ಕಾವ್ಯ ಸಂಗಾತಿ
ತೀರವಿರದ ಕಡಲು
ಅರುಣಾ ನರೇಂದ್ರ
ಕಾವ್ಯ ಸ್ಪಂದನ
ಕಣ್ಣೀರ ಕೋಡಿಯ ಲೆಕ್ಕ
ಕರವಸ್ತ್ರ ಬರೆದಿಡುತ್ತದೆ
ಒಡಲಾಳದ ನೋವಿನ ಲೆಕ್ಕ
ನಿಟ್ಟುಸಿರು ಬರೆದಿಡುತ್ತದೆ
***
ಹೃದಯಕ್ಕೆ ಹೃದಯ ಸ್ಪಂದಿಸಿದರೆ
ಲೋಕ ನಾಕವಾಗುತ್ತದೆ
ಮನಕೆ ಮನ ಮಿಡಿದರೆ
ಮಾತು ಮೌನವಾಗುತ್ತದೆ
**
ಬಾಳ ದಾರಿಯಲಿ
ನಾ ಒಂಟಿಯಾಗಿ ಅಳುವಾಗ
ಬಾನ ಚಂದ್ರ ತಾ
ಜೊತೆಯಾಗುವೆನೆಂದ
**
ನನ್ನ ಕಾವ್ಯ
ನಿನ್ನ ನಗುವಿನಲ್ಲಿ ಹುಟ್ಟಿ
ಚೆಂದುಟಿಯಲ್ಲಿ ಮಿಂದು
ಹೃದಯದಾಳದಲ್ಲಿ ಸೇರಿಕೊಳ್ಳುತ್ತದೆ
ಅರುಣಾ ನರೇಂದ್ರ
ತುಂಬ ಸಾರ್ಥಕ ಚಿಟುಕುಗಳು