ಮಾಧುರಿ ದೇಶಪಾಂಡೆ ಕವಿತೆ ಭರವಸೆಯ ಬದುಕು

ಅಂಧಕಾರದ ಕತ್ತಲೆಯ ತೊಳೆವ
ಮಿನುಗುತ ದೀಪ ಹೊಳೆವ
ಮಾಡುತ ಜಗದಿ ಪ್ರಕಾಶವ
ಭರವಸೆಯಿಂದ ಬದುಕುವ

ಆತ್ಮ ವಿಶ್ವಾಸವೆಂಬ ಆಭರಣ
ಧೈರ್ಯ ತುಂಬುವ ಅಂತಃಕರಣ
ಪ್ರತಿಭೆಯ ಪ್ರದರ್ಶಿಸುವ ಅನಾವರಣ
ಭರವಸೆಯ ಜೀವನದ ಪ್ರತಿಫಲನ

ಬದುಕು ಅನಿವಾರ್ಯ ನಿರಂತರ
ಭರವಸೆಯೇ ಜೀವನದ ಆಧಾರ
ಸಾಧನೆಯ ಹಾದಿಯ ಪ್ರಕಾರ
ಗುರಿ ತಲುಪುವ ಮುಟ್ಟುತ ಅಂಬರ

ನೆನಸಿಟ್ಟ ಉದ್ದಿನ ಬೇಳೆ ಉಪಯೋಗಕ್ಕೆ
ಮುಂಜಾನೆ ಎದ್ದರೆ ಇಡ್ಲಿ ಉಪಹಾರಕ್ಕೆ
ಇರದೇ ಹೋದರೆ ಉದ್ದಿನ ವಡೆ ಶ್ರಾದ್ಧಕ್ಕೆ
ಆದರೂ ಬದುಕುವೆ ಎಂಬುವ ಭರವಸೆ ಜೀವಕ್ಕೆ


Leave a Reply

Back To Top