ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸಂಕ್ರಾಂತಿ ಹಬ್ಬಕೆ ಸುಗ್ಗಿಯ ಕಡಲು
ರೈತನ ದುಡಿಮೆಯ ಬೆವರಿನ ಫಸಲು
ಕವಿಯ ಮನಕೆ ಕಾವ್ಯದ ಒಡಲು
ತೋಚಿದ್ದನು ಗೀಚಿ ಗುನುಗುವ ತೆವಲು
ಶಬ್ದಗಳ ಹೆರಿಗೆಗೆ ದಾರಿ ತೋರಿದ ಕವಲು

ಸುಗ್ಗಿಯ ಕಾಲಕೆ ಮದುವಣಿಗಿತ್ತಿಯಾದ ನೆಲವು
ಸೂರ್ಯನ ಕಿರಣಕೆ ನಸುನಕ್ಕ ನಂದನವನದ ಹೊನಲು
ದಿನತುಂಬಿ ಹೊತ್ತಂತೆ ಭೂದೇವಿ ಮಡಿಲು ಹಸಿರನುಟ್ಟು ನಳನಳಿಸುವ ಒಡಲು

ಕಬ್ಬು ಕಡಲೆ ಎಳ್ಳು ಅವರೆ ತೆನೆತುಂಬಿ ಬಳುಕ್ಯಾವ ಸಾಲು ಸಾಲು
ನೇಗಿಲ ಯೋಗಿಗೆ ಭೂತಾಯೆ ಸಗ್ಗದ ಸಿರಿಯ ಹೊನಲು

ಹಕ್ಕಿ ಪಕ್ಷಿಗಳು ಮನ ಬಿಚ್ಚಿ ಹಾಡ್ಯಾವ ನಂದನ ವನದಲಿ
ಬೆಳೆದ ಪೈರುಗಳ ಹೂ ಮೊಗ್ಗು ತುಂಬಿ ತುಳುಕ್ಯಾವ ರಾಶಿರಾಶಿಯಲಿ
ಉತ್ತರಾಯಣದ ರವಿತೇಜನ ಪಥದಲಿ
ಹಸಿರನುಟ್ಟ ಭೂರಮೆಯ ಮಡಿಲಲಿ ನಾಟ್ಯವಾಡಿತು ನವಿಲು

ಭಾವದೊಲುಮೆಯ ಗಾನಕೆ ಕೊಳಲನೂದಿತು ಕೋಗಿಲೆ.
ಹಕ್ಕಿ ಪಕ್ಷಿಗಳ ಗಾನಕೆ
ಕಬ್ಬನೊಳಗಿನ ಸಿಹಿಯಂತೆ
ಎಳ್ಳಿನೊಳಗಿನ ಒಗರಿನಂತೆ
ಬೆಲ್ಲ ದೊಳಗಿನ ರುಚಿಯಂತೆ
ಸುಖ ಶಾಂತಿ ನೆಮ್ಮದಿಯ ಬದುಕಿಗೆ

ನಮ್ಮರಿವು ಉದಯವಾಗಲು
ರವಿತೇಜನ ಹೊಂಗಿರಣ
ಬರೀ ತಿರುಗಲ್ಲ ತಿರುಳಿನ ಬೆಳಕು
ಬದುಕಿಗೆ ನೆಲೆಯೂರಲು ಹೊಂಬೆಳಕು
ಹೊಮ್ಮಿರಲಿ ಮನುಜ ಪಥ.


About The Author

Leave a Reply

You cannot copy content of this page

Scroll to Top