ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಎದೆಯೊಳಗೆ
ಬಲಿತ ಭಾವಗಳು
ಚಿಗುರೊಡೆದು !

ಮನಸೊಳಗೆ
ಇಳಿದು ಹದವಾಗಿ
ಕುಣಿ ಕುಣಿದು,!

ಬಿರುನುಡಿಯ
ಬಿರುಗಾಳಿಗೆ ಸೋಕಿ
ಮೌನ ತಳೆದು,!

ಬೆವರನಿಯ
ಯುಕ್ತಿಯಲಿ ಹೊಸತು
ಬರಸೆಳೆದು ,!

ಹೆಪ್ಪಾದ ಮಾತು
ಕಡೆದ ಬೆಣ್ಣೆಯಂತೆ
ಮೃದು ತಳೆದು,!

ಅನುಭೂತಿಯ
ಗಾಢ ಮಳೆ ಸುರಿದು
ಪ್ರೀತಿಯುಲಿದು,!

ಜಗದಿ ಶಾಂತಿ
ಸಹನೆ,ಸಮೃದ್ಧಿಯು
ಟೀಸಿಲೊಡೆದು,!

ಭಾವೈಕ್ಯತೆಯ
ಬಣ್ಣಗಳು ಬೆರೆತು
ವಿಶ್ವ ನಲಿದು,!

ಸಂತೃಪ್ತ ಭಾವ
ಎದೆಯಲಿ ಇಳಿವ
ಭಾವ ಸೆಳೆದು,!


About The Author

1 thought on “ಕಾಡಜ್ಜಿ ಮಂಜುನಾಥ ಅವರ ಕವಿತೆ-ಕನಸು”

Leave a Reply

You cannot copy content of this page

Scroll to Top