ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ತೀರವಿರದ ಕಡಲು

ಅರುಣಾ ನರೇಂದ್ರ

ಕಾವ್ಯ ಸ್ಪಂದನ

ಕಣ್ಣೀರ ಕೋಡಿಯ ಲೆಕ್ಕ
ಕರವಸ್ತ್ರ ಬರೆದಿಡುತ್ತದೆ
ಒಡಲಾಳದ ನೋವಿನ ಲೆಕ್ಕ
ನಿಟ್ಟುಸಿರು ಬರೆದಿಡುತ್ತದೆ
***

ಹೃದಯಕ್ಕೆ ಹೃದಯ ಸ್ಪಂದಿಸಿದರೆ
ಲೋಕ ನಾಕವಾಗುತ್ತದೆ
ಮನಕೆ ಮನ ಮಿಡಿದರೆ
ಮಾತು ಮೌನವಾಗುತ್ತದೆ
**

ಬಾಳ ದಾರಿಯಲಿ
ನಾ ಒಂಟಿಯಾಗಿ ಅಳುವಾಗ
ಬಾನ ಚಂದ್ರ ತಾ
ಜೊತೆಯಾಗುವೆನೆಂದ
**

ನನ್ನ ಕಾವ್ಯ
ನಿನ್ನ ನಗುವಿನಲ್ಲಿ ಹುಟ್ಟಿ
ಚೆಂದುಟಿಯಲ್ಲಿ ಮಿಂದು
ಹೃದಯದಾಳದಲ್ಲಿ ಸೇರಿಕೊಳ್ಳುತ್ತದೆ


ಅರುಣಾ ನರೇಂದ್ರ

About The Author

1 thought on “”

Leave a Reply

You cannot copy content of this page

Scroll to Top