ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಆಗ್ರಹಾರದ ರಾಯ ಭಟ್ಟರ
ಊರ ಗೌಡ ಪಟೇಲರ
ಶಾನುಬೊಗ ಶೆಟ್ಟಿ ಮನೆಯ
ಮಲವ ತಲೆಯ ಮೇಲೆ ಹೊತ್ತ
ನಮ್ಮ ಹಿರಿಯರು ಮೂಢರು
ಗೊತ್ತು ಗುರಿ ಇಲ್ಲದವರು

ಭೂ ಒಡೆಯರ ಕಾಮದಾಟ
ಶೀಲ ಒತ್ತೆ ಇಟ್ಟು ನಡೆದರು
ನಮ್ಮ ಕೇರಿಯ ಹೆಣ್ಣು ಮಕ್ಕಳು
ದೈವ ಹೆಸರು ಮುತ್ತು ಕಟ್ಟಿ
ಬೆತ್ತಲೆ ನಡೆದರು ಸಾದ್ವಿಗಳು
ಸೂಳೆಯಾಗಿ ಬದುಕುತಿಹರು

ಯಾರದೋ ತೀಟೆ ಕಳ್ಳ ಬಸಿರು
ಬೀದಿ ಭ್ರೂಣ ರೊಧನ
ಕ್ರೂರ ಹಿಂಸೆ ದರ್ಪ ಧೋರಣೆ
ನಲುಗಿ ಹೋಯಿತು ಜೀವನ
ಜಾತಿ ಕೂಪದಿ ಉಸಿರುಗಟ್ಟಿ
ಧ್ವನಿ ಎತ್ತದೆ ಸತ್ತರು

ಶತಮಾನದ ಮೌನ ಮುರಿಯಲಿ
ವರ್ತಮಾನದ ಕ್ರಾಂತಿಯು
ಅಳಿದು ಹೋಗಲಿ ಮೌಢ್ಯ ಭ್ರಾ0ತಿ
ಮತ್ತೆ ಅರಳಲಿ ಶಾಂತಿಯು
ಹುಟ್ಟಿ ಬರಲಿ ಬುದ್ಧ ಬಸವ
ಬಾಪು ಬಾಬಾರ ಪ್ರೀತಿಯು


About The Author

4 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-ಹುಟ್ಟಿ ಬರಲಿ ಬುದ್ಧ ಬಸವ”

  1. ಸಮಾಜದ ಮೂಢ ಕಂದಾಚಾರಗಳ ವ್ಯವಸ್ಥೆಯನ್ನು ನೋವಿನಿಂದ ಅಲ್ಲಗಳೆಯುತ್ತಾ…ಮತ್ತೆ ಹುಟ್ಟಿ ಬರಲಿ ಬುದ್ಧ
    ಬಸವ ಎನ್ನುವ ನಿಮ್ಮ ಸಮಾಜದ ಪ್ರತಿ ಇರುವ ಕಳಕಳಿ ನಿಮ್ಮ ಕವನದಲ್ಲಿ ಎದ್ದು ಕಾಣುತ್ತಿದೆ… ಸರ್

    ಸುಧಾ ಶಿವಾನಂದ

  2. Vishwanath Patil

    ಶ್ರೇಷ್ಠ ಕವಿ ಸಂಶೋಧಕ ಸಾಹಿತಿ ನೀವು.ಬುದ್ಧ ಬಸವ ತತ್ವ ಪ್ರಚಾರ ಮಾಡುತ್ತಿದ್ದಿರಿ

Leave a Reply

You cannot copy content of this page

Scroll to Top