ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

“ಚಳಿಗಾಲದಲ್ಲಿ ಭುವಿ – ರವಿ” ಪರವಿನಬಾನು ಯಲಿಗಾರ

ಕಾವ್ಯ ಸಂಗಾತಿ ಪರವಿನಬಾನು ಯಲಿಗಾರ ಚಳಿಗಾಲದಲ್ಲಿ ಭುವಿ – ರವಿ ಮಂಜಿನ ಮುಸುಕು ಹೊದ್ದು ಕುಳಿತ ಧರಿತ್ರಿ ,ಷೋಡಶ ಶೃಂಗಾರದ  ಮಧುವಣಗಿತ್ತಿ ,ಉದಯ ರವಿಯ ಸ್ವರ್ಣ ರಶ್ಮಿಯು ತಾಗಿದಾಗ ,ನಸು ನಾಚಿ ಕೆಂಪಾಗುವಳುಆ ನವಿರಾದ ಸ್ಪರ್ಶಕೆ …… ಮದ್ಯಾಹ್ನದ ವೇಳೆಗೆ ಸುಡುವ ಸೂರ್ಯನುಧರಣಿಯನು ದಹಿಸುವನು.ತಾಳ್ಮೆಯಿಂದಲೇ ಸಹಿಸುವಳು.ಅವಳ ಮೈ ಮೇಲಿನ ಹಸಿರೆಲ್ಲವೂ ಮೆಲ್ಲನೆಒಣಗಿ ಮಾಯವಾಗುವುದು…. ಸಂಜೆ ಬೀಸುವ ಶೀತಲ ಮಂದ ಮಾರುತ ,   ಇಡೀ ದಿನ ಕಾದು ಬೆಂದ ಪ್ರಕೃತಿಯಲಿತುಸು ತಂಪಿನ ಸಿಂಚನದ ಅನುಭವ.ಮೋಡದ ಆ ಅಂಚಿನಲ್ಲಿ ಕೈ ಬೀಸುತ್ತಹೋರಟ ಆದಿತ್ಯ. ಅದೇನು ಮುನಿಸೊ ಅವನಿಗೆ ,ಆ ಭೂ ರಮಣೀಯ ಮೇಲೆ ,ದಿನವೂ ಮರೆಯಾಗುವನು ಇರುಳಿಗೆ .ಬೆಳಗಿನ ಒಲವು ರಾತ್ರಿಗಿಲ್ಲ ,ಬಹುಶಃ ಇರುವಳೇನೊ ,ಒಬ್ಬ ಸವತಿ ಭುವಿಗೂ ….. ಇನಿಯನ ಬರುವಿಕೆಗಾಗಿಕಾಯುವ ಭೂರಮೆ ,ವಸಂತನ ಆಗಮನಕೆಹಾತೊರೆಯುವ ಪ್ರಕೃತಿ ,ಜಗದ  ಈ  ಚಕ್ರ ಉರುಳುವುದು ಹೀಗೆ ,ಒಮ್ಮೆ ನಗಿಸಿ , ಮತ್ತೊಮ್ಮೆ ಅಳಿಸಿ…… ———- ಪರವಿನ ಬಾನು ಯಲಿಗಾರ

“ಚಳಿಗಾಲದಲ್ಲಿ ಭುವಿ – ರವಿ” ಪರವಿನಬಾನು ಯಲಿಗಾರ Read Post »

ಕಾವ್ಯಯಾನ

ವ್ಯಾಸ ಜೋಶಿ ಅವರ ಚಳಿಗಾಲದ ತನಗಗಳು

ಕಾವ್ಯ ಸಂಗಾತಿ ವ್ಯಾಸ ಜೋಶಿ ಚಳಿಗಾಲದ ತನಗಗಳು  ಚಳಿಯೇ ಚಳಿಯಲ್ಲಿ ಕಂಪಿಸಿ ನಡುಗಿದೆ. ಥಂಡೀ ತಾಳಲಾರದೆ ಸೂರ್ಯನ ಕರೆದಿದೆ.  ಭೂಮಿಯೇ ನಡುಗಿದೆ ಈ ಪರಿಯ ಥಂಡಿಗೆ ಮನೆಗೇ ಹೊಚ್ಚಬೇಕುದೊಡ್ಡ ಕೌದಿ ಬೆಚ್ಚಗೆ.  ಉರಿಯುವ ರವಿಗೆಬೈಯುವರು ‘ಮೇ’ನಲ್ಲಿ,ಕರೆವರಾದರದಿಹೇಮಂತ ಋತುವಲ್ಲಿ.  ಇಷ್ಟು ವರ್ಷ ಬಂದ್ಹೊಯ್ತು ಎಷ್ಟೊಂದು ಚಳಿಗಾಲ, ಈ ಸಾರಿ ಬೆಚ್ಚಗಿದೆ ಎಂದನು ಮದುಮಗ. ನವದಂಪತಿಗಳುಗೆಲ್ಲಲು ಚಳಿಯನ್ನದೊಡ್ಡ ಕಂಬಳಿಗಿಂತಅಪ್ಪುಗೆ ವರದಾನ. ಎಷ್ಟೊಂದು ಚಳಿಯಲ್ಲೂಮಧುಚಂದ್ರದಿ ಜೋಡಿಗೆಲ್ಲುವರು ಚಳಿಯಸ್ಕೂಬಾ ಡೖವಿಂಗು ಮಾಡಿ.   ಓ ಸೂರ್ಯ ಬಂದುಬಿಡು ಗೆಳೆಯನಂತೆ ಹತ್ರ, ಅದಕ್ಕೆ ನಿನಗೊಂದು ಅನ್ವರ್ಥನಾಮ ‘ಮಿತ್ರ’. ವ್ಯಾಸ ಜೋಶಿ

ವ್ಯಾಸ ಜೋಶಿ ಅವರ ಚಳಿಗಾಲದ ತನಗಗಳು Read Post »

ಕಾವ್ಯಯಾನ

ರಾಜುಪವಾರ್‌ ಅವರ ಚಳಿಗಾಲದ ಸಾಲುಗಳು

ಕಾವ್ಯ ಸಂಗಾತಿ ರಾಜುಪವಾರ್‌ ಅವರ ಚಳಿಗಾಲದ ಸಾಲುಗಳು ರಗ್ಗು ಮಧುರ ಪ್ರಿಯನಿಗೆ ಚಳಿಯ ಚಿಂತೆ ಇಲ್ಲಬಳಿ ಇರುವಾಗ ಮೊ(ನ)ಲ್ಲೆಯ ಮೊಗ್ಗು !‘ಮಧು’ ಪ್ರಿಯನಿಗೂ ಚಳಿಯ ಹಂಗಿಲ್ಲಒಳ ಹೋದೊಡೆ ಒಂದು ಪೆಗ್ಗುಹೊತ್ತಂತೆ ಎರಡೆರಡು ರಗ್ಗು !!               ***ಈ ‘ಚಳಿ’ಗೆ ಚಳಿಯಾಗುವುದಿಲ್ಲವೆ !?ಊರೆಲ್ಲ ಸುತ್ತಿ ಎಲ್ಲರಿಗೂಚಳಿಯಲ್ಲಿ ನಡುಗಿಸುತ್ತದೆ,ಮನೆಯ ಮೂಲೆ ಸೇರಿಬೆಚ್ಚನೆ ಕೂರಬಾರದೆ !?            ***ಚಳಿಗೆ ಬೆಚ್ಚನೆ ಕಾಫಿ ಹೀರಲು ಕುಳಿತ್ತಿದ್ದೆಗಡ ಗಡ ನಡುಗುತ್ತ ಬಳಿ ಬಂದ ಚಳಿತನಗೊಂದು ಲೋಟ ಕಾಫಿಗೆ ಅಂಗಲಾಚಿತು!ಕೈಯಲ್ಲದ್ದ ಕಾಫಿ ಲೋಟ ಚಾಚಿದೆಮನದಲ್ಲಿ ಚಳಿಯ ಚಳಿ ಹೋಗಲಾಡಿಸಿದ ಬೆಚ್ಚನೆಯ ಅನುಭವ !!                 ***ನೀರಿಗೂ ಚಳಿ ಆಗಬಾರದೆಂದುಬಿಸಿ ಮಾಡಿಮೆಲ್ಲನೆ ಕೈ ಹಿಡಿದುಕೊಂಡು ಕರೆದ್ಹೋಗುತ್ತೇನೆ ಸ್ನಾನಕ್ಕೆ !!             ***ಅತಿ ಯಾಯಿತು ಈ ಚಳಿಯ ಗಲಾಟೆಸೂರ್ಯ ಮೆರೆಯಾಗುವುದೇ ತಡಬಂದು ಬಿಡುತ್ತಾನೆ ನಡುಗಿಸಲು ಗಡ ಗಡ ————————— ರಾಜು ಪವಾರ್ ರಾಜುಪವಾರ್‌ ಅವರ ಚಳಿಗಾಲದ ಸಾಲುಗಳು

ರಾಜುಪವಾರ್‌ ಅವರ ಚಳಿಗಾಲದ ಸಾಲುಗಳು Read Post »

ಕಾವ್ಯಯಾನ

“ದೋಷಿ‌ ನಾನಲ್ಲ” ಮಾಳೇಟಿರ ಸೀತಮ್ಮ ವಿವೇಕ್

ಕಾವ್ಯ ಸಂಗಾತಿ “ದೋಷಿ‌ ನಾನಲ್ಲ” ಮಾಳೇಟಿರ ಸೀತಮ್ಮ ವಿವೇಕ್ ಸ್ಪರ್ಧೆ ಎನಿಸಿದರೆ‌ ನಿಮಗೆನ್ನಕಾಯಕ‌ವದರ ದೋಷಿ‌ಯು ನಾನಲ್ಲ||ಕೆರೆಯುತಲಿದ್ದು ಮಾಯುವುದಕ್ಕೆಡೆ ಕೊಡದೆ ನಂಜಾಗುತಿರೆ ಗಾಯ ದೋಷಿ‌ಯು ನಾನಲ್ಲ|| ನಾನಾಡುವ‌ ದಿಟ ಮಾತು ಸದಾಕಟುವೆನಿಸಿದರಕೆ ದೋಷಿಯು ನಾನಲ್ಲ||ನಾ ಬಲ್ಲೆ ಎನ್ನರಿವು‌ ಹರಿವಿನ ಹಿತಮಿತಅಹಂ‌ ಅನಿಸಿದರದು‌ ತಮಗೆ ದೋಷಿ‌ ನಾನಲ್ಲ|| ಎನ್ನ‌ ಬಾಹ್ಯ‌-ಆಂತರ್ಯ‌ ಸೊಬಗಿಗೆ ನಿಮ್ಮಕಣ್ಗಳು ಸೋಲುಂಬುದಕೆ ದೋಷಿ‌ಯು ನಾನಲ್ಲ||ಮುನ್ನ ಕೃತಿ ಪ್ರೌಢಿಮೆಯ‌ ಆಳವರಿಯದೆವರ್ಜಿಸಿ ಕಳೆದುಕೊಳ್ಳುವುದಕೆ ದೋಷಿ‌ಯು ನಾನಲ್ಲ|| ಎನ್ನಾತ್ಮ‌ ಮೆಚ್ಚುವಂತೆ ಮಾಡುವ‌ ಕೆಲಸ‌ನಿಮ್ಮ ಕಾಡಿದರದರ ದೋಷಿಯು ನಾನಲ್ಲ||ಬೆನ್ನಂತೆ ಕಾಣದಿರುವ ನಿಮ್ಮ‌ ಗುಣ‌ವ ನೀವೆ ತಿಳಿಯದಿರುವುದಕೆ ದೋಷಿಯು ನಾನಲ್ಲ|| ಆವುದನ್ನು ತಲೆಗೇರಿಸಿ‌ಕೊಳ್ಳದೆ ಇಷ್ಟದೊಂದಿಗೆ‌ ಬಾಳುತಿರುವ ಅಂತರ್ಧ್ಯಾನಿ ನನಗಾವ ದೋಷವಿಲ್ಲ||ಆಕರ್ಷ ಜಗಕೆ‌ ಮರುಳಾಗುತಿರುವ‌ ಮೋಹಿ ನೀ ನಿನ್ನ ಅರಿಯದಕೆ ಅನಿಸುತ್ತಿದೆ ನಿಮಗೆ ದೋಷವೇ ಎಲ್ಲ || ಕೊ//ಮಾಳೇಟಿರ ಸೀತಮ್ಮ ವಿವೇಕ್, ಹಾಸನ.

“ದೋಷಿ‌ ನಾನಲ್ಲ” ಮಾಳೇಟಿರ ಸೀತಮ್ಮ ವಿವೇಕ್ Read Post »

ಕಾವ್ಯಯಾನ, ಗಝಲ್

ಎಮ್ಮಾರ್ಕೆ ಅವರ ಗಜಲ್

ಕಾವ್ಯ ಸಂಗಾತಿ ಎಮ್ಮಾರ್ಕೆ ಗಜಲ್ ದೂರಾದವಳ ಮೇಲೆ ದೂರೊಂದ ನೀಡಬೇಕಿತ್ತುಮೌನವಾದವಳ ಜತೆ ಮಾತೊಂದ ಆಡಬೇಕಿತ್ತು ಇಟ್ಟ ಹೆಜ್ಜೆ ಕೊಟ್ಟ ಭಾಷೆ ಅರ್ಥ ಕಳೆದುಕೊಂಡಿವೆಕಟ್ಟಿದ ಕಾಲ್ಗೆಜ್ಜೆಯದು ಸದ್ದೊಂದ ಮಾಡಬೇಕಿತ್ತು ಪ್ರಮಾಣಿಸಿ ನೋಡದುದರ ಪರಿಣಾಮ ಘೋರಬರಿಗಣ್ಣಿಂದಲ್ಲ ಎದೆಯ ಕಣ್ಣಿಂದ ನೋಡಬೇಕಿತ್ತು ಗೂಡು ತೊರೆದ ಹಕ್ಕಿಗಂತೂ ಹೇಳತೀರದ ಪಾಡುನೋವ ಮರೆಸುವಂತ ಹಾಡೊಂದ ಹಾಡಬೇಕಿತ್ತು ಅವಳ ಆ ನಿಮಿಷ ಕುಂಬಾರನಿಗೆ ವರುಷವೇ ಸರಿಕಳೆದ ನೆನಹು ಬಿಡದೇ ಒಂದೊಂದ ಕಾಡಬೇಕಿತ್ತು ಎಮ್ಮಾರ್ಕೆ

ಎಮ್ಮಾರ್ಕೆ ಅವರ ಗಜಲ್ Read Post »

ಕಾವ್ಯಯಾನ

“ನನ್ನಾಸೆಗಳು” ಗೀತಾ ಆರ್.

ಕಾವ್ಯ ಸಂಗಾತಿ ಗೀತಾ ಆರ್. “ನನ್ನಾಸೆಗಳು” ನೀ ನನ್ನ ನೆನಪಲ್ಲೇ ಪುನಃ ಪುನಃಉಳಿಯುವಾಸೆ….ನಿನ್ನ ಹಿಂದಿಗಿಂತ ಹೆಚ್ಚು ಹೆಚ್ಚುನಾ ಪ್ರೀತಿಸುವಾಸೆ…ನಿನ್ನ ಹೃದಯದಲ್ಲೇ ಮತ್ತೆ ನಾನೇಬಚ್ಚಿಟ್ಟುಕೊಳ್ಳುವಾಸೆ….ನಿನ್ನ ಮನದಾಳದ ಮಾತುಗಳೆಲ್ಲಾಮತ್ತೊಮ್ಮೆ ಆಲಿಸುವಾಸೆ….ನಿನ್ನ ಆ ನಯನಗಳಲ್ಲಿ ಇನ್ನೊಮ್ಮೆನಾ ಬೆರೆಯುವಾಸೆ….ನಿನ್ನ ಆ ಕುಡಿಮಿಂಚು ನೋಟ ಮತ್ತೆಮತ್ತೆ ನೋಡುವಾಸೆ ….ನಿನ್ನ  ಮೌನವಾ ನಾ ಕೊನೆಯದಾಗಿಅರ್ಥೈಸಿಕೊಳ್ಳುವಾಸೆ….ನಮ್ಮಿಬ್ಬರಲ್ಲಿ ಮತ್ತೆಂದೂ ಅಗಲಿಕೆಬಾರದಿರಲೆಂಬಾಸೆ…. ————– ಗೀತಾ ಆರ್.

“ನನ್ನಾಸೆಗಳು” ಗೀತಾ ಆರ್. Read Post »

ಕಾವ್ಯಯಾನ

“ಹೃದಯದ ದೇವತೆ” ಕೆ.ಎಂ. ಕಾವ್ಯ ಪ್ರಸಾದ್

ಕಾವ್ಯ ಸಂಗಾತಿ ಕೆ.ಎಂ. ಕಾವ್ಯ ಪ್ರಸಾದ್ “ಹೃದಯದ ದೇವತೆ” ನನ್ನ ಹೃದಯದ ದೇವತೆ ಏಕೆ ನೀ ನಕ್ಕಿದೆಈ ಎದೆಯಲ್ಲಿ ನಿನ್ನ ಪ್ರೀತಿ ಉಕ್ಕಿ ಹರಿಸಿದೆ!ಮುಗಿಲಷ್ಟು ಪ್ರೇಮದ ಕಾಣಿಕೆಯ ನೀಡಿದೆಹಾಲು ಜೇನಂತ ಮನಸು ನಿನ್ನದಾಗಿದೆ!! ಆಸೆ ಕನಸುಗಳೆಲ್ಲ ಹಸಿರಾಗಿ ಚಿಗುರುತಿದೆಮುತ್ತಿನ ಮಳೆಯು ಹೂಗಳಾಗಿ ಸುರಿದಿದೆ!ನನ್ನ ಪ್ರೀತಿ ನಿನ್ನ ನೋಟಕೆ ಸೆರೆಯಾಗಿದೆಹೆಣ್ಣು ದುಂಬಿ ಪ್ರೀತಿ ಆಸರೆ ಬಯಸಿದೆ!! ಸಿಹಿ ತುಪ್ಪ ಸವಿಯುವ ಆಸೆ ಹೆಚ್ಚಾಗಿದೆಗಲ್ಲ ಕರಗುವ ಬೆಣ್ಣೆಯಂತೆ ಮೃದುವಾಗಿದೆ!ಕಣ್ಣು ಮುಚ್ಚಲು ನಿನ್ನ ರೂಪ ಕಾಣುವುದೇನಿನ್ನ ಬಿಂಬ ನನಗೀಗ ಕಚಗುಳಿ ಇಡುತಿದೆ!! ನಿನ್ನ ಮನಸಾರೆ ಸೇರುವ ತವಕ ಹೆಚ್ಚಾಗಿದೆನಾ ಹುಡುಕುವ ಹಾದಿಯ ದಾರಿ ತಪ್ಪಿಸಿದೆ!ಸುಂದರ ಸಾಮರಸ್ಯ ನಡಿಗೆಯು ನಿನ್ನಲ್ಲಿದೆಕಣ್ಣ ಮುಚ್ಚಾಲೆಯ ಆಟ ಏಕೆ ಆಡಿಸಿದೆ!! ನನ್ನೆದೆ ಬಡಿತವು ಜೋರಾಗಿ ತಾಳ ತಪ್ಪಿದೆನಿನ್ನ ಅವರಿಸುವ ಆಸೆಯು ಹೆಚ್ಚಾಗಿದೆ!ಖುಷಿಯಿಂದ ಜಗತ್ತನ್ನೆ ಮರೆಯಬೇಕಿದೆಸಿಹಿ ಮುತ್ತಲ್ಲಿ ನನ್ನ ಬಂದಿ ಮಾಡಿ ಬಿಟ್ಟೆ —— ಕೆ.ಎಂ. ಕಾವ್ಯ ಪ್ರಸಾದ್

“ಹೃದಯದ ದೇವತೆ” ಕೆ.ಎಂ. ಕಾವ್ಯ ಪ್ರಸಾದ್ Read Post »

ಕಾವ್ಯಯಾನ

ಮನುಷ್ಯನೇಕೆ ಹೀಗೆ? ಎಮ್ಮಾರ್ಕೆ

ಕಾವ್ಯ ಸಂಗಾತಿ ಎಮ್ಮಾರ್ಕೆ ಮನುಷ್ಯನೇಕೆ ಹೀಗೆ? ಯಾವುದೊಂದು ಬದಲಾಗಿಲ್ಲಮನುಷ್ಯನನ್ನು ಹೊರತು,ಎಷ್ಟು ಹೇಳಿದರೂ ಸಾಲದಲ್ಲಈ ಬಲುಬುದ್ಧಿಯ ಕುರಿತು ಹಕ್ಕಿಯಂತೆ ಹಾರಲು ಕಲಿತುಮೀನಿನಂತೆ ಈಜಲೂ ಬಲ್ಲ,ಮಂಗಳನ ಅಂಗಳದಿ ಇಳಿದುಎಲ್ಲವ ಕಂಡುಹಿಡಿದಿಹನಲ್ಲ ಮೋಡ ಬಿತ್ತನೆ ಮಾಡಿಹನಲ್ಲಮೌಢ್ಯತೆಯ ಬಿಡಲೇ ಇಲ್ಲ,ವಿಜ್ಞಾನ,ತಂತ್ರ ಬೆಳೆದಿವೆಯಲ್ಲಮಾಟ ಮಂತ್ರ ನಿಂತೇ ಇಲ್ಲ ಏನೆಲ್ಲ ಮನುಷ್ಯ ಮಾಡಿದನಲ್ಲಮನುಷ್ಯನಂತೆ ಬದುಕೇ ಇಲ್ಲ,ಹೊರಗಣ್ಣು ತೆರೆದು ನಿಂತಿಹನಲ್ಲಒಳಗಣ್ಣವು ಮುಚ್ಚಿವೆಯಲ್ಲ ಮನುಷ್ಯತ್ವವನೇ ಮರೆತಿಹೆವಲ್ಲಮಂಗನ ಜೊತೆ ಬೆರೆತಿಹೆವಲ್ಲ,ಈ ಜನ್ಮ‌ ದೊಡ್ಡದು ಅನತಾರಲ್ಲದಡ್ಡರಂತೆಯೇ ಬದುಕಿಹೆವಲ್ಲ ಎಮ್ಮಾರ್ಕೆ

ಮನುಷ್ಯನೇಕೆ ಹೀಗೆ? ಎಮ್ಮಾರ್ಕೆ Read Post »

ಕಾವ್ಯಯಾನ

“ಪೊಡವಿ ಸಗ್ಗ” ಏಳೆ ಕವನ-ಗುಣಾಜೆ ರಾಮಚಂದ್ರ ಭಟ್

ಕಾವ್ಯ ಸಂಗಾತಿ ಗುಣಾಜೆ ರಾಮಚಂದ್ರ ಭಟ್ “ಪೊಡವಿ ಸಗ್ಗ” ಏಳೆ ಕವನ-*ಛಂದಸ್ಸು: ಏಳೆ:೫೪೩/543/ ಜಗವಿದು ನಮ್ಮದು ಸೊಗಸಿದೆ ಕಾಣಲುಖಗಗಳ ಕಂಡು ಗಗನದಿ.. ಮೂಡುವ ನೇಸರ ಬಾಡದ ಚೇತನಕಾಡಿನ ಹಸಿರು ನಂದನ .. ನೀಲಿಯ ಕಡಲಿದೆ ನಾಲೆಯ ಹರಿವಿದೆಕಾಲನ ನಡೆಯು ಸಂತತ .. ಹರಿಯುವ ನದಿಗಳು ಕರೆಯುವ ಹಸುಗಳುಸುರಿಸುವ ನೋಟ ಸುಂದರ ಕೆಂಪಿನ ಹೂಗಳು ಕಂಪನು ಪಸರಿಸಿತಂಪನು ನೀಡಿ ಸಾನಂದ.. ಬಣ್ಣದ ಕುಸುಮವು ಕಣ್ಣನು ತುಂಬುತಬಣ್ಣಿಸೆ ಕವನ ಹೊಳಪಂತೆ.. ಮಿಗಗಳು ಕೋಟಿಯ ಅಗಣಿತ ಲೆಕ್ಕದಿಮಿಗಿಲಾದ ಸೃಷ್ಟಿ ವಿಸ್ಮಯ ಜೀವಿಗೆ ಬಾಳಲು ನಾವಿಹ ಭೂಮಿಯೆತಾವಿದು ಸಗ್ಗ ನಮಗೆಲ್ಲ.. ಮಾನವ ಶ್ರೇಷ್ಠನು ದಾನವನಾದರೆಕಾನನ ರಾಜ್ಯ ತಪ್ಪದು.. ——– ಗುಣಾಜೆ ರಾಮಚಂದ್ರ ಭಟ್

“ಪೊಡವಿ ಸಗ್ಗ” ಏಳೆ ಕವನ-ಗುಣಾಜೆ ರಾಮಚಂದ್ರ ಭಟ್ Read Post »

ಕಾವ್ಯಯಾನ

“ನೀತಿ ನಿಯಮ” ಹಮೀದ್ ಹಸನ್ ಮಾಡೂರು

ಕಾವ್ಯ ಸಂಗಾತಿ ಹಮೀದ್ ಹಸನ್ ಮಾಡೂರು “ನೀತಿ ನಿಯಮ” ಹಗೆಯ ಸಾಧಿಸ ಬೇಡ,ಜಿದ್ದಿಗೆ ಹೊರಳಾಡ ಬೇಡ,ತಗ್ಗಿ ಮುನ್ನಡೆದರೆ ಜಯವಿದೆ,! ಶತ್ರುತ್ವವೆಂದೂ ಬೇಡ,ಸಂಶಯಕ್ಕೆ ಎಡೆಯು ಬೇಡ,ಅರಿತು ಬಾಳಿದಾಗ ಜಯವಿದೆ,! ಮಿತ್ರತ್ವವೇ ಮುತ್ತಿನ ಹಾರ,ದುಷ್ಟ ಶಕ್ತಿಗಳ ಅದು ಸಂಹಾರ,ಬೆರೆತು ಬಾಳಲು ನಮಗೆ ಜಯವಿದೆ.! ದೇವನೆಂದೂ ಗೊಂದಲವಲ್ಲ,ಧರ್ಮವೆಂದೂ ಕಚ್ಚಾಡಿ ಕೊಳ್ಳಲಲ್ಲ,ನೀತಿ ನಿಯಮ ಪಾಲಿಸಲು ಜಯವಿದೆ.! ಹಮೀದ್ ಹಸನ್ ಮಾಡೂರು.

“ನೀತಿ ನಿಯಮ” ಹಮೀದ್ ಹಸನ್ ಮಾಡೂರು Read Post »

You cannot copy content of this page

Scroll to Top