ಗೊರೂರು ಅನಂತರಾಜು ಅವರ ಕವಿತೆ-‘ನಾಲ್ಕು ಮಳೆ ಹನಿಗಳು’

೧. ಮಳೆ ಬರಲೆಂದು
ನಮ್ಮೂರ ಮಂದಿ
ಕಡಿದರು ಮಾರಿಗೆ ನೂರಾರು
ಕುರಿ ಕೋಳಿ ಹಂದಿ
ಹರಿದ ರಕ್ತ ನೋಡಿ
ಸುರಿಸಿದ ಮಳೆರಾಯ
ಕಣ್ಣೀರ ಕೋಡಿ.

೨. ನಮ್ಮೂರ ಕೆರೆಗೆ
ಮಳೆಯ ಹನಿ-
ಗಳು ಸೇರಿ
ತುಂಬಿದ ಒಡಲಲ್ಲಿ
ನವ ಮಾಸಗಳ ಸಿರಿ.!

೩. ಹನಿಮೂನ್
ನನಗೆ ಸಿಹಿಯಲ್ಲ
ಏಕೆಂದರೆ ನಮ್ಮೂರ ಕೆರೆ
ಬಾವಿಯಲ್ಲಿ ಹನಿ ನೀರಿಲ್ಲ
ಅದಕ್ಕೆ ಮಳೆರಾಯ
ಇಳೆಗೆ ಇಳಿಯೋ ಮಹಾರಾಯ

Leave a Reply

Back To Top