ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಡಾ. ಹೆಚ್. ನಟರಾಜ್ ಆರ್ಯ ಅವರ “ಕೆಂಪು ಕಾಶ್ಮೀರ”

ಕಾವ್ಯ ಸಂಗಾತಿ ಡಾ. ಹೆಚ್. ನಟರಾಜ್ ಆರ್ಯ “ಕೆಂಪು ಕಾಶ್ಮೀರ” ಹಿಮಾಲಯ ಮಡಿಲಲ್ಲಿಸ್ವರ್ಗ ಮಲಗಿತ್ತು,ಬೆಳ್ಳಿಯ ಹಿಮದ ಹಾಸಿಗೆಯಲ್ಲಿಮೌನ ಮುತ್ತು ಹೊಳೆಯಿತು. ದಾಲ್ ಸರೋವರಸ್ಫಟಿಕ ಕಣ್ಣಾಗಿ,ಆಕಾಶ ತನ್ನ ಮುಖ ನೋಡಿತು;ಶಿಕಾರಾಗಳ ಕನಸು ತೇಲಿತುನೀರಿನ ಎದೆ ಮೇಲೆ, ಮೃದುವಾಗಿ. ಗುಲ್ಮಾರ್ಗ್ ಹಿಮಮಕ್ಕಳ ನಗುವಿನಂತೆ,ಪಹಲ್ಗಾಮ್ ಹುಲ್ಲುತಾಯಿಯ ಮಡಿಲಂತೆ,ಚಿನ್ನಾರ್ ಎಲೆಗಳುಕಾಲದ ಬಣ್ಣ ಹೊತ್ತವು. ಒಂದು ಕ್ಷಣದಲ್ಲಿಸ್ವರ್ಗ ನಡುಗಿತು,ಗುಂಡಿನ ಶಬ್ದಪರ್ವತ ಹೃದಯ ತೂರಿತು,ಹಿಮದ ಬಿಳುಪುರಕ್ತದ ಕೆಂಪು ಕುಡಿದುನೀರಾಗಿ ಹರಿಯಿತು. ಹೂವಲ್ಲ, ಟುಲಿಪ್ ಅಲ್ಲ,ನೆಲ ಮೇಲೆ ಬಿದ್ದಮಾನವ ಉಸಿರಿನ ಗುರುತು. ಪ್ರವಾಸದ ನಗುಮರಣದ ಅಳುವಾಯಿತು,ಗಾಳಿ ಮಾತು ನಿಶ್ಶಬ್ದವಾಗಿ ಕರಗಿತು,ಹೃದಯದ ನೋವುಹಿಮದಲ್ಲಿ ಮಿಶ್ರಿತ. ಕಾಡು ಮೌನವಾಗಿ ತಿಳಿದುಕೊಂಡಿತು,ರಕ್ತದ ಪ್ರತಿಜ್ಞೆಮಣ್ಣಿಗೆ ನೆನೆಸಿತು;ಹೆಜ್ಜೆಗಳ ಶಬ್ದ ಮೌನದಲ್ಲಿ ಹಾರಿತು,ಹೃದಯದ ನೋವು ನದಿಯಲ್ಲಿ ಹರಿಯಿತು. ನದಿಗಳು ಹರಿಯುತ್ತಿವೆ,ಆದರೆ ಹಾಡುತ್ತಿಲ್ಲ,ಹಿಮದ ಶ್ವೇತದಲ್ಲಿ ಕೆಂಪು ನೀರು ಹರಿದು,ಮರುಳು ಹೊಳೆಯುತ್ತದೆ,ನೋವು ಕುಸಿದು,ಆಕ್ರಂದನ ತೇಲಿ. ಕಾಶ್ಮೀರಾ,ನೀನು ಸುಂದರ,ಆದರೆ ನಿನ್ನ ಸೌಂದರ್ಯಸಾವು ನೆರಳಿನಿಂದ ಮಿಶ್ರಿತ. ನಿಲ್ಲಲಿ ಉಗ್ರವಾದ,ಗುಂಡಿಗೆ ಜಾಗ ಬೇಡ;ಹಿಮ ಮತ್ತೆ ಬಿಳಿಯಾಗಲಿ,ನದಿಗಳು ಹಾಡಾಗಲಿ,ಹೃದಯಗಳಲ್ಲಿ ಮರಳಿಮಾನವೀಯತೆ ಆರಾಧನೆಯಾಗಲಿ. ಕೆಂಪು ಅಧ್ಯಾಯಕಣ್ಣೀರಾಗಿ ಒಣಗಿ,ಮಾನವೀಯತೆಇಲ್ಲಿ ಮತ್ತೆಸ್ವರ್ಗವಾಗಲಿ. ಡಾ. ಹೆಚ್. ನಟರಾಜ್ ಆರ್ಯ

ಡಾ. ಹೆಚ್. ನಟರಾಜ್ ಆರ್ಯ ಅವರ “ಕೆಂಪು ಕಾಶ್ಮೀರ” Read Post »

ಕಾವ್ಯಯಾನ

ಮಹಿಳಾ ವಿಶೇಷ ದಿನ,ರಶ್ಮಿ ಶಮಂತ್

ಮಹಿಳಾ ವಿಶೇಷ ದಿನ ರಶ್ಮಿ ಶಮಂತ್ ಪ್ರೇಮಕುಸುಮ ಅಲೆವಳು ಅವಳುಜವಾಬ್ದಾರಿಗಳ ಸಂತೆಯಲಿಕನಸಿನ ಅಂಗಡಿಯ ಹುಡುಕುತಪರಿಚಿತರ ಮುಖವಾಡದೊಳಗೆತನ್ನವರೆಂಬುವರ ಅರಸುತ ಹೊರುವಳು ಆಕೆಹೊಣೆಯ ಮೂಟೆಗಳದೊರಕದವಳಿಗೆ ಸನ್ಮಾನಅಲಂಕರಿಸುವುದುಕೊಂಕು ಬಿರುದುಗಳ ತಾತ್ಸಾರ ಮನದ ಬಯಲಿನಲಿಸುಂಟರಗಾಳಿ ತಾಂಡವವಾಡುತಿರಲುತಾಳ್ಮೆ ಸಹನೆಗಳ ಕಡಿವಾಣವದಕೆಬೆನ್ನೆಲುಬಾಗಿಹಳುತನ್ನದಲ್ಲದ ಕನಸುಗಳ ಸಾಕಾರಕೆ ನಗುನಗುತಲೇ ಬದುಕುವಳುತನ್ನದಲ್ಲದ ಜೀವನದಲಿಪ್ರವಾಹಗಳನೇ ಎದುರಿಸುವಳುಸಂಸಾರದ ಹೊನಲಿನಲಿಸುಗಂಧವ ಬೀರುವ ಪ್ರೇಮಕುಸುಮವಾಕೆ…. ರಶ್ಮಿ ಶಮಂತ್

ಮಹಿಳಾ ವಿಶೇಷ ದಿನ,ರಶ್ಮಿ ಶಮಂತ್ Read Post »

ಕಾವ್ಯಯಾನ

ಡಾ.ವೈ.ಎಂ ಯಾಕೊಳ್ಳಿ ಅವರ ಕವಿತೆ “ನಾವಂದುಕೊಂಡಂತಲ್ಲ….”

ಕಾವ್ಯ ಸಂಗಾತಿ ಡಾ.ವೈ.ಎಂ ಯಾಕೊಳ್ಳಿ “ನಾವಂದುಕೊಂಡಂತಲ್ಲ….” ನಾವಂದಂತೆಬದುಕಲಾಗದಾದಾಗ‌ಬದುಕು ಬಂದಂತೆಬದುಕಬೇಕು ನಮ್ಮ ಆಸೆಗಳಿಗೆಅವಕಾಶವಿಲ್ಲದಾಗಜಗತ್ತಿ ಆಸೆಗಳ ಜೊತೆನಾವು ಸಾಗಬೇಕು ನಮ್ಮಿಚ್ಛೆಗಳನಷ್ಟೇಪೂರೈಸಲೆಂದು ಬಂದಿಲ್ಲಎಲ್ಲರಿಗೂ ತುಸುಸಮಯವಿತ್ತು ಕಾಯಬೇಕು ಜಗವು ಸ್ಪರ್ಧೆಯಕಣವಷ್ಟೇ ಅಲ್ಲಹೊಂದಾಣಿಕೆಯೂಬಾಳಿನ ಸೂತ್ರವಾಗಬೇಕು ಎಲ್ಲ ನಾನೆ ಗೆಲ್ಲಲಿಎನ್ನುವದು ಸರಿಯಲ್ಲಕೆಲವೊಮ್ಮೆ ನಾವೂ ನೂಸೋಲಿನ ಸವಿಯಅನುಭವಿಸಬೇಕು ಡಾ.ವೈ.ಎಂ‌.ಯಾಕೊಳ್ಳಿ

ಡಾ.ವೈ.ಎಂ ಯಾಕೊಳ್ಳಿ ಅವರ ಕವಿತೆ “ನಾವಂದುಕೊಂಡಂತಲ್ಲ….” Read Post »

ಕಾವ್ಯಯಾನ

ಪರವಿನಬಾನು ಇ. ಯಲಿಗಾರ ಅವರ ಕವಿತೆ “ನೀನು ನೀನೇ”

ಕಾವ್ಯ ಸಂಗಾತಿ ಪರವಿನಬಾನು ಇ. ಯಲಿಗಾರ “ನೀನು ನೀನೇ” ಏನೆಂದು ಬಣ್ಣಿಸಲಿ ನಿನ್ನ ….?ಹೇಗೆಲ್ಲ ವರ್ಣಿಸಲಿ ನಿನ್ನ  ….? ಸೂರ್ಯನೆನ್ನಲೇ ? ಅಬ್ಭಾ ! ಕಡು ಕೋಪದಲ್ಲಿ ಸುಡುವವನು ,ಇರುಳಲಿ ಮರೆಯಾಗುವವನ ನಿನಗೆ  ಹೇಗೆ ಹೋಲಿಸಲಿ ,ತಂಪೆರೆಯುವ ಶೀತಲ ತಂಗಾಳಿ ನೀ ,ಎಂದೂ ಮರೆಯಾಗದ  ಬಂಧು ನೀ ….. ಚಂದ್ರನೆನ್ನಲೇ ? ಅಯ್ಯೋ ! ಅವನಿಗೂ ಗ್ರಹಣ ಬಾಧಿಸುವುದಲ್ಲ ,ಅಮವಾಸ್ಯೆಯಲಿ ಮಂಕು ಕವಿಯುವವನ ನಿನಗೆ ಹೇಗೆ ಹೋಲಿಸಲಿ ? ಕಲೆಗಳೇ ಇಲ್ಲದ ಶುಭ್ರ ಶ್ವೇತ ಮನಸಿಜ ನೀ ,ಸದಾ ಪಾದರಸ  …. ಸಾಗರವೆನ್ನಲೇ ? ಛೇ ! ಅದು ಉಕ್ಕುವುದು ನಿಷ್ಕರುಣಿಯಂತೆ , ಕೆಲವೊಮ್ಮೆ ಕೆರಳುವುದುರುದ್ರನಂತೆ  . ಹೇಗೆ ಹೋಲಿಸಲಿ ? ಶಾಂತ ಸಿಹಿ ನೀರಿನ ಸರೋವರ ನೀ , ಎಲ್ಲರನೂ ಪೊರೆದು ಪಾವನಗೋಳಿಸುವ ,ಅಂತರ್ಜಲ ನೀ …. ಗಾಳಿ ಎನ್ನಲೇ ? ಅಬ್ಬಬ್ಬಾ ! ನೋಡನೋಡುತ್ತಿದ್ದಂತೆ ಬಿರುಗಾಳಿ ,ಸುಂಟರ ಗಾಳಿಯಾಗಿ ಉಸಿರೇ ಕಸಿಯುವುದು  , ಹೇಗೆ ಹೋಲಿಸಲಿ ? ನೀ ದೇಹದೊಡನಾಡುವ ,ಹೃದಯ ಮಿಡಿಯುವ , ಜೀವ ನೀಡುವ ಉಸಿರು  ನೀ …. ಹೂ ಎನ್ನಲೇ ? ಪಾಪ ! ಅದು ಮುದುಡಿ ಬಾಡುವುದು ಸಂಜೆಗೆ , ಅಲ್ಪಾಯುಷಿಯಾದ ಅದಕೆ ಹೇಗೆ ಹೋಲಿಸಲಿ ? ನೀ ಚೀರಂಜೀವಿ ,ನಿತ್ಯ ನೂತನ ನಿನ್ನ ಜೀವನ  , ಬಾಡದ , ಬತ್ತದ ಅನುರಾಗದ ಸುಧೆ ನೀಯುವೆ ನೀ…… ಅಂಬರವೆನ್ನಲೇ ? ಛೇ ! ಒಂದು ದಿನಕ್ಕೆ ಹಲವು ಬಣ್ಣ ಬದಲಿಸುವುದು ,  ಕಣ್ಣಿಗೆ ಕಂಡರು ವಿಸ್ಮಯದಂತೆ ಕಾಡುವುದು , ಹೇಗೆ ಹೋಲಿಸಲಿ ?  ಎಂದೆಂದೂ ಒಂದೇ ಬಣ್ಣ , ನಿತ್ಯ ಸತ್ಯ ನೀ ….. ಯಾವ ಹೋಲಿಕೆಗೂ ಸಿಗದ , ಯಾವ ವರ್ಣನೆಗೂ ನಿಲುಕದ ನೀನು , ನೀನಾಗಿರು , ಬೇಡ ನಿನಗೆ ಯಾವ ಉಪಮಾನ , ಉಪಮೆಯ . ವರ್ಣನಾತೀತ ನೀ …… ಪರವಿನಬಾನು ಇ. ಯಲಿಗಾರ

ಪರವಿನಬಾನು ಇ. ಯಲಿಗಾರ ಅವರ ಕವಿತೆ “ನೀನು ನೀನೇ” Read Post »

ಕಾವ್ಯಯಾನ

ಡಾ ಡೋ ನಾ ವೆಂಕಟೇಶ ಅವರ ಕವಿತೆ “ಬಾಯಲ್ಲಿಯ ಅಕ್ಕಿ ಕಾಳು”

ಕಾವ್ಯ ಸಂಗಾತಿ ಡಾ ಡೋ ನಾ ವೆಂಕಟೇಶ “ಬಾಯಲ್ಲಿಯ ಅಕ್ಕಿ ಕಾಳು” ತಥಾಕಥಿತ ದೊಡ್ಡಣ್ಣ ದೂರದೇಶದಿಂದಲೇ ಕಳುಹಿದ ತನ್ನೆಲ್ಲ ಅಷ್ಟೈಶ್ವರ್ಯದ ಶಸ್ತ್ರಾಸ್ತ ಸಾಮರ್ಥ್ಯ ತನ್ನ ನೆಲ ತಣ್ಣಗಿರಲಿಬೇರೆಯವನ ನೆಲ ಜಲ ವಾಯುಗಳು ವಿಷಾನಿಲಗಳಾಗಲಿ, ಉರಿಯುತಿರಲಿ ಸದಾ. ತಾ ಮಾತ್ರ ಹೊಂದಬೇಕು ಮಾರಕಾಸ್ತ್ರ ಅಣ್ವಸ್ತ್ರಅವನಿಗೇಕೆ ಬೇಕು ಈ ಅಶ್ವತ್ಥಾಮಾಸ್ತ್ರ ದೊಡ್ಡಣ್ಣ ನಾನೇ ನಾನೇದುರ್ಯೋಧನನೇ ಅಂದವನು. ಇಬ್ಬರೂ ಮೂರ್ಖರುಇಬ್ಬರೂ ದುರ್ಬುದ್ಧಿಯವರುಇಬ್ಬರಿಗೂ ಹೇಳ ಬಹುದುವಿನಾಶ ಕಾಲೇ ವಿಪರೀತ ಬುದ್ಧಿಃ ಅಡಕತ್ತರಿಯಲ್ಲಿರುವ ನಾವುಇಹ ಪರಗಳ ನೆನೆವವರು ಡಾ ಡೋ ನಾ ವೆಂಕಟೇಶ

ಡಾ ಡೋ ನಾ ವೆಂಕಟೇಶ ಅವರ ಕವಿತೆ “ಬಾಯಲ್ಲಿಯ ಅಕ್ಕಿ ಕಾಳು” Read Post »

ಕಾವ್ಯಯಾನ

ಡಾ‌.ಗೀತಾ ದಾನಶೆಟ್ಟಿ ಬಾಗಲಕೋಟೆ ಅವರ ಕವಿತೆ “ಒಲವಿನ ಉಡುಗೊರೆ”

ಕಾವ್ಯ ಸಂಗಾತಿ ಡಾ‌.ಗೀತಾ ದಾನಶೆಟ್ಟಿ “ಒಲವಿನ ಉಡುಗೊರೆ” ಜೀವನವೆಂಬುದುದೇವರು ಕೊಟ್ಟ ಕೊಡುಗೆಕಳೆಯುವ ಪ್ರತಿಕ್ಷಣವೂ ಒಲವಿನ ಉಡುಗೊರೆ ಹುಟ್ಟಿ ಬಂದ ಈ ಜಗಕೆಕೊಟ್ಟು ಹೋಗುವುದು ಬೆಟ್ಟದಷ್ಟಿದೆಉಣಲು ಮುದ್ದೆ,ನೆಮ್ಮದಿಯ ನಿದ್ದೆಸದ್ಗುಣಗಳಿಂದ ಗೆದ್ದು ಬೀಗಬೇಕು ಮನವೆಂಬ ವನದಲ್ಲಿಪ್ರೀತಿ, ಪ್ರೇಮ,ಪ್ರೇರಣೆಪ್ರಾಮಾಣಿಕತೆ,ಪರಿಶ್ರಮ,ಉತ್ಸಾಹದಬೀಜಗಳ ಬಿತ್ತಿ ಬೆಳೆಯಬೇಕು ಬದುಕಿನ ಪಯಣದಲಿಏರಿಳಿತಗಳನು ಸ್ವೀಕರಿಸಿಸೋಲು,ಗೆಲುವಿನ ಸೋಪಾನದಿಸಾಧನೆ ಶಿಖರವೇರಬೇಕು ಸುಖ-ದುಃಖಗಳನು ಮರೆತುಮಾನವೀಯ ಮೌಲ್ಯಗಳನರಿತುದಿವ್ಯತೆಯ ದಾರಿಯಲಿಭವ್ಯತೆಯ ಬಾಳು ಬೆಳಗಬೇಕು ಪ್ರೀತಿಸುವರೆಷ್ಟೋ,ದ್ವೇಷಿಸುವರೆಷ್ಟೋಕೆಡಿಸಿಕೊಳ್ಳದೆ ಮನದ ಮತಿವಿಶಿಷ್ಟ ವಿಚಾರ,ಆಚಾರಗಳಿಂದಅರೆಕ್ಷಣ ಅರಿತುಕೊಳ್ಳಬೇಕುಡಾ‌.ಗೀತಾ ದಾನಶೆಟ್ಟಿ ಬಾಗಲಕೋಟೆ

ಡಾ‌.ಗೀತಾ ದಾನಶೆಟ್ಟಿ ಬಾಗಲಕೋಟೆ ಅವರ ಕವಿತೆ “ಒಲವಿನ ಉಡುಗೊರೆ” Read Post »

ಕಾವ್ಯಯಾನ

ನಿರಂಜನ ನಾಯಕ ಕವಿತೆ “ಹಗೆಯ ಸುಳಿ”

ಕಾವ್ಯ ಸಂಗಾತಿ ನಿರಂಜನ ನಾಯಕ “ಹಗೆಯ ಸುಳಿ” ಮಿತಿಯನು ನಾವು ಮೀರುವುದು ಯಾವಾಗ?ಮಾನವೀಯತೆಯು ಮಣ್ಣಾದಾಗ! ಹಗೆತನಕೆ ಮುಕ್ತಿ ದೊರೆಯುವುದು ಯಾವಾಗ?ನೆತ್ತರು ಹೊಳೆಯಾಗಿ ಹರಿದಾಗ! ಯಾವ ವಿಷವೃಕ್ಷದ ಕಟುಫಲವಿದು?ಒಡಲೊಳು ದ್ವೇಷದ ಬೀಜವೇ ತುಂಬಿಹುದು. ಗಡಿಯ ಗೋಡೆಯ ಒಡೆಯುವ ಹಂಬಲವ ಬಿಟ್ಟು,ಬಂಧನ ಬಿಗಿಯಾಗುತ ಸಾಗಿಹುದು! ಮುಳ್ಳಿನ ನಡುವೆ ನಗುವ ಗುಲಾಬಿಯ,ಕಪಟದ ಒಳಮರ್ಮ ಅರ್ಥವಾಗದಿರದು! ನಿರಂಜನ ನಾಯಕ

ನಿರಂಜನ ನಾಯಕ ಕವಿತೆ “ಹಗೆಯ ಸುಳಿ” Read Post »

ಕಾವ್ಯಯಾನ

ವನಜ ಮಹಾಲಿಂಗಯ್ಯ ಅವರ ಕವಿತೆ “ಒಂದಾಗಿಸುವ ಬಣ್ಣ”

ಕಾವ್ಯ ಸಂಗಾತಿ ವನಜ ಮಹಾಲಿಂಗಯ್ಯ “ಒಂದಾಗಿಸುವ ಬಣ್ಣ”    ರಂಗುಗಳ ಮಳೆಯಲ್ಲಿಮರೆಯುತ್ತದೆ ಹಳೆಯ ನೋವು   ಒಣಗಿದ ದ್ವೇಷದ ಮೇಲೆಪಿಚಕಾರಿ ಚಿಮ್ಮುವ ಸಂತೋಷ    ಕೆಂಪು-ಹಸಿರು-ನೀಲಿ ತುಂಬಿಹೃದಯದ ಕಪ್ಪು ಕಳೆಯುತ್ತದೆಹೋಳಿಗೆ ಬಂದವ ಒಡ್ಡಿಕೊಂಡರೆ    ಎಲ್ಲರೂ ಒಂದೇ ಒಂದು ಬಣ್ಣಪ್ರೀತಿಯ ಹಬ್ಬದ ಹೆಸರು ಹೋಳಿ     ರಂಗುಗಳಲ್ಲಿ ಬರೆಯುವ ಸ್ನೇಹದ ಕಥೆಹಸನ್ಮುಖದ ಈ ಒಂದು ದಿನಕ್ಕೆಜಗತ್ತೆಲ್ಲಾ ಒಂದಾಗುತ್ತದೆ. ವನಜ ಮಹಾಲಿಂಗಯ್ಯ

ವನಜ ಮಹಾಲಿಂಗಯ್ಯ ಅವರ ಕವಿತೆ “ಒಂದಾಗಿಸುವ ಬಣ್ಣ” Read Post »

ಕಾವ್ಯಯಾನ

ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಮರುಕಳಿಸುತಿದೆ”

ಕಾವ್ಯ ಸಂಗಾತಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಮರುಕಳಿಸುತಿದೆ” ಇತಿಹಾಸ ಮತ್ತೆಮರುಕಳಿಸುತ್ತಿದೆಯುದ್ಧವೆಂದರೆಕೇವಲ ಸಾವು ನೋವಿನಲೆಕ್ಕವಲ್ಲಭೂಮಿ ಆಕ್ರಮಣವಲ್ಲಬಲಿಷ್ಟರನ್ನು ಬಗ್ಗು ಬಡಿದುಗುಲಾಮರನ್ನಾಗಿ ಮಾಡುವುದಲ್ಲ ಮನುಷ್ಯ ಮನುಷ್ಯರ ಮಧ್ಯೆಹಗೆತನದ ಗೋಡೆ ನಿರ್ಮಾಣಒಂದಾಗದ ಜನರ ಕಿಚ್ಚುಬೂದಿಯಾಗುವುದು ಭೂಮಿಸುತ್ತಲೂ ಬಾಂಬ್ ಸಪ್ಪಳಕ್ಷಿಪಣಿಗಳ ಹಾರಾಟಎಳೆಯ ಮಕ್ಕಳು ಕುಳಿತಲ್ಲಿಯೇಜೀವ ಬಿಟ್ಟಿದ್ದಾರೆನಾಗಾಸಾಕಿ ಹಿರೋಶಿಮಾದಕುರುಡು ಕೆಪ್ಪರ ಭೀತಿರಾತ್ರಿ ಈಸ್ಟರ್ ನ ಭರ್ಜರಿ ಭೋಜನಬೆಳಿಗ್ಗೆ ರಕ್ತ ಕಾರಿ ಸತ್ತರುಗಡಿವಲಯದ ಗ್ರಾಮಗಳುಶೆಲ್ ದಾಳಿಗೆ ಸುಟ್ಟು ಕರಕಲುಮಕ್ಕಳ ಮಹಿಳೆಯರ ಅರಚಾಟಫೋನಿನ್ ಗಂಟೆ ಬಾರಿಸಿದಾಗಲೆಲ್ಲಹೆದರುತ್ತಾರೆ ಮಡದಿ ಮಕ್ಕಳುಮಸಣದ ಗುಂಡಿಗಳ ನೆನಪುದಾರಿಯುದ್ದಕ್ಕೂ ಬಿದ್ದಿವೆಎಲವು ಡೌವುಗಿಗಳುಕೊಂದವರ ಅಟ್ಟಹಾಸಸತ್ತವರ ಶೋಕ ಸಭೆ ಪ್ರತಿಭಟನೆ. ಒಮ್ಮೆ ಕೇಳಬೇಕಿದೆಕಳಿಂಗ ಗೆದ್ದ ಮೇಲೂವಿರಕ್ತನದ ಅಶೋಕನನ್ನುಜಗವೇ ಗೆಲ್ಲಲು ಹೋಗಿಹೆಣದ ಪೆಟ್ಟಿಗೆಯಲ್ಲಿ ಮಲಗಿದಅಲೆಕ್ಸಾಂಡರ್ ಚಕ್ರವರ್ತಿಯನ್ನುಗುಲಗಂಚಿ ಕಣ್ಣಿನ ಜಗದಂಬೆಯನ್ನುಏಕೆ ಈ ಯುದ್ಧ ?ಯಾವ ಸಾಹಸ ಸ್ವಾರ್ಥಕೆಪ್ರಾಣಿ ಪಶು ಪಕ್ಷಿಗಳುಒಂದಾಗುವ ಸಮಯದಲ್ಲಿಮನುಷ್ಯ ಮನುಷ್ಯರ ಕೊಲ್ಲುವಯುದ್ಧ ರಣ ನೀತಿಕೇಳ ಬೇಕಿದೆ ಒಮ್ಮೆಬುದ್ಧ ಬಸವ ಏಸು ಮಹಮ್ಮದರನ್ನುಗೆದ್ದು ಬೀಗಿದವರನ್ನುಸೋತು ಸತ್ತವರನ್ನುವಿಶ್ವ ಯುದ್ಧಕ್ಕೆ ಸಿದ್ಧರಾದವರನ್ನುಏಕೆ ಬೇಕು ಈ ಯುದ್ಧ?ಮತ್ತೆ ಮತ್ತೆ ಇತಿಹಾಸಮರುಕಳಿಸಬಹುದುಕನಸುಗಳು ಪುಡಿಯಾಗುವವುಹಿಟ್ಲರ್ ಬೈಬಲ್ ಓದುತ್ತಿರುವವನುನಾಳೆ ಏನಾಗುವುದೋ ಗೊತ್ತಿಲ್ಲಇಂದು ಮಲಗೋಣಬದುಕುಳಿದರೆ ನಾಳೆ ಇರೋಣಇಲ್ಲಾ ಇಂದೇ ಆಲ್ ವಿದಾ ಚರಮಗೀತೆ ಹಾಡೋಣ ಡಾ ಶಶಿಕಾಂತ ಪಟ್ಟಣ ರಾಮದುರ್ಗ 

ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಮರುಕಳಿಸುತಿದೆ” Read Post »

ಕಾವ್ಯಯಾನ

ಕಲ್ಪನಾ ಎಸ್ ಪಾಟೀಲ ಅವರ ಕವಿತೆ “ಹೋಳಿಹಬ್ಬ”

ಕಾವ್ಯ ಸಂಗಾತಿ ಕಲ್ಪನಾ ಎಸ್ ಪಾಟೀಲ “ಹೋಳಿಹಬ್ಬ” ಬಣ್ಣಗಳ ಸಮ್ಮಿಲನಹೋಳಿ ಹಬ್ಬದ ದಿನಮಿಂದೇಳುತ ಮೈ ಮನನೆನೆಯುತ ರಾಧೆ ಶಾಮನರಂಗಿನೋಕುಳಿ ಕಾಮ ದಹನತ್ಯಜಿಸು ಅರಿಷಡ್ವರ್ಗಗಳನ್ನ. ಬಣ್ಣದ ಹಬ್ಬವಿದುಸಂಭ್ರಮದ ಹೋಳಿಯಿದುರಂಗನು ಚೆಲ್ಲುತ ನಿಂದುಸಂತಸದಿ ನಲಿಯೋಣ ಮಿಂದುಒಂದಾಗಿಸಿ ಮನಗಳ ಇಂದುಎಲ್ಲೆಲ್ಲೂ ಉಲ್ಲಾಸವೆ ತುಂಬಿಹುದು. ಕೋಟೆಯ ಬಣ್ಣವ ನೋಡಿದೆಯಾರಂಗಿನೋಕುಳಿಯ ಆಡಿದೆಯಾಶಾಮನಿರಲು ರಾಧೆ ಬಾರೆಯಾನೀನಿರಲು ಸರಿಯದು ಸಮಯಎನ್ನುತ ಸ್ನೇಹಿತರ ಬಳಿ ಸಾರೆಯಾಏಳು ಬಣ್ಣಗಳ ಮನಸಾರೆ ಬೆರೆಸೆಯಾ. ಒಲವಿನ ಬಣ್ಣ ಚೆಲುವಿನ ಬಣ್ಣನವಿರಾದ ಭಾವ ಮೈಮನದೊಳಗಿಣ್ಣ. ಕಲ್ಪನಾ ಎಸ್ ಪಾಟೀಲ

ಕಲ್ಪನಾ ಎಸ್ ಪಾಟೀಲ ಅವರ ಕವಿತೆ “ಹೋಳಿಹಬ್ಬ” Read Post »

You cannot copy content of this page

Scroll to Top