ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಜಲ್ ೧(ಮಾತ್ರೆ ೨೧)

ನಯನಗಳು ಸಂದಿಸಲು ಒಲವಿನಾಸರೆ ಬಯಸಿದೆ
ಬಿಸಿಲ ಬೇಗೆ ಕಳೆಯಲು ನೆರಳಿನಾಸರೆ ಬಯಸಿದೆ

ಹಿತ್ತಲು ನೆಟ್ಟ ಬಳ್ಳಿಯು ಮುದುಡಿ ನೆಲವ ಕಚ್ಚಿದೆ
ಬಾಳ ಲತೆಯು ಚಿಗುರಲು ಬಿದಿರಿನಾಸರೆ ಬಯಸಿದೆ

ಕಟ್ಟಿದ ಮೋಡ ಗಾಳಿಯ ಚುಂಬನಕೆ ಕಾಯುತಿದೆ
ಕನಸು ಹೆಣೆಯಲು ಶಶಿಯ ತಂಪಿನಾಸರೆ ಬಯಸಿದೆ

ಮರಳುಗಾಡಿನ ಪಯಣ ಗುರಿಕಾಣದೆ ನೊಂದಿರುವೆ
ಮನ ಭಯವ ಮರೆಯಲು ಬಾಹುವಿನಾಸರೆ ಬಯಸಿದೆ

ಅನುರಾಗದ ಮಳೆ.ಯಿಲ್ಲದೆ ಪ್ರಭೆ ಎದೆ ಒಣಗಿದೆ
ಜೀವ ನದಿ ಮಿಲನಿಸಲು ಇರುಳಿನಾಸರೆ ಬಯಸಿದೆ


About The Author

Leave a Reply

You cannot copy content of this page

Scroll to Top