತ್ತಾರದ ಹಬ್ಬ. ಕಣ್ಣುಗಳಿಗೆ ಇಂಪು, ಬಿಸಿಲಿನ ಬೆಗೆಗೆ ಬೆಂದ ದೇಹಕ್ಕೆ ತಂಪೆರಚುವ ಹಬ್ಬ.  ಭಾವನೆಗಳ ಭಾವತರಂಗ-ಭಾವಂತರಂಗ.  ರಂಗುರಂಗಿನಲಿ ಕುಣಿದು ಕುಪ್ಪಳಿಸುವ ಹಬ್ಬ.          ಈ ಹಬ್ಬದಲ್ಲಿ ಪ್ರೀತಿಯ ಪ್ರತೀಕರಾದ ರತಿ ಮನ್ಮಥನನ್ನ ಕುಳ್ಳರಿಸಿ ಪೂಜೆ ಮಾಡುವದು ಐತಿಹಾಸಿಕ, ಧಾರ್ಮಿಕ ಹಿನ್ನಲೆಯುಳ್ಳದ್ದು  ಒಂದು ಕಡೆಯಾದರೆ ಮತ್ತೊಂದು ಕಡೆ ಒಬ್ಬರಿಗೊಬ್ಬರು ಬಣ್ಣ ಎರಚಿ ಆನಂದ ಪಡುವ ಹಬ್ಬ.      ಬಣ್ಣಗಳು ನಮ್ಮ ಭಾರತೀಯ ಧರ್ಮ, ಸಂಸ್ಕೃತಿ, ಸಂಪ್ರದಾಯಗಳಲ್ಲಿ ಬೇರೆ ಬೇರೆ ಸ್ಥಿತಿಗತಿಗಳಲ್ಲಿ ಬೆರೆತು ಹೋಗಿದೆ.  ನಮ್ಮ ದೇಶ ಬಟ್ಟೆಗಳ ವ್ಯಾಪಾರದಲ್ಲಿ ಬ್ರೀಟೀಷರ ಕಾಲಕ್ಕಿಂತಲೂ  ಮೊದಲು ಪ್ರಪಂಚದಲ್ಲಿಯೇ ಮುಂಚೂಣಿಯಲ್ಲಿತ್ತು.  ಅದರಲ್ಲೂ ವಿವಿಧ ರೀತಿಯ ಬಣ್ಣದ ಬಟ್ಟೆಗಳು ಪ್ರಪಂಚದಲ್ಲಿ ಎಲ್ಲಿಯೂ ಅಲ್ಲದೇ ನಮ್ಮ ದೇಶದಲ್ಲಿಯೇ ತಯಾರಾಗುತ್ತಿದ್ದವು. ಬಣ್ಣದ ಬಟ್ಟೆಗಳು ಇಲ್ಲಿಂದ ಪ್ರಪಂಚದ ಎಲ್ಲಡಗೆ ರಪ್ತಾಗುತ್ತಿದ್ದವು.     ಹೋಳಿ ಆಡುವ ವಿವಿಧ ಬಣ್ಣಗಳು ಮಾನವನ ಜೀವನದಲ್ಲಿ ರಂಗುರಂಗಿನ ವೈವಿದ್ಯಮಯ ಲೋಕವನ್ನ ಅನಾವರಣಗೊಳಿಸುತ್ತದೆ. ಬಣ್ಣಗಳು ಮಾನವನ ಪ್ರತಿಗಳಿಗೆಯಲ್ಲು ಹಾಸುಹೊಕ್ಕಾಗಿವೆ.  ಪ್ರತಿಯೊಂದು ಬಣ್ಣವು ವ್ಯಕ್ತಿ, ಕಾಯಕ, ಗುಣ-ಸ್ವಭಾವ ಸೂಚಕಗಳಾಗುವದರವ ಮೂಲಕ ಸಮಾಜದಲ್ಲಿ ಬೆರತುಹೋಗಿವೆ. ಇಂದ್ರಧನುಷ್ ದ ಬಣ್ಣಗಳಂತೆ ಬಣ್ಣ ವೈವಿದ್ದತೆಯನ್ನು, ಸಂಪತ್ತು, ಸಂಸಾರ, ಸಮೃದ್ಧಿಯ ಪ್ರತೀಕ.   ಪ್ರತಿಯೊಂದು ಬಣ್ಣದ ವಿಶೇಷತೆಯನ್ನ ತಿಳಿಯೋಣ ಬನ್ನಿ       ಕೆಂಪ ಕೆಸರಿ ಅಂತ ತಕ್ಷಣ ನೆನಪಾಗುದು ಒಂದಕಡೆ ರಕ್ತ ಆದರ ಇನ್ನೊಂದು ಕಡೆ  ಸನ್ಯಾಸಿಯ ಬಟ್ಟೆ, ದುರ್ಗಾ ಮೂರ್ತಿ‌.   ಒಂದ ಕಡೆ ಬೀಬತ್ಸ ಇನ್ನೊಂದು ತ್ಯಾಗ, ಭಕ್ತಿ, ಭಾವದ ಪರವಸೆ.  ಕೆಂಪು ಸನ್ಯಾಸಿಯ ವ್ಯಕ್ತಿಯ ಕಾಯಕದ ಸೂಚಕ. ದುರ್ಗಾ ಮಾತೆಗೆ ಉಡಿಸುವ ಕೆಂಪು ಸೀರೆ ಶಕ್ತಿ, ಶೌರ್ಯ ಹಾಗೂ ವಿಜಯದ ಸಂಕೇತ,  ತ್ಯಾಗ, ಭಕ್ತಿಯ ಗುಣಸೂಚಕವಾಗಿದೆ.  ಯುವಕ ಯುವತಿಯರು ಕೆಂಪು ಗುಲಾಬಿ ಹೂವನ್ನು ಕೊಟ್ಟು  ಪ್ರೀತಿ ವ್ಯಕ್ತ ಪಡಿಸುವ ಪ್ರೀತಿ ಭಾವ ಸೂಚಕವು ಹೌದು. ಮದುವೆಯ ಅಕ್ಷತೆಯಲ್ಲಿ ಮದುಮಗಳು ಉಡುವ ಕೆಂಪು ಸೀರೆ ಪ್ರೀತಿ, ಸಂಬಂದಗಳ ಬೆಸುಗೆ. ಮದುವೆಯಾದ ಹೆಣ್ಣು ಹಚ್ಚುವ ಕುಂಕುಮ ಸೌಭಾಗ್ಯದ ಪ್ರತೀಕ.   ಹಸಿರು ಅಂತ ತಕ್ಷಣ ಕಣ್ಣ ಮುಂದ ಬರುವದು ಹಚ್ಚ ಹಸಿರಿನ ಗಿಡಗಳು, ರೈತನ ಟವೆಲ್, ಹಸಿರು ತರಕಾರಿಗಳು.  ಹಸಿರು ರೈತನ ವ್ಯಕ್ತಿ ಮತ್ತು ಕಾಯಕ ಸೂಚಕವಾದರೆ,  ಸಮೃದ್ದಿ, ಸ್ವಾಸ್ಥ್ಯಗಳೆ ಹಸಿರಿನ ಗುಣ ಸೂಚಕದ ಉಸಿರು.  ಹೆಣ್ಣುಮಕ್ಕಳಿಗೆ ಮೈ ನೆರೆದಾಗ, ಸೀಮಂತದಲ್ಲಿ, ಹೊಸತಾಗಿ ಮದುವೆಯಾಗಿ ತವರ ಮನೆಗೆ ಕಾಲಿಡುವ ಸೊಸೆಗೆ ಉಡಿಸುವ ಹಸಿರು ಸೀರೆ, ಹಸಿರು ಬಳೆ ಫಲವಂತಿಕೆ ಪ್ರತೀಕ. ಮಳೆಯಾದ ಮೇಲೆ ಪ್ರಕೃತಿಯ ಬೆಟ್ಟ ಗುಡ್ಡ, ಹೊಲ ಗದ್ದೆ ಹಸಿರಿನಿಂದ ಕಂಗೋಳಿಸಿದಾಗ ಭೂತಾಯಿ ಹಸಿರು ಸೀರೆ ಉಟ್ಟು ನರ್ತಿಸುವಂತೆ ಭಾಸವಾಗುತ್ತದೆ.    ಕಪ್ಪು ಅಂದಾಗ ಕಣ್ಣ ಮುಂದೆ ರಾತ್ರಿಯ ಕರಾಳತೆ, ಅಂದಕಾರದ ಚಾಯೆ ಆವರಿಸಿಕೊಳ್ಳತ್ತದೆ. ಮುಸುಕುದಾರಿ ಉಗ್ರವಾದಿಗಳು, ಕಳ್ಳರು, ದರೋಡೆಕೊರ ವ್ಯಕ್ಯಿಯ ಕಪ್ಪು ಮುಖವಾಡಗಳು ನಮ್ಮನ್ನ ಬಯದ ಬಾವಕ್ಕೆ ತಳ್ಳುತ್ತವೆ.  ಇದು ಅಜ್ಞಾನ, ಅನೀತಿ, ಅನಾಚಾರದ ಗುಣ ಸೂಚಕ. ಮಕ್ಕಳಿಗೆ ಕರಿ ಬಟ್ಟೆ ದರಿಸಬಾರದು ಅಂತ ಹಿರಿಯರು ಹೇಳುವದನ್ನ ನಾವೆಲ್ಲಾ ಕೇಳಿದ್ದೇವೆ.  ಹಾಗೇಯೇ ಜನಪದದಲ್ಲಿ ‘ಕರಿ ಸಿರಿ ಉಡಬೇಡ ಕಡಿವಾಣ ಬಿಡಬೇಡ’ ಅಂತ ಹೆಣ್ಣಿಗೆ ಹೇಳುವದರ ಮೂಲಕ ಕಪ್ಪು ಬಣ್ಣ ಕೆಡುಕಿನ ಮೂಲ ಎಂದು ಸಲಹೆ ನೀಡುತ್ತದೆ. ಕಪ್ಪನ್ನ ಕಾಲಾ ಜಾದೂ, ಮಾಟ ಮಂತ್ರಗಳಲ್ಲೂ ಕೂಡ ಬಳಸಲಾಗುತ್ತದೆ. ಇಲ್ಲಿ ಕಪ್ಪು ನಕಾರಾತ್ಮಕದ ಸಂಕೇತ.  ಆದರೆ ವಕೀಲರು ತೊಡುವ ಕಪ್ಪು ಕೋಟು ಕಾಯಕದ ಸೂಚಕ.  ಸಮಾಜದಲ್ಲಿಯ ಅನ್ಯಾಯವನ್ನ ಅಳಿಸಿ ನ್ಯಾಯ ಒದಗಿಸುವದು ಈ ವಕೀಲ ವೃತ್ತಿಯ ಧರ್ಮ. ಅಯ್ಯಪ್ಪ ಸ್ವಾಮಿಗಳು ಧರಿಸುವ ಬಟ್ಟೆ ಕೂಡಾ ಕಪ್ಪು. ಇಲ್ಲಿ ಇದು ನಮ್ಮಲ್ಲಿರುವ ಕೆಟ್ಟು ಗುಣಗಳನ್ನ, ಕೆಟ್ಟ ಚಟಗಳನ್ನ ದೂರ ಮಾಡಿ ಸರಿ ದಾರಯೆಡೆಗೆ ನಡೆಸುವಂತೆ ಮಾಡಲು ತೊಡುವ ದೃಡಸಂಕಲ್ಪವಿದ್ದಂತೆ.   ಹೀಗಾಗಿ ಕಪ್ಪು ಇಲ್ಲಿ ನಕಾರಾತ್ಮಕ ಅಲ್ಲ ಸಕಾರಾತ್ಮಕದ ಸಂಕೇತ. ಒಂದು ಕಡೇ ರಾಧೆ ಕೃಷ್ಣನ ಕಪ್ಪು ಬಣ್ಣವನ್ನು ಚೇಡಿಸುವಾಗ ಕೃಷ್ಣ ಹೇಳುತ್ತಾನೆ “ನೀನು ಕಣ್ಣು ಮುಚ್ಚಿದಾಗ ಕಾಣುವದೆಲ್ಲಾ ಕಪ್ಪು. ಅದನ್ನ ಹೇಗೆ ತಪ್ಪಿಸುವೇ” ಎಂದು ಮರು ಪ್ರಶ್ನಿಸುವ ಮೂಲಕ. ಕಪ್ಪು ಅನ್ನುವದು ಎಲ್ಲವನ್ನು ಆಕರ್ಷಿಸುವ, ಒಳಗೊಂಡ ಕಬಂಧ ಬಾಹು ಎನ್ನುವದನ್ನ ಹೇಳ ಹೊರಟಿರುವನು. ಅದನ್ನೆ  ವಿಜ್ಞಾನ ಬ್ರಹ್ಮಾಂಡದಲ್ಲಿ ಕಪ್ಪು

“ಬಣ್ಣಗಳ ಭಾವತರಂಗ” ವಿಶೇಷ ಲೇಖನ ಶ್ರೀದೇವಿ ಗುಮ್ಮಗೋಳ Read Post »

ಕಾವ್ಯಯಾನ, ಗಝಲ್

ರತ್ನರಾಯಮಲ್ಲ ಅವರ ಗಜಲ್

ಕಾವ್ಯ ಸಂಗಾತಿ ರತ್ನರಾಯಮಲ್ಲ ಗಜಲ್ ನೀ ಸಾಗಿದ ದಾರಿಯು ಸುಲಭವಾಗಿ ಇರಲಿಲ್ಲ ಗಾಲಿಬ್ನಿನ್ನ ಮನದ ತೊಳಲಾಟ ಸರಳವಾಗಿ ಇರಲಿಲ್ಲ ಗಾಲಿಬ್ ಕಂಬನಿಯಲೂ ಗಜಲ್ ರಚಿಸಿದ ಮಹಾ ಕಲಾಕಾರ ನೀನುಅಶಾಂತಿಯಲಿ ಬದುಕು ಸುಂದರವಾಗಿ ಇರಲಿಲ್ಲ ಗಾಲಿಬ್ ವ್ಯಥೆಯೊಳಗೆ ವ್ಯಂಗ್ಯವಿಟ್ಟು ನಕ್ಕ ಪರಿ ನಾ ಮರೆಯಲಿ ಹೇಗೆಹೊರ ಜಗತ್ತಿಗೆ ನಿನ್ನ ನಗು ಸಹಜವಾಗಿ ಇರಲಿಲ್ಲ ಗಾಲಿಬ್ ಮಲ್ಲಿಗೆಯ ಸುಮ ಕಾಯುತಲೆ ಇತ್ತು ಅವಸರ ಮಾಡಿದೆಎದೆಯಲಿ ನೀನಿಟ್ಟ ಹೆಜ್ಜೆ ನಿಧಾನವಾಗಿ ಇರಲಿಲ್ಲ ಗಾಲಿಬ್ ಮರಣವನ್ನೂ ಮೀರಿದ ಚಿರಂಜೀವಿ ನೀ ಮಲ್ಲಿ ಮನದಲಿನೀ ನಡೆಸಿದ ಹೋರಾಟ ಖಚಿತವಾಗಿ ಇರಲಿಲ್ಲ ಗಾಲಿಬ್ ರತ್ನರಾಯಮಲ್ಲ

ರತ್ನರಾಯಮಲ್ಲ ಅವರ ಗಜಲ್ Read Post »

ಕಾವ್ಯಯಾನ

ಸಂತೆಬೆನ್ನೂರು ಫೈಜ್ನಟ್ರಾಜ್ “ನನ್ನ ಶಿವ”

ಕಾವ್ಯ ಸಂಗಾತಿ ಸಂತೆಬೆನ್ನೂರು ಫೈಜ್ನಟ್ರಾಜ್ “ನನ್ನ ಶಿವ” ಹಸಿರು ಗರಿಕೆ ಮೇದುಬಿಳಿ ಹಾಲನೀವ ನನ್ನ ಶಿವ ರಟ್ಟೆ ಮುರಿದು ಬಂದಬೆವರ ಹನಿಯಲಿರುವ ನನ್ನ ಶಿವ ಮಂದಿರದಿ ನಡೆದು ಮಸೀದಿಯ ಮುಂದಿಂದಇಗರ್ಜಿಯತ್ತ ನಡೆದು ನಗುವ ನನ್ನ ಶಿವ ಕರಿ ಕಲ್ಲಿನ ಬಿಳಿ ನಗುಎಲ್ಲಾ ಬಣ್ಣದ ಕಾಮನಬಿಲ್ಲು ನನ್ನ ಶಿವ ಗುಡಿಸಲಿಗೂ, ಮಹಡಿಗೂಒಂದೇ ಬಿಸಲನೀವ ಸೂರ್ಯ ನನ್ನ ಶಿವ ಟಾಕೀಸು, ಶೌಚಾಲಯ, ಪಯಣಗಳಲಿಮಾತ್ರ ಎಲ್ಲರೊಂದಾಗೋ ಜನರಿಂದ ದೂರ ಈ ಶಿವ ಕಲ್ಲ ಕಪ್ಪೆ, ಬಾನ ಹದ್ದು, ಮಣ್ಣ ಹುಳಮತ್ತು ಮನುಜನ ಹೊಟ್ಟೆಗೆ ತಪ್ಪದೇ ಹಿಟ್ಟಿಡುವ ನನ್ನ ಶಿವ ಯೇಸುವ ಆಲಂಗಿಸಿ ಮಹಮದನಕೈ ಹಿಡಿದು ಪಳ್ಳಾರ ಹಂಚಿ ತಿನ್ನುವ ನನ್ನ ಶಿವ ಎದೆ ವಿಷವ ಕರಗಿಸಿ ಹೂ ಮಾತಲಿಮನುಜ ಮತವ ಜಗಕೆ ಸಾರುವ ಈ ನನ್ನ ಶಿವ…. ಸಂತೆಬೆನ್ನೂರು ಫೈಜ್ನಟ್ರಾಜ್

ಸಂತೆಬೆನ್ನೂರು ಫೈಜ್ನಟ್ರಾಜ್ “ನನ್ನ ಶಿವ” Read Post »

ಕಾವ್ಯಯಾನ

ಡಾ. ಹೆಚ್. ನಟರಾಜ್ ಆರ್ಯ “ಮಾನ್ಯಳ ಆತ್ಮದ ಅಳಲು”

ಕಾವ್ಯ ಸಂಗಾತ ಡಾ. ಹೆಚ್. ನಟರಾಜ್ ಆರ್ಯ “ಮಾನ್ಯಳ ಆತ್ಮದ ಅಳಲು” ನಾನುಕತ್ತಲಲ್ಲಿ ಸತ್ತವಳಲ್ಲ—ನನ್ನೊಳಗೆಒಂದು ಚಿಕ್ಕ ಬೆಳಕುಇನ್ನೂ ಉಸಿರಾಡುತ್ತಿತ್ತು. ನನ್ನ ಉಸಿರಲ್ಲಿಮತ್ತೊಂದು ಉಸಿರಿನ ನಡುಗು,ಹೃದಯದ ತಾಳದಲ್ಲಿನಾಳೆಯೊಂದುಭಯದಿಂದ ಕಂಪುತ್ತಿತ್ತು. ನನ್ನನ್ನು ಕೊಂದದ್ದುಕತ್ತಿಯಲ್ಲ—ಜಾತಿಯೆಂಬಮನಸ್ಸಿನ ಕಾಯಿಲೆ. ಅಪ್ಪಾ…ಪ್ರೀತಿ ತಪ್ಪೇ?ಮಾನವನಂತೆ ಬದುಕಲುಕನಸು ಕಾಣುವುದುಪಾಪವೇ?ನೀವು ಕೊಂದದ್ದುದೇಹವಲ್ಲ—ಗರ್ಭದ ಬೆಳಕು. ಅಲ್ಲಿಒಂದು ಬದುಕುಬೀಜವಾಗಿಯೇಕುಸಿದಿತ್ತು. ಹೇಳಿ—ಆ ಉಸಿರಿಗೆಯಾವ ಜಾತಿ?ಆ ಕನಸಿಗೆಯಾವ ಗೋಡೆ?ತಾಯಿಯ ಕಣ್ಣೀರಿಗೂನಿಯಮ ಇದೆಯೆ? ದೌರ್ಜನ್ಯಕ್ಷಣದ ಕೋಪವಲ್ಲ—ತಲೆತಲಾಂತರದಿಂದಹರಿದು ಬಂದಕತ್ತಲ ರಕ್ತ. ಇದಕ್ಕೆ ಔಷಧಿಕತ್ತಿಯಲ್ಲ—ಮನಸ್ಸು ಎಚ್ಚರಗೊಳ್ಳುವಜಾಗೃತಿ. ಮಾನ, ಧರ್ಮ, ಸಂಪ್ರದಾಯದ ಹೆಸರಿನಲ್ಲಿನಾವುಬಂಧನಗಳನ್ನೇಹಾರವೆಂದುಧರಿಸಿಕೊಂಡೆವು. ತಪ್ಪಿಗೆಕಾನೂನು ಇದೆ,ನ್ಯಾಯ ಇದೆ,ಶಿಕ್ಷೆ ಇದೆ—ಆದರೆಜೀವ ಕತ್ತರಿಸುವಅಧಿಕಾರಯಾರಿಗೂ ಇಲ್ಲ. ಅವಳ ಕಣ್ಣಲ್ಲಿನಿನ್ನ ಮಗಳ ಭಯ,ಅವನ ಉಸಿರಲ್ಲಿನಿನ್ನ ಮಗನನಾಳೆ. ನನಗೆ ನ್ಯಾಯ ಸಿಕ್ಕಿತು—ಆದರೆನನ್ನ ಮಗನಿಗೆಬೆಳಗ್ಗೆ ಬರಲಿಲ್ಲ.ಸೂರ್ಯೋದಯಕ್ಕೂಅನುಮತಿ ಬೇಕಾಯಿತೇ? ನನ್ನ ಆತ್ಮಕ್ಕೆ ಶಾಂತಿ ಸಿಗುವುದುಒಂದು ದಿನ—ಈ ಸಮಾಜಕನ್ನಡಿ ನೋಡಿಕೊಂಡುತನ್ನನ್ನೇ ಪ್ರಶ್ನಿಸಿದಾಗ. ಆ ದಿನನಮ್ಮಂಥ ಆತ್ಮಗಳುಕತ್ತಲಲ್ಲ—ಭಯದಲ್ಲಲ್ಲ—ಮಾನವೀಯತೆಯ ಬೆಳಕಿನಲ್ಲಿನಿಶ್ಶಬ್ದವಾಗಿಅಳದೆನಗುತ್ತೇವೆ.

ಡಾ. ಹೆಚ್. ನಟರಾಜ್ ಆರ್ಯ “ಮಾನ್ಯಳ ಆತ್ಮದ ಅಳಲು” Read Post »

ಕಾವ್ಯಯಾನ

ಅರುಣಾ ನರೇಂದ್ರ ಅವರ ಗಜಲ್

ಕಾವ್ಯ ಸಂಗಾತಿ ಅರುಣಾ ನರೇಂದ್ರ ಗಜಲ್ ದೇಹ ನಶ್ವರ ಆತ್ಮ ನಿಜದಲಿ ಕೆಡಬಹುದೇ ಕಣ್ಣು ಕಟ್ಟು ಕನಸು ಬಟ್ಟೆಯಲಿ ಕಟ್ಟಬಹುದೆ ಹುಣಿವೆ ಚಂದ್ರನ ಬೆಳಕು ಉಕ್ಕಿದೆ ಸಾಗರಬೆಳದಿಂಗಳ ಬೊಗಸೆಯಲಿ ತುಂಬಬಹುದೇ ಅರಳಿದ ಹೂ ಮುದದಿ ಮುಡಿಯುತ್ತೇನೆಗಂಧವನು ಬೆರಳಿನಲಿ ಹಿಡಿಯಬಹುದೇ ತೂಗಾಡುವ ಮರವ ಹಬ್ಬಿ ನಿಂತಿದೆ ಬಳ್ಳಿಗಾಳಿಯನು ತೋಳಿನಲಿ ತಬ್ಬಬಹುದೇ ಅರುಣಾಳ ಕೊಂದು ಖುಷಿಪಡಬಹುದುಅವಳ ಆಸೆಗಳ ಶಸ್ತ್ರದಿ ಕೊಲ್ಲಬಹುದೇ ಅರುಣಾ ನರೇಂದ್ರ

ಅರುಣಾ ನರೇಂದ್ರ ಅವರ ಗಜಲ್ Read Post »

ಕಾವ್ಯಯಾನ

ಡಾ. ಮಲ್ಲಿಕಾರ್ಜುನ ಎಸ್ ಆಲಮೇಲ ಅವರ ಕವಿತೆ”ನಿನ್ನೊಳಿದೆ ನನ್ನ ಹೃದಯ”

ಕಾವ್ಯ ಸಂಗಾತಿ ಡಾ. ಮಲ್ಲಿಕಾರ್ಜುನ ಎಸ್ ಆಲಮೇಲ “ನಿನ್ನೊಳಿದೆ ನನ್ನ ಹೃದಯ” ನಿನ್ನ ನೋಡದೆ ನಾ ಹೇಗಿರಲಿ,ನನ್ನೊಲವಿನ ಗೆಳತಿನಿನ್ನೊಳಿದೆ ನನ್ನ ಮನಸ್ಸು……..ಅರ್ಥವಾಗದಿಹದೇ ನಿನ್ನೊಲವಿನ ಗೆಳೆಯನಹೃದಯಾಂತರಾಳದ ವೇದನೆಯು ನಿನಗೆನಿನ್ನದೆ ಮಧುರ ನೆನಪು ಪ್ರತಿ ಕ್ಷಣ ಕ್ಷಣವುನನ್ನೆದೆಯ ವೀಣೆಯ ಮೀಟುತಿದೆ….. ಅಂದು ಹುಣ್ಣಿಮೆಯ ಬೆಳದಿಂಗಳ ರಾತ್ರಿಯಲ್ಲಿಚಂದ್ರಮುಖಿ ಚಕೋರಂಗೆಯೇ ನಾಚುವಂತೆಸಿಂಗರಿಸಿಕೊಂಡು ಬಳಿಬಂದು ಎನ್ನ ಬಳಸಿಎದೆಗಪ್ಪಿ ಚುಂಬಿಸಿ ಪ್ರೇಮಬಂಧನದಿ ಬಂಧಿಸಿದಆ ಘಳಿಗೆಯನ್ನು ಮರೆಯಲಾದೀತೆ ಗೆಳತಿಈ ಜನ್ಮದಿಂದ ಸಪ್ತಜನ್ಮದವರೆಗೂ….. ಕಾಯ ನನ್ನದು ಪ್ರಾಣ ನಿನ್ನದು ಒಲವೇಹೃದಯ ನನ್ನದು ಬಡಿತ ನಿನ್ನದೆ ಚಲುವೇದೂರವಾಗಬೇಡ ನೀ ತಾಳಲಾರೆನು ನಾಈ ಸುಡುವ ವಿರಹದೂರಿಯಿಂದದೂರವಾದರೆ ನೀನು ಬರಿದಾದ ಕಡಲಂತೆನನ್ನ ಬದುಕು…….. ನನ್ನ ಬದುಕು……. ನಾನು ಬಡವನಾದರೂ ಪ್ರೀತಿಗೆ ಬಡತನವಿಲ್ಲನನ್ನ ಮನದಿ ಪ್ರೇಮಸಿರಿಯೇ ಇರುವದುನೀನೀ ದೀನನ ಬಾಳಿನ ಜ್ಯೋತಿಯೆಂದುಹರುಷದಿ ಹಕ್ಕಿಯಂತೆ ಹಾರಾಡುತ್ತಿರುವೆಮರೆಯಾದರೆ ನೀ ಮಣ್ಣಲ್ಲಿ ಮಣ್ಣಾಗುವೆ ನಾನಿನ್ನೊಳಿದೆ ನನ್ನ ಹೃದಯ………. ಡಾ. ಮಲ್ಲಿಕಾರ್ಜುನ ಎಸ್ ಆಲಮೇಲ

ಡಾ. ಮಲ್ಲಿಕಾರ್ಜುನ ಎಸ್ ಆಲಮೇಲ ಅವರ ಕವಿತೆ”ನಿನ್ನೊಳಿದೆ ನನ್ನ ಹೃದಯ” Read Post »

You cannot copy content of this page

Scroll to Top