ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಎ.ಹೇಮಗಂಗಾ ಅವರ ತನಗಗಳು

ಕಾವ್ಯ ಸಂಗಾತಿ ಎ.ಹೇಮಗಂಗಾ ತನಗಗಳು ಕೆಂಡದಂತೆ ಕಾದಿದೆಪಲ್ಲಂಗವಿಂದು ನಲ್ಲಕಾರಣ ಈ ವಿರಹಗ್ರೀಷ್ಮ ಋತುವು ಅಲ್ಲ ಕದಪು ಕೆಂಪಾಗಿದೆಬಿಸಿ ಉಸಿರು ತಾಗಿನಲ್ಲ ಬಳಿ ಬರಲುತೋಳಲಿ ಬಳಸಲು ನಿನ್ನ ಅನುಪಸ್ಥಿತಿನಿತ್ಯವೂ ಕಾಡುತಿದೆಅತಿಯಾದ ಪ್ರೀತಿಯೇನನ್ನನ್ನು ಕೊಲ್ಲುತಿದೆ ಒಮ್ಮೊಮ್ಮೆ ಬಿಸಿಗಾಳಿಮಗದೊಮ್ಮೆ ತಂಗಾಳಿಹವೆ ಬಲು ಚಂಚಲಬಂಡೆ ಮಾತ್ರ ಅಚಲ ಮೈ ಶಾಖ ಹೆಚ್ಚಿಸಿದೆವೈಶಾಖದ ಬಿಸಿಲುಒಣಗಿ ಉದುರಿದೆಮರಗಳ ಟಿಸಿಲು ಊಟದಲಿ ಕೊಂಚವೂತಿಳಿಯುತ್ತಿಲ್ಲ ಸ್ವಾದಬಿಸಿಲ ತಾಪದಿಂದಮೊಗದ ತುಂಬ ಸ್ವೇದ ಬದುಕೀಗ ನರಕಹೆಚ್ಚಿದೆ ತಾಪಮಾನಕಾದ ಕಾವಲಿ ಭೂಮಿಕಾಣದಾದ ವರುಣ ತಡೆಯಬಲ್ಲೆ ನಾನುಬೇಸಿಗೆಯ ಈ ಧಗೆಸಹಿಸಲಾರೆ ಎಂದೂನಲ್ಲನಾದರೆ ಹಗೆ ಕೆರೆ ಕುಂಟೆಗಳೀಗನೀರಿಲ್ಲದೇ ಬರಡುನಿನ್ನ ಸ್ಪರ್ಶವಿರದೇತನುವಿಂದು ಕೊರಡು ಅಪರೂಪದ ಮಳೆರಸ್ತೆ ಗುಂಡಿ ತುಂಬಿತುಹರುಷದಿಂದ ಮಗುಅಲ್ಲಿ ಕುಪ್ಪಳಿಸಿತು ಎ.ಹೇಮಗಂಗಾ

ಎ.ಹೇಮಗಂಗಾ ಅವರ ತನಗಗಳು Read Post »

ಕಾವ್ಯಯಾನ

ಅನುರಾಧಾ ರಾಜೀವ್ ಸುರತ್ಕಲ್ ಅವರ ಕವಿತೆ “ಮೌನದ ಆಲಾಪನೆ”

ಕಾವ್ಯ ಸಂಗಾತಿ ಅನುರಾಧಾ ರಾಜೀವ್ ಸುರತ್ಕಲ್ “ಮೌನದ ಆಲಾಪನೆ” ಒಲವು ಬಾಡಿತೇಕೆ ಹೇಳು ಮನವೇಬತ್ತಿ ಹೋದವೇ ಭಾವಗಳುನಲಿವ ಹೃದಯದ ಬಡಿತ ನಿಂತಿತೇಸೋತು ಸೊರಗಿದೆ  ಬಂಧಗಳು ಕಣ್ಣು ಕಣ್ಣಲಿ ಬೆಸೆದು ನೋಟವುಹೊಸತು ಲೋಕವ ಕಟ್ಟಿದೆಮಣ್ಣು ಮಾಡಿದೆ ಎದೆಯ ಕನಸನುಪ್ರೇಮದರಮನೆ ಕುಸಿದಿದೆ ಮಾತು ಬಾರದ ಮೂಕ ಹಕ್ಕಿಯತೆರದಿ ಜೀವನವಾಗಿದೆತಂತಿ ಹರಿದ ಜೀವ ನಾದದಲಿಮೌನದ ಆಲಾಪನೆ ಕೇಳಿದೆ ಬಾಳ ಪಯಣದಿ ಆಸರೆ ಇಲ್ಲದೆಬಾಡಿ ಹೋಗಿದೆ ಬಯಕೆಯುಓಡಿ ಬರುವೆಯಾ ಒಮ್ಮೆಯಾದರೂಕೊನೆಗೆ ನೋಡುವಾಸೆಯು ಅನುರಾಧಾ ರಾಜೀವ್ ಸುರತ್ಕಲ್

ಅನುರಾಧಾ ರಾಜೀವ್ ಸುರತ್ಕಲ್ ಅವರ ಕವಿತೆ “ಮೌನದ ಆಲಾಪನೆ” Read Post »

ಕಾವ್ಯಯಾನ

ಕಲ್ಪನಾ ಎಸ್ ಪಾಟೀಲ ಅವರ ಕವಿತೆ “ಅಪ್ಪನ ಶವ ನಕ್ಕಿತಲ್ಲ.!”

ಕಾವ್ಯ ಸಂಗಾತಿ ಕಲ್ಪನಾ ಎಸ್ ಪಾಟೀಲ “ಅಪ್ಪನ ಶವ ನಕ್ಕಿತಲ್ಲ.!” ಅಪ್ಪನಿಗೆ ತನ್ನ ಮಕ್ಕಳು ಎಂದಿಗೂಭಾರ ಅನಿಸಲೆ ಇಲ್ಲ.ಅದ್ಯಾಕೋ ಅಪ್ಪ ಮಕ್ಕಳಿಗೆಭಾರವಾಗಿ ಬಿಟ್ಟ………… ಆರು ಹೆತ್ತರೂ ತನ್ನ ಮಕ್ಕಳಿಗೆ ಏನುಕೊರತೆಯಾಗದಂತೆ ಸಾಕಿದನಲ್ಲಅದ್ಯಾಕೋ ಅಪ್ಪನ ಸಾಕೋಕೆಮಕ್ಕಳಿಗೆ ಹಣದ ಕೊರತೆ ಆಯಿತಲ್ಲ………. ಎರಡೆರಡು ತಿಂಗಳಿಗೊಮ್ಮೆ ಒಬ್ಬೊಬ್ಬರುಜೋಪಾನ ಮಾಡುವರಲ್ಲಆಸ್ತಿಯ ಹಂಚಿಕೊಂಡಂತೆ ಅಪ್ಪನನ್ನೂಸಹ ಹಂಚಿಕೊಂಡು ಬಿಟ್ಚರಲ್ಲ………….. ಅಪ್ಪನ ಮಾನಸಿಕ ಸ್ಥಿತಿಯ ಪರಿವೆಅವರಿಗೆ ಆಗಲೆ ಇಲ್ಲಆದರೂ ಅಪ್ಪ ಎಲ್ಲ ಒಳಗೊಳಗೆನುಂಗಿದನಲ್ಲ…………… ಹೆಂಡತಿ ಇದ್ದಾಗ ನೋಡು ನನ್ನಮಕ್ಕಳನ್ನ ಅಂತಿದ್ದ ಬೀಗತಿದ್ದಅವಳಿಲ್ಲದಾಗ ಆತನೆ ಕುಗ್ಗಿದ್ದಹಾಸಿಗೆ ಹಿಡಿದ ದಿನದಿಂದಲೆ ನಗುವದನ್ನೆನಿಲ್ಲಿಸಿದ………… ಈಗೀಗ ನೀನ್ಯಾಕ ನನ್ನ ಒಬ್ಬಂಟಿ ಮಾಡಿಹೋದೆ ಅಂತಿದ್ದಎಲ್ಲದರಲ್ಲೂ ಮೊದಲೆನ್ನುವವಳುಸಾವಲ್ಲೂ ಮೊದಲೆ ಆದೆ………… ನನ್ನ ಮಾತ್ರ ಎಲ್ಲವ ಅನುಭವಿಸಿಬಾ ಎಂದೆ ಎನುತಿದ್ದಆಗಾಗ ಹಲಬುತ್ತಿದ್ದ ಮಕ್ಕಳಿಗೆ ಇದ್ಯಾವುದರಪರಿವೆ ಆಗದಂತೆ ಇದ್ದ …….. ಇನ್ನೂ ಯಾವಾಗ ಸಾಯತಾನೋ?ಎನ್ನುವರೆಲ್ಲಅದೇನಾಸೆಯ ಇಟ್ಟುಕೊಂಡಿದ್ದ ಗೊತ್ತಿಲ್ಲಅಂತು ಇಂತು ಕೊನೆಯ ಕ್ಷಣ ಬಂದಿತಲ್ಲ …….. ಇಷ್ಟು ದಿನ ನಗದ ಅಪ್ಪ ಆದ್ರೂ ಇಂದುಅಪ್ಪನ ಶವ ನಕ್ಕಿತಲ್ಲಮಕ್ಕಳು ಮಕ್ಕಳು ಅಂತಿದ್ದೆ ಮಕ್ಕಳಿಗಾಗಿಮನೆ ಮಾಡಿದೆ……….. ಅವರಿಷ್ಟದ ಗಾಡಿ ಕೊಡಿಸಿದೆನೀನೆ ಕಟ್ಟಿಸಿಕೊಟ್ಟ ಮನೆಯಲ್ಲಿ ಜಾಗವಿಲ್ಲನಿನ್ನ ಅಂತಿಮ ಯಾತ್ರೆಗೆದೊಡ್ಡ ದೊಡ್ಡ ಗಾಡಿಗಳಿದ್ದರೂ ಮುಕ್ತಿರಥವೆಗತಿಯಾಗಿತ್ತು ನಿನ್ನ  ಬಾಡಿಗೆಎನ್ನುತಲೆ ಅಪ್ಪನ ಶವ ನಗತಿತ್ತು……… ಅಪ್ಪನಿಗಾಗಿ ಬಡಿದಾಡಲೆ ಇಲ್ಲಅಪ್ಪನ ಹಣಕ್ಕಾಗಿ ಹೆಣದ ಮುಂದೆಬಡಿದಾಡಿದರಲ್ಲಆಗಲೂ ಅಪ್ಪನ ಶವ ನಗತಿತ್ತು …….. ನನ್ನವರೆಂದವರು ಯಾರೂನನ್ನವರಾಗಿರಲೆ ಇಲ್ಲಅಪ್ಪನ ಜೋಪಾನ ನಾ ಮಾಡಿದೆನಾ ಮಾಡಿದೆ ಎನ್ನುವರೆ ಎಲ್ಲ ………. ಎಲ್ಲವೂ ಅಪ್ಪನ ಶವದ ಮುಂದೆ ನಡೆದಿತ್ತಲ್ಲಅದೆಷ್ಟಂತ ಬಡದಾಡತಿರಿ ಅಂತಕೇಳೋಕ ಆತ ಇಲ್ಲಆತನ ಶವ ಮಾತ್ರ ನಗತಿತ್ತಲ್ಲ……. ಇವರ ಕಣ್ಣೀರ ಕೂಗು ಕೇಳದಷ್ಟುದೂರ ಹಂಗಿನ ಮಾತು ಮನಸಿಗೆಮುಟ್ಟದಂತೆ ಮಲಗಿ ಬಿಟ್ಟಿದ್ದಅಪ್ಪನ ಶವ ಈಗಂತೂ ಜೋರಾಗಿ ನಗತಿತ್ತು…… ಇನ್ನ್ಯಾರ ಅಪ್ಪ ಎನ್ನುವಿರಿ? ಎರಡೆರಡುತಿಂಗಳಿಗೊಮ್ಮೆ ಮನೆಯಿಂದ ಮನೆಗೆಊರಿಂದ ಊರಿಗೆ ಅದಾರನ್ನತಂದಿರಿಸಿಕೊಳ್ಳುವಿರಿ?ಎಂದುಕೇಳುತಲೆ ಇತ್ತು. ಅಪ್ಪ ಶವ ನಗತಾನೆ ಇತ್ತು………. ಬದುಕಿದ್ದಾಗಲೆ ಯಾವ ಮಾತು ಮನಸಮುಟ್ಟಲೆ ಇಲ್ಲ, ತಟ್ಟಲೆ ಇಲ್ಲಈಗೆಲ್ಲಿ ಮುಟ್ಟುವವು? ಯಾರಮನಸ್ಸ ತಟ್ಟುವವು…………. ಕಲಹ,ಕದನ,ರೋದನ,ಸಿಟ್ಟುಎಲ್ಲವ ಎಲ್ಲರೂ ಶವದ ಮುಂದೆಹೊರ ಹಾಕುವವರೆ ಬಿಕ್ಕಿ ಬಿಕ್ಕಿಅದಾವುದಕ್ಕೋ ಅಳುವರೆಲ್ಲ………….. ಅದ ಕೇಳೋಕೆ ಯಾರಿಗೂ ಪುರಸೊತ್ತಿಲ್ಲಯಾಕಂದ್ರ ಅಲ್ಲಿದ್ದವರೆಲ್ಲ ಹೇಳತಿದ್ರಲ್ಲಲಗೂಣ ಹೆಣ ಎತ್ತರಲ್ಲ, ಇವರೆಲ್ಲ ಅತ್ತರೆಊರ ಜನ ನೋಡಿ ಅಯ್ಯೋ ಪಾಪ ಅಂದರಲ್ಲ….. ಪಾಪ! ಅವರಿಗೇನ ಗೊತ್ತು, ಮಕ್ಕಳ ಸ್ವಾರ್ಥದುರಾಸೆ ಅಪ್ಪನಿಗಷ್ಟೆ ಗೊತ್ತಿತ್ತಲ್ಲಆತನ ಶವ ನಕ್ಕಿದ್ದು ಅವರಾರಿಗೂ ಗೊತ್ತೆಆಗಲೆ ಇಲ್ಲ ……… ಅಂತು-ಇಂತು ಅಪ್ಪನ ಅಂತಿಮಯಾತ್ರೆಮುಗಸಿದ್ರಲ್ಲ. ಕಲ್ಪನಾ ಎಸ್ ಪಾಟೀಲ

ಕಲ್ಪನಾ ಎಸ್ ಪಾಟೀಲ ಅವರ ಕವಿತೆ “ಅಪ್ಪನ ಶವ ನಕ್ಕಿತಲ್ಲ.!” Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಸಾವಿಲ್ಲದ ಶರಣರು ಮಾಲಿಕೆ “ತ್ರಿವಿಧ ದಾಸೋಹ ಮೂರ್ತಿ ಶಿವಯೋಗ ಸಾಧಕ ಶ್ರೀ ಮೃತ್ಯುಂಜಯ ಸ್ವಾಮಿಗಳು” ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ

ಶರಣ ಸಂಗಾತಿ ಸಾವಿಲ್ಲದ ಶರಣರು ಮಾಲಿಕೆ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ “ತ್ರಿವಿಧ ದಾಸೋಹ ಮೂರ್ತಿ ಶಿವಯೋಗ ಸಾಧಕ ಶ್ರೀ ಮೃತ್ಯುಂಜಯ ಸ್ವಾಮಿಗಳು” ಬಸವೋತ್ತರ ಕಾಲದ ಶರಣರು ಮತ್ತು ಶಿವಯೋಗ ಸಾಧಕರಲ್ಲಿ ಪರಮ ಪೂಜ್ಯ ಶ್ರೀ ಅಥಣಿ ಶ್ರೀ ಮುರುಗೇಂದ್ರ ಶಿವಯೋಗಿಗಳ ಕಾರ್ಯ ಅವಿಸ್ಮರಣೀಯ.ಇವರ ಕರ ಸಂಜಾತ ಹಾಗೂ ಅವರ ಪಡಿನೆರಳಿನಂತೆ ಬದುಕಿ ಬಸವ ಜಯಂತಿ ಆಚರಣೆ ಆರಂಭಿಸಿದ ಧೀಮಂತ ಶಿವಯೋಗಿ ಶ್ರೀ ಮೃತ್ಯುಂಜಯ ಸ್ವಾಮಿಗಳು. ಕಾಶಿ ಬಿಟ್ಟು ಅಥಣಿಗೆ ಬಂದ ಬಾಲಕ ಶ್ರೀ ಮೃತ್ಯುಂಜಯ ಸ್ವಾಮಿಗಳು. ಅವತ್ತಿನ ಶ್ರೇಷ್ಠ ಲಿಂಗಾಯತ ಧರ್ಮದ ಹಿರಿಯ ಸ್ವಾಮಿಗಳು ನಾಯಕನೂರಿನ ಕಾಶಿನಾಥ ಶಾಸ್ತ್ರಿಗಳು ಅವರಿಗೆ ಭೇಟಿ ಮಾಡಿ ತಾವು ಕಾಶಿಗೆ ಹೋಗ ಬೇಕೆನ್ನುವ ಪ್ರಬಲ ಇಚ್ಛೆಯನ್ನು ಮೃತ್ಯುಂಜಯ ಸ್ವಾಮಿಗಳು ವ್ಯಕ್ತ ಪಡಿಸುತ್ತ ಕಾಶಿಗೆ ಹೋಗುವ ತಯಾರಿ ಬಗ್ಗೆ ಕಾಶಿನಾಥ ಶಾಸ್ತ್ರಿಗಳನ್ನು ಕೇಳಿದರು. ಆಗ ಶ್ರೀ ಕಾಶಿನಾಥ  ಶಾಸ್ತ್ರಿಗಳು ದೂರದ ಊರಿಗೆ ಹೋಗಿ ತಿಳಿಯದ ಸಂಸ್ಕೃತ ಭಾಷೆ ಕಲಿಯುವಕ್ಕಿಂತ ಅಥಣಿಯ ಶ್ರೀ ಮುರುಗೇಂದ್ರ ಶಿವಯೋಗಿಗಳ ಹತ್ತಿರ ವಚನ ಸಾಹಿತ್ಯ ಮತ್ತು ಶಿವಯೋಗ ಸಾಧನೆ ಮಾಡು ಎಂದು ಸಲಹೆ ನೀಡಿದರಂತೆ.  ಅವರ ಸಲಹೆ ಮತ್ತು ವಿಚಾರದಂತೆ ಶ್ರೀ ಮೃತ್ಯುಂಜಯ ಸ್ವಾಮಿಗಳು ನೇರವಾಗಿ ಅಥಣಿಗೆ ಬಂದು ತಮ್ಮ ಅಧ್ಯಯನ ವಿದ್ಯಾಭ್ಯಾಸದ ಇಚ್ಛೆಯನ್ನು ವ್ಯಕ್ತ ಪಡಿಸಿದರು. ಆಗ ಅಥಣಿ ಶ್ರೀ ಗಳು ಇವರನ್ನು ಪರೀಕ್ಷಿಸಲೆಂದು ಬಾಲಕನತ್ತ ಹೆಚ್ಚು ಗಮನ ನೀಡದೆ ಸುಮ್ಮನಾದರು.  ಏಕೋ ಬೇಸರಗೊಂಡ ಬಾಲಕ ಶ್ರೀ ಮೃತ್ಯುಂಜಯ ಸ್ವಾಮಿಗಳು ಅಲ್ಲಿರುವ ಮಠದ ಸೇವಕರನ್ನು ವಿಚಾರಿಸುತ್ತಾ, ಯಾವ ಕೆಲಸ ಮಾಡಿದರೆ ಅಥಣಿ ಶ್ರೀ ಮುರುಗೇಂದ್ರ ಶಿವಯೋಗಿಗಳ ಪ್ರೀತಿಗೆ ಪಾತ್ರರಾಗುತ್ತೇವೆ ಎಂದು ಕೇಳಿದರು. ಆಗ ಮಠದ ಸ್ಥಳೀಯರು ಶಿವಯೋಗಿಗಳಿಗೆ ಬೆಳಿಗ್ಗೆ ಐದಕ್ಕೆದ್ದು ಮಠದ ಅಂಗಳ ಕಸ ಹೊಡೆದು ಬರುವ ಭಕ್ತರಿಗೆ ಬಿಸಿ ನೀರು ಕಾಯಿಸುವುದು ಅವರಿಗೆ ಪ್ರೀತಿಯ ಕೆಲಸ. ನೀನು ಬೆಳಿಗ್ಗೆ ನಾಲ್ಕಕ್ಕೆ ಎದ್ದು ಈ ಕೆಲಸ ಮಾಡಿದರೆ, ನಿನ್ನನ್ನು ಶಿವಯೋಗಿಗಳು ಶಿಷ್ಯನನ್ನಾಗಿ ಸ್ವೀಕರಿಸುವರು ಎಂದು ಸಲಹೆ ನೀಡಿದರಂತೆ.  ಇದರಿಂದ ಪುಳುಕಿತನಾದ ಶ್ರೀ ಮೃತ್ಯುಂಜಯ ಸ್ವಾಮಿಗಳು ಬೆಳಿಗ್ಗೆ ನಾಲ್ಕಕ್ಕೆ ಎದ್ದು ಮಠದ ಕಸ ಹೊಡೆದು ಬರುವ ಭಕ್ತರಿಗೆ ಬಿಸಿ ನೀರು ಕಾಯಿಸಿ ಮತ್ತೆ ತಮ್ಮ ಕೋಣೆಗೆ ಹೋಗಿ ಮಲಗಿದರು. ಬೆಳಿಗ್ಗೆ ಎಂದಿನಂತೆ ಎದ್ದು ಮಠದ ಕಸ ಹೊಡೆಯಲು ಪೂಜ್ಯ ಶ್ರೀ ಮುರುಗೇಂದ್ರ ಶಿವಯೋಗಿಗಳು ಇದ್ದಾಗ ಮಠವು ಸಂಪೂರ್ಣ ಸ್ವಚ್ಛವಾಗಿತ್ತು. ಹಿತ್ತಲದಲ್ಲಿ ನೀರು ಕಾಯಿಸಲು ಹೋದಾಗ  ಅಲ್ಲಿ ಹಂಡೆಯಲ್ಲಿ ನೀರು ಬೆಂಕಿಯಾಗಿದ್ದವು.  ಯಾರೋ ಈ ಕಾರ್ಯ ಮಾಡಿರ ಬಹುದೆಂದು ಶಿವಯೋಗಿಗಳು ಅಂದು ತಾವು ಕಾಯಕ ಮಾಡದ ಕಾರಣ ಎರಡೂ ಹೊತ್ತು  ಪ್ರಸಾದ ಸೇವಿಸದೆ ಮಲಗುತ್ತಾರೆ. ಮತ್ತೆ ಬೆಳಿಗ್ಗೆ ಶ್ರೀ ಮೃತ್ಯುಂಜಯ ಸ್ವಾಮಿಗಳು ತಮ್ಮ ಬೆಳಗಿನ ಜಾವದ ಮಠದ ಕಸ ಹೊಡೆದು ಬರುವ ಭಕ್ತರಿಗೆ ಬಿಸಿ ನೀರು ಕಾಯಿಸುವ ಕಾರ್ಯ ಮುಂದುವರೆಸುತ್ತಾರೆ. ಮತ್ತೆ ಎಂದಿನಂತೆ ಅಥಣಿ ಶ್ರೀ ಮುರುಗೇಂದ್ರ ಶಿವಯೋಗಿಗಳು ನಿರಾಸೆಯಾಗುತ್ತಾರೆ. ಮತ್ತೆ ಪ್ರಸಾದ ಸೇವಿಸದೆ ಮಠದ ಇತರ ಕಾರ್ಯ ಮಾಡುತ್ತಾ ಇಷ್ಟ ಲಿಂಗ ಪೂಜೆ ಸಲ್ಲಿಸಿ ಮಲಗುತ್ತಾರೆ.  ಅಥಣಿಯ ಶ್ರೀ ಮುರುಗೇಂದ್ರ ಶಿವಯೋಗಿಗಳ ಉಪವಾಸದ  ಕೆಲಸ ಮಠದ ಯಾರಿಗೂ ಗೊತ್ತಾಗುವುದಿಲ್ಲ. ಒಂದು ದಿನ ಅಥಣಿ ಶ್ರೀ ಮುರುಗೇಂದ್ರ ಶಿವಯೋಗಿಗಳು ಈ ಕೆಲಸ ಮಾಡುತ್ತಾರೆ ಎಂದು ನೋಡ ಬೇಕೆಂದು ರಾತ್ರಿಯಿಡಿ ಎಚ್ಚರವಿದ್ದು  ಯಾರು ಈ ಕಾರ್ಯವನ್ನು ಮಾಡುತ್ತಾರೆ ಎಂದು ನೋಡುತ್ತಾ ಕುಳಿತು ಕೊಳ್ಳುತ್ತಾರೆ. ಬೆಳಿಗ್ಗೆ ಬಾಲಕ ಮತ್ತೆ ಮಠದ ಕಸವ ಹೊಡೆಯಲು ಮುಂದಾದಾಗ ಅಥಣಿಯ ಶ್ರೀ ಮುರುಗೇಂದ್ರ ಶಿವಯೋಗಿಗಳು ಬಾಲಕನ ಕೈಯನ್ನು ಗಟ್ಟಿಯಾಗಿ ಹಿಡಿದು ಏಕೆ ಹೀಗೆ ಅಪರಾತ್ರಿಯಲ್ಲಿ ನೀನು ಕಸವನ್ನು ಹೊಡೆಯುತ್ತಿ ಎಂದು ಗದರಿಸಿದಾಗ ಬಾಲಕ ಭಯ ಪಟ್ಟು ಜೋರಾಗಿ ಅಳತೊಡಗಿದನು. ಆಗ ಅಥಣಿ ಶ್ರೀ ಮುರುಗೇಂದ್ರ ಶಿವಯೋಗಿಗಳು ಬಾಲಕ ಶ್ರೀ ಮೃತ್ಯುಂಜಯ ಸ್ವಾಮಿಗಳನ್ನು ಅಪ್ಪಿ ಮುದ್ದಾಡಿ ಅವರಿಗೆ ಲಿಂಗ ದೀಕ್ಷೆ ನೀಡಿ ಅಪ್ಪಟ ಬಸವ ತತ್ವ ಅಧ್ಯಯನ ಮಾಡಲು ಅವಕಾಶ ಮಾಡಿ ಕೊಡುವುದಲ್ಲದೆ. ಧಾರವಾಡದ ಡಬಗಳ್ಳಿ ಮಠದ ಉಸ್ತುವಾರಿ ನೋಡಿಕೊಳ್ಳಲು ಹೇಳುತ್ತಾರೆ. ಮುರುಘಾ ಪರಂಪರೆಯ ಶ್ರೇಷ್ಠ ಶಿವಯೋಗ ಸಾಧಕರನ್ನಾಗಿ ಮಾಡಿ ಧಾರವಾಡ ಮುಳುಗುಂದ ಮುಂತಾದ ಅನೇಕ ಮಠಗಳಲ್ಲಿ ಪೂಜ್ಯರಾದ ಶ್ರೀ ಮೃತ್ಯುಂಜಯ ಸ್ವಾಮಿಗಳು ತಮ್ಮ ಗುರು ಲಿಂಗ ಜಂಗಮ ಸೇವೆ ಸಲ್ಲಿಸಿದ ಅಪ್ರತಿಮ ಶರಣ ಸಂಸ್ಕೃತಿ ಪ್ರಚಾರಕರಾಗಿ ಪ್ರತಿಯೊಬ್ಬರಿಗೂ ಆದರಣೀಯರಾಗಿದ್ದಾರೆ.  ಧಾರವಾಡದ ಶ್ರೀ ಮುರುಘಾ ಮಠದ ಶ್ರೀ ಮೃತ್ಯುಂಜಯ ಸ್ವಾಮಿಗಳವರು (ಮೃತ್ಯುಂಜಯ ಅಪ್ಪಗಳು) ಕರ್ನಾಟಕದ ಶರಣ ಪರಂಪರೆಯ ಉಜ್ವಲ ಚೇತನಗಳಲ್ಲೊಬ್ಬರು. ಅವರ ಜೀವನ ಚರಿತ್ರೆಯ ಅರಿತುಕೊಳ್ಳುವುದು ನಮ್ಮ ಪುಣ್ಯದ ಕೆಲಸ. 1. *ಜನನ ಮತ್ತು ಬಾಲ್ಯ* ಜನನ: ಇವರು 1888ರ ಏಪ್ರಿಲ್ 9 ರಂದು ಹುಬ್ಬಳ್ಳಿ ತಾಲೂಕಿನ ಇಂಗಳಹಳ್ಳಿ ಗ್ರಾಮದಲ್ಲಿ ಜನಿಸಿದರು. ತಂದೆ-ತಾಯಿ: ಇವರ ತಂದೆ ಕಂತಯ್ಯ ಸ್ವಾಮಿ ಮತ್ತು ತಾಯಿ ಚೆನ್ನವೀರಮ್ಮ. ಬಾಲ್ಯ: ಇವರ ಪೂರ್ವಾಶ್ರಮದ ಹೆಸರು ಮೃತ್ಯುಂಜಯ. ಬಾಲ್ಯದಲ್ಲೇ ಸಂಗೀತ ಮತ್ತು ಆಧ್ಯಾತ್ಮಿಕತೆಯತ್ತ ವಿಶೇಷ ಒಲವು ಹೊಂದಿದ್ದರು.  2. *ಶಿಕ್ಷಣ ಮತ್ತು ಸನ್ಯಾಸ* ಪ್ರಾಥಮಿಕ ಶಿಕ್ಷಣದ ನಂತರ, ಇವರು ಗದಗದ ತೋಂಟದಾರ್ಯ ಮಠದಲ್ಲಿ ಸಂಸ್ಕೃತ ಮತ್ತು ಕನ್ನಡ ಸಾಹಿತ್ಯವನ್ನು ಅಭ್ಯಾಸ ಮಾಡಿದರು. ಅಥಣಿಯ ಶ್ರೀ ಮುರುಘೇಂದ್ರ ಶಿವಯೋಗಿಗಳ ಪ್ರಭಾವಕ್ಕೆ ಒಳಗಾದ ಇವರು, ಅವರಿಂದ ಲಿಂಗದೀಕ್ಷೆ ಮತ್ತು ಸನ್ಯಾಸ ಸ್ವೀಕರಿಸಿದರು.  3. ಧಾರವಾಡದ ಮುರುಘಾ ಮಠಕ್ಕೆ ಆಗಮನ (1916) ಮೃತ್ಯುಂಜಯ ಸ್ವಾಮಿಗಳು 1916ರಲ್ಲಿ ಧಾರವಾಡದ ಮುರುಘಾ ಮಠಕ್ಕೆ ಬಂದಾಗ, ಮಠವು ಕೇವಲ ಒಂದು ಸಣ್ಣ ಕೊಠಡಿಯಂತಿದ್ದು, ಸುತ್ತಲೂ ಮುಳ್ಳಿನ ಕಂಟಿಗಳಿಂದ ಕೂಡಿತ್ತು. ತಮ್ಮ ಸಂಕಲ್ಪಶಕ್ತಿಯಿಂದ ಪಾಳುಬಿದ್ದಿದ್ದ ಮಠವನ್ನು ಇಂದು ನಾವು ನೋಡುತ್ತಿರುವ ಭವ್ಯ ದಾಸೋಹ ಕೇಂದ್ರವಾಗಿ ಪರಿವರ್ತಿಸಿದರು.  4. ಪ್ರಮುಖ ಕಾರ್ಯಗಳು ಮತ್ತು ಸಾಧನೆಗಳು ತ್ರಿವಿಧ ದಾಸೋಹ: ಅನ್ನ, ಜ್ಞಾನ ಮತ್ತು ಅಧ್ಯಾತ್ಮ – ಈ ಮೂರೂ ದಾಸೋಹಗಳನ್ನು ಮಠದಲ್ಲಿ ನಿರಂತರವಾಗಿ ನಡೆಸಿಕೊಂಡು ಬಂದರು. ಉಚಿತ ಪ್ರಸಾದ ನಿಲಯ (1917): ಬಡ ವಿದ್ಯಾರ್ಥಿಗಳಿಗಾಗಿ 1917ರಲ್ಲಿ ಉಚಿತ ಪ್ರಸಾದ ನಿಲಯವನ್ನು ಸ್ಥಾಪಿಸಿದರು. ಇಂದು ಈ ನಿಲಯಕ್ಕೆ 100 ವರ್ಷಗಳ ಇತಿಹಾಸವಿದ್ದು, ಸಾವಿರಾರು ಬಡ ಮಕ್ಕಳು ಇಲ್ಲಿ ಕಲಿತು ಉನ್ನತ ಹುದ್ದೆಗಳಲ್ಲಿದ್ದಾರೆ. 63 ಪುರಾತನರ ವಸತಿ ನಿಲಯ: ಶಿವಶರಣರ ನೆನಪಿಗಾಗಿ 63 ಕೊಠಡಿಗಳ ವಸತಿ ನಿಲಯವನ್ನು ನಿರ್ಮಿಸಿ, ವಿದ್ಯಾರ್ಥಿಗಳಿಗೆ ಆಶ್ರಯ ನೀಡಿದರು. ಅಖಿಲ ಭಾರತ ಶಿವಾನುಭವ ಸಂಸ್ಥೆ: ಶರಣ ತತ್ವಗಳ ಪ್ರಸಾರಕ್ಕಾಗಿ ಈ ಸಂಸ್ಥೆಯನ್ನು ಸ್ಥಾಪಿಸಿ, ನಾಡಿನಾದ್ಯಂತ ಧಾರ್ಮಿಕ ಜಾಗೃತಿ ಮೂಡಿಸಿದರು.  5. ವ್ಯಕ್ತಿತ್ವ ಅತ್ಯಂತ ಸರಳ ಸಜ್ಜನಿಕೆಯ ವ್ಯಕ್ತಿತ್ವದ ಮೃತ್ಯುಂಜಯ ಅಪ್ಪಗಳು, ಯಾರೇ ಮಠಕ್ಕೆ ಬಂದರೂ ಪ್ರಸಾದ ಮಾಡದೆ ಕಳುಹಿಸುತ್ತಿರಲಿಲ್ಲ. ಇವರು ಕೇವಲ ಧಾರ್ಮಿಕ ಗುರುವಾಗಿರದೆ, ಶಿಕ್ಷಣ ತಜ್ಞರಾಗಿ ಮತ್ತು ಸಮಾಜ ಸುಧಾರಕರಾಗಿ ನಾಡಿನ ಜನರ ಮನಸ್ಸಿನಲ್ಲಿ ನೆಲೆಸಿದ್ದಾರೆ.  ಬಯಲಲ್ಲಿ ಬಯಲಾದರು  1916ರಲ್ಲಿ ಧಾರವಾಡದ ಮುರುಘಾ ಮಠಕ್ಕೆ ಆಗಮಿಸಿದ ಅವರು, ಸುಮಾರು 48 ವರ್ಷಗಳ ಕಾಲ ಮಠದ ಪೀಠಾಧ್ಯಕ್ಷರಾಗಿ ಸೇವೆ ಸಲ್ಲಿಸಿ, ಅನ್ನ ಮತ್ತು ಜ್ಞಾನ ದಾಸೋಹದ ಮೂಲಕ ಮಠವನ್ನು ನಾಡಿನ ಪ್ರಮುಖ ಧಾರ್ಮಿಕ ಮತ್ತು ಶೈಕ್ಷಣಿಕ ಕೇಂದ್ರವನ್ನಾಗಿ ರೂಪಿಸಿದರು.  ಧಾರವಾಡದ ಮುರುಘಾ ಮಠದ ಕೀರ್ತಿಶೇಷರಾದ ಶ್ರೀ ಮೃತ್ಯುಂಜಯ ಸ್ವಾಮಿಗಳು (ಮೃತ್ಯುಂಜಯ ಅಪ್ಪಗಳು) 1964ರ ಜೂನ್ 16 ರಂದು ಲಿಂಗೈಕ್ಯರಾದರು. ಡಾ ಡಿ ಸಿ ಪಾವಟೆ ಅವರು ಕರ್ನಾಟಕ ವಿಶ್ವ ವಿದ್ಯಾಲಯ ಸ್ಥಾಪಿಸಿ ಜ್ಞಾನ ದಾಸೋಹ ಮಾಡಿದ್ದಾರೆ. ಅವರಿಗೆ ಪೂರಕವಾಗಿ ಶ್ರೀ ಮೃತ್ಯುಂಜಯ ಸ್ವಾಮಿಗಳು ಅನ್ನ ದಾಸೋಹ ನೀಡಿ ಬಡ ವಿದ್ಯಾರ್ಥಿಗಳಿಗೆ ದಾರಿದೀಪವಾದರು. ಬಡ ಮಕ್ಕಳ ಶೈಕ್ಷಣಿಕ ಮತ್ತು ಆರ್ಥಿಕ ಸಂಕಷ್ಟ ನಿವಾರಿಸಿ ಉಚಿತ ಪ್ರಸಾದ ನಿಲಯವನ್ನು ಸ್ಥಾಪಿಸಿ ಅವರ ಉಜ್ವಲ ಭವಿಷ್ಯದ ರೂವಾರಿಯಾದರು. ಇವರ ನಂತರ ಪೀಠವನ್ನಲಂಕರಿಸಿದ ಶ್ರೀ ಮಹಾಂತ ಅಪ್ಪಗಳು ಮೃತ್ಯುಂಜಯ ಅಪ್ಪಗಳ ಹಾದಿಯಲ್ಲೇ ನಡೆದು ಮಠವನ್ನು ಮತ್ತಷ್ಟು ಅಭಿವೃದ್ಧಿಪಡಿಸಿದರು __________________________ ಡಾಶಶಿಕಾಂತ ಪಟ್ಟಣ ರಾಮದುರ್ಗ

ಸಾವಿಲ್ಲದ ಶರಣರು ಮಾಲಿಕೆ “ತ್ರಿವಿಧ ದಾಸೋಹ ಮೂರ್ತಿ ಶಿವಯೋಗ ಸಾಧಕ ಶ್ರೀ ಮೃತ್ಯುಂಜಯ ಸ್ವಾಮಿಗಳು” ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ Read Post »

ನಿಮ್ಮೊಂದಿಗೆ

ಶಾಲಿನಿ ಕೆಮ್ಮಣ್ಣು ಅವರ ಕವಿತೆ “ಬಹುಮುಖ”

ಕಾವ್ಯ ಸಂಗಾತಿ ಶಾಲಿನಿ ಕೆಮ್ಮಣ್ಣು “ಬಹುಮುಖ” ಯಾವುದು ನಿಜ ಸುಖ ಎಲ್ಲಿದೆ ನಾಕನೀನೆಯ ಹೇಳು ನನ್ನ ಸಖ ದರ್ಪಣದಿಂದ ಕಾಣದು ಮೂರ್ಖದರ್ಪದ ಅಹಮ್ಮಿನ ಕೋರೆಮುಖತೊಡಲುಬೇಕು ದಿನವೂ ಬಹುಮುಖನಾನು ನೀನು ಕೊನೆಯಾಗುವ ತನಕ ಯಾವುದು ನಿಜ ಸುಖ ಎಲ್ಲಿದೆ ನಾಕನೀನೆಯ ಹೇಳು ನನ್ನ ಸಖ ದಿನಗಳೆದಂತೆ ಬರಿದಾಗುವ ದೇಹಇಲ್ಲದ ಬಯಸುವ ಮನುಜನ ಮೋಹಎಂದಿಗೂ ತೀರದ ಸ್ವಾರ್ಥದ ದಾಹಜಗದಲಿ ನಿಲ್ಲದ ದುಗುಡದ ವಾಹ ಯಾವುದು ನಿಜ ಸುಖ ಎಲ್ಲಿದೆ ನಾಕನೀನೆಯ ಹೇಳು ನನ್ನ ಸಖ ಮೋಸದ ಬಲೆಯಲಿ ಚಿನ್ನದ ಮೀನುಪರಿಶ್ರಮಕಿಲ್ಲಿ  ಸಿಗುವುದೆ ಜೇನುಮರಗಳ ಕಡಿದು ಬರಿದಾಗಿದೆ ಕಾನುಕಡಲಿನ ಮೊರೆತಕೆ ಬಾಗಿದೆ ಬಾನು ಯಾವುದು ನಿಜ ಸುಖ ಎಲ್ಲಿದೆ ನಾಕನೀನೆಯ ಹೇಳು ನನ್ನ ಸಖ ನನ್ನವರು ಪರರು ನಡುವೆ ನಾ ಯಾರುಅರಿಯದೆ ಸಾಗಿದೆ ಜನಪದ ತೇರುಅಂಕಿಯ ಅಂಕುಶದಿ ಬಡಿದಾಡುವ ಜನರುಮಾನವ ಮರೆತು ಯುದ್ಧವ ಸಾರುತಲಿಹರು ಯಾವುದು ನಿಜ ಸುಖ ಎಲ್ಲಿದೆ ನಾಕನೀನೆಯ ಹೇಳು ನನ್ನ ಸಖ ಶಾಲಿನಿ ಕೆಮ್ಮಣ್ಣು

ಶಾಲಿನಿ ಕೆಮ್ಮಣ್ಣು ಅವರ ಕವಿತೆ “ಬಹುಮುಖ” Read Post »

ನಿಮ್ಮೊಂದಿಗೆ

ಪ್ರಶಾಂತ್ ಬೆಳತೂರು ಅವರ ಕವಿತೆ “ನೀವು..ಮತ್ತೂ… ಈ..ಪ್ರೇಮ”

ಕಾವ್ಯ ಸಂಗಾತಿ ಪ್ರಶಾಂತ್ ಬೆಳತೂರು “ನೀವು..ಮತ್ತೂ… ಈ..ಪ್ರೇಮ” ಈ ಪ್ರೇಮವೆಂಬುದುಮಹಾಕವಿಯೊಬ್ಬ ಬರೆದಅನವಶ್ಯಕವಿವರಣೆಗಳನ್ನೊಳಗೊಂಡ ಮಹಾಕಾದಂಬರಿಯಂತೆ ರಸಹೀನವಾದುದಲ್ಲ..! ಅದು..!ಎಲ್ಲೋ..ದೂರದಲ್ಲಿ..!ಅಜ್ಞಾತವಾಗಿ ಕೂತಅನಾಮಿಕನೊಬ್ಬನ ಎದೆಯಲ್ಲಿತಣ್ಣಗೆ ಹುಟ್ಟಿಕೊಂಡಬಲು ಸೂಕ್ಷ್ಮ ಮತ್ತು ತೀವ್ರ ಮೊನಚುಳ್ಳಆತ್ಮಸಂವೇದನೆಯಗಂಭೀರ ದನಿಯ ಹಿನ್ನೆಲೆಯಲ್ಲಿಹೃದಯದಲ್ಲೊಂದುಸಣ್ಣಗೆ ಕಂಪನ ಉಂಟು ಮಾಡಬಲ್ಲಎರಡೇ ಎರಡು ಸಾಲಿನಬಂಡಾಯದ ಬೆಂಕಿಯಂತಹಕಾವ್ಯ ರೂಪಕ..! ಒಮ್ಮೆಲೇ ಸುಡುವುದಿಲ್ಲನಿಮ್ಮನ್ನು ಅದುನಿಧಾನವಾಗಿ ಹೆಜ್ಜೆಯೂರುತ್ತದೆಸಮ್ಮೋಹನಗೊಳಿಸುತ್ತದೆ..!ಎಷ್ಟೇ ಎಚ್ಚರಿಕೆ ವಹಿಸಿದರೂಕ್ಷಣಾರ್ಧದಲ್ಲಿ ಕಣ್ಮುಂದಿನಹಾದಿಯನ್ನು ಮರೆಸಿ ಬಿಡುತ್ತದೆ..! ಸರಿಯಾದಒಂದೇ ಒಂದು ವಿಳಾಸವಿಲ್ಲಅದರ ತೆಕ್ಕೆಯೊಳಗೆಗೂಡು ಮರೆತ ಹಕ್ಕಿಯಂತೆಬಯಲ ತುಂಬಾಎಲ್ಲೆಲ್ಲೂ ಹಾರಿ ವಿಹರಿಸುತ್ತಾಆನಂದದಲ್ಲಿತೇಲಿಸುತ್ತದೆನೀವು ಕಾಣದಿರುವಹೊಸ ಭ್ರಮಾ ಲೋಕಗಳಲ್ಲಿಮಿಂಚಿನ ಸಂಚಲನ ಸೃಷ್ಟಿಸಿಕಣ್ಣನ್ನು ಕುರುಡಾಗಿಸುತ್ತದೆ..! ಅಚ್ಚರಿಯೇನಿಸುವುದಿಲ್ಲಯಾರೊಬ್ಬರಿಗೂಎದೆಗೂಡಿನಲ್ಲಿನೂರಾರು ಕನಸುಗಳಿಗೆಮೊಟ್ಟೆಯಿಟ್ಟು ಮರಿ ಮಾಡುವಾಗಆದರೆಎಷ್ಟು ಕಾಲಹೀಗೆ ಕನಸಿನಲ್ಲಿ ಹಾರುವಿರಿ?ಹಾರುವ ರೆಕ್ಕೆಗಂಟಿಕೊಂಡೇಬೆನ್ನೇರಿರುತ್ತದೆಒಂದು ಸಣ್ಣ ಆತಂಕಅಥವಾಬಿರುಕು ಮೂಡಿಸುವನಿಮ್ಮದೇ ನೆರಳುಗಳ ಛಾಯೆ..! ತತ್ ಕ್ಷಣಪ್ರೇಮದ ಕನಸುಗಳಿಂದನಿಜಕ್ಕೂ ಎಚ್ಚರವಾಗುತ್ತೀರಿ..!ಆರಂಭದಲ್ಲಿಕಣ್ಣೀರು ಹಾಕುತ್ತಾಕೂಗಾಡುತ್ತೀರಿವಾಗ್ವಾದಗಳಲ್ಲಿಗುದ್ದಾಡುತ್ತಾ ಜಿದ್ದಿಗೆ ಬಿದ್ದಂತೆವರ್ತಿಸುತ್ತೀರಿದನಿಯೆತ್ತುವುದನ್ನು ಕಲಿಯುತ್ತೀರಿಪ್ರತಿಭಟಿಸುತ್ತೀರಿ..! ಆದರೆ ವಿಪರ್ಯಾಸ..!ಕಾಲ ಸರಿದಂತೆಲ್ಲಾತಣ್ಣಾಗುಗುತ್ತೀರಿತುಂಬಾ ಆಳದಲ್ಲಿ ಬಿದ್ದಿರುತ್ತೀರಿಮೌನವಾಗುತ್ತೀರಿಕೊನೆಗೊಮ್ಮೆಗಂಭೀರವಾಗಿಏಕಾಂತದ ಸಂಜೆಗಳಲ್ಲಿಸುಖಾಸುಮ್ಮನೆತಾವೊಬ್ಬರೇ ತಮ್ಮಷ್ಟಕ್ಕೆ ತಾವೇಕಳೆದು ಹೋಗುತ್ತೀರಿ…! ಧಾವಂತವಿಲ್ಲನಿಮಗೆ ಬದುಕಿನಲ್ಲಿಗುನುಗುತ್ತದೆ ಕಿವಿಗಳಿಗೆಶೋಕದಲ್ಲೂ ನೆಮ್ಮದಿ ತರಬಲ್ಲಮಹಮ್ಮದ್ ರಫಿಕಿಶೋರ್ ಕುಮಾರ್ , ಮುಖೇಶ್ ಮನ್ನಾಡೇಯಯಾವೊದಾದರೊಂದುಹಳೆಯ ಹಾಡು..! ಕೂತುಬಿಡುತ್ತೀರಿಪ್ರೇಮದ ಹರಿವಿನಲ್ಲಿಮುಗುಳ್ನಗುವ ಬುಧ್ಧನಂತೆಆಗ ನಿಜಕ್ಕೂ ಕೇಳಿಸುತ್ತದೆಪ್ರೇಮದ ಒಳದನಿಪಿಸುಗುಡುತ್ತೀರಿನೀವು ಕೂಡ ಅದರೊಟ್ಟಿಗೆಬೆಂಕಿಯನ್ನು ಬೆಳಕಾಗಿಸಿಕೊಂಡಕಲಾತ್ಮಕಕವಿತೆಯೊಂದರ ಹಾಗೆ…! ಪ್ರಶಾಂತ್ ಬೆಳತೂರು

ಪ್ರಶಾಂತ್ ಬೆಳತೂರು ಅವರ ಕವಿತೆ “ನೀವು..ಮತ್ತೂ… ಈ..ಪ್ರೇಮ” Read Post »

ಕಾವ್ಯಯಾನ, ಗಝಲ್

ವಾಣಿ ಯಡಹಳ್ಳಿಮಠ ಅವರ ಗಜಲ್

ಕಾವ್ಯ ಸಂಗಾತಿ ವಾಣಿ ಯಡಹಳ್ಳಿಮಠ ಗಜಲ್ ಮನದ ಮಗು ಹಠ ಮಾಡುವ ಮುನ್ನ ಬಂದುಬಿಡುನೊಂದು ಬಿಕ್ಕಿ ಅಳುವ ಮುನ್ನ ಬಂದುಬಿಡು ಇರಲಿ ಮೈಲುಗಟ್ಟಲೇ ಅಂತರ  ಇಬ್ಬರ ನಡುವೆ ನೆನಪು ನರಳುತ ಮಾಸುವ ಮುನ್ನ ಬಂದುಬಿಡು  ನನಗೂ ಇದೆ ಹಗಲು ದುಡಿಯುವ ಜವಾಬ್ದಾರಿಇರುಳ ಕನಸು ಸಾಯುವ ಮುನ್ನ ಬಂದುಬಿಡು ಜೊತೆ ಬಾಳುವ ಅವಕಾಶವೇ ಇಲ್ಲ ನಮಗೆಪ್ರೀತಿಯ ಎದೆಬಡಿತ ನಿಲ್ಲುವ ಮುನ್ನ ಬಂದುಬಿಡು ವಾಣಿಯ ಈ ಜನ್ಮವೆನೋ ಕಳೆಯುವುದು ವಿರಹದಿಮರುಜನ್ಮದಿ ಮತ್ಯಾರೋ ಕೈ ಹಿಡಿವ ಮುನ್ನ ಬಂದುಬಿಡು ವಾಣಿ ಯಡಹಳ್ಳಿಮಠ

ವಾಣಿ ಯಡಹಳ್ಳಿಮಠ ಅವರ ಗಜಲ್ Read Post »

ಕಾವ್ಯಯಾನ

ಡಾ. ಪುಷ್ಪಾವತಿ ಶಲವದಿಮಠ ಅವರ ಕವಿತೆ “ಅರಿವಿನ ದಾರಿ ಹುಡುಕುತ”

ಕಾವ್ಯ ಸಂಗಾತಿ ಡಾ. ಪುಷ್ಪಾವತಿ ಶಲವದಿಮಠ “ಅರಿವಿನ ದಾರಿ ಹುಡುಕುತ” ಇದ್ದು ಬಿಡು ಸುಮ್ಮನೆ  ಬುದ್ಧನಂತೆ ಸುಮ್ಮನಿದ್ದುಬಿಡುಹೊರಟು ಬಿಡು ಈ ಜಗದ ಜಂಜಡ ಕಳೆದುಕೊಂಡು ಬಿಡು  ಹೊರಟು ಬಿಡು ನೀನುನಡೆವ ದಾರಿ ದೊಡ್ಡದಿದೆಕಲ್ಲು ಮುಳ್ಳು ಚುಚ್ಚಬಹುದುರಕ್ತ ಒಸರಬಹುದುಮುಲಾಮು ಹಚ್ಚಿಕೋಪಟ್ಟಿ ಕಟ್ಟಿಕೋನಡೆಯುವುದು  ಮಾತ್ರ ಬಿಡಬೇಡಎಲ್ಲೂ ನಿಲ್ಲಬೇಡಾ ನಡೆಯುತ್ತಲೇ ಇದ್ದುಬಿಡು ನಿನ್ನ ಅಂಜಿಸುವವರುಹೀಯಾಳಿಸುವವರುಅನುಮಾನಿಸುವವರುಹಿಂದೆಳೆಯುವವರುತೆಗಳುವವರುಬೈಯುವವರುನೂರೆಂಟು ಮಂದಿ ಇರಬಹುದುಬಿಟ್ಟು ಬಿಡು ಮಂದಿಯ ಸಹವಾಸಮನದ ಮಾತು ಕೇಳು ಸಾಕು ನಿನ್ನ ಕಷ್ಟ ಕಣ್ಣಿರಿಗೂ ಕರುಗುವರಿಲ್ಲಈ ದುರ್ಬಲತೆಯ ನೀಗಲೇ ಬೇಕು ನೀನುನಿನಗೆ ನೀನು ಆಸರೆಯಾಗಬೇಕುಕಾಲ ನಿಲ್ಲುವುದಿಲ್ಲನೀನು ನಿಂತರೆ ಹೇಗೆ?!ತಳ್ಳಿಕೊಂಡೆ ಹೋಗಿಬಿಡುವುದು ಕಾಲಜೊತೆಗೆ ನಿಲ್ಲುವರಿಲ್ಲನಿಲ್ಲಬೇಡ  ನೀನು ಓಡು ಓಡುಯಾರಿಗೂ ಕಾಯಬೇಡಯಾರೂ ಕಾದಿಲ್ಲ ನಿನಗಾಗಿ ಒಂಟಿ ಪಯಣವೆಂದು ಬೇಸರಸದಿರುದೂರದ  ದಡ ಸೇರಲುಒಂಟಿಯಾಗಿಯೇ ನಡೆಯಬೇಕುನಿನ್ನ ಪಾಪ ಪುಣ್ಯಗಳ ಮೂಟೆ ಹೆಗಲಿಗೆರಿಸಿಕೊಂಡುನಡೆದು ಬಿಡು ಮೋಹ ಮಮಕಾರಗಳ ತೊರೆದುಬುದ್ಧ ಬಸವ ನಡೆಯಲಿಲ್ಲವೇಅವರ ದಾರಿಯೇನು ಸಲೀಸಾಗಿತ್ತೆ?! ಬೆಳಕಿನ ಅರಮನೆಗೆನೂರಾರು ದಾರಿಗಳಿವೆಯಂತೆನಡೆದು ಬಿಡು ಬೆಳಕಿನೆಡೆಗೆಸವಿ ಸಗ್ಗ ಪಡೆಯಲುಇಹದ ಕಗ್ಗ ಬಿಡಿಸಿಕೊಳ್ಳಬೇಕುಬಿಡಿಸಿಕೊಂಡು ಬಿಡುಅಲ್ಲಮ ನಡೆದ ದಾರಿಅಕ್ಕ ನಡೆದ ದಾರಿನಿನ್ನೆದುರಿಗಿದೆಆ ದಾರಿಗುಂಟ ನಡೆದು ಬಿಡುಸಿಗಬಹುದು ನಿನಗೆಅರಿವಿನ ಮನೆಬೆಳಕಿನ ಅರಮನೆ ತೊರೆದು ಬಿಡು ಸಾವಿರ ಚಿಂತೆಇದ್ದು ಬಿಡು ಬುದ್ಧನಂತೆಹೊರಟು ಬಿಡು ಹೊರಟು ಬಿಡುಬಿಟ್ಟು ಅವರಿವರ ಚಿಂತೆಅರಿವ ದಾರಿ ಹುಡುಕುತಕನಕ ಶರೀಫರು ಮೀಟಿದತಂಬೂರಿ ಮೀಟತ…..  ಡಾ. ಪುಷ್ಪಾವತಿ ಶಲವದಿಮಠ

ಡಾ. ಪುಷ್ಪಾವತಿ ಶಲವದಿಮಠ ಅವರ ಕವಿತೆ “ಅರಿವಿನ ದಾರಿ ಹುಡುಕುತ” Read Post »

ಇತರೆ

ಮಾಧ್ಯಮಗಳು ಭಾಷೆಯ ಆರೋಗ್ಯ ಕಾಪಾಡುವ ವೈದ್ಯರಾಗಬೇಕು -ಜಯಲಕ್ಷ್ಮಿ ಮಡಿಕೇರಿ.

ಭಾಷಾ ಸಂಗಾತಿ ಜಯಲಕ್ಷ್ಮಿ ಮಡಿಕೇರಿ. ಮಾಧ್ಯಮಗಳು ಭಾಷೆಯ ಆರೋಗ್ಯ ಕಾಪಾಡುವ ವೈದ್ಯರಾಗಬೇಕು ಮನುಷ್ಯನ ಅತಿ ದೊಡ್ಡ ಸಂಶೋಧನೆಗಳಲ್ಲಿ ಭಾಷೆ ಕೂಡಾ ಒಂದು. ಹಾಗಾಗಿ ಭಾಷೆಯನ್ನು ಬೆಳಕಿಗೆ ಹೋಲಿಸಲಾಗಿದೆ, ಅದಕ್ಕೆ ಬೆಳಕಿನ ಪಟ್ಟವನ್ನು ನೀಡಲಾಗಿದೆ. ಜಗತ್ತಿನಲ್ಲಿ ಸಹಸ್ರಾರು ಭಾಷೆಗಳಿದ್ದರೂ ಕನ್ನಡಕ್ಕೆ ಒಂದು ವಿಶೇಷ ಸ್ಥಾನಮಾನವಿದೆ. ಕವಿರತ್ನತ್ರಯರಿಂದ ಬೆಳೆದು ಬಂದು ಅದ್ವಿತೀಯ ಸಾಹಿತ್ಯ ರಚನೆಗಳನ್ನು ಸಾರಸ್ಕೃತ ಲೋಕಕ್ಕೆ ನೀಡಿದ, ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಗಳಿಸಿದ ಹೆಗ್ಗಳಿಕೆ ನಮ್ಮ ಭಾಷೆಗಿದೆ.  ಇದು ಮಾಧ್ಯಮಗಳ ಯುಗ.  ಪುಲಿಗೆರೆಯ ಸೋಮನಾಥ ಹೇಳುವಂತೆ ” ಕೆಲವಂ ಬಲ್ಲವರಿಂದ ಕಲ್ತು, ಕೆಲವಂ ಶಾಸ್ತ್ರಂಗಳಂ ಕೇಳುತಂ  ಕೆಲವಂ ಮಾಳ್ಪವರಿಂದ ಕೆಲವಂ  ಸುಜ್ಞಾನದಿಂದ,   ಅರಿತುಕೊಂಡು ಬೆಳೆಯಲು  ಯಾರಿಗೂ ಸಮಯವಾಗಲಿ ವ್ಯವಧಾನವಾಗಲಿ ಇಲ್ಲ.  ಮುದ್ರಣ ಮಾಧ್ಯಮದಲ್ಲಿ ಪ್ರಧಾನ ಪಾತ್ರವಹಿಸಿರುವ ಪುಸ್ತಕಗಳ ಓದು ಬದಿಗೆ ಸರಿದ ಕಾಲವಿದು. ಸ್ವಚ್ಛ ಶುದ್ಧ ಭಾಷೆಯ ಬೆಳವಣಿಗೆಗೆ  ಪೂರಕವಾಗಿರುವ ರೇಡಿಯೋ, ಸೃಜನಶೀಲ ಬರಹಗಳು, ಪತ್ರಿಕೆಗಳು ನಿಯತಕಾಲಿಕೆಗಳು ಇವೆಲ್ಲವುಗಳನ್ನು ಮೀರಿ ಟಿವಿ ಸಿನಿಮಾ ಇಂಟರ್ನೆಟ್ ವಾಟ್ಸಪ್ ಫೇಸ್ಬುಕ್ ಇತ್ಯಾದಿಗಳಿಗೆ ಜನ ಮುಗಿ ಬೀಳುವ ಕಾಲಘಟ್ಟವಿದು.  ಒಂದೆಡೆ ಇಂಗ್ಲಿಷ್ ಭಾಷೆಯನ್ನು ಬಳಸಿ ಮಾತನಾಡುವುದೇ ಒಂದು ಹೆಗ್ಗಳಿಕೆ  ಎಂಬ ಭ್ರಮೆಯಲ್ಲಿರುವ ಕನ್ನಡಿಗರು, ಇನ್ನೊಂದೆಡೆ ತಾವು ಬಳಸಿದ್ದೇ ಭಾಷೆ ಎನ್ನುವಂತೆ ಕನ್ನಡ ಭಾಷೆ ಗೌರವಕ್ಕೆ ಚ್ಯುತಿ  ತರುವಂತೆ ಪ್ರತಿ ದಿನ  ತಪ್ಪುಗಳನ್ನೇ ತೋರುವ ಹೇಳುವ ಕೆಲ ದೃಶ್ಯ ಮಾಧ್ಯಮಗಳು. ಇವುಗಳಿಂದ ಕನ್ನಡ ಭಾಷೆ ತನ್ನ  ಅಂದ ಚಂದವನ್ನು, ಮೂಲ ಸ್ವರೂಪವನ್ನು ಕಳೆದುಕೊಳ್ಳುತ್ತಿದ್ದು  ನಮ್ಮ ಭಾಷಾ ಸಹಜತೆಯನ್ನು ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ದೃಶ್ಯ ಮಾಧ್ಯಮಗಳಲ್ಲಿ ಅತಿ ದೊಡ್ಡದಾಗಿ ಬಿತ್ತರ ವಾಗುವ ತಪ್ಪು ತಪ್ಪಾದ ಪದಗಳನ್ನು ಚಿತ್ತಬಿತ್ತಿಯಲ್ಲಿ ಮುದ್ರಿಸಿಕೊಳ್ಳುವ ಮಕ್ಕಳು ಅದುವೇ ಸರಿಯಾದ ಕನ್ನಡ ಎಂದು ತಿಳಿದು ಅದನ್ನೇ ಕಲಿಯುತ್ತಾರೆ. ಭಾಷಾ ಬೆಳವಣಿಗೆಯಲ್ಲಿ ಅತಿ ಮುಖ್ಯ ಪಾತ್ರ ವಹಿಸ ತಕ್ಕಂತಹ ಪಾ.ವೆಂ. ಆಚಾರ್ಯರ   ‘ಪದಾರ್ಥ ಚಿಂತಾಮಣಿ ‘ , ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ” ಇಗೋ ಕನ್ನಡ “, ಕೊಕ್ಕಡ ವೆಂಕಟರಮಣ ಭಟ್ಟರ ” ಸರಿಗನ್ನಡ ಸರಿಕನ್ನಡ ” ಶುದ್ಧ ಕನ್ನಡದ ಬಗ್ಗೆ ನಮಗೆ ಅರಿವಾಗುತ್ತದೆ ಮತ್ತು ಮುದ್ರಣ ಮಾಧ್ಯಮ ಭಾಷ ಕ್ಷೇತ್ರದಲ್ಲಿ ಮೂಡಿಸಿದ ಜಾಗೃತಿಯ ಬಗ್ಗೆ ಹೆಮ್ಮೆ ಎನಿಸುತ್ತದೆ. ಹಿರಿಯರು ಪುಸ್ತಕಗಳನ್ನು ಓದುವ ಸಂಸ್ಕೃತಿಯನ್ನು ರೂಢಿಸಿಕೊಳ್ಳುವ ಮೂಲಕ ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸಬೇಕಿದೆ. ಅಧಿಕಾರ ಸ್ಥಾನದಲ್ಲಿ ಇರುವವರು, ಶಿಕ್ಷಕರು, ಪೋಷಕರು ಮಾಧ್ಯಮ ಬಂಧುಗಳು ಕನ್ನಡ ಭಾಷಾ ಶುದ್ಧಿಯನ್ನು ಕಾಪಾಡಿಕೊಂಡು ಬರಬೇಕಿದೆ ಹೊಂಬೆಳಕು ಮಾಸಿಕ ಕಾರ್ಯಕ್ರಮದ ಮೂಲಕ ಹಲವಾರು ತತ್ವ ಚಿಂತನೆಗಳು ಮಠದಲ್ಲಿ ನಡೆಯುತ್ತಿದ್ದು ಹಲವಾರು ಪುಸ್ತಕಗಳು ಕೂಡ ಈ ವೇದಿಕೆಯಲ್ಲಿ ಲೋಕಾರ್ಪಣೆಗೊಳ್ಳುತ್ತಿರುವ ಬಗ್ಗೆ ಶ್ರೀ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಅವರು ಸಂತಸ ವ್ಯಕ್ತಪಡಿಸಿದರು. ತಮ್ಮ ಅಮೃತ ಹಸ್ತದಿಂದ  ಕೆ ಜಯಲಕ್ಷ್ಮಿ ಅವರ  ‘ ನಡೆದಷ್ಟೂ ದಾರಿ ‘ ಕೃತಿಯನ್ನು ಲೋಕಾರ್ಪಣೆಗೊಳಿಸಿ ಶುಭ ಕೋರಿದರಲ್ಲದೆ ಶರಣ ಶರಣೆಯರ ಜೀವನ ಆದರ್ಶಗಳ ಬಗ್ಗೆ ಹೇಳುತ್ತಾ  ವಚನಗಳ ಸಾರ್ವಕಾಲಿಕ ಮೌಲ್ಯಗಳ  ಬಗ್ಗೆ ವಿವರಿಸಿದರು. ನೆರೆದಿರುವ ಭಕ್ತ ವೃಂದಕ್ಕೆ ಆಶೀರ್ವಚನ ನೀಡಿದರು .  ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿದ ಕೊಡಗು ಜಾನಪದ ಪರಿಷತ್ತಿನ ಅಧ್ಯಕ್ಷರು ಹಾಗೂ ಶಕ್ತಿ ದಿನಪತ್ರಿಕೆಯ  ಸಲಹಾ ಸಂಪಾದಕರಾದ ಬಿಜಿ ಅನಂತಶಯನ ರವರು ಸಾಮಾಜಿಕ ಧಾರ್ಮಿಕ ಕ್ಷೇತ್ರಕ್ಕೆ ಅರಮೇರಿ ಮಠದ ಪರಮಪೂಜ್ಯ ಗುರುಗಳು ನೀಡುತ್ತಾ ಬರುತ್ತಿರುವ ಸಮಾಜಮುಖಿ ಕಾರ್ಯಕ್ರಮಗಳನ್ನು ಶ್ಲಾಘಿಸಿದರು. ಶಿಕ್ಷಕಿ ಸಾಹಿತಿ ಸುನಿತಾ ಕುಶಾಲನಗರ ಅವರು ಜಯಲಕ್ಷ್ಮಿ ಕೆ ಯವರ” ನಡೆದಷ್ಟೂ ದಾರಿ  ” ತೃತೀಯ ಬಗ್ಗೆ ಮಾತನಾಡುತ್ತಾ ಓದುವ ಕುತೂಹಲವನ್ನು ಕೆರಳಿಸುವ , ವಿಚಾರಧಾರೆಗಳ ಸ್ಪಷ್ಟ ನಿರೂಪಣೆಯ ಪುಸ್ತಕವಿದು. ಲೇಖಕಿ ಬಳಸಿದ ಭಾಷೆ ಸರಳ ಸ್ವಚ್ಛ ಸುಂದರ ಎಂದರು.ಉದಾತ್ತ  ವ್ಯಕ್ತಿಗಳ ಜೀವನ ಚರಿತ್ರೆಯನ್ನು ವಿವರಿಸಿತ್ತ  ವಾಸ್ತವದಲ್ಲಿ ಬದುಕುವ ಚಿಂತನೆ ಉತ್ತಮ ಎಂದರು. ಪೊನ್ನಂಪೇಟೆ ಸಿ ಐ ಟಿ ಕಾಲೇಜಿನ ಉಪನ್ಯಾಸಕಿ ಸುಶ್ಮಿತಾ ರವರು  ಜಯಲಕ್ಷ್ಮಿ ಅವರ ಕೆಲವು ಲೇಖನಗಳ ಬಗ್ಗೆ ಮಾತನಾಡಿದರು.ಕುಮಾರಿ ಮಿನುಗು  ಪ್ರಾರ್ಥಿಸಿದಳು. ಕಿಗ್ಗಾಲ್ ಹರೀಶ್  ನಿರೂಪಿಸಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಕೇಶವ ಕಾಮತ್, ಮಾಜಿ ಅಧ್ಯಕ್ಷರಾದ ಶ್ರೀ ಲೋಕೇಶ್ ಸಾಗರ್, ಸಾಹಿತಿ ಕಿಗ್ಗಾಲ್ ಗಿರೀಶ್, ಡಾಕ್ಟರ್ ಸತೀಶ್, ಸಮರ್ಥ ಕನ್ನಡಿಗರು ಸಂಸ್ಥೆಯ ಸಂಚಾಲಕಿಯರು, ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಮಾಧ್ಯಮಗಳು ಭಾಷೆಯ ಆರೋಗ್ಯ ಕಾಪಾಡುವ ವೈದ್ಯರಾಗಬೇಕು -ಜಯಲಕ್ಷ್ಮಿ ಮಡಿಕೇರಿ. Read Post »

ಇತರೆ

“ಮಹಾ ಮಾನವತಾವಾದಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್” ವೀಣಾ ಹೇಮಂತ ಗೌಡಪಾಟೀಲ್

ವಿಶೇಷ ಸಂಗಾತಿ ವೀಣಾ ಹೇಮಂತ ಗೌಡಪಾಟೀಲ್ “ಮಹಾ ಮಾನವತಾವಾದಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್” ಮಹಾ ಮಾನವತಾವಾದಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹುಟ್ಟಿದ್ದು ‘ಮಹಾರ್’ ಎಂಬ ಜನಾಂಗದಲ್ಲಿ. ಅತ್ಯಂತ ಹಿಂದುಳಿದ ಆ ಜನಾಂಗದವರನ್ನು ಮೇಲ್ವರ್ಗದ ಜನರು ಪಶುವಿಗಿಂತ ಕೀಳಾಗಿ ನೋಡುವುದನ್ನು, ವ್ಯವಹರಿಸುವುದನ್ನು ಕಂಡು ನೊಂದುಕೊಂಡು ವಿದ್ಯೆ ಎಂಬ ಬ್ರಹ್ಮಾಸ್ತ್ರದ ಮೂಲಕ ಜ್ಞಾನವನ್ನು ಸಂಪಾದಿಸಿ ನಮ್ಮ ದೇಶದ ವಿವಿಧ ಧರ್ಮಶಾಸ್ತ್ರಗಳ ಅಧ್ಯಯನವನ್ನು ವಿದೇಶದಲ್ಲಿ ಕೈಗೊಂಡು ಅದರ ಜೊತೆಗೆ ಹಲವಾರು ವಿಷಯಗಳಲ್ಲಿ ಪರಿಣತಿಯನ್ನು ಪಡೆದು ಮರಳಿ ಭಾರತಕ್ಕೆ ಬಂದು ಕಾನೂನು ಮತ್ತು ಸುವ್ಯವಸ್ಥೆಯನ್ನು ನೋಡಿಕೊಳ್ಳುವ ಕಾನೂನು ತಜ್ಞರಾಗಿ ಮುಂದೆ ಭಾರತದ ಸಂವಿಧಾನದ ಕರಡು ಪ್ರತಿಯನ್ನು ಸಿದ್ಧಪಡಿಸಿದವರು….. ಅವರೇ ನಮ್ಮ ನಿಮ್ಮೆಲ್ಲರ ಪ್ರೀತಿಯ ಡಾ. ಬಿ.ಆರ್. ಅಂಬೇಡ್ಕರ್. ಅಸ್ಪೃಶ್ಯರು ಎಂದೇ ಕರೆಯಲ್ಪಡುವ ಮಹಾರ್ ಎಂಬ ಜನಾಂಗದಲ್ಲಿ 14ನೆಯ ಮಗನಾಗಿ ಹುಟ್ಟಿದ ಅಂಬೇಡ್ಕರ್ ಅವರಿಗೆ ಬಾಲ್ಯದಿಂದಲೂ ಸಿಕ್ಕ ಒಳ್ಳೆಯ ಸಂಸ್ಕಾರ ಆತನ ತಂದೆ ತಾಯಿಗಳ ಬಳುವಳಿ. ಮಾರುಕಟ್ಟೆಯ ಮಧ್ಯದಲ್ಲಿಯೇ ಪುಟ್ಟ ಗುಡಿಸಲನ್ನು ಹೊಂದಿದ್ದ ಸದಾ ಗೌಜಿ ಗದ್ದಲಗಳಿಂದ ತುಂಬಿದ್ದ ಕೊಳೆತು ನಾರುವ ಮಾರುಕಟ್ಟೆಯ ಪರಿಸರದಲ್ಲಿ ಬೆಳೆದರೂ ಚಿಕ್ಕಂದಿನಲ್ಲಿಯೇ ಅದ್ಭುತ ಪ್ರತಿಭೆ ತೋರುತ್ತಿದ್ದ ಮಗನನ್ನು ತಂದೆ ಕಷ್ಟಪಟ್ಟು ಓದಿಸುತ್ತಿದ್ದರು. ಮಧ್ಯರಾತ್ರಿವರೆಗೂ ಎಚ್ಚರವಿರುತ್ತಿದ್ದ ತಂದೆ ಬೆಳಗಿನ ಜಾವ ಎರಡು ಗಂಟೆಯ ಸುಮಾರಿಗೆ ಮಗನನ್ನು ಎಬ್ಬಿಸಿ ಓದಲು ಕೂಡಿಸುತ್ತಿದ್ದರು.ಮುಂಜಾನೆಯ ನೀರವ ವಾತಾವರಣದಲ್ಲಿ ಬಾಲಕ ಭೀಮನ ಓದು ಸಾಗುತ್ತಿತ್ತು. ಶಾಲೆಯಲ್ಲಿ ಯಾವುದೇ ಮಕ್ಕಳು ಇವರೊಂದಿಗೆ ಸೇರುತ್ತಿರಲಿಲ್ಲ. ಕುಡಿಯಲು ನೀರನ್ನು ಕೂಡ ಮೇಲಿನಿಂದ ಹಣಿಸುತ್ತಿದ್ದರು. ಭೀಮ ಮತ್ತವನ ಸಹೋದರ ತರಗತಿ ಕೋಣೆಯ ಕಪ್ಪು ಹಲಗೆಯ ಹಿಂಭಾಗದ ಮೂಲೆಯಲ್ಲಿ ಕುಳಿತು ಪಾಠವನ್ನು ಕೇಳುತ್ತಿದ್ದರು. ದೇವಸ್ಥಾನಗಳಲ್ಲಿ ಕೂಡ ಇವರಿಗೆ ಪ್ರವೇಶವಿಲ್ಲ. ಬಾವಿ,ಕೆರೆ ಹಳ್ಳಗಳ ನೀರನ್ನು ಕೂಡ ಇವರ ಜನಾಂಗಕ್ಕೆ ನಿರ್ಬಂಧಿಸಿದ್ದುದು ಭೀಮನಿಗೆ ಯಕ್ಷ ಪ್ರಶ್ನೆಯಂತೆ ತೋರುತ್ತಿತ್ತು. ಈ ಎಲ್ಲಾ ಪ್ರಶ್ನೆಗಳನ್ನು ತಾಯಿಯ ಮುಂದೆ ಒಡ್ಡಿದಾಗ ತಾಯಿ ಇದೆಲ್ಲಕ್ಕೂ ಪರಿಹಾರ ನಿನ್ನ ಓದಿನಲ್ಲಿ ಅಡಗಿದೆ ಎಂದು ಸುಮ್ಮನೆ ಹೇಳಿದ್ದಳಾದರೂ ಅದನ್ನೇ ಗಂಭೀರವಾಗಿ ಪರಿಗಣಿಸಿದ ಭೀಮನು ಉತ್ತಮವಾಗಿ ಓದಿ ಒಳ್ಳೆಯ ಅಂಕಗಳನ್ನು ಪಡೆದನು. ಇಷ್ಟರಲ್ಲಾಗಲೇ ಅವರ ಜನಾಂಗದ ಪದ್ಧತಿಯಂತೆ ಅಂಬೇಡ್ಕರ್ ಅವರ ಬಾಲ್ಯ ವಿವಾಹವನ್ನು ರಮ ಎಂಬ ಹೆಣ್ಣು ಮಗುವಿನೊಂದಿಗೆ ಮಾಡಿ ಮುಗಿಸಿದ್ದರು. ಮುಂದೆ ಕಾಲೇಜಿಗೆ ಸೇರಲು ಆತನಿಗೆ ಸಹಾಯ ಮಾಡಿದ ಶಿಕ್ಷಕರೊಬ್ಬರು ಆತನಿಗೆ ಅಂಬೇಡ್ಕರ್ ಎಂಬ ತಮ್ಮದೇ ಅಡ್ಡನಾಮವನ್ನು ಸೇರಿಸಿದರು. ಪದವಿ ವ್ಯಾಸಂಗದ ನಂತರ ಉನ್ನತ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಹೋಗುವ ಅವಕಾಶ ಮತ್ತು ದೊಡ್ಡ ಮೊತ್ತದ ನೌಕರಿಯ ಅವಕಾಶ ಎರಡೂ ಒಟ್ಟೊಟ್ಟಿಗೆ ಬಂದಾಗ ಅಂದಿನ ಬರೋಡದ ಮಹಾರಾಜರಾದ ಗಾಯಕವಾಡರ ಸಹಾಯದಿಂದ ಅಂಬೇಡ್ಕರ್ ಅವರು ವಿದೇಶ ವ್ಯಾಸಂಗಕ್ಕೆ ಹೊರಟರು. ಅಸ್ಪೃಶ್ಯತೆಯ ಗಂಧ ಗಾಳಿಯನ್ನು ಅರಿಯದ ವಿದೇಶಿ ಜನರ ಮಧ್ಯ ಒಳ್ಳೆಯ ಆಹಾರ, ವಿಚಾರ ಮತ್ತು ಶಿಕ್ಷಣದ ಸಮ್ಮಿಶ್ರ ಪಾಕವನ್ನು ಸವಿದ ಅಂಬೇಡ್ಕರ್ ದೈಹಿಕವಾಗಿ ಮತ್ತು ಮಾನಸಿಕವಾಗಿ ಅತ್ಯಂತ ಪಕ್ವವಾದರು. ವಾಚನಾಲಯದಲ್ಲಿ ದೊರೆತ ಹಲವಾರು ಪುಸ್ತಕಗಳನ್ನು ಓದಿ ಜ್ಞಾನದ ಭಂಡಾರವನ್ನು ಹೆಚ್ಚಿಸಿಕೊಂಡ ಅಂಬೇಡ್ಕರ್ ಅವರು ಎಲ್ಲಾ ಧರ್ಮಗಳ ಸಾರವನ್ನು ಅರೆದು ಕುಡಿದರು. ಅಸ್ಪೃಶ್ಯರು ಸಂಸ್ಕೃತವನ್ನು ಕೇಳಿದರೆ ಅವರ ಕಿವಿಗಳಿಗೆ ಎಣ್ಣೆ ಕಾಸಿ ಹಾಕಬೇಕೆಂಬ ಭಾರತ ದೇಶದ ಮೇಲ್ವರ್ಗದ ಜನರ ಮಧ್ಯದಲ್ಲಿ ಬೆಳೆದ ಅಂಬೇಡ್ಕರ್ ವಿದೇಶದಲ್ಲಿ ನಮ್ಮ ಧರ್ಮ ಗ್ರಂಥಗಳನ್ನು ಓದಿದರು. ಚಿಕ್ಕಂದಿನಲ್ಲಿ ಮನಸ್ಸನ್ನು ಕದಡಿದ ಭಾರತೀಯ ಸಾಮಾಜಿಕ ವ್ಯವಸ್ಥೆಯ ಅಸಮಾನತೆ ಎಂಬ ಅಮಾನವೀಯ ಕೃತ್ಯದ ಆಘಾತವನ್ನು ಅನುಭವಿಸಿದ್ದ ಅಂಬೇಡ್ಕರ್ ಭಾರತೀಯ ಮತ್ತು ಪಾಶ್ಚಾತ್ಯ ಸಂಸ್ಕೃತಿಯ ಮಧ್ಯದ ತುಲನಾತ್ಮಕ ಅಧ್ಯಯನವನ್ನು ಕೈಗೊಂಡರು. ಅಸ್ಪೃಶ್ಯತೆಯ, ಅನಾದರದ ಗಂಧ ಗಾಳಿ ಇಲ್ಲದ ವಿದೇಶಿ ಪರಿಸರ ಅಂಬೇಡ್ಕರ್ ಅವರ ಮನಸ್ಸನ್ನು ಅರಳಿಸಿತು. ವಿದೇಶದಲ್ಲಿ ಅಧ್ಯಯನ ಪೂರೈಸಿ ಭಾರತಕ್ಕೆ ಮರಳಿದ ಅಂಬೇಡ್ಕರ್ ಅವರು ಸಾರ್ವಜನಿಕ ಜೀವನಕ್ಕೆ ಪ್ರವೇಶಿಸಿದರು. ಅಲ್ಲೂ ಕೂಡ ಅವರಿಗೆ ಅವಮಾನ ಕಟ್ಟಿಟ್ಟ ಬುತ್ತಿ ಎಂದು ಅರಿವಾದಾಗ ಎಲ್ಲ ಹಿಂದುಳಿದ ವರ್ಗಗಳ ಜನರ ಧ್ವನಿಯಾಗಿ ತಾನು ಕಾರ್ಯನಿರ್ವಹಿಸಿದರೆ ಮಾತ್ರ ಅವರ ಸಮಸ್ಯೆಗಳ ಪರಿಹಾರ ಸಾಧ್ಯ ಎಂದು ಅರಿತ ಅಂಬೇಡ್ಕರ್ ರಾಜಕೀಯ ಪ್ರವೇಶಿಸಿದರು.ಅದೃಷ್ಟವಶಾತ್ ಮಹಾತ್ಮ ಗಾಂಧೀಜಿಯವರ ಸಂಪರ್ಕಕ್ಕೆ ಬಂದ ಅಂಬೇಡ್ಕರ್ ಅವರು ರಾಷ್ಟ್ರೀಯ ಕಾಂಗ್ರೆಸ್ಸಿನ ಸದಸ್ಯರಾದರು. ಶ್ರೇಷ್ಠ ಮಾನವತಾವಾದಿ ಮಹಾತ್ಮ ಗಾಂಧೀಜಿಯವರ ಒಡನಾಟ, ಚರ್ಚೆ, ಭಾರತದ ಸ್ವಾತಂತ್ರ್ಯದ ಕುರಿತಾದ ಅವರ ನಿಲುವು, ಗ್ರಾಮೀಣ ಭಾರತದ ಅವರ ಕನಸು, ಗುಡಿ ಕೈಗಾರಿಕೆಗಳ ಮೂಲಕ ಗ್ರಾಮಗಳ ಸಶಕ್ತಿಕರಣ, ನೈತಿಕ ಹೊಣೆಗಾರಿಕೆ ಎಲ್ಲವನ್ನು ನೋಡಿದ ಅಂಬೇಡ್ಕರ್ ಭಾರತ ದೇಶವು ಸ್ವಾತಂತ್ರ್ಪ ಪಡೆಯುವ ಸಮಯದಲ್ಲಿ ಶೋಷಿತರ ಪರವಾಗಿ ಧ್ವನಿ ಎತ್ತಿದರು. ಸಂಘಟನೆ ಅಂಬೇಡ್ಕರ್ ಅವರ ದೈತ್ಯಶಕ್ತಿಯಾಗಿತ್ತು. ಇನ್ನೇನು ಭಾರತದ ಸ್ವಾತಂತ್ರ್ಯದ ಕ್ಷಣಗಣನೆ ಆರಂಭವಾಗಿದೆ ಎಂಬ ಹೊತ್ತಿನಲ್ಲಿ 1945-46 ರ ಸುಮಾರಿಗೆ ಅಂದಿನ ಕಾನೂನು ಮಂತ್ರಿಯಾಗಿ ಭಾರತ ದೇಶದ ಸಂವಿಧಾನವನ್ನು ರಚಿಸುವ ಜವಾಬ್ದಾರಿಯನ್ನು ಅಂಬೇಡ್ಕರ್ ಅವರ ಜ್ಞಾನ ಮತ್ತು ವೈಯುಕ್ತಿಕ ಸಾಮರ್ಥ್ಯದ ಆಧಾರದ ಮೇಲೆ ನೀಡಲಾಯಿತು. ಪುರುಷರಷ್ಟೇ ಹೆಣ್ಣು ಮಕ್ಕಳಿಗೂ ಎಲ್ಲಾ ರೀತಿಯ ಸಮಾನ ಹಕ್ಕುಗಳನ್ನು ನಮ್ಮ ಸಂವಿಧಾನದಲ್ಲಿ ನೀಡಿದ್ದಾರೆ ಡಾ. ಅಂಬೇಡ್ಕರ್. ಬಹುಶಃ ಜಗತ್ತಿನ ಯಾವುದೇ ದೇಶ ಮಾಡಿರದ ಮಹತ್ಸಾದನೆ ಇದು. ಮನುವಾದಿಗಳ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಗೌರವ ನೀಡುತ್ತಿದ್ದರು ನಿಜ ಆದರೆ ಸ್ವಾತಂತ್ರ್ಯ ಮತ್ತು ಸಮಾನತೆ ಎಂಬುದು ಕನಸಿನ ಮಾತಾಗಿದ್ದ ಕಾಲದಲ್ಲಿ ಹೆಣ್ಣು ಮಕ್ಕಳ ಶಿಕ್ಷಣ, ಉದ್ಯೋಗ, ಮಾನಸಿಕ ಮತ್ತು ದೈಹಿಕ ಆರೋಗ್ಯ ದೃಷ್ಟಿಯಿಂದ ರಚಿಸಲಾದ ಸಾಂವಿಧಾನಿಕ ಕಾನೂನು, ಮತದಾನದ ಹಕ್ಕು ಮತ್ತು ಸುವ್ಯವಸ್ಥೆಯ ನಿಯಮಗಳು ಹೆಣ್ಣು ಮಕ್ಕಳನ್ನು ಇನ್ನಿಲ್ಲದ ನೆಮ್ಮದಿಯಿಂದ ಜೀವಿಸುವಂತೆ ಮಾಡಿವೆ. ಮಾರ್ಕ್ಸ್ ವಾದವನ್ನು ಅಧ್ಯಯನ ಮಾಡಿದ್ದ ಅಂಬೇಡ್ಕರ್ ಅವರು ಭಾರತದ ಸಂವಿಧಾನದ ಮೂಲಕ ಬಂಡವಾಳಶಾಹಿಗಳ ದಬ್ಬಾಳಿಕೆಯನ್ನು ವಿರೋಧಿಸಿ ಎಲ್ಲಾ ವರ್ಗದ ಕಾರ್ಮಿಕರಿಗೂ ಕೆಲಸ, ಒಳ್ಳೆಯ ಸಂಬಳ, ಮೂಲಭೂತ ಅವಶ್ಯಕತೆಗಳ ಪೂರೈಕೆ, ಔದ್ಯೋಗಿಕ ಭದ್ರತೆ ಆರೋಗ್ಯ ವಿಮೆ ಮುಂತಾದವುಗಳನ್ನು ದೊರಕಿಸಿಕೊಟ್ಟರು. ಕಾರ್ಮಿಕ ಸಂಘಟನೆಗಳಿಗೆ ಶಕ್ತಿ ತುಂಬಿದ ಅಂಬೇಡ್ಕರ್ ಅವರು ಬಂಡವಾಳಶಾಹಿಗಳ ಮೇಲೆ ನಿಯಂತ್ರಣವನ್ನು ಹೇರುವ ಮೂಲಕ ಕಾರ್ಮಿಕ ವರ್ಗಕ್ಕೆ ಚೈತನ್ಯ ತುಂಬಿದರು. ವಾರದ ರಜಾ ದಿನಗಳನ್ನು ಮತ್ತು ದಿನದ ಮೂರನೇ ಒಂದು ಅವಧಿಯ ಕಾರ್ಯನಿರ್ವಹಣೆಯನ್ನು ಕೂಡ ನಿಶ್ಚಯಿಸಿದವರು ಡಾಕ್ಟರ್ ಅಂಬೇಡ್ಕರ್. ಹಿಂದುಳಿದ ವರ್ಗಗಳು ದೀನ ದಲಿತರಿಗೆ ವಿಶೇಷ ಸವಲತ್ತುಗಳನ್ನು ನೀಡುವ ಮತ್ತು ಶೈಕ್ಷಣಿಕ ಕ್ರಾಂತಿಯ ಮೂಲಕ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ಕರೆತರಲು ಅಡಿಪಾಯ ಹಾಕಿದವರು ಅಂಬೇಡ್ಕರ್. ಸಮಾನ ನಾಗರಿಕ ಹಕ್ಕುಗಳು ಮತ್ತು ಕಾನೂನಾತ್ಮಕ ಹೋರಾಟ ಮಾಡಲು ಎಲ್ಲ ದುರ್ಬಲ ವರ್ಗದವರಿಗೆ ಅವಕಾಶ ಕಲ್ಪಿಸಿದರು. ಹಿಂದುಳಿದ ವರ್ಗದವರಿಗಾಗಿ ವಿಶೇಷ ಮೀಸಲಾತಿಗಳನ್ನು, ಅನುದಾನಗಳನ್ನು ನೀಡಿದ ಅವರು ಮುಂದಿನ ಕೆಲವು ವರ್ಷಗಳು ಮಾತ್ರ ಇದನ್ನು ಅನುಷ್ಠಾನದಲ್ಲಿ ಇಡಬೇಕು ಎಂದು ಸೂಚಿಸಿದ್ದರು ಕೂಡ. ಸನಾತನ ಭಾರತದ ಎಲ್ಲಾ ಅಂಶಗಳನ್ನು ಅಧ್ಯಯನ ಮಾಡಿದ್ದ ಅವರು ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ನೀಡಿದರು. ನಮ್ಮ ಭವ್ಯ ಧಾರ್ಮಿಕ ಪರಂಪರೆಯ ಇತಿಹಾಸಕ್ಕೆ ಯಾವುದೇ ರೀತಿಯ ಕುಂದುತರದಂತೆ ಆದರೆ ಅಸ್ಪೃಶ್ಯತೆ ಅಮಾನವೀಯ ಆಚರಣೆಗಳನ್ನು ನಿಯಂತ್ರಿಸಲು ತಿದ್ದುಪಡಿಗಳನ್ನು ಮಾಡಿದರು. ಬಾಬಾ ಸಾಹೇಬರ ಮತ್ತೊಂದು ಹೆಗ್ಗಳಿಕೆ ಭಾರತೀಯ ಸಮಾಜದ ಮೂಲ ಸ್ವರೂಪಕ್ಕೆ ಎಲ್ಲಿಯೂ ಧಕ್ಕೆ ಬಾರದಂತೆ ಸನಾತನ ಧರ್ಮದ ಮೌಲ್ಯಗಳನ್ನು ಗೌರವಿಸುತ್ತಾ ಕೇವಲ ಅದರಲ್ಲಿ ಇರಬಹುದಾದ ಕೆಟ್ಟ ಅಂಶಗಳನ್ನು ಮಾತ್ರ ಗುರುತಿಸಿ ಅದಕ್ಕೆ ತಿದ್ದುಪಡಿ ತಂದು ಸಾಮಾಜಿಕ ಸಮಾನತೆಯನ್ನು ಉಳಿಸಿದ್ದು. ಭಾರತದ ಏಕತೆ, ವೈವಿಧ್ಯತೆ ಮತ್ತು ಸಮಗ್ರತೆಯ ಬಗ್ಗೆ ಹೆಮ್ಮೆ ಮೂಡುವುದು 73 ವರ್ಷಗಳು ಕಳೆದರೂ ನಮ್ಮ ಸಂವಿಧಾನದ ಮೂಲಸ್ವರೂಪದಲ್ಲಿ ಯಾವುದೇ ಬದಲಾವಣೆ ತರದೆ ಇರುವುದು. ಜಗತ್ತಿನ ಅತ್ಯಂತ ಪ್ರಾಚೀನ ಸಭ್ಯತೆಯಲ್ಲಿ ಸಂವಿಧಾನದ ಮೂಲ ಸ್ವರೂಪ ಯಾವುದೇ ತಿದ್ದುಪಡಿಗೊಳಗಾಗದೆ ಹಾಗೆಯೆ ಉಳಿದಿರುವುದು ಕೇವಲ ಭಾರತದಲ್ಲಿ ಮಾತ್ರ. ಅದಕ್ಕೆ ಕಾರಣ ಅಂಬೇಡ್ಕರ್ ಅವರ ಅಧ್ಯಯನಶೀಲ ಚಿಂತನೆ, ದೂರದೃಷ್ಟಿ ಮತ್ತು ಸರ್ವಧರ್ಮ ಸಮಾನ ದೃಷ್ಟಿ. ಹೀಗಾಗಿಯೇ ಅಂಬೇಡ್ಕರ್ ಎಲ್ಲಾ ಭಾರತೀಯರು ಗೌರವಿಸುವಂತಹ ವ್ಯಕ್ತಿತ್ವ ಹೊಂದಿ ಬಾಬಾ ಸಾಹೇಬ್ ಎಂದು ಕರೆಯಲ್ಪಟ್ಟರು. ಅಂಬೇಡ್ಕರ್ ಕೇವಲ ದಲಿತ, ಹಿಂದುಳಿದ ವರ್ಗದ ನಾಯಕರು ಮಾತ್ರವಲ್ಲ…. ಭವ್ಯ ಭಾರತದ ಭವಿಷ್ಯದ ಪ್ರಜೆಗಳ ನಾಯಕ, ತಂದೆ ತನ್ನ ಮಕ್ಕಳ ಭವ್ಯ ಭವಿಷ್ಯಕ್ಕಾಗಿ ತನ್ನ ಜೀವಿತವನ್ನೇ ತ್ಯಾಗ ಮಾಡುವಂತೆ ಡಾ. ಬಿ.ಆರ್. ಅಂಬೇಡ್ಕರ್ ಅವರು ತಮ್ಮ ಇಡೀ ಜೀವಮಾನವನ್ನು ಭಾರತದ ಹಿಂದುಳಿದ ದುರ್ಬಲ ಅಸಹಾಯಕ ಜನರ ಏಳಿಗೆಗಾಗಿ, ಹೆಣ್ಣು ಮಕ್ಕಳಸಶಕ್ತೀಕರಣಕ್ಕಾಗಿ, ಕಾರ್ಮಿಕರಲ್ಲಿ ಬಲ ತುಂಬಲು ಮುಡಿಪಾಗಿಟ್ಟರು. ಸಂವಿಧಾನದ ಆಶಯಗಳಿಗೆ ಬದ್ಧರಾಗಿ ಭಾರತದ ಹೆಮ್ಮೆಯ ಪ್ರಜೆಗಳಾಗಿ ನಮ್ಮ ಕರ್ತವ್ಯಗಳನ್ನು ನಿಭಾಯಿಸೋಣ. ವೀಣಾಹೇಮಂತ್‌ ಗೌಡ ಪಾಟೀಲ್ ವೀಣಾ ಹೇಮಂತ್ ಗೌಡ ಪಾಟೀಲ್

“ಮಹಾ ಮಾನವತಾವಾದಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್” ವೀಣಾ ಹೇಮಂತ ಗೌಡಪಾಟೀಲ್ Read Post »

You cannot copy content of this page

Scroll to Top