ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ದೋಣಿಯಲಿ ನಾವಿಬ್ಬರು
ಸುತ್ತ ಕಡಲು
ದೋಣಿಗೀಗ ತೂತು ಬಿದ್ದಿದೆ
ವಿಶ್ವಾಸ ಎಲ್ಲಿಡುವೆ ಗೆಳೆಯ
ಮೋಡ ತುಂಬಿದ ಬಾನಿನತ್ತ
ಯಾಕೆ ನೋಡುತ್ತಿರುವೆ
ಇಳೆಯ ಕರೆಗೆ ಇಳಿದು ಬಿಡುವ
ಮೋಡವ ಎಷ್ಟು ಪ್ರೀತಿಸುವೆ

ಹೆಗಲ ಮೇಲೆ ಕೈಯನಿಟ್ಟು
ಯಾಕೆ ಸಂತೈಸುವೆ
ಸಾವೆಷ್ಟು ಬಾಳುವುದು
ಹೇಳೋ ಗೆಳೆಯ..
ಎರಡು ಕ್ಷಣ
ಅದಕ್ಕೆಷ್ಟು ಬದುಕಬೇಕು
ಒಂದಷ್ಟು ದಿನ

ನಾನು ನನ್ನೊಂದಿಗೆ ಮಾತನಾಡಲೂ
ಸಿಗುತ್ತಿಲ್ಲ …ನನ್ನದೇ
ಸನಿಹವೀಗ ಅಸಹನೀಯ.
ನಮ್ಮವರು ಅಂದರೆ ಯಾರವರು
ಎನ್ನುವುದು ಪ್ರಶ್ನೆ.
ಬಂದು ಹೋಗಿ
ಹಿಂದಿನಿಂದ ನಗುವವರೋ…

ಈ ಆಸೆ ಬಯಕೆಗಳು
ಯಾಕೆ ಹುಟ್ಟುತ್ತವೆ ಮತ್ತು
ಹೇಳದೆ ಸಾಯುತ್ತವೆ?
ನಿನ್ನ ಆಸೆಗಳಿಗೆ ಪುಕ್ಕಟೆ ನೆರಳು ಜಲ
ದೊರೆತಾಗ ಬೆಳೆದು ಹಬ್ಬುತ್ತವೆ
ಹಳ್ಳಿಯಿಂದ ದಿಲ್ಲಿಗೆ
ಎನ್ನುವುದು ನಿಜವಲ್ಲವೇ?

ಸಾಯಲಾರದ ಆಸೆಗಳು
ಅಂಗಲಾಚಿಕೊಂಡರೂ
ನೀರು ಹನಿಸುವ ಕೈಗಳು
ಯಾಕೆ ಮುಂದಾಗುತ್ತಿಲ್ಲ ಗೆಳೆಯ
ಕಡಲ ಮಧ್ಯೆ ಬದುಕಬೇಕೆನ್ನುವ
ಆಸೆಯೊಂದು ಯಾಕೆ
ಬಲಿಯುತ್ತಿದೆ

ಬದುಕು ಬಳ್ಳಿಯಂತೆ ಹಬ್ಬಲೆಂದು
ಬಿಟ್ಟರೆ ಯಾರೋ ಕತ್ತರಿಸಿಬಿಟ್ಟರಲ್ಲೋ

 ಡಾ.ಜಿ.ಪಿ.ಕುಸುಮಾ 

About The Author

Leave a Reply

You cannot copy content of this page

Scroll to Top