ಕುವೆಂಪು,ಬೇಂದ್ರೆ ಬಗ್ಗೆಸುಮತಿ ನಿರಂಜನ್ ಅವರ ಎರಡು ಪುಟ್ಟ ಕವಿತೆಗಳು
ಕಾವ್ಯ ಸಂಗಾತಿ ಕುವೆಂಪು,ಬೇಂದ್ರೆ ಬಗ್ಗೆ ಸುಮತಿ ನಿರಂಜನ್ ಅವರ ಎರಡು ಪುಟ್ಟ ಕವಿತೆಗಳು ಕನ್ನಡವೆಂದರೆ ಇಷ್ಟು ಚೆಂದದ ನುಡಿಯೇ ಎಂದು ತಿರುತಿರುಗಿ ನೋಡುವಂತೆ ಮಾಡಿದ ಮೊದಲ ಕವಿ ನಮ್ಮ ಕುವೆಂಪು. ಅವರ ಕಾವ್ಯಫಲದಲ್ಲಿ ಭಾವುಕತೆಯ ಸಿಹಿ, ಅಧ್ಯಾತ್ಮದ ಪಕ್ವತೆ, ಕನ್ನಡದ ತಿರುಳು.ಅಸಂಖ್ಯ ಕನ್ನಡಿಗರ ಮನೆಗಳಲ್ಲಿ ಕನ್ನಡದ ದೀಪ ಹಚ್ಚಿದ ಕವಿಚೇತನ. ನಮ್ಮ ಮನಗಳೆ ನಿಮ್ಮಾನಿಕೇತನ. ಕನ್ನಡವೆಂದರೆ ಕುವೆಂಪು !ಕವಿಶೈಲದ ಇಂಚರ ಇಂಪುಮಲೆನಾಡಿನ ಹಸಿರಿದೆಜೋಗದ ಭರವಿದೆಕಾಜಾಣದ ಕರೆಯಿದೆಅದರಲಿಅಮ್ಮನ ಲಾಲಿಯ ತಂಪು ಇದೆ ! — ಬೇಂದ್ರೆ ಎಂದರೆ ಬೆಂದರೆ ಬರುವ ಪರಿಪಾಕಕಾವ್ಯಗಂಗೆ ಇಳೆಗಿಳಿವ ಭಗೀರಥ ಕಾಯಕನಾಕು ತಂತಿ ಮೀಟುವ ಶಬ್ದ ವೈಣಿಕದರ್ಶನ, ಸಂಗೀತ, ಗಣಿತ ಲಯ ಮಾಂತ್ರಿಕಪಂಡಿತ ಪಾಮರರ ಪ್ರೀತಿಪಾತ್ರಕನ್ನಡಾಂಬೆಯ ಔರಸ ಪುತ್ರಕಾವ್ಯಾಂತರಿಕ್ಷದ ಧ್ರುವ ನಕ್ಷತ್ರವರಕವಿಯ ಕೀರುತಿ ಸರ್ವತ್ರ ಸುಮತಿ ನಿರಂಜನ್
ಕುವೆಂಪು,ಬೇಂದ್ರೆ ಬಗ್ಗೆಸುಮತಿ ನಿರಂಜನ್ ಅವರ ಎರಡು ಪುಟ್ಟ ಕವಿತೆಗಳು Read Post »









