ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಇಳಿದುಬಿಡು”
ಕಾವ್ಯ ಸಂಗಾತಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಇಳಿದುಬಿಡು“ ಇಳಿದು ಬಿಡು ಮಳೆ ಬೇಗನೆ, ಸುಡುವ ಧರೆಗೆ ತಂಪು ನೀಡು.ಕಾದು ಕುಳಿತಿವೆ ಜೀವ ಜಾಲ,ಕಾಯುತ್ತಿವೆ ಸಿಹಿ ಹನಿಗಳ ಮುತ್ತು ರತ್ನ . ಬತ್ತಿದ ಕೆರೆ ತೊರೆಗಳ ತುಂಬಿಸು,ನಗೆ ಅರಳಲಿ ಗಿಡ.ಮರ ಬಳ್ಳಿಗಳಲಿ ಒರೆಸು ಕಣ್ಣೀರು ಸರಿಸಿ ಸಾಲದ ಮೂಟೆ,ಹಸಿರ ಹಂದರವ ಎಲ್ಲೆಡೆ ಕಟ್ಟಿ. ಚಲಿಸುವ ಕಾರ್ಮೋಡಗಳು ಒಂದಾಗಿ ಬನ್ನಿ,ತೆಪ್ಪನೆ ಮಳೆ ಸುರಿದು ಜಗವ ನಲಿಸಿ.ಮಣ್ಣು ಹುಡಿ ಭಂಡಾರ ತೂರಿ , ಜನ್ಮ ಆಸೆಯ ಮತ್ತೆ ಚಿಗುರಿಸಿ. ನಿನ್ನ ತಂಪ ಆ ಸಿಹಿ ಸಿಂಚನ,ಸೃಷ್ಟಿಯ ಒಡಲಿಗೆ ಜೀವ ಗಾನ!ಸದ್ದಿಲ್ಲದೆ ಹೊರಟು ಬಿಡುನಿನ್ನ ದಾರಿ ಬದುಕು ಪಾವನ ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಇಳಿದುಬಿಡು” Read Post »









