ಮಧು ವಸ್ತ್ರದ ಮುಂಬಯಿ “ವಸಂತನ ಅಳಲು”
ಕಾವ್ಯ ಸಂಗಾತಿ ಮಧು ವಸ್ತ್ರದ ಮುಂಬಯಿ “ವಸಂತನ ಅಳಲು” ಮಾಮರದ ಚಿಗುರೆಲೆ ಅದೇಕೋ ಅತ್ತಿತ್ತಅಲ್ಲಾಡದಾಗಿಹುದುಮಧು ಹೀರಿ ಹಾರುವ ದುಂಬಿ ಝೇಂಕಾರಮಾಡದಾಗಿಹುದುಕೋಗಿಲೆ ಹಾಡುವುದ ಮರೆತು ಮೌನದಲಿಕುಳಿತಿಹುದುನವಿಲು ನರ್ತಿಸದೆ ಮುಗಿಲೆಡೆ ದೈನ್ಯದಿಂದನೋಡುತಿಹುದು ತೆಂಗು ಬಾಳೆ ಅಡಿಕೆ ಶುಭಕಾರ್ಯಗಳಿಲ್ಲದೆಮಂಕಾಗಿಹವುಮಲ್ಲಿಗೆ ಸಂಪಿಗೆ ಹೂಗಳು ಒಣಗಿ ಮೊಗವಬಾಡಿಸಿಹವುಪ್ರಾಣಿಸಂಕುಲ ಮನುಜನಾಟಕೆ ಸಿಕ್ಕಿ ತತ್ತರಿಸಿಹೋಗಿಹುದುಪಶುಗಳೆಲ್ಲವೂ ನಿನ್ನ ಕ್ರೂರ ಆರ್ಭಟಕೆ ಬೆದರಿಕಂಗಾಲಾಗಿಹವು ಬೀಸುಗಾಳಿಯಲಿ ಕಲುಷಿತ ವಿಷದ ದುರ್ಗಂಧಬರುತಿಹುದುಹರಿವ ನದಿಗಳಲಿ ಮನುಜ ಬಿಸುಟಿದ ಕೊಚ್ಚೆಕಸ ಬೆರೆತಿಹುದುಮಲಿನ ಕೆಸರು ನೀರಿನಲ್ಲಿ ಜಲಚರಗಳ ಜೀವಬರಡಾಗಿಹುದುಹಕ್ಕಿ ಪಕ್ಷಿಗಳ ಚಿಲಿಪಿಲಿ ಕಲರವವಿಲ್ಲದೆ ಕಾಡುಬರಿದಾಗಿಹುದು. ಪ್ಲಾಸ್ಟಿಕ್, ಕಸ, ಕಾಗದ ಉರಿದು ಹೊಗೆ ಏರಿಬಾನು ಕಪ್ಪಾಗಿಹುದುನಿನ್ನ ಸ್ವಾರ್ಥದಾಟಕೆ ಸಿಲುಕಿ ಹಸಿರು ಕಾನನ ಬೋಳಾಗಿಹುದುನಿನ್ನಹಂಕಾರ ನೋಡಿ ಸಹಿಸದೆ ಸಮುದ್ರರಾಜ ಕೋಪದಿ ಗರ್ಜಿಸಿಹನುತನ್ನಲೆಗಳ ಬೀಸಿ ಭೂತಾಯಿಯ ಬಾಚಿ ತಬ್ಬುತ ಸಾಂತ್ವನ ನೀಡಿಹನು ಇಳೆಯ ಸಿಂಗರಿಸಿ ನಲಿಯಲು ಬಂದ ಋತುವಸಂತ ಬೆಚ್ಚಿಹನುಪೃಥ್ವಿಯ ಮೇಲಿನ ದಾರುಣ ಸ್ಥಿತಿಯ ಕಂಡುಮರುಗಿ ಹೋಗಿಹನುಸ್ವಚ್ಛತೆ ನಿರ್ಮಲತೆ ಕಾಪಾಡುತ ಎಚ್ಚರದಿಂದಇರಿ ಎಂದಿಹನುನಿಸರ್ಗದ ಕಾಳಜಿ ವಹಿಸುತ ಸುಖದಿ ಬಾಳಿರಿಎಂದು ಹರಸಿಹನು.. ಮಧು ವಸ್ತ್ರದ ಮುಂಬಯಿ
ಮಧು ವಸ್ತ್ರದ ಮುಂಬಯಿ “ವಸಂತನ ಅಳಲು” Read Post »









