ಜಯಂತಿ ಕೆ ವೈ ಅವರ ಕವಿತೆ “ಸಾವಿನ ಮನೆ ಸೇರುವ ಸತ್ಯ”
ಕಾವ್ಯ ಸಂಗಾತಿ ಜಯಂತಿ ಕೆ ವೈ “ಸಾವಿನ ಮನೆ ಸೇರುವ ಸತ್ಯ” ಯಾರೂ ಬರೆಯದ ಕತೆಯ ಲೇಖಕಿಯಾಗುವ ಉಮೇದಿನಲಿಅಕ್ಷರಗಳ ಹೆಕ್ಕುವಾಗ ಆಸೆಯೇ ಇಲ್ಲವೆಂದ ಪದಗಳಿಗೆ ಪ್ರಶಸ್ತಿಗಳ ಆಮಿಷವೊಡ್ಡಿದೆ! ಕಾರಣವೇ ಇಲ್ಲದೆ ಕತೆಯಾಗುವಸುಳ್ಳಿನ ಬಲೆಯೊಳಗೆ ಸಿಲುಕುವಬೇಡವೆಂದರೂ ಬೇಕೆನಿಸುವಬಯಕೆ ಬಿಸಿಯ ಕಾವಿಗೆಪದಗಳು ಕರಗಿದವು. ಅದೆಲ್ಲೋ ಕುಳಿತ ಪುಟ್ಟ ಹಕ್ಕಿಯ ಶಿಳ್ಳೆಕೂಗುಎದೆಹಾಡಿಗೆ ಸ್ವರ ಕೂಡಿಸುವ ವೇಳೆಗೆಅಲ್ಲೊಂದು ಕಥಾನಕದ ಅನಾವರಣ ಸುಳ್ಳು ಸತ್ಯವಾಗಿಸತ್ಯ ಸುಳ್ಳಾಗಿ ಹೇಳುವವರ ಬಾಯಲ್ಲಿಹೊರಳಾಡುತ್ತಾ ಹೊರಬಿದ್ದವು ಮಾತಾಗಿದಾಖಲಾದವು ಮಸಿಯಾಗಿ. ಹೇಳಲೇನಿದೆ ಕೇಳಿದವರಿಗೆಲ್ಲಒಂದೇ ಪ್ರಶ್ನೆಉತ್ತರವೇ ಇಲ್ಲದಮಾರುತ್ತರ ಬಯಸದ ಹಾಗೆದಿಕ್ಕೆಡಿಸುವಂತೆ ಪದಗಳ ನದಿ ಹರಿದಂತೆಕತೆಗಾರಳಾಗುವ ಕನಸಿನ ಹಕ್ಕಿ ರೆಕ್ಕೆ ಬಿಚ್ಚಿತ್ತು! ಅಲ್ಲೊಂದು ದಿವ್ಯಮೌನರೆಕ್ಕೆಬಿಚ್ಚಿದ ಕನಸಿನ ಹಕ್ಕಿಗಾಗೇ ಕಾಯುತ್ತಿತ್ತುಮೌನ ಮಾತನಾಡಿತು‘ನ ಬ್ರೂಯಾತ್ ಸತ್ಯಮಪ್ರಿಯಮ್’ಸತ್ಯ ಸಾವಿನಮನೆ ಸೇರಿತುಪದಗಳಾಗುವ ಆಸೆಯೇಇಲ್ಲದ ವರ್ಣಮಾಲೆಯ ಅಕ್ಷರಗಳಲ್ಲಿಮೂಡಿತ್ತು ಮಂದಹಾಸ!! ಜಯಂತಿ ಕೆ ವೈ
ಜಯಂತಿ ಕೆ ವೈ ಅವರ ಕವಿತೆ “ಸಾವಿನ ಮನೆ ಸೇರುವ ಸತ್ಯ” Read Post »









