ಎಸ್. ಆರ್. ಆರ್. ವಿಜಯಲಕ್ಷ್ಮಿ ಅವರ ಕವಿತೆ “ನೀಲ ನಭದೊಳಗಣ ಮುಗಿಲ ದಿಬ್ಬಣ”
ಕಾವ್ಯ ಸಂಗಾತಿ ಎಸ್. ಆರ್. ಆರ್. ವಿಜಯಲಕ್ಷ್ಮಿ “ನೀಲ ನಭದೊಳಗಣ ಮುಗಿಲ ದಿಬ್ಬಣ” ನೀಲ ನಭದೊಳಗಣಮುಗಿಲ ದಿಬ್ಬಣ. ನೀಲ ನಭ ದೊಳಗಣಮುಗಿಲ ಮೇಘಗಾನಸೋಜಿಗದ ಸೊಬಗುಸೃಜಿಸಿದೆ ರಿಂಗಣ ಬಂಗಾರ ವರ್ಣದ ಬಾಂದಳದೊಡೆಯಭಾಸ್ಕರನ ಶೃಂಗಾರಕಲ್ಪಲೀಲಾ ಮಗದೊಮ್ಮೆಮರು ಹುಟ್ಟು ಪಡೆದಿದೆ ಮುಸ್ಸಂಜೆ ಯು ರವಿಯರಶ್ಮಿ ಯೊಳಗೆ ಮಿಂದೆದ್ದ. ಉಷೆಯ ಉಸುಕುರಂಗೇರಿ ಮೇಘ ತರಂಗಗಳಹಣೆಗೆ ಕೆಂಪಿನ ತಿಲಕ ವಿಟ್ಟಂತೆಇಲ್ಲೊಂದು. ಗಾಂಧಾರಲೋಕ ವರಳಿಸಿದೆ ಜಗ ತನ್ನಿರುವ ಮರೆತಿರುವಂತೆಮೆಲ್ಲ ನೆಲ್ಲೋ ಬಾನಾಡಿ. ಗರಿ ಗೆದರಿನಭ ನೋಡಿ ನಕ್ಕಂತೆಭ್ರಮರವಿದೋ. ಮೆಲು ಹೂವು ಸ್ಪರ್ಶಿಸಿಮಧುವ ಹೀರಿ ಸಂಭ್ರಮಿಸುವಂತೆ ಮೇಲ್ ಮುಗಿಲುನೀಲಿ ಕಂಗಳ ತೆರೆದುಧರಣಿ ಯನ್ನೊಮ್ಮೆ ಬಳಿ ಕರೆದುಅವಳ ಕರಿ ಮುಂಗುರಳ ತೆರೆ ಸರಿಸಿದಂತೆಅಲ್ಲಲ್ಲಿ. ರಂಗೇರಿದಕೆಂದಾವರೆಯ ಕೆನ್ನೆ ಯನಾಚಿಕೆಯ ಕೆಂಪುಎಲ್ಲೆಡೆ ಪಸರಿಸಿ ದಂತೆ ಆಮುಗಿಲ. ಸೌಂದರ್ಯ ದಸಾರವನ್ನೆಲ್ಲ ತನ್ನೊಡಲೊಳಗಿನಕಡಲಿನೊಳಗಿರಿಸಿ.ಛಾಯೆಯಾಗಿಸಿದೃಷ್ಟಿ ಬೊಟ್ಟಿನಂತೆ.ಪ್ರತಿ ಬಿಂಬಿಸಿನಭದ ನಕ್ಷೆ ಯಲ್ಲಿಚಿತ್ತಾರ. ಬರೆದಜಗದ ಸೃಷ್ಟಿ ಯಸಾಕ್ಷಾತ್ಕಾರ, ಎಸ್. ಆರ್. ಆರ್. ವಿಜಯಲಕ್ಷ್ಮಿ
ಎಸ್. ಆರ್. ಆರ್. ವಿಜಯಲಕ್ಷ್ಮಿ ಅವರ ಕವಿತೆ “ನೀಲ ನಭದೊಳಗಣ ಮುಗಿಲ ದಿಬ್ಬಣ” Read Post »









