ಸುಲೋಚನಾ ಮಾಲಿಪಾಟೀಲ ಕವಿತೆ-ಹಸಿದೊಡಲು

ಬರಗಾಲದ ಛಾಯೆ
ಹೊತ್ತಿ ಉರಿಯಲು
ಮಾಂಸವಿಲ್ಲದ ಮೂಳೆಗಳ
ಶರೀರವೇ ಭೂ ಹಂದರ
ಬಾಯಿ ತೆರೆಯುತಿರಲು
ಹಸಿದೊಡಲ ಬತ್ತಿಸಲು
ನಿಸ್ಸೋತು ಕೈಮುಗಿವ
ಜೀವ ಸಂಕುಲಕೆ
ಯಾರು ಹೊಣೆ ಹೇಳು?

ಮನುಜನಲ್ಲಿರದ ಮನುಷ್ಯತ್ವ
ಹೊಂಚು ಹಾಕಿದ ಬದುಕು
ನಡೆವ ಮೂರ್ಖರಿರುವರೆಗೆ
ಲೆಕ್ಕಕ್ಕಿಲ್ಲದ ಬಿಡಾರದಲಿ
ಅನುಭವಿಸುವ ನೋವು
ದುಸ್ಸಾಹಸಕ್ಕೆ ನಿಲ್ಲದ
ಹಸಿದೊಡಲಿಗೆ ಮರಗುತ್ತ
ಕಂಬನಿಯು ಕರಗಿಹುದಿಲ್ಲಿ
ಮೊಡಗಳ ಆಸರೆಗಲ್ಲವೇ?


Leave a Reply

Back To Top