ಪ್ರಭಾವತಿ ಎಸ್ ದೇಸಾಯಿ-ಗಜಲ್

ಗಜಲ್ ೧(ಮಾತ್ರೆ ೨೧)

ನಯನಗಳು ಸಂದಿಸಲು ಒಲವಿನಾಸರೆ ಬಯಸಿದೆ
ಬಿಸಿಲ ಬೇಗೆ ಕಳೆಯಲು ನೆರಳಿನಾಸರೆ ಬಯಸಿದೆ

ಹಿತ್ತಲು ನೆಟ್ಟ ಬಳ್ಳಿಯು ಮುದುಡಿ ನೆಲವ ಕಚ್ಚಿದೆ
ಬಾಳ ಲತೆಯು ಚಿಗುರಲು ಬಿದಿರಿನಾಸರೆ ಬಯಸಿದೆ

ಕಟ್ಟಿದ ಮೋಡ ಗಾಳಿಯ ಚುಂಬನಕೆ ಕಾಯುತಿದೆ
ಕನಸು ಹೆಣೆಯಲು ಶಶಿಯ ತಂಪಿನಾಸರೆ ಬಯಸಿದೆ

ಮರಳುಗಾಡಿನ ಪಯಣ ಗುರಿಕಾಣದೆ ನೊಂದಿರುವೆ
ಮನ ಭಯವ ಮರೆಯಲು ಬಾಹುವಿನಾಸರೆ ಬಯಸಿದೆ

ಅನುರಾಗದ ಮಳೆ.ಯಿಲ್ಲದೆ ಪ್ರಭೆ ಎದೆ ಒಣಗಿದೆ
ಜೀವ ನದಿ ಮಿಲನಿಸಲು ಇರುಳಿನಾಸರೆ ಬಯಸಿದೆ


Leave a Reply

Back To Top