ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ನಿಮ್ಮೊಂದಿಗೆ

ಬಾಗೇಪಲ್ಲಿ ಅವರ ಗಜಲ್

ಕಾವ್ಯ ಸಂಗಾತಿ ಬಾಗೇಪಲ್ಲಿ ಗಜಲ್ ಅದಾರು ಬಂದದು ಲಲನೆ ಥಟ್ಟoತ ಹೊಳೆಯುತಕರಿ ಮೋಡ ಸರಿದಾಗ ನಕ್ಷತ್ರ ಫಳ್ಳoತ ಮಿನುಗುತ ನೀಲಿ ಕಣ್ಣ, ತಲೆ ಕೂದಲಲಿ ಹೂ ವನು ಮುಡಿದವಳುಅವಳ ಆಗಮನದಿಂ ಕತ್ತಲೆ ಕೋಣೆ ಪಟ್ಟoತ ಬೆಳಗುತ ನೇರ ನಾಜೂಕು ಹೆದ್ದಾರಿಯಂತೆ ಬೈತಲೆ ಹೊಂದಿದವಳುಆದರ ರೂಬಿ ಕಲ್ಲ ಬಲಾಕು ಚಟ್ಟoತ ಫಳಗುಟ್ಟುತ ಕತ್ತಲ ಕೋಣೆ ಕತ್ತಲನು ಸುರೆಯಂತೆ ಸವಿಯುತ್ತಿರೆಅನಿರೀಕ್ಷಿತ ಮಿಂಚೊoದು ಫಳಾರoತ ಪ್ರಕಾಶಿಸುತ ಕೃಷ್ಣಾ! ನಿನ್ನ ಚಕ್ರ ಸೂರ್ಯನ ಮುಚ್ಚಿದ್ದು ತಿಳಿಯಲಿಲ್ಲಪಾರ್ಥ ಶಪಥ ತೀರಿದಂತೆ ಪ್ರಿಯೆ ಗೊಳ್ಳoತ ನಗುತ(ಬೇಸರದಿ ಕತ್ತಲ ಕೋಣೆಯಲಿ ಏಕಾಂಗಿ ಕುಳಿತಿರುವಾಗ ಅಚಾನಕ್ ಬೆಳಕಿನ ಕಿರಣ ಬಂದಾಗಿನ ಭಾವ ಗಝಲಾಗಿಸಿದೆ. ಇದು ಜುಲ್ ಕಾಫಿಯಾ ಆಗುವುದೇ.? ಬಲ್ಲವರು ತಿಳಿಸಿ ) ಬಾಗೇಪಲ್ಲಿ

ಬಾಗೇಪಲ್ಲಿ ಅವರ ಗಜಲ್ Read Post »

ನಿಮ್ಮೊಂದಿಗೆ

ಎನ್.ಜಯಚಂದ್ರನ್ ಕವಿತೆ “ಆಶ್ರಯ ಯಾರಿಗೆ?”

ಕಾವ್ಯ ಸಂಗಾತಿ ಎನ್.ಜಯಚಂದ್ರನ್ “ಆಶ್ರಯ ಯಾರಿಗೆ?” ಬಡವನಿಗೊಂದು ಮನೆ ಎಂದರು,ಆಶ್ರಯ ಎಂದು ಹೆಸರಿಟ್ಟರು,ಹೆಸರಿನಲ್ಲಿ ಮಾತ್ರ ಬಡವನ ಪಾಲು—ಸೈಟ್  ಬಂದಾಗ ,ಸಿರಿವಂತನ ಕೈಗೆ ಕೊಟ್ಟರು. ಅರ್ಜಿಯ ಮೇಲೆ ಅರ್ಜಿ ಹಾಕಿದ,ಬಡವ ಕಚೇರಿ ಸುತ್ತಿದ,ಸಾರ್, ನನ್ನ ಸೈಟ್ ಎಲ್ಲಿ ? ಎಂದಾಗಫೈಲು ಮಾತ್ರ ಮೇಜಿನ ಕೆಳಗೆ ನಕ್ಕಿತು ! ಸರ್ಕಾರಿ ಜಾಗವಂತೆ—ಬಡವನಿಗಾಗಿ ಮೀಸಲಂತೆ,ರಾತ್ರಿ ಕತ್ತಲಲ್ಲಿ ಗಡಿ ಹಾಕಿಬೆಳಗಾಗುವಷ್ಟರಲ್ಲಿ ಖಾಸಗಿ ಆಸ್ತಿಯಂತೆ ! ಸೈಟ್ ನಮ್ಮದು, ದಾಖಲೆ ನಿಮ್ಮದು,ಕಾಗದ ನಮ್ಮದು, ಕಾನೂನು ನಿಮ್ಮದು.ಹೀಗೆ ಹೇಳಿದ ಕುಳಗಳುಬ್ಯಾಂಕಿನ ಬಾಗಿಲಿಗೆ ಹೋದರು ! ಸರ್ಕಾರಿ ಆಸ್ತಿಗೆ ಸಾಲವಂತೆ,ಸಾಲಕ್ಕೆ ಆಸ್ತಿಯೇ ಭದ್ರತೆಯಂತೆ,ಬಡವನ ಕನಸಿನ ಜಾಗವನ್ನೇಬ್ಯಾಂಕಿನ ಲಾಕರ್‌ಗೆ ಅಡವಿಟ್ಟರಂತೆ ! ಕಚೇರಿಯ ಗೋಡೆ ಕೇಳಿತು—ಇದು ಹೇಗೆ ಸಾಧ್ಯ?ಅಧಿಕಾರಿಯ ಕುರ್ಚಿ ಉತ್ತರಿಸಿತು—ನನಗೇನೂ ಗೊತ್ತಿಲ್ಲ ! ಫೈಲು ಓಡಲಿಲ್ಲ,ಸಹಿ ನಿಲ್ಲಲಿಲ್ಲ,ನ್ಯಾಯ ಮಾತ್ರ ಬಾಗಿಲಲ್ಲೇ  ನಿಂತು ಸರದಿ ಯಾವಾಗ ? ಎಂದು ಕಾಯುತ್ತಿದೆ ! ಬಡವ ಕೇಳಿದ—ನನ್ನ ಆಶ್ರಯ ಎಲ್ಲಿ ?ಅಧಿಕಾರಿ ಹೇಳಿದ—ತನಿಖೆ ನಡೆಯುತ್ತಿದೆ !! ವರ್ಷಗಳು ಉರುಳಿದವು,ಫೈಲುಗಳು ದಪ್ಪವಾದವು,ಬಡವನ ತಲೆಮೇಲೆ ಮಾತ್ರಆಕಾಶವೇ ಸೂರು ಆಯಿತು ! ಆಶ್ರಯ ಯೋಜನೆ ಹೆಸರಿನಲ್ಲಿಆಶ್ರಯವಿಲ್ಲದವನಿಗೆ ಆಸೆ,ಆಸೆಯ ಹಿಂದೆ ಸೈಟ್,ಸೈಟ್ ಹಿಂದೆ ಸಿರಿವಂತನ ನೋಟು ! ಬಡವನ ಬೆವರಿನಿಂದಸರ್ಕಾರದ ಯೋಜನೆ ಹುಟ್ಟಿತು,ಸಿರಿವಂತನ ಬುದ್ಧಿಯಿಂದಅದೇ ಯೋಜನೆ ಆಸ್ತಿಯಾಯಿತು ! ಕಾನೂನು ಪುಸ್ತಕದಲ್ಲಿ ಬಡವನ ಹಕ್ಕು,ಕಚೇರಿ ಪುಸ್ತಕದಲ್ಲಿ ಅಧಿಕಾರಿಯ ಮೌನ,ದಾಖಲೆ ಪುಸ್ತಕದಲ್ಲಿ ಸಿರಿವಂತನ ಹೆಸರು—ಇದೇನಾ ಆಶ್ರಯದ ಹೊಸ ವ್ಯಾಖ್ಯಾನ ? ಒಂದು ದಿನ ಬಡವ ಕೇಳುವನು—ನನ್ನ ಸೈಟ್ ಎಲ್ಲಿ ಹೋಯಿತು ?ಆಗ ಕಡತದೊಳಗಿಂದ ಧ್ವನಿ ಪಿಸುಗುಟ್ಟಿತು ; ನಿನ್ನ ಹೆಸರೇ ಇತ್ತು…ಆದರೆ ಸೈಟ್  ಮಾತ್ರ ಇನ್ನೊಬ್ಬರದಾಯಿತು ! ಆಶ್ರಯ ಯಾರಿಗೆ ?ಬಡವನಿಗೋ…..ಅಥವಾ ಬಡವನ ಹೆಸರಿನಲ್ಲಿಸೈಟ್ ಕಳ್ಳರಿಗೋ ?ಪ್ರಶ್ನೆ ಉಳಿದಿದೆ—ಉತ್ತರ ಮಾತ್ರ ಕಾಣುತ್ತಿಲ್ಲ.ಅಧಿಕಾರಿಗಳ ಮೌನದ ನಡುವೆಬಡವನ ಆಶ್ರಯವೂಆಸೆಯಂತೆಯೇ ದೂರವಾಗುತ್ತಿದೆ ! ಎನ್.ಜಯಚಂದ್ರನ್

ಎನ್.ಜಯಚಂದ್ರನ್ ಕವಿತೆ “ಆಶ್ರಯ ಯಾರಿಗೆ?” Read Post »

ಇತರೆ, ನಿಮ್ಮೊಂದಿಗೆ

“ಸ್ವಾತಂತ್ರ್ಯ ಸಂಗ್ರಾಮಕ್ಕೆ ಕನ್ನಡ ಕಾವ್ಯದ ಕೊಡುಗೆ” ಕೇಂದ್ರ ಸಾಹಿತ್ಯ ಅಕಾಡೆಮಿ,ದೆಹಲಿ ಅವರ ವಿಚಾರ ಸಂಕಿರಣದಲ್ಲಿ ಡಾ.ಸಿದ್ದರಾಮ ಹೊನ್ಕಲ್‌ ಮಂಡಿಸಿದ ಪ್ರಬಂಧ.( ಪ್ರತಿಯೊಬ್ಬ ಕನ್ನಡ ಕವಿಯೂ ಓದಲೇಬೇಕಾದ ಬರಹ.)

ವಿಶೇಷ ಸಂಗಾತಿ ಡಾ.ಸಿದ್ದರಾಮ ಹೊನ್ಕಲ್ “ಸ್ವಾತಂತ್ರ್ಯ ಸಂಗ್ರಾಮಕ್ಕೆ ಕನ್ನಡ ಕಾವ್ಯದ ಕೊಡುಗೆ” ಕೇಂದ್ರ ಸಾಹಿತ್ಯ ಅಕಾಡೆಮಿ,ದೆಹಲಿ ಅವರ ವಿಚಾರ ಸಂಕಿರಣದಲ್ಲಿ ಡಾ.ಸಿದ್ದರಾಮ ಹೊನ್ಕಲ್‌ ಮಂಡಿಸಿದ ಪ್ರಬಂಧ.( ಪ್ರತಿಯೊಬ್ಬ ಕನ್ನಡ ಕವಿಯೂ ಓದಲೇಬೇಕಾದ ಬರಹ.) *ಸ್ವಾತಂತ್ರ್ಯ ಸಂಗ್ರಾಮಕ್ಕೆ ಕನ್ನಡ ಕಾವ್ಯದ ಕೊಡುಗೆ..*(ಕೇಂದ್ರ ಸಾಹಿತ್ಯ ಅಕಾಡೆಮಿ ದೆಹಲಿ ಅವರ ವಿಚಾರ ಸಂಕಿರಣದಲ್ಲಿ ಮಂಡಿಸಿದ ಪ್ರಬಂಧ. ಪ್ರತಿಯೊಬ್ಬ ಕನ್ನಡದ ಕವಿಗಳು ಓದಬೇಕು.)ಲೇಖಕ – *ಡಾ.ಸಿದ್ಧರಾಮ ಹೊನ್ಕಲ್* ಸ್ವಾತಂತ್ರ್ಯ ಸಂಗ್ರಾಮದ ಹೋರಾಟ ಮುಗಿದು ಈಗಾಗಲೇ 79 ವರ್ಷಗಳ ಸಂಭ್ರಮದಲ್ಲಿ ಈ ಅಗಸ್ಟ ೧೫ ರಂದು ನಾವು ಭಾರತದ ಸ್ವಾತಂತ್ರ್ಯ ದಿನ ಆಚರಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಸ್ವಾತಂತ್ರ್ಯ ಹೋರಾಟದ ಸಂಗ್ರಾಮಕ್ಕೆ ಕನ್ನಡ ಕಾವ್ಯದ ಕೊಡುಗೆಯನ್ನು ಕುರಿತು ಮಾತಾಡಲು ನನಗೆ ಅವಕಾಶ ಒದಗಿಸಿದ್ದಕ್ಕೆ ಮೊಟ್ಟ ಮೊದಲನೆಯದಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯವರಿಗೆ ಅದರ ಎಲ್ಲ ಸದಸ್ಯರಿಗೆ ಮತ್ತು ಅಧ್ಯಕ್ಷರಿಗೆ ಗೌರವಯುತ ವಂದನೆಗಳನ್ನು ಅರ್ಪಿಸಿ ನನ್ನ ಮಾತುಗಳನ್ನು ಆರಂಭಿಸುತ್ತಿದ್ದೇನೆ.ಆ ಸ್ವಾತಂತ್ರ್ಯ ಪೂರ್ವದ ಸಂಗ್ರಾಮಕ್ಕೆ ಕನ್ನಡ ಸಾಹಿತ್ಯದ ಕೊಡುಗೆ ಸಾಕಷ್ಟು ಇದೆ. ನನಗೆ ಕಾವ್ಯ ಕ್ಷೇತ್ರದಿಂದ ಆದಂತಹ ಕೊಡುಗೆಯನ್ನು ಕುರಿತು ವಿಷಯ ಕೊಟ್ಟಿರುವದರಿಂದ ಹಾಗೂ ಹದಿನೈದು ನಿಮಿಷಗಳ ಸಮಯದ ಮಿತಿಯಲ್ಲಿ ಪ್ರಬಂಧ ಮಂಡಿಸಲು ಹೇಳಿರುವದರಿಂದ ಆ ನಿಗದಿತ ಅವಧಿಗೆ ಸಾಧ್ಯವಾಗುವಷ್ಟು ಇಲ್ಲಿ ನಾನು ನನಗೆ ದೊರೆತ ಆಕರಗಳ, ಕವಿತೆಗಳ ಹಿನ್ನೆಲೆಯಲ್ಲಿ ಪ್ರಾಮಾಣಿಕವಾಗಿ ನನ್ನ ಅನಿಸಿಕೆ ಹಂಚಿಕೊಳ್ಳಲು ಪ್ರಯತ್ನಿಸುವೆ ಎಂದು ಈ ಮೂಲಕ ಭರವಸೆ ನೀಡುತ್ತೇನೆ.ನಮ್ಮ ಈ ಭಾರತದ ಬಹುತೇಕ ಜನತೆಗೆ ಒಂದು ಸ್ವಾತಂತ್ರ್ಯ ಹೋರಾಟದ ಬಗ್ಗೆ ಮಾತ್ರ ಗೊತ್ತು.ಅದು 1947 ಅಗಸ್ಟ್ ಹದಿನೈದರಂದು ದೊರೆತ  ಸ್ವಾತಂತ್ರ್ಯ ಹೋರಾಟದ ಬಗ್ಗೆ ಮಾತ್ರ.ಆದರೆ ನಾನು ಬಂದಿರುವ‌ ಹೈದರಾಬಾದ್ ಕರ್ನಾಟಕದ ಅಂದರೆ ಈಗಿನ ಕಲ್ಯಾಣ ಕರ್ನಾಟಕ ಪ್ರದೇಶದವರಾದ ನಮಗೆ ಈ ಸ್ವಾತಂತ್ರ್ಯ ಒಂದು ವರ್ಷ ಒಂದು ತಿಂಗಳು ತಡವಾಗಿ ದೊರೆಯಿತು.ಇಡೀ ದೇಶ‌ ಸ್ವಾತಂತ್ರ್ಯ ದ ಸಂಭ್ರಮದಲ್ಲಿ ಪುಳಕಗೊಂಡು ಜೈ ಭಾರತಮಾತೆ..ಎಂದು ಹರ್ಷದಿಂದ ಉದ್ಗಾರ ಮಾಡುವಾಗ ನಾವು ನಮ್ಮ ಪ್ರದೇಶದ ಜನ‌ ಅಖಂಡ ಭಾರತದ ಒಕ್ಕೂಟದಲ್ಲಿ ಸೇರದೇ ಹೊರಗೆ ಉಳಿದ ಹೈದರಾಬಾದ್ ನ ನಿಜಾಂನ ಹಾಗೂ ಆತನ ಸೇನಾಧಿಪತಿ ಕಾಸಿಂ ರಜ್ವಿ ಕಟ್ಟಿದ‌ ಖಾಸಗಿ ಸೈನ್ಯ ರಜಾಕಾರರ ಬೂಟು ಗಾಲಿನಿಂದ ಒದೆ ತಿನ್ನುತ್ತಾ,ಅವರ ದೌರ್ಜನ್ಯ,ಹಿಂಸೆ ಅತ್ಯಾಚಾರಕ್ಕೆ ಒಳಗಾಗಿ ದೆಹಲಿಯ ಕೆಂಪು ಕೋಟೆಯ ಮೇಲೆ ಹಾರಿದ ತಿರಂಗಿ ಧ್ವಜ ದ ಸಂಭ್ರಮ ನೋಡಲಾಗದೇ; ಅದನ್ನು ಕಲ್ಪಿಸಿಕೊಳ್ಳಲು‌ ಸಹ ಭಯ ಭೀತರಾದಂತಹ ಪರಸ್ಥಿತಿಯಲ್ಲಿ ನಲುಗಿ ಹೋಗಿದ್ದರು. ಆ ಹಿನ್ನೆಲೆಯಲ್ಲಿ ದೇಶಕ್ಕೆ 1947ರಲ್ಲಿ ಸ್ವಾತಂತ್ರ್ಯ ಸಿಕ್ಕರೆ, ನಿಜಾಂ ಸರ್ಕಾರದ ಅಡಿಯಲ್ಲಿದ್ದ ಹೈದರಾಬಾದ್ ಕರ್ನಾಟಕದ ನಮಗೆ ಮತ್ತೋಂದು ಬಹು ಭೀಕರ ಹೋರಾಟ ಮಾಡಿದ ನಂತರ ಒಂದು ವರ್ಷ ಒಂದು ತಿಂಗಳು ತಡವಾಗಿ ಸ್ವಾತಂತ್ರ್ಯ ಸಿಕ್ಕಿತು.ಆ ಹಿನ್ನೆಲೆಯಲ್ಲಿ ನಾನು ಈ ಸಂದರ್ಭದಲ್ಲಿ ಎರಡು ಹೋರಾಟಗಳ ಕುರಿತು ನಮ್ಮ ಕನ್ನಡ ಕಾವ್ಯವನ್ನು ಗಮನಿಸಿ ಕಟ್ಟಿಕೊಡಲು ಯತ್ನಿಸುತ್ತೇನೆ.ಯಾವುದೇ ಕಾಲಮಾನದಲ್ಲಿ ಲೇಖಕ,ಕವಿ,ಕಲಾವಿದ ನಾದವನು ಆ ಒಂದು ಕಾಲಮಾನದ ಸಾಕ್ಷಿ ಪ್ರಜ್ಞೆ ಯಾಗಿರುತ್ತಾನೆ. ತನ್ನ ಕಾಲಮಾನದಲ್ಲಿ ನಡೆದ ಯಾವುದೇ ವಿದ್ಯಮಾನಗಳಿಗೆ ಸ್ಪಂದಿಸುತ್ತಾನೆ.ಕವಿ ಲೇಖಕ ಬರಹಗಾರ ಒಟ್ಟಾರೆ ಅಕ್ಷರಬಲ್ಲ ಸೃಜನಜನಶೀಲ ವ್ಯಕ್ತಿ ಕಲಾವಿದ ಹೋರಾಟಗಾರ ಇವರೆಲ್ಲರೂ ಆ ಸಂದರ್ಭದಲ್ಲಿ ಸ್ಪಂದಿಸದೇ ಹೋದರೆ ಆತ ಸಮಾಜಿಮುಖಿ‌, ಜನಮುಖಿ ಕವಿಯಾಗಲಾರ.ಹೋರಾಟಗಾರನಾಗಲಾರ.ಕಲಾವಿದ ಆಗಲಾರ. ಸಾಮಾನ್ಯ ಜನತೆ ಒಬ್ಬ ಅಥವಾ ಒಂದು ಸಮೂಹ ನಾಯಕತ್ವದಲ್ಲಿ ಯಾವುದೇ ಒಂದು ಹೋರಾಟವನ್ನು ರೂಪಿಸಿದವರ ಜೊತೆ ಆ ಹೋರಾಟಕ್ಕೆ ಕೈ‌ ಜೋಡಿಸುತ್ತಾರೆ. ಆಗ ಯಾವುದೇ ಒಂದು ಹೋರಾಟಕ್ಕೆ ಬೇಕಾದ ಹೋರಾಟದ‌ ಹಾಡುಗಳು,ಕವಿತೆಗಳು,ಮಾತುಗಳು,ಭಿತ್ತಿ ಚಿತ್ರಗಳು,ಒಟ್ಟಾರೆ ಆಗ ಸೃಷ್ಠಿಯಾದ ಸಾಹಿತ್ಯ ಬಹುಮುಖ್ಯ ವಾಗಿ ಜನಮನ ಸೆಳೆದು ಹೋರಾಟದ ಕಡೆಗೆ ಜನರನ್ನು ಆಕರ್ಷಿಸುವ ಹಾಗೂ ತಮ್ಮ ಆ ಹೋರಾಟದ ಹಿಂದಿನ‌ ಕೈ‌ಗೆ ಹಾಕಿದ ಬೇಡಿಯನ್ನು, ಬಂಧನವನ್ನು ಕಳಚಿಕೊಳ್ಳುವ‌ ಆ ಸಂದರ್ಭದಲ್ಲಿ ಆಗಬೇಕಾದ ದೈಹಿಕ ಮಾನಸಿಕ ಶಿದ್ಧತೆಗೆ ಒಂದು ಪ್ರೇರಣೆಯನ್ನು ಖಂಡಿತಾ ಸಾಹಿತ್ಯ ಕ್ಷೇತ್ರ ಒದಗಿಸುತ್ತದೆ.ಆ ಎಲ್ಲಾ ಹಿನ್ನೆಲೆಯಲ್ಲಿ ಈಗ ಮೊದಲನೆದಾಗಿ ನಾನು ಅಗಷ್ಟ ೧೫-೧೯೪೭ ರಲ್ಲಿ ದೊರೆತ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ನಮ್ಮ ಕನ್ನಡದ ಕವಿಗಳ ಕಾವ್ಯದ ಕೊಡುಗೆ ಹಿನ್ನೆಲೆಯಲ್ಲಿ ಚರ್ಚಿಸುತ್ತೇನೆ.*ನಮ್ಮದಿ ನಮ್ಮದಿ ಭರತಭೂಮಿ ಹೆರವರ ನಂಬದಲೇ**ಜಗದೀಶ್ವರಂ ತಾನೇ ಧರಸಿ ನಾನಾವತಾರಗಳನು**ಕರೆವ ಸರ್ವಸ್ವಮಂ ಧರೆಯ ಸಂರಕ್ಷಿಸುವ ತೆರೆವ**ಕಲಿಸಿದ ಪೂರ್ವ ಪಾಠಶಾಲೆ…*ಜೈ ಭಾರತ ರಾಷ್ಟ್ರಗೀತೆಯ ಕೃತಿಯಲ್ಲಿರುವ ಈ ಕವಿತೆಯ,ಹಾಡಿನ ಮೂಲಕ ೧೯ ನೇ ಶತಮಾನದ ಸ್ವಾತಂತ್ರ್ಯ ಪೂರ್ವದ ರಾಷ್ಟ್ರಾಭಿಮಾನಿ ಕವಿ ಎಂದೇ ಖ್ಯಾತರಾಗಿರುವ *ಶಾಂತಕವಿ* ಎಂಬ ಕಾವ್ಯನಾಮದ ಬಾಳಾಚಾರ್ಯ ಸಕ್ರಿಯವರ ಈ ಕವಿತೆಯ ಮೂಲಕ  ಹರಿದು ಬಂದ ಸ್ವಾತಂತ್ರ್ಯ ಸಂಗ್ರಾಮದ ಕಾವ್ಯವನ್ನು ಗಮನಿಸಬಹುದಾಗಿದೆ.ಸ್ವಾತಂತ್ರ ಪೂರ್ವದ ಬ್ರಿಟಿಷರ ಆಳ್ವಿಕೆಯಲ್ಲಿ ನಲುಗಿದ ಭಾರತಾಂಬೆಯನ್ನು , ಈ ಭರತ ಭೂಮಿಯನ್ನು ಸ್ವತಂತ್ರಗೊಳಿಸಬೇಕೆಂಬ ಕಲ್ಪನೆ ಅದಾಗಲೇ ಕವಿ, ಲೇಖಕ, ಹೋರಾಟಗಾರರು, ಕಲಾವಿದರಲ್ಲಿ ಸೂಪ್ತವಾಗಿ ಮೊಳಕೆ ಒಡೆಯುತ್ತಿದ್ದ ಕಾಲವದು.ನವೋದಯ ಸಾಹಿತ್ಯದ ಹರಿಕಾರರಾದ ಬಿ ಎಂ ಶ್ರೀ ಅವರಿಂದ ಆರಂಭಗೊಂಡು ಆ ಕಾಲಮಾನದ ಎಲ್ಲ ಕವಿಗಳು ಸ್ವಾತಂತ್ರದ ಹೋರಾಟಕ್ಕೆ ತಮ್ಮ ಕಾವ್ಯದ ಮೂಲಕ ಸ್ಪಂದಿಸಿದ್ದು ಸ್ವಾತಂತ್ರ್ಯ ಹೋರಾಟದ ಇತಿಹಾಸ ಬಲ್ಲ ಎಲ್ಲರಿಗೂ ಗೊತ್ತಿರುವ ಸಂಗತಿಯೇ ಆಗಿದೆ.*ತಂತ್ರ ವಾದ್ಯವು ಲೇಸು**ಮಂತ್ರಿಯ ಕಳೆ ಲೇಸು**ಯಂತ್ರ ವಾಹಕನ ದಯೆ ಲೇಸು**ಜಗದೀ ಸ್ವಾತಂತ್ರ್ಯವೇ ಲೇಸು*ಎಂದು ನಮ್ಮ ಲೋಕ ಸಂಚಾರಿ, ಲೋಕಾನುಭವಿ ಕವಿ ಸರ್ವಜ್ಞನು. ಈ ಜಗಕ್ಕೆ ಸ್ವಾತಂತ್ರ್ಯವೇ ಲೇಸು ಎಂದು ತಮ್ಮ ಬದುಕಿನ ಕಾಲ ಘಟ್ಟದಲ್ಲಿ ಹೇಳಿರುವುದು ಇಲ್ಲಿ ಉಲ್ಲೇಖನೀಯ.12ನೇ ಶತಮಾನದ ಬಸವಾದಿ ಶರಣರ ಕಾಲದಿಂದಲೇ ಸ್ವತಂತ್ರ ವಿಚಾರಧಾರೆ ಜನಮನಕ್ಕೆ ತಲುಪಿ ಪ್ರತಿಯೊಬ್ಬರಲ್ಲಿ ವ್ಯಕ್ತಿ ಗೌರವ, ಆತ್ಮವಿಶ್ವಾಸ, ಸಮಾನತೆ, ಸ್ವಾತಂತ್ರ್ಯದ ಪರಿಕಲ್ಪನೆ ಈ ನೆಲದಲ್ಲಿ ಬಿಜಾಂಕುರವಾಗಿತ್ತು. ಇದು ಸ್ವಾತಂತ್ರ್ಯದ ಹೋರಾಟದ ಸಂದರ್ಭದಲ್ಲಿ ಹೆಮ್ಮರವಾಗಿ ಬೆಳೆದು ಇಡೀ ನಾಡು ನುಡಿ ಗಡಿದಾಟಿ ಇಡೀ ದೇಶವನ್ನೇ ವ್ಯಾಪಿಸಿದ್ದು ಸುಳ್ಳಲ್ಲ.ಮುಖ್ಯವಾಗಿ ಯಾವುದೇ ದೇಶದ ಜನ ಸಮೂಹ ಹೆರವರ ಕಟ್ಟುಪಾಡುಗಳಲ್ಲಿ, ಉಸಿರುಗಟ್ಟಿಸುವ ವಾತಾವರಣದಲ್ಲಿ ತೆಲೆ ತಗ್ಗಿಸಿ ಬಹುದಿನ ಬದುಕಲಾಗುವುದಿಲ್ಲ.ಆ ಕಾಲಮಾನದ ಸಾಕ್ಷಿ ಪ್ರಜ್ಞೆಯುತ್ತಿರುವ ಕವಿ, ಲೇಖಕ, ಬರಹಗಾರ, ಪತ್ರಕರ್ತ ಸುಮ್ಮನೆ ಮೌನ ಪ್ರೇಕ್ಷಕರಾಗಿ ಉಳಿಯಲಾರರು.ಅದೇ ರೀತಿ ಈ ಸ್ವಾತಂತ್ರ್ಯದ ಸಂದರ್ಭದಲ್ಲಿ ಸಹ ತಮ್ಮ ಕಾವ್ಯದ ಮೂಲಕ ಸ್ವಾತಂತ್ಯ್ರದ ರೊಚ್ಚು ಕೆಚ್ಚು ಜನಮನಕ್ಕೆ ತಲುಪಿಸಿ ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು ಎಂಬಂತೆ ತಮ್ಮ ಕಾವ್ಯವನ್ನು ನೂರಾರು ಕವಿಗಳು ಹರಿಸಿದ್ದಾರೆ.ಅಕ್ಷರ ಬಾರದವರು ಜನಪದ ಹಾಡು,ಹಲಾಹಿ ಹಾಡು, ಲಾವಣಿ,ಭುಲಾಯಿ, ಗೀಗಿಪದಗಳ ಮೂಲಕ ತಮ್ಮ ರಾಷ್ಟ್ರಾಭಿಮಾನವನ್ನು ಪ್ರದರ್ಶಿಸಿ ಒಟ್ಟಾರೆ ಸ್ವಾತಂತ್ರ್ಯ ದ ಹೋರಾಟದಲ್ಲಿ ತೊಡಗಿದ ಮಹಾತ್ಮನನ್ನು ಒಳಗೊಂಡ ಎಲ್ಲಾ ಸಮರ ಸೇನಾನಿಗಳಿಗೆ ,ಮುಂದಾಳುಗಳಿಗೆ ಪೂರಕವಾಗಿ ಕೆಲಸ ಮಾಡಿದ್ದು ಗಮನೀಯವಾಗಿದೆ.*ಭಾರತಾಂಬೆಯ ಹೀನ ಸ್ಥಿತಿಯನ್ನು ಕಣ್ಣು ತೆರೆಯುತ ನೋಡಿರಿ**ಪಾರತಂತ್ರ್ಯದಿ ಸಿಲುಕಿ ಬಳಲುವ ತಾಯಿಯನು ನೀವು ಬಿಡಿಸಿರಿ*@*ನಮ್ಮ ನಾಡಿನ ಹೆಣ್ಣು ಮಕ್ಕಳು ವೀರಶ್ರೀಯನು  ಬೀರುತ**ಒಮ್ಮನಸಿನೊಳೇ ರಾಷ್ಟ್ರ ಕಾರ್ಯಕ್ಕೆ ಪ್ರಾಣ ಕೊಡುತಿಹರಲ್ಲವೇ**ನಮ್ಮ ದೇಶದ ಸಿರಿಯು ಎಲ್ಲವೂ ಅನ್ಯ ದೇಶವ ಸೇರಿತು* *ಒಮ್ಮೆಯಾದರೂ ಹೊಟ್ಟೆ ತುಂಬಾ ಅನ್ನ ಸಿಗದಂತಾಯಿತು**ದೇಶ ಸೇವೆಯ ಸಮರ ಕಾಲದಿ ಪ್ರಾಣ ಹೋದರು ನೋಡದೆ**ದೇವ ಕೃಪೆಯನು ಪಡೆದು ದೇಶವನುಳಿಸಿಕೊಳ್ಳಲು ನಡೆಯಿರಿ*(ಬೆಳಗಾವಿ ಜಿಲ್ಲೆಯ ಸ್ವಾತಂತ್ರ್ಯ ಸಮರ ಕೃತಿಯ ಅನಾಮಿಕ ಕವಿಯೊಬ್ಬರ ಕವಿತೆ)  ಹೀಗೆ ಅಜ್ಞಾತ ಕವಿ ಒಬ್ಬ ರಾಷ್ಟ್ರ ಪ್ರೇಮವನ್ನು ಮೆರೆದು,ಹಿಂದಿನ ಸಿರಿ ಸಂಪತ್ತಿನ ನಮ್ಮ ಭಾರತ ಹೇಗಾಗಿದೆ ನೋಡಿ. ತುತ್ತು ಅನ್ನವು ಸಿಗದಂತಾಗಿದೆ ಬಡ ಬಗ್ಗರಿಗೆ ಎಂದು ಎಚ್ಚರಿಸುವ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಬನ್ನಿ. ಇದಕ್ಕಾಗಿ ಪ್ರಾಣ ಹೋದರು ಪರವಾಗಿಲ್ಲ. ದೇವಕೃಪೆಯಿಂದ ಹೋರಾಡಿ ಗೆಲ್ಲೋಣವೆಂದು ಹೇಳಿದ ಈ ಮೇಲಿನ ಕವಿತೆಯ ಆಶಯ ಇಡೀ ಕನ್ನಡ ಕಾವ್ಯದ ಒಳ ಹರಿವಾಗಿತ್ತು ಅನಿಸದಿರದು.*ಸತ್ತಂತಿಹರನ್ನು ಬಡಿದೆಚ್ಚರಿಸು …ಎಂಬ ಕವಿ ಕುವೆಂಪುರವರು**ಸಾರಿ ಬಾ ಸರ್ವರ್ಗೆ  ಸ್ವಾತಂತ್ರ್ಯಮಂ**ಸಾರಿ ಬಾ ಸರ್ವರ್ಗೇ ಸಾಮ್ಯತ್ವಮಂ *ಸರ್ವಂಗೆ ಸಾರಿ ಬಾ ಸೌಹಾರ್ದಮಂ**ಸರ್ವ ಲೋಕದ ಸರ್ವ ಸಂತೋಷ ಮಂ *ಸರ್ವರಿಂ  ಸರ್ವರಾ ಉದ್ಧಾರಮಮಂ* ( ಭಾರತ ಸ್ವಾತಂತ್ರ ಗಾಯತ್ರಿ ಕೃತಿಯ ಕವಿತೆ) ಕವಿತೆಯಲ್ಲಿ  ಉದಾತ್ತವಾಗಿ ಸರ್ವರಿಗೂ ಸ್ವಾತಂತ್ಯ ದ ಜೊತೆ ಜೊತೆಗೆ ಸೌಹಾರ್ದತೆ,ಸಂತೋಷ,ಸ್ವಾಮ್ಯತ್ವ ಹಾಗೂ ಏಳಿಗೆಯನ್ನು ಬಯಸುವ ಮೂಲಕ ಸ್ವಾತಂತ್ರ್ಯದ ಮೂಲಕ ದೊರೆಯಬಹುದಾದ ಸರ್ವ ಕನಸುಗಳನ್ನು ಕಟ್ಟಿಕೊಟ್ಟಿದ್ದಾರೆ. ಮುಂದುವರಿದು,ಮಹಾ ಕವಿ ಕುವೆಂಪು ಅವರು ಹೀಗೆ ಹೇಳಿದ್ದಾರೆ.ಒಂದು ರಾಜ್ಯವ ಗೆದ್ದು ಸಿರಿಯನೆಲ್ಲವ ಕದ್ದುಬಲವಂತರಾದವರು ಬಲವಿಲ್ಲದವರುಗಳತುಳಿಯುತ್ತಿರಲು ಜನರ ಮೊರೆ ಬಾನೆಡೆಗೆಮುಟ್ಟುತ್ತಿರಲು ಉರುಳುರುಳು ಹಗಲಿರಲುಎಲೆ ಧರಣಿ! ನೀ ನಿಷ್ಕರುಣಿಹೀಗೆ ಜನಮನದ ತವಕ ತಲ್ಲಣಗಳನ್ನು ಪಾರತಂತ್ರದ ಹಿನ್ನೆಲೆಯಲ್ಲಿ ಕವಿ ಕುವೆಂಪು ಅವರು ಅತ್ಯಂತ ಸಾತ್ವಿಕವಾಗಿಯೇ ಕಟ್ಟಿಕೊಟ್ಟು ರಾಜ್ಯದ ಸಿರಿಯನು ಕದ್ದವನು ಒಳಗಿನವನಾದರೂ ಅಷ್ಟೇ,ಅವನು ಹೊರಗಿನವನಾದರೂ ಅಷ್ಟೇ ಎಂದು ಬ್ರಿಟಿಷ್ ಸಾಮ್ರಾಜ್ಯ ಶಾಹಿಯ ದೂರ್ತತನವನ್ನು ತೆರೆದಿಟ್ಟಿದ್ದಾರೆ.@*ಗೇಣು ಭೂಮಿಗಾಗಿ ಎನ್ನ ಪ್ರಾಣ ಹೋಗಲಿ ಎಂದೆನ್ನುವಿ ಕಾಣದೇನೋ ನಾಡೇ ಪರಾಧೀನವಾಗಿರುವುದು ಮನುಜಾ ಮಾತೃಭೂಮಿಯ..*ಕವಿ ಮುದವೀಡು ಕೃಷ್ಣರಾಯರು..ಹೀಗೆ ಕಾವ್ಯದ ಮೂಲಕ ಕರೆನೀಡಿ ಒಡ ಹುಟ್ಟಿದವರ ಜೊತೆ ಒಡೆದಾಡುವ ನೀ ಪರಕೀಯರು ನಾಡೇ ಕಬಳಸಿದಾರೆ ಹೋರಾಡು ಎಂದು ಹೇಳುವುದು ಮನನೀಯವಾಗಿದೆ.@*ಹಿಂದು ಮಾತೆ ಬಂಧು ಭಾವದಿಂದ ನಿನ್ನ ಕಂದರು**ಒಂದು ಗೂಡಿ ಪಾರತಂತ್ರ್ಯ ಬಂಧವ ಹರಿದೊಗೆವೆವು*ಎಂದು ಕವಿಭೂಷಣ ಬೆಟಗೇರಿ ಕೃಷ್ಣಶರ್ಮ ಅವಳನ್ನು ತಾಯಿಗೆ ಹೋಲಿಸಿ ಅವಳ ಬಿಡುಗಡೆಗಾಗಿ ನಾವೆಲ್ಲ ಒಂದಾಗಬೇಕೆಂಬ ಸಂದೇಶ‌ ನೀಡಿದ್ದಾರೆ.@*ಭಾರತಾಂಭೆಯ ಹೀನ ಸ್ಥಿತಿಯನ್ನು ಕಣ್ಣು ತೆರೆಯುತ ನೋಡಿರಿ**ಪಾರತಂತ್ರ್ಯದಿ ಸಿಲುಕಿ ಬಳಲುವ ತಾಯಿಯನು ನೀವು ಬಿಡಿಸಿರಿ*ಎಂದು ಅನಾಮಿಕ ಕವಿಯೊಬ್ಬರ ಕವಿತೆಯ ಸಾಲುಗಳು ಇವು.ಇಂತಹ ನೂರಾರು ಅನಾಮಿಕ ಕವಿಗಳ ಕವಿತೆ ನಮಗೆ ಕಾಣಬರುತ್ತವೆ.ಕವಿ ಡಾ.ಸೂರ್ಯನಾಥ ಕಾಮತ ಅವರು ಸುಮಾರು ನೂರಾರು ಜನರ ನಾಲ್ಕು ನೂರಕ್ಕಿಂತ ಹೆಚ್ಚು ಕವಿತೆಗಳನ್ನು ಕವಿ ಜೆ ಎಸ್ ಎಸ್ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು ಇದ್ದಾಗ ಅವರ ಸಲಹೆ ಮೇರೆಗೆ ಸಂಪಾದಿಸಿಕೊಟ್ಟದ್ದನ್ನು ಬಿಡುಗಡೆಯ ಹಾಡುಗಳು ಎಂಬ ಕೃತಿಯಲ್ಲಿ ದಾಖಲಿಸಿದ್ದಾರೆ.ಆ ಸಂದರ್ಭದಲ್ಲಿ ದೇಶಿಯ ದುಮದುಮೆ ಬರೆದ ದಿ.ಶ್ರೀಧರ  ಖಾನೋಲ್ಕರ್ ಅವರ ಕಾವ್ಯನಾಮ ಸೀತಾತನಯ ಎಂಬವರದು ಪ್ರಕಟಿಸಿದ್ದ ಕಾರಣಕ್ಕೆ ದಿ.ರಂ.ರಾ.ದಿವಾಕರ ಅವರಿಗೆ ಎರಡು ವರ್ಷಗಳ ಕಾಲ ಜೈಲು ಶಿಕ್ಷೆ ನೀಡಲಾಗಿತ್ತು. ಅವರ ತಾಯಿಯ ಹೆಸರು ಸೀತಾ ಇರುವ ಕಾರಣಕ್ಕೆ .ಹೀಗಾಗಿ ಅನೇಕ ಕವಿಗಳು ತಮ್ಮ ಹೆಸರು ಮರೆ ಮಾಚಿಕೊಂಡು ಭೂಗತವಾಗಿದ್ದುಕೊಂಡೆ ಜನತೆಯಲ್ಲಿ ಸ್ವಾತಂತ್ರ್ಯ ದ ಕಿಚ್ಚು ಹಚ್ಚಿದ್ದು ಕಾಣಬಹುದಾಗಿದೆ. *ವೀರರನ್ನು ನೆನೆದು ನೆನೆದು ವೀರರಾಗಿ ಉಳಿಯುವಾ* ಎಂಬ ಬೇಂದ್ರೆಯವರ ಕಾವ್ಯ ಎಂತಹವರನ್ನೂ ಕಾಡುವಂತಹದು. 1918ರ ಮುಂಚೆಯೇ ಬೇಂದ್ರೆಯವರು ತುತ್ತೂರಿ ಮತ್ತು ಆಹಾ ಸ್ವಾತಂತ್ರದೇವಿ.. ಎಂಬ ಕವಿತೆ ಬರೆದು ಜೈಲಿಗೂ ಹೋಗಿ ಬಂದಿದ್ದರು. ಹಕ್ಕಿಹಾರುತಿದೆ ನೋಡಿದಿರಾ, ಸ್ವಾತಂತ್ರ್ಯದ ರೆಕ್ಕೆ ಬಿಚ್ಚಿ ನೋಡಿದಿರಾ ಎಂದು ಕೇಳುವ ಬೆಂದ್ರೆಯವರು  ಕನ್ನಡವೂ, ಭಾರತವೂ ಜಗವೆಲ್ಲ ಒಂದೇ ಎಂಬ ಬಹು ವಿಶಾಲ ನೆಲೆಯಲ್ಲಿ ಈ ಸ್ವಾತಂತ್ರ್ಯದ ಹೋರಾಟದ ಕವಿತೆಗಳನ್ನು ನವೋದಯದ ಸಂಪ್ರದಾಯದ ನಂತರ ಇಡೀ ಕನ್ನಡ ಕಾವ್ಯ ಪ್ರಪಂಚಕ್ಕೆ ಹರಡಿದ್ದು ಅದು ಕಾವ್ಯದ ಅಂತ ಸತ್ವವೇ ಆಗಿದೆ. ಆರಂಭದಲ್ಲಿ ಮೈಸೂರು, ಕರಾವಳಿ ಪ್ರದೇಶದಲ್ಲಿಯ ಈ ನವೋದಯ ಕಾವ್ಯದ ಹರಿವು ನಂತರ ಉತ್ತರ ಕರ್ನಾಟಕ ಮುಂಬೈ ಕರ್ನಾಟಕದ ಕಡೆಗೆ ಸ್ವಲ್ಪ ವ್ಯಾಪಿಸಿತ್ತು.ಆದರೆ ದೇಶಿ ಕಾವ್ಯ ಪರಂಪರೆಯಲ್ಲಿ ಮುಳುಗಿದ್ದ ಹೈದರಾಬಾದ್ ಕರ್ನಾಟಕಕ್ಕೆ ನವೋದಯ ಸಾಹಿತ್ಯವಾಗಲಿ,ನವ್ಯ ಸಾಹಿತ್ಯವಾಗಲಿ ಗಾಢವಾಗಿ ಪರಿಚಯವೇ ಆಗಲಿಲ್ಲ.ಆ ಕಾರಣದಿಂದ ಈ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಆ ಭಾಗದ ಕವಿಗಳಿಗೆ ಈ ಕಾವ್ಯ ಪ್ರೇರಣೆ

“ಸ್ವಾತಂತ್ರ್ಯ ಸಂಗ್ರಾಮಕ್ಕೆ ಕನ್ನಡ ಕಾವ್ಯದ ಕೊಡುಗೆ” ಕೇಂದ್ರ ಸಾಹಿತ್ಯ ಅಕಾಡೆಮಿ,ದೆಹಲಿ ಅವರ ವಿಚಾರ ಸಂಕಿರಣದಲ್ಲಿ ಡಾ.ಸಿದ್ದರಾಮ ಹೊನ್ಕಲ್‌ ಮಂಡಿಸಿದ ಪ್ರಬಂಧ.( ಪ್ರತಿಯೊಬ್ಬ ಕನ್ನಡ ಕವಿಯೂ ಓದಲೇಬೇಕಾದ ಬರಹ.) Read Post »

ಅನುವಾದ, ಕಥಾಗುಚ್ಛ, ನಿಮ್ಮೊಂದಿಗೆ

“ಡಾಟಾ ಕೇಂದ್ರದಲ್ಲಿ ದೆವ್ವ” ತೆಲುಗು ಕಥೆಯ ಅನುವಾದ,ರಂಗನಾಥ ರಾಮಚಂದ್ರರಾವು.ತೆಲುಗು ಮೂಲ : ಜಿ. ಉಮಾಮಹೇಶ್ವರ್

ಅನುವಾದ ಸಂಗಾತಿ ಡೇಟಾ ಕೇಂದ್ರದಲ್ಲಿ ದೆವ್ವ ತೆಲುಗು ಮೂಲ : ಜಿ. ಉಮಾಮಹೇಶ್ವರ್ಕನ್ನಡಕ್ಕೆ : ರಂಗನಾಥ ರಾಮಚಂದ್ರರಾವು ಡೇಟಾ ಕೇಂದ್ರದಲ್ಲಿ  ದೆವ್ವತೆಲುಗು ಮೂಲ : ಜಿ. ಉಮಾಮಹೇಶ್ವರ್ಕನ್ನಡಕ್ಕೆ : ರಂಗನಾಥ  ರಾಮಚಂದ್ರರಾವು  “ಈ ಘಟನೆ ನಡೆದು ಸುಮಾರು ಆರು ವರ್ಷಗಳೇ ಕಳೆದಿವೆ,’’ ಎಂದು ಕುಲಕರ್ಣಿ ಉಪೋದ್ಘಾತದಂತೆ ಹೇಳಿದರು. “ಈ ಪರಿಸ್ಥಿತಿಯಲ್ಲಿ, ಈ ಘಟನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದು ಸೂಕ್ತವೆಂದು ತೋರುತ್ತದೆ. ಈ ಘಟನೆಗೆ ನೇರವಾಗಿ ಸಂಬAಧಿಸಿದ ಮೂರ್ತಿ ಅವರು ಕೂಡ ಇಲ್ಲಿಯೇ ಇದ್ದಾರೆ. ಅವರು ಸಹ ನಮಗೆ ಕೆಲವು ವಿಷಯಗಳನ್ನು ಹೇಳುತ್ತಾರೆ. ಎಲ್ಲರೂ ಆಸಕ್ತಿಯಿಂದ ನೋಡುತ್ತಿದ್ದಾರೆ. ಹೈದರಾಬಾದ್‌ನಲ್ಲಿರುವ ಕೇಂದ್ರ ಸರ್ಕಾರದ ಸಂಶೋಧನಾ ಸಂಸ್ಥೆಯಿAದ ನಡೆಸಲಾದ ಅಲ್ಪಾವಧಿ ತರಬೇತಿ ಸಮಾರೋಪ ಸಭೆಗೆ ಕುಲಕರ್ಣಿ ಅವರನ್ನು ಮುಖ್ಯ ಅತಿಥಿಗಳಾಗಿ ಸಂಘಟಕರು ಕರೆದಿದ್ದರು. ಕುಲಕರ್ಣಿ ಅವರು ಇಂಟೆಲಿಜೆನ್ಸ್ ಕಛೇರಿಯಲ್ಲಿ ಐಟಿ ವಿಭಾಗದ ನಿರ್ದೇಶಕರಾಗಿ ಕೆಲಸ ಮಾಡಿ ಇತ್ತೀಚೆಗೆ ನಿವೃತ್ತರಾಗಿದ್ದರು. ಅವರ ಸರ್ವೀಸ್‌ನಲ್ಲಿ ಪರಿಹರಿಸಲಾಗದ ಮುಖ್ಯವಾದ ಕೇಸುಗಳನ್ನು, ಛೇದಿಸಿದ ಕೆಲವು ಆಸಕ್ತಿಕರವಾದ ಸವಾಲುಗಳನ್ನು ಕುರಿತು ಒಂದು ಪುಸ್ತಕವಾಗಿ ಹೊರ ತರಲಿದ್ದಾರೆ. ವಿಷಯ ಯಾವುದಾದರೂ ಒಳ್ಳೆಯ ಕಥೆಯಂತೆ, ಜನರಂಜಕವಾಗಿ ಅವರು ಹೇಳುತ್ತಾರೆಂದು ಅವರನ್ನು ಅನೇಕ ಸಭೆಗಳಿಗೆ ಕರೆಯುತ್ತಾರೆ. ಅವರು ವೃತ್ತಿಪರವಾಗಿ ಬೆಂಗಳೂರಿನಲ್ಲಿ ನೆಲೆಸಿದ್ದರೂ ಹೈದರಾಬಾದ್‌ನೊಂದಿಗೂ ಅವರ ಅನುಬಂಧವನ್ನು ಮರೆಯಲು ಸಾಧ್ಯವಿಲ್ಲವೆಂದು ಅವರೇ ಹೇಳಿಕೊಳ್ಳುತ್ತಾರೆ. “ಈ ಒಂದು ವಾರದ ತರಬೇತಿಯು ನಿಮಗೆ ಹೊಸ ವಿಷಯಗಳನ್ನು ಪರಿಚಯಿಸಿದೆ ಎಂದು, ನೀವು ಇಲ್ಲಿ ಕಲಿತ ವಿಷಯಗಳನ್ನು ನಿಮ್ಮ ವೃತ್ತಿ ಜೀವನದಲ್ಲಿ ಅನುಸರಿಸಿ, ಅದರಿಂದ ಪ್ರಯೋಜನ ಪಡೆಯುತ್ತಿರುವಿರೆಂದು ಆಶಿಸುತ್ತೇನೆ” ಎಂದು ಒಂದು ನಿಮಿಷ ತಡೆದು ಸಭಾಂಗಣದಲ್ಲಿರುವ ಎಲ್ಲಾ ಅತಿಥಿಗಳನ್ನು ಗಮನಿಸಿ ನೋಡಿದರು. ಐವತ್ತು ಜನ ಇಂಟಲಿಜೆನ್ಸ್ ಇನ್ಸ್ಪೆಕ್ಟರ್‌ಗಳು ತಮ್ಮ ರಿಫ್ರೆಷರ್ ತರಬೇತಿಯನ್ನು ಮುಗಿಸಿಕೊಂಡು ಮತ್ತೆ ತಮ್ಮ ತಮ್ಮ ಕರ್ತವ್ಯಗಳಿಗೆ ಹೋಗುವ ಮೊದಲು ಆಯೋಜಿಸಿದ್ದ ವಿದಾಯ ಸಮಾವೇಶವಿದು. ಬಹಳಷ್ಟು ಜನ ಅವರವರ ಮನೆಗಳನ್ನು, ಕುಟುಂಬಗಳನ್ನು ಬಿಟ್ಟು ಬಂದು ಒಂದು ವಾರವಾಗಿರುವುದರಿಂದ, ತರಬೇತಿ ಮುಗಿಯುವುದನ್ನೇ ಕಾಯುತ್ತ, ಯಾವಾಗ ರೈಲು ಹತ್ತುತ್ತೇವೆ ಎಂಬAತೆ ಇದ್ದರು. ಕುಲಕರ್ಣಿ ಅವರು ಸಣ್ಣಗೆ ನಕ್ಕರು – ನಿಮ್ಮ ತರಬೇತಿ ಕಾರ್ಯಕ್ರಮಕ್ಕೆ ಮೂರ್ತಿ ಅವರು ಕೋ ಆರ್ಡಿನೇಟರ್ ಆಗಿ ಇದ್ದರೆಂದರೆ – ಅವರು ಈ ವಾರದ ದಿನಗಳಲ್ಲಿ ನಿಮಗೆ ನಿಮ್ಮ ಅತ್ತೆಯವರ ಮನೆಯನ್ನು ಖಂಡಿತವಾಗಿ ನೆನಪಿಸಿರುತ್ತಾರೆ. ಅವರ ಆತಿಥ್ಯವನ್ನು ಅನುಭವಿಸಿದ್ದರಿಂದ ಆ ವಿಷಯವನ್ನು ನಾನು ಖಚಿತವಾಗಿ ಹೇಳಬಲ್ಲೆ. ಮೂರ್ತಿ ಅವರು ತುಂಬಾ ತಮಾಷೆ ಮನುಷ್ಯ. ಬಹುಶಃ ನೀವು ಈ ವಾರದಲ್ಲಿ ಅದನ್ನು ಗಮನಿಸಿಯೇ ಇರಬಹುದು. ಅದು ಮನೆಯಾದರೂ, ಕಛೇರಿಯಾದರೂ ಸುತ್ತಲಿನ ಪರಿಸರವನ್ನು ಹಿತಕರವಾಗಿ ಪರಿವರ್ತಿಸಬಲ್ಲ ಜಾಣ್ಮೆ, ಕೌಶಲ ಕೆಲವೇ ಜನರಿಗೆ ಇರುತ್ತದೆ. ಅದರಲ್ಲಿ ಮೂರ್ತಿಯವರು ಮೊದಲ ಸಾಲಿನಲ್ಲಿ ಇರುತ್ತಾರೆ.” ಎಂದು ಸ್ವಲ್ಪ ನಿಲ್ಲಿಸಿ, ಎಲ್ಲರೂ ಹೌದೆನ್ನುವಂತೆ ತಲೆದೂಗುತ್ತಿದ್ದರೆ, ತಾವೂ ಅದಕ್ಕೆ ಒಪ್ಪುವವರಂತೆ ತಲೆಯಾಡಿಸಿ, “ಅಂತಹ ಮೂರ್ತಿಯವರಿಗೆ ಒಂದು ರಾತ್ರಿ ನಿದ್ರೆಯನ್ನು ದೂರ ಮಾಡಿದ ಕಥೆ ಇದು” ಅಂದರು. ಎಲ್ಲರ ಮುಖದಲ್ಲೂ ನಗುಗಳು ಚಿಗುರಿವೆ. ಕುಲಕರ್ಣಿ ತನ್ನ ಲ್ಯಾಪ್‌ಟಾಪ್‌ನ ಬಟನ್ ಒತ್ತಿ ತನ್ನ ಎದುರಿಗಿದ್ದ ಸ್ಕಿçÃನ್ ಮೇಲೆ ಆ ಗೊಂಬೆ ಕಾಣಿಸುತ್ತಿದೆ ಎಂದು ನಿರ್ಧರಿಸಿಕೊಂಡು – “ಇದೇ ನಮ್ಮ ಕಥೆಯ ಸ್ಥಳ” ಎಂದು ಪ್ರೊಜೆಕ್ಟರ್ ಸ್ಕಿçÃನ್ ಮೇಲೆ ಗೊಂಬೆ ತೋರಿಸುತ್ತಾ ಹೇಳಿದರು, ಆ ನಂತರ ಸ್ಲೆöÊಡ್‌ನಲ್ಲಿ ಆ ಗೊಂಬೆಗೆ ಸಂಬAಧಿಸಿದ ವಿವರಗಳು ಹೀಗೆ ಇದ್ದವು. “2010 ವರ್ಷದಲ್ಲಿ ಪ್ರಾರಂಭಿಸಿ 2012ನಲ್ಲಿ ಮುಗಿಸಿದ ಕೇಂದ್ರ ಡೇಟಾ ಸೆಂಟರ್ ಆವರಣ. ಅದರ ವಿಸ್ತೀರ್ಣ 50 ಎಕರೆ. ನಗರಕ್ಕೆ 30 ಕಿಲೋಮೀಟರ್ ದೂರ. ಹೆದ್ದಾರಿಯಿಂದ 3 ಕಿಲೋಮೀಟರ್ ಒಳಗೆ, ರಂಗನಪಲ್ಲಿ ಗ್ರಾಮ ಪಂಚಾಯತಿ ಹತ್ರ. ಡೇಟಾ ಸೆಂಟರ್ ಸಾಮರ್ಥ್ಯ 500 ರಾಕ್ ಸ್ಪೇಸ್. ಹತ್ತು ಸಾವಿರ ಸರ್ವರ್‌ಗಳು, 10 ಜೇಟಾ ಬೈಟ್‌ಗಳ ಸ್ಟೋರೇಜ್. ಒಟ್ಟು ಕೇಂದ್ರ ಸರ್ಕಾರದ ಅಧೀನದಲ್ಲಿದ್ದ ಎಲ್ಲಾ ಇಲಾಖೆಗಳು, ಸಂಸ್ಥೆಗಳು ತಮ್ಮ ತಮ್ಮ ವಿಭಾಗಗಳ ಒಟ್ಟು ಮಾಹಿತಿಯನ್ನು ಇಲ್ಲೆ ಭದ್ರವಾಗಿ ಸಂಗ್ರಹಿಸುತ್ತಾರೆ. ವಿದ್ಯುತ್ ಸರಬರಾಜಿಗೆ ಅಡಚಣೆಯಾದರೆ 24 ಗಂಟೆಗಳವರೆಗೆ ಪರ್ಯಾಯ ವಿದ್ಯುತನ್ನು ಒದಗಿಸುವ ಜನರೇಟರ್‌ಗಳು, ಸಿಸಿಟಿವಿಗಳು, ಹಗಲು ರಾತ್ರಿ ಸುಶಿಕ್ಷಿತರಾದ ಕಾವಲುಗಾರರು… ದೇಶಕ್ಕೆ ಮಿದುಳಿನಂತಿದೆ ಈ ಸೆಂಟರ್.” ಪ್ರೊಜೆಕ್ಟರ್ ಆಫ್ ಮಾಡಿ ಮತ್ತು ಮೈಕ್‌ಅನ್ನು ಕೈಯಲ್ಲಿ ತೆಗೆದುಕೊಂಡು – “ಅಂತಹ ಸೆಂಟರ್‌ಗೆ ಮೂರ್ತಿ ಅವರು ಆಡಳಿತ ಮತ್ತು ನಿರ್ವಹಣಾಧಿಕಾರಿಯಾಗಿದ್ದರು. ಒಳ್ಳೆಯ ಕಲಾಭಿರುಚಿಯ ಮೂರ್ತಿ ಅವರು ಆ ಆವರಣವನ್ನು ಸುಂದರವಾಗಿ ರೂಪಿಸಿದರು. ಐವತ್ತು ಜನ ಟೆಕ್ನಿಕಲ್ ಸ್ಟಾಫ್, ಇನ್ನೂ ಐವತ್ತು ಜನ ಸಪೋರ್ಟ್ ಸ್ಟಾಫ್ ಇರಬಹುದೆಂದು ಭಾವಿಸುತ್ತೇನೆ. ಅಲ್ಲಿ ಎಲ್ಲರಿಗೂ ಕ್ವಾರ್ಟರ್ಸ್ ಇತ್ತು. ಆದರೆ ಕೆಲವರು ಸಿಟಿಯಿಂದ ಅಪ್ ಅಂಡ್ ಡೌನ್ ಮಾಡುತ್ತಿದ್ದರು. ಸೆಕ್ಯೂರಿಟಿ ಸ್ಟಾಫ್‌ಗೂ ಉತ್ತಮ ವಸತಿ ವ್ಯವಸ್ಥೆ ಇತ್ತು. ಸಿಟಿಯಿಂದ ದೂರ ಎಂಬ ಭಾವನೆ ಹೊರತು ಎಲ್ಲವೂ ಇತ್ತು. ಹೌದಲ್ಲವೇ ಮೂರ್ತಿ?” ಎಂದು ಮೂರ್ತಿಯವರ ಒಪ್ಪಿಗೆಗೆ ಒಂದು ಕ್ಷಣ ಬಿಟ್ಟು, ಮತ್ತೆ – “ಎಲ್ಲವೂ ಚೆನ್ನಾಗಿದೆ ಎಂದುಕೊಳ್ಳುತ್ತಿರುವ ದಿನಗಳಲ್ಲಿ, ಡೇಟಾ ಮಾತ್ರವೇ ಇರಬೇಕಾದ ಆ ಸೆಂಟರ್‌ನಲ್ಲಿ ಒಂದು ದೆವ್ವ ಬಂದಿದೆ.” ಎಲ್ಲರೂ ಮುಗುಳ್ನಗೆ ನಗುತ್ತಿದ್ದದ್ದು ನೋಡಿ, “ಅರೆ, ನೀವು ಸರಿಯಾಗಿ ಕೇಳಿದ್ದೀರಿ. ಆದರೆ, ಆ ದೆವ್ವ ಹೇಗೆ ಬಂತು ಎಂದು ಅದರ ಸಂಪೂರ್ಣ ವಿಷಯವೇನು ಅಂತ ಆಗಿನ ಆ ಸೆಂಟರ್ ನಿರ್ವಹಣಾಧಿಕಾರಿಯಾಗಿದ್ದ ಮೂರ್ತಿ ಅವರಿಂದಲೇ ಕೇಳೋಣ. ನಂತರ ನಾನು ಮುಂದುವರಿಯುತ್ತೇನೆ”ಎAದು ಹೆಳಿ ಮೈಕನ್ನು ಮೂರ್ತಿ ಕೈಗೆ ಕೊಟ್ಟ, ಮೂರ್ತಿ – ಈ ಅನಿರೀಕ್ಷಿತ ವಿನಂತಿಯನ್ನು ನಿರಾಕರಿಸಲು ಸಾಧ್ಯವಾಗದೆ ನಗುತ್ತಾ – “ಖಂಡಿತ” ಎಂದು ಹತ್ತು ಸೆಕೆಂಡುಗಳ ನಂತರ” ಎಲ್ಲಿಂದ ಪ್ರಾರಂಭಿಸ ಬೇಕೋ ನನಗೆ ತಿಳಿಯುತ್ತಿಲ್ಲ” ಎಂದ. ಮತ್ತೆ – “ಡೇಟಾ ಸೆಂಟರ್ ಕಾರ್ಯಕ್ರಮಗಳು ಪ್ರಾರಂಭವಾಗಿ ಎರಡು ವರ್ಷಗಳವರೆಗೂ ನಮಗೆ ವಿಪರೀತವಾದ ಕೆಲಸ ಇರುತ್ತಿತ್ತು. ಹೊಸಬರಿಗೆ ವಸತಿ ವ್ಯವಸ್ಥೆ, ಮಾರಾಟಗಾರರ ರಶ್, ಸರ್ಕಾರದ ಆದೇಶಗಳ ಪ್ರಕಾರ ನಮ್ಮೊಂದಿಗೆ ಡೇಟಾವನ್ನು ಭದ್ರಪಡಿಸಲು ಅಗತ್ಯವಾದ ವ್ಯವಸ್ಥೆಗಳು, ಅದಕ್ಕೆ ಸೂಕ್ತವಾದ ತರಬೇತಿಗಳು, ಹೀಗೆ ಎರಡು ವರ್ಷಗಳು ಬಿಡುವಿಲ್ಲದೇ ಕಳೆದು ಹೋದೆವು. ಅದರ ನಂತರ ಎಲ್ಲವೂ ಶಾಂತವಾದಾಗ ಒಂದು ಬೇಸಿಗೆಯ ಮಧ್ಯಾಹ್ನ ಸಾಹು ಎಂಬ ಇಂಜನಿಯರ್ ನನ್ನ ಕೋಣೆಯೊಳಗೆ ಬಂದ. ಸಾಮಾನ್ಯವಾಗಿ ಎಂಜಿನಿಯರ್‌ಗಳಿಗೆ ನನ್ನೊಂದಿಗೆ ಹೆಚ್ಚು ಕೆಲಸಗಳೇನು ಇರುವುದಿಲ್ಲ. ಅವರ ನಿವಾಸಗಳಲ್ಲಿ ಏನಾದರೂ ರಿಪೇರಿಗಳು ಇದ್ದರೆ, ಅಥವಾ ನಗರಕ್ಕೆ ಹೋಗಿ ಬರಲು ವಾಹನದ ವ್ಯವಸ್ಥೆಕ್ಕಾಗಿ ಈ ರೀತಿಯ ಸಣ್ಣಪುಟ್ಟ ಅಗತ್ಯಗಳಿರುತ್ತವೆ. ಆದರೇ ನಾನೇ ಅವರೊಂದಿಗೆ ಬೇಕೆಂದೇ ಮಾತನಾಡುತ್ತಾ ಸಂಜೆಗಳನ್ನು ಉತ್ಸಾಹ ಭರಿತವಾಗಿ ಕಳೆಯಲು ಟೆನ್ನಿಸ್ ಕೋರ್ಟ್ ಹಾಕಿಸಿ, ಇಂಡೋರ್ ಗೇಮ್ಸ್ ಆಟಗಳನ್ನು ಏರ್ಪಡಿಸಿ, ದೇಶದೆಲ್ಲೆಡೆಯಿಂದ ಬಂದವರಿಗೆ ಬೇಸರವಾಗದಂತೆ ನೋಡಿಕೊಳ್ಳುತ್ತಿದ್ದೆ. ಹೀಗಾಗಿಯೇ ಎಲ್ಲರೂ ಅದನ್ನು ನೆನಪಿಸಿಕೊಳ್ಳುವ ಸಲುಗೆ ಇರುತ್ತಿತ್ತು. ಬಂದವನು ಏನೂ ಮಾತಿಲ್ಲದೆ ಹಾಗೆ ನಿಂತಿದ್ದಾನೆ. ಯಾವುದಾದರೂ ದೊಡ್ಡ ವಿಷಯವೇನೋ ಎಂದು ಕುಳಿತುಕೊಳ್ಳಲು ಕುರ್ಚಿ ತೋರಿಸಿದೆ. ಆ ಹುಡುಗ ಸ್ವಲ್ಪ ಮುಜುಗರ, ಸಂಕೋಚದಿAದ … ಯಾವುದೋ ವಿಷಯವನ್ನು ಹೇಳಬೇಕೋ, ಇಲ್ಲವೋ ಎಂಬ ಅನುಮಾನದಿಂದ ಇದ್ದಂತೆ ನೆಲವನ್ನು ನೋಡುತ್ತಾ, ಮಾತಾಡಲು ತೊದಲುತ್ತಿದ್ದ. ನಾನೇ ಸಲುಗೆಯಿಂದ “ಹೇಳಿ, ಡೊಂಟ್ ವರಿ… ನನ್ನೊಂದಿಗೆ ನೀವು ಯಾವ ವಿಷಯವಾದರೂ ನಿರಭ್ಯಂತರವಾಗಿ, ನಿಸ್ಸಂದೇಹವಾಗಿ ಮಾತಾಡಬಹುದು” ಎಂದು ಭರವಸೆ ನೀಡಿದ ನಂತರ, “ಸರ್, ನೀವು ಬೇರೆ ರೀತಿಯಲ್ಲಿ ಅಂದುಕೊಳ್ಳುವುದಿಲ್ಲ ಎಂದರೆ ನಾನೊಂದು ವಿಷಯ ಹೇಳ್ತೇನೆ” ಎಂದು ಗುಟ್ಟನ್ನು ಹೇಳುವ ಹಾಗೆ ಮೇಜಿನ ಮೇಲೆ ಬಾಗಿ ಒರಗುತ್ತಾ, ನನ್ನ ಮುಖ ನೋಡುತ್ತಾ – “ಸರ್, ನಮ್ಮ ಡೇಟಾ ಸೆಂಟರ್ ಸುತ್ತಾ ರಾತ್ರಿಯಲ್ಲಿ ದೆವ್ವ ಸುತ್ತಾಡುತ್ತಿದೆ ಸಾರ್!” ನಾನು ಲಘುವಾಗಿ ಮುಗುಳ್ನಕ್ಕೆ. ತಕ್ಷಣ ಮುಖವೆಲ್ಲಾ ಗಂಭೀರವಾಗಿ ಇಟ್ಟುಕೊಂಡು – “ಅದನ್ನು ನೋಡಿದ್ದೀರಾ?” ಎಂದು ನಾನು ಮುಗಿಸುವುದರೊಳಗೆ, “ನೀವು ಖಂಡಿಸಲು ಸಿದ್ಧವಾಗುತ್ತಿದ್ದೀರಿ… ದಯವಿಟ್ಟು ನನ್ನ ಮಾತು ಕೇಳಿ. ಪ್ರತಿ ಅಮಾವಾಸ್ಯೆ, ಹುಣ್ಣಿಮೆಗಳಿಗೆ ಒಂದು ಐದು ದಿನಗಳಿಂದ, ಒಂದು ದೆವ್ವ ನಮ್ಮ ಸರ್ವರ್ ರೂಮ್ ಬಳಿ ಸುತ್ತಾಡುತ್ತಿದೆ. ನಮ್ಮ ನೆಟ್‌ವರ್ಕ್ ಇಂಜನೀಯರ್ ಕೂಡಾ ರಾತ್ರಿ ಯಲ್ಲಿ ಒಬ್ಬನೇ ಡ್ಯೂಟಿಯಲ್ಲಿ ಇದ್ದಾಗ ಆ ಚಪ್ಪಾಳೆಗಳನ್ನು ಕೇಳಿದ್ದಾನೆ. ಒಂದು ನೆರಳು ಚಲಿಸುತ್ತಾ ಹೋಗುವುದು, ನಡುನಡುವೆ ವಿಚಿತ್ರ ಶಬ್ದಗಳು ಮಾಡುವುದು, ಇವನ್ನೆಲ್ಲಾ ನೋಡಿದರೆ ನಮ್ಮ ಹಳೆಯ ಸೆಕ್ಯುರಿಟಿ ನರ್ಸಿಂಗ್ ಹೇಳಿದ ವಿಷಯ ನಿಜವೆನಿಸುತ್ತಿದೆ’’ ಎಂದು ವಿರಾಮವಿಲ್ಲದೆ ಮಾತಾಡಿದ. ಸಿದ್ಧವಾಗುತ್ತಿದ್ದೀರಿ ಅರ್ಥವಾಗಲಿಲ್ಲ. “ಅವನಿಗೆ ಹಲವು ರೀತಿಯಲ್ಲಿ ತಿಳಿಸಿ ಹೇಳಲು ಪ್ರಯತ್ನಿಸಿದೆ. ಆದರೆ ಅವರ ಅಭಿಪ್ರಾಯ ಬದಲಾಗಲಿಲ್ಲ.” ಮೂರ್ತಿಯವರ ಮಾತಿಗೆ ಅಡಚಣೆ ಮಾಡುತ್ತಾ ಕೇಳುಗರಲ್ಲಿ ಒಬ್ಬನು- “ಅದಕ್ಕೂ ಮುಂಚೆ ಸೆಕ್ಯುರಿಟಿ ಗಾರ್ಡ್ ಏನು ಹೇಳಿದನೋ ನೀವು ಹೇಳ್ಳಿಲ್ಲ.” ಮೂರ್ತಿ ಮುಗುಳ್ನಕ್ಕೂ, “ಸಿ.ಐ.ಎಸ್.ಎಫ್. ಅವರ ಆಗಮನದ ಮೊದಲು, ನರ್ಸಿಂಗ್ ಎಂಬ ಸ್ಥಳೀಯ ಏಜೆನ್ಸಿಯ ಸೆಕ್ಯುರಿಟಿ ಗಾರ್ಡ್ ಇದ್ದನು.. ಅವನೊಬ್ಬ ವಾಚಾಳಿ. ಅಲ್ಲಿನ ಕೆಲಸಗಾರರಿಗೆ, ಈ ಸ್ಥಳವು ಒಂದು ಕಾಲದಲ್ಲಿ ಸ್ಮಶಾನವೆಂದು, ಅಲ್ಲಿ ದೆವ್ವಗಳು ಓಡಾಡುತ್ತಿರುತ್ತವೆ ಎಂದು ಕಥೆಗಳನ್ನು ಹೇಳುತ್ತಿದ್ದನು. ಸೆಂಟರ್ ಚಟುವಟಿಕೆಗಳು ಸಿ.ಐ.ಎಸ್.ಎಫ್. ಅವರು ಪೂರ್ತಿ ಜಾಗವನ್ನು ತಮ್ಮ ಹತೋಟಿ ಒಳಗೆ ತೆಗೆದುಕೊಂಡಾಗ, ಅಲ್ಲೇ ತೋಟಗಾರನಾಗಿ ಮುಂದುವರೆದರು. ಆ ಸಮಯದಲ್ಲಿ, ತನ್ನ ಭಯವನ್ನು ಹೋಗಲಾಡಿಸಲು, ಒಂದು ಹನುಮಂತನ ಚಿತ್ರವನ್ನು ಇಟ್ಟು ಅದರ ಸುತ್ತಲೂ ನಾಲ್ಕು ಕಲ್ಲುಗಳನ್ನು ಹೂತಿಟ್ಟಿದನು., ಈ ಆಂಜನೇಯಸ್ವಾಮಿ ಇರುವವರೆಗೂ ಆ ದೆವ್ವಗಳು ಅಲ್ಲಿಗೆ ಬರುವುದಿಲ್ಲವೆಂದು ಎಲ್ಲರಿಗೂ ಹೇಳುವವವನು. ಕೆಲವು ದಿನಗಳ ನಂತರ, ಡ್ಯೂಟಿಯಲ್ಲಿ ಕುಡಿದು ಬಂದಿದ್ದಕ್ಕೆ ಕೆಲಸಕ್ಕೆ ಬರಬೇಡವೆಂದು ಹೇಳಿದರೆ ಸಿಟಿಯಲ್ಲಿರುವ ಅವರ ಮಗನ ಕಡೆ ಹೋಗಿಬಿಟ್ಟಿದ್ದಾನೆ. ಆದರೆ ಅಲ್ಲಿರುವ ದಿನಗಳು ದೆವ್ವದ ಬಗ್ಗೆ ಸುಮ್ಮನೆ ಗಡಿಬಿಡಿ ಮಾಡುವವನು. ಆ ವಿಷಯವನ್ನೇ ಸಾಹು ನೆನಪಿಸಿದ. ಮತ್ತೆ ನಮ್ಮ ಸಾಹು ಕಡೆಗೆ ಬಂದರೆ, ಆ ಹುಡುಗ ನನ್ನ ಮಾತುಗಳಿಂದ ಕನ್ವಿನ್ಸ್ ಆಗಲಿಲ್ಲ ಎಂದು ನಂತರದ ಅನೇಕ ಘಟನೆಗಳಿಂದ ನನಗೆ ಅರ್ಥವಾದವು. ಪ್ರತಿಯೊಂದು ಸಣ್ಣ ವಿಷಯವನ್ನು ಭೂತಗನ್ನಡಿಯಿಂದ ನೋಡುವುದು, ಪ್ರತಿ ವೈಫಲ್ಯವನ್ನು ದೆವ್ವಕ್ಕೆ ಆರೋಪಿಸುವುದು, ಅವನ ಮಾತಿನ ನಡುವೆ, ದೇವರಿದ್ದಾನೆಂದು ನಂಬಿದರೆ ದೆವ್ವಗಳೂ ಇವೆ ಎಂದು ನಂಬಬೇಕು ಅಲ್ಲವೇ, ಅವರ ಹಳ್ಳಿಯಲ್ಲಿ ಅವರ ಸಂಬAಧಿಕರಿಗೆ ಸಂಭವಿಸಿದ ಕೆಲವು ಅನುಭವಗಳು, ಹಾರರ್ಚಲನ ಚಿತ್ರಗಳ ಚರ್ಚೆ, ಈ ರೀತಿಯ ಇನ್ನೂ ಕೆಲವು. ಆದರೆ ಅವನ ಸ್ನೇಹಿತರು ಕೂಡಾ ಅವನನ್ನು ಚುಡಾಯಿಸುತ್ತಿದ್ದರು. ಯಾವುದಾದರೂ ವಸ್ತುವನ್ನು ಬಚ್ಚಿಟ್ಟುವುದು, ಅದನ್ನು ದೆವ್ವಕ್ಕೆ ಆರೋಪಿಸಿ ಸತಾಯಿಸುವುದು, ಹುಡುಗರು, ಒಬ್ಬಂಟಿಗರು, ಆ ವಯಸ್ಸಿನಲ್ಲಿ ಏನೇನು ಮಾಡಬೇಕೋ ಅವೆಲ್ಲಾ ಮಾಡಿ ತಮಾಷೆ ನೋಡುತ್ತಿದ್ದರು. ಒಮ್ಮೆ ಒಂದು ಅಪ್ಲಿಕೇಷನ್ ಸರ್ವರ್ ಕೆಲಸ ಮಾಡಲಿಲ್ಲ. ಸಾಹೂ ಸರ್ವರ್ ಅಡ್ಮಿನಿಸ್ಟೆçÃಟರ್. ಎಲ್ಲಾ ಸರ್ವರ್‌ಗಳು ಉತ್ತಮವಾಗಿವೆ, ಆದರೆ ಇದು ಮಾತ್ರ ಪ್ರತಿಕ್ರಿಯಿಸುತ್ತಿಲ್ಲ. ಆಗ ಅವನು ಎಷ್ಟು ಅವಸರ ಮಾಡಿದ್ದನೆಂದರೆ, ಯಾರೋ ತನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆಂದು, ತನ್ನ ಮೇಲೆ ಮಾಟ-ಮಂತ್ರ ಪ್ರಯೋಗಗಳು ಜರುಗುತ್ತಿದ್ದವೆಂದು, ಅದರ ಫಲವಾಗಿ ಆ ಸರ್ವರ್ ಕೆಲಸ ಮಾಡುತ್ತಿಲ್ಲವೆಂದು ಗೋಳಿಡುತ್ತಿದ್ದ. ಅವನನ್ನು ಹೊರಗೆ ಕಳಿಸಿ, ಕುಲಕರ್ಣಿ ಅವರಿಗೆ ಫೋನ್ ಮಾಡಿದೆವು. ಒಂದು -ಎರಡು ಗಂಟೆಗಳ ತನಿಖೆಯ ನಂತರ ನಮಗೆ ಗೊತ್ತಾದ ವಿಷಯವೇನೆಂದರೆ, ಅದೇನೋ ಡಿಡಾಸ್ ಎಟಾಕ್ ಎಂದು ಕರೆಯಲಾಗುತ್ತದೆ, ಅದರಿಂದ ಈ ಅನರ್ಥ ನಡೆದಿದೆ ಎಂದು ಕುಲಕರ್ಣಿ ತಂಡ ತೀರ್ಮಾನಿಸಿತು. ಯಾವುದೇ ಸಂದರ್ಭದಲ್ಲಿ ಡೇಟಾ ಸೆಂಟರ್‌ಗೆ ಇಂಟರ್ನೆಟ್ ಅನ್ನು ಕನೆಕ್ಟ್ ಮಾಡಬಾರದೆಂದು ಸೂಚಿಸಿದರು. ಅಲ್ಲಿಗೆ ವಿವಾದ ಇತ್ಯರ್ಥವಾಯಿತು. ಮೂರ್ತಿಯವರು ನಿರ್ವಾಹಕರನ್ನು ನೀರಿಗಾಗಿ ಕೇಳಿ ಎರಡು ಗುಟುಕುಗಳು ಕುಡಿದರು. “ನಿಮ್ಮ ಸಮಯವನ್ನು ಹೆಚ್ಚು ತೆಗೆದುಕೊಳ್ಳದೆಯೇ ವಿಷಯಕ್ಕೆ ಬರುತ್ತೀನಿ! ಈ ಡಿಡಾಸ್ ಘಟನೆ ನಂತರ

“ಡಾಟಾ ಕೇಂದ್ರದಲ್ಲಿ ದೆವ್ವ” ತೆಲುಗು ಕಥೆಯ ಅನುವಾದ,ರಂಗನಾಥ ರಾಮಚಂದ್ರರಾವು.ತೆಲುಗು ಮೂಲ : ಜಿ. ಉಮಾಮಹೇಶ್ವರ್ Read Post »

ನಿಮ್ಮೊಂದಿಗೆ

ದಯಾನಂದ ಮ. ಪಾಟೀಲ ಅವರ ಕವಿತೆ “ಮರೆಯಬೇಕು?”

ಕಾವ್ಯ ಸಂಗಾತಿ ದಯಾನಂದ ಮ. ಪಾಟೀಲ “ಮರೆಯಬೇಕು?” ನಡೆಯಬಾರದ ನೋವು ಮರೆಯಬೇಕು ಆದರೆ ಮರೆಯಲಾಗಲಿಲ್ಲ.ನಂಬಿದವರು ಕೈ ಕೊಟ್ಟಾಗ ಮರೆಯಬೇಕು? ಆದರೆ ಮರೆಯಲಾಗಲಿಲ್ಲ.ಹೆಜ್ಜೆ ಹೆಜ್ಜೆಗೂ ಅಪಮಾನ ಮಾಡಿದರೂ ಮರೆಯಬೇಕು ಆದರೆ ಮರೆಯಲಾಗಲಿಲ್ಲ.ದಡ್ಡ ದಡ್ಡ ಡಂಗುರ ಬಾರಿಸಿದರೂ ಮರೆಯಬೇಕು ಆದರೆ ಮರೆಯಲಾಗಲಿಲ್ಲ.ಮಗಳು ಜೀವ ಬಿಟ್ಟಾಗ ಮರೆಯಬೇಕು ಆದರೆ ಮರೆಯಲಾಗಲಿಲ್ಲ..ಆಸ್ಪತ್ರೆಗೆ ಹೋದ ಅಣ್ಣ ಶವವಾಗಿ ಬಂದಾಗ ಮರೆಯಬೇಕು ಆದರೆ ಮರೆಯಲಾಗಲಿಲ್ಲ.ಮಗನ ಸಾವಿನಲ್ಲಿ ಅಪ್ಪ ಜೀವ ಬಿಟ್ಟಾಗ ಮರೆಯಬೇಕು ಆದರೆ ಮರೆಯಲಾಗಲಿಲ್ಲ.ಸಣ್ಣ ಸಣ್ಣ ಮಕ್ಕಳು ಹಾದಿ ಬೀದಿಯಲ್ಲಿ ಸತ್ತಾಗ ಮರೆಯಬೇಕು ಆದರೆ ಮರೆಯಲಾಗಲಿಲ್ಲ.ಬಡವರ ನೋವು ಕಂಡಾಗ ಮರೆಯಬೇಕು ಆದರೆ ಮರೆಯಲಾಗಲಿಲ್ಲ.ಅಳುವು ದುಃಖ ಮರೆಯಬೇಕು ಆದರೆ ಮರೆಯಲಾಗಲಿಲ್ಲ… ದಯಾನಂದ ಮ. ಪಾಟೀಲ…..

ದಯಾನಂದ ಮ. ಪಾಟೀಲ ಅವರ ಕವಿತೆ “ಮರೆಯಬೇಕು?” Read Post »

ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ, ನಿಮ್ಮೊಂದಿಗೆ

ಧಾರಾವಾಹಿ ಸಂಗಾತಿ-31 ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್‌ ಚೇತನ ರಾಜಕೀಯಕ್ಕೆ ಪೂರ್ಣವಿರಾಮ ಅತ್ಯಂತ ಧೀಮಂತ ವ್ಯಕ್ತಿತ್ವ, ಪ್ರಖರ ವಾಗ್ಮಿತೆ ಮತ್ತು ಜನಮನ ಸೆಳೆಯುವ ಮಾತಿನ ಶೈಲಿಯನ್ನು ಹೊಂದಿದ್ದ ಜಯದೇವಿತಾಯಿಯವರು ರಾಜಕೀಯ  ಕ್ಷೇತ್ರದಲ್ಲಿ ಅಪಾರ ಗೌರವವನ್ನು ಗಳಿಸಿದ್ದರು.  ಅವರ ಒಂದು ಭಾಷಣವೇ ಸಾವಿರಾರು ಜನರ ಮನಸ್ಸಿನಲ್ಲಿ ಹೊಸ ಚೈತನ್ಯವನ್ನು ಮೂಡಿಸುವ ಶಕ್ತಿಯನ್ನು ಹೊಂದಿತ್ತು. ಅವರ ಮಾತುಗಳಲ್ಲಿ ಸತ್ಯದ ಕಿಡಿ, ಸಮಾಜದ ಕಳಕಳಿ ಮತ್ತು ಕನ್ನಡ ನಾಡಿನ ಬಗ್ಗೆ ಅಚಲವಾದ ಪ್ರೀತಿ ಪ್ರತಿಧ್ವನಿಸುತ್ತಿತ್ತು.  ರಾಜಕೀಯ ಪಕ್ಷದ ಅಭ್ಯರ್ಥಿಯಾಗಲಿ, ಚುನಾವಣಾ ಕಣಕ್ಕಿಳಿದಾಗ ಪ್ರಚಾರ ನಡೆಸಲು ಜಯದೇವಿತಾಯಿಯವರನ್ನು ಆಹ್ವಾನಿಸುತ್ತಿದ್ದರು. ಅವರು ವೇದಿಕೆಯಲ್ಲಿ ನಿಂತು ಮಾತನಾಡಿದರೆ ಜನಸಾಗರವೇ ಒಂದು ಸೂಜಿ ಬಿದ್ದರೂ ಅದರ ಶಬ್ದ ಕೇಳುವಷ್ಟು ಶಾಂತಿ ಆವರಿಸುತ್ತಿತ್ತು. ಅವರ ಮಾತುಗಳು….ಸಮಾಜದ ಜಾಗೃತಿ, ನ್ಯಾಯ ಮತ್ತು ಜನಸೇವೆಯ ಸಂದೇಶವನ್ನು ಸಾರುತ್ತಿದ್ದವು.ಜಯದೇವಿತಾಯಿಯವರ ಪ್ರಭಾವ ಎಷ್ಟಿತ್ತೆಂದರೆ, ಅವರು ಪ್ರಚಾರ ನಡೆಸಿದ ಕ್ಷೇತ್ರಗಳಲ್ಲಿ ಜನರು ಅಭ್ಯರ್ಥಿಗಿಂತಲೂ ಅವರ ವಿಚಾರಧಾರೆ ಮತ್ತು ವ್ಯಕ್ತಿತ್ವಕ್ಕೆ ಹೆಚ್ಚು ಮನ್ನಣೆ ನೀಡುತ್ತಿದ್ದರು.  ಅವರ ಸತ್ಯನಿಷ್ಠೆ, ನಿರ್ಭೀತ ನಿಲುವು ಮತ್ತು ಜನಪರ ಕಾಳಜಿಯಿಂದ  ಪಕ್ಷಗಳ ನಾಯಕರೂ ಅವರನ್ನು ಅಪಾರ ಗೌರವದಿಂದ ಕಾಣುತ್ತಿದ್ದರು.  ಜಯದೇವಿತಾಯಿಯವರನ್ನು ಕರೆಸಿಕೊಳ್ಳುವುದು ಅಭ್ಯರ್ಥಿಗಳಿಗೆ ಹೆಮ್ಮೆಯ ವಿಷಯವಾಗಿತ್ತು. ೧೯೫೧ರ ಚುನಾವಣೆಯ ಅಭ್ಯರ್ಥಿಗಳು  ಸಹಾಯ ಕೇಳಿ ಅವರನ್ನು ಕರೆದವರು…..ಲೋಕಸಭೆಯ ಅಭ್ಯರ್ಥಿಗಳಾಗಿದ್ದ ಶಿವಮೂರ್ತಿ ಸ್ವಾಮಿ, ವೀರಭದ್ರಪ್ಪ ಶಿರೂರ, ಮಹಾದೇವಮ್ಮ ಪಾಟೀಲ,ಶಂಕರ ಥಣಿ ಮುಂತಾದವರು ಸ್ವತಂತ್ರ ಪಕ್ಷದ ಅಭ್ಯರ್ಥಿಗಳಾಗಿದ್ದರು ಅವರು ಕರೆದಾಗ ಅಲ್ಲಿಯೂ ಕೂಡ ತಾಯಿಯವರು ಹೋಗುತ್ತಿದ್ದರು. ಜನತೆ ಅವರನ್ನು ಹರ್ಷಉಲ್ಲಾಸದಿಂದ ಸ್ವಾಗತಿಸುತ್ತಿದ್ದರು. ಅವರ ಭಾಷಣಕ್ಕೆ ಮಂತ್ರಮುಗ್ಧರಾಗುತ್ತಿದ್ದರು.ಒಂದು ಭಾಷಣ ಸಾವಿರಾರು ಜನರನ್ನು ಆಲೋಚನೆಗೆ ಹಚ್ಚುವ ಶಕ್ತಿಯನ್ನು ಹೊಂದಿತ್ತು. ಜಯದೇವಿತಾಯಿಯವರು ವೇದಿಕೆಗೆ ಏರಿದಾಗ ಅಭ್ಯರ್ಥಿಯ ಗೆಲುವಿಗಿಂತ ಸಮಾಜದ ಗೆಲುವಿನ ಬಗ್ಗೆ ಮಾತನಾಡುತ್ತಿದ್ದರು. ಅವರ ಭಾಷಣದ ಕೇಂದ್ರಬಿಂದು ಕನ್ನಡ ಭಾಷೆಯ ಅಭಿಮಾನ, ಕನ್ನಡ ನಾಡಿನ ಹಿತ, ಅಸ್ಪೃಶ್ಯರ ಉದ್ಧಾರ, ಮಹಿಳೆಯರ ಸ್ವಾಭಿಮಾನ, ಶಿಕ್ಷಣದ ಮಹತ್ವ ಮತ್ತು ಸಮಾಜದಲ್ಲಿ ಸಮಾನತೆಯ ಸ್ಥಾಪನೆ ಆಗಿತ್ತು. ಅವರು ಯಾವುದೇ ಪಕ್ಷದ ಹೊಗಳಿಕೆಯಲ್ಲಿ ಸಮಯ ವ್ಯರ್ಥ ಮಾಡುತ್ತಿರಲಿಲ್ಲ. ಬದಲಾಗಿ ಜನರಿಗೆ ತಮ್ಮ ಹಕ್ಕುಗಳ ಅರಿವು ಮೂಡಿಸಿ, ಸಮಾಜಮುಖಿ ಚಿಂತನೆ ಬೆಳೆಸುವ ಕೆಲಸ ಮಾಡುತ್ತಿದ್ದರು. ತಮ್ಮ ಭಾಷಣದಲ್ಲಿ ಅವರು ಹೀಗೆ ಹೇಳುತ್ತಿದ್ದರು..*”ನಾನು ಇಲ್ಲಿ ಯಾವುದೇ ಅಭ್ಯರ್ಥಿಯ ಪರವಾಗಿ ಮತ ಕೇಳಲು ಬಂದಿಲ್ಲ. ನಾನು ಚುನಾವಣೆಗೆ ನಿಂತಿಲ್ಲ. ನಿಮ್ಮ ಬದುಕು ಹೇಗಿದೆ, ನಿಮ್ಮ ನೋವು ಏನು, ನಿಮ್ಮ ಮಕ್ಕಳ ಭವಿಷ್ಯ ಹೇಗಿರಬೇಕು ಎಂಬುದನ್ನು ಅರಿಯಲು ಬಂದಿದ್ದೇನೆ. ಒಬ್ಬ ಅಭ್ಯರ್ಥಿ ಗೆದ್ದರೆ ಮತ್ತೊಬ್ಬ ಅಭ್ಯರ್ಥಿ ಸೋಲುವುದು ಸಹಜ.  ಸತ್ಯ, ನ್ಯಾಯ ಮತ್ತು ನಿಮ್ಮ ಭವಿಷ್ಯ ನಿಮ್ಮ ಹಕ್ಕಾಗಿರಬೇಕು. ಆದ್ದರಿಂದ ಪಕ್ಷವನ್ನು ನೋಡಿ ಮತ ಹಾಕಬೇಡಿ…ಒಳ್ಳೆಯ ವ್ಯಕ್ತಿಯನ್ನು ನೋಡಿ ಮತ ನೀಡಿ.”*ಈ ಮಾತುಗಳು ಜನರ ಮನಸ್ಸಿನ ಮೇಲೆ ಅಪಾರ ಪ್ರಭಾವ ಬೀರಿದವು. ರಾಜಕೀಯಕ್ಕಿಂತ ಜನಸೇವೆ ಮುಖ್ಯ ಎಂಬ ಸಂದೇಶವನ್ನು ಅವರು ಎಲ್ಲೆಡೆ ಸಾರಿದರು* ಅವರ ವ್ಯಕ್ತಿತ್ವವೇ ಜನರಲ್ಲಿ ವಿಶ್ವಾಸವನ್ನು ಮೂಡಿಸುತ್ತಿತ್ತು. ಜನರು ಅವರನ್ನು  ಸಮಾಜ ಸುಧಾರಕಿಯಾಗಿ ಕಾಣುತ್ತಿದ್ದರು.ಒಮ್ಮೆ ನಡೆದ ಚುನಾವಣೆಯಲ್ಲಿ ಅವರ ಉಪಸ್ಥಿತಿ ಮತ್ತು ಭಾಷಣಗಳು ಸ್ವತಂತ್ರ ಅಭ್ಯರ್ಥಿಗಳ ಪರವಾಗಿ ಜನಾಭಿಪ್ರಾಯವನ್ನು ತಿರುಗಿಸಿದವು ಎಂದು ಹೇಳಲಾಗುತ್ತದೆ. ಆ ಚುನಾವಣೆಯಲ್ಲಿ ಸ್ವತಂತ್ರ ಪಕ್ಷ ಉತ್ತಮ ಸಾಧನೆ ಮಾಡಿತು ಮತ್ತು ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಯಿತು ಎನ್ನುವ ಮಾತು ಜನರಲ್ಲಿ ಪ್ರಚಲಿತವಾಯಿತು.  *ಜಯದೇವಿತಾಯಿಯವರು ಜಯವನ್ನು ತಮ್ಮ ಸಾಧನೆ ಎಂದು ಎಂದಿಗೂ ಹೇಳಿಕೊಳ್ಳಲಿಲ್ಲ. “ಗೆಲ್ಲಬೇಕಾದದ್ದು  ಒಬ್ಬ ವ್ಯಕ್ತಿಯ  ಸತ್ಯ ಮತ್ತು ಸಮಾಜದ ಹಿತ” ಎಂಬುದೇ ಅವರ ನಿಲುವಾಗಿತ್ತು.*ಆದರೂ ಚುನಾವಣೆಯ ನಂತರ ಅವರು ರಾಜಕೀಯ ಪ್ರಚಾರದಿಂದ ಸಂಪೂರ್ಣವಾಗಿ ದೂರ ಉಳಿದರು. ಚುನಾವಣಾ ವೇದಿಕೆಗಳು ತಮ್ಮ ಆದರ್ಶಗಳಿಗೆ ಸೂಕ್ತವಾದ ಸ್ಥಳವಲ್ಲ ಎಂಬ ಅರಿವು ಅವರಿಗೆ ಮೂಡಲಾರಂಭಿಸಿತು. ಸ್ವಾತಂತ್ರ್ಯ ಹೋರಾಟದ ದಿನಗಳಲ್ಲಿ ಕಾಂಗ್ರೆಸ್ ಪಕ್ಷವು  ದೇಶಭಕ್ತರ ತ್ಯಾಗ, ಬಲಿದಾನ, ನಿಸ್ವಾರ್ಥ ಸೇವೆ ಮತ್ತು ಗಾಂಧೀಜಿಯವರ ಆದರ್ಶಗಳ ಪ್ರತೀಕವಾಗಿತ್ತು. ಜಯದೇವಿತಾಯಿಯವರೂ ಇದೇ ಆದರ್ಶಗಳಿಂದ ಪ್ರೇರಿತರಾಗಿ ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡಿದ್ದರು. .  ಸ್ವಾತಂತ್ರ್ಯಾನಂತರದ ರಾಜಕೀಯ ವಾತಾವರಣ ನಿಧಾನವಾಗಿ ಬದಲಾಗತೊಡಗಿತು. ತ್ಯಾಗ ಮತ್ತು ಸೇವೆಯ ಸ್ಥಾನದಲ್ಲಿ ಅಧಿಕಾರದ ಹಂಬಲ, ಸ್ವಾರ್ಥ ರಾಜಕಾರಣ ಮತ್ತು ಗುಂಪುಗಾರಿಕೆ ತಲೆ ಎತ್ತುತ್ತಿರುವುದನ್ನು ಜಯದೇವಿತಾಯಿಯವರು ನೋವಿನಿಂದ ಗಮನಿಸಿದರು.ಗಾಂಧೀಜಿಯವರು ಬೋಧಿಸಿದ ಸತ್ಯ, ಅಹಿಂಸೆ, ಸರಳತೆ, ನೈತಿಕತೆ ಮತ್ತು ಬಡವರ ಪರವಾದ ರಾಜಕಾರಣ ಕ್ರಮೇಣ ಮರೆಯಾಗುತ್ತಿರುವಂತೆ ಅವರಿಗೆ ಭಾಸವಾಯಿತು.ಒಮ್ಮೆ ಆದರ್ಶಗಳಿಗಾಗಿ ಬದುಕಿದ್ದ ಪಕ್ಷದಲ್ಲಿ ಈಗ ಆ ಆದರ್ಶಗಳು ಕೇವಲ ಭಾಷಣಗಳಲ್ಲಷ್ಟೇ ಕೇಳಿಬರುತ್ತಿದ್ದವು…..ಆದರೆ ಆಚರಣೆಯಲ್ಲಿ ಅವುಗಳ ಪ್ರತಿಫಲನ ಕಾಣುತ್ತಿರಲಿಲ್ಲ. ಮಾತು ಮತ್ತು ಕೃತಿಯ ನಡುವೆ ಹೆಚ್ಚುತ್ತಿರುವ ಅಂತರ ಅವರನ್ನು ತೀವ್ರವಾಗಿ ಕಾಡಿತು. ಅಧಿಕಾರಕ್ಕಾಗಿ ನಡೆಯುತ್ತಿದ್ದ ರಾಜಕೀಯ ಅವರ ಅಂತರಂಗವನ್ನು ನೋಯಿಸಿತು. ಜನಸೇವೆಯೇ ರಾಜಕಾರಣದ ಆತ್ಮವಾಗಿರಬೇಕು ಎಂಬ ಅವರ ನಂಬಿಕೆಗೆ  ಬೆಳವಣಿಗೆಗಳು ವಿರುದ್ಧವಾಗಿದ್ದವು. ಅಂತಹ ಸಂದರ್ಭದಲ್ಲಿ ಆಗಿನ ಹೈದರಾಬಾದ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಬಿ. ಕೃಷ್ಣರಾವ ಅವರು, ಕಾಂಗ್ರೆಸ ಪ್ರಭಾವಿ ಸದಸ್ಯೆಯಾಗಿದ್ದ ಜಯದೇವಿತಾಯಿಯವರು ಪಕ್ಷದ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರಕ್ಕೆ ಬರಲೇಬೇಕು ಎಂದು ವಿಶೇಷವಾಗಿ ಒತ್ತಾಯಿಸಿದರು. ಅವರ ಜನಪ್ರಿಯತೆ, ವಾಗ್ಮಿತೆ ಮತ್ತು ಜನರ ಮೇಲಿನ ಪ್ರಭಾವವನ್ನು ಕಾಂಗ್ರೆಸ್ ಬಳಸಿಕೊಳ್ಳಲು ಬಯಸಿತು.ಆದರೆ ಜಯದೇವಿತಾಯಿಯವರ ಮನಸ್ಸಿನಲ್ಲಿ ಆಗಲೇ ತೀವ್ರವಾದ ಆತ್ಮಸಂಘರ್ಷ ನಡೆಯುತ್ತಿತ್ತು.   ಅಂತಹ ವಾತಾವರಣದಲ್ಲಿ ಮುಂದುವರಿಯುವುದು ತಮ್ಮ ಅಂತರಾತ್ಮಕ್ಕೆ ವಿರುದ್ಧ ಎಂದು ಸ್ಪಷ್ಟವಾಗಿ ಅರಿತುಕೊಂಡರು.ಅವರು ದೃಢವಾಗಿ ಹೇಳಿದರು…..“ಗಾಂಧೀಜಿಯವರ ಆದರ್ಶಗಳಿಗೆ ವಿರುದ್ಧವಾಗಿ ಸಾಗುತ್ತಿರುವ ಪಕ್ಷದಲ್ಲಿ ನನ್ನ ಅಂತರಾತ್ಮ ಜನಸೇವೆ ಮಾಡಲು ಒಪ್ಪುವುದಿಲ್ಲ. ರಾಜಕಾರಣವು ಅಧಿಕಾರದ ದಾಹವೆ‌ ಆಗಿದೆ…. ಜನರ ಉದ್ಧಾರಕ್ಕಾಗಿ ಇರಬೇಕು. ಆದರ್ಶಗಳಿಲ್ಲದ ರಾಜಕೀಯದಲ್ಲಿ ನನಗೆ ಸ್ಥಾನವಿಲ್ಲ.ಈ ನಿರ್ಧಾರವು ಕ್ಷಣಿಕ ಭಾವೋದ್ವೇಗದಿಂದ ಬಂದದ್ದಲ್ಲ. ಅದು ದೀರ್ಘ ಆತ್ಮಪರಿಶೀಲನೆಯ ಫಲವಾಗಿತ್ತು. ಅಧಿಕಾರ, ಹುದ್ದೆ ಅಥವಾ ರಾಜಕೀಯ ಭವಿಷ್ಯಕ್ಕಿಂತ ತಮ್ಮ ಆತ್ಮಸಾಕ್ಷಿಯ ವಿರುದ್ಧ ನಾನು ಹೋಗಲಾರೆ” ಎಂದು ಘೋಷಿಸಿದರು. ಜಯದೇವಿತಾಯಿಯವರು ಕಾಂಗ್ರೆಸ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಸಕ್ರಿಯ ರಾಜಕೀಯದಿಂದ ಸಂಪೂರ್ಣವಾಗಿ ದೂರ ಸರಿದರು. ಅಧಿಕಾರದ ಹಾದಿಯನ್ನು ತೊರೆದು ಸಮಾಜಸೇವೆಯ ಹಾದಿಯನ್ನು ಆರಿಸಿಕೊಂಡರು.  ನಂತರ ತಮ್ಮ ಜೀವನವನ್ನು ಕನ್ನಡ ಭಾಷೆಯ ಅಭಿವೃದ್ದಿ, ಮಹಿಳಾ ಸಬಲೀಕರಣ, ಅಸ್ಪೃಶ್ಯರ ಉದ್ಧಾರ, ಶಿಕ್ಷಣದ ಪ್ರಸಾರ ಮತ್ತು ಸಮಾಜದ ಶೋಷಿತ ವರ್ಗಗಳ ಕಲ್ಯಾಣಕ್ಕೆ ಸಮರ್ಪಿಸಿದರು.ಜಯದೇವಿತಾಯಿಯವರ ಈ ನಿರ್ಧಾರವು  ತತ್ವಕ್ಕಾಗಿ ಅಧಿಕಾರವನ್ನು ತ್ಯಜಿಸಿದ ಅಪರೂಪದ ವ್ಯಕ್ತಿತ್ವದ ಘೋಷಣೆಯಾಗಿತ್ತು. ಅವರ ಈ ನಿಲುವು ಒಂದು ಸತ್ಯವನ್ನು ಸಾರಿತು…..ಹುದ್ದೆಗಿಂತ ಮೌಲ್ಯಗಳು ಶ್ರೇಷ್ಠ, ಅಧಿಕಾರಕ್ಕಿಂತ ಅಂತರಾತ್ಮ ದೊಡ್ಡದು, ರಾಜಕಾರಣಕ್ಕಿಂತ ಜನಸೇವೆ ಪವಿತ್ರವಾದುದೆಂದು. ಸಮಾಜ ಸೇವೆ, ಶಿಕ್ಷಣ, ಕನ್ನಡ ಭಾಷೆಯ ಉಳಿವು ಮತ್ತು ಶೋಷಿತ ವರ್ಗಗಳ ಅಭಿವೃದ್ಧಿಯೇ ತಮ್ಮ ಜೀವನದ ನಿಜವಾದ ಧ್ಯೇಯ ಎಂದು ಅವರು ನಿಶ್ಚಯಿಸಿದರು. ಹೀಗಾಗಿ ಅವರು ಚುನಾವಣಾ ಪ್ರಚಾರಕ್ಕೆ ಹೋದದ್ದು ಅದೇ ಮೊದಲೂ, ಅದೇ ಕೊನೆಯೂ ಆಯಿತು. ನಂತರ ತಮ್ಮ ಸಂಪೂರ್ಣ ಜೀವನವನ್ನು ಜನಸೇವೆ, ಕನ್ನಡದ ಸೇವೆ ಮತ್ತು ಸಾಮಾಜಿಕ ಪುನರುತ್ಥಾನಕ್ಕೆ ಸಮರ್ಪಿಸಿ, ಆದರ್ಶ ಸಮಾಜ ಸುಧಾರಕಿಯಾಗಿ ಚಿರಸ್ಥಾಯಿಯಾಗಿ ಉಳಿದರು. (ಮುಂದುವರಿಯುವುದು) ಸವಿತಾ ದೇಶಮುಖ

Read Post »

ನಿಮ್ಮೊಂದಿಗೆ

“ಮಿಲನ” ಪದ್ಮಲತಾ ಮೋಹನ್ ಅವರ ಬರಹ

ವಿಶೇಷ ಸಂಗಾತಿ ಪದ್ಮಲತಾ ಮೋಹನ್ “ಮಿಲನ” ಮಿಲನ.ಮತ್ತೆ ಬರುವೆನೆಂದು ಮಾತು ಕೊಟ್ಟವನುಹೊತ್ತು ಮೀರಿದರು ಯಾಕೋ ಸುಳಿವಿಲ್ಲಹೊಸಿಲೊಳಗೆ ಇಟ್ಟ ಹೂವಿನಲಿ ಕಂಪಿಲ್ಲಹಗಲಿರುಳು ಬಯಕೆಯ ಕನವರಿಕೆಕಾದು ಕಾವೇರಿದೆ ತನು,  ಇಲ್ಲ ಚೇತರಿಕೆ.ನೋಟ ನೆಟ್ಟಿದೆ ಆ ದಿಗಂತದೆಡೆಗೆಶೂನ್ಯವೇ ಅಲ್ಲಿ ತೇಲಾಡಿದೆ,ಬರೀ ಬೆಳಕು ಶಬ್ದಗಳ ಆರ್ಭಟವೋಮರುಭೂಮಿಯಲಿ ಮರೀಚಿಕೆ ಕಂಡಂತೆ.ದೇಹವಿಡೀ ವ್ಯಾಪಿಸಿದ ವಿರಹ ಜ್ವಾಲೆಸುಡುತಿದೆ ಬೇಗೆ ತನ್ನೊಡಲನ್ನೇ!ಬತ್ತಿರುವ ಬೆಂಗಾಡು,  ಸುರಿಸಲಿಲ್ಲ ಹನಿ ಕಣ್ಣೀರು!ಗುಡಿಗೋಪುರದಲ್ಲಿ, ನಡೆಯಿತುನಿತ್ಯ, ಪೂಜೆ ಪುನಸ್ಕಾರ, ಅವನಿಗಾಗಿಅವಳ ಮೇಲಿನ ಕಾಳಜಿಗಾಗಿಅವರಿಬ್ಬರ ಮಿಲನ,  ಒಳಿತಿಗಾಗಿ.ಉಂಗುರ ನೋಡಿ ದುಷ್ಯಂತನಿಗೆ ನೆನಪು ಬಂದಿತ್ತುಇವನಿಗೂ ಹಾಗೆ ಏನೋ ನೆನಪಾಯಿತುತಡವಾಗಿಯಾದರು ಕೊನೆಗೂ ಬಂದಮೆತ್ತಗೆ  ಹಿತವಾಗಿ ರಮಿಸುತ್ತಿದ್ದವನುಯಾಕೋ  ಬದಲಾಗಿಬಿಟ್ಟಿದ್ದರಭಸದಿ,  ಸೆಳೆದು ಮುತ್ತುಗಳ ಮಳೆಸುರಿಸಿದ್ದ.ವಿರಹ ಬೇಗೆಗೆ ಮುತ್ತಿನ ಮಳೆಗೆ  ಭೂಮಿ(ಅವಳು) ಬಾಯಿ ತೆರೆದಿದ್ದುನಾಂದಿ ಹಾಡಿತು ಸರ್ವನಾಶಕ್ಕೆ.ಮಸಣವಾಯಿತು ಬದುಕುಅವರಿಬ್ಬರ ಮಿಲನಕ್ಕೆ! ಪದ್ಮಲತಾ ಮೋಹನ್. .

“ಮಿಲನ” ಪದ್ಮಲತಾ ಮೋಹನ್ ಅವರ ಬರಹ Read Post »

ನಿಮ್ಮೊಂದಿಗೆ

ಕಾವ್ಯ ಸುಧೆ ಅವರ ಕವಿತೆ “ಭಾವಯಾನ “

ಕಾವ್ಯ ಸಂಗಾತಿ ಕಾವ್ಯ ಸುಧೆ “ಭಾವಯಾನ “ ತುಂಬಿದ ನಿನ್ನೊಲವ ಜೋಳಿಗೆಯಿಂದನನಗೂ ತುಸು ಉಣಬಡಿಸಬಾರದೇಕನಸು ಮುನಿಸು ಸಮವಾಗಿ ಜೋಡಿಸುಶುರುವಾಗಲಿ ನಮ್ಮಿ ಭಾವಯಾನ ಜೊತೆಗಿರಲು ಬೇಕಷ್ಟಿಷ್ಟು ಸಡಿಲತೆಇರಬೇಕು ಎಚ್ಚರಿಕೆ ಇನಿತುನೆನಪಲೆ ನಗುವ ಕಲಿಯಲಿ ಮನಮಧುರ ಸಂಯಮವೇ ಹೆಸರದಕೆ ಅದೇನಿದ್ದರೂ ನಿನ್ನ ನಂತರನಿನ್ನ ಅನುರಾಗವೇ ನಿರಂತರಹಾಕಲ್ಹೇಗೆ ಮನಕೆ ಕಡಿವಾಣಭೇದಿಸುವುದೇ ಪ್ರೇಮದ ನಿಯಮ….!! ಕಾವ್ಯ ಸುಧೆ.

ಕಾವ್ಯ ಸುಧೆ ಅವರ ಕವಿತೆ “ಭಾವಯಾನ “ Read Post »

ನಿಮ್ಮೊಂದಿಗೆ

ಉಷಾರಾಣಿ ಗುರುಪ್ರಸಾದ ಕವಿತೆ “ನಿರಾಸೆ”

ಕಾವ್ಯ ಸಂಗಾತಿ ಉಷಾರಾಣಿ ಗುರುಪ್ರಸಾದ  “ನಿರಾಸೆ” ಕನಸುಗಳ ಗೋಪುರಕೆ ಕಲ್ಲು ಬಿದ್ದಂತೆ,ಹಚ್ಚಿದ ದೀಪತಾನಾಗಿಯೇ ಆರಿದಂತೆ,ನಂಬಿಕೆಯ ದಾರಿಯಲಿ ಮುಳ್ಳು ಸಿಕ್ಕಂತೆ,ಮನಸೀಗ ಮೌನವಾಗಿದೆ, ಏನೂ ತೋಚದಂತೆ. ಆಸೆಯ ಚಿಗುರೊಡೆದು ನಿಂತ ಕೊಂಬೆಗೆ,ಬರಗಾಲದ ಬಿಸಿಲು ತಗುಲಿದ ಹಾಗೆ,ನೆನೆದ ಸುಖದ ದಿನಗಳೆಲ್ಲ ದೂರ ಸರಿದು,ಹೃದಯದ ಮೂಲೆಲಿ ನೋವು ಮನೆ ಮಾಡಿದೆ. ಯಾರನ್ನು ನೋಯಿಸಲಿ, ಯಾರಿಗೆ ದೂಷಿಸಲಿ?ನನ್ನದೇ ವಿಧಿಯ ಆಟ ಹೇಗೆ ನಗಲಿ?ಪ್ರತಿ ಬಾರಿ ಗೆಲುವಿನ ದಡ ಮುಟ್ಟುವ ಮುನ್ನ,ನಿರಾಸೆಯ ಅಲೆಯು ಬಂದು ಮುಳುಗಿಸುವುದೆನ್ನ. ಆದರೂ ಒಂದು ಭರವಸೆ ಮೂಡದಿರದು,ಕತ್ತಲೆಯ ನಂತರ ಬೆಳಕು ಬಾರದಿರದು,ಇಂದಿನ ಈ ನಿರಾಸೆಯಕಹಿ ಕಣ್ಣೀರು,ನಾಳೆಯ ಯಶಸ್ಸಿಗೆಹಾದಿ ರಾಜಮಾರ್ಗ .ಉಷಾರಾಣಿ ಗುರುಪ್ರಸಾದ 

ಉಷಾರಾಣಿ ಗುರುಪ್ರಸಾದ ಕವಿತೆ “ನಿರಾಸೆ” Read Post »

ನಿಮ್ಮೊಂದಿಗೆ

ಎಡ್ಗರ್‌ ಅಲಾನ್‌ ಪೋನ ಕತೆ “ದ ಮಾಸ್ಕ್‌ ಆಫ್‌ ದ ರೆಡ್‌ ಡೆತ್‌” ನ ರೂಪಾಂತರ “ಕೆಂಪು ಮೃತ್ಯುವಿನ ಛದ್ಮವೇಷ”ಬಿ. ವಿ. ರಾಮಪ್ರಸಾದ್ ಅವರಿಂದ

ಅನುವಾದ ಸಂಗಾತಿ ಬಿ. ವಿ. ರಾಮಪ್ರಸಾದ್ ಎಡ್ಗರ್‌ ಅಲಾನ್‌ ಪೋ “ದ ಮಾಸ್ಕ್‌ ಆಫ್‌ ದ ರೆಡ್‌ ಡೆತ್‌” “ಕೆಂಪು ಮೃತ್ಯುವಿನ ಛದ್ಮವೇಷ” ಕೆಂಪು ಮೃತ್ಯುವಿನ ಛದ್ಮವೇಷ ಎಡ್ಗರ್‌ ಅಲಾನ್‌ ಪೋನ ಕತೆ ದ ಮಾಸ್ಕ್‌ ಆಫ್‌ ದ ರೆಡ್‌ ಡೆತ್‌ ನ ರೂಪಾಂತರ “ಕೆಂಪು ಮೃತ್ಯು” ದೀರ್ಘ ಕಾಲದವರೆಗೆ ನಾಡನ್ನು ಹಾಳುಗೆಡವಿತ್ತು. ಅಲ್ಲಿಯವರೆಗಿನ ಯಾವ ಜಾಡ್ಯವೂ ಅಷ್ಟು ಮಾರಣಾಂತಿಕ ಅಥವಾ ವಿಕಾರವಾಗಿರಲಿಲ್ಲ. ರಕ್ತವೇ – ರಕ್ತದ ಕೆಂಪು ಮತ್ತು ಅದರ ಭೀಕರತೆಯೇ – ಅದರ ಅವತಾರ, ಮೊಹರು. ಚುಚ್ಚಿದಂತ ನೋವು, ಮತ್ತು ತಲೆ ತಿರುಗುವಿಕೆ, ಮತ್ತು ರಂಧ್ರಗಳ ಮೂಲಕ ಸೋರುತ್ತಿರುವ ರಕ್ತ ಮತ್ತು ಕೀವು, – ಇವು ಅದರ ಲಕ್ಷಣಗಳು. ಬಲಿಪಶುವಿನ ದೇಹದ, ಅದರಲ್ಲೂ ಮುಖದ ಮೇಲಿನ ಕಡುಕೆಂಪು ಕಲೆಗಳು ಅವನನ್ನು ಕ್ರಿಮಿಯಾಗಿಸಿ ಸಹಚರರ ಸಹಾಯ ಹಾಗು ಸಹಾನುಭೂತಿಯಿಂದ  ದೂರ ಮಾಡುತ್ತಿದ್ದವು.  ಮತ್ತು ರೋಗ ಬರುವುದು, ಜೋರಾಗುವುದು, ಮತ್ತು ಸಾವಿನಲ್ಲಿ ಕೊನೆಗೊಳ್ಳುವುದು – ಕೇವಲ ಅರ್ಧ ತಾಸಿನ ಘಟನೆಗಳಾಗಿದ್ದವು. ಆದರೆ ದೊರೆ ಪ್ರಾಸ್ಪೆರೊ ಖುಷಿಯಾಗಿದ್ದ, ನಿರ್ಭೀತನಾಗಿದ್ದ ಮತ್ತು ಜಾಣನಾಗಿದ್ದ. ತನ್ನ ನಾಡಿನ ಜನಸಂಖ್ಯೆ ಅರ್ಧಕರ್ಧ ಅಳಿದುಹೋದಾಗ, ತನ್ನ ಆಸ್ಥಾನಿಕರಲ್ಲಿ ಗಂಡು ಹೆಣ್ಣು ಸೇರಿದಂತೆ ಗಟ್ಟಿಮುಟ್ಟಾದ ಮತ್ತು ಉಲ್ಲಾಸದಿಂದ ತುಂಬಿರುವ ಸಾವಿರ ಜನರನ್ನು ಸನ್ನಿಧಿಗೆ ಕರೆದು  ಕೋಟೆಯೊಂದರಲ್ಲಿ ಸಂಪೂರ್ಣ ಪ್ರತ್ಯೇಕ ವಾಸಕ್ಕೆ ತೆರಳಿದ. ಆ ಕೋಟೆಯೋ, ವಿಶಾಲವಾದ ಮತ್ತು ಮಹಾವೈಭವದ ಆಕೃತಿ – ದೊರೆಯ ವಿಲಕ್ಷಣ ಆದರೂ ಭವ್ಯ ಅಭಿರುಚಿಯ ಪ್ರತೀಕ. ಆ ಕೋಟೆಗೆ ಎತ್ತರದ ಗಟ್ಟಿಮುಟ್ಟಾದ ಗೋಡೆಯಿತ್ತು. ಈ ಗೋಡೆಗೆ ಕಬ್ಬಿಣದ ದ್ವಾರಗಳಿದ್ದವು. ಒಳಸೇರಿಕೊಂಡ ಆಸ್ಥಾನಿಕರು ಕುಲುಮೆಗಳನ್ನು ಮತ್ತು ಭಾರವಾದ ಸುತ್ತಿಗೆಗಳನ್ನು ತಂದು ಅಗಣಿಗಳನ್ನು ಜೋಡಿಸಿದರು. ಒಳಗಿನ ಹತಾಶೆ ಅಥವಾ ಉನ್ಮಾದದ ಹಠಾತ್‌ ಪ್ರಚೋದನೆಗಳಿಗೆ ಆಗಮನದ್ದಾಗಲೀ, ನಿರ್ಗಮನದ್ದಾಗಲೀ ಯಾವುದೇ ದಾರಿಯಿರಬಾರದೆಂದು ತೀರ್ಮಾನ ಮಾಡಿದರು. ಕೋಟೆಯಲ್ಲಿ ಸಾಕಷ್ಟು ಸಾಮಾನು ಸರಂಜಾಮುಗಳಿದ್ದವು. ಇಷ್ಟೆಲ್ಲಾ ಮುಂಜಾಗ್ರತೆ ವಹಿಸಿರುವುದರಿಂದ ಆಸ್ಥಾನಿಕರು ಸೋಂಕಿಗೆ ಸವಾಲೆಸೆಯುವುದು ಸಾಧ್ಯವಿತ್ತು. ಹೊರ ಜಗತ್ತಿಗೆ ಏನಾದರೂ ಆಗಲಿ. ಅದಕ್ಕಾಗಿ ದುಃಖಿಸುವುದಾಗಲೀ, ಅದರ ಬಗ್ಗೆ ಚಿಂತಿಸುವುದಾಗಲೀ, ಮೂರ್ಖತನ. ದೊರೆ ವಿಲಾಸಕ್ಕೆ ಅಗತ್ಯವಾದ ಎಲ್ಲದ್ದಕ್ಕೂ ವ್ಯವಸ್ಥೆ ಮಾಡಿಕೊಂಡಿದ್ದ. ಅಲ್ಲಿ ವಿದೂಷಕರಿದ್ದರು. ಅಲ್ಲಿ ಆಶುಕವಿಗಳಿದ್ದರು, ಅಲ್ಲಿ ನರ್ತಕರಿದ್ದರು, ಅಲ್ಲಿ ಸಂಗೀತಗಾರರಿದ್ದರು, ಅಲ್ಲಿ ಸೌಂದರ್ಯವಿತ್ತು, ಅಲ್ಲಿ ಹೆಂಡವಿತ್ತು. ಇವೆಲ್ಲಾ ಮತ್ತು ರಕ್ಷಣೆಗೆ ಭಟರು ಒಳಗೆ: ಹೊರಗಡೆ ʼʼಕೆಂಪು ಮೃತ್ಯುʼʼ. ಈ ಗುಪ್ತವಾಸದಲ್ಲಿರುವ ಐದನೇ ಅಥವಾ ಆರನೇ ತಿಂಗಳು ಹತ್ತಿರ ಬಂದಾಗ, ಮತ್ತು ಹೊರಗಡೆ ಮಹಾಮಾರಿ ರೌದ್ರಾವತಾರದಲ್ಲಿ ಅಬ್ಬರಿಸುತ್ತಿರುವಾಗ, ದೊರೆ ತನ್ನ ಸಾವಿರ ಹಿಂಬಾಲಕರಿಗೆ ಅಸಾಮಾನ್ಯ ಭವ್ಯತೆಯ ಛದ್ಮವೇಷದ ಔತಣಕೂಟವನ್ನು ಏರ್ಪಟಿಸಿದನು. ಆ ಔತಣಕೂಟವೋ, ಅತೀವ ಭೋಗವಿಲಾಸದ್ದಾಗಿತ್ತು. ಆದರೆ ಮೊದಲು ಆ ಔತಣಕೂಟ ನಡೆದ ವಿಲಾಸ ಖಾನೆಯ ಕೊಠಡಿಗಳ ವಿವರಣೆ ಕೊಡುತ್ತೇನೆ ಇರಿ. ಅದು ಏಳು ಕೊಠಡಿಗಳ ಒಂದು ಸೌದ. ಅನೇಕ ಸೌದಗಳಲ್ಲಿ ಕೊಠಡಿಗಳು ಸಾಮಾನ್ಯವಾಗಿ ಒಂದರ ಪಕ್ಕ ಒಂದು ಮತ್ತು ಎದುರು ಬದುರು ಇದ್ದು ಅಷ್ಟನ್ನು ಒಟ್ಟಿಗೆ ನೋಡುವುದಕ್ಕಾಗುವ ಹಾಗಿರುತ್ತದೆ. ಆದರೆ ಇಲ್ಲಿ ಹಾಗಿರಲಿಲ್ಲ; ದೊರೆಯ ಅತಿರೇಕಗಳ ಮೇಲಿನ ಮೋಹ ಹಾಗಿರಲು ಬಿಡುತ್ತಿರಲಿಲ್ಲ. ಕೋಣೆಗಳು ಹೇಗೆ ಅಡ್ಡಾದಿಡ್ಡಿಯಾಗಿದ್ದವೆಂದರೆ ಒಮ್ಮೆಗೆ ಒಂದು ಕೋಣೆ ಮಾತ್ರ ಕಾಣುತಿತ್ತು. ಪ್ರತಿ ಇಪ್ಪತ್ತು ಮೂವತ್ತು ಗಜಗಳಲ್ಲಿ ಒಂದು ಹಠಾತ್‌ ತಿರುವಿತ್ತು, ಮತ್ತು ಪ್ರತೀ ತಿರುವಿನಲ್ಲೂ ಏನೋ ಹೊಸ ದೃಶ್ಯ. ಪ್ರತೀ ಗೋಡೆಯ ಮಧ್ಯಭಾಗದಲ್ಲಿ, ಎಡಕ್ಕೆ ಹಾಗು ಬಲಕ್ಕೆ, ಕಿರಿದಾದ, ನೀಳವಾದ ಕಿಟಕಿಗಳು. ಈ ಕಿಟಕಿಗಳಿಗೆ ಪ್ರತಿ ಕಿಟಕಿಯ ಒಳಗಿನ ಕೋಣೆಯಲ್ಲಿನ ಒಳಾಂಗಣ ವಿನ್ಯಾಸದ ಬಣ್ಣದ್ದೇ ಗಾಜು. ಉದಾಹರಣೆಗೆ, ತೀರಾ ಪೂರ್ವದ ಕೊಠಡಿಯಲ್ಲಿನ ಅಲಂಕಾರಿಕ ಬಟ್ಟೆಗಳ ಬಣ್ಣ ನೀಲಿ – ಮತ್ತು ಅದರ ಕಿಟಕಿಯ ಗಾಜುಗಳು ಅಚ್ಚ ನೀಲಿ ಬಣ್ಣದವು. ಎರಡನೇ ಕೊಠಡಿಯ ತೂಗು ಬಟ್ಟೆಗಳು ಬೂದಿ ಬಣ್ಣದ್ದು; ಅದರ ಕಿಟಕಿಯ ಗಾಜೂ ಬೂದಿ ಬಣ್ಣದ್ದು. ಮೂರನೆಯ ಕೊಠಡಿ ಹಸಿರುಮಯ, ಅದರ ಕಿಟಕಿಯ ಗಾಜುಗಳೂ ಅಷ್ಟೆ. ನಾಲಕ್ಕನೆಯ ಕೊಠಡಿಯ ಅಲಂಕಾರ ಹಾಗು ಬಣ್ಣ ಕಿತ್ತಳೆ, ಐದನೆಯದು ಬಿಳಿ, ಆರನೆಯದು ನೇರಳೆ. ಏಳನೆಯ ಕೊಠಡಿಯಲ್ಲಿ ಕಪ್ಪು ವೆಲ್ವೆಟ್‌ ಅಲಂಕಾರಿಕ ಬಟ್ಟೆಗಳು ತಾರಸಿ ಗೋಡೆಗಳ ಮೇಲೆಲ್ಲ ಆವರಿಸಿ ಕೆಳಗಿನ ಅದೇ ಬಣ್ಣದ ಅದೇ ರೀತಿಯ ನೆಲಹಾಸಿನ ಮೇಲೆ ಮಡಿಕೆ ಮಡಿಕೆಯಾಗಿ ಬಿದ್ದಿದ್ದವು. ಆದರೆ ಈ ಕೊಠಡಿಯಲ್ಲಿ ಮಾತ್ರ ಒಳಗಿನ ಅಲಂಕಾರದ ಬಣ್ಣಕ್ಕೆ ಸಮನಾಗಿ ಕಿಟಕಿ ಗಾಜಿನ ಬಣ್ಣವಿರಲಿಲ್ಲ. ಕಿಟಕಿ ಗಾಜುಗಳು ಕಡುಕೆಂಪಿನ ಬಣ್ಣದ್ದಾಗಿದ್ದವು – ರಕ್ತ ಕೆಂಪು ಬಣ್ಣ. ಏಳೂ ಕೊಠಡಿಗಳಲ್ಲಿ ಸುವರ್ಣ ಆಭರಣಗಳು ನೆಲದ ಮೇಲೆ ಚೆಲ್ಲಾಪಿಲ್ಲಿಯಾಗಿ ಆಥವಾ ತಾರಸಿಯಿಂದ ತೂಗುಹಾಕಿಸಿಕೊಂಡು ಇದ್ದವೇ ಹೊರತು ಯಾವುದರಲ್ಲೂ ದೀಪಗಳಾಗಲೀ, ದೀಪಸ್ತಂಭಗಳಾಗಲೀ ಇರಲಿಲ್ಲ. ಈ ವಿಲಾಸ ಖಾನೆಯ ಯಾವುದೇ ಕೊಠಡಿಗಳಲ್ಲಿ ದೀಪದಿಂದಾಗಲೀ, ಹಣತೆಯಿಂದಾಗಲೀ ಹರಡುವ ಬೆಳಕಿರಲಿಲ್ಲ. ಆದರೆ ಪ್ರತೀ ಕೊಠಡಿಯ ಹೊರಗಿನ ಹಜಾರದಲ್ಲಿ, ಪ್ರತೀ ಕಿಟಕಿಯ ಹೊರಗೆ ಒಂದು ದೊಡ್ಡ ಪಂಜು ಬೆಂಕಿ ಉಗುಳುತ್ತಾ ಬಣ್ಣದ ಗಾಜಿನ ಮೂಲಕ ಕಿರಣಗಳನ್ನು ತೂರಿಸಿ ಪ್ರತೀ ಕೊಠಡಿಗೆ  ಕಣ್ಣು ಕುಕ್ಕುವ ಬೆಳಕನ್ನು ಚೆಲ್ಲುತಿತ್ತು. ಮತ್ತು ಹೀಗೆ ಅನೇಕ ಆಡಂಬರದ ಭ್ರಾಮಕ ರೂಪಗಳು ಸೃಷ್ಟಿಯಾಗಿದ್ದವು. ಆದರೆ ಪಶ್ಚಿಮದ ಅಥವಾ ಕಪ್ಪು ಕೋಣೆಯಲ್ಲಿ ರಕ್ತ ಸಿಂಚಿತ ಗಾಜುಗಳ ಮೂಲಕ ಕಪ್ಪು ಪರದೆಗಳ ಮೇಲೆ ಹರಡಿದ ಬೆಂಕಿ-ಬೆಳಕಿನ ಪ್ರತಿಫಲನ ಎಷ್ಟು ಭಯಾನಕವಾಗಿತ್ತೆಂದರೆ, ಆ ಕೊಠಡಿಯನ್ನು ಪ್ರವೇಶಿಸಿದವರ ಮುಖ ಗಾಭರಿಯನ್ನು ವ್ಯಕ್ತಪಡಿಸುತಿತ್ತು ಮತ್ತು ಆ ಆವರಣದೊಳಗೆ ಕಾಲಿಡುವ ಧೈರ್ಯವನ್ನು ಮಾಡುವವರಾರೂ ಆ ಕೂಟದಲ್ಲಿ ಇರಲಿಲ್ಲ. ಈ ಕೊಠಡಿಯಲ್ಲೇ ಅದರ ಪಶ್ಚಿಮದ ಗೋಡೆಗೆ ನೇತುಹಾಕಿಕೊಂಡು ಕಾಡಿಗೆ ಕಪ್ಪು ಬಣ್ಣದ  ಮತ್ತಿ ಮರದಿಂದ ಮಾಡಿದ ಒಂದು ದೈತ್ಯ ಗಡಿಯಾರವಿತ್ತು. ಅದರ ಲೋಲಕ ನೀರಸ, ಗಂಭೀರ, ಏಕತಾನತೆಯ ಠೇಂಕಾರವನ್ನು ಮಾಡುತ್ತಾ ಆಚೆ ಈಚೆ ತೋಯ್ದಾಡುತ್ತಿತ್ತು. ಮತ್ತು ನಿಮಿಷದ ಮುಳ್ಳು ಒಂದು ಸುತ್ತು ಬಂದು ಗಂಟೆಯ ಘಂಟೆ ಬಾರಿಸಬೇಕಾದಾಗ ಆ ಗಡಿಯಾರದ ಲಜ್ಜೆಗೆಟ್ಟ ಶ್ವಾಸಕೋಶಗಳಿಂದ ಸ್ಪಷ್ಟವಾದ, ಗಟ್ಟಿಯಾದ, ಆಳವಾದ, ಮತ್ತು ಸಂಪೂರ್ಣವಾಗಿ ಸಂಗೀತಮಯವಾದ, ಆದರೆ  ತೀರ ವಿಚಿತ್ರ ಸ್ವರ ಮತ್ತು ಭಾವದಿಂದ ಕೂಡಿದ ಸದ್ದು ಹೊರಡುತಿತ್ತು. ಅದು ಎಷ್ಟು ವಿಲಕ್ಷಣವಾಗಿರುತ್ತಿತ್ತೆಂದರೆ, ಸಂಗೀತಗಾರರು ಆ ಸದ್ದಿಗೆ ಕಿವಿಕೊಡಲು ತಮ್ಮ ಪ್ರದರ್ಶನಕ್ಕೆ ವಿರಾಮ ಕೊಡಬೇಕಾಗುತಿತ್ತು; ಹೀಗಾಗಿ ನರ್ತಕರು ತಮ್ಮ ನರ್ತನವನ್ನು ನಿಲ್ಲಿಸಬೇಕಾಗುತಿತ್ತು; ಮತ್ತು ಆ ಇಡೀ ವಿಲಾಸಮಯೀ ಗುಂಪಿಗೆ ಸ್ವಲ್ಪ ಸಮಯದ ಆಯೋಮಯ ಪರಿಸ್ಥಿತಿ ಎದುರಾಗುತಿತ್ತು; ಮತ್ತು ಗಡಿಯಾರದ ಘಂಟೆ ಮೊಳಗುತ್ತಿರುವವರೆಗೆ ಅಳುಕಿನವರು ಪೇಲವವಾಗುತಿದ್ದರು ಮತ್ತು ಹೆಚ್ಚು ವಯಸ್ಸಾದವರು ಮತ್ತು ಸ್ತಿಮಿತ ಸ್ವಭಾವದವರು ಗೊಂದಲಮಯ ಸ್ವಪ್ನದಲ್ಲೋ, ಧ್ಯಾನದಲ್ಲೋ ಇರುವಂತೆ ಹಣೆಯ ಮೇಲೆ ಕೈ ಇಟ್ಟುಕೊಳ್ಳುತ್ತಿದ್ದರು. ಆದರೆ ಮಾರ್ದನಿಗಳು ಸಂಪೂರ್ಣವಾಗಿ ನಿಂತು ಹೋದಾಗ, ಆ ಕೂಟವನ್ನು ಹಗುರವಾದ ನಗು ಆವರಿಸಿಕೊಳ್ಳುತಿತ್ತು; ಸಂಗೀತಗಾರರು ತಮ್ಮದೇ ಪುಕ್ಕಲುತನವನ್ನು, ದಡ್ಡತನವನ್ನು  ಅಣಗಿಸಿಕೊಳ್ಳುವಂತೆ ಒಬ್ಬರನ್ನೊಬ್ಬರು ನೋಡಿ ಮುಗುಳ್ನಗುತ್ತಿದ್ದರು, ಮತ್ತು  ಮುಂದಿನ ಬಾರಿ ಗಡಿಯಾರದ ಘಂಟೆ ಬಾರಿಸುವಾಗ ಈ ರೀತಿಯ ಅಂಜಿಕೆಗೆ ಎಡೆ ಮಾಡಿಕೊಡಬಾರದೆಂದು ತಮ್ಮ ತಮ್ಮಲ್ಲಿ ವಾದ ಮಾಡಿಕೊಳ್ಳುತ್ತಿದ್ದರು; ಮತ್ತೆ ಅರವತ್ತು ನಿಮಿಷಗಳು ಆದ ಮೇಲೆ ( ಅದು ಹರಿಯುತ್ತಿರುವ ಸಮಯದ ಮೂರು ಸಾವಿರ ಮತ್ತು ಆರು ನೂರು ಕ್ಷಣಗಳನ್ನು ಒಳಗೊಂಡಿರುತ್ತದೆ), ಮತ್ತೊಮ್ಮೆ ಘಂಟೆಯ ನಾದ ಮೊಳಗುತಿತ್ತು, ಮತ್ತು ಮತ್ತೆ ಅದೇ ಆಯೋಮಯತೆ, ಮತ್ತು ನಡುಕ ಮತ್ತು ಧ್ಯಾನ, ಹಿಂದಿನಂತೆ.  ಇದೆಲ್ಲಾ ಹೇಗೇ ಇದ್ದರೂ ಅದು ಒಂದು ವಿಲಾಸೀ ಹಾಗು ಅದ್ದೂರಿ ಉತ್ಸವವಾಗಿತ್ತು. ದೊರೆಯದು ವಿಲಕ್ಷಣವಾದ ಅಭಿರುಚಿ. ಬಣ್ಣ ಮತ್ತು ಅಲಂಕಾರದಲ್ಲಿ ಅವನ ಗ್ರಹಿಕೆ ಸೂಕ್ಷವಾಗಿತ್ತು. ಕೇವಲ ಕಟ್ಟಳೆಗೋಸ್ಕರ ಮಾಡುವ ಸಿಂಗಾರವನ್ನು ಅವನು ಕೈ ಬಿಟ್ಟನು. ಅವನ ಏರ್ಪಾಡುಗಳಲ್ಲಿ ದಿಟ್ಟತನ ಹಾಗೂ ಉನ್ಮಾದವಿತ್ತು ಮತ್ತು ಅವನ ಕಲ್ಪನೆಗಳಲ್ಲಿ ಒಂದು ಒರಟು ಹೊಳಪಿತ್ತು.  ಅವನು ಹುಚ್ಚ ಅಂದುಕೊಂಡ ಕೆಲವರಿದ್ದರು. ಅವನ ಅನುಯಾಯಿಗಳು ಅವನು ಹುಚ್ಚನಲ್ಲ ಅನ್ನುತ್ತಿದ್ದರು. ಅವನು ಹುಚ್ಚನಲ್ಲ ಎಂದು ಖಾತ್ರಿಯಾಗಬೇಕಾದರೆ ಅವನನ್ನು ಕೇಳಿಸಿಕೊಳ್ಳಬೇಕಾಗಿತ್ತು ಮತ್ತು ನೋಡಬೇಕಾಗಿತ್ತು ಮತ್ತು ಮುಟ್ಟಬೇಕಾಗಿತ್ತು. ಈ ಭವ್ಯ ಉತ್ಸವದ ಎಲ್ಲಾ ಚರ ಸಿಂಗಾರಗಳನ್ನೂ ಹೆಚ್ಚು ಕಮ್ಮಿ ಅವನೇ ಯೋಜಿಸಿದ್ದನು; ಮತ್ತು ಅವನ ಅಭಿರುಚಿಯೇ ಆ ಛದ್ಮವೇಷಕೂಟದ ಸ್ವಭಾವವನ್ನು ನಿರ್ದೇಶಿಸಿತ್ತು. ಅವು ಕಂಡಿತಾ ವಿಕೃತವಾಗಿದ್ದವು. ಅಲ್ಲಿ ಸಾಕಷ್ಟು ತಳುಕು ಮತ್ತು ಬಳುಕು ಮತ್ತು ಹೊಳಪು ಮತ್ತು ಭ್ರಾಂತು ಇದ್ದವು. ಅಸಂಮಜಸ ಕೈಕಾಲು ಮತ್ತು ಉಡುಪುಗಳಿದ್ದ ವಿಚಿತ್ರ ಆಕೃತಿಗಳಿದ್ದವು. ಹುಚ್ಚನೊಬ್ಬ ಸೃಷ್ಟಿಸಿದಂತ ಮತ್ತು ಬರಿಸುವ ಕಲ್ಪನೆಗಳಿದ್ದವು. ಸುಂದರವಾದದ್ದು ಸಾಕಷ್ಟಿತ್ತು, ಚಂಚಲವಾದದ್ದು ಸಾಕಷ್ಟಿತ್ತು, ವಿಕೃತವಾದದ್ದು ಸಾಕಷ್ಟಿತ್ತು, ಭೀಕರವಾದದ್ದು ಸಾಕಷ್ಟಿತ್ತು, ಮತ್ತು ಅಸಹ್ಯ ತರಿಸಿವಂತದ್ದೂ ಸ್ವಲ್ಪ ಮಟ್ಟಿಗೆ ಇತ್ತು. ಏಳೂ ಕೋಣೆಗಳಲ್ಲಿ ಅಸಂಖ್ಯ ಸ್ವಪ್ನಗಳು ಆಚೆ ಈಚೆ ಅಲೆದಾಡುತಿದ್ದವು. ಮತ್ತು ಇವು – ಈ ಸ್ವಪ್ನಗಳು –  ಕೊಠಡಿಗಳ ಬಣ್ಣವನ್ನೇ ಮೈಮೇಲೇರಿಸಿಕೊಂಡು ನರಳಾಡಿ ಅಲ್ಲಿ ಇಲ್ಲಿ ಓಡಾಡಿಕೊಂಡಿದ್ದವು ಮತ್ತು ವಾದ್ಯವೃಂದದ ಒರಟು ಸಂಗೀತ ಅವುಗಳ ಹೆಜ್ಜೆಗಳ ಮಾರ್ದನಿ ಅನ್ನಿಸುತಿತ್ತು. ಮತ್ತು, ಅಲ್ಲಿ ಕೇಳಿಸಿಕೊಳ್ಳಿ, ವೆಲ್ವೆಟ್‌ ಕೋಣೆಯಲ್ಲಿರುವ ಆ ಮತ್ತಿ ಮರದ ಗಡಿಯಾರ ಹೊಡೆಯಲಾರಂಭಿಸಿದೆ. ಸ್ವಪ್ನಗಳು ನಿಂತಲ್ಲೇ ಮರಗಟ್ಟಿವೆ. ಅದರೆ ಘಂಟಾನಾದದ ಮಾರ್ದನಿಗಳು ಕರಗಿ ಹೋಗುತ್ತಿವೆ – ಅವು ಒಂದು ಕ್ಷಣ ಮಾತ್ರ ಬದುಕಿದ್ದವು – ಮತ್ತು ಆ ಸದ್ದು  ಕರಗಿಹೋದಂತೆ ತಿಳಿಯಾದ, ಅರೆ ಅದುಮಿಟ್ಟ ನಗು ಹರಿದಾಡುತ್ತಿದೆ. ಈಗ ಮತ್ತೆ ಸಂಗೀತ ಭೋರ್ಗರೆಯುತ್ತಿದೆ – ಮತ್ತು ಸ್ವಪ್ನಗಳಿಗೆ ಜೀವ ಬಂದಿದೆ, ಮತ್ತು ಅವು ಪಂಜುಗಳ ಕಿರಣಗಳು ತೂರಿ ಬರುತ್ತಿರುವ ಕಿಟಕಿಗಳ ಗಾಜುಗಳ ಬೇರೆ ಬೇರೆ ಬಣ್ಣಗಳನ್ನು ಮೆತ್ತಿಕೊಂಡು ಉಲ್ಲಾಸದಿಂದ ಅತ್ತ ಇತ್ತ ನರಳಾಡುತ್ತಿವೆ. ಆದರೆ ಆ ಏಳು ಕೊಠಡಿಗಳಲ್ಲಿ ತೀರಾ ಪಶ್ಚಿಮಕ್ಕೆ ಇರುವ ಕೊಠಡಿಗೆ ಆ ಛದ್ಮವೇಷಿಗಳಲ್ಲಿ ಯಾರೂ ಕಾಲಿಡುವ ಧೈರ್ಯ ಮಾಡಿಲ್ಲ; ಯಾಕೆಂದರೆ ಕತ್ತಲು ಕರಗುತ್ತಿದೆ; ಮತ್ತು ಅಲ್ಲಿ ರಕ್ತವರ್ಣದ ಗಾಜುಗಳ ಮೂಲಕ ಕಾಂತಿಯುತ ಕೆಂಬಣ್ಣ ಪಸರಿಸುತ್ತಿದೆ; ಮತ್ತು ಕಡುಕಪ್ಪು ಬಣ್ಣದ ಪರದೆಗಳ ಮಂಕು ಗಾಭರಿ ಹುಟ್ಟಿಸುತ್ತಿದೆ; ಮತ್ತು ಕಪ್ಪು ರತ್ನಗಂಬಳಿಯ ಮೇಲೆ ಹೆಜ್ಜೆ ಇಡುವವನ ಕಿವಿಯ ಮೇಲೆ, ಇತರೇ ಕೊಠಡಿಗಳಲ್ಲಿ ಹೆಚ್ಚು ಅಪರಿಚಿತ ಮೋಜುಗಳಲ್ಲಿ ತೊಡಗಿರುವವರ ಕಿವಿಯ ಮೇಲೆ ಬೀಳುವುದಕ್ಕಿಂತ ಹೆಚ್ಚು ಖಚಿತವಾದ  ಮತ್ತಿ ಮರದ ಗಡಿಯಾರದ ಗದ್ಗದಿತ ನಿನಾದ ಬೀಳುತ್ತಿದೆ. ಆದರೆ ಈ ಇತರೆ ಕೊಠಡಿಗಳು ಜನಜುಂಗಳಿಯಿಂದ ತುಂಬಿರುತ್ತಿದ್ದವು, ಮತ್ತು ಅವುಗಳಲ್ಲಿ ಜೀವ ಹೃದಯ ಉದ್ರಿಕ್ತವಾಗಿ ಬಡಿದುಕೊಳ್ಳುತ್ತಿತ್ತು. ಗಡಿಯಾರವು ಮಧ್ಯರಾತ್ರಿಯ ಘಂಟೆ ಬಾರಿಸುವವರೆಗೆ ಸಂಭ್ರಮ ಕುಣಿದಾಡಿತು. ಮತ್ತು ಆಗ ನಾನು ಮೊದಲೇ ಹೇಳಿದಂತೆ ಸಂಗೀತ ಸ್ಥಗಿತವಾಯಿತು; ನರ್ತಕರ ನರ್ತನ ಸ್ತಂಭಿತವಾಯಿತು; ಮತ್ತು ಮೊದಲು ಆದ ಹಾಗೇ ಎಲ್ಲಾ ಚಟುವಟಿಕೆಗಳು ನಿಂತುಹೋದವು. ಆದರೆ ಈಗ ಗಡಿಯಾರದ ಘಂಟೆ ಹನ್ನೆರಡು ಬಾರಿ ಹೊಡೆಯಬೇಕಾಗಿತ್ತು; ಮತ್ತು ಬಹುಶಃ ಹಾಗಾಗಿ ಮೋಜು ಮಾಡುತ್ತಿರುವವರಲ್ಲಿ ವಿಚಾರಶೀಲರಾಗಿದ್ದವರ ಮಂಥನದಲ್ಲಿ ಹೆಚ್ಚು ಸಮಯವಾದಂತೆ ಹೆಚ್ಚು ವಿಚಾರಗಳು ಮೊಳಕೆಯೊಡೆದವು. ಮತ್ತು, ಬಹುಶಃ ಹಾಗಾಗಿ ಗಡಿಯಾರದ ಕೊನೆಯ ಠೇಂಕಾರದ ಪ್ರತಿಧ್ವನಿಗಳು ನಿಶಬ್ದದಲ್ಲಿ ಕರಗಿಹೋಗುವುದರ ಒಳಗೆಯೇ ಅಲ್ಲಿಯವರೆಗೆ ಯಾರೊಬ್ಬನೂ ಗಮನಿಸದೇ ಇರುವ ಛದ್ಮವೇಷಿಯೊಬ್ಬನ ಇರುವಿಕೆಯ ಅರಿವು ಆ ಗುಂಪಿನ ಅನೇಕರಿಗೆ ಆಯಿತು. ಈ ಹೊಸ ಅಸ್ತಿತ್ವದ ಸುದ್ದಿ ಪಿಸುಗುಟ್ಟಿನ ಮೂಲಕ ಹರಡಿದಂತೆ, ಆ ಇಡೀ ಗುಂಪಿನಿಂದ ಒಂದು ಗುಸುಗುಟ್ಟುವಿಕೆ, ಗೊಣಗಾಡುವಿಕೆ, ತೇಲಿ ಬಂತು

ಎಡ್ಗರ್‌ ಅಲಾನ್‌ ಪೋನ ಕತೆ “ದ ಮಾಸ್ಕ್‌ ಆಫ್‌ ದ ರೆಡ್‌ ಡೆತ್‌” ನ ರೂಪಾಂತರ “ಕೆಂಪು ಮೃತ್ಯುವಿನ ಛದ್ಮವೇಷ”ಬಿ. ವಿ. ರಾಮಪ್ರಸಾದ್ ಅವರಿಂದ Read Post »

You cannot copy content of this page

Scroll to Top