ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಪರವಿನ ಬಾನು ಯಲಿಗಾರ “ಹೊಸ ವರ್ಷ”

ಕಾವ್ಯ ಸಂಗಾತಿ ಪರವಿನ ಬಾನು ಯಲಿಗಾರ “ಹೊಸ ವರ್ಷ” ಮದಿರೆಯ ಮತ್ತಿನಲ್ಲಿ ತೇಲುವವರು ,ಮಂಗಾಟದ ಮಂಪರಿನಲ್ಲೆ ಇರುಳಕಳೆಯುವವರು ,ಹಾದಿ ಬೀದಿಯಲಿ ಬಿದ್ದು ಹೊರಳಾಡುವವರು ,ಮೈ ಮನದ ಮಲೀನತೆಯಲಿಮುಳುಗಿದವರು ,ಸಂಭ್ರಮಿಸುವ ಹೊಸ ವರ್ಷ… ಹೊತ್ತಿನ ತುತ್ತಿಗೆ ಹಾತೊರೆಯುವವರು ,ಹಲುಬುವ ಹಸುಳೆಗೆ ಹಾಲುಣಿಸಲುಹೆಣಗುವವರು ,ಹೊತ್ತಿ ಉರಿಯುವ ಬಿಸಿಲಲಿಬೇಯುವವರು ,ಕೋರೆವ ಚಳಿಯಲಿ ಚಡಪಡಿಸುವವರು ,ಮೈ ಮಾನ ಮುಚ್ಚಲು ಏಗುವವರು ,ಬೇಸರಿಸಿದರೆ ಬೇಯದಿರುವ ಕೂಳುಎಂದು ನಿಟ್ಟುಸಿರು ಬಿಡುವವರು , ಎಷ್ಟು ಹೊಸ ವರ್ಷ ಬಂದರೆನು , ಹೋದರೆನುಇಂತಹ ಶಾಪಗ್ರಸ್ತರಿಗೆ ಎಂದು ಬರುವುದು ಹೊಸ ವರ್ಷ ?ಇವರೆಂದು ಕಾಣುವುದು ಹೊಸ ಕನಸ ?ಪರವಿನ ಬಾನು ಯಲಿಗಾರ

ಪರವಿನ ಬಾನು ಯಲಿಗಾರ “ಹೊಸ ವರ್ಷ” Read Post »

ಕಾವ್ಯಯಾನ

ಶಾಲಿನಿ ರುದ್ರಮುನಿ ಹುಬ್ಬಳ್ಳಿ ಅವರ ಕವಿತೆ,”ಜನವರಿ ಒಂದರ ಬೆಳಿಗ್ಗೆ”

ಕಾವ್ಯ ಸಂಗಾತಿ ಶಾಲಿನಿ ರುದ್ರಮುನಿ ಹುಬ್ಬಳ್ಳಿ “ಜನವರಿ ಒಂದರ ಬೆಳಿಗ್ಗೆ” ಜನವರಿ ಒಂದರ ಬೆಳಗ್ಗೆಕನ್ನಡಿಯೇ ಮೊದಲು ಪ್ರಶ್ನಿಸಿತು“ಈ ವರ್ಷ ಏನು ಬದಲಾವಣೆ?”ನಾನು ಉತ್ತರಿಸಿದೆ,“ಮೊದಲು ನಗು, ಉಳಿದದ್ದು ನೋಡೋಣ ಬಿಡು!” ಕ್ಯಾಲೆಂಡರ್ ಹೊಸದು,ಪೆನ್ನು ಹಳೆಯದು,ಸಂಕಲ್ಪಗಳು ಮಾತ್ರಪ್ರತಿವರ್ಷದಂತೆಫ್ರೆಶ್ ಪ್ಯಾಕೆಟ್! ನಿನ್ನೆ ತನಕಸೋಮಾರಿತನಕ್ಕೆ ಬೈದವರುಇಂದು ಅದನ್ನೇ ಹೇಳ್ತಾರೆ,“ರಿಲ್ಯಾಕ್ಸ್, ವರ್ಷ ಇನ್ನೂ ಚಿಕ್ಕದುಈಗಷ್ಟೇ ಹುಟ್ಟಿದೆ!” ಧ್ಯಾನ, ಯೋಗ, ಆರೋಗ್ಯಎಲ್ಲವೂ ಲಿಸ್ಟ್‌ನಲ್ಲಿ ಇದೆ,ಆದ್ರೆ ಈಗ ಕೈಲಿರುವಒಂದು ಚಹಾನೇ,ಜೀವನದ ತತ್ವ ಅನ್ಸತಿದೆ , ಜೀವನ ಅಂದ್ರೆಎಲ್ಲವನ್ನೂ ಸರಿಪಡಿಸೋ ಪ್ರಯತ್ನವಲ್ಲ,ಸ್ವಲ್ಪ ತಪ್ಪು, ಸ್ವಲ್ಪ ತತ್ವ,ಮಧ್ಯೆ ಮಧ್ಯೆ ಜೋರಾದ ನಗು ಅಷ್ಟೇಕ್ಷಣದ ಬದುಕ ಅನುಭವಿಸಲು, ಜನವರಿ ಒಂದೆಂದರೆಪರಿಪೂರ್ಣ ಆರಂಭವಲ್ಲ,ಅಪೂರ್ಣ ಬದುಕಿನೊಂದಿಗೆಸ್ನೇಹ ಮಾಡಿಕೊಂಡ ದಿನ, ಈ ಹೊಸ ಕ್ಯಾಲೆಂಡರ್ ವರ್ಷದಲ್ಲಿಖುಷಿ ಜಾಸ್ತಿ ಸಂಭ್ರಮಿಸೋಣಗಂಬೀರವಾಗಿರೋದನ್ನ ಕಡಿಮೆ ಮಾಡಿ,ಬದುಕುಸ್ವಲ್ಪ ಇನ್ನೂ ಚೆಂದವಾಗಿಸೋಣ…, ಶಾಲಿನಿ ರುದ್ರಮುನಿ ಹುಬ್ಬಳ್ಳಿ

ಶಾಲಿನಿ ರುದ್ರಮುನಿ ಹುಬ್ಬಳ್ಳಿ ಅವರ ಕವಿತೆ,”ಜನವರಿ ಒಂದರ ಬೆಳಿಗ್ಗೆ” Read Post »

ಕಾವ್ಯಯಾನ

ಡಾ ಅನ್ನಪೂರ್ಣ ಹಿರೇಮಠ ಕವಿತೆ, ಮೇಷ್ಟ್ರು

ಕಾವ್ಯ ಸಂಗಾತಿ ಡಾ ಅನ್ನಪೂರ್ಣ ಹಿರೇಮಠ ಮೇಷ್ಟ್ರು ನಿಮ್ಮಂತ ಮೇಷ್ಟ್ರು ನಂಗೆ ಸಿಕ್ಕರೆಕನ್ನಡ ಕಲಿಯಲು ನನಗೆ ಬಲು ಅಕ್ಕರೆನಮ್ಮ ಕನ್ನಡವೆಂದರೆ ಸಿಹಿ ಸಕ್ಕರೆಅ ಆ ಅಕ್ಷರಗಳೆಂದರೆ ಅರಳಿದ ತಾವರೆ// ನೀವಂದ್ರೆ ತಾಯ್ನುಡಿ ಭಾಷೆಯಲ್ಲೆ ಬರೆತಾಯ್ನುಡಿ ಸಿರಿಯಲ್ಲೇ ಮೈಮರೆಸಿರಿಗನ್ನಡ ನುಡಿ ಸವಿಗನ್ನಡ ನುಡಿಎನ್ನುತಾ ಎಲ್ಲರ ಕೈಮಾಡಿ ಕರೆವೆ// ನೀವು ಪಾಟೀ ಬಳಪ ಹಿಡಿ ಎಂದರೆಕುಣಿ ಕುಣಿದು ಬರೆವೆ ಇಲ್ಲಾ ತೊಂದರೆಸಹ್ಯಾದ್ರಿ ಬೆಟ್ಟ ಕೊಡಚಾದ್ರಿ ಕಣಿವೆಮೈಸೂರು ಚಾಮುಂಡಿ ಬೆಟ್ಟ ಸುತ್ತಿ ಬರುವೆ// ನಗುನಗುತ ಓದು ಅಂತಾ ಹೇಳಿದರೆಚಟ ಪಟ ಎಣಿಸಿ ಹೇಳುವೆ ಚುಕ್ಕಿ ತಾರೆಕಾವೇರಿ ನದಿ ಜೋಗದ ಝರಿಯ ಸಿರಿಎಲ್ಲಾ ಬಣ್ಣಿಸಿ ಹೊಗಳಿ ಹೊಗಳಿ ಹಾಡುವೆ// ಪದ್ಯಪಾಠ ಬಾಯಿಪಾಠ ಮಗ್ಗಿ ಹೇಳಿದರೆಜಿಗಿಜಿಗಿದು ಹೇಳುವೆ ನೀವು ಮುಂದಿದ್ದರೆಶಿಲ್ಪಕಲೆ ಸಂತಸದ ಹೊನ್ನ ಮಣ್ಣ ಮೇಲೆಹಾಯಾಗಿ ನಿದಿರಿಸಿ ಕನಸಲ್ಲೂ ಕನ್ನಡ ಕಾಣುವೆ// ಡಾ ಅನ್ನಪೂರ್ಣ ಹಿರೇಮಠ 

ಡಾ ಅನ್ನಪೂರ್ಣ ಹಿರೇಮಠ ಕವಿತೆ, ಮೇಷ್ಟ್ರು Read Post »

ಕಾವ್ಯಯಾನ

“ಹೊಸ ವರುಷ ತರಲಿ ಹರುಷ” ಎಮ್ಮಾರ್ಕೆ

ಕಾವ್ಯ ಸಂಗಾತಿ “ಹೊಸ ವರುಷ ತರಲಿ ಹರುಷ” ಎಮ್ಮಾರ್ಕೆ ಹೊಸ ವರುಷ ತರಲಿ ಹರುಷಎಂದೆಂದೂ ನಿಮ್ಮ ಬಾಳಿನಲಿಎಲ್ಲೇ ಇರಲಿ ಹೇಗೆ ಇರಲಿಬಾಳು ಬಂಗಾರವಾಗಿರಲಿ ಒಂದಾಗಿ ಎಲ್ಲರೂ ಬೆರೆತುನಮ್ಮೆಲ್ಲ ನೋವನು ಮರೆತುಸಿಹಿಯಾದ ಮಾತನು ಆಡಿಎಲ್ಲರ ಜೊತೆ ಒಡಗೂಡಿಹಾಡಿ ಕುಣಿಯುತಮೈ ಮರೆಯುತಈ ಬಾಳ ಸವಿಯೋಣ… ಕಳೆದಾಯ್ತು ಎಲ್ಲ ಇರುಳುಹಿಡಿದಾಯ್ತು ನೂರು ಬೆರಳುಮರೆತಾಯ್ತು ಎಲ್ಲ ನೋವುನಾವಿಂದು ಅರಳಿದ ಹೂವುಘಮ ಸೂಸುತಹೂ ಹಾಸುತಸ್ವಾಗತ ಕೋರುವೆನು.. ಹಳೆಬೇರ ಜೊತೆ ಹೊಸಚಿಗುರುಬೆರೆತಾಗಲೇ ಬಾಳು ಹಸಿರುನಿನ್ನೆಯ ಕ್ಷಣಗಳ ನೆನೆದುನಾಳೆಗೆ ಮನವನು ತೆರೆದುಇಂದು ಹಾಡುತಕುಣಿದಾಡುತಮೈ ಮರೆಯುವೆನು…. ಮಹಾಂತೇಶ ಆರ್ ಕುಂಬಾರ (ಎಮ್ಮಾರ್ಕೆ)

“ಹೊಸ ವರುಷ ತರಲಿ ಹರುಷ” ಎಮ್ಮಾರ್ಕೆ Read Post »

ಕಾವ್ಯಯಾನ

ಇಮಾಮ್ ಮದ್ಗಾರ ಅವರ ಕವಿತೆ,ಹೊಸತೇನಿಲ್ಲ

ಕಾವ್ಯ ಸಂಗಾತಿ ಇಮಾಮ್ ಮದ್ಗಾರ ಹೊಸತೇನಿಲ್ಲ ಸಾವಿರಾರು ಪಟಾಕಿಗಳ ಘರ್ಜನೆಯಲಿ ಪರಿಸರದಪರಿಗಮನವೂ ಇಲ್ಲದೇ..ನೂರಾರು ಜೀವಿಗಳ (ಮಾಂಸ)ತಿಂದು ತೇಗುತ್ತಾ..ನಶೆಯಲ್ಲಿ ನಿರ್ಗಮಿಸುತ್ತಾನಶೆಯಲ್ಲಿಯೇ ಆಗಮಿಸುವಹೊಸ ವರುಷವೇ ನಿನಗೆ ಸ್ವಾಗತ ಹೊಸತನದ ಆಶೆಯಷ್ಟೇ ಹನ್ನೆರಡು ತಿಂಗಳ ತುಂಬು ಗರ್ಭದಲಿ ಮತ್ತೊಂದು ಜನನಜನನ ೨೦೨೬ ಹೊಸತೇನಿಲ್ಲ !ಮತ್ತೇರಿದ ಮಸ್ತಕದಲ್ಲಿಹೊಸತನದ ಆಶೆಯಹೊತ್ತುಹಳೆಯ ನೋವುಗಳ ಹೊಸಕಿಹಾಕುತ್ತಾ ಬರುವ ಹೊಸವರುಷವೇ ನಿನಗೆ ಸ್ವಾಗತ ಹೊಸತನದ ಬಯಕೆ ಅಷ್ಟೇ ಕಳೆದ ಸಾಲಿನ ಸಂಕಟಸಡಗರವಾಗಿ ಬದಲಾಗಿ ಹೋದವರುಷದ ಸಂಭ್ರಮ ಸವೆಯದೇ ಗಟ್ಟಿಯಾಗಿರಿಸುತ್ತಾ ಬಂದುಬಿಡು ಹೊಸತನವೇ ನಿನಗೆ ಸ್ವಾಗತ ಹೊಸತನದ ಕನಸಷ್ಟೇ ಗತಕಾಲದ ನೆನಪುಗಳುನಶಿಸಿ ನೋವುಗಳ ನಶೆಯ ಅಳಿಸಿ ಕಂಡ ಕನಸುಗಳ ನನಸಾಗಿಸಲು ಬರುತ್ತಿರುವನವ ನವೀನ ವರುಷವೇ ನಿನಗೆ ಸ್ವಾಗತ ಹೊಸತೇನಿಲ್ಲ !ಹೊಸತನದ ಆಶೆಯಷ್ಟೇ… ಹಳೆಬೇರು ಹೊಸಚಿಗುರುಹೂವಾಗಿ ಕಾಯಿ ಫಲಿಸಿಹಣ್ಣಾಗಲಿದೆಂಬ ಭರವಸೆಯಷ್ಟೇ… ಹರುಷದ ಹೊನಲು ಹರಿಸಿಬಾಂಧವ್ಯ ಗಳ ಬೆಸೆಯುತ್ತಾಜಾತಿ ವಿಜಾತಿಗಳ ಹೊಲಸುತೊಳೆಯುತ್ತಾ ಎಲ್ಲರೊಂದೇಎಂಬ ಭಾವ ಪಸರಿಸುತ್ತಾಬಂದುಬಿಡು ಹೊಸವರುಷವೇನಿನಗೆ ಸ್ವಾಗತ ಆಯುಷ್ಯದಲ್ಲಿ ಮತ್ತೊಂದುವರುಷ ಕಡಿತವಾಗಿದೆ ಮತ್ತೇನಿಲ್ಲ ಹೊಸತೇನಿಲ್ಲಹೊಸತನದ ಆಶೆಯಷ್ಟೇ… ಇಮಾಮ್ ಮದ್ಗಾರ

ಇಮಾಮ್ ಮದ್ಗಾರ ಅವರ ಕವಿತೆ,ಹೊಸತೇನಿಲ್ಲ Read Post »

ಕಾವ್ಯಯಾನ

ಎ.ಹೇಮಗಂಗಾ ಅವರ ತನಗಗಳು

ಕಾವ್ಯ ಸಂಗಾತಿ ಎ.ಹೇಮಗಂಗಾ ತನಗಗಳು ಚಿಕ್ಕದೊಂದು ರಂಧ್ರವೂಬಲಶಾಲಿಯೇ ಹೌದುತೇಲುವ ಹಡಗನ್ನುಮುಳುಗಿಸುವುದದು ಸಾಗರದ ಮೇಲಿದೆಪುಟ್ಟ ಹಿಮ ಪರ್ವತಆಳದಲ್ಲಿದೆ ಇನ್ನೂಕಾಣಲಾಗದು ಕಣ್ಣು ಭೂಮಂಡಲ ಅಗಾಧನಶ್ವರ ಜೀವಿ ನಾನುಒಯ್ಯಲಾರೆ ಏನನ್ನೂಸಾವಪ್ಪಲು ನನ್ನನ್ನು ಪ್ರಾರ್ಥಿಸು ದೇವರಲಿಆಸೆ ಫಲಿಸಲೆಂದುಶ್ರಮದಿ ಸಾಧಿಸಲುಆತ್ಮ ಶಕ್ತಿ ನೀಡೆಂದು ಮನುಜ ಬುದ್ಧಿಜೀವಿಕಟ್ಟುತ್ತಾನೆ ಈಗಲೂಹಿಮದ ದಿಮ್ಮಿ ಮನೆಹೆಸರಾಗಿದೆ ‘ ಇಗ್ಲೂ ‘ ಹಕ್ಕಿಯಂತೆ ಹಾರಿವೆಪುಕಾರುಗಳು ಇಂದುರೆಕ್ಕೆ ಪುಕ್ಕ ಪಡೆದುಬಾಯಿಯಿಂದ ಬಾಯಿಗೆ ಚುಮು ಚುಮು ಚಳಿಗೆಕಂಬಳಿ ಹೊದ್ದ ಮಂದಿಆಗಿದ್ದಾರೆ ಮುಂಜಾನೆಮನೆಯೊಳಗೇ ಬಂದಿ ಚಳಿಗಾಲದ ಚಳಿಬೇಸಿಗೆಯಲ್ಲಿ ಬಿಸಿಎರಡು ಹೆಚ್ಚಾದರೂಜನಕ್ಕೆ ತಲೆ ಬಿಸಿ ಬೆಳೆಯಬೇಕು ನೀನುಯಾರೆಷ್ಟೇ ತುಳಿದರೂಗರಿಕೆ ಹುಲ್ಲಿನಂತೆಛಲವ ಬಿಡದಂತೆ ದಣಿವನ್ನು ತೋರದೇದುಡಿಯುವಳು ತಾಯಿನಗುತ್ತಲೇ ಹೊಣೆಯಪೂರೈಸುವಳು ಮಾಯಿ ಸಾವ ತೆಕ್ಕೆಯೊಳಗೆಜೀವಗಳು ನಿರ್ಜೀವಅನಲ ಅನಾಹುತಸೂತ್ರಧಾರಿ ವಿಧಾತ ಬೆಂಕಿಯು ವ್ಯಾಪಿಸಿತುಎಲ್ಲೆಡೆ ಸರಸರಕೊನೆಗೆ ಉಳಿಯಿತುಬಸ್ಸಿನ ಕಳೇಬರ ಎ. ಹೇಮಗಂಗಾ                                   

ಎ.ಹೇಮಗಂಗಾ ಅವರ ತನಗಗಳು Read Post »

ಕಾವ್ಯಯಾನ

ಸುಮಾ ಗಾಜರೆ ಅವರಕವಿತೆ, ” ಹೊಸವರುಷ”

ಕಾವ್ಯ ಸಂಗಾತಿ ಸುಮಾ ಗಾಜರೆ ” ಹೊಸವರುಷ” ಎಲ್ಲೆಲ್ಲೂ ಸಂಭ್ರಮ ಸಡಗರಹೊಸವರುಷದ ನವ್ಯ ಶೃಂಗಾರಮತ್ತೆ ಬರುತಿದೆ ಹೊಸ ವರುಷಕಾಲದ ಪುಟ ಸೇರಿತು ಈ ವರುಷ ವರ್ಷವಿಡೀ ಒಂದಷ್ಟು ಥಳಕುನೋವು ನಲಿವಿನ ಸರಕುಕಂಡ ಕನಸು ನನಸಾದದ್ದೆಷ್ಟೋಅರಳುತಿವೆ ಇನ್ನೂ ಮನದಲೆಷ್ಟೋ ಉಸಿರಿನ  ಹಸಿರಲಿ ಬೆರೆತಿರಲುಹೊಸವರುಷದ ಭರವಸೆಬವಣೆಯ ಭಾವದಲಿ ಕರಗಿರಲುಬಾಳ ಆಶೆಯ ವರಸೆ ಮತ್ತೆ ಬೆಳಕು ಮೂಡಿ ಬಂದಿದೆದಾರಿಯೊಂದು ತೆರೆದು ನಿಂತಿದೆಜೀವನ ಕ್ಷಣಗಳೆಲ್ಲ ಅಮೂಲ್ಯ ಬಂಧಮೌಲ್ಯಗಳಿರೆ ಎಂದೆಂದಿಗೂ ಚೆಂದ ತೂರಿ ಬರಲಿ ಹೊನ್ನ ಕಿರಣಗಳುಹೊಸದಾದ ವರುಷದಲಿಹಿರಿದಾಗಲಿ ಹೆಜ್ಜೆ ಗುರುತುಗಳುಸಾಧನೆಯ ಹಾದಿಯಲಿ ಚೆಂದದ ವರುಷದಿ ಮೂಡಲಿ ಚಿತ್ತಾರಹೊಸದಾದ ಹೊಂಗನಸಲಿನಿತ್ಯ ಇರಲಿ ದಿನಗಳ ಆಗರಧನ್ಯತೆಯ ದಾರಿಯಲಿ ಇರಲಿ ಜೊತೆಯಾಗಿ ಹಗಲಿರುಳುಗಳುಬರುವ ನಾಳೆಗಳಲಿಹದುಳವಾಗಲಿ ಮಧುರ ಮನಗಳುಶುಭದ ಘಳಿಗೆಯಲಿ ಸುಮಾ ಗಾಜರೆ   

ಸುಮಾ ಗಾಜರೆ ಅವರಕವಿತೆ, ” ಹೊಸವರುಷ” Read Post »

ಕಾವ್ಯಯಾನ

ರಾಜು ಅವರ ಕವಿತೆ “ಕಾಲಚಕ್ರ”

ಕಾವ್ಯ ಸಂಗಾತಿ ರಾಜು “ಕಾಲಚಕ್ರ” ಒಂದೊಂದೇ ಹೆಜ್ಜೆ ಇಟ್ಟು ನಡೆಯುತ್ತಿದ್ದಕಾಲನ ಗಡಿಯಾರಈಗೀಗ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಓಡುತ್ತಿದೆ !ಮೊನ್ನೆಯಷ್ಟೇ ಕೇಕ್ ಕತ್ತರಿಸಿ ಕೇಕೆ ಹಾಕಿದ ದಿನಹಿಂದೆ ಸರಿದು ಮತ್ತೊಂದು ಎದುರಿಗೆ ಬಂದು ನಿಂತಿದೆ !! ಬೆನ್ನ ಹಿಂದೆ ಪಾಟಿ ಚೀಲ ಹಾಕಿಕೊಂಡುಶಾಲೆಯ ಫಸ್ಟ್ ಬೆಲ್ ಗೆ ಕಾಯುತ್ತಿದ್ದ ದಿನ ಕಳೆದುಮನೆಯಂಗಳದಲ್ಲಿ ಸ್ಕೂಲ್ ವ್ಯಾನ್ ಕಾಯುತ್ತಿದೆ !ಪಾಟಿ-ಪೇಣೆ ಅಟ್ಟಸೇರಿ ಲ್ಯಾಪ್‌ಟಾಪ್ ತೊಡೆಯೇರಿ ಕುಳಿತಿದೆ !! ಮನೆಯಂಗಳದ ಪುಟ್ಟ ಗಿಡವೀಗಎದೆಯೆತ್ತರ ಬೆಳೆದು ನೆರಳು ನೀಡುತ್ತಿದೆ !ಹಣ್ಣೆಲೆಗಳ ಕಳಚಿಕೊಂಡ ಮರವೀಗಚಿಗುರೆಲೆಗಳ ಹೊತ್ತು ಹಸಿರಾಗಿ ನಿಂತಿದೆ !! ಧಾವಂತದ,ದಣಿವರಿಯದ ಬದುಕಲ್ಲಿಹಿಂತಿರುಗಿ ನೋಡಿದರೆ ಹೆಜ್ಜೆ ಗುರುತು ಕಾಣದಾಗಿದೆ !ಮರಳ ಮೇಲಿನ ಹೆಜ್ಜೆ ಗುರುತುಸಾಗರದಲೆಗಳು ಅಳಿಸಿಹಾಕಿವೆ !! ಹೊಸತು ಹಳತಾಗಿ, ಹಳತು ಕಳೆದ್ಹೋಗಿಕಾಲಚಕ್ರ ಉರುಳುತ್ತಿದೆಮೂಗಿನ ಮೇಲೇರಿದ ಕನ್ನಡಕ ಕಣ್ಣುಗಳಿಗೆ ಬೆಳಕಾಗಿದೆ !ಕಾಲನ ಗಡಿಯಾರದ ಮುಳ್ಳುಗಳನ್ನು ತಡೆಯುವರಾರು !?? ರಾಜು ಪವಾರ್

ರಾಜು ಅವರ ಕವಿತೆ “ಕಾಲಚಕ್ರ” Read Post »

ಕಾವ್ಯಯಾನ, ಗಝಲ್

ಹಾ.ಮ ಸತೀಶ ಬೆಂಗಳೂರು ಅವರ ಗಜಲ್

ಕಾವ್ಯ ಸಂಗಾತಿ ಹಾ.ಮ ಸತೀಶ ಬೆಂಗಳೂರು ಗಜಲ್ ಸಾವಿರ ಬಾರಿ ಅಲೆದರೂ, ಪ್ರೀತಿಯು ಸಿಗಲಿಲ್ಲನಿನ್ನನೆ ಹುಡುಕುತ ಬಂದರೂ,ಪ್ರೀತಿಯು ಸಿಗಲಿಲ್ಲ ನಿನ್ನಯ ಹತ್ತಿರ ಬೇಡಿದೆ,ನೀನು ಹೋದೆ ಎಲ್ಲಿಗೆಜೀವ ನನಸಲಿ ನಿಂದರೂ,ಪ್ರೀತಿಯು ಸಿಗಲಿಲ್ಲ ಚೆಲುವ ಬೀರಿ ಮನಸನಿಂದು,ಕದಡಿ ಹೋದೆ ಏತಕೆಸವಿಯು ಬಂದು ಕೂತರೂ,ಪ್ರೀತಿಯು ಸಿಗಲಿಲ್ಲ ಚಿತ್ತದಲ್ಲಿ ಪ್ರೇಮರಾಗ, ಬೆರೆತು ಇರಲು ಹೋದೆಯಾಮೋಹ ಸಮಯ ಇದ್ದರೂ, ಪ್ರೀತಿಯು ಸಿಗಲಿಲ್ಲ ಸೊರಗಿ ಹೋದ ಮುಖದ ಭಾವ, ನನಗೆ ಏಕೆ ಈಶಅತ್ತು ಕರೆದು ಹೇಳಿದರೂ, ಪ್ರೀತಿಯು ಸಿಗಲಿಲ್ಲ ಹಾ.ಮ ಸತೀಶ ಬೆಂಗಳೂರು

ಹಾ.ಮ ಸತೀಶ ಬೆಂಗಳೂರು ಅವರ ಗಜಲ್ Read Post »

ಕಾವ್ಯಯಾನ

“ಮೌನ ನಮನ”ಸರಸ್ವತಿ ಕೆ ನಾಗರಾಜ್

ಕಾವ್ಯ ಸಂಗಾತಿ ಲಕ್ಷ್ಮೀದೇವಿ ಪತ್ತಾರ “ಮುಂದುವರೆದಿದೆ” ಹೊಸದೆನ್ನುವುದು ಈ ಜಗದಲ್ಲಿಯಾವುದಿದೆ ?ಗಮನವಿಟ್ಟು ನೋಡಿದರೆಎಲ್ಲವೂ ಹಳೆಯದರ ಹೊಸ ರೂಪವಷ್ಟೆ ಹುಟ್ಟುವುದು ಅದೇ ಹಳೆಯ ಆತ್ಮ ಸಾಯುವುದು ಅವೆ ಪಂಚಭೂತಗಳುಸತ್ತಿರುವುದು ಹಳೆಯ ಸಂಬಂಧಹುಟ್ಟುವುದು ಮತ್ಯಾವುದೋ  ಹೊಸ ಬಂಧ ಇದ್ದದ್ದನ್ನು ಲಯ ಮಾಡಲು ಬಾರದು ಇಲ್ಲದನ್ನು ಸೃಷ್ಟಿಸಲು  ಆಗದು ಸೃಷ್ಟಿಯು ಇಲ್ಲ  , ಲಯವೂ ಇಲ್ಲಅದೇ ಮುರಿದು ಕಟ್ಟುವ (  ಕಾರ್ಯ )ದೃಷ್ಟಿ ಕೆಟ್ಟದ್ದು ಕಳೆಯುವುದಿಲ್ಲಒಳ್ಳೆಯದು ಅಳಿಯುವುದಿಲ್ಲಕೊರಗಿ,ಮರುಗಲು ಕಾರಣವೇ ಇಲ್ಲ. ಈಗ ಇರುವುದೆಲ್ಲವೂ ಮೊದಲೂ ಇತ್ತುಮತ್ತೆ ಮತ್ತೆ ಮುಂದುವರಿಯುವದುಕಾಲಚಕ್ರದಲ್ಲಿ ಹಳೆಯದು ನವನವೀನ ಹೊಸದು ಹಳೆಯದಕ್ಕೆ ಹಚ್ಚಿದ ಬಣ್ಣಮುಂದುವರಿದಿದೆ ಹೊಸದೆನ್ನುವುದು ಈ ಜಗದಲ್ಲಿಯಾವುದಿದೆ ?ಗಮನವಿಟ್ಟು ನೋಡಿದರೆಎಲ್ಲವೂ ಹಳೆಯದರ ಹೊಸ ರೂಪವಷ್ಟೆ ಹುಟ್ಟುವುದು ಅದೇ ಹಳೆಯ ಆತ್ಮ ಸಾಯುವುದು ಅವೆ ಪಂಚಭೂತಗಳುಸತ್ತಿರುವುದು ಹಳೆಯ ಸಂಬಂಧಹುಟ್ಟುವುದು ಮತ್ಯಾವುದೋ  ಹೊಸ ಬಂಧ   ಇದ್ದದ್ದನ್ನು ಲಯ ಮಾಡಲು ಬಾರದು ಇಲ್ಲದನ್ನು ಸೃಷ್ಟಿಸಲು  ಆಗದು  ಸೃಷ್ಟಿಯು ಇಲ್ಲ  , ಲಯವೂ ಇಲ್ಲಅದೇ ಮುರಿದು ಕಟ್ಟುವ (  ಕಾರ್ಯ )ದೃಷ್ಟಿ ಕೆಟ್ಟದ್ದು ಕಳೆಯುವುದಿಲ್ಲಒಳ್ಳೆಯದು ಅಳಿಯುವುದಿಲ್ಲಕೊರಗಿ,ಮರುಗಲು ಕಾರಣವೇ ಇಲ್ಲ. ಈಗ ಇರುವುದೆಲ್ಲವೂ ಮೊದಲೂ ಇತ್ತುಮತ್ತೆ ಮತ್ತೆ ಮುಂದುವರಿಯುವದುಕಾಲಚಕ್ರದಲ್ಲಿ ಹಳೆಯದು ನವನವೀನ ಹೊಸದು ಹಳೆಯದಕ್ಕೆ ಹಚ್ಚಿದ ಬಣ್ಣ ಲಕ್ಷ್ಮೀದೇವಿ ಪತ್ತಾರ

“ಮೌನ ನಮನ”ಸರಸ್ವತಿ ಕೆ ನಾಗರಾಜ್ Read Post »

You cannot copy content of this page

Scroll to Top