ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬರಗಾಲದ ಛಾಯೆ
ಹೊತ್ತಿ ಉರಿಯಲು
ಮಾಂಸವಿಲ್ಲದ ಮೂಳೆಗಳ
ಶರೀರವೇ ಭೂ ಹಂದರ
ಬಾಯಿ ತೆರೆಯುತಿರಲು
ಹಸಿದೊಡಲ ಬತ್ತಿಸಲು
ನಿಸ್ಸೋತು ಕೈಮುಗಿವ
ಜೀವ ಸಂಕುಲಕೆ
ಯಾರು ಹೊಣೆ ಹೇಳು?

ಮನುಜನಲ್ಲಿರದ ಮನುಷ್ಯತ್ವ
ಹೊಂಚು ಹಾಕಿದ ಬದುಕು
ನಡೆವ ಮೂರ್ಖರಿರುವರೆಗೆ
ಲೆಕ್ಕಕ್ಕಿಲ್ಲದ ಬಿಡಾರದಲಿ
ಅನುಭವಿಸುವ ನೋವು
ದುಸ್ಸಾಹಸಕ್ಕೆ ನಿಲ್ಲದ
ಹಸಿದೊಡಲಿಗೆ ಮರಗುತ್ತ
ಕಂಬನಿಯು ಕರಗಿಹುದಿಲ್ಲಿ
ಮೊಡಗಳ ಆಸರೆಗಲ್ಲವೇ?


About The Author

Leave a Reply

You cannot copy content of this page

Scroll to Top