ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಲೋಕದ ನಗು

ಬಿ.ಶ್ರೀನಿವಾಸ್

ಬಾಪೂವಿನ ನಗು
ಬಾಬಾನ ಗಂಭೀರ ವದನ
ನೀವು ಕೇಳುವಿರಿ ಯಾಕೆ ಹೀಗೆ? ಎಂದು

ಬಾಲರಾಮ,
ಬಾಲಕೃಷ್ಣರೂ ಹಸನ್ಮುಖಿ
ಬಾಪೂ ಒಳಗೆ

ಒಡೆದ ಪಾದಗಳ ಬಿರುಕಿನಲಿ
ಇಣುಕಿ ನೋಡುತ್ತಿದೆ ದಿಲ್ಲಿ
ಹೊರಗೆ ನಿಂತ ಜನರ ನೋವು ಬಾಬಾನ ಎದೆಯೊಳಗೆ

Colonel R Hariharan: Remembering Gandhiji in critical times - Rediff.com  India News

ಗೀತ-ಸಂಗೀತ
ಮಧ್ಯೆ
ಮೂಡಿದಾಗ ಅಪರೂಪದ ಸತ್ಯ ಸ್ವರ,
ಜಾರಿ ಬಿದ್ದಿರಬಹುದು
ಬಾಬಾನ ಮುಗುಳ್ನಗೆ

ಕಳೆದು ಹೋದ ಬುದ್ಧನ ನಗು
ಹುಡುಕುತ್ತ ಪಯಣಿಸಿದವನಿಗೆ
ನಗಲು ಸಮಯವಾದರೂ ಎಲ್ಲಿ?

ಎರಡು ಹೆಜ್ಜೆ ಬಾಪೂವಿನೊಂದಿಗೆ
ನಾಲ್ಕು ಹೆಜ್ಜೆ
ಬಾಬಾನೊಂದಿಗೆ
ನಡೆದರೆ
ಸಿಕ್ಕೇ ಸಿಗುವುದು
ಬುದ್ಧನ ನಗು
ಲೋಕವು ಮರಳೀತು ಮಣ್ಣಿಗೆ.


About The Author

4 thoughts on “”

  1. Anusuya Yathish

    ವಾಹ್ ನಿಜಕ್ಕೂ ತುಂಬ ಅರ್ಥಪೂರ್ಣ
    ಕವಿತೆ ಸರ್. ಅಭಿನಂದನೆಗಳು .

  2. “ಎರಡು ಹೆಜ್ಜೆ ಬಾಪುವಿನೊಂದಿಗೆ
    ನಾಲ್ಕು ಹೆಜ್ಜೆ ಬಾಬಾನೊಂದಿಗೆ” – ಭಾರತದ ಭವಿಷ್ಯದೆಡೆಗಿನ ಚಲನೆಯ ಅರ್ಥಪೂರ್ಣ ನಿರೂಪಣೆ. ‘ಪಥಕ್ರಮ’ದ ತಾತ್ವಿಕ ಸೂತ್ರವಾಕ್ಯ.
    ಈ ಒಂದು ಮಾತಿನ ಮೂಲಕ ಬಹುದೊಡ್ಡ ಸೈದ್ಧಾಂತಿಕತೆಯನ್ನು ಮಂಡಿಸಿರುವಿರಿ. ನಿಜಕ್ಕೂ Visionary lines.

    ಬಿ.ಪೀರ್ ಬಾಷಾ

Leave a Reply

You cannot copy content of this page

Scroll to Top