ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

“ನೀನೊಂದು ಮುತ್ತು” ಕಲ್ಪನಾ ಎಸ್‌ ಪಾಟೀಲ ಕವಿತೆ

ಕಾವ್ಯ ಸಂಗಾತಿ ಕಲ್ಪನಾ ಎಸ್‌ ಪಾಟೀಲ “ನೀನೊಂದು ಮುತ್ತು” ಮುತ್ತಿನಂತೆ ಮಿನುಗುವ ನಗು ನಿನ್ನದು ಗೆಳೆಯಮನದಾಳದಿ ಮೂಡಿದ ಸೌಂದರ್ಯ ನೀ ಗೆಳೆಯ ಸಾಗರದ ಗರ್ಭದಿ ಹುಟ್ಟಿದ ಅಮೂಲ್ಯ ರತ್ನ ನೀನುನನ್ನ ಹೃದಯದೊಳಗಿನ ಪ್ರೀತಿಯಂತೆ ಶುದ್ಧ ನೀನು ಕನಸಿನ ಕಿರಣದಲ್ಲಿ ಹೊಳೆಯುವ ಮುತ್ತಿನ ಹೊಳೆನಿನ್ನ ಕಂಗಳಲ್ಲಿ ಕಾಣುವ ಪ್ರೀತಿಯ ಮುತ್ತಿನ ಮಳೆ ನಿಶ್ಶಬ್ದದ ಮಾತುಗಳಲ್ಲಿ ಮೂಡುವ ಸೊಗಸಿದುಮುತ್ತಿನ ಲೆಕ್ಕ ಬಾಕಿ ಇಟ್ಟಿಹುದೇನು ನಿನ್ನ ಮನಸದು ಜೀವನ ಸಾಗರದಿ ನೀನೇ ನನ್ನ ಮೊದಲ ಮುತ್ತುನಿನ್ನ ಜೊತೆಗಿದ್ದರದೆ ಕಾವ್ಯಧರೆಗೆ ಸತ್ಯ ಸುಖವು ಕಲ್ಪನಾ ಎಸ್ ಪಾಟೀಲ

“ನೀನೊಂದು ಮುತ್ತು” ಕಲ್ಪನಾ ಎಸ್‌ ಪಾಟೀಲ ಕವಿತೆ Read Post »

ಕಾವ್ಯಯಾನ

ಹಮೀದ್ ಹಸನ್ ಮಾಡೂರು”ಯುದ್ದ ನಿರ್ನಾಮ”

ಕಾವ್ಯ ಸಂಗಾತಿ ಹಮೀದ್ ಹಸನ್ ಮಾಡೂರು “ಯುದ್ದ ನಿರ್ನಾಮ” ಮಾನ ಉಳಿಸಿ ದ್ವೇಷಅಳಿಸಲು ಕಾಲವಿನ್ನು ಬೇಕೇನು?ಪ್ರಾಣ ಹುಡುಕಿ ಕೊಂದವರಿಗೆಅಣ್ವಸ್ತ್ರದ ಬಳಕೆಯ ಅಗತ್ಯವೇನು? ನೊಂದ ಆ ಜೀವಗಳು ಶಾಂತಿಬಯಸಿ ಪ್ರತಿಭಟಿಸಿದ್ದು ತಪ್ಪೇನು?ಕೊಂದ ಪಾಪವು, ನೊಂದ ಹೆತ್ತವರಮನಸ್ಸಿನಾಳದ ಘಾಸಿಯನು ಅಳಿಸಿತ್ತೇ? ಹೊಗೆ, ಶಬ್ದ, ಬೆಂಕಿ, ಸೈರನ್‌ದ್ರೋನ್ ಕ್ಷಿಪಣಿಗಳ ನರ್ತನ ನಿಲ್ಲಿಸಿ,ಹಗೆ ಹಳೆಯ ಬಿಟ್ಟು ನಗೆಯ ಸೂಸಿರಿ,ಕೈಯ ಕುಲುಕಿ, ಶಾಂತಿಯ ಮರು ಸ್ಥಾಪಿಸಿ.! ಹಮೀದ್ ಹಸನ್ ಮಾಡೂರು.

ಹಮೀದ್ ಹಸನ್ ಮಾಡೂರು”ಯುದ್ದ ನಿರ್ನಾಮ” Read Post »

ಕಾವ್ಯಯಾನ

ಕೆ.ಬಿ.ವೀರಲಿಂಗನಗೌಡ್ರ ಅವರ ಕವಿತೆ “ಜಮಾ-ಖರ್ಚು”

ಕಾವ್ಯ ಸಂಗಾತಿ ಕೆ.ಬಿ.ವೀರಲಿಂಗನಗೌಡ್ರ ಅವರ “ಜಮಾ-ಖರ್ಚು” ಅವರುನನ್ನನ್ನು ಕಳೆದುಕೊಂಡರುಕಳೆದುಕೊಳ್ಳುವ ನಡಾವಳಿಯನ್ನುಹಿಂದಿನ ರಾತ್ರಿಯೇ ಬರೆದುಕೊಂಡಿದ್ದರುಬೆಳಗು ನನ್ನ ಪಾಲಿಗಷ್ಟೇ ಕಾರ್ಗತ್ತಲಾಗಿತ್ತು ಅವರುನಾಯಿಯಂತೆಬಾಲ ಅಲ್ಲಾಡಿಸಿಕೊಂಡುಬಾಗಿಲಿಗೆ ಬಂದು ನಿಂತೇ ನಿಲ್ತಾನೆನಾವು ಕಳೆದರೂ ಅವ ಕೂಡ್ತಾನೆಂದು ನಡಾವಳಿ ದಿನವೇ ಲೆಕ್ಕಾಚಾರವಾಗಿತ್ತಂತೆ ಅವರುಆಲಯದಿಂದ ದಬ್ಬಿದರುಬಯಲಲಿ ಅಣ್ಣ ಅಕ್ಕ ತಬ್ಬಿದರುತಬ್ಬಲಿತನ ನನಗಂತೂ ಕಾಡಲಿಲ್ಲಕಾಡು ಕಡಲು ಹಾಡು ಸಂತೈಸಿದವು ಅವರುಕಳೆದುಕೊಳ್ಳದಿದ್ದರೆಕೂಡಿಕೊಳ್ಳುವ ಪ್ರೀತಿಯನ್ನುಅಕ್ಷರಶಃ ನಾನು ಅನುಭವಿಸುತ್ತಿರಲಿಲ್ಲಬುದ್ಧ ಬಸವರು ಅರ್ಥವೂ ಆಗತಿರಲಿಲ್ಲ ಇಷ್ಟೇಅವರುಬುದ್ಧಿವಂತರುನನ್ನನ್ನು ಕಳೆದುಕೊಳ್ಳಲುತುಂಬಾ ಬುದ್ಧಿ ಖರ್ಚು ಮಾಡಿದ್ದಾರೆದೇವರು ಅವರಿಗೆ ಅಷ್ಟೂ ಜಮೆ ಮಾಡಲಿನನ್ನಂತಹವರನ್ನು ಮತ್ತೆ ಮತ್ತೆ ಕಳೆದುಕೊಳ್ಳಲಿ. ಕೆ.ಬಿ.ವೀರಲಿಂಗನಗೌಡ್ರ.

ಕೆ.ಬಿ.ವೀರಲಿಂಗನಗೌಡ್ರ ಅವರ ಕವಿತೆ “ಜಮಾ-ಖರ್ಚು” Read Post »

ಕಾವ್ಯಯಾನ

ವೈ.ಎಂ.ಯಾಕೊಳ್ಳಿ ಅವರ ಕವಿತೆ “ಪ್ರೀತಿಸದಿರು..ಜಾತಿಯನೇ ಪ್ರೀತಿಸು”

ಕಾವ್ಯ ಸಂಗಾತಿ ವೈ.ಎಂ.ಯಾಕೊಳ್ಳಿ “ಪ್ರೀತಿಸದಿರು..ಜಾತಿಯನೇ ಪ್ರೀತಿಸು” ಅನಿವಾರ್ಯ ಇದ್ದರೆಅತ್ತು ಬಿಡುಮನದ ಭಾವಗಳಅದೆಷ್ಟು ಹೊತ್ತು‌ಹಿಡಿದಿಡುವಿ ಇಲ್ಲಿ ಒಲವೆಂಬುದುಅಳುವ ಕಲಿಸುವಪಾಠಶಾಲೆಒಲವಿನಲಿ‌ ಇದ್ದವರನುಎಲ್ಲರೂಕೊನೆಗೆ ಹೆತ್ತವರೂಅಳಿಸುವವರೇ ಅದಾವ ಕಾಲದ ದುರ್ದೈವವೋದೇವರುಗಳ   ಶಾಪವೋಇಲ್ಲಿನ ದೇವರುಗಳೂನೂರೊ ,ಹತ್ತೋ‌, ಕನಿಷ್ಠಇಬ್ಬಿಬ್ಬರನ್ನಾದರೂಮದುವೆಯಾಗುವದನ್ನುಒಪ್ಪಿವೆ ಮನದಲಿ ಒಲಿದವರನ್ನುಮೆಚ್ಚುವದು ಎದೆಯಲಿಟ್ಟುಪ್ರೀತಿಸುವದನುತಿರಸ್ಕರಿಸಿವೆ ಒಲಿದ ಕಾರಣಕ್ಕಾಗಿಹೆತ್ತ ಮಕ್ಕಳನ್ನೇನೇಣಿಗೆ ಹಾಕುವವರುಮರ್ಯಾದಾ ಹತ್ಯೆಯಹೆಸರಲ್ಲಿ ಕೊಲ್ಲುವವರೂಇದ್ದಾರೆಜೀವ ಕೊಟ್ಟಾದರೂಜಾತಿ ಉಳಿಸುತ್ತಾರೆಜೀವ ಇಲ್ಲವಾಗಿಸುತ್ತಾರೆ ಈ ದೇಶ ಮನುಷ್ಯಮನುಷ್ಯರನ್ನುಪ್ರೀತಿಸುವ, ಒಲಿಯುವಕಲೆಯ ಕಲಿಸಲೇ ಇಲ್ಲ ವೈ.ಎಂ.ಯಾಕೊಳ್ಳಿ

ವೈ.ಎಂ.ಯಾಕೊಳ್ಳಿ ಅವರ ಕವಿತೆ “ಪ್ರೀತಿಸದಿರು..ಜಾತಿಯನೇ ಪ್ರೀತಿಸು” Read Post »

ಕಾವ್ಯಯಾನ

ಸುಮತಿ ನಿರಂಜನ ಅವರ ಕವಿತೆ “ದೂರದ ಪಯಣ”

ಕಾವ್ಯ ಸಂಗಾತಿ ಸುಮತಿ ನಿರಂಜನ “ದೂರದ ಪಯಣ” ಬಂದಿಹೆವು ಬಹುದೂರ ಗೆಳತೀನೋಡೊಮ್ಮೆ ಹಿಂದೆ…ಇದೆ ಹಾದಿಯಲಿ ಹಾದು ಹೋದವರು…ಜೀತದೆತ್ತುಗಳೂ ನಮ್ಮವಂತೆಯೆಘಣ ಘಣ ಗಂಟೆಯ ಮಾಲೆಘಮ ಘಮ ಮಲ್ಲಿಗೆ ಕೊರಳಲೆಅರಿಶಿನ ಕುಂಕುಮ ನೊಸಲಲಿಕೊಂಬಿಗೆ ಗೊಂಡೆಯ ಚೆಂಡು… ಒಳಗೆ…ಉಸಿರೊತ್ತುವ ವಜ್ರದ ನತ್ತುಕೊರಳೆಳೆವ ಮುತ್ತಿನ ಹಾರಕೈ ತುಂಬ ಬಳೆಭಾರಮಣ ಭಾರ ಒಡ್ಯಾಣಗುಟ್ಟು ಬಿಟ್ಟು ಕೊಡುವುದಣ್ಣಬೆಳ್ಳಿ ಬಿಗಿ ಕಾಲಂದುಗೆಕಳ್ಳ ಕಾಕರ ಭಯಮಾನನಷ್ಟದ ಭಯಸೊಲ್ಲೆತ್ತಿದರೆ ಗೋಣುಮುರಿವರೆನ್ನುವ ಭಯಪಟ್ಟೆಸೀರೆಯನುಟ್ಟು ಮುದುರಿಕುಳಿತವರು ಮೂಲೆಯಲಿಸೆರಗೊಳಗೆ ಸದ್ದಾಗದಂತ್ತವರುತಮ್ಮ ಸಾರ್ಥದ ಗಮ್ಯವೆತ್ತ ?ಉಸಿರೆತ್ತಿ ಕೇಳಲಾರದೆಹೊದ್ದ ಮುಸುಕಿನೊಳಗೆಕಾಲಕ್ಕೆ ಸಂದುಹೋದವರು ಇಂದು –ನಮಗಿಲ್ಲ ಒಡವೆ ಹೆಣ ಭಾರಬಿಚ್ಚು ನಗುವೆ ನಮ್ಮ ಕಂಠೀಹಾರಧೈರ್ಯ ಸ್ಥೈರ್ಯವೆ ಷೋಡಶ ಸಿಂಗಾರಕಾವ ದೇವರದು ವಿದ್ಯೆಬುದ್ಧಿಯ ಸಾರಹರಿದು ಬಂದೆವು ಗೆಳತೀಆ ಕಪ್ಪು ಭೀತಿಯ ಪರದೆಹೀರೋಣವೀ ಸ್ವಚ್ಛಂದ ಗಾಳಿಹೂಡೋಣ ನಮ್ಮ ಎತ್ತುಗಳ ನಾವೆಕಟ್ಟೋಣ ನಮ್ಮ ಇಹಪರಾರ್ಥವ ನಾವೆಸವೆಸೋಣ ಏರುಪೇರಿನ ದಾರಿಸೇರೋಣ ನಮ್ಮ ಗಂತವ್ಯ ನಾವೇ ಸುಮತಿ ನಿರಂಜನ 

ಸುಮತಿ ನಿರಂಜನ ಅವರ ಕವಿತೆ “ದೂರದ ಪಯಣ” Read Post »

ಕಾವ್ಯಯಾನ, ಗಝಲ್

ಇಂದಿರಾ ಕೆ ಅವರ ಗಜಲ್

ಕಾವ್ಯ ಸಂಗಾತಿ ಇಂದಿರಾ ಕೆ ಗಜಲ್ ದೇಶ – ದೇಶ ನಡುವೆ ದ್ವೇಷ ಜ್ವಾಲೆ ಆರಿಸುವವರು ಯಾರಿಲ್ಲಿಮುಗಿಲು ಮುಟ್ಟಿದ ಅಳಲು ಆಕ್ರಂದನ ಆಲಿಸುವವರು ಯಾರಿಲ್ಲಿ ಯುದ್ಧ ರಣಾರ್ಭಟಕೆ ಬೆಚ್ಚಿ ಬಿದ್ದಿದೆ ಮನುಕುಲವುಜಗದಗಲ ಹರಡಿದ ಅಶಾಂತಿಯ ಅಳಿಸುವವರು ಯಾರಿಲ್ಲಿ ಬಲಿಷ್ಠತೆ ಮೆರೆದು ದೀನರಿಲ್ಲಿ ಬಲಿಪಶುಗಳಾದರುರಕ್ತ- ಸಿಕ್ತದಲಿ ಸಿಕ್ಕ ಹೆಣಗಳ ಎಣಿಸುವವರು ಯಾರಿಲ್ಲಿ ಅಸೂಯೆ ಅಹಂನ ಪ್ರದರ್ಶನ ಕರಾಮತ್ತೋಅಮಾಯಕರ ಜೀವ ಬೆಲೆ ತಿಳಿಸುವವರು ಯಾರಿಲ್ಲಿ ಕ್ರಾಂತಿ ಕಹಳೆ ಹೊತ್ತಿಸಿ ಕ್ಷಿಪಣಿಗಳ ಮಳೆಗೈಯುತಿವೆಹಲ್ಲೋಲ- ಕಲ್ಲೋಲ ಜಗತ್ತು ದಂಡಿಸುವವರು ಯಾರಿಲ್ಲಿ ಭಯದ ಭೀತಿ ಆವರಿಸಿದೆ ಅಳಿದುಳಿದ ಮನಗಳಲಿ  ವಿರಾಮವಿಲ್ಲದೆ ವಿರಾಜಿಸುತಿದೆ ವಿನಾಶ ಕದನ ತ್ಯಜಿಸುವವರು ಯಾರಿಲ್ಲಿ ವಿಶ್ವದಾದ್ಯಂತ ಶಾಂತಿ ಸ್ನೇಹ – ಭಾತೃತ್ವ ನೆಲೆಸಲೆಂದು ಪ್ರಾರ್ಥಿಸಿಬೇಕಿದೆ ಇಂದಿರೆದಾಳಿ – ಪ್ರತಿದಾಳಿಗೆ ನಲುಗಿದವರ ರಕ್ಷಿಸುವವರು ಯಾರಿಲ್ಲಿ ಇಂದಿರಾ ಕೆ

ಇಂದಿರಾ ಕೆ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಕಲ್ಪನಾ ಎಸ್‌ ಪಾಟೀಲ್‌ ಅವರ ಗಜಲ್

ಕಾವ್ಯ ಸಂಗಾತಿ ಕಲ್ಪನಾ ಎಸ್‌ ಪಾಟೀಲ್‌ ಗಜಲ್ ತೆರೆದ ಎದೆಯ ಕದವ ಬಡೆಯುತಲೆ ಇದ್ದೆಅದಾವ ಊರ ಕನಸಿನೊಡೆಯನೊನೀನಾಗಿದ್ದೆ ಕನಸಲೆ ಕನಸುಗಳು ಬಹುದೂರದಿ ಸಾಗುತಲೆ ಇದ್ದವುನೀನು ಹೋದ ದೂರದೂರಿನ ದಾರಿಯಬೆನ್ನಟ್ಟಿಯೆ ಇದ್ದವು ನೀ ದಾರಿ ತಪ್ಪಿಸಿದರೂ ನೀನು ಕ್ರಮಿಸುವದಾರಿಯ ಮರೆಯದಂತೆ ಮಾಡಿದ್ದವು ಕನಸೆ ಗುರಿಯಾಗಿಸಿಕೊಂಡು ನಡೆದಿದ್ದೆ ನೀನುಆ ಕನಸೆ ಗುರಿಯ ತೀರ ತಲುಪಿಸಿದನು ಮರೆತೆ ಏನು ನನ್ನ ಕನಸೆ ನೀನು ನಿನ್ನ ಕನಸಿಗಾಗಿ ನಾನೆ ಎಂದೆನೀ ಬರಿ ಕನಸ ಕಂಡರೆ ಕಾವ್ಯಧರೆಗೆ ಕನಸೆ ನೀನಾಗಿದ್ದೆ ಕಲ್ಪನಾ ಎಸ್ ಪಾಟೀಲ

ಕಲ್ಪನಾ ಎಸ್‌ ಪಾಟೀಲ್‌ ಅವರ ಗಜಲ್ Read Post »

ಕಾವ್ಯಯಾನ

ಪ್ರಶಾಂತ್ ಬೆಳತೂರು ಅವರ ಕವಿತೆ ” ಅವ್ವನಂತಹ ಹುಡುಗಿ”

ಕಾವ್ಯ ಸಂಗಾತಿ ಪ್ರಶಾಂತ್ ಬೆಳತೂರು “ಅವ್ವನಂತಹ ಹುಡುಗಿ” pic̲:gemini ಇವಳ ಕುರಿತುಹೆಚ್ಚೇನೂ ಹೇಳಬೇಕಿಲ್ಲ…! ಅವ್ವನಂತಹ ಹುಡುಗಿಕಣ್ಣ ಬೊಗಸೆ ತುಂಬಾಪ್ರೀತಿ ಹೊತ್ತು ನಿಂತಿರುತ್ತಾಳೆ…! ಬೆಳ್ಳಂಬೆಳಗ್ಗೆ ಅವ್ವನೇಎಲ್ಲರಿಗಿಂತ ಮೊದಲೆದ್ದುಮನೆಯ ಉಸಾಬರಿ ವಹಿಸಲುಹಾಜರಾಗುವಂತೆರೂಮಿನ ಬಾಗಿಲು ತೆರೆದಾಗೆಲ್ಲಾಕಣ್ಮುಂದೆ ಕಾಣಿಸಿಕೊಳ್ಳುತ್ತಾಳೆಒಂಟಿ ದೋಣಿಯೊಂದುಯಾವುದೋ ದೂರ ತೀರಕೆಹಾತೊರೆದು ಹರಿಯುತ್ತಿರುವಂತೆ..! ನನ್ನೆದೆಯೊಳಗೂಒಮ್ಮೆಲೇ ರಭಸವಾಗಿ ನುಗ್ಗಿ ಬಿಡುತ್ತಾಳೆಅವ್ವನ ಪ್ರತಿರೂಪದಂತಾಗಿಹರಿದಾಡುತ್ತಾಳೆಮುಗ್ಧತೆಯಲ್ಲಿ ಮೂಗು ತಿರುವುತ್ತಾಒಳಗೊಳಗೆ ಅಸಹನೆಯಲ್ಲಿಉಕ್ಕುವ ಅಲೆಗಳಂತೆ ಸಿಡುಕಿತನ್ನಷ್ಟಕ್ಕೆ ತಾನೇ ತಣ್ಣಗಾಗುತ್ತಾಳೆಪ್ರೇಮಮಯಿ ಆಗಿಬಿಡುತ್ತಾಳೆ..! ಸಂತೈಸುತ್ತದೆ ನನ್ನನ್ನುಅವಳ ಒಂದು ನಿಷ್ಕಲ್ಮಶ ಮುಗ್ಧ ನಗು..!ಅವ್ವ ಮಗಳಾಗಿ ಬಂದಳೇನೋ ಎಂಬಅಚ್ಚರಿಯೊಂದು ಗೊತ್ತಾಗದಂತೆಹೃದಯದ ಭಾವವನ್ನುಲಯ ತಪ್ಪದಂತೆಮಧುರ ದನಿಯಲ್ಲಿ ಹೊತ್ತಿಸಿ ಬಿಡುತ್ತಾಳೆ..! ಅದ್ಯಾವ ಕಾಲದಲ್ಲಿಮಣ್ಣಲ್ಲಿ ಮಣ್ಣಾದ ನನ್ನವ್ವಈ ಅಪರಿಚಿತ ಹುಡುಗಿಯ ಕಂಗಳಲಿಮಳೆಯಾಗಿ ಜಿನುಗಿಬಿಟ್ಟಳು..!ತುಸು ಹಸುರಾಗಿಹೀಗೆ ಅರಿಯದಒಲವೊಂದನ್ನು ಚಿಗುರಿಸಿಬಿಟ್ಟಳು..! ತಿಳಿಯುತ್ತಿಲ್ಲ..ಇವಳ ಕುರಿತು ಹೆಚ್ಚೇನೂ..!ಆದರೆಅವ್ವನಂತಹ ಹುಡುಗಿಮೊನ್ನೆಮತ್ತೆ ತಿರುಗಿ ಬಂದಿದ್ದಳು..! ಬದುಕಿನ ಯುಗಾದಿಗಳೆಲ್ಲಾಮಂಕು ಕವಿದುಮುಗಿದು ಹೋಗುತ್ತಿರುವಾಗಬೆಳಕಾಗುವನನ್ನವ್ವನ ನೆನಪುಗಳನ್ನೆಲ್ಲಾಮರುಕಳಿಸುವಂತೆತನ್ನ ಹೋಳಿಗೆಯ ಡಬ್ಬಿಯಲ್ಲಿಜತನವಾಗಿ ತುಂಬಿಅಕ್ಕರೆಯಿಂದ ಕೈಗಿರಿಸುತ್ತಾತಾಯೊಡಲಿನ ಕನಸೊಂದುನಿಜವಾದಂತೆನಗುತ್ತಾ..ಅವ್ವನಾಗಿ ನಿಂತುಬಿಟ್ಟಿದ್ದಳು..! ಪ್ರಶಾಂತ್ ಬೆಳತೂರು

ಪ್ರಶಾಂತ್ ಬೆಳತೂರು ಅವರ ಕವಿತೆ ” ಅವ್ವನಂತಹ ಹುಡುಗಿ” Read Post »

ಕಾವ್ಯಯಾನ, ಗಝಲ್

ವಾಣಿ ಯಡಹಳ್ಳಿಮಠ‌ ಅವರ ಗಜಲ್

ಕಾವ್ಯ ಸಂಗಾತಿ ವಾಣಿ ಯಡಹಳ್ಳಿಮಠ‌ ಗಜಲ್ ಚಂದ್ರ,ತಾರೆಗಳು ನಾ ಕೈ ಚಾಚಿದರೇ ಸಿಕ್ಕಿ ಬಿಡುವಷ್ಟು ಹತ್ತಿರದಲ್ಲಿರಬೇಕಿತ್ತುನಿದಿರೆಯು ರೆಪ್ಪೆ ಮುಚ್ಚುವ ಮುನ್ನ ಕಣ್ಣ ಸೇರುವಷ್ಟು ಹತ್ತಿರದಲ್ಲಿರಬೇಕಿತ್ತು ಪೂರ್ವದಿಂದ ಪಶ್ಚಿಮದೆಡೆಗೆ,ಬೆಳಕಿನೊಂದಿಗೆ  ದಿನವೂ ರವಿಯ ಪಯಣಗೂಡುಗಳು,ರೆಕ್ಕೆ ದಣಿಯುವುದರೊಳಗೆ ಸಿಗುವಷ್ಟು ಹತ್ತಿರದಲ್ಲಿರಬೇಕಿತ್ತು ಬಾನಂಗಳದಿ ಚೆಲ್ಲಿದ ಬೆಳದಿಂಗಳದು ನಗುವಿನ ನೆಮ್ಮದಿಯ ಮಡಿಲಿನಂತಿದೆಹುಣ್ಣಿಮೆಯು,ಹಗಲಾಗುವುದರೊಳಗೆ ನಾ ಮುಟ್ಟುವಷ್ಟು ಹತ್ತಿರದಲ್ಲಿರಬೇಕಿತ್ತು ಜಗದ ಸಂತೆಯಲಿ ಅತೀ ಬೇಡಿಕೆಯ,ಮಾರಾಟಕ್ಕಿಡದ ಮೋಹವೊಂದೂ ಇದೆಪ್ರೀತಿಯು,ನಾ ನಗುತ ಕಣ್ಣೆತ್ತಿ ನೋಡಿದರೇ ಕಾಣುವಷ್ಟು ಹತ್ತಿರದಲ್ಲಿರಬೇಕಿತ್ತು ವಾಣಿಯ ಜೀವ,ಜೀವನದ ಜಂಜಾಟಗಳೆದುರು ನಿಡುಸುಯ್ಯುತ ಬಿಕ್ಕುತಿದೆಶಿವನ ಸಂತೈಕೆ,ನಾ ಸೋಲುವುದರೊಳಗೆ ಸೋಕುವಷ್ಟು ಹತ್ತಿರದಲ್ಲಿರಬೇಕಿತ್ತ ವಾಣಿ ಯಡಹಳ್ಳಿಮಠ

ವಾಣಿ ಯಡಹಳ್ಳಿಮಠ‌ ಅವರ ಗಜಲ್ Read Post »

ಕಾವ್ಯಯಾನ

ಹಮೀದಾ ಬೇಗಂ ದೇಸಾಯಿಯವರ ಗಜಲ್

ಕಾವ್ಯ ಸಂಗಾತಿ ಹಮೀದಾ ಬೇಗಂ ದೇಸಾಯಿ ಗಜಲ್ ಮುಗ್ಧ ಜೀವಿಗಳ ರಕ್ತಪಾತಕೆ  ಬೆಚ್ಚಿದ  *ರಾತ್ರಿಗಾಗಿ* ಹಣತೆ ಬೆಳಗುವೆದ್ವೇಷ ಕಲಹ ಕ್ರಾಂತಿಗಳಿಂದ  ನರಳಿದ  *ಧಾತ್ರಿಗಾಗಿ* ಹಣತೆ  ಬೆಳಗುವೆ ತಲ್ಲಣ ಗೊಂಡಿದೆ  ಮನುಕುಲ ಭೀಕರ ಯುದ್ಧಗಳ  ಸಿಡಿಲಿನಿಂದಕವಿದ ಕರಾಳ  ಮುಖವಾಡಗಳ ಕಳಚುವ  *ಖಾತ್ರಿಗಾಗಿ* ಹಣತೆ  ಬೆಳಗುವೆ ನಾನೆಂಬ ಅಹಂಕಾರದ ಕ್ರೂರ ವರ್ತುಲಗಳು   ಸುತ್ತಿವೆ  ಜಗದಗಲಕ್ಷುದ್ರರಲಿ ಅವಿತ  ದುರುಳತನಗಳ ಮೆಟ್ಟುವ  *ಕ್ಷಾತ್ರಿಗಾಗಿ* ಹಣತೆ ಬೆಳಗುವೆ ಭಯದ ನೆರಳುಗಳು ಆವರಿಸಿ  ಹೆದರಿಸುತಿವೆ  ಹೆಜ್ಜೆ  ಹೆಜ್ಜೆಗೆ ಅಲ್ಲವೇಭ್ರಾತೃತ್ವದ ಸ್ನೇಹ ವಿಶ್ವಾಸಗಳು  ಮೆರೆಯುವ  *ಜಾತ್ರಿಗಾಗಿ* ಹಣತೆ  ಬೆಳಗುವೆ ಒಳಗೊಳಗೆ ಉಸಿರುಗಳು ಮೌನವಾಗಿ  ಬಿಕ್ಕುತ್ತಿವೆ ಪ್ರತಿಷ್ಠೆಯ ಜಾಲಗಳಲಿ  ಸಿಲುಕಿ ಬೇಗಂಶಾಂತಿ ಪ್ರೇಮಗಳನು ನೀಡುವ  ದೂತನಾಗಿ  ಬರುವ  *ಯಾತ್ರಿಗಾಗಿ* ಹಣತೆ  ಬೆಳಗುವೆ ಹಮೀದಾಬೇಗಂ ದೇಸಾಯಿ

ಹಮೀದಾ ಬೇಗಂ ದೇಸಾಯಿಯವರ ಗಜಲ್ Read Post »

You cannot copy content of this page

Scroll to Top