ಕಾಡಜ್ಜಿ ಮಂಜುನಾಥ ಅವರ ಕವಿತೆ-ಕನಸು

ಎದೆಯೊಳಗೆ
ಬಲಿತ ಭಾವಗಳು
ಚಿಗುರೊಡೆದು !

ಮನಸೊಳಗೆ
ಇಳಿದು ಹದವಾಗಿ
ಕುಣಿ ಕುಣಿದು,!

ಬಿರುನುಡಿಯ
ಬಿರುಗಾಳಿಗೆ ಸೋಕಿ
ಮೌನ ತಳೆದು,!

ಬೆವರನಿಯ
ಯುಕ್ತಿಯಲಿ ಹೊಸತು
ಬರಸೆಳೆದು ,!

ಹೆಪ್ಪಾದ ಮಾತು
ಕಡೆದ ಬೆಣ್ಣೆಯಂತೆ
ಮೃದು ತಳೆದು,!

ಅನುಭೂತಿಯ
ಗಾಢ ಮಳೆ ಸುರಿದು
ಪ್ರೀತಿಯುಲಿದು,!

ಜಗದಿ ಶಾಂತಿ
ಸಹನೆ,ಸಮೃದ್ಧಿಯು
ಟೀಸಿಲೊಡೆದು,!

ಭಾವೈಕ್ಯತೆಯ
ಬಣ್ಣಗಳು ಬೆರೆತು
ವಿಶ್ವ ನಲಿದು,!

ಸಂತೃಪ್ತ ಭಾವ
ಎದೆಯಲಿ ಇಳಿವ
ಭಾವ ಸೆಳೆದು,!


One thought on “ಕಾಡಜ್ಜಿ ಮಂಜುನಾಥ ಅವರ ಕವಿತೆ-ಕನಸು

Leave a Reply

Back To Top