ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆಯಲ್ಲದ ಕವಿತೆಗೆ
ಬಂದಿವೆ ಹೊಸ ಕಾಲು
ಬೆಳ್ಳಗಿರುವುದೆಲ್ಲ ಅಲ್ಲವೇ ಅಲ್ಲ
ನಿಜಕು ಶುದ್ಧ ಹಾಲು

ಭಾವಗಳ ಗೋರಿಗಟ್ಟಿ
ಬರಿದೆ ಕುಣಿಯುತಿದೆ ಶಬ್ದ
ದಣಿಯುತಿದೆ ರಾಗ ರಸ
ಒಲ್ಲದ ಸೋಲನಪ್ಪಿ ಸ್ತಬ್ಧ ನಿಶ್ಶಬ್ದ

ಮಂಚವೇರುತಿದೆ ಮಾತು
ಕಾವ್ಯದೋಣಿಗಿಟ್ಟು ಸಣ್ಣ ತೂತು
ದಾರಿ ತೋರದೆ ಈಜುತಿದೆ
ಕವಿತೆಗಂಟಿದ ಪುಟ್ಟ ಬಾತು

ಏಳುಬೀಳುಗಳ ನಡುವೆಯೇ
ಸಾಗಿದೆ ಪದ್ಯದಿರುವೆ ಸಾಲು
ಕವನಕೆ ಕದವನಿಕ್ಕಿ ಗದ್ಯವೇ
ಸದ್ದುಗೈಯುತಿದೆ ಬಡಿದು ಡೋಲು

ತನ್ನೊಳಗನೇ ತೂರಿದರೂ
ಸುಮ್ಮನಿದೆ ಮುಗ್ಧ ಕಾವ್ಯದಮ್ಮ
ಹೂತುಹೋಗಿರುವ ನಿನ್ನ
ಮೇಲೆತ್ತುವವರಾರು ಹೇಳೆ ಅಮ್ಮ?

ವಸಂತ ಕಾಲದಿ ನಿತ್ಯ
ಕರ್ಣಾನಂದ ಕೋಗಿಲೆಯ ಗಾನ
ಮಳೆಗಾಲದೀ ಸಮಯದಿ
ಕಪ್ಪೆಗಳದೇ ಸಾಮ್ರಾಜ್ಯ ಕೇಳು ಜಾಣ!

———————————

About The Author

1 thought on “ನೀ ಶ್ರೀಶೈಲ ಹುಲ್ಲೂರು ಅವರ ಕವಿತೆ-ಕವಿತೆಯಳಲು”

Leave a Reply

You cannot copy content of this page

Scroll to Top