ಜಯಶ್ರೀ ಎಸ್ ಪಾಟೀಲ ಕವಿತೆ-“ನಗೆ ಸಂಕ್ರಾಂತಿ”

ಮತ್ತೆ ಬಂದಿದೆ ನಗೆಯ ಸಂಕ್ರಾಂತಿ
ಮನೆ ಮನದಲಿ ಹರುಷದ ಕಾಂತಿ
ತಂದಿದೆ ಆನಂದ ನೆಮ್ಮದಿ ಶಾಂತಿ
ಎಲ್ಲರಲಿ ಉಕ್ಕಿದೆ ಉತ್ಸಾಹ ಪ್ರೀತಿ

ರವಿಯ ಕಿರಣಕೆ ಅರಳಿದೆ ಹೂಬನ
ನವ ಕಳೆಯಲಿ ನಿಸರ್ಗದ ನರ್ತನ
ವರ್ಷದ ಸುಗ್ಗಿಯ ಕಾಲದ ಆಗಮನ
ರೈತರ ಮೊಗದಲಿ ಸಂತಸದ ತನನ

ಬಾನೆತ್ತರದಿ ಗಾಳಿಪಟಗಳ ಹಾರಾಟ
ಮಕ್ಕಳಿಗೆ ಮನ ತಣಿಸುವ ಚೆಂದಾಟ
ಹಸು ಎತ್ತುಗಳಿಗೆ ಅಂದದ ಸಿಂಗಾರ
ಕಿಚ್ಚು ಹಾಯಿಸುತ ಸಂತಸ ಸಡಗರ

ನಗು ನಗುತಲಿ ಸಿಹಿ ಮಾತನಾಡುತ
ಎಳ್ಳು ಬೆಲ್ಲವ ವಿನಿಮಯಗೊಳ್ಳುತ
ಹೊಸ ಸಂಬಂಧಗಳನು ಬೆಸೆಯುತ
ಬದುಕು ಚೆಂದ ಕಹಿಯ ಮರೆಯುತ

ಸಂಭ್ರಮದ ನಗೆಯ ಸಂಕ್ರಾಂತಿಯು
ಶುಭವನು ತರಲಿ ಎಲ್ಲರ ಬಾಳಿನಲಿ
ಸಂತೃಪ್ತಿ ಸಂತೋಷ ಸಮೃದ್ಧಿಯು
ನಿರಂತರವಾಗಿ ವೃದ್ಧಿಸಲಿ ನಾಡಿನಲಿ


One thought on “ಜಯಶ್ರೀ ಎಸ್ ಪಾಟೀಲ ಕವಿತೆ-“ನಗೆ ಸಂಕ್ರಾಂತಿ”

  1. ಅಂದದ ಕವಿತೆ
    ಚೆಂದದ ಪಟ
    ಸಂಕ್ರಾಂತಿಯ ಶುಭಾಶಯ
    ಉತ್ತಮ ಯಲಿಗಾರ
    9448010055

Leave a Reply

Back To Top