ನಾಗರತ್ನ ಎಚ್ ಗಂಗಾವತಿ ಅವರ ಮಕ್ಕಳಪದ್ಯ ‘ನಮ್ಮ ಪರಿಸರ’

ನಮ್ಮ ಪರಿಸರ
ನೋಡಲು ತುಂಬಾ ಸಡಗರ.

ಹಸಿರಿನ ಚಪ್ಪರ
ವನಸಿರಿಯ ಶೃಂಗಾರ.

ಪಕ್ಷಿಗಳ ಇಂಚರ
ಹೂ ಮಾಲೆಗಳ ಸರ.

ಬನ್ನಿ ಎಲ್ಲಾ ಬೆಳೆಸುವ
ಪರಿಸರವ ಉಳಿಸುವ

ನಾಡಿನ ಉಳಿವಿಗಾಗಿ
ಸ್ವಚ್ಛವಾದ ಗಾಳಿಗಾಗಿ.

ಎಲ್ಲರ ಒಂದಾಗಿ
ಪ್ಲಾಸ್ಟಿಕ್ ತ್ಯಜಿಸುವ.

ಆರೋಗ್ಯ ಪರಿಸರವ
ಬೆಳೆಸಲು ಒಟ್ಟಾಗಿ ಸಾಗುವ.

ಹಸಿರೇ ಉಸಿರು ಎಂದು
ದೇಶಕ್ಕೆ ಸಾರುವ. ..,.

Leave a Reply

Back To Top