ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ರತ್ನರಾಯಮಲ್ಲ ಅವರ‌ ಗಜಲ್

ಕಾವ್ಯ ಸಂಗಾತಿ ರತ್ನರಾಯಮಲ್ಲ ಗಜಲ್ ಸರಳವೆಂತಾರೆ ಬದುಕು ಸರಳವಲ್ಲ ನೋಡಬೇಕು ಸರಳವಾಗಿಯೋಚನೆಗಳಿಗೆ ಕೊನೆಯಿಲ್ಲ ವಿರಾಮ ನೀಡಬೇಕು ಸರಳವಾಗಿ ಸುಗಮವಾಗದು ಬುದ್ಧಿವಂತಿಕೆ ಹೃದಯವಂತಿಕೆಗಳ ಸಂಗಮವಾಸ್ತವದಲಿ ಕನಸುಗಳಿಗೆ ರಾಗ ಕಟ್ಟಿ ಹಾಡಬೇಕು ಸರಳವಾಗಿ ಅವರವರ ವಿಷಯದಲಿ ಸಾಕಷ್ಟಿದೆ ನೋಡಲು ನಮ್ಮ ವಿಷಯದಲಿಇತರರಿಗಿಂತ ಮೊದಲು ನಮ್ಮನ್ನು ನಾವು ಕಾಡಬೇಕು ಸರಳವಾಗಿ ಜೀವನ ಸಾಕೆನಿಸುವುದಕಿಂತ ಮುಂಚೆ ಬೇಕಾದಂತೆ ಬಾಳಬೇಕುಆಸೆಗಳು ಸಾಯಿಸುವ ಮುಂಚೆ ಗೋರಿ ತೋಡಬೇಕು ಸರಳವಾಗಿ ಗೊಂದಲಗಳಿರುವುದು ದುನಿಯಾದಲಿ ಅಲ್ಲ ನಮ್ಮ ಚಿಂತನೆಗಳಲಿಮಲ್ಲಿಗೆಯ ಸುಮದಂತೆ ವಿಚಾರಗಳನು ಹೂಡಬೇಕು ಸರಳವಾಗಿ ರತ್ನರಾಯಮಲ್ಲ

ರತ್ನರಾಯಮಲ್ಲ ಅವರ‌ ಗಜಲ್ Read Post »

ಕಾವ್ಯಯಾನ

ಡಾ ವಿಜಯಲಕ್ಷ್ಮಿ ಪುಟ್ಟಿ ಅವರ ಕವಿತೆ “ಬಚ್ಚಿಟ್ಟುಕೋ”

ಕಾವ್ಯ ಸಂಗಾತಿ ಡಾ ವಿಜಯಲಕ್ಷ್ಮಿ ಪುಟ್ಟಿ “ಬಚ್ಚಿಟ್ಟುಕೋ” ಎದೆಯೊಳಗೆ ನನ್ನ ಬಚ್ಚಿಟ್ಟುಕೊ,ಉಸಿರ ಪಿಸುಮಾತ ಹಾಗೆ,ಕಣ್ಣಿನಲಿ ನನ್ನ ಕಾಯ್ದಿರಿಸಿಕೊ, ರೆಪ್ಪೆಗಳ ಕಾವಲ ಹಾಗೆ ​ನನ್ನೆಲ್ಲ ನೋವುಗಳ ಮರೆಸಿಬಿಡು, ನಿನ್ನೊಂದು ಕಿರುನಗೆಯಲಿ,ಮತ್ತೆ ಹುಟ್ಟಿ ಬರುವೆ ನಾನು, ಮುಂಜಾವಿನ ಹೊಸ ಕಿರಣದ ಹಾಗೆ ​ಹೃದಯದ ಈ ಬಡಿತದಲಿ ಕೇಳಿಸಲಿ ಬರೀ ನಿನ್ನದೇ ಹೆಸರುಜೊತೆಯಾಗಿ ನಡೆದು ಬರುವೆ ನಾನು, ನಿನ್ನ ನೆರಳಿನ ಹಾಗೆ ​ಜಗದ ಈ ಜಂಜಾಟದಲಿ ನಾ ಕಳೆದು ಹೋದರೂ ಚಿಂತೆಯಿಲ್ಲಮರಳಿ ಸೇರುವೆ ನಿನ್ನ ಮಡಿಲನು, ಸಂಜೆಯ ಹಕ್ಕಿಯ ಹಾಗೆ ​ ಬರೆಯುವೆ ನಿನ್ನ  ಪ್ರೀತಿಯ ಹೆಸರ  ಪುಟ ಪುಟದ ಸಾಲಿನಲಿಅಳಿಯದಂತೆ ಉಳಿದುಬಿಡು ನೀನು, ಕವಿತೆಯ ಮೌನದ ಹಾಗೆ … ಡಾ ವಿಜಯಲಕ್ಷ್ಮಿ ಪುಟ್ಟಿ

ಡಾ ವಿಜಯಲಕ್ಷ್ಮಿ ಪುಟ್ಟಿ ಅವರ ಕವಿತೆ “ಬಚ್ಚಿಟ್ಟುಕೋ” Read Post »

ಅಂಕಣ ಸಂಗಾತಿ, ಭಾರತದಮಹಿಳಾ ಮುಖ್ಯಮಂತ್ರಿಗಳು

ಅಂಕಣ ಸಂಗಾತಿ
ಭಾರತದಮಹಿಳಾ ಮುಖ್ಯಮಂತ್ರಿಗಳು
ಸುರೇಖಾ ರಾಠೋಡ್

ಬಿಹಾರದ ಮೊದಲ ಮಹಿಳಾ ಮುಖ್ಯಮಂತ್ರಿ ರಾಬ್ರಿ ದೇವಿ
(ಅಧಿಕಾರ ಅವಧಿ: ೭ವರ್ಷ ೧೯೦ ದಿನಗಳು)

Read Post »

ಇತರೆ

ನಮ್ಮನ್ನು ಅಗಲಿದ ಲೇಖಕಿ ಆಶಾ ರಘು ಅವರಿಗೆ ಸಂಗಾತಿಯ ಶ್ರದ್ದಾಂಜಲಿಗಳು

ನಮ್ಮನ್ನು ಅಗಲಿದ ಲೇಖಕಿ ಆಶಾ ರಘು ಅವರಿಗೆ ಸಂಗಾತಿಯ ಶ್ರದ್ದಾಂಜಲಿಗಳು ಸಂಗಾತಿಗೆ ಹೆಚ್ಚು ಬರೆಯದೇ ಹೋದರು ತಮ್ಮ ಬರಹಗಳಬಗ್ಗೆತಮ್ಮ ಪುಸ್ತಕಗಳ ಬಗ್ಗೆ ಜೊತೆಗೆ ತಮಗಿಷ್ಟವಾದ ಸಾಹಿತ್ಯ ಚಟುವಟಿಕೆಗಳ ಬ ಗ್ಗೆ ನಮ್ಮೊಂದಿಗೆ ಸದಾ ಮಾಹಿತಿ ಹಂಚಿಕೊಳ್ಳುತ್ತಿದ್ಷದರುಈಗವರು ನಮ್ಮೊಂದಿಗಿಲ್ಲ ಎನ್ನುವುದನ್ನು ನಮಗೆ ನಂಬಲಾಗುತ್ತಿಲ್ಲ. ಅವರ ಆತ್ಮಕ್ಕೆ ಶಾಂತಿದೊರೆಯಲೆಂದು ಸಂಗಾತಿ ಪತ್ರಿಕೆ ಪ್ರಾರ್ಥಿಸುತ್ತದೆ ಸಂಪಾದಕೀಯ ಮಂಡಳಿ,ಸಂಗಾತಿ ಸಾಹಿತ್ಯ ಪತ್ರಿಕೆ

ನಮ್ಮನ್ನು ಅಗಲಿದ ಲೇಖಕಿ ಆಶಾ ರಘು ಅವರಿಗೆ ಸಂಗಾತಿಯ ಶ್ರದ್ದಾಂಜಲಿಗಳು Read Post »

ಇತರೆ, ಜೀವನ

“ಮನೋಬಲ ಮುಗಿಲೆತ್ತರಕ್ಕೇರಿಸಿದರೆ ದುರಂತದ ನೋವೂ ನಗಣ್ಯ!!” ಜಯಶ್ರೀ.ಜೆ.ಅಬ್ಬಿಗೇರಿ

ಬದುಕಿನ ಸಂಗಾತಿ ಜಯಶ್ರೀ.ಜೆ.ಅಬ್ಬಿಗೇರಿ “ಮನೋಬಲ ಮುಗಿಲೆತ್ತರಕ್ಕೇರಿಸಿದರೆ ದುರಂತದ ನೋವೂ ನಗಣ್ಯ!!” ಸುತ್ತು ಬಳಸಿ ಮತ್ತೆ ಮತ್ತೆ ಸಮಸ್ಯೆಗಳೆಲ್ಲ ನನ್ನ ಪಾಲಿಗೆ ಏಕೆ ಬರುತ್ತಿವೆ? ಉಳಿದವರೆಲ್ಲ ಹಾಯಾಗಿದ್ದಾರೆ ನನಗೆ ಮಾತ್ರ ಹೀಗಾಗುತ್ತಿದೆ. ಎಂದು ಬಹಳಷ್ಟು ಸಲ ಅಂದುಕೊಳ್ಳುತ್ತೇವೆ.. ಪ್ರೀತಿ ಪಾತ್ರರು ಮರಣಿಸಿದಾಗ, ಬಹಳಷ್ಟು ಇಷ್ಟ ಪಟ್ಟದ್ದು ಸಿಗದೇ ಇದ್ದಾಗ, ಅಂದುಕೊoಡದ್ದು ಅಂದುಕೊoಡoತೆ ಆಗದೇ ಇದ್ದಾಗ ನನ್ನ ಬದುಕಿನಲ್ಲಿ ದುರಂತಗಳ ಸರಮಾಲೆ ಬೆನ್ನು ಬಿಡದ ಬೇತಾಳನಂತೆ ಬೆನ್ನು ಹತ್ತಿವೆ. ನನಗೇ ಏಕೆ ಹೀಗೆ ಆಗುತ್ತೆ? ಎನ್ನುವ ಪ್ರಶ್ನೆ ತಲೆ ಹೊಕ್ಕು ಕಟ್ಟಿಗೆ ಹುಳು ಕೊರೆಯುವಂತೆ ಕೊರೆಯುತ್ತದೆ. ಪದೇ ಪದೇ ತೊಂದರೆ ಕೊಡುವ, ನಮ್ಮನ್ನು ಏಳ್ಗೆ ಆಗದಂತೆ ತಡೆಯುವ ಈ ಪ್ರಶ್ನೆಯಿಂದ ಬಚಾವಾಗುವುದು ಹೇಗೆ? ಎಂದು ಯೋಚಿಸುತ್ತೇವೆ. ಅಲ್ಲವೇ? ಈ ಕಾಡುವ ಯೋಚನೆಗೆ ಪೂರ್ಣ ವಿರಾಮ ಹಾಕಲು ಸಹಕಾರಿಯಾಗುವ ಅಂಶಗಳತ್ತ ಒಮ್ಮೆ ಗಮನ ಹರಿಸಿ.ಸುತ್ತ ಕಣ್ಣು ಹರಿಸಿ ದುರಂತಗಳು ಸಂಭವಿಸಿದಾಗ, ವಿಷಮ ಗಳಿಗೆಯಲ್ಲಿ ಭವಿಷ್ಯದ ದಾರಿಯೇ ಕಾಣದೇ ಕತ್ತಲೆಯಲ್ಲಿ ಕುಳಿತಾಗ ನನಗೇಕೆ ಹೀಗೆ? ಎನ್ನುವ ಮನಸ್ಥಿತಿಯಿಂದ ಹೊರಬಂದು ನಿಮ್ಮಸುತ್ತ ಮುತ್ತಲಜನ-ಜೀವನದೆಡೆಗೆ ಕಣ್ಣು ಹರಿಸಿ ಇತರರು ನಿಮ್ಮಂತೆ ಸಮಸ್ಯೆಯಲ್ಲಿದ್ದರೂ ಅದನ್ನು ದೊಡ್ಡದಾಗಿಸಿದೇ ನಗುವ ಮೊಗವ ಹೊತ್ತು ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿರುತ್ತಾರೆ. ಆದ ನೋವಿನ ಕಡೆ ಹೆಚ್ಚು ಗಮನ ಕೊಡದೇ ನೋವುಂಡರೂ ನಗುವ ಪ್ರಯತ್ನ ಮಾಡುತ್ತಾರೆ. ಇತರರ ದುಃಖಕ್ಕೆ ಕಿವಿಗೊಡುವದರಲ್ಲಿ ಸಂತೃಪ್ತಿ ಕಾಣುತ್ತಾರೆ. ‘ನಾನು ಬರಿಗಾಲಲ್ಲಿ ನಡೆಯಬೇಕಿದೆ ನನ್ನ ಬಳಿ ಪಾದರಕ್ಷೆಗಳಿಲ್ಲ ಎಂದು ಕಣ್ಣೀರಿಡುತ್ತಿರುವಾಗ ಕಾಲಿಲ್ಲದವನನ್ನು ಕಂಡೆ ನನ್ನ ನೋವು ನೋವೇ ಅಲ್ಲ ಅನಿಸಿತು. ದೇವರಿಗೆ ಕೃತಜ್ಞನಾಗಿರಬೇಕು ನಾನು.’ ಎಂದೊಮ್ಮೆ ವಿಲಿಯಮ್ ಶೇಕ್ಸ್ಪಿಯರ್ ಹೇಳಿದ ಮಾತು ಎಷ್ಟೊಂದು ಮಾರ್ಮಿಕವಾಗಿದೆ. ದುರಂತವೆoದರೆ ನಾವು ನಮ್ಮ ಸುತ್ತ ರೇಷ್ಮೆ ಹುಳುವಿನಂತೆ  ಗೂಡು ಕಟ್ಟಿಕೊಂಡು ಯಾರೋ ನಮ್ಮನ್ನು ಮೇಲೇಳದಂತೆ ತಡೆಯುತ್ತಿದ್ದಾರೆ ಎಂದು ಗೋಳಿಡುವುದುಕಣ್ಣು ಹೊರನೋಟಗಳನ್ನು ನೋಡಲಿ.  ಅಂತರಗಣ್ಣಿನಿoದ ಪರಾಮರ್ಶಿಸಲಿ. ಆಗ ನಿಮಗೆ ಬಂದ ಸಂಕಟ ಏನೂ ಅಲ್ಲವೇ ಅಲ್ಲ ನನಗಿಂತ ಕಷ್ಟದಲ್ಲಿರುವವರು ತುಂಬಾ ಜನರಿದ್ದಾರೆ. ನನಗೆ ದೇವರು  ಅಂಥ ದುಸ್ಥಿತಿ ಬರದಂತೆ ಕಾಪಾಡಿದ್ದಾನೆ ಎಂದೆನಿಸುವುದು.ದುಃಖದಿoದ ಹೊರಬಂದು ಅದೇ ಅನುಭವ ಪಡೆದ ಇತರರ ಬಗ್ಗೆ ಯೋಚಿಸಿ. ಅವರೊಂದಿಗೆ ಮಾತನಾಡಿ ಆಗ ಅವರ ಬಗೆಗೆ ನಿಮಗೆ ಅನುಕಂಪ ತಾದ್ಯಾತ್ಮತೆ ಮೂಡುತ್ತದೆ.ನೀವಿನ್ನೂ ಅನುಕೂಲಕರ ಪರಿಸ್ಥಿತಿಯಲ್ಲಿರುವಿರಿ ಎಂದೆನ್ನಿಸುವುದು.   ದುರ್ಘಟನೆ ಆಹ್ವಾನಿಸದಿರಿ ಎಲ್ಲ ದುರಂತಗಳು  ಒಮ್ಮಿಂದೊಮ್ಮೆಲೇ ಧುತ್ತನೇ ಘಟಿಸುವುದಿಲ್ಲ. ಕೆಲವೊಂದು ನಮ್ಮ ಸ್ವಯಂ ಕೃತ ತಪ್ಪುಗಳಿಂದ ಉದಾಸೀನತೆಯಿಂದ ಘಟಿಸುತ್ತವೆ. ಅವುಗಳನ್ನು ನಾವೇ ಕೈ ಹಿಡಿದು ತಂದು ನಮ್ಮ ಬಾಳಲ್ಲಿ ಮಣೆ ಹಾಕಿ ಕೂಡ್ರಿಸಿ ಕೊಳ್ಳುತ್ತೇವೆ.ನಮಗರಿವಿಲ್ಲದಂತೆ ಗೆದ್ದಲು ಹುಳುವಿನಂತೆ ನಮ್ಮ ಅಸ್ತಿತ್ವವನ್ನು ಇಲ್ಲದಂತೆ ಮಾಡಲು ದಿನವೂ ಕಾರ್ಯನಿರತಆಗಿರುತ್ತವೆ ತುರ್ತು ಜರೂರು ಮಹತ್ವದ ವಿಷಯಗಳನ್ನು ಪರಿಗಣಿಸಿ ಕ್ರಿಯಾಶೀಲರಾದರೆ, ನಡೆಯುವ ದುರ್ಘಟನೆಗಳ ಅವಕಾಶದ ಬಾಗಿಲು ಮುಚ್ಚಿದರೆ ಸದಾ ಕಾಲಕ್ಕೂ ಮುಚ್ಚಿ ಹೋಗುತ್ತವೆ. ಇನ್ನು ನಿಮ್ಮ ನಿಯಂತ್ರಣದಾಚೆಗೆ ನಡೆವ ದುರಂತಗಳಿಗೆ ಪ್ರತಿಯಾಗಿ  ಸಹನ ಶಕ್ತಿಯಿಂದ ದಿಟ್ಟತನದಿಂದ ಪ್ರತಿಕ್ರಿಯಿಸಿದರೆ ಸಮಸ್ಯೆ ಉಲ್ಬಣಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗುವುದಿಲ್ಲ.ಏಳು ಬಾರಿ ಟೂರ್ ಡೇ ಫ್ರಾನ್ಸ್ ಗೆದ್ದ  ಲ್ಯಾನ್ಸ್ ಆರ್ಮಸ್ಟಾ ಹೀಗೆ ಹೇಳುತ್ತಾರೆ.‘ಬಹಳಷ್ಟು ಜನರು ಕೊನೆಗೆ ಇಟ್ಟುಕೊಳ್ಳುವ ಶೇಕಡಾ ಒಂದು ಮೀಸಲು ಶಕ್ತಿಯು ಕ್ರೀಡಾಪಟು ಬಳಸಲು ದಿಟ್ಟತನ ತೋರುವ ಹೆಚ್ಚುವರಿ ಶಕ್ತಿಯಾಗಿದೆ.’ಈ ಹೇಳಿಕೆಯಂತೆ  ನಮ್ಮ ದಿಟ್ಟತನದಿಂದ ತೋರುವ ಹೆಚ್ಚುವರಿ ಶಕ್ತಿಯ ಸದುಪಯೋಗಪಡಿಸಿಕೊಳ್ಳಿ. ಸಹಜವಾಗಿರಿ ಸದಾ ಇತರರೊಂದಿಗೆ ಹೋಲಿಸಿಕೊಳ್ಳುವುದನ್ನು ಕೈ ಬಿಡಬೇಕು. ಈ ಹೋಲಿಕೆ ಇತರರಿಗಿಂತ ಕೆಳ ಮಟ್ಟದಲ್ಲಿದ್ದೇನೆ ಎಂದು ನಿತ್ರಾಣಗೊಳಿಸುವ ಕೀಳರಿಮೆ ಇಲ್ಲವೇ ಮೇಲರಿಮೆಯ ಅಹಂಕಾರವನ್ನು ಹುಟ್ಟು ಹಾಕುತ್ತದೆ. ನಿಮ್ಮ ನಿಜ ಸ್ವರೂಪ ನೀಡದ ಕಲ್ಪಿತ ಭ್ರಮಾಲೋಕವು ಇಲ್ಲದ ತೊಂದರೆಗಳನ್ನು ತಂದು ನಿಮ್ಮ ಬದುಕಿನ ಮಡಿಲಲ್ಲಿ ಚೆಲ್ಲುತ್ತದೆ. ನಿಜದಲ್ಲಿ ತಾನು ತಾನಾಗದ ಹುಸಿ ಲೋಕದಲ್ಲಿ ಸಮಸ್ಯೆಗಳ ಜಾಲವನ್ನು ಮೈ ಮೇಲೆ ಎಳೆದುಕೊಳ್ಳುವಂತೆ ಮಾಡುತ್ತದೆ. ಕೆಲವೊಮ್ಮೆ ನುಡಿಯಲ್ಲಿ ಎಚ್ಚೆತ್ತುಕೊಳ್ಳುತ್ತೇವೆ. ನಡೆಯಲ್ಲಿ ತಪ್ಪುತ್ತೇವೆ. ಜ್ಞಾನ ಕ್ರಿಯೆಗಳು ಸಮನಾಗಿರಿಸಿ ನಡೆಯುವುದು ಹಗ್ಗದ ಮೇಲಿನ ನಡಿಗೆ ಇದ್ದಂತೆ. ಹೂದೋಟದಲ್ಲಿ ಮೈ ಅರಳಿಸಿ ನಿಂತ ಹೂಗಳು ತನಗಿಂತ ದೊಡ್ಡ ಇಲ್ಲ ಚಿಕ್ಕ ಹೂಗಳನ್ನು ನೋಡಿ ಕಣ್ಣ ಹನಿ ಸುರಿಸುವುದಿಲ್ಲ. ತನ್ನಷ್ಟಕ್ಕೆ ತಾನೆ ಬಿಮ್ಮನೇ ಅರಳಿ ಗಾಳಿ ಬೀಸಿದಲ್ಲೆಲ್ಲ ತನ್ನ ಕಂಪು ಸೂಸುವವು. ಬಿರಿದ ಕುಸುಮಗಳಂತೆ ಸಹಜವಾಗಿರಿ. ಛಲ ಬಲ ತುಂಬಿಕೊಳ್ಳಿ ಅಮಾನುಷ, ಭೀಕರ, ಹೃದಯ ವಿದ್ರಾವಕ, ಘೋರ ಹತ್ಯಾಕಾಂಡಗಳಲ್ಲಿ ಸಾವಿನ ಬಾಗಿಲು ತಟ್ಟಿ ಬಂದವರು ಸಮರ್ಥವಾಗಿ ಬದುಕಿ ತೋರಿದವರು  ಸಾಧನೆಯ ಉತ್ತುಂಗಕ್ಕೆ ಏರಿದವರು ಹಸಿರಾದ ಪ್ರೀತಿಯನ್ನು ಇತರರ ಬಾಳಲ್ಲಿ ತಂದವರ ಪಟ್ಟಿಯೇ ಇದೆ. ಇತಿಹಾಸ ಪುಟಗಳಲ್ಲಿ ದಾಖಲಾಗಿರುವ ಇಂಥ ವೀರ ಮಹನೀಯರ ಜೀವನ ಚರಿತ್ರೆಯನ್ನೊಮ್ಮೆ ಓದಿ. ನಿಮ್ಮಲ್ಲೂ ಛಲ ಬಲ ತುಂಬಿಕೊoಡರೆ  ಶೌರ್ಯದ ಖಣಿ ನೀವಾಗುವಿರಿ.   ಕವಿ ಕೆ ಎಸ್ ನಿಸ್ಸಾರ ಅಹ್ಮದ್ ರವರು  ‘ಹುದ್ದೆ ಮುದ್ದೆ ನಿದ್ದೆ ಈ ಬದುಕು ಇಷ್ಟೇ ಪೆದ್ದೆ?ಎಂಬ ಲೇಖನದಲ್ಲಿ ‘ದಿನವಹಿಯ ಊಟ ಬಟ್ಟೆಗಳ ಅಗತ್ಯಗಳನ್ನು ದಾಟದ, ಉಸಿರಾಡಿ ಅಸ್ತಿತ್ವವನ್ನು ಉಳಿಸಿಕೊಳ್ಳುವ ಅನಿವಾರ್ಯತೆಯ ಪುನರಾವರ್ತಿತ ಯಾಂತ್ರಿಕ ಚಟುವಟಿಕೆಯೇ ಅನೇಕಾನೇಕರ ಪಾಲಿಗೆ ಬಾಳ್ವೆ ಎನ್ನಿಸುತ್ತಿದೆ.’ಎಂದು ವಿಷಾದದಿಂದ ಬರೆದಿದ್ದಾರೆ.ಜೀವನದ ಪ್ರತಿ ಸಂಕುಚಿತ ದೃಷ್ಟಿಕೋನ ತೊರೆಯಿರಿ ಎಂಬ ಸಂದೇಶ ನೀಡದ್ದಾರೆ. ಪರಿಹಾರದತ್ತ ಗಮನ ಹರಿಸಿಬಂದ ಸಂಕಟದತ್ತ ನೋಡುತ್ತ ಕುಳಿತರೆ ಅದು ದಿನೇ ದಿನೇ ದೊಡ್ಡದೆನಿಸತೊಡುತ್ತದೆ. ಬೃಹದಾಕಾರವಾಗಿ ಬೆಳೆದು ನಮ್ಮನ್ನೇ ನುಂಗಿ ಬಿಡುವುದೇನೋ ಎಂಬ ಚಿಂತೆ ಆವರಿಸಿಕೊಳ್ಳುತ್ತದೆ. ಸಮಸ್ಯೆಯನ್ನು ಎಲ್ಲರ ಮುಂದೆ ಹೇಳುತ್ತ ತಿರುಗ ಬೇಡಿ. ಏಕೆಂದರೆ ಇಲ್ಲಿ ನಿಮ್ಮ ದುಃಖಗಳ ಪ್ರಚಾರಕ್ಕೆ ಜಾಗವಿಲ್ಲ. ಅದಲ್ಲದೇ ಸಮಸ್ಯೆಗಳಿಲ್ಲದವರು ಯಾರೂ ಇಲ್ಲ. ಸಮಸ್ಯೆಯ ಮೂಲ ಹುಡುಕಿದರೆ ಪರಿಹಾರ ತನ್ನಿಂದ ತಾನೇ ಹೊಳೆಯುತ್ತದೆ.ಒಮ್ಮೊಮ್ಮೆ ಅಚಾತುರ್ಯದಿಂದ ಅಲಕ್ಷö್ಯದಿಂದ ಸಮಸ್ಯೆ ಬೆಳೆದು ನಿಲ್ಲುತ್ತದೆ ಆಗ ಅನುಭವಿಕರನ್ನು ಜ್ಞಾನಿಗಳನ್ನು ಸಂಪರ್ಕಿಸಿದರೆ ಅಡ್ಡಗೋಡೆಯಾಗಿ ನಿಂತಿದ್ದ ನೋವು ತಾನೇ ಮಂಜಿನoತೆ ಕರಗುವುದು.ಕೆಲವೊಂದು ತೊಂದರೆಗಳಿಗೆ ಕಾಲವೇ ಉತ್ತರಿಸುವುದು ಕಾಲಕ್ಕಿಂತ ಉತ್ತಮ ಆರೈಕೆ ಮತ್ತೊಂದಿಲ್ಲ. ದೊಡ್ಡ ದೊಡ್ಡ ಅವಘಡಗಳಲ್ಲಿ ಕುಟುಂಬ ಸದಸ್ಯರನ್ನು  ಕಳೆದುಕೊಂಡವರು ಬೆಳಕಿನ ಆಶಾ ಕಿರಣ ಕಾಣದವರು ಜೀವನವೇ ಬೇಡ ಅಂದುಕೊoಡವರು ಬದುಕು ದುಸ್ತರ ಎಂದುಕೊoಡವರು  ಕಾಲ ಉರುಳಿದಂತೆ ಜೀವನ ಪ್ರೀತಿಗೆ ಸಿಲುಕಿ ಸಂತಸದ ಜೀವನ ಸಾಗಿಸುವುದನ್ನು ಆದರ್ಶವಾಗಿಸಿಕೊಳ್ಳಿ.  ದುಃಖ ದುಮ್ಮಾನ ಅವಮಾನಗಳ ಸರಣಿಯನ್ನೇ ಸವಾಲಾಗಿ ಸ್ವೀಕರಿಸಿ ಬದುಕಿನ ಹೋರಾಟವನ್ನು ಹೇಗೆ ಜಯಸಬೇಕೆಂಬುದನ್ನು ತೋರಿದ ಅಂಬೇಡ್ಕರ್ ಅಬ್ರಾಹಾಂ ಲಿಂಕನ್‌ರoಥವರ ದೊಡ್ಡ ಕೀರ್ತಿಗೆ ಪಾತ್ರರಾದ ಅದರ್ಶಗಳನ್ನು ಮೈಗೂಡಿಸಿಕೊಳ್ಳಲು ಪ್ರಯತ್ನಿಸಿ ನಿಮ್ಮ ವಿಚಾರ ವೈಖರಿಯನ್ನು ಬದಲಿಸಿದರೆ ಎಂದೆoದಿಗೂ ವ್ಯಥೆಯಾಗಿ ಉಳಿಯುವ ದುರಂತವೂ ಪ್ರಬಲರನ್ನಾಗಿಸುವ ಅಚ್ಚರಿ ಬದಲಾವಣೆಯನ್ನು ನೀವೇ ಗಮನಿಸಬಹುದು. ಕೊನೆ ಹನಿಮನೋಬಲ ಮುಗಿಲೆತ್ತರಕ್ಕೇರಿಸಿದರೆ ದುರಂತದ ನೋವೂ ನಗಣ್ಯ ಮನೋಬಲವನ್ನು ಬಾನಿಗೆ ಹಾರಿಸೋಣ. ಬದುಕನ್ನು ಶ್ರೇಷ್ಠ ಪಥಕ್ಕೆ ಹೊರಳಿಸೋಣ.   ಜಯಶ್ರೀ.ಜೆ.ಅಬ್ಬಿಗೇರಿ

“ಮನೋಬಲ ಮುಗಿಲೆತ್ತರಕ್ಕೇರಿಸಿದರೆ ದುರಂತದ ನೋವೂ ನಗಣ್ಯ!!” ಜಯಶ್ರೀ.ಜೆ.ಅಬ್ಬಿಗೇರಿ Read Post »

ಕಾವ್ಯಯಾನ

ನಾಗರಾಜ ಬಿ.ನಾಯ್ಕ ಕವಿತೆ “ಹೂಬೆ ಹೂಬೆ”

ಕಾವ್ಯ ಸಂಗಾತಿ ನಾಗರಾಜ ಬಿ.ನಾಯ್ಕ “ಹೂಬೆ ಹೂಬೆ” ಸೂರು ಕಾಣುವ ಬೆಳಗುಎದ್ದು ಕುಳಿತುಮುಗಿಲು ಮುಟ್ಟುವ ಹಾಡುಮನಸು ಮುಟ್ಟಿಹಂಚಿನ ಮನೆ ಮೇಲೆಚೆಂದ ಬಿಳಿ ಹೊಗೆಯಚಿತ್ತಾರ ಬಿಡಿಸುತ್ತಿತ್ತುಊರ ತುದಿ ದಂಡೆಯಲ್ಲಿದೋಣಿ ಸಾಗಿಮಡಿಕೆಯಲ್ಲಿದ್ದ ಸಾರಿನ ವಾಸನೆ ಊರು ಸುತ್ತುತ್ತಿತ್ತು ಹಳ್ಳಿಯಲ್ಲಿ ಎಲ್ಲವೂಹೂಬೆ ಹೂಬೆಯಾಗಿ ಕಂಡಂತೆಅರಳಿದ ಹೂ ಮಲ್ಲಿಗೆನೆಟ್ಟ ಕೈಗಳಿಗೆ ನಗು ಚೆಲ್ಲಿನಿಂತಿರಲು ಗಾಳಿತಂಗಾಳಿಯಾಗಿ ತಿರುಗಿಮಿಡಿ ಬಿಟ್ಟ ಮಾವುಹೂ ಸೊಬಗು ಚೆಲ್ಲಿಮರದ ಹಕ್ಕಿಗೆ ಹಾಡುಸುಮ್ಮನೇ ಹೇಳಿಸಿತ್ತುಹೊರೆ ಹೊತ್ತ ಬೆವರುಮೊಗ ತುಂಬಿದ ಕನಸುಹಸಿ ಭತ್ತದ ಸಸಿತೆನೆ ಹೊತ್ತ ಮೌನ ಸಾಲುಎಲ್ಲವೂ ಹೂಬೆ ಹೂಬೆಕಂಡಂತೆ ಈಗಲೂ ಹಳ್ಳಿದಣಪೆಯ ಆಚೆಗಿದ್ದದಾಸಾಳ ಗಿಡಕ್ಕೆಹತ್ತಾರು ಹೂಗಳುಬಂದ ಹಕ್ಕಿಗೆಹೂ ನೆರಳ ಕೊಡುವುದಂತೆಅಟ್ಟಲದ ಮರ ಹೂಬಿಟ್ಟಿದೆಯಂತೆಜೇನಿಗೆ ತುಂಬಾಕೆಲಸವಿದೆಯಂತೆಹೂಬೆ ಹೂಬೆಕಾಣುವುದು ಬಳ್ಳಿಯಂತೆಒಂದೆರಡಲ್ಲ ಹಳ್ಳಿಯ ಬಳ್ಳಿಎಲ್ಲೆಡೆ ಹಬ್ಬಿದಂತೆಊರಿಗೆ ಊರೇಗೆಳೆಯರಾದಂತೆ……. ನಾಗರಾಜ ಬಿ.ನಾಯ್ಕ.

ನಾಗರಾಜ ಬಿ.ನಾಯ್ಕ ಕವಿತೆ “ಹೂಬೆ ಹೂಬೆ” Read Post »

ಕಾವ್ಯಯಾನ, ಗಝಲ್

ಮಾಜಾನ್‌ ಮಸ್ಕಿ ಅವರ ಗಜಲ್

ಕಾವ್ಯ ಸಂಗಾತಿ ಮಾಜಾನ್‌ ಮಸ್ಕಿ ಗಜಲ್ ಬೆಳದಿಂಗಳ ನಗು ನೀನಾಗಿರುವೆಬದುಕಿನ ಬೆಳಗು ನೀನಾಗಿರುವೆ ಸಾವಿರಾರು ವೇದನೆ  ತುಂಬಿವೆನಲಿವಿನ ಗುನುಗು ನೀನಾಗಿರುವೆ ಸುಂದರ ಕನಸಿನ ಹೂದೊಟದಲ್ಲಿಸುಗಂಧದ ಸೊಬಗು ನೀನಾಗಿರುವೆ ಹಚ್ಚ ಹಸಿರಿನ ಬದುಕು ಇದಲ್ಲವೇಪ್ರಕೃತಿಯ ಬೆರಗು ನೀನಾಗಿರುವೆ ಮಾಜಾಳ ಹೃದಯ ನೀಲಾಕಾಶದಂತೆನಕ್ಷತ್ರಗಳ ಮಿನುಗು  ನೀನಾಗಿರುವೆ ಮಾಜಾನ್ ಮಸ್ಕಿ

ಮಾಜಾನ್‌ ಮಸ್ಕಿ ಅವರ ಗಜಲ್ Read Post »

ಕಾವ್ಯಯಾನ

ಎ.ಹೇಮಗಂಗಾ ಅವರ ತನಗಗಳು

ಕಾವ್ಯ ಸಂಗಾತಿ ಎ.ಹೇಮಗಂಗಾ ತನಗಗಳು ಚಿಕ್ಕದೊಂದು ರಂಧ್ರವೂಬಲಶಾಲಿಯೇ ಹೌದುತೇಲುವ ಹಡಗನ್ನುಮುಳುಗಿಸುವುದದು ಸಾಗರದ ಮೇಲಿದೆಪುಟ್ಟ ಹಿಮ ಪರ್ವತಆಳದಲ್ಲಿದೆ ಇನ್ನೂಕಾಣಲಾಗದು ಕಣ್ಣು ಭೂಮಂಡಲ ಅಗಾಧನಶ್ವರ ಜೀವಿ ನಾನುಒಯ್ಯಲಾರೆ ಏನನ್ನೂಸಾವಪ್ಪಲು ನನ್ನನ್ನು ಪ್ರಾರ್ಥಿಸು ದೇವರಲಿಆಸೆ ಫಲಿಸಲೆಂದುಶ್ರಮದಿ ಸಾಧಿಸಲುಆತ್ಮ ಶಕ್ತಿ ನೀಡೆಂದು ಮನುಜ ಬುದ್ಧಿಜೀವಿಕಟ್ಟುತ್ತಾನೆ ಈಗಲೂಹಿಮದ ದಿಮ್ಮಿ ಮನೆಹೆಸರಾಗಿದೆ ‘ ಇಗ್ಲೂ ‘ ಹಕ್ಕಿಯಂತೆ ಹಾರಿವೆಪುಕಾರುಗಳು ಇಂದುರೆಕ್ಕೆ ಪುಕ್ಕ ಪಡೆದುಬಾಯಿಯಿಂದ ಬಾಯಿಗೆ ಚುಮು ಚುಮು ಚಳಿಗೆಕಂಬಳಿ ಹೊದ್ದ ಮಂದಿಆಗಿದ್ದಾರೆ ಮುಂಜಾನೆಮನೆಯೊಳಗೇ ಬಂದಿ ಚಳಿಗಾಲದ ಚಳಿಬೇಸಿಗೆಯಲ್ಲಿ ಬಿಸಿಎರಡು ಹೆಚ್ಚಾದರೂಜನಕ್ಕೆ ತಲೆ ಬಿಸಿ ಬೆಳೆಯಬೇಕು ನೀನುಯಾರೆಷ್ಟೇ ತುಳಿದರೂಗರಿಕೆ ಹುಲ್ಲಿನಂತೆಛಲವ ಬಿಡದಂತೆ ದಣಿವನ್ನು ತೋರದೇದುಡಿಯುವಳು ತಾಯಿನಗುತ್ತಲೇ ಹೊಣೆಯಪೂರೈಸುವಳು ಮಾಯಿ ಸಾವ ತೆಕ್ಕೆಯೊಳಗೆಜೀವಗಳು ನಿರ್ಜೀವಅನಲ ಅನಾಹುತಸೂತ್ರಧಾರಿ ವಿಧಾತ ಬೆಂಕಿಯು ವ್ಯಾಪಿಸಿತುಎಲ್ಲೆಡೆ ಸರಸರಕೊನೆಗೆ ಉಳಿಯಿತುಬಸ್ಸಿನ ಕಳೇಬರ ಎ. ಹೇಮಗಂಗಾ     

ಎ.ಹೇಮಗಂಗಾ ಅವರ ತನಗಗಳು Read Post »

ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಜಯದೇವಿ ತಾಯಿ ಲಿಗಾಡೆ
ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್ ಚೇತನ
ಅವರಜೀವನಗಾಥೆ ಸವಿತಾ ದೇಶಮುಖ

Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಸಾವಿಲ್ಲದ ಶರಣರು ಮಾಲಿಕೆ,”ಕನ್ನಡದ ಕಟ್ಟಾಳು ಗಡಿ ಕಾಯ್ದ ಯೋಧ ಡೆಪ್ಯೂಟಿ  ಚನ್ನಬಸಪ್ಪನವರು”-ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

ಶರಣ ಸಂಗಾತಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ ಸಾವಿಲ್ಲದ ಶರಣರು ಮಾಲಿಕೆ, “ಕನ್ನಡದ ಕಟ್ಟಾಳು ಗಡಿ ಕಾಯ್ದ ಯೋಧ ಡೆಪ್ಯೂಟಿ  ಚನ್ನಬಸಪ್ಪನವರು”- ಕಿತ್ತೂರು ಸಂಸ್ಥಾನ ಪೇಶ್ವೆ ಮರಾಠರು ಹೀಗೆ ಕರ್ನಾಟಕ ಮಹಾರಾಷ್ಟ್ರ ರಾಜ್ಯಗಳ ಸಾಂಸ್ಕೃತಿಕ ಸಂಬಂಧ ಹಲವು ಶತಮಾನಗಳಿಂದ ನಿರಂತರ ಸಾಗಿ ಬಂದಿವೆ. ಒಂದು ಅರ್ಥದಲ್ಲಿ ಮಹಾರಾಷ್ಟ್ರದ ಕುಲ ದೇವತೆ ಪಂಡರಾಪುರದ  ವಿಠ್ಠಲ ಹಂಪಿಯುವನು. ಹೀಗಾಗಿ ಮಹಾರಾಷ್ಟ್ರದ ಜನರು ಮತ್ತು  ವಾರಕರಿ ಪಂಥ ಈಗಲೂ ಕೂಡ ವಿಠಲನನ್ನು ಕಾನಡೋ ವಿಠ್ಠಲ.ಅಂದರೆ ಕನ್ನಡದ ವಿಠ್ಠಲ ಎನ್ನುತ್ತಾರೆ. ಅನೇಕ ಕರ್ನಾಟಕದ  ಅರಸು ಮನೆತನಗಳು  ಮಹಾರಾಷ್ಟ್ರದಲ್ಲಿ ತಮ್ಮ ಸಾಮ್ರಾಜ್ಯವನ್ನು ಸ್ಥಾಪಿಸಿವೆ.  ರಾಷ್ಟ್ರಕೂಟರ  ದಂತಿದುರ್ಗ ಅಜಂತಾ ಎಲ್ಲೋರ ಕೈಲಾಸ ದೇವಾಲಯವನ್ನು. ಮಹಾರಾಷ್ಟ್ರದಲ್ಲಿ ಸ್ಥಾಪಿಸಿದರು. ರಾಮದುರ್ಗ ನರಗುಂದ ಜಮಖಂಡಿ ಸಂಸ್ಥಾನಗಳನ್ನು ಮರಾಠಿ ಮೂಲದ ಕೊಂಕಣಿ ಬ್ರಾಹ್ಮಣರು ಸ್ಥಾಪಿಸಿದರು.ಮುಧೋಳ ಘೋರ್ಪಡೆ ಮನೆತನದ ಮರಾಠರು ಆಳಿದರು. ಹೀಗೆ ಮುಂದುವರೆದ ಕನ್ನಡ ಮರಾಠಿ ಭಾಷೆಗಳ ಸಾಂಸ್ಕೃತಿಕ ಸಂಬಂಧ ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿಗೆ ಒಮ್ಮೆ ಕುತ್ತು ತರುವ ಹಾಗಾಯಿತು. ಇಂತಹ ಆಪತ್ತನ್ನು ಮುಕ್ತ ಗೊಳಿಸಿದ ದಿಟ್ಟ ಯೋಧ ಡೆಪ್ಯುಟಿ ಚೆನ್ನಬಸಪ್ಪನವರು. 19ನೆಯ ಶತಮಾನದ ಉತ್ತರಾರ್ಧವು ಮುಂಬೈ ಕರ್ನಾಟಕದಲ್ಲಿ ಮರಾಠಿಯ ಪ್ರಾಬಲ್ಯದ ಹಾಗೂ ಇಂಗ್ಲೀಷಿನ ಪ್ರಾರಂಭದ ಕಾಲ.  ಆಗ ಕನ್ನಡ ಭಾಷೆ, ಶಿಕ್ಷಣ, ಸಾಹಿತ್ಯ ಮತ್ತು ಸಂಸ್ಕೃತಿಗಳನ್ನು ಉಳಿಸಿ ಬೆಳೆಸುವ ಮಹಾ ಕಾರ್ಯಕ್ಕೆ ನಾಂದಿ ಹಾಡಿದವರು ಡೆಪ್ಯುಟಿ ಚನ್ನಬಸಪ್ಪನವರು.  ಜನನ  ಚನ್ನಬಸಪ್ಪನವರು 1834 ವರ್ಷದ ನವೆಂಬರ್ 1ರಂದು ಬೆಳಗಾವಿ ಜಿಲ್ಲೆಯ ಗೋಕಾಕದಲ್ಲಿ ಜನಿಸಿದರು.  ತಂದೆ ಬಸಲಿಂಗಪ್ಪನವರು ಮತ್ತು ತಾಯಿ ತಿಮ್ಮಮ್ಮನವರು (ತಿಪ್ಪವ್ವ). ಚೆನ್ನಬಸಪ್ಪನವರ ತಂದೆಯವರು ತಮ್ಮ ಮನೆತನದ ಮೂಲ ಕಾಯಕವಾದ ವ್ಯಾಪಾರಕ್ಕಾಗಿ  ಧಾರವಾಡಕ್ಕೆ ಬಂದರು. ಶಿಕ್ಷಣ ಅವರ ಪ್ರಾರಂಭಿಕ ಶಿಕ್ಷಣ ನಡೆದಿದ್ದು ಧಾರವಾಡದಲ್ಲಿ.  ಕಲಿತದ್ದು ಕನ್ನಡ, ಮರಾಠಿ ಮತ್ತು ಗಣಿತ.  ಬಾಲಕ ಚನ್ನಬಸಪ್ಪನವರು ಇಂಗ್ಲಿಷ್ ಕಲಿಯುವ ಹಂಬಲದಿಂದ ಯಾರಿಗೂ ಹೇಳದೆ ಕೇಳದೆ, ಧಾರವಾಡದಿಂದ ಗೋಕಾಕಕ್ಕೆ ಬರಿಗಾಲಿನಿಂದ ನಡೆದುಕೊಂಡು ಹೋಗಿ ಅಲ್ಲಿ ತಮ್ಮ ಸಂಬಂಧಿಗಳ ಹತ್ತಿರ ಐವತ್ತು ರೂಪಾಯಿ ಕೂಡಿಸಿಕೊಂಡು ಮತ್ತೆ ಕಾಲ್ನಡಿಗೆಯಲ್ಲಿ   ಪುಣೆ ತಲುಪಿದರು. ಪುಣೆಯಲ್ಲಿ ಅವರಿಗೆ ಆಶ್ರಯ ನೀಡಿದವರು ಗೋವಿಂದರಾವ್ ಮೆಹಂಡಳೇಕರ ಅವರು. ಓದಿನಲ್ಲಿ ಪಾರಂಗತರೆನಿಸಿದ ಡೆಪ್ಯುಟಿ ಚೆನ್ನಬಸಪ್ಪನವರು ಅವರಿಗೆ  ಪ್ರತಿ ತಿಂಗಳೂ ಹತ್ತು ರೂಪಾಯಿ ವಿದ್ಯಾರ್ಥಿ ವೇತನ ಪಡೆಯುತ್ತಿದ್ದರಂತೆ.  ಅಂದಿನ ದಿನದಲ್ಲಿ ಕೆಲಸದಲ್ಲಿದ್ದವರಿಗೆ ಸಂಬಳ ಅಷ್ಟು ಬರುತಿದ್ದರೆ ಹೆಚ್ಚಿರುತ್ತಿದ್ದ ಕಾಲ.  ಈ ಸಮಯದಲ್ಲಿ ತಮ್ಮ  ತಾಯಿಯನ್ನು ತಮ್ಮ ಬಳಿ ವಾಸಕ್ಕೆ ಪುಣೆಗೆ ಕರೆಸಿಕೊಂಡಾಗ ತಿಪ್ಪಮ್ಮನಿಗೆ  ಅಪರಿಮಿತ ಸಂತೋಷ ಖುಷಿ ಆಗಿತ್ತು. ಚನ್ನಬಸಪ್ಪನಾವರು ಇಂಗ್ಲೆಂಡಿನಲ್ಲಿ ಅದೇ ತಾನೇ ತೆರೆದ ಕೂಪರ್ಸ್‌ಹಿಲ್ ಇಂಜಿನಿಯರಿಂಗ್ ಕಾಲೇಜಿಗೆ ಸೇರಲು ಆಯ್ಕೆಯಾದ ಐವರು ಪ್ರತಿಭಾವಂತ ವಿದ್ಯಾರ್ಥಿಗಳಲ್ಲೊಬ್ಬರಾಗಿದ್ದರು.  ದಾದಾಬಾಯಿ ನವರೋಜಿಯವರ ಈ ಯೋಜನೆ ಅಯಶಸ್ವಿಯಾಗಿ ಇಂಗ್ಲೆಂಡ್ ಪ್ರಯಾಣ ರದ್ದುಗೊಂಡಿತು.  ಆಗ ಅವರು ವಿಧಿಯಿಲ್ಲದೆ  1855ರಲ್ಲಿ ಮತ್ತೆ ಧಾರವಾಡಕ್ಕೆ ವಾಪಸ್ಸು ಬಂದರು.   ವೃತ್ತಿ ಜೀವನ ಕೆಲಕಾಲ ಅಂಚೆ ಕಚೇರಿಯಲ್ಲಿ ಕೆಲಸ ಮಾಡಿದರು.  ಅಷ್ಟರಲ್ಲಿ ಧಾರವಾಡದಲ್ಲಿ ನೂತನವಾಗಿ ಆರಂಭಗೊಂಡ ನಾರ್ಮಲ್ ಶಾಲೆಯ ಮುಖ್ಯೋಪಾಧ್ಯಾಯರಾಗಿ ಆಯ್ಕೆಗೊಂಡರು.  ಶಿಕ್ಷಣ ಇಲಾಖೆಯನ್ನು ಪ್ರವೇಶಿಸಿ 1861ರಲ್ಲಿ  ಬೆಳಗಾಂ ಜಿಲ್ಲೆಯ ಡೆಪ್ಯೂಟಿ ಇನ್‌ಸ್ಪೆಕ್ಟರೆನಿಸಿದರು.  ಹೀಗಾಗಿ ಅವರ ಹೆಸರಿಗೆ  ಡೆಪ್ಯೂಟಿ  ವಿಶೇಷಣ ಅಂಟಿಕೊಂಡಿತು.  ಚನ್ನಬಸಪ್ಪನವರು ಅಧಿಕಾರಕ್ಕೆ ಬರುವ ಮುನ್ನ ಧಾರವಾಡ, ಬೆಳಗಾವಿ, ಬಿಜಾಪುರ ಜಿಲ್ಲೆಯ ಕನ್ನಡ ಶಾಲೆಯ ಸಂಖ್ಯೆ ಕೇವಲ 34 ಇತ್ತು.  ಚನ್ನಬಸಪ್ಪನವರ ಹತ್ತು ವರುಷದ ಆಡಳಿತದಲ್ಲಿ ಕನ್ನಡ ಶಾಲೆಗಳ ಸಂಖ್ಯೆ 668ಕ್ಕೆ ಏರಿತು.  ಚನ್ನಬಸಪ್ಪನವರು, ತಮ್ಮ ಸ್ನೇಹಿತರಾದ  ರಾಮಚಂದ್ರ ಚುರಮುರಿ, ಗಂಗಾಧರ ಮಡಿವಾಳೇಶ್ವರ ತುರಮರಿ ಮೊದಲಾದ ಕನ್ನಡ ಭಕ್ತರಿಗೆ ಕನ್ನಡದಲ್ಲಿ ಗ್ರಂಥ ರಚಿಸಲು  ಪ್ರೇರಣೆ, ಪ್ರೋತ್ಸಾಹ, ಬೆಂಬಲಗಳನ್ನು ಒದಗಿಸಿದರು. ಸ್ವಯಂ ತಾವೇ ಪಠ್ಯ ಪುಸ್ತಕಗಳನ್ನು ರಚಿಸಿದರು.  ಉಚಿತ ವಿದ್ಯಾರ್ಥಿ ನಿಲಯದ ಸ್ಥಾಪನೆ  ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಚಿತ್ರದುರ್ಗದ ನಿರಂಜನ ಜಗದ್ಗುರು ಬೃಹನ್ಮಠದ ಮಹಾಲಿಂಗ ಸ್ವಾಮಿಗಳ ( ಶಿರಸಂಗಿ) ಮನವೊಲಿಸಿ ಬೆಳಗಾವಿಯಲ್ಲಿ ವೀರಶೈವ ಉಚಿತ ವಿದ್ಯಾರ್ಥಿನಿಲಯವನ್ನು ತೆರೆದರು. ಸ್ವಾಮಿಗಳ ನಿಧನಾನಂತರ ತಾವೇ ಇದರ  ಆರ್ಥಿಕ ಹೊಣೆ ಹೊತ್ತರು.  ಹೆಂಡತಿ ಮೈಮೇಲಿನ ನಗ, ಆಭರಣ ಒಡವೆ ಮಾರಿದರು. ಸಾಲದ ಬಾಧೆಗೆ  ಮನೆ-ಮಠಮಾರಿ ವಿದ್ಯಾರ್ಥಿ ನಿಲಯದ ನಿರ್ವಹಣೆ ಮಾಡಿದರಂತೆ. ಸಾಹಿತ್ಯ ಕೃತಿಗಳು ಚನ್ನಬಸಪ್ಪನವರು ‘ಕಾಮೆಡಿ ಆಫ್ ಎರರ್ಸ್‌’ (ನಗದವರನ್ನು ನಗಿಸುವ ಕಥೆ) ಮತ್ತು ‘ಮ್ಯಾಕ್‌ಬೆತ್’ ಕೃತಿಗಳನ್ನು ಪ್ರಕಟಿಸಿದರು. ‘ಮ್ಯಾಕ್‍ಬೆತ್’ ಕೃತಿಯ ಮೂಲಕ ಶೇಕ್ಸಪಿಯರ್ ಅನ್ನು ಮೊದಲು ಕನ್ನಡಕ್ಕೆ ತಂದವರು ಚನ್ನಬಸಪ್ಪನವರು. ಚನ್ನಬಸಪ್ಪಾ ಇವರು ಹುಟ್ಟು ಹಾಕಿದ ಮತ್ತು ಶತಮಾನೋತ್ಸವವನ್ನು ಆಚರಿಸಿದ ಕನ್ನಡದ ಏಕಮೇವ ಶೈಕ್ಷಣಿಕ ಮಾಸಿಕ “ಜೀವನ ಶಿಕ್ಷಣ” ಪತ್ರಿಕೆ. ಈ ಪತ್ರಿಕೆ ಸ್ಥಾಪಕರಾಗಿ ಹಲವು ಆರ್ಥಿಕ ಸಂಕಷ್ಟಕೆ ಈಡಾದರೂ  ಮಕ್ಕಳ ಕಲಿಕೆಗೆ ತಮ್ಮ ಸರ್ವಸ್ವವನ್ನು ಮಾರಿದ ಸದಾ ಸ್ಮರಣೀಯರು.  ಮಕ್ಕಳ ಶಿಕ್ಷಣಕ್ಕಾಗಿ ತಮ್ಮನ್ನೇ ಅರ್ಪಿಸಿಕೊಂಡಿದ್ದ ಚನ್ನಬಸಪ್ಪನವರಿಗೆ ಜೀವನವೇ ಶಿಕ್ಷಣ ಶಾಲೆಯಾಗಿದ್ದರಲ್ಲಿ ಅಚ್ಚರಿಯಿಲ್ಲ. ಡೆಪ್ಯುಟಿ ಚೆನ್ನಬಸಪ್ಪನವರು ಧಾರವಾಡ ಟಿಸಿಏಚ್ ಕಾಲೇಜನ್ನು ಸ್ಥಾಪಿಸಿ ಕನ್ನಡ ಶಾಲಾ ಶಿಕ್ಷಕರ ತರಬೇತಿ ಕೇಂದ್ರ ಸ್ಥಾಪಿಸಿ ಅದರ ಪ್ರಾಚಾರ್ಯರಾಗಿ ಕಾರ್ಯ ನಿರ್ವಹಿಸಿದ ಮಹಾನುಭಾವರು. ಡೆಪ್ಯುಟಿ ಚನ್ನಬಸಪಪ್ನವರು 1881 ವರ್ಷದ ಜನವರಿ 4 ರಂದು ಈ ಲೋಕವನ್ನಗಲಿದರು.  1981 ವರ್ಷದಲ್ಲಿ ಚನ್ನಬಸಪ್ಪನವರು ನಿಧನರಾದ ನೂರು ವರ್ಷಗಳಾದ ಸಂದರ್ಭದಲ್ಲಿ ಡೆಪ್ಯೂಟಿ ಚನ್ನಬಸಪ್ಪ ಪ್ರಾಥಮಿಕ ಶಿಕ್ಷಣ ಪ್ರತಿಷ್ಠಾನವನ್ನು ಸ್ಥಾಪಿಸಲಾಯಿತು. ಇದು ಪ್ರಾಥಮಿಕ ಶಿಕ್ಷಣ ಹಾಗೂ ಶಿಕ್ಷಕ ತರಬೇತಿ ರಂಗದಲ್ಲಿ ಕಾರ್ಯನಿರ್ವಹಿಸುವ ಸೇವಾಸಂಸ್ಥೆಯಾಗಿದೆ. ಕನ್ನಡದ ಪುನರುಜ್ಜೀವನ ಮತ್ತು ಶಿಕ್ಷಣ ಪ್ರಸಾರ ಕಾರ್ಯದ ಶಕಪುರುಷಕ್ಕಾಗಿ ತಮ್ಮನ್ನೇ ಅರ್ಪಿಸಿಕೊಂಡ ಡೆಪ್ಯೂಟಿ ಚನ್ನಬಸಪ್ಪನವರ ನೆನಪು ಎಲ್ಲಕಾಲಕ್ಕೂ ಸ್ಪೂರ್ತಿದಾಯಕ. ತಮ್ಮ ಬದುಕಿನ ಕೇವಲ 47 ನೆಯ  ವಯಸ್ಸಿನಲ್ಲಿ ಅಗಾಧವಾದ ಕಾರ್ಯ ಮಾಡಿ ಗಡಿ ನಾಡು ವಿಜಯಪುರ ಧಾರವಾಡ ಬೆಳಗಾವಿ ಕಾರವಾರ ಬೀದರ ಮುಂತಾದ ರಾಜ್ಯಗಳಲ್ಲಿ ಕನ್ನಡ ಶಾಲೆಗಳನ್ನು ತೆರೆದು ಕನ್ನಡವ ಉಳಿಸಿ ಬೆಳೆಸಿದ ಕನ್ನಡದ ಕಟ್ಟಾಳು ಮತ್ತು ಗಡಿ ರಕ್ಷಣೆಗೆ ನಿಂತ ದಿಟ್ಟ ಯೋಧರು. ಕರ್ನಾಟಕ ರಾಜ್ಯ ಸರ್ಕಾರ ಇವರ ಹೆಸರಿನಲ್ಲಿ ಪ್ರತಿಷ್ಠಾನ ಮಾಡಲಿ ಮತ್ತು ಕರ್ನಾಟಕ ವಿಶ್ವ ವಿದ್ಯಾಲಯದ ಆವರಣದಲ್ಲಿ ಡೆಪ್ಯುಟಿ ಚೆನ್ನಬಸಪ್ಪನವರ ಅಧ್ಯಯನ ಪೀಠ ತೆರೆಯ ಬೇಕು. ಅಪ್ಪಟ ಬಸವ ಭಕ್ತ ಲಿಂಗಾಯತ ಧರ್ಮದ ಅನುಯಾಯಿ ತಮ್ಮ ನಿಸ್ವಾರ್ಥ ಸೇವೆಗೆ ಕನ್ನಡಿಗರ ಮನದಲ್ಲಿ ಚಿರಾಯುವಾಗಿದ್ದಾರೆ. ಇಂತಹ ಶರಣರಿಗೆ ನಮ್ಮ ಭಕ್ತಿ ಪೂರ್ವಕ ಶತ ಕೋಟಿ ನಮನಗಳು. __________________________ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

ಸಾವಿಲ್ಲದ ಶರಣರು ಮಾಲಿಕೆ,”ಕನ್ನಡದ ಕಟ್ಟಾಳು ಗಡಿ ಕಾಯ್ದ ಯೋಧ ಡೆಪ್ಯೂಟಿ  ಚನ್ನಬಸಪ್ಪನವರು”-ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ Read Post »

You cannot copy content of this page

Scroll to Top