ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಡಲಳಾದ
ಕಾವ್ಯ
ಕಾಡುವ ಗೋಜಿಗೆ,
ನಾ ಸದಾ
ಹಂಬಲದ
ಹರಿಣಿ…

ಧರಣಿಯೊಳಗಿನ
ಭಾವ ದಾಹಕ್ಕೆ
ನನ್ನೊಳಗಿನ
ಪೂಜಾ
ಪದಗಳೇ
ಪರಿಶುದ್ಧ
ಪುಷ್ಕರಣಿ.

ಕರ್ಮ
ಕಾರ್ಪಣ್ಯಗಳ
ಕಾಪಿಟ್ಟು
ಪುಣ್ಯ
ಪವಿತ್ರತೆಗಳ
ಸಾಲುಗಳೇ
ಸಾಕಿನ್ನು…

ಕವಿತೆ ಹುಟ್ಟುವ
ಸಮಯಕ್ಕೆ
ನಾ ಪಡೆಯುವ
ಮರುಹುಟ್ಟ
ಬಣ್ಣಿಸುವ
ಬರವಣಿಗೆ
ಬೇಕಿನ್ನು…

——————————————-

About The Author

2 thoughts on “ರುದ್ರಾಗ್ನಿ ಅವರ ಕಾವ್ಯೋತ್ಸವ”

Leave a Reply

You cannot copy content of this page

Scroll to Top