ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಡಾ. ಗೀತಾ ದಾನಶೆಟ್ಟಿ ಬಾಗಲಕೋಟೆ ಅವರ ಕವಿತೆ”ನೀ ಹೀಗೇಕೆ ಮಾಡಿದೆ”

ಕಾವ್ಯ ಸಂಗಾತಿ ಡಾ. ಗೀತಾ ದಾನಶೆಟ್ಟಿ ಬಾಗಲಕೋಟೆ “ನೀ ಹೀಗೇಕೆ ಮಾಡಿದೆ” ಈ ಭೂಮಿಯ ಮೇಲೆಒಳ್ಳೆಯ ಜನರನ್ನು ಹುಟ್ಟಿಸಿಅವರ ನಡುವೆ ಕೆಟ್ಟವರನ್ನು ಸೃಷ್ಟಿಸಿಕಾಡಿಸಲು ಪೀಡಿಸಲು ಬಿಟ್ಟೆನೀ ಹೀಗೇಕೆ ಮಾಡಿದೆ… ಕಾಡಿನಲ್ಲಿ ಮುಗ್ಧ ಪ್ರಾಣಿಗಳನ್ನುಸ್ವಚ್ಛಂದವಾಗಿ ಅಲೆಯಲು ಬಿಟ್ಟೆಅವನ್ನು ಹಿಂಸಿಸಿ ತಿನ್ನಲುಕ್ರೂರ ಪ್ರಾಣಿಗಳ ಚೂಬಿಟ್ಟೆನೀ ಹೀಗೇಕೆ ಮಾಡಿದೆ… ಕೂಡಿ ಬಾಳಲು ದುಡಿದು ತಿಂದುನಲಿಯಲು,ಹಗಲನು ಸೃಷ್ಟಿಸಿದೆಕಳ್ಳಾಟ-ಅಕ್ರಮಗಳ ಮಾಡಲುಕತ್ತಲು ಕರುಣಿಸಿದೆನೀ ಹೀಗೇಕೆ ಮಾಡಿದೆ… ಪ್ರೀತಿ ಅಂತ:ಕರಣ ಮಾನವನ ಎದೆಯಲ್ಲಿ ನೆಟ್ಟೆಮನದಲ್ಲಿ ವಿಷ ಬೀಜ ಬಿತ್ತಿಕ್ರೂರಿ ಅತ್ಯಾಚಾರಿಅನಾಚಾರಿಯಾಗುವ ಮನಸನಿಟ್ಟೆನೀ ಹೀಗೇಕೆ ಮಾಡಿದೆ.. ಡಾ. ಗೀತಾ ದಾನಶೆಟ್ಟಿ, ಬಾಗಲಕೋಟೆ

ಡಾ. ಗೀತಾ ದಾನಶೆಟ್ಟಿ ಬಾಗಲಕೋಟೆ ಅವರ ಕವಿತೆ”ನೀ ಹೀಗೇಕೆ ಮಾಡಿದೆ” Read Post »

ಕಾವ್ಯಯಾನ

ಶಿವಕುಮಾರ ಕೋಡಿಹಾಳ ಮೂಡಲಗಿ “ನಿಷ್ಕಲ್ಮಶ ನಗು”

ಕಾವ್ಯ ಸಂಗಾತಿ ಶಿವಕುಮಾರ ಕೋಡಿಹಾಳ ಮೂಡಲಗಿ “ನಿಷ್ಕಲ್ಮಶ ನಗು” ಯಾವ ಶಿಲ್ಪಿಯೂ ಕೆತ್ತಲಾಗದಕಲಾವಿದನ ಕೈ ಚಳಕಕೂ ನಿಲುಕದಪರಮಾನಂದದ ನಿಮ್ಮ ನಗುಬದುಕಿನ ಪಾಠ ಹೇಳುತಿವೆ ನಮ್ಮೊಡನಿರುವ ಜೀವಂತ ದೇವರುಗಳುಅವರೊಡನಾಟವೇದೇವನೊಲುಮೆಯ ನೋಟಸುಖ ದುಃಖಗಳಸಮ್ಮಿಲನದ ‌ಸ್ಪೂರ್ತಿಯ ಪಾಠ ಮುಖದ ತುಂಬಾಚೈತನ್ಯದ ಚಿಲುಮೆಹೊತ್ತುಹೇಳುತಿರುವಿರಿಬಾಳೆಂಬ ಹೋರಾಟದನಗುವಿನ ಮೌಲ್ಯಬಲ್ಲವನ ಬೆಲ್ಲದ ಸವಿಮಧುರ ಮಿಲನದ ಸಂತೃಪ್ತಿ ಏನಿದ್ದರೇನ್ ಬಾಳಲಿನೆಮ್ಮದಿಯೊಂದಿಲ್ಲದಿದ್ದರೆಮಕ್ಕಳಾಟದಿ ಮೈಮರೆತುನೋವ ಮರೆತು ನಲಿವ ಕಾಣಬೇಕುಆ ಸತ್ಯ ಕಾಣುವ ಮನಸುನಮದಾಗಲಿಹರಸಿ ಹಾರೈಸಿ ಮಕ್ಕಳೇ ಶಿವಕುಮಾರ ಕೋಡಿಹಾಳ ಮೂಡಲಗಿ

ಶಿವಕುಮಾರ ಕೋಡಿಹಾಳ ಮೂಡಲಗಿ “ನಿಷ್ಕಲ್ಮಶ ನಗು” Read Post »

ಕಾವ್ಯಯಾನ

ಬನಶ್ರೀ ಹತ್ತಿ ವಿಜಯಪುರ ಅವರ ಕವಿತೆ “ಮರೆಯಾದ ನನ್ನಪ್ಪ”

ಕಾವ್ಯ ಸಂಗಾತಿ ಬನಶ್ರೀ ಹತ್ತಿ ವಿಜಯಪುರ “ಮರೆಯಾದ ನನ್ನಪ್ಪ” ಬೆನ್ನ ಹಿಂದೆ ಬೆಟ್ಟದಂತೆ ನಿಂತಿದ್ದೆ,ಕಣ್ಣ ಮುಂದೆ ದಾರಿದೀಪವಾಗಿದ್ದೆ.ನಿನ್ನ ಕೈ ಹಿಡಿದು ನಡೆದ ಹಾದಿಇಂದಿಗೂ ನನ್ನ ಬಾಳ ಹಸಿರು,ಇಂದು ನೀನಿಲ್ಲದೆ ಬದುಕುಬರೀ ಬಳಲಿಕೆಯ ಉಸಿರು. ನನ್ನ ಸಣ್ಣ ತಪ್ಪುಗಳ ತಿದ್ದಿ ಬುದ್ದಿ ಹೇಳುತ್ತಿದ್ದೆ,ಕಷ್ಟ ಬಂದಾಗ ಧೈರ್ಯ ತುಂಬಿನಗು ಬೀರುತ್ತಿದ್ದೆ.ನೀನು ಹಾಕಿಕೊಟ್ಟ ಹಾದಿಯೇ ನನ್ನಾಸ್ತಿನಿನ್ನ ನೆನಪುಗಳೇ ನನ್ನ ಜೀವನದ ಬುತ್ತಿ. ಅಪ್ಪ ಅಂದರೆ ಕೇವಲ ಎರಡಕ್ಷರವಲ್ಲ,ಒಂದು ದೊಡ್ಡ ಆಲದ ಮರ,ನೀನಿಲ್ಲದ ಈ ಬಾಳು ಈಗ ಮರುಭೂಮಿಮರೆಯಾದರೂ ನೀನು ನನ್ನಎದೆಯ ಗೂಡಿನಲ್ಲಿರುವೆ,ನನ್ನ ಪ್ರತಿ ಯಶಸ್ಸಿನಲ್ಲೂ ನಿನ್ನ ದಿವ್ಯ ಚೇತನ ನೀನು ಮರೆಯಾಗಿ ಹೋಗಿಲ್ಲಇಲ್ಲಿಯೇ ಭೂಮಿ ಬೆಳೆ ಮಳೆಯಲ್ಲಿರುವೆಆಗಾಗ ನಿನ್ನ ತುಂತರ ಹನಿನನ್ನ ಕಣ್ಣೀರು ಮರೆಸುವವು ಅಪ್ಪಅಪ್ಪ ಮತ್ತೊಮ್ಮೆ ಬಂದು ಪ್ರೀತಿ ತೋರು ಬನಶ್ರೀ ಹತ್ತಿ ವಿಜಯಪುರ

ಬನಶ್ರೀ ಹತ್ತಿ ವಿಜಯಪುರ ಅವರ ಕವಿತೆ “ಮರೆಯಾದ ನನ್ನಪ್ಪ” Read Post »

ಕಾವ್ಯಯಾನ

ಮಹಾಂತೇಶ್‌ ಬಿ ನಿಟ್ಟೂರು ಅವರ ಕವಿತೆ “ನೆಲದ ಎದೆ ಅಗ್ನಿಕುಂಡ”

ಕಾವ್ಯ ಸಂಗಾತಿ ಮಹಾಂತೇಶ್‌ ಬಿ ನಿಟ್ಟೂರು “ನೆಲದ ಎದೆ ಅಗ್ನಿಕುಂಡ” ಹಾಗೂ ಹೀಗೂ ಹೇಗೋ ಮರ ಬೆಳೆದುದೊಡ್ಡದಾಗಿ ಮೈ ಕೈ ತುಂಬಿಕೊಳ್ಳಲು; ಫಲಕ್ಕಾಗಿ ಸರತಿಯ ಸಾಲುಕೆಲವೊಮ್ಮೆ ನೂಕುನುಗ್ಗಲು ಒಂದು ಗುಂಪು ಚೀಲ ಹಿಡಿದು ನಿಂತಿದೆಹಣ್ಣು ಹಂಪಲು ತುಂಬಿಕೊಳ್ಳಲು ಇನ್ನೊಂದು ಗುಂಪು ಪಾತ್ರೆ ಹಿಡಿದು ಕೂತಿದೆಕೊಂಬೆ ರೆಂಬೆಗಳ ಮೇಲಿಟ್ಟಿಹಜೇನುರಸ ಹಿಂಡಿ ತೆಗೆಯಲು ಮತ್ತೊಂದು ಗುಂಪು ಬುಟ್ಟಿಹಿಡಿದು ಕಾಯುತ್ತಿದೆಹಕ್ಕಿ-ಪಕ್ಷಿಗಳಿಟ್ಟ ಮೊಟ್ಟೆ ಹೊತ್ತು ಸಾಗಲುಕೊನೆಗೆ ಬೇಟೆಯಾಡಿ ಬೇಯಿಸಿ ತಿನ್ನಲು ಅಲ್ಲೊಂದು ತಂಡ ಮಚ್ಚು, ಕೊಡಲಿಗರಗಸ ತಂದು ಸುತ್ತುವರೆದಿದೆಆದಷ್ಟು ಬೇಗ ಕಡಿದು ಬುಡಮೇಲು ಮಾಡಿಮನೆ ಮಾರಿಗೆ ನಾಟಾ ಮಾಡಿಸಲುಓಲೈಕೆಯ ಒಲೆ ಉರಿಸಲು ಇಲ್ಲೊಂದು ಸಮೂಹ ಹೊಂಚಿ ಕೂತಿದೆಗಾಳಿಗೋ, ಮಳೆಗೋ ಬಿದ್ದ ಕೂಡಲೇ ಮರಆ ಜಾಗ ಕಬ್ಜಾ ಮಾಡುವ ಹುನ್ನಾರ….. ಪ್ರಕೃತಿಯ ಸುಕೃತಿಗಳಾದಮರ ಗಿಡ ಬಳ್ಳಿಯ ಪರಿವಾರವನ್ನುನೆಟ್ಟು ಬೆಳೆಸದೇ ಅಟ್ಟು ಉಣ್ಣುವಪರಮ ಸ್ವಾರ್ಥಿಗಳೀ ನೀಚ ನಡೆಗೆಕಲ್ಪವೃಕ್ಷಗಳ ಕಲ್ಪನಾತೀತ ವೇದನೆಗೆಮುಗಿಲು ಕೆಂಡ, ನೆಲದ ಎದೆ ಅಗ್ನಿಕುಂಡ ! ಮಹಾಂತೇಶ್‌ ಬಿ ನಿಟ್ಟೂರು    

ಮಹಾಂತೇಶ್‌ ಬಿ ನಿಟ್ಟೂರು ಅವರ ಕವಿತೆ “ನೆಲದ ಎದೆ ಅಗ್ನಿಕುಂಡ” Read Post »

ಕಾವ್ಯಯಾನ

ನಿರಂಜನ ಕೇಶವ ನಾಯಕ ಅವರ ಕವಿತೆ “ಇಂಗದ ಬಾಯಾರಿಕೆ”

ಕಾವ್ಯ ಸಂಗಾತಿ ನಿರಂಜನ ಕೇಶವ ನಾಯಕ “ಇಂಗದ ಬಾಯಾರಿಕೆ” ​ಬಿಸಿಲ ಶಲಾಕೆಇಳಿದು ಚುಚ್ಚಿದೆಹೃದಯದಟ್ಟದ ಆಳಕೆ;ಬತ್ತಿಸಿ ಪ್ರಾಣದ ಒರತೆಯಉಳಿದಿದೆ— ಇಂಗದ ಬಾಯಾರಿಕೆ. ​ಅರಿಯದ ನೋವುಅಸ್ಥಿ-ಮಾಂಸವ ಕೊರೆಯಲು;ಬೆವರಿನ ನದಿಯಲಿಹುಡುಕುವ ಹಾದಿಯೇಬಸವಳಿದ ಮನಕೆ ಕಿರು ಆಸರೆ. ​ಹೆಜ್ಜೆಗಳು ಭಾರವಾಗಿ,ಬೆಳಕೇ ಬೆಂಕಿಯ ಮಳೆಯಾಗಿ;ದಿಗಂತದಲಿ ನಿಂತುಜೀವ ಹಿಂಡುವಾಗ—ಸೋಲೊಪ್ಪದೆ ವಿಧಿಯಿಲ್ಲವೇ? ನಿರಂಜನ ಕೇಶವ ನಾಯಕ

ನಿರಂಜನ ಕೇಶವ ನಾಯಕ ಅವರ ಕವಿತೆ “ಇಂಗದ ಬಾಯಾರಿಕೆ” Read Post »

ಕಾವ್ಯಯಾನ, ಗಝಲ್

ಮಾಜಾನ್ ಮಸ್ಕಿ “ಬೆನ್ನಿಗೆ ಬಿದ್ದ ಹಸಿವು”

ಕಾವ್ಯ ಸಂಗಾತಿ ಮಾಜಾನ್ ಮಸ್ಕಿ “ಬೆನ್ನಿಗೆ ಬಿದ್ದ ಹಸಿವು” ಬೆಂದ ಜೀವದ ಬೇಗೆನಂದಿಸುವವರು ಯಾರುಹಸಿವಿನ ನರಳಾಟದಲ್ಲಿಸಾಯುತ್ತಿರುವವರು ನಾವು ಸಂಕಟದಲ್ಲಿ ಕೂಗಾಡಿದರೆಮೂರಡಿಯಲ್ಲಿ ಹೂಳುವರುತೋಪು ಬಂದೂಕುಗಳಿಲ್ಲದೆಹತವಾಗುತ್ತಿರುವ ಜೀವಗಳು ಹಸಿವಿನ ಚೀಲ ಬೆನ್ನು ಏರಿದೆಶಾಂತಿ ನೆಮ್ಮದಿಯ ವೇದಾಂತಗುನುಗುಟ್ಟುತ್ತಾ ಕಿವಿ ತಟ್ಟಿದೆಮೋಸ ವಂಚನೆ ಕೊರಳ ಉರುಳಾಗಿ ಬಿದ್ದಿವೆ ಬಾಳೊಂದು ಮಾಯೆ ಎಂದರು ಅನುಭಾವಿಗಳುಆಸೆಯೇ ದುಃಖಕ್ಕೆ ಮೂಲವೆಂದ ಬುದ್ಧಈ ಎಲ್ಲಕೂ ಕಡಿವಾಣ ಇಲ್ಲದ ಹಸಿವೆಂಬ ಮಾಯೆಮೆರೆಯುತ್ತಿದೆ ಏಕೆ? ಎಲುಬಿಲ್ಲದ ನಾಲಿಗೆಬಯಸುತ್ತಿದೆ ರುಚಿಹಸಿವು ತಣಿಸುವ ಮಂತ್ರವೇದಾಂತ ಯಾವುದಾದರೂ ಇದೆಯೇ ತಿಳಿಸು ಮನವೇ…ಒಮ್ಮೆ ತಿಳಿಸು ಮನವವೇ… ಮಾಜಾನ್ ಮಸ್ಕಿ

ಮಾಜಾನ್ ಮಸ್ಕಿ “ಬೆನ್ನಿಗೆ ಬಿದ್ದ ಹಸಿವು” Read Post »

ಕಾವ್ಯಯಾನ

ವಾಣಿ ಯಡಹಳ್ಳಿಮಠ್ ಅವರ ಗಜಲ್

ಕಾವ್ಯ ಸಂಗಾತಿ ವಾಣಿ ಯಡಹಳ್ಳಿಮಠ್ ಗಜಲ್ (ಲಕ್ಷ್ಮಣ ಶರೆಗಾರ ಸರ್ ಅವರ ಗಜಲ್ ಒಂದರಿಂದ ಪ್ರೇರಿತ )ನನಗೆಲ್ಲವೂ ಆದವನ ಮೇಲೆಯೇ, ಎಲ್ಲರಿಗಿಂತಹೆಚ್ಚು ಶಿಕಾಯತ್ ಇವೆಯೆಂದು ಯಾರಿಗೆ ಹೇಳಲಿಬೇಹಿಸಾಬ್ ಕೋಪದ ಹಿಂದೆಯೇ ಬೇಯಿಂತಹಾಇಷ್ಕ್ ಇದೆಯೆಂದು ಯಾರಿಗೆ ಹೇಳಲಿ ಸಾಗರದಷ್ಟು ಕೋಪವೇ ಇರಲಿದುನಿಯಾದ ಸಾವಿರ ಜನರ ಮೇಲೆ ಸಾಕಿಅವನೊಬ್ಬನ ಮುಂದೆ ರಚ್ಛೆ ಹಿಡಿದು,ಕೂಗಾಡುವುದುರೂಹ್ ನ ಆಸೆಯೆಂದು ಯಾರಿಗೆ ಹೇಳಲಿ ಹುರುಳಿಲ್ಲದ ರಸ್ಮ್,ರಿವಾಜ್ ಗಳುನಮ್ಮನು ಬಂಧಿಸಲೆತ್ನಿಸಿ ಸೋಲುತಿಹವು ಎಲ್ಲದಕ್ಕೂ ಮೀರಿದ,ಹೆಸರಿಡಲಾಗದ ಬಾಂಧವ್ಯಅವನೊಂದಿಗೆ ಬೆಸೆದಿದೆಯೆಂದು ಯಾರಿಗೆ ಹೇಳಲಿ ಎಲ್ಲವೂ, ಎಲ್ಲರೂ ತನ್ನ ಹಿಸಾಬ್ ನಂತೆಯೇನಡೆಯಬೇಕೆನ್ನುವುದು ಈ ಜಗತ್ತುಇದೆ ಖಾಯಾಲಿಯಲಿ ಅದೆಷ್ಟು ಖಾಬ್ ಗಳುಕಬ್ರಸ್ತಾನ್ ಸೇರಿವೆಯೆಂದು ಯಾರಿಗೆ ಹೇಳಲಿ ಅವನನು ನೆನೆಯಲೂ ಪರವಾನಗಿಯೇ ಇಲ್ಲ,  ಈ ವಾಣಿಗೆ ಈ ಜನುಮದಲಿಆದರೂ  ದೇವರೆದುರು ಕೈಮುಗಿವಾಗೊಮ್ಮೆ,ಅವನನೇ ಕೇಳುವೆಯೆಂದು ಯಾರಿಗೆ ಹೇಳಲಿ ವಾಣಿ ಯಡಹಳ್ಳಿಮಠ್

ವಾಣಿ ಯಡಹಳ್ಳಿಮಠ್ ಅವರ ಗಜಲ್ Read Post »

ಕಾವ್ಯಯಾನ

ಎಮ್ಮಾರ್ಕೆ ಗಜಲ್

ಕಾವ್ಯ ಸಂಗಾತಿ ಎಮ್ಮಾರ್ಕೆ ಗಜಲ್ ನಾ ನಿನ್ನ ಹಿಂಬಾಲಿಸುತಿರಲು ಹಿಂತಿರುಗಿ ನೋಡಬಾರದೇನೀ ನನ್ನನೇ ಆವರಿಸುತಿರಲು ಒಂಟಿತನವ ದೂಡಬಾರದೇ ಮನೆಯ ದೀಪ ಬೆಳಗುವವಳೇ ಮನದ ತಾಪ ಕಳೆವವಳೇಮನಸೊಳು ಮನೆಯ ಮಾಡಿ ಕನಸಿನಲ್ಲೂ ಕಾಡಬಾರದೇ ಬಾರೆಂದು ಕೂಗುವವಳೇ ಬಾಳ ಜೋಕಾಲಿ ತೂಗುವವಳೇರಾಗ ದ್ವೇಷಗಳ ಮರೆಸುವ ಹಾಡೊಂದನು ಹಾಡಬಾರದೇ ಕಷ್ಟಸುಖದಲಿ ಕೈ ಹಿಡಿವವಳೇ ಜೊತೆಯಾಗಿ ದುಡಿವವಳೇನದಿ ಸಾಗರ ಸೇರುವಂತೆಯೇ ಬಂದೆನ್ನನು ಕೂಡಬಾರದೇ ಐರಾಣಿಯ ಹೊರುವವಳೇ ರಾಣಿಯಾಗಿ ಮೆರೆಯುವಳೇಕಡಿತನ ಕುಂಬಾರನ ಜತೆಗಿರುವ ಆಣೆಯ ಮಾಡಬಾರದೇ ಎಮ್ಮಾರ್ಕೆ

ಎಮ್ಮಾರ್ಕೆ ಗಜಲ್ Read Post »

ಕಾವ್ಯಯಾನ

ನಾಗರಾಜ ಬಿ ನಾಯ್ಕ “ರೆಪ್ಪೆಯಾಚೆಯ ಚಿತ್ರಗಳು…….”

ಕಾವ್ಯ ಸಂಗಾತಿ ನಾಗರಾಜ ಬಿ ನಾಯ್ಕ “ರೆಪ್ಪೆಯಾಚೆಯ ಚಿತ್ರಗಳು…….” ಎರಡು ಕಣ್ಣುಗಳಕಾಂತಿಯಲ್ಲಿ ಹರಡಿದಚಿತ್ರಗಳ ಹುಡುಕುತ್ತಾಸಾಗಿದರೆ ಕಾಣದ ಮಾತಿನ ಮೌನಓರೆನೋಟದ ಬಿಗುಮಾನರೆಪ್ಪೆಯಾಚೆಗಿನ ಕುಡಿನೋಟದೂರದುತ್ತರದ ಮಾತುಗಳಲ್ಲಿ ಅವಿತ ಒಂದು ಮಾತಿನ ಕಥೆಸಾಲುಗಳಲ್ಲಿ ಹುಡುಕಾಡಿಕೊನೆಯಲ್ಲಿ ಸಿಕ್ಕ ಒಂಟಿ ಪದಮುಖದೊಳಗೆ ಒಲವಿನಒರತೆಯ ಚೆಲ್ಲಿ ನಗುವಾದಮೊಗದ ನಲಿವಿನ ಇರುಳುಕತ್ತಲೆಗೆ ಎಸೆದಬೆಳಕಿನ ಹೊಸ ಸಾಲಿನದೀಪದ ಹಣತೆಯ ಸಮಯದಿಟವಾದ ಹಕ್ಕಿ ಗೂಡಿನಸಂವೇದನೆ ಮತ್ತು ಹೊಸತನಎಲ್ಲವೂ ಅಂಕು ಡೊಂಕುದಾರಿಯ ನಿರಂತರಚಲನೆಯ ಪ್ರಯತ್ನರೆಪ್ಪೆಯೊಗಳಗಿನ ಗತದನಡುವೆ ಕಾಣದೇ ಮೌನವಾಗಿಉಳಿವ ಸಣ್ಣ ಇರುವೆಪಯಣದ ಪರಿಚಯಪ್ರಶ್ನೆ ಪರಿವೀಕ್ಷಣೆಯ ಆಚೆದೃಢವಾಗಿ ನಿಂತ ಪುಟ್ಟ ದೋಣಿರೆಪ್ಪೆಯ ಒಳಗೆ ಕುಳಿತಚಿತ್ರಗಳಲ್ಲಿ ಕಾಣದ ಗೆರೆಗಳಕಾಣುವ ಚಿತ್ರಗಳು ಸುಮ್ಮನೇನಮ್ಮದು ಎಂಬಂತೆ……… ನಾಗರಾಜ ಬಿ ನಾಯ್ಕ. 

ನಾಗರಾಜ ಬಿ ನಾಯ್ಕ “ರೆಪ್ಪೆಯಾಚೆಯ ಚಿತ್ರಗಳು…….” Read Post »

ಕಾವ್ಯಯಾನ

ರಾಧಾ ಹನುಮಂತಪ್ಪ ಟಿ ಹರಿಹರ ಅವರ ಕವಿತೆ “ಎ.ಐ. ತಮ್ಮಾ”

ಕಾವ್ಯ ಸಂಗಾತಿ ರಾಧಾ ಹನುಮಂತಪ್ಪ ಟಿ ಹರಿಹರ “ಎ.ಐ. ತಮ್ಮಾ” *ಎಐ ತಮ್ಮ ಎಐ ತಮ್ಮ ನೀನು ಎಲ್ಲಿಂದ ಬಂದೆ ಎಲ್ಲಿಂದ ಬಂದೆ ಹೇಳು ನಿನಗಿಷ್ಟು ಮಾಹಿತಿ ಎಲ್ಲಿಂದ ಬಂತು ಹೇಳು* *ನಿಮಿಷ ಸೆಕೆಂಡ್ ಗಳಲ್ಲಿ ನಮ್ಮಯ ಪ್ರಶ್ನೆಗೆ ಉತ್ತರವ ಹೇಗೆ ಹುಡುಕುವೆಯಾ ತಮ್ಮ ಹೇಗೆ ಹುಡುಕುವೆಯಾ ತಮ್ಮ ಹೇಳು* *ನೆಮ್ಮದಿ ಶಾಂತಿ ಬೇಕು ಎಂದರೂ ಅದಕ್ಕೆ ಪ್ರತಿಯಾಗಿ ಉತ್ತರವ ಕೊಡುವ ನಿನ್ನ ಚಾಣಾಕ್ಷ ಬುದ್ಧಿಗೆ ನಾನು ಸೋತೆನು ತಮ್ಮ ನಾನು ಸೋತೆನು ತಮ್ಮ ನೀ ಎಲ್ಲಿರುವೆ ಹೇಳು* *ಎಲ್ಲ ಕ್ಷೇತ್ರಗಳಲ್ಲೂ ನಿನ್ನದೇ ಹಾವಳಿ ತಮ್ಮ ಈ ಮನುಷ್ಯನೇ ಮಾಡಿದನಂತೆ ನಿನ್ನನು ಇದು ನಿಜವೇ ತಮ್ಮ ಇದು ನಿಜವೇ ತಮ್ಮ ನೀನು ಹೇಳು* *ಎಐ ತಮ್ಮ ನೀನು ಎಲ್ಲಿಂದ ಬಂದೆ ನಿನ್ನಿಂದ ಸಕಲ ಜೀವಿಗಳ ಕುಲಕ್ಕೆ ತೊಂದರೆ ಯಾಗದು ಎಂದು ಹೇಳು ತಮ್ಮ ತೊಂದರೆ ಯಾಗದು ಎಂದು ಹೇಳು ಎಐ ತಮ್ಮ ಹೇಳು* ರಾಧಾ ಹನುಮಂತಪ್ಪ ಟಿ ಹರಿಹರ

ರಾಧಾ ಹನುಮಂತಪ್ಪ ಟಿ ಹರಿಹರ ಅವರ ಕವಿತೆ “ಎ.ಐ. ತಮ್ಮಾ” Read Post »

You cannot copy content of this page

Scroll to Top