ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

ಎಮ್ಮಾರ್ಕೆ ಅವರ ಗಜಲ್

ಕಾವ್ಯ ಸಂಗಾತಿ ಎಮ್ಮಾರ್ಕೆ ಗಜಲ್ ಬಾಳ ಸಂತೆಯೊಳಗೆ ಭಾವಗಳನ್ನು ಬಿಕರಿಗಿಡಲಾಗಿದೆಮೋಸ ಹೋದ ಹೃದಯಗಳನ್ನು ಹರಾಜಿಗಿಡಲಾಗಿದೆ ಪ್ರೀತಿ ಪ್ರೇಮಗಳೆಲ್ಲವೂ ಸಹಿತ ಆಟದ ವಸ್ತುಗಳಾಗಿವೆಹಾರೋ ಹಕ್ಕಿಗಳ ಪಂಜರದೊಳಗೆ ಬಂಧಿಸಿಡಲಾಗಿದೆ ದೂರಾದವರ ಬಗ್ಗೆ ದೂರನು ಕೊಡವುದಾದರೂ ಹೇಗೆ?ಸುತ್ತಿದ ಗಿಡಮರ ಬೆಟ್ಟಗುಡ್ಡದ ಸಾಕ್ಷಿ ನಿರಾಕರಿಸಲಾಗಿದೆ ಮುಖಕ್ಕಷ್ಟೇ ಅಲ್ಲ ಮನಸಿಗೂ ಬಣ್ಣವ ಬಳಿಯಲಾಗಿದೆದೋಸೆಯಷ್ಟೇ ಸಲೀಸಾಗಿ ಮಾತನು ತಿರುಚಿಡಲಾಗಿದೆ ಕುಂಬಾರನ ಎದೆಕಲಶದ ತುಂಬಾ ಪರಿಶುದ್ಧ ಪ್ರೀತಿಯಿದೆಸುಖಾಸುಮ್ಮನೆ ಅನುಮಾನದ ಬೀಜ ಎದೆಗಿಳಿಸಲಾಗಿದೆ ಎಮ್ಮಾರ್ಕೆ

ಎಮ್ಮಾರ್ಕೆ ಅವರ ಗಜಲ್ Read Post »

ಕಾವ್ಯಯಾನ

ಅನುರಾಧಾ ರಾಜೀವ್ ಅವರ ಕವಿತೆ “ಸ್ಪಂದನ”

ಕಾವ್ಯ ಸಂಗಾತಿ ಅನುರಾಧಾ ರಾಜೀವ್ “ಸ್ಪಂದನ” ಮುಂಜಾನೆಯ ಮಂಜಿನಲಿ ಪ್ರಕೃತಿನಾಟ್ಯವಾಡುತ ಬಂದಳೇಅಂಜುತ್ತಾ ಅಳುಕುತ್ತಾ ಇಳೆಯಸೌಂದರ್ಯ ನೋಡಿ ನಿಂದಳೇ ಜೀವನದ ಅನಿತ್ಯತೆ ಅರೆಕ್ಷಣ ಬಂದುಹೋಗುವ ಮಿಂಚಿನಂತೆಕವಿಹೃದಯ ಮಿಡಿಯುತಿದೆ ಮೆಲ್ಲನೆಎದೆಯ ಸಂವಹನದಂತೆ ಕೊಳಲ ಕರೆಯಲಿ ಅದೆಂತಹ ಉತ್ಕೃಷ್ಟಪ್ರೇಮದ ಉತ್ಕಟತೆಕೇಳಿದಷ್ಟೂ ತಳಮಳ ಅಂತರಾಳದಲಿಬೇಕಿದೆ ಕ್ಷಮತೆ ಮಿಲನದ ಹೂರಣ ತುಂಬಿಟ್ಟೆ ಮನದಿಸವಿಯುವ ಆಕಾಂಕ್ಷೆಸಲಿಲದ ಬಿಂದುವಾಗಿ ಹರಿಯುತಬೇಡುವೆ ಒಲವ ಬಿಕ್ಷೆ ಬಚ್ಚಿಟ್ಟ ಭಾವದ ಪೆಟ್ಟಿಗೆಯ ಕಾಯುತ್ತಾಕುಳಿತಿರುವೆ ತೆರೆಯಲುಮುಚ್ಚಿಟ್ಟ ಬೆಚ್ಚನೆಯ ಮಾತುಗಳ ನಿರೀಕ್ಷೆಒಲುಮೆಯ ಎರೆಯಲು ಅನುರಾಧಾ ರಾಜೀವ್

ಅನುರಾಧಾ ರಾಜೀವ್ ಅವರ ಕವಿತೆ “ಸ್ಪಂದನ” Read Post »

ಕಾವ್ಯಯಾನ, ಗಝಲ್

ಅರುಣಾ ನರೇಂದ್ರ ಅವರ ಗಜಲ್

ಕಾವ್ಯ ಸಂಗಾತಿ ಅರುಣಾ ನರೇಂದ್ರ ಗಜಲ್ ಅವನನ್ನು ಮೆತ್ತಗೆ ಮೇಣವಾಗಿಸುವ ಶಬ್ದಗಳ ಎಲ್ಲಿಂದ ತರಲಿ ಉರಿಯುವ ಕೋಪ ತಣ್ಣಗಾಗಿಸುವ ಪದಗಳ ಎಲ್ಲಿಂದ ತರಲಿ ಸ್ವರ ನುಡಿಸುವ ಕೊಳಲೇಕೋ ಉಸಿರು ಮರೆತು ಮೂಲೆ ಸೇರಿದೆಮನಕ್ಕೆ ಮುದ ನೀಡಿ ಖುಷಿಗೊಳಿಸುವ ಗೀತಗಳ ಎಲ್ಲಿಂದ ತರಲಿ ಅವನು ಎಲ್ಲವನ್ನು ಮರೆಯಬೇಕೆಂದು ಮಧು ಶಾಲೆ ಸೇರಿದ್ದಾನೆ ಮತ್ತೆ ಮತ್ತೆ ನನ್ನ ನೆನಪಾಗಿಸುವ ಚಿತ್ರಗಳ ಎಲ್ಲಿಂದ ತರಲಿ ಖಾಲಿಯಾಗಿರುವ ಬಟ್ಟಲನ್ನೇ ನೋಡಿ ಬಡ ಬಡಿಸುತ್ತಾನೆ ಅವನು ಜನುಮದ ಅನುಬಂಧ ತಿಳಿಸುವ ಉಸ್ತಾದ್ ಗಳ ಎಲ್ಲಿಂದ ತರಲಿ ಅವನಿಗಂತೂ ಗೊತ್ತಿದೆ ದಿನ್- ರಾತ್ ಅರುಣಾಕೊರಗುತ್ತಾಳೆಂದುಉದಾಸೀನಕ್ಕೆ ಮದ್ದರೆದು ಮೆಚ್ಚಿಸುವ ತಂತ್ರಗಳ ಎಲ್ಲಿಂದ ತರಲಿ ಅರುಣಾ ನರೇಂದ್ರ

ಅರುಣಾ ನರೇಂದ್ರ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಡಾ.ರೇಖಾಉದಯ್‌ ಅವರ ಗಜಲ್

ಕಾವ್ಯ ಸಂಗಾತಿ ಡಾ.ರೇಖಾಉದಯ್‌ ಗಜಲ್ ನಾನೆಂಬ ಅಹಂಕಾರ ನಿನ್ನನ್ನೇ ಸುಡುವುದು ಮರುಳೇಅಂತಿಮದಲ್ಲಿ ನಿನ್ನನ್ನೇ ನಾಶ ಮಾಡುವುದು ಮರುಳೇ. ಪ್ರೇಮ ಪ್ರೀತಿಯಲ್ಲಿ ಗೆಲ್ಲಬಹುದು ಜಗದ ಜೀವಿಗಳನ್ನದ್ವೇಷ ಹಗೆಗಳು ಪಾತಾಳಕ್ಕೆ ದೂಡುವುದು ಮರುಳೇ ಹಿರಿಯರು ಕಿರಿಯರೆಂಬ ಗೌರವ ನೀಡುವುದ ಕಲಿತುಕೋನಾನೆಂದು ಮೆರೆದರೆ ಆತ್ಮವೇ ಕಾಡುವುದು ಮರುಳೇ ಹಿತಚಿಂತಕರು ಹಿತಶತ್ರುಗಳ ಗುರುತಿಸುವುದ ತಿಳಿದುಕೋದುರ್ಬುದ್ಧಿಯೊಳಿದ್ದರೆ ವಿಧಿ ಬೇರೆ ಆಡುವುದು ಮರಳೇ ರೇಖೂ ಇರುವ ಬದುಕನು ಚಂದದಿ ಬದುಕಲು ಹೇಳಿಬಿಡುದುರುಳರ ಸಂಗದಿ ನಿನ್ನ ಬದುಕೇ ಕೆಡುವುದು ಮರುಳೇ ಡಾ.ರೇಖಾಉದಯ್

ಡಾ.ರೇಖಾಉದಯ್‌ ಅವರ ಗಜಲ್ Read Post »

ಕಾವ್ಯಯಾನ

ಡಾ. ಹೆಚ್. ನಟರಾಜ್ ಆರ್ಯ ಅವರ ಕವಿತೆ”ಮೌನ ಮಳೆ”

ಕಾವ್ಯ ಸಂಗಾತಿ ಡಾ. ಹೆಚ್. ನಟರಾಜ್ ಆರ್ಯ “ಮೌನ ಮಳೆ” ಮನೆ ತುಳಸಿ ಬಾಡಿತು,ಹೊಸ್ತಿಲ ದೀಪ ಆರಿತು;ಒಂದೇ ಸೂರಿನ ನೆರಳಲಿನಗುವು ಮೌನ ಸೇರಿತು. ಮಾತು ಹಕ್ಕಿ ಹಾರಿತು,ಮೌನ ಗೂಡು ಕಟ್ಟಿತು;ಕೈಯ ಸ್ಪರ್ಶವಿದ್ದರೂಮನಸು ದೂರ ಸರಿಯಿತು. ನಂಬಿಕೆ ಮೊಗ್ಗು ಬಾಡಿತು,ಸ್ವಾರ್ಥ ಗಾಳಿ ಬೀಸಿತು;ಅರಳುವ ಮೊದಲೇ ಪ್ರೀತಿಧೂಳಾಗಿ ಉದುರಿತು. ಕಾದ ಕಣ್ಣ ಬೆಳಕಲಿಹೊಸ್ತಿಲ ನೆರಳು ನಿಂತಿತು;ಹೆಜ್ಜೆ ಸದ್ದು ಮೂಡದೆಸಂಜೆ ಮೌನ ಹರಡಿತು ಒಣ ಮಣ್ಣ ಮಡಿಲಲಿಬೀಜ ಇನ್ನೂ ಮಲಗಿತು;ಪ್ರೀತಿಯ ಮೊದಲ ಹನಿಯಲಿಬಂಧ ಮತ್ತೆ ಚಿಗುರಿತು. ✍️ ಡಾ. ಹೆಚ್. ನಟರಾಜ್ ಆರ್ಯ

ಡಾ. ಹೆಚ್. ನಟರಾಜ್ ಆರ್ಯ ಅವರ ಕವಿತೆ”ಮೌನ ಮಳೆ” Read Post »

ಕಾವ್ಯಯಾನ

ಡಾ.ಗೀತಾ ದಾನಶೆಟ್ಟಿ ಅವರ ಕವಿತೆ “ಮೌನ”

ಕಾವ್ಯ ಸಂಗಾತಿ ಡಾ.ಗೀತಾ ದಾನಶೆಟ್ಟಿ “ಮೌನ” ಮೌನವೆಂದರೆ ಮಾತಿಲ್ಲದ ಸ್ಥಿತಿಯಲ್ಲಮನದ ಮಾತುಗಳ ಸಮ್ಮಿಲನ ಮೌನವೆಂದರೆ ಶೂನ್ಯವಲ್ಲಸಾವಿರ ಭಾವನೆಗಳ ಸಾಗರ ಮೌನವೆಂದರೆ ಪದಗಳ ಅಂತ್ಯವಲ್ಲಅಂತರಂಗದ ಅರಿವಿನ ಆರಂಭ ಮೌನವೆಂದರೆ ಅಂತರವಲ್ಲಜೀವ ಭಾವದ ಸೇತುವೆ ಮೌನವೆಂದರೆ ದೌರ್ಬಲ್ಯವಲ್ಲಸಂಯಮ ಸಹನೆಯ ಪ್ರತಿಕ ಮೌನವೆಂದರೆ ಕತ್ತಲೆಯಲ್ಲಆತ್ಮಜ್ಞಾನದ ಹೊಂಬೆಳಕು ಮೌನವೆಂದರೆ ಖಾಲಿತನವಲ್ಲಸಚ್ಛಿಂತನೆಗಳ ಚಿಲುಮೆ ಮೌನವೇ ಆತ್ಮಾವಲೋಕದ ಆಗರಮೌನವೇ ಮನಶಾಂತಿಯ ಮಂದಿರ ಡಾ.ಗೀತಾ ದಾನಶೆಟ್ಟಿ

ಡಾ.ಗೀತಾ ದಾನಶೆಟ್ಟಿ ಅವರ ಕವಿತೆ “ಮೌನ” Read Post »

ಕಾವ್ಯಯಾನ

ಚಂದ್ರು ಪಿ ಹಾಸನ್ “ಅಪ್ಪನಿಗೆ ಅರ್ಪಣೆ”

ಕಾವ್ಯಸಂಗಾತಿ ಚಂದ್ರು ಪಿ ಹಾಸನ್ “ಅಪ್ಪನಿಗೆ ಅರ್ಪಣೆ” ಮಕ್ಕಳ ಮೊದಲ ಹೀರೋ ಅಪ್ಪನೆಂಬ ದಿವ್ಯಪುರುಷಈ ಜಗದಲ್ಲಿ ಕಾಣಸಿಗುವ ಒಂದು ಅದ್ಭುತ ಹರುಷ ಮನದಲ್ಲಿ ಮನೆ ಮಾಡುವ ಈ ನಗುವಿನ ಸ್ಪರುಷಜೊತೆಯೊಳು ಸದಾ ಇದ್ದರೆ ಎಲ್ಲಿಲ್ಲದ ಒಂದು ಪೌರುಷ ಹಗಲಿರಲು ದುಡಿದು ದಣಿದು ಬೆವರ ಹನಿಯ ಹರಿಸುತ್ತಾ ಸಂಸಾರಕ್ಕೆ ನೀನಾದೆ ಗಟ್ಟಿ ಶಕ್ತಿ ಜವಾಬ್ದಾರಿಯೊಳು ಕಟು ಭಕ್ತಿ ಹಗಲು ಇರುಳು ಬೆಳಗಲು ಇರುವಂತೆ ಸೂರ್ಯ ಚಂದ್ರಮಕ್ಕಳ ಮುದನಗು ಮೂಡಲುಇರೋತ್ಯಾಗಿ ಅಪ್ಪನೆಂಬ ವಜ್ರ ಹೃದಯದಲ್ಲಿ ಜನ್ಮಿಸಿದಈ ಭಕ್ತಿಯ ಸಾಲುಗಳು ನಿನಗರ್ಪಣೆ ಓ ಜನ್ಮದಾತನೆ ಅಪ್ಪನೆಂಬ ಸ್ಪೂರ್ತಿದಾತನೆ ಚಂದ್ರು ಪಿ ಹಾಸನ್

ಚಂದ್ರು ಪಿ ಹಾಸನ್ “ಅಪ್ಪನಿಗೆ ಅರ್ಪಣೆ” Read Post »

ಕಾವ್ಯಯಾನ, ಗಝಲ್

ಡಾ.ರೇಣುಕಾತಾಯಿ. ಸಂತಬಾ ಅವರ ಗಜಲ್

ಕಾವ್ಯ ಸಂಗಾತಿ ಡಾ.ರೇಣುಕಾತಾಯಿ. ಸಂತಬಾ ಗಜಲ್ ಬಾಳ ತಿರುಗುಣಿಯಲಿ ತಿರುಗಿ ತಿರುಗಿ ತಂದನು ತರಹೇವಾರಿ ಕನಸನುಸಂಸಾರದ ಸಂತೆಯಲಿ ತೂಗಿ ತೂಗಿ ತಂದನು ತರಹೇವಾರಿ ಬಣ್ಣವನು.ll ರಾತ್ರಿ ಹಗಲೆನ್ನದೆ ಗಾಣದ ಎತ್ತಿನಂತೆ ದಣಿಯಲಾರದ ದಣಿಯಿವನು,ದೋತರದಲಿ ಕಷ್ಟದ ಗಂಟು ಕಟ್ಟಿ ತಂದನು ತರಹೇವಾರಿ ಸುಖವನು.ll ಬಿಸಿಲು ಮಳೆಯನ್ನದೆ ದುಡಿ ದುಡಿದು ಸಣ್ಣಗೇನೆ ನರಳಿದವನು,ಮಮತೆಯಲಿ ಬಾನಷ್ಟು ಬಾಗಿ ತಂದನು ತರಹೇವಾರಿ ನಕ್ಷತ್ರವನು.ll ಬೊಗಸೆಯಷ್ಟು ನಿದ್ರೆಯನು ಮಾಡಿ ಸಾಗರದಷ್ಟು ಎಚ್ಚರವಿದ್ದವನು.ಗಂಧದಂತೆ ನುಣ್ಣಗೆ ತೇದು ತೇದು ತಂದನು ತರಹೇವಾರಿ ಸುಗಂಧವನು.ll ತಾಯಿಗೆ ಕೈ ತುಂಬಾ ಪ್ರೀತಿಯ ಮಲ್ಲಿಗೆ ಕೊಟ್ಟು ಮೆಲ್ಲಗೆ ಸರಿದವನು,ಅವ್ವನ ಸಿಡುಕಿಗೆ ನಕ್ಕು ಮರಳಿ ತಂದನು ತರಹೇವಾರಿ ಸಾಮಾನನು.ll ಡಾ.ರೇಣುಕಾತಾಯಿ. ಸಂತಬಾ.

ಡಾ.ರೇಣುಕಾತಾಯಿ. ಸಂತಬಾ ಅವರ ಗಜಲ್ Read Post »

ಕಾವ್ಯಯಾನ, ಗಝಲ್

 ಮಧು ವಸ್ತ್ರದ ಅವರ ಗಜಲ್               

ಕಾವ್ಯ ಸಂಗಾತಿ  ಮಧು ವಸ್ತ್ರದ ಗಜಲ್                ವೈಶಾಖದ ಶಾಖದಿ ಬಳಲಿ ತಪಿತಳಾಗಿಹ ಮಹಾಇಳೆಗೆ ತಂಪನು ನೀಡಲು ಬಾ ಮುಂಗಾರು ಮಳೆಯೇವಿಶಾಖದ ಹಿಂಗಾರು ಬರುವವರೆಗೂ ಮೆರೆವ ಭುವಿಯ ಚೆಲುವ ನೋಡಲು ಬಾ ಮುಂಗಾರು ಮಳೆಯೇ ಅಂಜೂರ,ಖರ್ಜೂರದ ಮರಗಳು ಚಿಗುರನೊಡೆಯದೆ ನಿನ್ನ ಆಗಮನದ ನಿರೀಕ್ಷೆಯಲಿ ಕುಳಿತಿಹವುಬಂಜರು ಭಾವದಿ ನೊಂದಿಹ ‌ಹೊಲಗದ್ದೆಗೆ ಅಮೃತ ಸಿಂಚನ ಮಾಡಲು ಬಾ ಮುಂಗಾರು ಮಳೆಯೇ ಬತ್ತಿ ತಳ ಕಾಣುತಿರುವ ಕೆರೆ ಬಾವಿಗಳಲ್ಲಿ ಮತ್ತೆ ಹೊಸ ಚೈತನ್ಯಜಲವ ತುಂಬಿಸುವ ಹೊಣೆ ನಿನ್ನದಾಗಿದೆಉತ್ತು ಬಿತ್ತಿ, ಸಮೃದ್ಧ ಫಸಲ ಬಯಸುವ ರೈತನೊಡನೆ ನೇಗಿಲ ಹೂಡಲು ಬಾ ಮುಂಗಾರು ಮಳೆಯೇ ಓಡುತಿಹ ಕರಿಮೋಡಗಳ ಕಂಡು ಗಿರಿನವಿಲು, ಮಳೆ ಸುರಿಸಿರಿ, ನಾ ಗರಿಗೆದರಿ ನರ್ತಿಸುವೆ ಎನುತಿದೆಕಾಡಿನ ಕೋಗಿಲೆಯೊಡನೆ ಮೇಘಮಲ್ಹಾರ ರಾಗದಿ ಋತುಗೀತೆ ಹಾಡಲು ಬಾ ಮುಂಗಾರು ಮಳೆಯೇ ಅಡ್ಡಾದಿಡ್ಡಿಯಾಗಿ ಸುರಿಯುತ ನಿನ್ನೆಲ್ಲ ಉತ್ಸಾಹ ಉಲ್ಲಾಸವನು ಧರಣಿಯೊಡನೆ ಹಂಚಿಕೊಂಡುಬಿಡುಗುಡ್ಡಗಾಡಿನಿಂದಿಳಿದು ಶರಧಿಯ ಸೇರಲು ತುಡಿವ ನದಿಯೊಡನೆ ಓಡಲು ಬಾ ಮುಂಗಾರು ಮಳೆಯೇ ಗುಡುಗು ಸಿಡಿಲುಗಳ ನಡುವೆ ಮಿಂಚುತ ಆರ್ಭಟಿಸುತ ಆಕಾಶದಿಂದ ಧರೆಯೆಡೆಗೆ ಸುರಿಯಬಾರದೇಗಡಗಡ ನಡುಗುತ ಶಾಲೆಗೆ ಹೋಗುವ ಮಕ್ಕಳೊಡನೆ ನೀರಾಟ ಆಡಲು ಬಾ ಮುಂಗಾರು ಮಳೆಯೇ ಮಧುರ ಭಾವದ ಕಬ್ಬಿಗರ ಮನದಲಿ ಮೊದಲ ಮಳೆ ಸ್ಪೂರ್ತಿ ಕಾರಂಜಿಯನು ಉಕ್ಕಿಸಬಲ್ಲದುಅಧರದಂಚಲಿ ನಗೆ ಸೂಸುವಂತಹ ಚೆಂದದ ಕವಿತೆಯಾಗಿ ಮೂಡಲು ಬಾ ಮುಂಗಾರು ಮಳೆಯೇ ————- ಮಧು ವಸ್ತ್ರದ

 ಮಧು ವಸ್ತ್ರದ ಅವರ ಗಜಲ್                Read Post »

ಕಾವ್ಯಯಾನ, ಗಝಲ್

ವಾಣಿ ಯಡಹಳ್ಳಿಮಠ ಅವರ ಗಜಲ್

ಕಾವ್ಯ ಸಂಗಾತಿ ವಾಣಿ ಯಡಹಳ್ಳಿಮಠ ಗಜಲ್ ಗಜಲ್(ಅರುಣಾ ಮೇಡಂ ಅವರ ಗಜಲ್ ನಿಂದ ಪ್ರೇರಿತ ) ಅಂತರವಿದ್ದರೂ ಅಂತರಂಗ ಸೇರುವ ನಿನ್ನ ಕಲೆಗೆ ಏನೆನ್ನಲಿಇರುಳಾದರೆ ಕಣ್ಣ ಸೇರಿ ಕನಸಾಗುವ ಪರಿಗೆ ಏನೆನ್ನಲಿ ನಾ ನೋಡಿದರೇ, ನಾನೇ ಕಾಣಿಸಬೇಕಲ್ಲವೇ ಸಾಕಿದರ್ಪಣದಿ ನೀ, ನನ್ನ ಪ್ರತಿಬಿಂಬವಾಗುವ ಪ್ರೀತಿಗೆ ಏನೆನ್ನಲಿ ಮೌನವೂ,ಪದಗಳಾಗಿ ಮನ ಸೇರಲು ಹಪಹಪಿಸುವವೇನನ್ನ ಏಕಾಂತಕೆ,ನೀ ದನಿಯಾಗುವ ನಡೆಗೆ ಏನೆನ್ನಲಿ ಪ್ರತಿ ನೋವಿಗೂ ಹಕೀಮನಲ್ಲಿ ಔಷಧಿಯಿರುವುದಿಲ್ಲ ನಿಜನೀ ಕಾಣದ ಗಾಯಗಳನೂ ಮಾಯಿಸುವ ಮೋಡಿಗೆ ಏನೆನ್ನಲಿ ಬಿಸಿಲಿಗೆ ವಾಣಿ ನಿಂತರೇ,ನೀ ಬೆವರುವೆಯಾ ಗೆಳೆಯದೂರವಿದ್ದು ಹೀಗೆ ಸನಿಹವಾಗುವ ಸನ್ನೆಗೆ ಏನೆನ್ನಲಿ ವಾಣಿ ಯಡಹಳ್ಳಿಮಠ

ವಾಣಿ ಯಡಹಳ್ಳಿಮಠ ಅವರ ಗಜಲ್ Read Post »

You cannot copy content of this page

Scroll to Top