ಎ.ಎನ್.ರಮೇಶ್. ಗುಬ್ಬಿಕವಿತೆ-ಅನೂಹ್ಯ..!

ಜಗದ ಬಟಾಬಯಲೊಳಗೆ
ಮಾಯೆಯ ಇರುಳೊಳಗೆ
ಅರಿವಿನ ಅಂಬರದೊಳಗಿನ
ಅನುಭಾವ ನಕ್ಷತ್ರಗಳೆಣಿಸುತ..

ಕಾಣದ ಗುರಿಯೆಡೆಗೆ
ಬದುಕಿನ ಗಮ್ಯದೆಡೆಗೆ
ನಡೆದಿಹನು ಜೀವವೆಂಬ
ಅಙ್ನಾತ ದಾರಿಹೋಕ.!

ಕಂಡರಿಯದ ಹಾದಿ
ನಂಬಿಕೆಯೇ ಕೌದಿ
ಭರವಸೆಯೇ ಲಾಂದ್ರ
ಭಾವಗಳ ಸಾಂದ್ರ.!

ಆಧ್ಯಾತ್ಮಕೂ ದಕ್ಕದ
ವಿಙ್ನಾನಕೂ ಸಿಕ್ಕದ
ಜೀವನ್ಮರಣ ಹೂರಣ.!
ಜೀವಚೈತನ್ಯದ ಪಯಣ.!!


Leave a Reply

Back To Top