ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಯಾನ

ಸಂಕ್ರಾಂತಿ

ಮಾಜಾನ್ ಮಸ್ಕಿ

ಮಾಜಾನ್ ಮಸ್ಕಿ

ಮರೆಯೋಣ ದು:ಖ ದುಮ್ಮಾನ
ತೆರೆದಿದೆ ಉತ್ತರಾಯಣ
ಭಾಸ್ಕರನ ಹೊಸತನದ ಹೊಂಗಿರಣ
ತರಲಿ ರೈತನ ಬಾಳಿಗೆ ಆಶಾ ಕಿರಣ

ಕಬ್ಬು ಹಿಂಡಿದರು ಸಿಹಿಯ ಬಿಡದು
ನೇಗಿಲ ಯೋಗಿ ತ್ಯಾಗಿ ಆಗಿರುವನು
ನಂಬಿದವರ ಕೈ ಬಿಡಳು ಭೂತಾಯಿ
ಹಸಿರಿನ ಉಸಿರೇ ರೈತನ ಸುಗ್ಗಿಯ ಚೆಲುವು ಸಂಕ್ರಾಂತಿ

ಎಣ್ಣೆ ಮಜ್ಜನದಿ ಕಳೆಯುವುದು ಪೀಡೆ
ಬೋಗಿಯು ತುಂಬಿಸಲಿ ಎಲ್ಲಾರ ಹೊಟ್ಟೆ
ಎಳ್ಳು ಬೆಲ್ಲ ಸವಿದು ನುಡಿಯಲಿ ಸವಿ ನುಡಿ
ವೃದ್ಧಿಸುವುದು ಆರೋಗ್ಯ ಸರ್ವ ಸಮೃದ್ಧಿ

ರೈತನ ಕಣ್ಣೀರು ಒರೆಸಿ
ಹಸಿರನಲಿ ನಲಿಯುವಳು ಭೂದೇವಿ
ಬಾಳ ಕತ್ತಲೆಯನು ಕಳೆದು ಉಲ್ಲಾಸ ಚೇತನ ತರುವುದು
ಮಕರ ಸಂಕ್ರಮಣ ಜ್ಯೋತಿ ಸಂತಸದಲಿ….


About The Author

1 thought on “ಸಂಕ್ರಾಂತಿ”

Leave a Reply

You cannot copy content of this page

Scroll to Top