ಹನಿ ಬಿಂದು ಅವರ ಕವಿತೆ-ಬಾಳು

ಭಾವವೆಲ್ಲ ಸತ್ತ ಮೇಲೆ ಭಾವನೆಗೆಲ್ಲಿ ಜಾಗ
ಮಾನವೆಲ್ಲ ಹೋದ ಮೇಲೆ ಪ್ರಾಣಕ್ಕೆಲ್ಲಿ ವೇಗ
ತ್ರಾಣವೆಲ್ಲ ಬಿಸಿಯಾಗಿ ಬದುಕಲೆಲ್ಲಿ ತ್ಯಾಗ
ಜಾಣ ದದ್ದನಾದ ಮೇಲೆ ಅವನೇನು ಭಾಗ

ಮನದ ನೋವು ಓದಲಿಕ್ಕೆ ಲಿಪಿಯು ಇಹುದೇ ಜಗದಿ
ಕನಸು ನನಸು ಆಗಿದ್ದರೆ ಕಷ್ಟ ಇರದೆ ಭವದಿ
ವಿವಿಧ ವೇಷ ಹೊರಗಡೆಗೆ ಮನದ ಒಳಗೆ ಬೆತ್ತಲೆ
ಬಂದ ದಿನದ ಹೋಗೋ ದಿನದ ನಡುವೆ ನಾಲ್ಕು ಕ್ಷಣಗಳೇ

ಆಚೆ ಈಚೆ ಸುತ್ತಲೂನು ಹಣದ ಆಸೆ ಒಂದಿದೆ
ಧನ ಧಾನ್ಯ ಹೆಣ್ಣು ಹೊನ್ನು ಸರ್ವರಿಗೂ ಬೇಕಾಗಿದೆ
ತಾನು ತನ್ನದು ತನ್ನವರಿಗೆ ಎನುವ ಮಾತು ಮಾತ್ರ
ಹೋಗೋ ದೇಹ ಸಾಧನೆಯ ಮರೆತರೇನು ಸೂತ್ರ….

Leave a Reply

Back To Top