ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಹನಿ ತಾಕಿದರೆ

ಬಿ.ಶ್ರೀನಿವಾಸ್‍

ತಾಕಿದ್ದರೆ
ಕಣ್ಣ ಹನಿ

ಮುಂಜಾನೆಯ ಆಕ್ರಂದನ
ರಾತ್ರಿಯ ನೀರವ ಮೌನ

ಆಗುತ್ತಿದ್ದವು
ಜೋಗುಳದ ಪದ

ಬೆಚ್ಚಿಬೀಳುತ್ತಿರಲಿಲ್ಲ ಹೀಗೆ

ಕೂರುತ್ತಲೇ ಇರಲಿಲ್ಲ ಇತಿಹಾಸ
ಹಟ ಹಿಡಿದು ಹೀಗೆ ಉಪವಾಸ

ಕೊಲ್ಲುತಿರಲಿಲ್ಲ ಹೀಗೆ
ನಮ್ಮೊಳಗಿನ ಮೌನ ನಮ್ಮನು

ಬಂದೂಕಿಗೆ
ಬಾಂಬುಗಳಿಗೆ
ಕ್ಷಿಪಣಿಗಳಿಗೆ..

ತಾಕಿದ್ದರೆ..
ಬಡವರ ಬೆವರ ಹನಿ

ಸುರಿಯಬಹುದಿತ್ತು
ಶತ್ರುವಿನ ಕಣ್ಣಿಂದಲೂ ಹನಿ!

————————–

About The Author

Leave a Reply

You cannot copy content of this page

Scroll to Top