ಕಾವ್ಯ ಸಂಗಾತಿ
ಮುತ್ತು ಬಳ್ಳಾ ಕಮತಪುರ
ಗಜಲ್

ಹಿಂಸೆ ವಿಜೃಂಭಿಸಿದ ತುಪಾಕಿಗೆ ಶ್ವೇತವಸ್ತ್ರ ಕಾಣಬೇಕಾಗಿದೆ ಈಗ
ಹಾಲಾಹಲವನ್ನೆ ಮಥಿಸಿದರೂ ಅಮೃತವನು ನೀಡಬೇಕಾಗಿದೆ ಈಗ
ಹೊಟ್ಟೆಯ ಉಬ್ಬಸದ ಹುಲು ಮಾನವರಿಗೆ ಅನ್ನಾಹಾರ ಸೇರಿತೇ
ಭಯ ಆತಂಕದಲ್ಲಿ ಇರುಳ ಚಂದಿರನು ವೇದನೆಯಲಿ ಸಾಗಬೇಕಾಗಿದೆ ಈಗ
ಹುಳಿತೇಗಿನ ಮಂದಿಗೆ ಶಾಂತಿಮಂತ್ರ ಪಠಿಸಿದರೆ ಜೀರ್ಣವಾಗದು
ಜೀವ ಬ್ರಹ್ಮಾಂಡಕೆ ಪ್ರೀತಿಯ ಗುಳಿಗೆ ಕೊಡಬೇಕಾಗಿದೆ ಈಗ
ಮನಸುಗಳ ನೋಯಿಸಿದ ಕಾಯಗಳು ಕಣ್ಣೆದುರು ಸಾವಿನ ಕದ ತಟ್ಟಿವೆ
ಪುರದ ದೊರೆ ಶೋಕೀಲಾಲ ಮರಣದ ಸರಣಿ ನೋಡಬೇಕಾಗಿದೆ ಈಗ
ಮುತ್ತಿನ ನಗರದಲಿ ಒಡಲುರಿಸುವ ಕನಸುಗಳಿಗೆ ಗೆಳತಿ ಜಾಗವಿಲ್ಲ
ಮನುಜ ಪ್ರೇಮದ ಮಹಲಿನಲಿ ರಕುತದ ವಾಸನೆ ಅಳಿಸಬೇಕಾಗಿದೆ ಈಗ
ಮುತ್ತು ಬಳ್ಳಾ ಕಮತಪುರ
Super