ದಾಕ್ಷಾಯಣಿ ಅವರ ಭಾವಗೀತೆ-ತಂಗಾಳಿಯಾಗಿ ಬಾ

 ಮಾಸಿಹೋದ ಕನಸುಗಳಿಗೆ
 ಮಳೆ ಹನಿಯಾಗಿ ಬಂದು
 ಮನದ ಕದ ತೆರೆಸಿದವನು

 ಮೌನದಿ ಮನೆ ಮಾಡಿದ
 ನನ್ನ ಮನಸ್ಸನ್ನ ಮುಗಿಲಾಚೆಗೆ
 ಕೊಂಡ ಇದು ಮುಗಿಲಿಗೆ
 ದಿಗಿಲು ತರಿಸಿದವನು

 ಮೀಸಲಾದ ನನ್ನ ಹೃದಯಕ್ಕೆ
 ಬೀಸಿ ಬರುವ ತಂಗಾಳಿಯಾಗಿ
 ಬಂದು ತಂಪ ನೆರೆದು
 ಬೆರೆತು ನಿಂತವನು

 ನಗೆಯ ಮರೆತ ತುಟಿಗಳಿಗೆ
 ನಗುವಿನ ಪುನರುಚಿಯ ಅಡುಗೆ ಮಾಡಿ ಬಡಿಸಿ ನಗೆಗಡಲಲ್ಲಿ
 ತೇಲುವಂತೆ ಮಾಡಿದವನು


Leave a Reply