ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

“ಪ್ರವಾಸಿ ತಾಣಗಳು ಸಂಸ್ಕೃತಿಯ ಪ್ರತಿಬಿಂಬ ಗೊರೂರು ಅನಂತರಾಜು ಪ್ರವಾಸ ಕಥನ” ಕೆ ಎನ್ ಚಿದಾನಂದ

ಪುಸ್ತಕಸಂಗಾತಿ ಕೆ ಎನ್ ಚಿದಾನಂದ “ಪ್ರವಾಸಿ ತಾಣಗಳು ಸಂಸ್ಕೃತಿಯ ಪ್ರತಿಬಿಂಬ ಗೊರೂರು ಅನಂತರಾಜು ಪ್ರವಾಸ ಕಥನ” ಇತಿಹಾಸವು ಆಧಾರಗಳಿಂದಲೇ ಸೃಷ್ಟಿಯಾಗಿದೆ. ಆಧಾರಗಳಿಲ್ಲದೆ ಇತಿಹಾಸವಿಲ್ಲ. ಒಂದು ಸ್ಥಳದಲ್ಲಿ ದೊರೆತ ಸಾಹಿತ್ಯ, ನಾಣ್ಯ, ಶಾಸನ, ಸ್ಮಾರಕ, ದೇವಾಲಯ, ಮುಂತಾದವುಗಳು ತನ್ನದೇ ಚರಿತ್ರೆಯನ್ನು ಜಗತ್ತಿಗೆ ಸಾರುತ್ತವೆ. ಕಾಲ ಎಲ್ಲವನ್ನು ಮೆರೆಸುತ್ತದೆ ಮತ್ತು ಎಲ್ಲವನ್ನು ಮರೆಸುತ್ತದೆ. ಆದರೆ ಅಲ್ಲಿ ಉಳಿಯುವ ಸಾಕ್ಷಿಗಳು ಮತ್ತೆ ಮತ್ತೆ ನೆನಪುಗಳನ್ನು ಮರುಕಳಿಸುತ್ತದೆ. ಕಾಲದ ಹೆಜ್ಜೆ ಗುರುತುಗಳನ್ನು ಹುಡುಕುವುದು ಎಂದರೆ ಒಂದು ಅನ್ವೇಷಣೆಯೇ ಸರಿ. ​”ದೇಶ ಸುತ್ತು ಕೋಶ ಓದು” ಎಂಬ ಜನಜನಿತವಾದ ಗಾದೆ ಮಾತು ಕೇವಲ ಜ್ಞಾನಾರ್ಜನೆಯ ಮಾರ್ಗವಲ್ಲ; ಅದು ಮನುಷ್ಯನ ಅಸ್ತಿತ್ವದ ವಿಸ್ತರಣೆಯ ಸಂಕೇತವೂ ಹೌದು. ಇಡೀ ಪ್ರಪಂಚವನ್ನು ಒಂದು ಮಹತ್ತರವಾದ ಗ್ರಂಥವೆಂದು ಭಾವಿಸುವುವಾದರೆ, ಪ್ರೇಕ್ಷಣೀಯ ಸ್ಥಳಗಳು ಆ ಗ್ರಂಥದ ಒಂದೊಂದು ಅಮೂಲ್ಯವಾದ ಅಧ್ಯಾಯಗಳು ಎನ್ನಬಹುದು. ನಾಗರಿಕತೆಯ ಆರಂಭದಿಂದ ಇಂದಿನ ಆಧುನಿಕ ಯುಗದವರೆಗೆ, ಮನುಷ್ಯ ಹೊಸತನ್ನು ಹುಡುಕುತ್ತಾ, ಪ್ರಕೃತಿಯ ಸೊಬಗನ್ನು ಆರಾಧಿಸುತ್ತಾ ಮತ್ತು ಪೂರ್ವಜರು ಬಿಟ್ಟು ಹೋದ ಸ್ಮಾರಕಗಳ ಮೌನ ಸಂಭಾಷಣೆಯನ್ನು ಆಲಿಸುತ್ತಾ ಸಾಗಿದ್ದಾನೆ. ​ಪ್ರವಾಸವೆಂಬುದು ಹೊಸ ಚೇತನವನ್ನು ತುಂಬುವ ಪಯಣವಾಗಿದೆ. ​ಪ್ರವಾಸವೆಂದರೆ ಕೇವಲ ಒಂದು ಭೌಗೋಳಿಕ ಬಿಂದುವಿನಿಂದ ಮತ್ತೊಂದು ಬಿಂದುವಿಗೆ ಚಲಿಸುವುದಲ್ಲ. ಅದು ನಮ್ಮೊಳಗಿನ ಸಂಕುಚಿತ ಭಾವನೆಗಳನ್ನು ಕಿತ್ತೆಸೆದು, ವಿಶಾಲವಾದ ವಿಶ್ವದೊಂದಿಗೆ ಮೇಳೈಸುವ ಪ್ರಕ್ರಿಯೆಯಾಗಿದೆ. ಒಂದು ಕಲ್ಲಿನ ಕೆತ್ತನೆಯಲ್ಲಿ ಅಡಗಿರುವ ಶಿಲ್ಪಿಯ ಶ್ರಮ, ಗೋಪುರದ ಭವ್ಯತೆ ಅಥವಾ ಪ್ರಕೃತಿಯ ಮಡಿಲಲ್ಲಿ ಹರಿಯುವ ಜಲಪಾತದ ನಿನಾದ ಇವೆಲ್ಲವೂ ನಮಗೆ ಬದುಕಿನ ಅರ್ಥವನ್ನು ಹೊಸದಾಗಿ ಕಲಿಸಿಕೊಡುತ್ತವೆ. ನನ್ನ ಹಿತೈಷಿ  ಸ್ನೇಹಿತರಾದ ಗೊರೂರು ಅನಂತರಾಜು ಅವರು ಹೆಸರೇ ಹೇಳುವಂತೆ ಗೊರೂರಿನವರು. ಇವರ ಬರಹದ ಹವ್ಯಾಸ ನಿಲ್ಲದ ಪಯಣವಾಗಿದೆ. ತನಗೆ ಗೊತ್ತಿರುವ ವಿಷಯದೊಂದಿಗೆ ಮತ್ತಷ್ಟು ಅಧ್ಯಯನ, ವಿಷಯ ಸಂಗ್ರಹದ ಮೂಲಕ ಲೇಖನಗಳನ್ನು ಪ್ರಕಟಿಸುತ್ತಿರುವ ಇವರು ಅವೆಲ್ಲವನ್ನು ಒಟ್ಟಾಗಿಸಿ ಓದುಗರಿಗೆ ಒಂದೆಡೆ ಸಿಗುವಂತೆ ಮಾಡಿರುವ ಈ ಪ್ರಯತ್ನ ನಿಜಕ್ಕೂ ಶ್ಲಾಘನೀಯವಾದುದು. ಗೊರೂರು ಅನಂತರಾಜುರವರು ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುವ ಮೂಲಕ ಸುಮ್ಮನಾಗಲಿಲ್ಲ : ಬದಲಾಗಿ ಆ ಸ್ಥಳದ ಕುರಿತು ಮಾಹಿತಿ ಸಂಗ್ರಹಿಸಿ ಓದುಗ ಬಳಗಕ್ಕೆ ಉಣಬಡಿಸಿದ್ದಾರೆ. ಎಡತೊರೆ ಎನಿಸಿದ ಕಾವೇರಿ ನದಿಯ ತಟದಲ್ಲಿ ನಿರ್ಮಾಣಗೊಂಡಿರುವ ಅರ್ಕೇಶ್ವರ ದೇವಾಲಯ ಕುರಿತ ಮಾಹಿತಿ ನೀಡಿದ್ದಾರೆ. ಮೂಗೂರಿನ ತ್ರಿಪುರ ಸುಂದರಿ ದೇವಾಲಯದ ಕುರಿತ ಮಾಹಿತಿ ವಿಚಾರ ಪೂರ್ಣವಾಗಿದೆ. ತಲಕಾಡಿನಲ್ಲಿ ಪಂಚಲಿಂಗ ದರ್ಶನದ ಬಗೆಗೆ ನೀಡಿರುವ ಮಾಹಿತಿ, ಅಲಮೇಲಮ್ಮನ ವಿಚಾರ, ಕಾವೇರಿ ತಟದಲ್ಲಿನ ಮರಳರಾಶಿ, ಗಂಗ ಇತಿಹಾಸದ ಬಗ್ಗೆ ಬೆಳಕು ಚೆಲ್ಲಿರುವರು. ಬಿಳಿಗಿರಿರಂಗನ ಬೆಟ್ಟದಲ್ಲಿ ನೆಲೆಸಿರುವ ರಂಗನಾಥ ಸ್ವಾಮಿಯ ದೇವಾಲಯದ ಕುರಿತು ನೀಡಿರುವ ಮಾಹಿತಿ ಓದುಗರಿಗೆ ಅತ್ಯುಪಯುಕ್ತವಾಗಿದೆ. ಬೆಲಗೂರಿನ ಹಾಲು ರಾಮೇಶ್ವರ ದೇವಾಲಯದ ಐತಿಹ್ಯವನ್ನು ತಿಳಿಯುುತ್ತಾ ಓದು ಮುಂದುವರಿದಾಗ ಅನಂತರಾಜುರವರ ಹುಟ್ಟೂರಾದ ಗೊರೂರಿನ ತ್ರಿಕೂಟಲಿಂಗೇಶ್ವರ ದೇವಾಲಯ ಮಾಹಿತಿ ದೊರಕುತ್ತದೆ. ಪ್ರವಾಸಿ ತಾಣಗಳ ಕುರಿತು ತಿಳಿಯುವ ನಮ್ಮ ಓದುವ ಪಯಣ, ಗೊರೂರಿನ ರಥಚಕ್ರಗಳ ಕುರಿತಂತೆ ತಿಳಿಸುತ್ತದೆ. ಚುಂಚನಕಟ್ಟೆಯ ಕೋದಂಡರಾಮನ ದೇವಾಲಯದ ವಿಚಾರವನ್ನು ಲೇಖಕರಾದ ಗೊರೂರು ಅನಂತರಾಜು ರವರು ತುಂಬಾ ಚೆನ್ನಾಗಿ ಓದುಗರಿಗೆ ಕಟ್ಟಿಕೊಟ್ಟಿದ್ದಾರೆ. ಈ ಪ್ರವಾಸ ಕಥನ ಕೇವಲ ಕರ್ನಾಟಕದ ಸ್ಥಳಗಳನ್ನು ಮಾತ್ರವಲ್ಲದೇ ತಮಿಳುನಾಡಿನ ಕುಂಭಕೋಣಂನ ನವಗ್ರಹ ದೇವಾಲಯಗಳವರೆಗೂ ಕರೆದೊಯ್ಯುತ್ತದೆ. ​ಒಟ್ಟಿನಲ್ಲಿ ಈ ಕೃತಿಯ ಆಶಯವೇನೆಂದರೆ, ಈ ಕೃತಿಯು ಕೇವಲ ಪ್ರವಾಸಿ ತಾಣಗಳ ಪಟ್ಟಿಯಲ್ಲ; ಇದು ಇತಿಹಾಸ ಮತ್ತು ವರ್ತಮಾನದ ನಡುವಿನ ಸೇತುವೆ. ನಮ್ಮ ನಾಡಿನ ಅಪ್ರತಿಮ ವಾಸ್ತುಶಿಲ್ಪ, ಪ್ರಕೃತಿಯ ಅಚ್ಚರಿಗಳು ಮತ್ತು ಧಾರ್ಮಿಕ ಕೇಂದ್ರಗಳ ಹಿಂದಿರುವ ತಾತ್ವಿಕ ಹಿನ್ನೆಲೆಯನ್ನು ಓದುಗರಿಗೆ ಮನದಟ್ಟು ಮಾಡುವ ಪ್ರಯತ್ನ ಇಲ್ಲಿ ನಡೆದಿದೆ. ಪ್ರತಿಯೊಂದು ಸ್ಥಳಕ್ಕೂ ತನ್ನದೇ ಆದ ಕಥೆಯಿದೆ, ತನ್ನದೇ ಆದ ನೋವು-ನಲಿವುಗಳಿವೆ. ಆ ಸ್ಥಳಗಳ ಮೌನದಲ್ಲಿ ಅಡಗಿರುವ ಇತಿಹಾಸದ ಚೀತ್ಕಾರವನ್ನು ಅಥವಾ ಶಾಂತಿಯನ್ನು ಗುರುತಿಸುವ ದೃಷ್ಟಿಕೋನವನ್ನು ಈ ಬರಹಗಳು ನೀಡುತ್ತವೆ. ಪ್ರವಾಸೀ ತಾಣಗಳು ಸಂಸ್ಕೃತಿಯ ಪ್ರತಿಬಿಂಬವಾಗಿವೆ.​ಒಂದು ಪ್ರೇಕ್ಷಣೀಯ ಸ್ಥಳವು ಒಂದು ಜನಾಂಗದ ಸಂಸ್ಕೃತಿ ಮತ್ತು ಕಲಾಪ್ರೌಢಿಮೆಯ ಕೈಗನ್ನಡಿಯಾಗಿರುತ್ತದೆ. ಹಳೇಬೀಡು-ಬೇಲೂರಿನ ಶಿಲ್ಪಕಲೆಗಳು ಕೇವಲ ಕಲ್ಲುಗಳಲ್ಲ, ಅವು ಅಂದಿನ ಕಾಲದ ಜನರ ಸೌಂದರ್ಯ ಪ್ರಜ್ಞೆಯ ಸಾಕಾರ ರೂಪಗಳು. ಹಾಗೆಯೇ, ಪಶ್ಚಿಮ ಘಟ್ಟಗಳ ಹಸಿರು ಕೇವಲ ಅರಣ್ಯವಲ್ಲ, ಅದು ನಮ್ಮ ಜೀವಸಂಕುಲದ ಅಸ್ತಿತ್ವದ ಮೂಲ. ಇವುಗಳನ್ನು ರಕ್ಷಿಸುವುದು ಮತ್ತು ಮುಂದಿನ ಪೀಳಿಗೆಗೆ ದಾಟಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಈ ಹೊತ್ತಿಗೆಯು ಆ ಜವಾಬ್ದಾರಿಯನ್ನು ಪ್ರತಿಯೊಬ್ಬ ಓದುಗನಲ್ಲೂ ಜಾಗೃತಗೊಳಿಸುತ್ತದೆ ಎಂಬ ನಂಬಿಕೆ ನನಗಿದೆ.​ಪ್ರವಾಸವು ಮನುಷ್ಯನನ್ನು ವಿನಮ್ರನನ್ನಾಗಿ ಮಾಡುತ್ತದೆ. ಜಗತ್ತು ಎಷ್ಟು ವಿಶಾಲವಾಗಿದೆ ಮತ್ತು ಅದರ ಮುಂದೆ ತಾನು ಎಷ್ಟು ಸಣ್ಣವನು ಎಂಬ ಸತ್ಯದ ದರ್ಶನ ಪ್ರವಾಸಿಗನಿಗಾಗುತ್ತದೆ. ಈ ಕೃತಿಯ ಪುಟಗಳನ್ನು ತಿರುವಿದಾಗ ಓದುಗರು ಕೇವಲ ಮಾಹಿತಿಯನ್ನು ಪಡೆಯದೆ, ಆಯಾ ಸ್ಥಳಗಳ ಅನುಭೂತಿಯನ್ನು ಪಡೆಯಲಿ ಎಂಬುದು ನನ್ನ ಆಶಯ. ಆಗ ಮಾತ್ರ ಗೊರೂರು ಅನಂತರಾಜುರವರು ಹೊರತರುತ್ತಿರುವ ಈ ಕೃತಿಯ ಉದ್ದೇಶ ಸಾಧಿತವಾದಂತೆ. ಕಾಲದ ಪ್ರವಾಹದಲ್ಲಿ ಅಳಿಯದೆ ಉಳಿದಿರುವ ಈ ಐತಿಹಾಸಿಕ ಮತ್ತು ನೈಸರ್ಗಿಕ ತಾಣಗಳತ್ತ ಒಂದು ಅರ್ಥಪೂರ್ಣ ಪಯಣ ಬೆಳೆಸಲು ಈ ಕೃತಿ ನಿಮಗೆ ಪ್ರೇರಣೆಯಾಗಲಿ. ಕೆ. ಎನ್. ಚಿದಾನಂದಸಹ ಶಿಕ್ಷಕರುಜಿ. ಜಿ. ಜೆ. ಸಿ., ಪ್ರಧಾನ ಪ್ರೌಢಶಾಲಾ ವಿಭಾಗಆರ್. ಸಿ. ರಸ್ತೆ, ಹಾಸನ -573201

“ಪ್ರವಾಸಿ ತಾಣಗಳು ಸಂಸ್ಕೃತಿಯ ಪ್ರತಿಬಿಂಬ ಗೊರೂರು ಅನಂತರಾಜು ಪ್ರವಾಸ ಕಥನ” ಕೆ ಎನ್ ಚಿದಾನಂದ Read Post »

ಕಾವ್ಯಯಾನ

ಹಮೀದ್ ಹಸನ್ ಮಾಡೂರು ಅವರ ಕವಿತೆ “ಪ್ರಕೃತಿ ಚಮತ್ಕಾರ”

ಕಾವ್ಯ ಸಂಗಾತಿ ಹಮೀದ್ ಹಸನ್ ಮಾಡೂರು “ಪ್ರಕೃತಿ ಚಮತ್ಕಾರ” ಕತ್ತಲನು ಓಡಿಸಿ…ಮುಂಜಾನೆಯ ತೇರಲಿ,ಸೂರ್ಯ ಏರಿ ಬಂದ ಬಾನಲಿ,ಬೆಳಕು ಬೀರುತ್ತ ಕಿರು ನಗೆಯಲಿ,! ಭುವಿಯ ಬೆಳಕಾಗಿಸಿ…ಖುಷಿ ತಂದಿತು ಜನಮನದಲಿ,ಸಂತಸ ಎಲ್ಲೆಡೆಯು ಸಂಭ್ರಮದಲಿ,ಚಿಲಿಪಿಲಿ ಹಕ್ಕಿಗಳು ಹಾಡ ಇಂಪಿನಲಿ,! ತಂಪು ಶೀತಲ ಗಾಳಿಗೆ…ಮೈ ಪುಳಕಿತಗೊಂಡ ತನುಮನಬೀಸಿದ ತಂಗಾಳಿಗೆ ರೋಮಾಂಚನಮರ ಗಿಡಗಳ ಸ್ವಾಗತದ ನಿತ್ಯ ನರ್ತನ,! ಮತ್ತೆ ಕತ್ತಲಾಗಿಸಿ…ಸೂರ್ಯ ಪಶ್ಚಿಮಕ್ಕೆ ಜಾರಿದ,ಕೆಂಪು ಬಾನಲಿ ಬೆಂಕಿಯ ಚೆಂಡಾದ,ರಸಿಕರ ಕಣ್ಗಳ ಆನಂದಿಸಿ ಮರೆಯಾದ,! ಕರಿ ಬಾನಿನುದ್ದಕ್ಕೂ….ಮಿನುಗು ತಾರೆಗಳ ಆಲಂಕಾರ,ಬೆಳದಿಂಗಳ ಚಂದ್ರನ ಪೂರ್ಣ ಆಕಾರಪ್ರಕೃತಿ ಮಡಿಲಿಗೆ ಬೆಳಕು ಮತ್ತೆ ಚಮತ್ಕಾರ.! ಹಮೀದ್ ಹಸನ್ ಮಾಡೂರು.

ಹಮೀದ್ ಹಸನ್ ಮಾಡೂರು ಅವರ ಕವಿತೆ “ಪ್ರಕೃತಿ ಚಮತ್ಕಾರ” Read Post »

ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ ಕಂತು-ಐದು ಸವಿತಾ ದೇಶಮುಖ ಜಯದೇವಿ ತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾಚೇತನ ಜಯದೇವಿ ತಾಯಿಯವರ ಜೀವನ ವೃತ್ತಾಂತಭಾಗ- 5  ಸೊಲ್ಲಾಪುರದ ಲಿಗಾಡೆಯವರ ಮನೆತನದ ನಿಷ್ಠಾವಂತ ವಕೀಲರಾದ ‘ರಾಮಭಾವು ರಾಜವಾಡೆ’ ಅವರು ಬ್ರಿಟಿಷರ ವಿರುದ್ಧ ಕುತಂತ್ರ ಎಸಗಿದ್ದಕ್ಕಾಗಿ ಬಂಧಿಸಲಾಗಿತ್ತು. ಜಯದೇವಿ ತಾಯಿಯವರ ಅತ್ತೆ ಪ್ರಯಾಗಬಾಯಿ ರಾಜವಾಡೆಯವರ ಬಿಡುಗಡೆಯ ನಂತರ ಅತ್ಯಂತ ಆದರದಿಂದ ಬರಮಾಡಿಕೊಂಡು ಆದರಿಸಿ  ಬ್ರಿಟಿಷರ ಭಿಡೆ ಹಿಡಿಯದೆ  ಮತ್ತೆ ಆಸ್ತಿಯ ಕಾರಭಾರವನ್ನು ನಿರ್ವಹಿಸಿಕೊಂಡು ಹೋಗಲು ಅಣಿ ಮಾಡಿದರು.” ಪ್ರಯಾಗಬಾಯಿಯ ಕಠೋರ ಧ್ವನಿ …ಬಿರುಸು ನಡತೆ ಇದ್ದರೂ ನಿಜವಾದ ದೇಶಪ್ರೇಮ ರಾಷ್ಟ್ರ ನಿಷ್ಠೆಯನ್ನು ತೋರಿದರು .ತಾಯಿ ಸಂಗವ್ವ ಗಾಂಧಿ ವಾದವನು ಪ್ರಚಾರ ಮಾಡಿದರೆ ಅತ್ತೆ ಪ್ರಯಾಗಬಾಯಿಯೂ ಅದನ್ನು ನಡೆದು ತೋರಿಸಿದ್ದರು. ದೇಶಮಾತೆಗೆ ಅನೌಪಚಾರಿಕವಾಗಿ ಸಹಾಯ ಹಸ್ತ ನೀಡಿದ್ದರು” ಎನ್ನುತ್ತಿದ್ದರು ಜಯದೇವಿ ತಾಯಿಯವರು. ಅತ್ತೆ ಪ್ರಯಾಗಬಾಯಿ ಜಯದೇವಿಯ ತಾಯಿಯ ಮೇಲೆ ಸಿಡಿಮಿಡಿಕೊಳ್ಳಲು ಎರಡು ಕಾರಣಗಳಿದ್ದವು…. ಮದುವೆಯ ಸಮಯದಲ್ಲಿ ತವರಿನವರು(ಮಡಿಕಿ) ಮದುವೆಯ ದಿಬ್ಬಣವೆನೋ ಜನ ನೋಡುವಂತೆ ಏರಿಸಿದ್ದರು….. ಆದರೆ ಪ್ರಯಾಗಬಾಯಿಯವರಿಗೆ ಕೊಡುವ ಉಡುಗೊರೆಯ ಸೀರೆ ಅವರ ವರ್ಚಸ್ಸಿಗೆ ಹೊಂದುವಂತಿರಲಿಲ್ಲವೆಂದು ನಂಬಿದ ಅತ್ತೆ ….ಸೀರೆ ನೋಡುತ್ತಿದ್ದಂತೆ ಸಿಡಿಮಿಡಿಗೊಂಡು ಅಲ್ಲಿಂದ ಎದ್ದು ಹೋಗಿದ್ದರಂತೆ .ಇದು ಅದೆಂಥ ದೊಡ್ಡ ವಿಷಯವಾಗಿತ್ತು ಅಂದರೆ  ತಾಯಿಯವರ ಜೀವನದ ಅತಿ ದೊಡ್ಡ ಘಾತಕದ ಘಟನೆಯಾಗಿತ್ತು ಅನ್ನುತ್ತಿದ್ದರು ತಾಯಿಯವರಿಗೆ ….ಸಮಯ ಸಿಕ್ಕಾಗಲೆಲ್ಲ ಆ ಮಾತನ್ನು ಆಡಿ ಆಡಿ ಮನಸ್ಸು ನೋಯಿಸುತ್ತಿದ್ದರಂತೆ. ಮುಂದೆ ಅವರು ಅದೆಷ್ಟೋ ಸೀರೆಗಳನ್ನು ತಂದು ಅವರೆದುರಿಗೆ ಹಾಕಿದರೂ ಆ ದಿನದ ಅವರು ಮರೆಯಲಿಲ್ಲ. ಇನ್ನೊಂದು ಕಾರಣವೆಂದರೆ ತಾಯಿಯವರು ಅತ್ಯಂತ ಬಳಕುವ ಅಂದರೆ ತೆಳ್ಳನೆ ದೇಹವನ್ನು ಹೊಂದಿದವರು ಊಟ ಮಾಡುವುದು ಕೇವಲ ಅರ್ಧ ರೊಟ್ಟಿ ಅಥವಾ ಚಪಾತಿ ಅಷ್ಟೇ… ಗಟ್ಟಿ ಮುಟ್ಟಾದ ಸೊಸೆ …ಆಸ್ತಿಯ ಕಾರಭಾರ ಹೊತ್ತುಕೊಳ್ಳುವ ಸೊಸೆ ಬೇಕಾಗಿತ್ತು.  ಸೊಸೆಯನ್ನು  ಹುಡುಕಾಡಿ   ಪರಿಶೀಲಿಸಿ ಮದುವೆ ಮಾಡಿದ್ದರೇನೋ ನಿಜ ಆದರೆ ಜಯದೇವಿ ತಾಯಿಯು ಮನೆಗೆ ಬಂದ ಮೇಲೆ ಗೊತ್ತಾದದ್ದು ಇವರು ಅತ್ಯಂತ ಸರಳ-ಸಾಧು- ಲಿಂಗನಿಷ್ಠರು. ದೇವರಲ್ಲಿಯೇ ಮೈಮರೆಯುವಳು ಅನ್ನುವುದು ತಿಳಿದಾದ ಮೇಲೆ ಅವರಿಗೆ ಹೊಟ್ಟೆ ಬೇನೆ ಶುರುವಾಗಿತ್ತು.ಇಂಥ ನಾಜೂಕಾಗಿರುವಳು ಎಲ್ಲವನ್ನು‌ ನಿಭಾಯಿಸುವುದು ಹೇಗೆ ಅನ್ನುವ ಸಮಸ್ಯೆ ಕಾಡುತಿತ್ತು.  ತಾಯಿಯವರು ಕೆಲಸ ಮಾಡುವಾಗ ಮಧ್ಯದಲ್ಲಿ ಬಂದು ಅವರ ಎರಡು ಕೈಗಳನ್ನು ಗಟ್ಟಿಯಾಗಿ ಹಿಡಿದು ನೋಡಿ ಮತ್ತೆ ದೂರಸರಿಸುವರಂತೆ ..,..”ನೋಡು ಏನು ತಿನ್ನೋದಿಲ್ಲ ಹೀಗೆ ಸ್ವರ್ಗಿ  ಸ್ವರ್ಗಿ ಸಣ್ಣಗಿದ್ದಿ ಎಲ್ಲಾ ಆಸ್ತಿಯನ್ನು ಹೇಗೆ ನೋಡಿಕೊಳ್ತಿ …. ನಮಗೆ ಮೊಮ್ಮಕ್ಕಳನ್ನು ಹೇಗೆ ಹೆತ್ತು ಕೊಡ್ತೀಯಾ…”!! ಅನ್ನುವ ಚಿಂತೆ ಅವರನ್ನು ಕಾಡುತ್ತಿತ್ತಂತೆ. ಪ್ರಯಾಗಬಾಯಿಯೂ ಪ್ರತಿ ಸೋಮವಾರ ಸಿದ್ದರಾಮನ ದೇವಸ್ಥಾನಕ್ಕೆ ಗಾಡಿಯಲ್ಲಿ ಹೋಗುತ್ತಿದ್ದರು . ದೇವಸ್ಥಾನಕ್ಕೆ ಹೋಗಬೇಕಾದರೂ ಜರ್ತಾರಿಯ ಸೀರೆ ಉಟ್ಟು ವಜ್ರ ವೈಢೂರ್ಯ ತೊಟ್ಟು ಹೊರಡುವರು ..ಜಯದೇವಿ ತಾಯಿಯವರು ಅವರ ಜೊತೆ ಬರಲು ಹಠ ಮಾಡಿದಾಗ ಅವರಿಗೆ ಹಾಗೆ ಉಟ್ಟ ಸೀರಿ ಕರಿಮಣಿಯ ತಾಳಿ ಹಾಕಿಕೊಂಡೇ  ಕರೆದುಕೊಂಡು ಹೋಗುತ್ತಿದ್ದರು.ಮದುವೆ ಸಮಾರಂಭಗಳಲ್ಲೂ ಅಷ್ಟೇ ತಾಯಿಯವರಿಗೆ ಮದುವೆ ಸಮಾರಂಭಗಳು ಬಂದರೆ   ಕಳವಳ ಉಂಟಾಗುವುದು….. ಬಂಗಾರ ಇಲ್ಲದೆ ಹೋಗುವದು ಹೇಗೆ  ಮನೆತನ ಮರ್ಯಾದಿಯ ಪ್ರಶ್ನೆಯಾಗಿತ್ತು ……ಹೀಗಾಗಿ ಓಡಿಹೋಗಿ ಹತ್ತಿರದಲ್ಲಿ ಇದ್ದ ತವರು ಮನೆಯಲ್ಲಿ ಹೊಸದಾಗಿ ಬಂದ ಅತ್ತಿಗೆಯರಿಂದ,ತಾಯಿಂದ ವಸ್ತಒಡವೆಗಳನ್ನು ಪಡೆದು ತೊಟ್ಟು ಹೋಗುವರು. ಮತ್ತೆ ತಿರುಗಿ ಬರುವಾಗ ಅವುಗಳನ್ನೆಲ್ಲ ಅಲ್ಲೇ ತವರು ಮನೆಯಲ್ಲಿ ಕಳಚಿಟ್ಟು ಮನೆಗೆ ಬರುವರು .  ಪ್ರಯಾಗಬಾಯಿ ಎರಡು ಹೊತ್ತು ಲಿಂಗದ ಪೂಜೆ ಮಾಡುವರು ರಾತ್ರಿಯ ಪೂಜೆ ಮುಗಿಸಿ ಅವರಿಗೆ ಊಟ ಕೊಟ್ಟು ಆಳು ಕಾಳುಗಳಿಗೆ ಊಟ ಕೊಟ್ಟು ಎಲ್ಲ ತೆಗೆದಿಟ್ಟು ಅಡುಗೆಯ ಮನೆಯ ಕೆಲಸವನ್ನೆಲ್ಲಾ ಮುಗಿಸಿ ಮೇಲೆ ಮಲಗುವ ಕೋಣೆಯತ್ತ ಹೆಜ್ಜೆ ಹಾಕಿದಾಗ ಮನೆಯಲ್ಲಿ ಎಲ್ಲರೂ ನಿದ್ರೆಯಲ್ಲಿ ಜಾರಿರುತಿದ್ದರು. ರಾತ್ರಿ ನಿರಾಳ ಮೌನ ಆವರಿಸಿತ್ತು…. ಗಡಿಯಾರ ಟಿಕ್ ಟಿಕ್ ಮಾತ್ರ ಅವರ ಉಸಿರಿಗೆ ತಾಳ ಹಾಕುತ್ತಿತ್ತು…. ನಿಧಾನವಾಗಿ ಹೆದರುತ್ತಲೇ ಗಡಿಯಾರದತ  ನೋಡಿದರು ರಾತ್ರಿ ಒಂದು ಗಂಟೆ ಮೇಲೆ ಆಗಿದೆ…. ಕೋಣೆಯಲಿ ಕಾಲಿಡುವ ಮೊದಲೇ ತೀರ್ಪು ಬಂದುಬಿಟ್ಟಿತು ……..”ಗಂಡನ ಮೇಲೆ ಭಯ ಭಕ್ತಿ ಇಲ್ಲ ಅದಕ್ಕೆ ಇಷ್ಟು ತಡ ಮಾಡುವೆ ಅಲ್ಲೇ ಮೂಲೆಯಲ್ಲಿ ಸ್ಟ್ಯಾಂಡ್ಪ್ಪ(standup)ಅಂದು ಗಂಡನ  ಧ್ವನಿ ಕೇಳಿದ ತಕ್ಷಣ ಹೆದರಿ ಅಲ್ಲಿ ಗೋಡೆಗೆ ಬೆನ್ನೂರು ನಿಂತು ಬಿಡುವರು ತನ್ನ ತಪ್ಪಾದರೂ ಏನು ಅಂತ ತಿಳಿಯದೆ ಗಂಡನ ಆಜ್ಞೆ ಅಲ್ಲವೇ ಪಾಲಿಸಲೇಬೇಕು….!! ಆದರೆ ಮಧ್ಯರಾತ್ರಿಯಲಿ  ಹಾಗೆ ಕೋಣೆ ಮೂಲೆಯಲ್ಲಿ ನಿಂತು ನಿದ್ದೆ ಹೋಗಿ ಭೂತಾಯಿಯ ಮಡಿಲಲ್ಲಿ ಶರಣಾಗಿ ಮಲಗಿದ್ದು ಗೊತ್ತಾಗುತ್ತಿರಲಿಲ್ಲ….. ನಸುಕಿನಲ್ಲಿ ಗಡಬಡಿಸಿ ಎದ್ದರೆ ತಾವು ನೆರೆದ ಮೇಲೆ ಮಲಗಿದ್ದು ಅರಿವಾಗುತ್ತಿತ್ತು ಮೈ ಕೈಯಲ್ಲ ಇನ್ನಷ್ಟು ನೋವಾದರೂ ಕೆಳಗೆ ಇಳಿದು ಓಡಿ ಬಂದರೆ ಅಲ್ಲಿ ಅತ್ತೆಯ ಬೈಗಳ ಸುರಿಮಳೆ ಪ್ರಾರಂಭ ……!!!ಗಂಡ ಮಾತ್ರ ಏನು ನಡೆಯಲೇ ಇಲ್ಲ ಅನ್ನುವಂತೆ ಎದ್ದು ಕೆಳಗೆ ಬರುವರು ಅವರಿಗೆ ಯಾವ ವ್ಯವಹಾರಿಕ ಜ್ಞಾನ ಇಲ್ಲ ತನಗೆ ತಿಳಿದಷ್ಟು ನಡೆದುಕೊಳ್ಳುವರು ಏಕೆಂದರೆ ಐದು ಅತ್ತಿಯಂದಿರ ಅಚ್ಚುಮೆಚ್ಚಿನ ಮಗ ಬೇರೆ… ಮದುವೆಯಾದ ಹೊಸತರಲ್ಲಿ ಜಯದೇವಿ ತಾಯಿಯವರಿಗೆ ತಾನು ಎಲ್ಲಿ ಬದುಕಿ ಬಾಳುತ್ತಿದ್ದೇನೆ  ಅನ್ನುವ  ಜ್ಞಾನವೇ ಇಲ್ಲವಾಗಿತ್ತು ಅಂತ ತಾಯಿಯವರು ಹೇಳುತ್ತಿದ್ದರು . “ಗಂಡನ ಮನೆಯ ಎಲ್ಲ ಸದಸ್ಯರ ಮನಸ್ಸು ಗೆಲ್ಲ ಬೇಕಾಗಿತ್ತು. ಸಿದ್ದರಾಮನಲ್ಲಿ ಸೈ ಎನ್ನಿಸಿಕೊಳ್ಳಬೇಕಾಗಿತ್ತು. ಬಂದ ಎಲ್ಲ ಕಷ್ಟ ಕಾರ್ಪಣ್ಯಗಳನ್ನು ಹಾಗೆ ನುಂಗುತ್ತ ನಡೆದಿದೆ” ಅನ್ನುತ್ತಿದ್ದರು. ತಮ್ಮ ದುಃಖವನ್ನೆಲ್ಲ ಅಂಗೈಯಲ್ಲಿ ಇಟ್ಟುಕೊಂಡ ಲಿಂಗನಿಗೆ ಹೇಳುತ್ತಾ ಸಿದ್ದರಾಮನನ್ನು ಮಾತನಾಡಿಸುತ ದುಃಖವನ್ನು ಮರೆಯುವರು…. ಧಾರಾಕಾರವಾಗಿ ಕಣ್ಣೀರು ಸುರಿಸುವರು… *ನಿನ್ನ  ಭಜಿಸಲೆಂದು ಉಲಿಯುವೆ ಜಯಗೀತ ಒಂದೊಂದು, ನನ್ನ ಜೀಯಾನಿನ್ನ ಬರುವಿಕೆಯ ಬಯಕೆ-ನೆನೆ ನೆನೆದು ಅಳಹೋಗಿಹಾಡು ಬಿಡುವೆ !!*(ಜಯಗೀತ ಕವನ ಸಂಕಲ) ಒಂದು ಕಡೆ ಬರುತ್ತಾರೆ ತಾಳ್ಮೆನು ಯಾತನೆಯ/ ಬಾಳುವೆನು ನಿನಗಾಗಿಕಾಳ ಬಂದರು ಹೆದರೇನು -ಸಿದ್ದರಾಮದಾಳಿ ತಂದರು ಮತ್ತೆ ನಿನ್ನನೇ ನೆನೆಯುವೆ!! “ಎಲ್ಲವೂ ನಿನ್ನ ಪಾದಕ್ಕೆ ಅರ್ಪಣೆ… ಎನ್ನ ಮಾನ ಅಪಮಾನ ನಿನ್ನದಯ್ಯಾ ಎನ್ನುತ್ತಿದ್ದೆಕಷ್ಟಗಳು ಹೆಚ್ಚಿದಂತೆ ಸಿದ್ದರಾಮನ ಮೇಲಿನ ಭಕ್ತಿ ಇನ್ನು  ಗಟ್ಟಿಕೊಳ್ಳಲಾರಂಬಿಸಿತ್ತು.  ಸುಖದ ಸಂಪತ್ತಿನಲ್ಲಿ ನಾನು ಸುಖವಾಗಿ ಒಂದು ವೇಳೆ ಬದುಕಿದ್ದರೆ …. ಸಿದ್ದರಾಮನನ್ನು ನೆನೆಯುತ್ತಿರಲಿಲ್ಲವೇನು…??!…ಸಿದ್ದರಾಮ ಪರೀಕ್ಷಿಸುತ್ತಿರುವ ನಾನು ಆ ಪರೀಕ್ಷೆಯಲ್ಲಿ ಪಾಸ್ ಆಗಲೇಬೇಕು ಎನ್ನುವ ಛಲವನ್ನು ಹೊತ್ತ ಸೊಸೆಯಾಗಿದ್ದೆ ” ‌….ಅಂತ ಅನೇಕ ಸಲ ಹೇಳುತ್ತಿದ್ದರು. ತಾಯಿಯ ತವರಿನಲ್ಲಿ  ಹೆಣ್ಣು ಮಕ್ಕಳಿಗೆ ಸಮಾನತೆ ಹೇಳಿಕೊಟ್ಟಿದ್ದರು. ಪುರುಷ ಪ್ರಧಾನವಾದ ನಮ್ಮ ದೇಶದಲ್ಲಿ ಗಂಡನಿಗೆ ಹೊಂದುಕೊಳ್ಳಬೇಕಾದರೆ ಸಹನೆ ಇರಬೇಕು ಆಗ ಮುಂದೆ ಎಲ್ಲವನ್ನು ಗೆಲ್ಲಬಹುದು ಅನ್ನುವುದನ್ನು ತಾಯಿ ಸಂಗವ್ವ ಜಯದೇವಿ ತಾಯಿಯವರಿಗೆ ಕಲಸಿದ ಪಾಠ .ನೆನೆಯುತಿದರು.. ಬಾಲ್ಯ ವಿವಾಹ ಒಂದು ಮದುವೆ ಅಲ್ಲ ಅದು ಬಾಲ್ಯದ  ಅಂತ್ಯ. ಬೊಂಬೆಯ ಜೊತೆ ಆಟವಾಡುವ ಕೈಗಳಿಗೆ ಅಡುಗೆಯ ಪಾತ್ರೆಯ ಹೊರೆ ತಾಳೆದಾಗಿತ್ತು. ಪಾಠ ಪುಸ್ತಕ ಓದಬೇಕಾದ ಕಣ್ಣುಗಳಿಗೆ ಆಶ್ರುಗಳ ಅಭ್ಯಾಸ ಆಗಿಹೋಗಿತ್ತು. ಹೆಣ್ಣು ಮಗು ಹೆಂಡತಿಯಾಗುವ ಮುನ್ನ ಮಗುವಾಗಿ ಬದುಕುವ ಹಕ್ಕು ಕಸಿದುಕೊಂಡರೆ ಅದು ಒಂದು ಅಪರಾಧವೇ ಸರಿ ಅನ್ನುತ್ತಿದ್ದರು .ಅವಳಿಗೆ ಗಂಡನ ಮನೆ ಸಿಗುವುದು ಅನ್ನುವ ಸಂತಸವೇನು ಇರಬಹುದು ಆದರೆ ಮಗುವಿನ ಅತ್ಯ ಅಮೂಲ್ಯವಾದ ಬಾಲ್ಯದ ಬದುಕು ಸಿಹಿ ನೆನಪಿನ ಲೋಕವೂ ಕಳೆದು ಹೋಗುವುದು. ಬೆಳೆಯದ ದೇಹ- ಮನಸ್ಸಿಗೆ ತಾಳದ‌ ಹಿಂಸೆ ಕೊಟ್ಟಂತಾಗುವುದು .ಅವಳು ನಿಭಾಯಿಸಲಾರದಂತ ಜವಾಬ್ದಾರಿ  ಮಗುವಿನ ಮೇಲೆ ಒಡ್ದುವದು ಅಕ್ಷಮ್ಯ ಅಪಕೃತವಾಗುವುದು ಎನ್ನುತ್ತಿದ್ದರು.  ಒಂದು ಹೆಣ್ಣು ಮಗು ಬಾಲ್ಯದಲ್ಲಿ ವಿವಾಹ ಮಾಡಿಕೊಂಡು ಜೀವನದಲ್ಲಿ ಸೋತು ಹೋದರೆ ಸೋಲು ಅವಳೊಬ್ಬಳದೇ ಅಲ್ಲ…. ಅದು ಒಂದು ತಲೆಮಾರಿನ ಸೋಲು ,!! “ಮಗು ಕುತ್ತಿಗೆಗೆ ತಾಳಿಯಲ್ಲ – ಅವಳಿಗೆ ಭವಿಷ್ಯ ಕೊಡಿ” ಅನ್ನುತ್ತಿದ್ದರು . “ಸಿರಿತನದ ಕುವರಿ ! ಸಿರಿವಂತರ ಸತಿಯಾದೆಸಿರಿತನದ ಶ್ರಂಗಾರವೆಲ್ಲವನು- ಭೋಗಿಸಿದೆಸಿರಿತನ ದೊರೆತನ ಹಿರಿತನ ಎನ್ನವಾರಿಸದೆಶ್ರೀ ಲೋಲನ ದರ್ಶನವೆಂದು ಕಾಯುತಿರುವೆ…!!” “ಸಿರಿತನದ ತಳಕಿನಲ್ಲಿ ನಾನು ಮುಳುಗದಿರಲಿ ಅಂತಾನೆ  ಕಷ್ಟಗಳ ಕೊಡಿ  ಹರಿಸಿದ  ಸಿದ್ದರಾಮ…..ಸುಖದ ಸುಪ್ಪತ್ತಿನಲ್ಲಿ ಮುಳುಗದಿರಲಿಅಂತ ಏನೋ ಸಿದ್ದರಾಮನ ಪರೀಕ್ಷೆಯಲಿ….. ಗೆಲ್ಲಲೆಂದೆ ನಾನು ಕಷ್ಟಗಳನ್ನು ಸಂಭ್ರಮಿಸಲಾರಂಭಿಸಿದೆ. ಅನ್ನುತ್ತಾರೆ .  ಸಿದ್ದರಾಮನಲ್ಲಿ ಒಂದಾಗಲು ಶುರುವಿಟ್ಟೆ  ಲೋಕಕಲ್ಯಾಣದ ಕೆಲಸದತ್ತ ಹೊರಳಿದೆ” ಎನ್ನುವ ಮಾತು ಸುಳ್ಳಲ್ಲ . ಹಳೆಯ ಸಂಪ್ರದಾಯದ ಅತ್ತೆ ಮನೆಯ ವಾತಾವರಣ ಬೆಳೆದ ಮನೆಯ ವಾತಾವರಣಕ್ಕೂ ಅಜಗಜಾಂತರ ಅಂತರವಿತ್ತು .ಅತ್ತೆಯ ಬೈಗಳ ಪ್ರತಿ ಮಾತಿನಲ್ಲಿಯೂ ಒಳ್ಳೆಯದನ್ನು ಹುಡುಕಲು ಆರಂಭಿಸಿದರು.  ಒಂದು ಸಲ ಪಡಸಾಲಿಯಲಿ ದೊಡ್ಡ ಕನ್ನಡಿಯ ನೋಡುತ  ಜಯದೇವಿ ತಾಯಿಯವರು ಕುಂಕುಮ ಇಟ್ಟುಕೊಳ್ಳುವುದು ನೋಡಿದ ಪ್ರಯಾಗಬಾಯಿ ಜೋರಾಗಿ ಕಿರುಚಾಡಿಲಾರಂಭಿಸಿದರು .“ನಿನಗೆ ಸಂಸ್ಕಾರ ಅನ್ನೋದೇ ಇಲ್ಲ ಯಾರಾದರೂ ಅಂಗಳದಲ್ಲಿ ನಿಂತು ಕುಂಕುಮ ಇಡುವರೇ ನೀನು ಹೇಳಿ ಕೇಳಿ ಭಾಷಣ ಮಾಡುವಾಕೆಯ ಮಗಳು” ಎಂದು ಕೂಗಾಡಿದರಂತೆ.ಅವರು ಯಾಕೆ ಗದರಿಸಿದರಂತೆ ತಿಳಿಯಲಿಲ್ಲ  ಕುಂಕುಮವನ್ನು ಅಂಗಳದಲ್ಲಿ ಹಚ್ಚಿಕೊಳ್ಳಬಾರದು ಅನ್ನುವ ಪದ್ಧತಿ ಇರಬೇಕೆನೊ ಅದಕ್ಕೆ ಅತ್ತೆ ಬೈದಿರಬೇಕು ಅಂದುಕೊಂಡರಂತೆ.ಆದರೆ ನನ್ನ ತಾಯಿಗೆ ಏಕೆ ಬೈದರು ಭಾಷಣ ಮಾಡುವುದು ತಪ್ಪೇ ಅಂತೆಲ್ಲ ಲೆಕ್ಕ ಹಾಕಿದರು.ಆದರೂ ಎದೆ ನಡುಗುತಿತ್ತು, ಕೈಕಾಲುಗಳು ಶಕ್ತಿ ಕುಂದುತಿದೆ ಅನ್ನಿಸಿಲಾರಿಂಭಿಸಿತ್ತು. ಆ ದೃಶ್ಯವನ್ನು ನೋಡಿದ ಪ್ರಯಾಗಬಾಯಿಯುಸಮೀಪ ಬಂದು …”ನೋಡು ಮನೆಯಲ್ಲಿ ಹಾಲ ತುಪ್ಪದ ಹೊಳೆ ಹರಿತಾ ಇದೆ ಚೆನ್ನಾಗಿ ಉಂಡು-ತಿಂದು ಇರಬೇಕು ಅಂತ ಹೇಳಿದ್ದು ಕೇಳಿ ಜೀವ ಬಂದಂತಾಯಿತು. ಮುಂದೆ ಕೆಲವು ದಿನಗಳು ಕಳೆದ ನಂತರ ಸೊಸೆಯ ಮೇಲೆ ಪ್ರೀತಿ ಹೆಚ್ಚ ಆರಂಭಿಸಿತು ಸೊಸೆಯ ತಾಳ್ಮೆ ಗಂಭೀರ ನಡೆನುಡಿಯನ್ನು ಪ್ರಯಾಗಬಾಯಿ ಗಮನಿಸುತ್ತಿದ್ದಂತೆ ಮನ ಕರಗಲಾರಂಭಿಸಿತ್ತು. ಆಗಾಗ ತಾಯಿಯವರನ್ನು ದಿಟ್ಟಿಸಿ ನೋಡುತ್ತಿದ್ದರಂತೆ ಅದೇಕೋ ಸೊಸೆ ಇನ್ನೂ ಸಣ್ಣ ಆಗಿ ಹೋಗುತ್ತಿರುವಂತೆ ಕಂಡು ಅಡುಗೆಯ ಬಸವ್ವಳನ್ನು ಕರೆದು ಇವಳಿಗೆ “ಇನ್ನು ಮೇಲಿಂದ ನನಗಾಗಿ ಮಾಡುವ ತುಪ್ಪದ ಅಡಿಗೆ ಇವಳಿಗೂ ಉಣ್ಣಿಸಬೇಕು” ಅಂತ ಆಜ್ಞೆ ಮಾಡಿದರಂತೆ .ಅದೇ ರೀತಿ ಕೆಲಸದವಳು ಬಂದು ತಾಯಿಯವರಿಗೆ “ನೋಡಿರಿ ಬಾಯಾರ……ನೀವು ಹೀಗೆ ಕಿವುಚಿ ಅದ್ದಾ-ಗಿದ್ದಾ ಊಟ ಮಾಡಿದರೆ ನಡೆಯುವುದಿಲ್ಲ ಚೆನ್ನಾಗಿ ಊಟ ಮಾಡಬೇಕು ಗಂಡು ಮಕ್ಕಳ ಹೆತ್ತು ಕೊಡಬೇಕು “ಅಂತ  ಕೆಲಸದವಳು ಪ್ರೀತಿಯಿಂದ ಆಜ್ಞೆ ಮಾಡಿದಳಂತೆ. ಸಾಧು-ಸಂತರು ನೀರು ಕುಡಿದು ,ಇಲ್ಲ ತುಣುಕು ಅನ್ನ ಉಂಡು ಬದುಕುವಂತೆ ಜಯದೇವಿ ತಾಯಿಯವರು ಹುಟ್ಟುತ್ತಲೇ ಯೋಗಿಣಿ ಯಾಗಿದ್ದರು  ಅವರು ಕೊನೆಯವರೆಗೂ ಅವರ ಊಟ ಅಷ್ಟೇ. ಅವರು ಊಟತಿಂಡಿಗಾಗಿ  ಸಂಸಾರದ ಭೋಗಕ್ಕಾಗಿ ಹುಟ್ಟಿದವರಲ್ಲ  ಬಸವಣ್ಣನ ತತ್ವದಂತೆ ಕಾಯಕವ ಮಾಡುತ್ತಾ ಸಂಸಾರ ಗೆದ್ದು   ಮಹಾನ ಶರಣೆಯಾದವರು. ಎಲ್ಲ  ಐದು ಜನ ಓರಗಿತ್ತಿಯರನ್ನು, ಮನೆಯ ಆಸ್ತಿ , ಹೊಲಗದ್ದೆ ,ಬಡ್ಡಿಯ ವಹಿವಾಟ ಎಲ್ಲವನ್ನು ಒಬ್ಬಳೇ ನಿಭಾಯಿಸುತ್ತ………ಇದ್ದ ಆಸ್ತಿಯನ್ನು ವೃದ್ಧಿಸಿ ಮುಂದೆ ಲಿಗಾಡಿ ಮನೆತನದ ವಿಜಯ ಪತಾಕೆಯನ್ನು ಹಾರಿಸಿ, ಕನ್ನಡ ನಾಡ ನುಡಿಗಾಗಿ ದುಡಿದ, ಸಿದ್ದರಾಮನ ಶ್ರೇಷ್ಠ ಭಕ್ತಳಾಗಿ,…  ಕನ್ನಡ ಸಾಹಿತ್ಯ ಸಾರಸ್ವತ ಲೋಕಕ್ಕೆ ಮಹಾನ ಕೊಡುಗೆ ನೀಡಲಿರುವರು  ಅನ್ನುವದ  ಅರಯದಾಗಿದ್ದರು…. ಅತ್ತೆ ಪ್ರಯಾಗಬಾಯಿ….ಅಲ್ಲವೇ…..! (ಮುಂದುವರೆಯುವುದು) ಸವಿತಾ ದೇಶಮುಖ ಡಾ. ಜಯದೇವಿತಾಯಿ ಲಿಗಾಡೆಯವರ ಮೊಮ್ಮಗಳು, ತಂದೆ-ಡಾ. ಶಂಕರಣ್ಣ ಮೂಗಿ (ಸೋವಿಯತ್ ಲ್ಯಾಂಡ್ ನೆಹರು ಅವಾರ್ಡ್ ವಿಜೇತರು). ಸುಪ್ರೀಂ ಕೋರ್ಟಿನ ನ್ಯಾಯವಾದಿಗಳುತಾಯಿ -ಲಲ್ಲೇಶ್ವರಿತಾಯಿ ಮೂಗಿ(30 ಶಿವಶರಣೆಯರ ಮೊದಲು ಪರಿಚಯಿಸಿದ ಲೇಖಕಿ)ವೃತ್ತಿ:ವಿಜಯಪುರದ ಆಲ್ ಇಂಡಿಯಾ

Read Post »

ಇತರೆ, ಸಿನೆಮಾ

ಎರಡೂವರೆ ದಶಕಗಳ ಹಿಂದಿನ ಹಳ್ಳಿಯೊದರ ಮುಗ್ಧ‌ ನೈಜ ಪ್ರೇಮ ಕತೆಯೇ “ಸಿರೈ” ಸಿನಿಮಾ-ಪ್ರಶಾಂತ್ ಬೆಳತೂರು

ಸಿನಿಮಾ ಸಂಗಾತಿ ಪ್ರಶಾಂತ್ ಬೆಳತೂರು ಎರಡೂವರೆ ದಶಕಗಳ ಹಿಂದಿನ ಹಳ್ಳಿಯೊಂದರ ಮುಗ್ಧ‌ ನೈಜ ಪ್ರೇಮ ಕತೆಯೇ “ಸಿರೈ” ಸುರೇಶ್ ರಾಜಕುಮಾರಿ ತಮಿಳಿನ ಖ್ಯಾತ ಚಲನಚಿತ್ರ ನಿರ್ದೇಶಕ ವೆಟ್ರಿಮಾರನ್ ಅವರ ಗರಡಿಯಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದವರು, ಇದೇ ಮೊದಲ ಬಾರಿಗೆ  ಸಿರೈ ಎಂಬ ತಮ್ಮ ಚೊಚ್ಚಲ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ಈ ಚಿತ್ರವನ್ನು ಒಮ್ಮೆ ನೋಡಬೇಕೆಂಬ ಇಂಗಿತ ಅದು ಬಿಡುಗಡೆಯಾದ ದಿನಗಳಿಂದಲೂ ಇತ್ತು. ಹಾಗಾಗಿ ಈ ಸಿರೈ ಚಿತ್ರದ ಕುರಿತು ಯಾರಾದರೂ ವಿಮರ್ಶೆ ಬರೆಯುತ್ತಾರೋ ಅಥವಾ ಕನಿಷ್ಠ ಮುಖಪುಟದಲ್ಲಿ ಇದರ ಕುರಿತು ಅನಿಸಿಕೆ ಅಭಿಪ್ರಾಯಗಳನ್ನು ದಾಖಲಿಸಬಹುದೇನೊ ಎಂದು ಆಗಾಗ್ಗೆ ನನ್ನ ಬಿಡುವಿನ ವೇಳೆಯಲ್ಲಿ ಮುಖಪುಟವನ್ನು ಗಮನಿಸುತ್ತಿದ್ದೆ. ಯಾಕೋ ಏನೋ ಈ ಬಾರಿ ಹೆಚ್ಚಿನ ಬರಹಗಳು ದುನಿಯಾ ವಿಜಿ ಅವರ ಲ್ಯಾಂಡ್ ಲಾರ್ಡ್ ಸಿನಿಮಾ ಕುರಿತೇ ಇದ್ದವು. ಅದನ್ನು ನಾನಿನ್ನೂ ನೋಡದೆ ಇರುವುದರಿಂದ ಅದರ ಕುರಿತು ಈಗ ಮಾತಾಡುವುದು ಥರವಲ್ಲ.ಆದರೆ  ಸಿರೈ ಚಿತ್ರದ ಕುರಿತು ಒಂದೆರಡು ಸಣ್ಣ ಟಿಪ್ಪಣಿಗಳಿನ್ನಷ್ಟೇ ಗಮನಿಸಿದ್ದ ನಾನು ಚಿತ್ರದ ಪೋಸ್ಟರ್ ನಲ್ಲಿ ವಿಕ್ರಮ್ ಪ್ರಭುವಿನೊಂದಿಗೆ ಹರೆಯದ ಹೊಸ್ತಿಲಿನ ಮುಗ್ಧ ಮುಖವನ್ನು ಹೊತ್ತಂತೆ ಕಾಣುತ್ತಿದ್ದ ತಮಿಳಿನ ಹೊಸ ಮುಖಗಳಾದ ಎಲ್. ಕೆ ಅಕ್ಷಯ್ ಕುಮಾರ್ ಮತ್ತು ಅನಿಷ್ಮಾ ಅವರನ್ನು ಕಂಡ ಮೇಲೆ ಒಂದು ಭಾನುವಾರ ಇದನ್ನು ಬಿಡುವು ಮಾಡಿಕೊಂಡು ನೋಡಲೆಬೇಕೆಂಬ ಹಟಕ್ಕೆ ಬಿದ್ದು ಸಿನಿಮಾ ನೋಡಿದೆ.ಹೆಚ್ಚಿನ ನಿರೀಕ್ಷೆಯೇನೋ ಇತ್ತು ಆದರೆ ಮಂದಗತಿಯಲ್ಲಿ ಸಾಗುವ ಈ ಸಿನಿಮಾ ಹೆಚ್ಚಿನ ಕುತೂಹಲವನ್ನೇನೂ ಉಂಟು ಮಾಡುವುದಿಲ್ಲ.ಆದರೆ ಸಂಯಮದಿಂದ ತನ್ನೊಳಗನ್ನು ನೋಡಿಸಿಕೊಂಡು ಹೋಗುತ್ತದೆ. 2003 ರಲ್ಲಿ ವೆಲ್ಲೂರಿನ ಸಶಸ್ತ್ರ ಮೀಸಲು ಪಡೆಯಲ್ಲಿ ಪೊಲೀಸ್ ಪೇದೆಯಾಗಿ ಕಾಣಿಸಿಕೊಳ್ಳುವ ವಿಕ್ರಮ್ ಪ್ರಭುವಿನ ಮೂಲಕ ಕತೆಗೆ ಆರಂಭವನ್ನು ಒದಗಿಸುವ ನಿರ್ದೇಶಕ ಪೊಲೀಸ್ ಇಲಾಖೆಯಲ್ಲಿ ಸಾಮಾನ್ಯ ಪೇದೆಗಳನ್ನು ಹೈರಾಣಾಗಿಸುವ ನಿಯಮಗಳು, ಮೇಲಾಧಿಕಾರಿಗಳ ಅಧಿಕಾರದ ಗರ್ವಕ್ಕೆ ಸಹಜವಾಗಿ ತುತ್ತಾಗಿ ಬಿಡುವ ಕೆಳಹಂತದ ಉದ್ಯೋಗಿಗಳಾದ ಪೇದೆಗಳ ತಾಕಲಾಟವನ್ನು ತಣ್ಣಗೆ ತೋರಿಸುತ್ತಲೇ ಇಲ್ಲಿನ ಪೊಲೀಸ್ ಇಲಾಖೆಯನ್ನು ಪರಿಚಯಿಸುವ ನಿರ್ದೇಶಕ ಜೈಲಿನಿಂದ ಕೋರ್ಟಿಗೆ ವಿಚಾರಣೆಗೆ ತೆರಳುವ ವೇಳೆ ದುಷ್ಟ ಅಪರಾಧಿಯೊಬ್ಬ ತನ್ನ ಬೆಂಗಾವಲಿಗಿರುವ  ಪೊಲೀಸ್ ಪಡೆಯ ಪೇದೆಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ಕೊನೆಗೆ ಆ ಬೆಂಗಾವಲು ಪಡೆಯಲ್ಲಿದ್ದ ಧೈರ್ಯವಂತ ಅನುಭವಿ ಪೇದೆ ಕಥಿರವನ್ನಿಂದ ಶೂಟೌಟ್ಗೆ ಒಳಪಟ್ಟು ಹತ್ಯೇಗೀಡಾಗುತ್ತಾನೆ. ಆ ಮೂಲಕ ಕಥಿರವನ್ ಹಿನ್ನೆಲೆ, ಪೊಲೀಸ್ ವೃತ್ತಿಯಲ್ಲಿ ಆತನಿಗಿರುವ ನಿಷ್ಠೆ, ಬದ್ದತೆಗಳನ್ನು ಪರಿಚಯಿಸುತ್ತಾ, ಆರ್ ಐ ವಿಚಾರಣೆಯಲ್ಲಿ ಶೂಟೌಟ್ಗೆ ಸಂಬಂಧಪಟ್ಟಂತೆ ಅದನ್ನು  ಸಮರ್ಥಿಸಿಕೊಳ್ಳುವ ಕಥಿರವನ್ ಸಂಭಾಷಣೆಗಳು ತುಂಬಾ ಗಟ್ಟಿಯಾಗಿ ಮೂಡಿವೆ.ಸಾಂಸರಿಕವಾಗಿ ಕಥಿರವನ್ ಮತ್ತು ಅವನ ಪತ್ನಿ ಮೇರಿ ಇಬ್ಬರು ಕೂಡ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಒಂದು ಸಾಮಾನ್ಯ ಕುಟುಂಬ ಎಂಬುದನ್ನು ಹೆಚ್ಚು ರಿಸ್ಕ್ ತೆಗೆದುಕೊಳ್ಳಲು ಹೋಗದೆ ಅರ್ಥೈಸಿ ಬಿಡುವ ನಿರ್ದೇಶಕ ಕಥಿರವನ್ ಪಾತ್ರದ ಮೂಲಕ ನಮ್ಮನ್ನು ಸಜ್ಜಾಗಿಸುವುದು ತಾನು ಹೇಳಲೊರಡುವ  ಮುಖ್ಯ ಕತೆಯ ಎಳೆಗೆ.ವೆಲ್ಲೂರು ಜೈಲಿನಿಂದ ಸಿವಾಗಂಗೈ ಕೋರ್ಟಿಗೆ ವಿಚಾರಣೆಗೆಂದು ವಿಶೇಷ ಬೆಂಗಾವಲು ಪಡೆಗೆ ಮುಖ್ಯ ಪೇದೆಯಾಗಿ ಮೂವರು ತಂಡದೊಂದಿಗೆ ತೆರಳುವ ಕಥಿರವನ್ ವಿಚಾರಣಾ ಖೈದಿಯಾದ ಅಬ್ದುಲ್ ರೌಫ್ನನ್ನು ಬಸ್ಸಿನಲ್ಲಿ ಜೊತೆಗೆ ಕರೆದೊಯ್ಯುವಾಗ ಕಥಾನಾಯಕನ ಬದುಕಿನ ಹಿಂದಿನ ಚಿತ್ರಣ ಅವನ ಕಂಗಳಲ್ಲಿ ಅನಾವರಣಗೊಳ್ಳುತ್ತಾ ಹೋಗುತ್ತದೆ. ಸಿವಾಗಂಗೈನಾ ಹಳ್ಳಿಯೊಂದರಲ್ಲಿ  ಕೇರಳದಿಂದ ಬಂದ  ಅಬ್ದುಲ್ ಖಾಸಿಂ ಎಂಬ ಒಂದು ಬಡ ಮುಸ್ಲಿಂ ಕುಟುಂಬ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸೀರೆ ವ್ಯಾಪಾರ ಮಾಡುತ್ತಾ ಒಂದಷ್ಟು ಮೊತ್ತವನ್ನು ಒಟ್ಟುಗೂಡಿಸಿ ಹಳ್ಳಿಯೊಂದರಲ್ಲಿ ಅಂಗೈ ಅಗಲದ ಜಾಗ ಖರೀದಿಸಿ ಒಂದು ಸಾಧಾರಣ ಮನೆ ಕಟ್ಟಿಕೊಳ್ಳುವ ಮೂಲಕ ಆ ಹಳ್ಳಿಯಲ್ಲಿ ನೆಲೆಯೂರುತ್ತದೆ.ಮುಂದೆ ಅಲ್ಲಿ ಒಂದು ಸಣ್ಣ ಚಿಲ್ಲರೆ ಅಂಗಡಿಯನ್ನು ತೆರೆದು ಬದುಕು ಕಟ್ಟಿಕೊಳ್ಳುವ ಹೊತ್ತಿಗೆ ಖಾಸಿಂ ಮರಣವನ್ನು ಹೊಂದುತ್ತಾನೆ. ಆ ನಂತರ ಅದೇ ಹಳ್ಳಿಯಲ್ಲಿ  ಬದುಕು ದೂಡುವ ಆತನ ಮಗ ಅಬ್ದುಲ್ ರೌಫ್ ಮತ್ತು ಆತನ ಪತ್ನಿಗೆ ಈ ಅಂಗಡಿಯೇ ಜೀವನಾಧಾರವಾಗಿರುತ್ತದೆ.ಜೊತೆಗೆ ಅಬ್ದುಲ್ ರೌಫ್ ತೊಂಬತ್ತರ ಕಾಲಘಟ್ಟದಲ್ಲಿ ದೃಶ್ಯಮಾಧ್ಯಮಗಳು ಆಗಷ್ಟೇ ಕಣ್ಣು ಬಿಡುತ್ತಿದ್ದ ಕಾಲಮಾನದಲ್ಲಿ ಸಾಮಾನ್ಯವಾಗಿ ಊರಿನ ಹಬ್ಬಹರಿದಿನಗಳಲ್ಲಿ, ಸಾವು -ನೋವುಗಳಲ್ಲಿ ಟಿವಿಗಳ ಮೂಲಕ ಚಲನಚಿತ್ರಗಳನ್ನು ಬಿಡುವುದೆಂದರೆ  ಎಲ್ಲರಿಗೂ ಆಗ ಅದೊಂದು ಸಂಭ್ರಮದ ದಿನಗಳಾಗಿತ್ತು.ಹಿರಿಯರು, ವಯಸ್ಸಾದವರು ಭಕ್ತಿಪ್ರಧಾನ, ಸಾಂಸಾರಿಕ ಅರ್ಥಪೂರ್ಣ ಚಿತ್ರಗಳನ್ನು ನೋಡಲು ಬಯಸಿದರೆ ಅಂದಿನ ಯುವವರ್ಗ ಸಾಮಾನ್ಯವಾಗಿ ಪ್ರೀತಿ ಪ್ರೇಮದಂತಹ ಕಥಾವಸ್ತುವುಳ್ಳ ಸಿನಿಮಾಗಳನ್ನು ನೋಡಲು ಹಾತೊರೆಯುತ್ತಿತ್ತು. ಅಬ್ದುಲ್ ರೌಫ್ ತನ್ನ ಹಳ್ಳಿಯಲ್ಲಿ ಅಂಗಡಿಯ ಜೊತೆ ಜೊತೆಗೆ ಬಿಡುವಿನ ವೇಳೆಯಲ್ಲಿ ಟಿವಿಯಲ್ಲಿ ಚಲನಚಿತ್ರಗಳನ್ನು ಬಿಡುವ ಕಾಯಕವನ್ನು ಮಾಡಿಕೊಂಡಿದ್ದು, ತನ್ನ ಎಕ್ಸೆಲ್ ಬೈಕಿನಲ್ಲಿ ಟಿವಿಯನ್ನು, ವಿಡಿಯೋ ಕ್ಯಾಸೆಟ್ಗಳನ್ನು ಊರಿಂದ ಊರಿಗೆ ಹೊತ್ತು ಹೋಗುತ್ತಿದ್ದ. ಇವಿಷ್ಟು ಅಬ್ದುಲ್ ನ ವೃತ್ತಿ ಬದುಕು. ಇಂತಹ ಅಬ್ದುಲ್ ಗೆ ಅದೇ ಹಳ್ಳಿಯ ಕಲೈರಸಿಯ ಮೇಲೆ ಬಾಲ್ಯದಿಂದಲೂ ಒಲವಿರುತ್ತದೆ.ಕಲೈರಸಿಗೂ ಕೂಡ ಅಬ್ದುಲ್ ನ ಮೇಲೆ ಅಷ್ಟೇ ಒಲವು. ಇದು ಅವರ ಹರೆಯ ಕಾಲದಲ್ಲಿ ಮತ್ತಷ್ಟು ಗರಿಗೆದರಿ ತೀರಾ ಹತ್ತಿರಕ್ಕೆ ಕರೆತರುತ್ತದೆ.ಆದರೆ ಆ ಹಳ್ಳಿಯಲ್ಲಿ ಅಬ್ದುಲ್ನದು ಏಕೈಕ ಮುಸ್ಲಿಂ ಕುಟುಂಬ ಮತ್ತು ಕಲೈರಸಿ ಸಾಮಾನ್ಯ ತಳಹಂತದ ಜಾತಿಗೆ ಸೇರಿದವಳಾದರೂ  ಆ ಹಳ್ಳಿಯಲ್ಲಿ ಅವಳದು ಸಂಖ್ಯಾತ್ಮಕ ಪ್ರಾಬಲ್ಯವನ್ನು ಹೊಂದಿರುವ ಜಾತಿಯಾಗಿದ್ದ ಕಾರಣ ಇವರಿಬ್ಬರ ಪ್ರೇಮ ಈ ಸಮಾಜಕ್ಕೆ ತಿಳಿಯುತ್ತಿದ್ದಂತೆ ಅದು ತಿಕ್ಕಾಟಕ್ಕೆ ಘರ್ಷಣೆಗೆ ಎಡೆಮಾಡಿಕೊಡುತ್ತದೆ ಎಂಬ ಅರಿವು ಆರಂಭದಲ್ಲಿ ಇವರಿಗೆ ಮನವರಿಕೆಯಾದರೂ ಅವರ ಪ್ರೇಮ ಮಾತ್ರ ಮುಂದುವರೆಯುತ್ತದೆ. ಕಲೈರಸಿಯ ಅಕ್ಕ ತನ್ನ ಸೋದರಮಾವನನ್ನೇ ಮದುವೆಯಾದರೂ ಅವನ ದುಶ್ಚಟಗಳಿಂದ ಅತಿರೇಕದ ವರ್ತನೆಗಳಿಂದ ಸಾಂಸಾರಿಕ ಬದುಕಿನಲ್ಲಿ ಇನ್ನಿಲ್ಲದಂತೆ ನರಳುತ್ತಿರುತ್ತಾಳೆ. ಹೀಗಿರುವಾಗ ಕಲೈರಸಿಯ ಅಕ್ಕನ ಗಂಡನಾದ ಪಾಂಡಿ ತನ್ನ ಗೆಳೆಯರೊಂದಿಗೆ ಮಧ್ಯಪಾನ ಮಾಡುತ್ತಿದ್ದ ಸ್ಥಳಕ್ಕೆ  ಟಿವಿಯೊಂದಿಗೆ ವಿಡಿಯೋ ಕ್ಯಾಸೆಟ್ಗಳನ್ನು ಹೊತ್ತೊಯ್ದ ಅಬ್ದುಲ್ ನನ್ನು ನೀಲಿಚಿತ್ರವೊಂದರ ಕ್ಯಾಸೆಟ್ ಹಾಕುವಂತೆ  ಒತ್ತಾಯಪಡಿಸುತ್ತಾನೆ. ಆದರೆ ಅಂತಹ ಯಾವುದೇ ನೀಲಿಚಿತ್ರಗಳ ಕ್ಯಾಸೆಟ್ ತನ್ನ ಬಳಿ ಇಲ್ಲವೆಂದು ಹೇಳುವ ಅಬ್ದುಲ್ ಅದನ್ನು ನಿರಾಕರಿಸುತ್ತಾ ತಾವು ಮಾಲೀಕರೊಂದಿಗೆ ಮಾತಾಡಿಕೊಳ್ಳಿ ಎಂದು ಹೊರಟುಬಿಡುತ್ತಾನೆ. ಇದು ತಮ್ಮ ಮಾತುಗಳಿಗೆ ಸೊಪ್ಪು ಹಾಕದೆ ಸೊಕ್ಕು ತೋರಿಸುತ್ತಿದ್ದಾನೆ ಈ ಸಾಬಿ ನನ್ಮಗ ಎಂದು ಬಗೆಯುವ ಪಾಂಡಿ ಅವನ ಮೇಲೆ ಹಲ್ಲೆ ನಡೆಸಲು ಮುಂದಾಗುತ್ತಾನೆ.ಆದರೆ ಅದು ಅಲ್ಲಿದ್ದ ಅವನ ಗೆಳೆಯರುಗಳಿಂದ ಅತಿರೇಕಕ್ಕೆ ತಿರುಗದೆ ಶಾಂತವಾಗುತ್ತದೆ.ಅಬ್ದುಲ್ ಹೀಗೆ ತನ್ನದಲ್ಲದ ತಪ್ಪಿನ ವಿಷಯಕ್ಕೆ ತನ್ನ ಮಾವನಿಂದ ಏಟು ತಿಂದ ವಿಚಾರ ಕಲೈರಸಿಗೆ ತಿಳಿಯುತ್ತದೆ. ಇದರಿಂದ ಉರಿದು ಬೀಳುವ ಕಲೈರಸಿಯು ಅಬ್ದುಲ್ ನ ಶಾಂತ ಸ್ವಭಾವವನ್ನು ಕೆಣಕಿ ಮಾತಾಡುತ್ತಾಳೆ. ಊರಿನ ಪುಂಡ ಪೋಕರಿ ನಾಯಿಗಳು ಹೊಡೆದರೆ ಅವರಿಗೆ ತಿರುಗಿಸಿ ಹೊಡೆಯುವ ತಾಕತ್ತಿಲ್ವೇನೋ ನಿನಗೆ ಎಂದು ಜರಿಯುತ್ತಾ ಅವನಿಗೆ ಧೈರ್ಯ ತುಂಬುವವಳು ಇದೇ ಕಲೈರಸಿ. ಹೀಗೆ ಆ ರಾತ್ರಿ ಅವರು ಪರಸ್ಪರ ಮನೆಯಿಂದ ಹೊರಗೆ ಮಾತುಕತೆಯಲ್ಲಿ ತೊಡಗಿದ್ದಾಗ ಕಲೈರಸಿಯ ಮನೆಯಲ್ಲಿ ಜಗಳದ ಸದ್ದು ಕೇಳಿಸುತ್ತದೆ. ಪ್ರತಿನಿತ್ಯ ಕುಡಿದು ಬರುವ ತನ್ನ ಸೋದರಮಾವ ಪಾಂಡಿ ತನ್ನ ಹೆಂಡತಿಯಾದ ಕಲೈರಸಿಯ ಅಕ್ಕನೊಂದಿಗೆ ಮಾತಿಗಿಳಿದಿರುತ್ತಾನೆ. ಉಳಿದರ್ಧ ಭೂಮಿಯನ್ನು ಮಾರಿ ಮಕ್ಕಳಾಗದಿರುವ ತನ್ನ ಹೆಂಡತಿಗೆ ಒಳ್ಳೆಯ ಆಸ್ಪತ್ರೆಗೆ ಸೇರಿಸುತ್ತೇನೆ ಎನ್ನುವ ಅವನ ಮಾತುಗಳಿಂದ ಆರಂಭವಾಗುವ ಅವರ ಸಂಭಾಷಣೆ ತುಂಬಾ ಸತ್ವಪೂರ್ಣವಾಗಿದೆ. ಮಕ್ಕಳಾಗದಿರಲು ಕೇವಲ ಹೆಣ್ಣನ್ನೇ ಕಾರಣವೆಂದು ನೋಡುವ ಈ ಪುರುಷ ಸಮಾಜ, ಮಕ್ಕಾಳಾಗದಿರಲು ಪುರುಷನ ದೌರ್ಬಲ್ಯಗಳು ಕಾರಣವಾಗುತ್ತವೆ ಎಂಬ ಸತ್ಯವನ್ನು ಮರೆಮಾಚಿ ಸದಾ ಹೆಣ್ಣಿನತ್ತಲೇ ವಕ್ರದೃಷ್ಟಿ ಬೀರುವ ಪುರುಷ ಪ್ರಾಧಾನ್ಯತೆಗೆ ಚಾಟಿ ಬೀಸುತ್ತದೆ. ಪ್ರತಿನಿತ್ಯ ಪುಂಡಪೋಕರಿಗಳೊಂದಿಗೆ ಎಗ್ಗಿಲ್ಲದೆ ಕುಡಿದು, ಒಂದಷ್ಟು ಪೋಲಿ ಚಿತ್ರಗಳನ್ನು ನೋಡಿ ರಾತ್ರಿ ಮನೆಗೆ ಬಂದು ಎರಡು ನಿಮಿಷ ಕೋಳಿ ಕುಕ್ಕುವ ಹಾಗೆ ಕುಕ್ಕಿ ಬಿಟ್ಟರೆ ಮಕ್ಕಾಳಗಲ್ಲ ಮಾರಾಯ ಎಂಬ ತನ್ನ ಹೆಂಡತಿಯ ಮೂದಲಿಕೆಯ ಮಾತುಗಳಿಂದ ರೊಚ್ಚಿಗೇಳುವ ಪಾಂಡಿ ತನ್ನ ಪುರುಷತ್ವವನ್ನು ಅನುಮಾನಿಸಿದಳೆಂಬ ಕಾರಣಕ್ಕೆ ಅವಳನ್ನು ಕೊಂದು ಹಾಕಿಬಿಡುವಷ್ಟು ಕೋಪದಿಂದ ಹಲ್ಲೆ ಮಾಡಲು ಮುಂದಾಗುತ್ತಾನೆ. ಇದರಿಂದ ಅವರ ಕೂಗಾಟಗಳು ಹೆಚ್ಚಿದ್ದರಿಂದ ಕಲೈರಸಿ ಅಬ್ದುಲ್ ನನ್ನು ಹಿತ್ತಾಲಾಚೆಯಲ್ಲಿಯೇ ನಿಲ್ಲಿಸಿ ಮನೆಯೊಳಗೆ ಓಡಿ ಬರುತ್ತಾಳೆ ಜಗಳ ವಿಕೋಪಕ್ಕೆ ತಿರುಗುತ್ತದೆ. ಹೊಡೆದಾಟ ತೀವ್ರವಾಗುತ್ತಿದ್ದಂತೆ ಮನಸ್ಸು ತಾಳಲಾರದೆ ಅಬ್ದುಲ್ ಕಲೈರಸಿಯ ಮನೆಯೊಳಗೆ ಕಾಲಿರಿಸುತ್ತಾನೆ.ಅವರ ಜಗಳವನ್ನು ಬಿಡಿಸುವ ವೇಳೆ ಭರದಲ್ಲಿ ಪಾಂಡಿಯನ್ನು ಅಚಾನಾಕ್ಕಾಗಿ  ಕೆಳಗೆ ನೂಕುತ್ತಾನೆ. ಕುಡಿದ ಮತ್ತಿನಲ್ಲಿದ್ದ ಪಾಂಡಿಗೆ ಇದು ಈ ಸಾಬಿಯ ಅತಿರೇಕದ ವರ್ತನೆ ಎನಿಸುತ್ತದೆ. ಯಾರ ಮನೆಗೆ ಯಾರ ಅನುಮತಿಯಿಲ್ಲದೆ ಏಕಾಏಕಿ ಹೀಗೆ ಒಳಗೆ ಬಂದ ಎಂದು ಅವನ ಮೇಲೆ ಎರಗುತ್ತಾನೆ. ಈ ಪೆರುಮಾಳ್ ಮನೆಯಲ್ಲಿನ ಹೊಡೆದಾಟದ ತೀವ್ರತೆಯ ವಿಚಾರ ಚಿಲ್ಲರೆ ಅಂಗಡಿಯಲ್ಲಿ ಕೂತ ಮಾಯಮ್ಮನನ್ನು ಮುಟ್ಟುತ್ತದೆ. ಅವಳು ಆತಂಕದಲ್ಲಿ ಧಾವಿಸಿ ಬರುವಾಗ ದಾರಿಯಲ್ಲಿ ಸಿಗುವ ಮಗ ಅಬ್ದುಲ್ ನ ನೋಡಿ ಅವನ ತಲೆಯಿಂದ ಸೋರುತ್ತಿದ್ದ ರಕ್ತದಿಂದ ಕೆಂಡಾಮಂಡಲವಾಗುವ ಅವಳ ತಾಯಿ ಹೃದಯ ಸುಮ್ಮನಾಗದೆ ಮಗ ಬೇಡವೆಂದರೂ ಅವನ ಕೈ ಹಿಡಿದೆಳೆದು ಪೆರುಮಾಳ್ ಮನೆಯ ಮುಂದೆ ಜಗಳಕ್ಕೆ ಬೀಳುತ್ತಾಳೆ. ಮಾಯಮ್ಮ ತನ್ನ ಮಗನಿಗೆ ಈ ಪರಿ ಹೊಡೆಯಲು ಕಾರಣವೇನು? ತನ್ನ ಮಗನಿನ್ನು ಚಿಕ್ಕವನು. ನಿನ್ನ ಅಳಿಯ ಕುಡಿದಿದ್ದಾನೆ ಎಂದು ಯಾರಿಗೆ ಏನು ಬೇಕಾದರೂ ಮಾಡಬಹುದೇ? ಕುಡಿದಿದ್ದಾನೆ ಎಂದು ಹೆಂಡತಿಗೂ ಮತ್ತೆ ತಾಯಿಗೂ ವ್ಯತ್ಯಾಸ ತಿಳಿಯುವುದಿಲ್ಲವೇ ? ಎಂಬ ಮರ್ಮಾಘಾತುಕ ಮಾತುಗಳನ್ನಾಡುತ್ತಾಳೆ. ಕೈಲಾಗದವನು ಎಂದು ಜರೆಯುತ್ತಾಳೆ ಇದು ಪಾಂಡಿಯ ಗಂಡಸುತನವನ್ನು ಕೆಣಕಿ ಅಬ್ದುಲ್ ನ ತಾಯಿಗೆ ತನ್ನ ಪುರುಷ ಸೂಚ್ಯವಾದ  ಮರ್ಮಾಂಗವನ್ನು  ಎತ್ತಿ ತೋರಿಸುವ ಉದ್ದಟತನದ ಕೀಳುಮಟ್ಟದ ವರ್ತನೆಗೆ ಇಳಿಯುವುದರಿಂದ ಸಹಜವಾಗಿ ಅಬ್ದುಲ್ ಉದ್ರಿಕ್ತನಾಗಿ ಪಾಂಡಿಯ ಮೇಲೆ ಎರಗುತ್ತಾನೆ. ಈ ಗಲಾಟೆಯಿಂದ ಯಾರಿಗೂ ಅಂತಹ ಅಪಾಯಗಳಾಗದೆ ಇದ್ದರೂ ಆ ರಾತ್ರಿ ಅಬ್ದುಲ್ ನಿಗೆ ತನ್ನ ಮತ್ತು ಕಲೈರಸಿಯ ಪ್ರೇಮ ಮುಂದೆ ತಂದೊಡ್ಡಬಹುದಾದ ಚಿತ್ರಣ ಕಣ್ಮುಂದೆ ಬಂದು ನಿಲ್ಲುತ್ತದೆ. ಆದರೆ ಆ ದಿನ ಅಪರಾತ್ರಿ  ದಿಢೀರೆಂದು ಅನಿರೀಕ್ಷಿತವಾಗಿ ಅಬ್ದುಲ್ ನ ಮನೆಗೆ ಕದ್ದು ಭೇಟಿ ನೀಡುವ ಕಲೈರಸಿ ತನ್ನೊಳಗಿರುವ ನೈಜ ಪ್ರೇಮವನ್ನು ಅಬ್ದುಲ್ ನಿಗೆ ಅರ್ಥ ಮಾಡಿಸಲು ಸಫಲಳಾಗುತ್ತಾಳೆ. ತಮ್ಮ ಪ್ರೇಮಕ್ಕೆ ಈ ಸಮಾಜದಲ್ಲಿ ಅಡ್ಡಿ ಆತಂಕಗಳು ತುಂಬಿರುವುದರಿಂದ ಅದನ್ನು ಇಲ್ಲಿಗೆ ಕೊನೆಗೊಳಿಸಬೇಕೆಂದು ಆಲೋಚಿಸಲೊರಡುವ ಅಬ್ದುಲ್ ಈ ಹಳ್ಳಿಯಲ್ಲಿ ತಾನು ತನ್ನ ತಾಯಿ ಕ್ಷೇಮದಿಂದ ಬದುಕಾಬೇಕಾದರೆ ನಿನ್ನ ಪ್ರೇಮವನ್ನು ಮರೆತು ಮುಂದುವರೆಯುವುದು ಅನಿವಾರ್ಯ ಎನ್ನುವ ಹಂತಕ್ಕೆ ಬಂದಾಗ, ತಮ್ಮೊಳಗಿನ ಪ್ರೇಮವನ್ನು ಮತ್ತೆ ಬಡಿದೆಬ್ಬಿಸುವ ಕಲೈರಸಿ ಈ ಜನ ಹೆಚ್ಚೆಂದರೆ ನಮ್ಮನ್ನು ಕೊಲ್ಲಬಹುದು ನಾನು ಅದಕ್ಕೂ ತಯಾರಾಗಿಯೇ ಇರುವೆನು ಎನ್ನುವ ಮೂಲಕ ತನ್ನ ಪ್ರೇಮದ ಗಟ್ಟಿತನವನ್ನು ಸಾರುತ್ತಾಳೆ. ನಿನಗೆ ಭಯವಿದ್ದರೆ ಹೇಳು ಈ ಹಳ್ಳಿಯನ್ನು ತೊರೆದು ಎಲ್ಲಾದಾರೂ ದೂರ ಬದುಕೋಣವೆನ್ನುವ ಕಲೈರಸಿಯ ಮಾತುಗಳು ಅಬ್ದುಲ್ ನನ್ನು ಮತ್ತೆ ಚಿಂತನೆಗೆ ಹಚ್ಚುತ್ತವೆ. ಇವಿಷ್ಟು ಅಬ್ದುಲ್ ನ ಪೂರ್ವಕತೆಯೆಂದು ಅವನೀಗ ಜೈಲಿನಲ್ಲಿ ಐದು ವರ್ಷಗಳನ್ನು ಕಳೆದಿದ್ದು ಇದೀಗ ಕೊಲೆ ಆರೋಪದಲ್ಲಿ ವಿಚಾರಣೆಗೆಂದು ಬೆಂಗಾವಲು ಪಡೆಯೊಂದಿಗೆ ವೆಲ್ಲೂರಿನಿಂದ ದೂರದ ಸಿವಾಗಂಗೈ ಕೋರ್ಟಿಗೆ ತೆರಳುತ್ತಿದ್ದಾನೆಂದು ಅರ್ಥ ಮಾಡಿಸುತ್ತದೆಯಾದರೂ ಒಂದು ಸಣ್ಣ ಕುತೂಹಲವನ್ನು ಕಾಯ್ದುಕೊಳ್ಳುತ್ತದೆ.ಹೀಗೆ ಬೆಂಗಾವಲು ಪೊಲೀಸ್ ಪಡೆ ಅಬ್ದುಲ್ ನನ್ನು ಕರೆದೊಯ್ಯುವಾಗ ವಿಲ್ಲುಪುರಂ ಎಂಬ ಸ್ಥಳದಲ್ಲಿ ರಾತ್ರಿ ಊಟಕ್ಕೆ ಬಸ್ಸಿನಿಂದಿಳಿದು ಹೋಟೆಲ್ನಲ್ಲಿ ಊಟ ಮಾಡಿ ವಾಪಾಸ್ಸಾಗುವ ವೇಳೆ ಕಥಿರವನ್

ಎರಡೂವರೆ ದಶಕಗಳ ಹಿಂದಿನ ಹಳ್ಳಿಯೊದರ ಮುಗ್ಧ‌ ನೈಜ ಪ್ರೇಮ ಕತೆಯೇ “ಸಿರೈ” ಸಿನಿಮಾ-ಪ್ರಶಾಂತ್ ಬೆಳತೂರು Read Post »

ಕಾವ್ಯಯಾನ

ರತ್ನ ಜಹಗೀರದಾರ್‌ ಕವಿತೆ “ಸಮ್ಮತ”

ಕಾವ್ಯ ಸಂಗಾತಿ ರತ್ನ ಜಹಗೀರದಾರ್‌ “ಸಮ್ಮತ” ಮುಗಿಲ ಮಾಳಿಗೆಗೆ ನಕ್ಷತ್ರಗಳೇ ಮಾಲಿಕೆಗಳುಕಡಲ ಸೆಳೆತಕೆ ಅಬ್ಬರಿಸುವ ಅಲೆಗಳುಸವಿಜೇನು ಸುರಿದಂತೆ ನೀನಾಡುವ ಮಾತುಗಳುಹೃದಯ ಮೀಟಿದೆ ವೈನಿಕನಂತೆ ಒಲವಿನೊಳು ಮನದಲಿ ಹಚ್ಚಿದನು ಪ್ರೀತಿಯೆಂಬ ದೀಪವನುಅದ್ಯಾವಾಗಲೋ ಕದ್ದುಬಿಟ್ಟ ನನ್ನಯ ಹೃದಯವನುನಗುವಿನಲೆ ಸೆಳೆಯುವ ಚಲುವ ನನ್ನವನುಜನುಮದಲಿ ಬಿಟ್ಟಿರದ ಅನುಬಂಧದ ಬೆಸುಗೆಯನು ನೀನಾಗು ಆಸರೆ ಬದುಕೆಂಬ ಪಯಣದಲಿಹೊಂದಿಕೊಂಡು ಸಾಗುವ ನಮ್ಮಿರ್ವರ ಸಂಬಂಧದಲಿಕಷ್ಟಗಳ ಕಡೆಗಣಿಸಿ ಪರಿಹರಿಸುವನು ಧೈರ್ಯದಲಿಹೆಮ್ಮರಕೆ ತಬ್ಬಿಕೊಂಡ ಬಳ್ಳಿಯಂತೆ ಪ್ರೇಮದಲಿ ದುರ್ಗುಣಗಳಿಲ್ಲದ ಎಲ್ಲರ ಮೆಚ್ಚಿನ ಹೃದಯವಂತಸದ್ಗುಣಗಳೇ ತುಂಬಿರುವ ವಿಶಿಷ್ಟತೆಯ ಗುಣವಂತಸಂಪತ್ತು ಆಶಾಶ್ವತವೆಂದು ತಿಳಿದಿರುವ ಹಣವಂತಅನ್ಯೋನ್ಯತೆಯ ದಾಂಪತ್ಯಕೆ ನೀನಾದೆನಗೆ ಸಮ್ಮತ  ರತ್ನ ಜಹಗೀರದಾರ      

ರತ್ನ ಜಹಗೀರದಾರ್‌ ಕವಿತೆ “ಸಮ್ಮತ” Read Post »

ಕಾವ್ಯಯಾನ

ಅನ್ನಪೂರ್ಣ ಸಕ್ರೋಜಿ ಪುಣೆ “-ಜೋಗದ ಬೆಳಕಿನ ಸಿರಿ”

ಕಾವ್ಯ ಸಂಗಾತಿ ಅನ್ನಪೂರ್ಣ ಸಕ್ರೋಜಿ ಪುಣೆ “ ಜೋಗದ ಬೆಳಕಿನ ಸಿರಿ” ಜೋಗದ ಸಿರಿ ಬೆಳಕಿನಲ್ಲಿಬೆಳಗಿದ ಕವಿ ಹೃದಯ|ಜೀವ ಹೂವಾಗಿ ನಗಿಸುತಸ್ಪಂದಿಸಿದ ವಿಸ್ಮಯ|| ಪ್ರಶಸ್ತಿಗಳ ಸರಮಾಲೆಯಲ್ಲಿಶೋಭಿವಂತ ನಿಸಾರ್|ವೈಚಾರಿಕ ಲೇಖನಗಳಲ್ಲಿಖ್ಯಾತಿ ಅಹ್ಮದ್ ಸರ್|| ಜಾತ್ಯಾತೀತರಾಗಿ ಬಾಳಿದಶರಣಗುಣದವರು|ಭಗವದ್ಗೀತೆ ವಚನಗಳ ಹೇಳಿಕೊಂಡಾಡಿದವರು|| ಪ್ರಕೃತಿಯ ಸೌಂದರ್ಯದಪ್ರೇಮದ ಆರಾಧಕರು|ಶಾಲೆಗಳಲ್ಲಿ ಎಲ್ಲರ ಪ್ರೀತಿಯಮೆಚ್ಚಿನ ಅಧ್ಯಾಪಕರು|| ಕಾಲೇಜುಗಳಲ್ಲಿ ನಲ್ಮೆಯಒಲವಿನ ಪ್ರಾಧ್ಯಾಪಕ|ಸಂವೇದನಾಶೀಲ ಕವಿಗಳಹೃದಯದ ನಾಯಕ|| ವಿವೇಕ ವೈಚಾರಿಕ ಕೃತಿಗಳವಿಶಿಷ್ಟ ಲೇಖಕರು|ಲಕ್ಷಗಟ್ಟಲೆ ಅಭಿಮಾನಿಗಳನಿಷ್ಕಲ್ಮಷ ಮಾಲಕರು|| ನಿತ್ಯೋತ್ಸವ ಆರತಿ ಬೆಳಗಿದಕನ್ನಡಮ್ಮನ ಐಸಿರಿ|ಕನ್ನಡಿಗರ ಮನ ಮನೆಗಳಲ್ಲಿಜೋಗದ ಬೆಳಕಿನ ಸಿರಿ|| ಕುರಿಗಳು ಸಾರ್ ಕುರಿಗಳುಕುರುಡು ಅನುಕರಣೆ|ಸಾಮಾಜಿಕ ಕಳಕಳಿಯ ಗೀತೆಜನರಿಗೆ ಆಕರ್ಷಣೆ|| ಸಂವೇದನಾಶೀಲ ಕವಿಗೆಸ್ಪಂದನದ ನಮನ|ನಿತ್ಯೋತ್ಸವ ನಿಸರ್ಗ ಕವಿಗೆತಲೆಬಾಗಿ ನಮನ|| ಅನ್ನಪೂರ್ಣ ಸಕ್ರೋಜಿ ಪುಣೆ

ಅನ್ನಪೂರ್ಣ ಸಕ್ರೋಜಿ ಪುಣೆ “-ಜೋಗದ ಬೆಳಕಿನ ಸಿರಿ” Read Post »

ಪುಸ್ತಕ ಸಂಗಾತಿ

“ಜಗತ್ತೇ ಒಂದು ರಂಗಮಂಟಪ ನಾವೆಲ್ಲ ನಟರು-ಶೇಕ್ಸಪಿಯರ್”ಪಾರ್ವತಿ ಎಸ್ ಬೂದೂರು

ಪುಸ್ತಕ ಸಂಗಾತಿ ಪಾರ್ವತಿ ಎಸ್ ಬೂದೂರು “ಜಗತ್ತೇ ಒಂದು ರಂಗಮಂಟಪ ನಾವೆಲ್ಲ ನಟರು-ಶೇಕ್ಸಪಿಯರ್” ಇಂಗ್ಲೆಂಡ್ ನ ಜಗತ್ಪ್ರಸಿದ್ಧ ನಾಟಕಕಾರ ಹಾಗು ಕವಿ ವಿಲಿಯಮ್ ಶೇಕ್ಸಪಿಯರವರು ಈ ದೇಹದಲಿ ಉಸಿರಿರುವ ತನಕ ಸವೆಯುವ ಗಳಿಗೆಗಳನೆ ನಾಟಕ ಎಂದಿರುವರು ಹಾಗಾದರೆ ಈ ನಾಟಕ (Drama) ಎನ್ನುವ ಪದದ ಆಳವನು ನೋಡಲೆತ್ನಿಸಿದಾಗ, ಸಾಹಿತ್ಯದ ಹಲವಾರು ಪ್ರಕಾರಗಳಲ್ಲಿ ಅತ್ಯಂತ ಪ್ರಭಾವಶಾಲಿ ಮತ್ತು ಜೀವಂತಿಕೆಯಲ್ಲಿಯೆ ವಿಶಿಷ್ಟವಾದ ಮಾನವ ಸಂವೇದನೆಯ ಪ್ರತಿಬಿಂಬವಾಗಿದೆ.ಕವಿತೆ ಓದಿಸಿಕೊಂಡು ಹೋಗುತ್ತದೆ, ಕಾದಂಬರಿ ಕಲ್ಪನಾ ಲೋಕದಲ್ಲಿ ವಿಹರಿಸುವಂತೆ ಮಾಡುತ್ತದೆ. ಆದರೆ ನಾಟಕವು ಕಣ್ಣೆದುರೇ ಘಟಿಸುವ ‘ವರ್ತಮಾನ’. ಸಂಸ್ಕೃತದ ಅಲಂಕಾರಿಕರು ನಾಟಕವನ್ನು ‘ದೃಶ್ಯಕಾವ್ಯ’ಎಂದಿರುವರು.ನಾಟಕವು ಕೇವಲ ಲೇಖಕನ ಕಲ್ಪನೆಯಲ್ಲ ಪ್ರೇಕ್ಷಕರ ಎದುರು ರಂಗಮಂಟಪದ ಮೇಲೆ ಸೃಷ್ಟಿಯಾಗುವ ಮಾಯಾ ಪ್ರಪಂಚ.ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಶಕ್ತಿ ನಾಟಕಕ್ಕಿದೆ. ಮನುಷ್ಯನ ಅಂತರಂಗವನ್ನು ಶೋಧಿಸುವ, ಸಮಾಜದ ಮೌಲ್ಯಗಳನ್ನು ಪ್ರಶ್ನಿಸುವ ಮತ್ತು ಬದುಕುವ ಕಲೆಯನ್ನು ಕಲಿಸುವ ಒಂದು ಸತ್ವಯುತ ಕಲಾ ಪ್ರಕಾರವಾಗಿದೆ. ಅಕ್ಷರ ಮತ್ತು ಅಭಿನಯದ ಈ ಸಮಾಗಮವೇ ನಾಟಕವನ್ನು ಅಮರವಾಗಿಸಿದೆ.‘ನಾಟಕ’ ಎಂಬ ಪದವು ಸಂಸ್ಕೃತದ ‘ನಟ್’ (ನಟಿಸು ಅಥವಾ ಚಲಿಸು) ಎಂಬ ಧಾತುವಿನಿಂದ ಬಂದಿದೆ.ಭರತಮುನಿಯು ತನ್ನ ‘ನಾಟ್ಯಶಾಸ್ತ್ರ’ದಲ್ಲಿ ನಾಟಕವನ್ನು ‘ಪಂಚಮ ವೇದ’ ( ಋಗ್ವೇದದ ಪಠ್ಯ, ಸಾಮವೇದದ ಗಾಯನ, ಯಜುರ್ವೇದದ ಅಭಿನಯ, ಅಥರ್ವ ವೇದದ ರಸವನು ಪಡೆದುದೆ ನಾಟಕ ) ಎಂದು ಕರೆದಿದ್ದಾರೆ ಇದು ಸಮಾಜದ ಎಲ್ಲಾ ವರ್ಗದ ಜನರಿಗೂ ಜ್ಞಾನ ಮತ್ತು ಮನರಂಜನೆ ನೀಡುವ ಶಕ್ತಿಯನ್ನು ಹೊಂದಿದೆ.ನವರಸಗಳ ಮೂಲಕ ಪ್ರೇಕ್ಷಕನಲ್ಲಿ ಭಾವನಾತ್ಮಕ ಬದಲಾವಣೆ ತರುವುದು ಇದರ ಮುಖ್ಯ ಗುರಿ.ಪೌರಾಣಿಕ: ಐತಿಹಾಸಿಕ: ಸಾಮಾಜಿಕ: ದುರಂತ. ಸುಖಾಂತ, ಹಾಸ್ಯ ಇವೆಲ್ಲ ನಾಟಕದ ಪ್ರಾಕಾರಗಳು.ಮನುಷ್ಯನ ಸಂಘರ್ಷಗಳು ಸೋಲು-ಗೆಲುವುಗಳು ಮತ್ತು ಭಾವನೆಗಳನ್ನು ಅಭಿನಯದ ಮೂಲಕ ಮರುಸೃಷ್ಟಿಸುವ ಕಲೆ. “ಜಗತ್ತೇ ಒಂದು ರಂಗಮಂಟಪ, ನಾವೆಲ್ಲರೂ ನಟರು” ಎಂಬ ಶೇಕ್ಸ್‌ಪಿಯರ್‌ನ ಮಾತು ನಾಟಕದ ವ್ಯಾಪ್ತಿಯನ್ನು ಅದ್ಭುತವಾಗಿ ವರ್ಣಿಸುತ್ತದೆ. ನಮ್ಮ ಸಗರನಾಡಿನ ಸಾಹಿತಿ, ಸಂಶೋದಕ, ಶಿಕ್ಷಕರಾದ ಶ್ರೀಯುತ ಶ್ರೀ ನಿಂಗನಗೌಡ ದೇಸಾಯಿ ಅವರು ರಚಸಿದ ನಾಟಕ ಕೃತಿಯ ಅವಲೋಕನ. ಕಲಿಯಿರಿ ಕಲಿಸಿರಿ (ಸಾಮಾಜಿಕ ನಾಟಕ) ಲೇಖಕರು: ನಿಂಗನಗೌಡ ದೇಸಾಯಿ.ಪ್ರಥಮ ಮುದ್ರಣ: 2010.ಶಿಕ್ಷಣ ಎಂಬುದು ಕೇವಲ ಅಕ್ಷರ ಕಲಿಯುವುದಲ್ಲ, ಅದು ಬದುಕುವ ದಾರಿಯನ್ನು ತೋರಿಸುವ ಬೆಳಕು. ಈ ಆಶಯವನ್ನು ಹೊತ್ತು ಹೊರಬಂದಿರುವ ನಾಟಕವೇ ‘ಕಲಿಯಿರಿ ಕಲಿಸಿರಿ’. ಕಲ್ಬುರ್ಗಿಯ ಬಸವ ಪ್ರಕಾಶನದಿಂದ ಪ್ರಕಟಗೊಂಡ ಈ ಕೃತಿಗೆ ಖ್ಯಾತ ಮಕ್ಕಳ ಸಾಹಿತಿ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ದಿವಂಗತ ಚಂದ್ರಕಾಂತ್ ಕರದಳ್ಳಿ ಅವರು ಮುನ್ನುಡಿ ಬರೆದಿದ್ದಾರೆ. ಸುರಪುರದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶಾಂತಗೌಡ ಪಾಟೀಲ್ ಅವರ ಪ್ರೋತ್ಸಾಹ ಹಾಗೂ ಕಂಚ್ಯಾಣಿ ಶರಣಪ್ಪ ಅವರ ಬೆನ್ನುಡಿಯೊಂದಿಗೆ ಈ ನಾಟಕವು ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸುತ್ತದೆ.ಇಂದಿನ ನಗರೀಕರಣದ ಅಬ್ಬರದಲ್ಲಿ ಯುವಜನತೆ ಹಳ್ಳಿಯನ್ನು ಮರೆತು ನಗರಗಳತ್ತ ಓಡುತ್ತಿದ್ದಾರೆ. “ಎಲ್ಲವನ್ನೂ ಸರ್ಕಾರವೇ ಮಾಡಲಿ” ಎಂಬ ಅಸಹಾಯಕ ಮನೋಭಾವದ ನಡುವೆ, ಈ ನಾಟಕದ ನಾಯಕ ರವಿ ಒಬ್ಬ ಆದರ್ಶ ಯುವಕನಾಗಿ ಕಾಣಿಸಿಕೊಳ್ಳುತ್ತಾನೆ. ಎಂ.ಎಸ್ಸಿ ಮುಗಿಸಿ ಬೆಂಗಳೂರಿನ ಪ್ರತಿಷ್ಠಿತ ಸ್ಟೀಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೂ, ತನ್ನ ಹಳ್ಳಿಯ ಅಭಿವೃದ್ಧಿಯ ಬಗ್ಗೆ ಅವನಿಗೆ ಅಪಾರ ಕಾಳಜಿಯಿಂದ ಹಳ್ಳಿಗೆ ಬರುವನು.ಧರ್ಮಪ್ಪನವರ ಹಟ ಮತ್ತು ಕಹಿ ನೆನಪುಗಳುಗ್ರಾಮದ ಶ್ರೀಮಂತ ಹಿರಿಯರಾದ ಧರ್ಮಪ್ಪ ಅನಕ್ಷರಸ್ಥರಾದರೂ ತನ್ನ ಮಕ್ಕಳನ್ನು ಓದಿಸಿದವರು. ಆದರೆ ವಿಧಿಯಾಟ ಬೇರೆಯೇ ಇತ್ತು:ನೌಕರಿ ಹಿಡಿದ ಮಗ ಮತ್ತು ಸೊಸೆ ಅಪಘಾತದಲ್ಲಿ ಅಕಾಲಿಕ ಮರಣ ಹೊಂದುತ್ತಾರೆ.ಎಂ.ಎ ವರೆಗೆ ಓದಿದ ಮಗಳು ರಾಣಿ ಭಯದಿಂದ ಮನೆಯಲಿ ಪ್ರೇಮ ವಿಷಯ ತಿಳಿಸದೆ ಪ್ರೀತಿಸಿದವನ ಜೊತೆ ಹೋಗುತ್ತಾಳೆ. ಅಲ್ಲದೆ ಪಕ್ಕದ ಗ್ರಾಮದ ಪರುತಗೌಡ ಸಾಲ ಮಾಡಿ ಮಗನಿಗೆ ಶಾಲೆ ಕಲಿಸಿದರು ಮಗ ದಂಡಪಿಂಡನಾಗಿ ಊರಮುಂದೆ ಕುಳಿತ ವ್ಯರ್ಥ ಸಮಯ ಸವೆಸುವದು ಕಂಡ ಈ ಎಲ್ಲ ಘಟನೆಗಳಿಂದ ನೊಂದ ಧರ್ಮಪ್ಪ, “ಶಿಕ್ಷಣವೇ ಎಲ್ಲಾ ಅನಾಹುತಗಳಿಗೆ ಕಾರಣ” ಎಂದು ನಂಬಿ ಬಿಡುತ್ತಾರೆ. ತನ್ನ ಮೊಮ್ಮಕ್ಕಳಾದ ಶಂಕರನನ್ನು ದನಕಾಯಲು ಮತ್ತು ರಾಧಾಳನ್ನು ಅಡುಗೆ ಮಾಡಲು ಹಚ್ಚುತ್ತಾರೆ. ಶಾಲೆಗೆ ಕಳಿಸದ ಮೊಮ್ಮಗಳಿಗೆ ಓದಿದ ನೌಕರಿದಾರ ವರನನ್ನು ತಂದು ಮದುವೆ ಮಾಡುವ ಆಸೆ ಪಡುತ್ತಾರೆ ಆದರೆ ಅವಳ ಅನಕ್ಷರತೆ ಅದಕ್ಕೆ ಅಡ್ಡಿಯಾಗುತ್ತದೆ.ರವಿಯ ಜ್ಞಾನ ಮತ್ತು ತಾರ್ಕಿಕ ಉತ್ತರಗಳುರಜೆಯ ಮೇಲೆ ಊರಿಗೆ ಬಂದ ಅದೆ ಗ್ರಾಮದ ಶಿಕ್ಷಿತ ಯುವಕ ರವಿ, ಧರ್ಮಪ್ಪನವರ ಭೇಟಿಗೆ ಬಂದಾಗ ಗೌಡರ ಈ ಮೌಡ್ಯಯುತ ನಿರ್ಧಾರವನ್ನು ಕಂಡು ಪ್ರತಿಭಟಿಸುತ್ತಾನೆ. ಆಗ ಅವರ ನಡುವೆ ನಡೆಯುವ ಸಂಭಾಷಣೆ ಮಾರ್ಮಿಕವಾಗಿದೆ. “ಶಾಲೆ ಕಲಿತರೆ ಹೆಣ್ಣುಮಕ್ಕಳು ದಾರಿ ತಪ್ಪುತ್ತಾರೆ” ಎಂಬ ಧರ್ಮಪ್ಪನವರ ಮಾತಿಗೆ ರವಿ ಕೇಳುವ ಪ್ರಶ್ನೆಗಳು ಕಣ್ಣು ತೆರಿಸುವಂತಿವೆ:

“ಜಗತ್ತೇ ಒಂದು ರಂಗಮಂಟಪ ನಾವೆಲ್ಲ ನಟರು-ಶೇಕ್ಸಪಿಯರ್”ಪಾರ್ವತಿ ಎಸ್ ಬೂದೂರು Read Post »

ಕಾವ್ಯಯಾನ

ಪ್ರಮೋದ ಜೋಶಿ ಅವರ ಕವಿತೆ “ನಾ…ನೀ”

ಕಾವ್ಯ ಸಂಗಾತಿ ಪ್ರಮೋದ ಜೋಶಿ “ನಾ…ನೀ” ಕಾಣದ ದೈವವ ನಂಬುತ ನಾನಿನ್ನೇ ಮುಚ್ಚಿದೆ ಹೊದಿಕೆ ಹೊದಿಸಿನಿನ್ನ ತತ್ವ ದೈವತ್ವ ಅರಿಯದೆಮೆರೆದೆ ನನಗೆ ನಾನೆ ಜಗದಿ ನೀ ನನ್ನೊಳಗಿನ ನಾ ನೀನುಇರುವೆ ಜೊತೆಗೆ ಜೀವಗಂಟಧೇಯಧ್ಹಾದಿಯ ಮಾರ್ಗಕೆದೀಪವಾಗುವೆ ದಾರಿಗುಂಟ ನಾ ಎಂದರೆ ನೀ ಬೈಯುವೆನೈಜ ತತ್ವವ ಅರಿಸುವೆಧಿಕ್ಕರಿಸಿ ನಡೆದರೂ ನಾ ಮುಂದೆತಪ್ಪಿನ ಶಿಕ್ಷೆಗೆ ಕಾಯುವೆ ಅರಿಸಿ ಕಲಿಸಿ ನಡೆಸಿ ಮೆರೆಸಿನನ್ನ ತನವ ಉಳಿಸುವೆಮಾನಾಪಮಾನ ಸುಖಃ ದುಃಖದೊಳಗೂಕಾಯುತ ಸದಾ ಹಿಂದಿರುವೆ ನೀನಿದ್ದರೆ ನಾ ನಾನಿದ್ದರೆ ನೀಈ ಜಡದ ದೇಹಕೆ ಚಾಲಕಅರಿಯಬೇಕು ಇದನು ಮೊದಲುಇದುವೇ ಜಗದ ತಾರ್ಕಿಕ ಸತ್ಯವೆಂದೂ ಸಾಯುವದಿಲ್ಲಾ ಸತ್ತರೂ ನಾಉಳಿಸಿಬಿಡುವೆ ನೀ ಇರದಿದ್ದರೂ ನಾನೀ ಸತ್ಯ ನಾ ಮಿಥ್ಯ ಇದೊಂದೆ ಸತ್ಯಕ್ಷಣ ಕ್ಷಣಿಸುವದಂತೂ ನಿತ್ಯ ಪ್ರತಿನಿತ್ಯ ನೀ ಇದ್ದರೆ ನಾನಿಲ್ಲಾ ನಾ ಇದ್ದರೆ ನೀನಿಲ್ಲಾತತ್ವ ಸಾರಿದವರೆಷ್ಟೊಮರತೇ ಬಾಳುತಿಹೆವು ಜಗದಿಬಯಸಿ ಬಯಸಿ ಅಷ್ಟೂ ಪ್ರಮೋದ ಜೋಶಿ

ಪ್ರಮೋದ ಜೋಶಿ ಅವರ ಕವಿತೆ “ನಾ…ನೀ” Read Post »

ಕಥಾಗುಚ್ಛ

“ಸೋತು ಗೆದ್ದ ರೈತ” ಸಣ್ಣಕಥೆ,ಶ್ರೀದೇವಿ ಮ.ಗುಮ್ಮಗೋಳ ಅವರಿಂದ

ಶ್ರೀದೇವಿ ಮ.ಗುಮ್ಮಗೋಳ “ಸೋತು ಗೆದ್ದ ರೈತ” “ಎನ್ ಸವಕಾರ ಕರಿದರಂತಲ್ಲ ಎದಕ” ಎಂದು ಕೆಳಗಿನಮನಿ ರಾಮಪ್ಪ ಬಸನ ಗೌಡರ ಮುಂದೆ ಕೈ ಕಟ್ಟಿ ನಿಂತು ಕೇಳಿದ. “ನೋಡ ರಾಮ್ಯಾ ಈ ಸರಿ ನಾನು ಜಿಲ್ಲಾ ಪಂಚಾಯತ್ ಎಲಕ್ಷನ್ ನಿಲ್ಲಾಕ್ಕತ್ತೇನಿ. ಊರಾಗಿನ ರೈತರೆಲ್ಲರಿಗೂ ಹೇಳಿ ನೀನ ಓಟ ಹಾಕಸ್ಬೇಕು. ನಿನ್ನ ರೈತ ಸಂಘದ ಮುಖಂಡ ಮಾಡ್ತೇನಿ. ಎದಕ ಹೊಲ ಮನಿ ಅಂತ ಕತ್ತಿ ದುಡದಂಗ ದುಡಿತಿ.  ನಿನ್ನ ಕೈಯಾಗಿ ನಾಕ ರೊಕ್ಕಾಡ್ತಾವು” ರಾಮಪ್ಪನಿಗೆ ನಾಲ್ಕು ಎಕರೆ ಹೊಲ ಇತ್ತು. ಮಳಿ ಇಲ್ಲದಿದ್ದರ ಬೆಳಿ ಇಲ್ಲ. ಇನ್ನ ಮಳಿ ಬಂದರ ಬೆಳಿಗೆ ಸರಿಯಾದ ಬೆಲೆ ಇಲ್ಲ. ಒಟ್ಟನಲ್ಲಿ ಇಡಿ ನಾಡಿಗೆ ಅನ್ನ ನೀಡುವ ರೈತ ಒಂದಪ್ಪತ್ತಿನ ಕೂಳಿಗೂ ಪರದಾಡುವ ಸ್ಥಿತಿ. ರಾಮಪ್ಪನು ಯೊಚಿಸಿದ “ಭೂಮಿ ತಾಯವ್ವನ ನೆಚ್ಚಕೊಂಡು ಎಷ್ಟ ವರಷಾತು ದುಡಿಯಾಕ್ಕತು ಇನ್ನು ಎಲ್ಲ ಅದೇನಿ ಅಲ್ಲೆ ಅದೇನಿ. ಅದ ಮುರಕಲು ಮನಿ.. ಅದೇ ಹಳೆ ಜೋಡತ್ತುಗಳು…. ನೋಡ.. ಗೌಡರು ಪಂಚಾಯತ್ ಎಲಕ್ಷನ್ ಗೆದ್ದು ಹೋದ ಸಾರಿ ಟ್ರಾಕ್ಟರ್ ತುಗೊಂಡ್ರು ಹೊಸ ಮನಿ ಕಟ್ಟಿಸಿದ್ರು…. ಬರಿ ಹೊಲ ಅಷ್ಟಲ್ಲದ… ಹಿಂಗ ಬ್ಯಾರೆ ಕೆಲಸ ಹಿಡದಾರಂತ…. ಜೀವನದಾಗ ಮುಂದ ಬಂದಾರು. ತಾನು ಇವರ ಹೇಳದಂಗ ಇವರ ಹಿಂದ ಇವರ ದಾರಿಯೊಳಗ ಹೋದರ… ಮುಂದೊಂದು ದಿನಾ ನಾನು ರೈತ ಮುಖಂಡಾಗಿ ಎಲೆಕ್ಷನ ನಿಂತು ಗೆದ್ದ ಬಂದರ… ನನ್ನ ಬದುಕು ಬಂಗಾರ ಆಗ್ತೇತಿ” ಎಂದುಕೊಂಡ. ಗೌಡ ಹೋದ ಸಾರಿ ಪಂಚಾಯತ ಚೇರಮನ್ ಆಗಿ ಸರಕಾರದಿಂದ ಹಳ್ಳಿಗಳಿಗೆ ಕೊಡುವ ವಿವಿಧ ಫಂಡಗಳಲ್ಲಿ ಸಾಕಷ್ಟು ದುಡ್ಡು ಹೊಡೆದಿದ್ದ. ಮುಂದ ಇನ್ನೂ ಜಿಲ್ಲಾ ಪಂಚಾಯತ ಚುನಾವಣೆ ಯಲ್ಲಿ ಗೆದ್ದು ಮುಂದ ವಿಧಾನ ಸೌಧದಾಗ ಕುಳಿತುಕೊ ಮಹಾನ್ ಆಸೆ ಇಟ್ಟಕೊಂಡಿದ್ದ. ತನ್ನ ಈ ಆಸೆ ಇಡೇರಿಸಿಕೊಳ್ಳಲು ರಾಮಪ್ಪನನ್ನ ಉಪಯೋಗಿಸಿಕೊಂಡ.  ರಾಮಪ್ಪ ಹಳ್ಳಿಯಲ್ಲಿ ಎಲ್ಲರೊಂದಿಗೆ ಬೆರೆತು ಒಳ್ಳೆ ಸಂಬಂಧ ಇತ್ತು. ಬಹಳ ಸಂಬಾವಿತ ಮತ್ತು ಮುಗ್ದನಾಗಿದ್ದ.  ಯಾರ ಜೊತೆಗೂ ಜಗಳ ಆಡದ ಊರ ಜನರ ಮೆಚ್ಚುಗೆ ಗಳಿಸಿದ್ದ. ಎಪ್ಪತ್ತು ದಾಟಿದ ರಾಮಪ್ಪನಿಗೆ ಇದ್ದದ್ದು ಎರಡು ಹೆಣ್ಣು ಮಕ್ಕಳು ಅವರನ್ನು ಮದುವೆ ಮಾಡಿ ಕೊಟ್ಟಿದ್ದ. ಊರಿನಲ್ಲಿ ಕೆಲವೊಂದು ಸಮಸ್ಯೆ ಬಂದಾಗ ರಾಮಪ್ಪ ಯಾರಿಗೂ ನೊವಾಗದ ಹಾಗೆ ಬಗೆಹರಿಸಿದ್ದ.   ರಾಮಪ್ಪ ಗೌಡನ ಎಲೆಕ್ಷನ್ ಪ್ರಚಾರಕ್ಕೆ ಅವನ ಹಿಂದೆ ನಿಂತ‌.  ಊರೊಳಗ ಎಲ್ಲ ಮನಿ ಮನಿಗೂ ತೆರಳಿ “ನೋಡಪಾ ಗೌಡರಿಗೆ ಓಟ ಹಾಕ್ಬೇಕು. ನಮ್ಮ ಗೌಡರು ರೈತರಿಗೆ ಬಹಳಷ್ಟು ಅನುಕೂಲ ಆಗಾಕ ಸರಕಾರಕ್ಕ ಕೇಳಕೊತಾರು.” ಅಂದ ಗೌಡ ” ನೊಡ್ರಪ್ಪಾ ಇನ್ನ ಮುಂದ ಸಾಲ ಮಾಡಿ ನೇಣ ಹಾಕೊ ಪರಿಸ್ಥಿತಿ ಇಲ್ಲ. ನಿಮ್ಮ ಸಾಲ ಮನ್ನಾ ಆಗುಂಗ ಮಾಡ್ತೇನಿ. ಬೆಳೆಗೆ ಚುಲೊ ರೊಕ್ಕ ಬರುವ ವ್ಯವಸ್ಥಾ ಮಾಡ್ತೇನಿ. ಇನ್ನ ಮುಂದ ರೈತರ ಕಷ್ಟ ತೀರತು ಅಂತ ತೀಳಕೊರಿ” ಅಂದ ಬಸನಗೌಡನಿಗೆ ರಾಮಪ್ಪ ಜೊತೆ ಇದ್ದದ್ದರಿಂದ ಜನ ಗೌಡನಿಗೆ ಓಟ ಹಾಕಿದರು. ಗೌಡ ಗೆದ್ದು ಬಂದ. ಬಸನ ಗೌಡ  ಓಡಾಡಿದ್ದಕ್ಕಾಗಿ ರಾಮಪ್ಪನ ಕೈಯಲ್ಲಿ ಒಂದಿಷ್ಟು ದುಟ್ಟು ಕೊಟ್ಟ. ಅಷ್ಟು ದುಡ್ಡನ್ನು ರಾಮಪ್ಪ ತನ್ನ ಜೀವಮಾನದಲ್ಲೆ ನೋಡಿರಲಿಲ್ಲ. ಅದರಲ್ಲಿನ ದುಡ್ಡಿನಿಂದ ತಾನು ಮಾಡಿದ ಸಾಲವನ್ನು ತೀರಿಸಿದ.  ಆದರೆ ವಾಸ್ತವವಾಗಿ ರಾಮಪ್ಪ ತನ್ನನ್ನು ಮತ್ತು ತನ್ನ ಜನರನ್ನ ಓಟಿಗೆ ಮಾರಿದೆ ಎನ್ನುವ ಆಲೊಚನೆಯಾಗಲಿ ಬರಲೆ ಇಲ್ಲಾ.  ರೈತ ದೇಶದ ಬೆನ್ನಲಬು ಅಂತಾರೆ. ಆದರೆ ಬಸನಗೌಡಾ ಅದೇ ಬೆನ್ನಲಬನ್ನು ತನ್ನ ಯಶಸ್ಸಿನ ಮೆಟ್ಟಿಲಾಗಿ ಮಾಡಿಕೊಂಡ. ಆ ಮೀಟಿಂಗ ಈ ಮೀಟಿಂಗು ಎನ್ನುತ ಬೆಂಗಳೂರಿಗೆ ಹೋಗತೊಡಗಿದವನು ಬರಬರುತ್ತ ಬೆಂಗಳೂರಿನಲ್ಲೆ ಇರತೊಡಗಿದ. ಸಚಿವನಾಗಬೇಕೆನ್ನುವದಕ್ಕಾಗಿ ಮುಂದಿನ ಪ್ಲಾನ್ ಹಾಕ ತೊಡಗಿದ. ರಾಮಪ್ಪನನ್ನು, ಓಟ ಗಿಟ್ಟಿಸಿಕೊಂಡ ಊರಿನ ಜನರನ್ನು ಮರತೆ ಬಿಟ್ಟ. ರಾಮಪ್ಪ ತಾನು ರೈತ ಮುಖಂಡನಾಗ್ತೇನಿ ಮುಂದ ಪಂಚಾಯತ್ ಚೇರಮನ್ ಆಗ್ತೇನಿ ಅಂತ ಕನಸು ಕಂಡು ಗೌಡನ ಹಿಂದೆ ಸುತ್ತಿದವನಿಗೆ ಬರಬರುತ್ತ ವಾಸ್ತವ ಅರ್ಥವಾಗತೊಡಗಿತು. ಹೆಂಡತಿ “ಎದಕ ಬೇಕಾಗಿತ್ತು  ನಿಮಗ ಆ ಗೌಡನ ಹಿಂದ ಸುತ್ತದು…. ಒಂದಿಷ್ಟ ದುಡ್ಡ ಕೊಟ್ಟು ಕೈತೊಳಕೊಂಡ…. ಸಾಲಾ ಏನೊ.. ಹರದರಿ ಆದರ…. ಹೊಲದಾಗ ನೀವಲ್ಲದ ಬಿತ್ತಿಗಿ ಕೂರಗಿ ಒಂದು ಇಲ್ಲದ ಹೊಲಾ ಪಾಳ ಬಿದ್ದೈತಿ. ನಾನಾದರೂ ಹೊಲದಾಗ ಏನಾದರೂ ಬಿತ್ತತೇನಿ ಅಂದರ… ಎದಕ ಬೇಕಿನ್ನ ಹೊಲ… ಗೌಡರು ಮುಂದ ಬಾಳು ಬಂಗಾರಕ್ತೈತಿ ಅಂದಾರು ಅಂತ ಹೇಳದಿ….. ಎಲ್ಲಿ ಬಂಗಾರ…. ಬರಿ ಅಂಗಾರ ತಿನ್ನುದಾತು….” ಎಂದು ಗಂಡನನ್ನ ಬೈದಳು. ಹೌದು ಪಾಪ ಮುಗ್ದನಾದ ರಾಮಪ್ಪ ಗೌಡನನ್ನ ನಂಬಿ ಹಾಳಾದ. ಬೆಳಿ ಇಲ್ಲದ ಭೂಮಿ ಹಾಳಾತು. ರಾಮಪ್ಪ ನೊಂದಕೊಂಡು ಅಂದು ಹೊಲಕ ಹೋಗಿ ನೋಡಿದರ ಬೂಮಿಯೊಳಗ ಎಲ್ಲಾ ಕಡೆ ಕಸಾ ಬೆಳದಿತ್ತು. ಎತ್ತುಗಳಿಗೆ ಸರಿಯಾಗಿ ಮೇವು ಇಲ್ಲದ ಸಣಕಲಾಗಿದ್ದವು. ನೋಡಿ ಮರಾಮರಾ ಅಂತ ಮರಗಿದ. ತಾನು ಮಾಡಿದ ತಪ್ಪಿಗೆ ಪಶ್ಚಾತಾಪ ಪಟ್ಟ. ರಾಮಪ್ಪ ತನ್ನ ತೆಲೆಯೊಳಗ ಗೌಡ ಬೆಳೆದ ಕಸಾ ಕಿತ್ತೊಗದ‌. ಕಳೆದುಕೊಂಡ ಮಗಾ ತನ್ನ ತಾಯಿಯ ಮಡಿಲನ್ನು ಸೇರಿದಾಗ ಬಿಕ್ಕಿ ಬಿಕ್ಕಿ ಅಳುವಂತೆ ಅಂದು ಭೂತಾಯಿಯ ಮಣ್ಣನ್ನ ತನ್ನ ಕೈ ಮುಷ್ಟಿಯಲ್ಲಿ ಹಿಡಿದು ಬಿಕ್ಕಿ ಬಿಕ್ಕಿ ಅತ್ತಾ. ಮನಸಿಗೆ ಪಕ್ಕದಲ್ಲಿರುವ ಗಿಡಕ್ಕೆ ಹಗ್ಗದಿಂದ ನೇಣುಹಾಕಿಕೊಳ್ಳಬೇಕೆನಿಸಿತು.  ಆಕಾಶದ ಕಡೆ ಮುಖ ಮಾಡಿದಾಗ. ಬದುಕು ವಿಶಾಲವಾಗೈತಿ. ಬದುಕು ಇಷ್ಟಕ್ಕೆ ಮುಗದಿಲ್ಲ ಎಂದು ತನ್ನಲ್ಲೆ ಸಮಾದಾನ ಪಟ್ಟುಕೊಂಡ. ಒಂದು ದೃಡ ನಿರ್ದಾರಕ್ಕೆ ಬಂದವನಂತೆ ಎದ್ದುನಿಂತ ಮುಂದೆಂದು ಎಡವದ ಹಾಗೆ ಎದ್ದುನಿಂತ. ಕೈಯಲ್ಲಿ ಕುಡುಗೋಲು ಹಿಡಿದು ಕಸ ಕೀಳತೊಡಗಿದ. ‘ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂದುವಿಲ್ಲ’ ಎನ್ನುವಂತೆ ತನ್ನ ಭೂತಾಯಿಯನ್ನು ಬಿಟ್ಟು ಒಂದು ಕ್ಷಣ ಅಗಲದಂತೆ ಮೈಮುರಿದು ದುಡಿಯತೊಡಗಿದ.  ಒಣಗಿದ್ದ ನೆಲವನ್ನು ತನ್ನ ಉಸಿರಿನಿಂದ ಹಸುರಾಗಿಸಿದ.  ಹಟಕ್ಕೆ ಬಿದ್ದವನಂತೆ ತನಗೀರುವ ನಾಲ್ಕೆ ನಾಲ್ಕು ಎಕರೆಯ ಬರಾಡಾದ ಭೂಮಿಯಲ್ಲಿ ಬಂಗಾರದ ಬೆಳೆ ತೆಗೆದ. ಸುತ್ತ ಮುತ್ತ ಹಳ್ಳಿಯಲ್ಲಿ ಜನ ಇದ್ದರೆ ರಾಮಪ್ಪನಂತ ರೈತ ಇರಬೇಕು ಎಂದು ಕೊಂಡಾಡ ತೋಡಗಿದರು. ತನ್ನ ಸಾಧನೆಯಿಂದ  ಉತ್ತಮ ರೈತ ಎಂಬ ಪ್ರಶಸ್ತಿ ಪಡೆದ.    ಶ್ರೀದೇವಿ. ಮ. ಗುಮ್ಮಗೋಳ

“ಸೋತು ಗೆದ್ದ ರೈತ” ಸಣ್ಣಕಥೆ,ಶ್ರೀದೇವಿ ಮ.ಗುಮ್ಮಗೋಳ ಅವರಿಂದ Read Post »

ಕಾವ್ಯಯಾನ

ಡಾ ಗೀತಾ ದಾನಶೆಟ್ಟಿ ಬಾಗಲಕೋಟೆ ಅವರ ಕವಿತೆ”ಡಂಬಾಚಾರಿಗಳು”

ಕಾವ್ಯ ಸಂಗಾತಿ ಡಾ ಗೀತಾ ದಾನಶೆಟ್ಟಿ ಬಾಗಲಕೋಟೆ “ಡಂಬಾಚಾರಿಗಳು” ಧರ್ಮ- ದೇವರ ಹುಟ್ಟಿಸಿಸುಳ್ಳು ಪವಾಡ ಸೃಷ್ಟಿಸಿಮುಗ್ಧ ಜನರನು ವಂಚಿಸಿಮೋಸ ಮಾಡಿ ದುಡ್ಡು ಗಳಿಸಿಮಡೆ ಎಡೆ ಸ್ನಾನದಹೆಸರಿನಲ್ಲಿ ಎಂಜಲಲೆಯಮೇಲೆ ಹೊರಳಾಡಿಸಿಮಂಡೆ ಬೋಳಿಸುವಡಂಬಾಚಾರಿಗಳುಮೂಢಾಚರಣೆಗಳ ದಾಸರಾಗಿಸಿಜ್ಯೋತಿಷ್ಯ- ಭವಿಷ್ಯ ಕೇಳಿಮಾಟ-ಮಂತ್ರವ ಮಾಡಿಸಿಹೋಮ ಹವನದಿಬೇಯಿಸಿವಾಸ್ತುವಿನ ಹೆಸರಿನಲ್ಲಿದಿಕ್ಕು ಬದಲಿಸಿಕಂದಾಚಾರ- ವಾಮಾಚಾರಕ್ಕೆಕಟ್ಟು ಬಿದ್ದುಅರ್ಥವಿಲ್ಲದ ಆಡಂಬರದಆಚರಣೆ ಮಾಡಿವ್ಯರ್ಥ ಸಮಯ ಕಳೆಯುವ ಜನರುಮೂಢಾಚರಣೆಯ ಗೂಡಿನಲ್ಲಿಬೀಡು ಬಿಟ್ಟಿರುವ ಜಾಡ್ಯಗಳಿಂದಹೊರ ಬರುವುದು ಯಾವಾಗ ?ಕ್ರಾಂತಿ ಕಹಳೆ ಊದುವುದಾವಾಗಮನುಜ ಪಥದ ದಾರಿವಿಶ್ವ ಪಥವ ಸಾರಿ ಡಾ ಗೀತಾ ದಾನಶೆಟ್ಟಿ ಬಾಗಲಕೋಟೆ

ಡಾ ಗೀತಾ ದಾನಶೆಟ್ಟಿ ಬಾಗಲಕೋಟೆ ಅವರ ಕವಿತೆ”ಡಂಬಾಚಾರಿಗಳು” Read Post »

You cannot copy content of this page

Scroll to Top