ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

ಡಾ ಶಶಿಕಾಂತ ಪಟ್ಟಣ ರಾಮದುರ್ಗ “ನನ್ನ ನೆರಳು”

ಕಾವ್ಯ ಸಂಗಾತಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ “ನನ್ನ ನೆರಳು” ಬೆಳಕಿನ ಹಾದಿಯಲಿನೀ ಜೊತೆಯಾಗಿ ನಡೆವೆ,ಕತ್ತಲೆಯ ಕೋಣೆಯಲಿಮೌನವಾಗಿ ಅಡಗುವೆ.ಸುಖದ ದಿನಗಳಲಿನೀಳವಾಗಿ ಬೆಳೆಯುವೆ,ಕಷ್ಟದ ದಿನಗಳಲಿನಿನ್ನೊಳಗೆ ಕರಗುವೆ.ಮೌನಕ್ಕೆ ಜಾರುವೆ ನಾ ನಕ್ಕರೆ ನೀ ನಗುವೆ ,ನಾ ಅತ್ತರೆ ನೀ ಮರುಗುವೆ .ನನ್ನ ಹೆಜ್ಜೆಗೆ ನಿನ್ನ ಹೆಜ್ಜೆ ,ಸಾಗುವೆ ನೀನು ನನ್ನಒಲವಿನ ದನಿ.ಬಿಸಿಲಿಗೆ ಬೆಂದುಮಳೆಗೆ ನೆನೆದುಚಳಿಯಲ್ಲಿ ಕೊರಗುವೆಒಳಗೆ ನೊಂದು ಜಗದ ಜನ ಕೈಬಿಟ್ಟರೂ ,ನೀನು ಜೊತೆ ಇದ್ದೆಪ್ರತಿ ಘಳಿಗೆ.ನನ್ನದೇ ಪ್ರತಿಬಿಂಬ,ನನ್ನದೇ ಒಡನಾಡಿ,ನೀನೇ ನನ್ನ ಪ್ರಾಣಸಾರ್ವಕಾಲಿಕ ಗೆಳೆಯ,ನಿತ್ಯ ಹಿಂಬಾಲಿಸುವಓ ನನ್ನ ನೆರಳು! ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

ಡಾ ಶಶಿಕಾಂತ ಪಟ್ಟಣ ರಾಮದುರ್ಗ “ನನ್ನ ನೆರಳು” Read Post »

ಪುಸ್ತಕ ಸಂಗಾತಿ

“ರಾಮಚಂದ್ರ ಕುಲಕರ್ಣಿಯವರ ಹಾಯ್ ಹಾಯ್ಕು -೩” ವೈ.ಎಂ.ಯಾಕೊಳ್ಳಿ

ಪುಸ್ತಕ ಸಂಗಾತಿ ವೈ.ಎಂ.ಯಾಕೊಳ್ಳಿ “ರಾಮಚಂದ್ರ ಕುಲಕರ್ಣಿಯವರ ಹಾಯ್ ಹಾಯ್ಕು -೩”      ಕನ್ನಡದಲ್ಲಿ ಹೈಕು ಕಾವ್ಯ ಬಂದು ಅರ್ಧಶತಮಾನವೇ ಆಗಿರಬೇಕು. ೧೭೦ ರ ದಶಕದಲ್ಲಿ ಡಾ.ಕೆ.ಬಿ ಬ್ಯಾಳಿಯವರು ಮೊದಲ ಬಾರಿಗೆ ಕನ್ನಡದಲ್ಲಿ ಹೈಕು ಬರೆದರು . ಮತ್ತು ಕೆಲವು ಹೈಕುಗಳನ್ನು ಅನುವಾದ ಮಾಡುವ ಮೂಲಕ ಹೈಕು ಕಾವ್ಯವನ್ನು ಪರಿಚಯಿಸಿದರು . ಇದು ಮೂಲತ: ಜಪಾನಿ ಭಾಷೆಗೆ ಸೇರಿದ ಕಿರು ಪದ್ಯ ಪ್ರಕಾರ. ಇದನ್ನು ಭಾರತಕ್ಕೆ ತಂದವರು ವಿಶ್ವ ಕವಿ ರವೀಂದ್ರರೇ ಎಂದು ಹೇಳಲಾಗುತ್ತದೆ.     ಡಾ. ಬ್ಯಾಳಿಯವರ ನಂತರದಲ್ಲಿ ಹಲವಾರು ಜನ ಹೈಕು ಬರೆಯತೊಡಗಿದರು. ಈಗಂತೂ ಹೈಕು ಕಾವ್ಯ ಬರೆಯಲೆಂದೇ ಹುನಗುಂದದ ಸಿದ್ದಲಿಂಗಪ್ಪ ಬೀಳಗಿಯಂಥವರು ಸಾಮಾಜಿಕ ಜಾಲತಾಣಗಳ ಗುಂಪನ್ನೆ ರಚಿಸಿದರು. ಒಬ್ಬೊಬ್ಬರೆ ನಾಲ್ಕು ಹ್ಯಕು ಸಂಕಲನಗಳನ್ನು ತಂದ ಉದಾಹರಣೆಗಳು ಇವೆ. ಚಿತ್ರದುರ್ಗದ ಮನೋಜ್ ಮಕರಂದ, ಹುನಗುಂದದ ಸಿದ್ದಲಿಂಗಪ್ಪ ಬೀಳಗಿಯವರು,ಬಾಗಲಕೋಟೆಯ ಶ್ರೀ ಬಿ .ಎಸ್ .ಬಿಜಾಪೂರ ಅವರು  ಈ ದಿಶೆಯಲ್ಲಿ ಅತಿ ಹೆಚ್ಚು ಹೈಕು ಸಂಕಲನಗಳನ್ನು ಕೊಟ್ಟಿದ್ದಾರೆ. ಈಗ ಹತ್ತಾರು ಜನರ ಹೈಕು ಸಂಕಲನಗಳು ಬಂದಿವೆ.           ಹೈಕು ೫/೭/ ೫ ಸಿಲೆಬಲ್ ಗಳ ಗಳಲ್ಲಿ ರಚಿತವಾಗುವ ಮೂರು ಸಾಲಿನ ಚಂದೋಪ್ರಕಾರ ಆದರೆ ಕನ್ನಡದಲ್ಲಿ ಸಿಲೆಬಲ್ ಗಳನ್ನು ಅಕ್ಷರಗಳೆಂದು ತಿಳಿದು ೫/೭/೫ ಅಕ್ಷರಗಳಿಗೆ ಸೀಮಿತಗೊಳಿಸಿದ ಹೈಕು ಕಾವ್ಯವನ್ನು ಬರೆಯುವ ಪದ್ಧತಿಯನ್ನು ಡಾ ಕೆ .ಬಿ ಬ್ಯಾಳಿಯವರು ಹಾಕಿದರು . ಅವರ ದಾರಿಯಲ್ಲಿ ಇಂದು ನೂರಾರು ಜನ ಹೈಕು ಬರೆಯುತ್ತಿದ್ದಾರೆ. ಹತ್ತರು ಹೈಕು ಸಮಕಲನಗಳೂ ಬಂದಿವೆ. ಆದರೆ ಇನ್ನೊಂದು ಬರ್ಗ ಇದೆ./. ಡಾ. ಸಿ ರವೀಂದ್ರನಾಥ, ರಮ್ಜಾನ್ ಹೆಬಸೂರ,ದೊಡ್ಡಣ್ನ ಗದ್ದನಕೇರಿ, ಡ ಪ್ರಕಸ ಖಾಡೆ, ಮನೋಜ ಮಕರಂದ  ಮೊದಲಾದವರು ಮೂರು ಸಾಲಿನ ಕಿರು ಪದ್ಯಪ್ರಕಾರವನ್ನು ಇರಿಸಿಕೊಂಡು ೫/೭/೫ ಅಕ್ಷರಗಳಿಗೆ ಅಷ್ಟು ಮಹತ್ವ ಕೊಡದೆ ಮೂರು ಸಾಲುಗಳ ಕವಿತೆಯನ್ನು ಹೈಕು ಎಂದು ಕರೆದು ಸಂಕಲನ ತಂದಿದ್ದಾರೆ. ಕೆಲವರು ಈ ಪದ್ದತಿಯನ್ನೂ ಅನುಸರಿಸಿರುವದು ಉಂಟು. ಒಟ್ಟಿನಲ್ಲಿ ಈ ಎರಡೂ ಬಗೆಯ ಹೈಕು ಸಂಲನಗಳು ಈಗ ಕನ್ನಡದಲ್ಲಿ ಬರುತ್ತಿವೆ. ಇದೆ ಸಾಲಿಗೆ ಸೇರಿದವರು ಧಾರವಾಡದ ಶ್ರೀ ರಾಮಚಂದ್ರ ಕುಲಕರ್ಣಿಯವರು. ವೃತ್ತಿಯಿಂದ ಬ್ಯಾಂಕ್ ಅಧಿಕಾರಿಯಾಗಿ ಈಗ ತಮ್ಮ ಸೇವೆಗೆ ರಾಜಿನಾಮೆ ಕೊಟ್ಟು ಪೂರ್ಣ ಸಾಹಿತ್ಯ ಸೇವೆಗೆ ಸಮರ್ಪಿಸಿಕೊಂಡಿರುವ ಶ್ರೀಯುತರ ಹೈಕುಗಳ ಮೂರು ಸಂಕಲನ ತಂದಿದ್ದಾರೆ. ಇನ್ನೆರಡು ಸಮಕಲನ ಪ್ರಕಟಣೆಯ ಹಂತದಲ್ಲಿವೆ.  ಅವು ೫/೭/೫ ಅಕ್ಷರಗಳ ಪರಿಮಿತಿಗೆ ಸೇರಿದ ಹೈಕುಗಳಲ್ಲ. ಮೂರು ಸಾಲಿನ ಸ್ವತಂತ್ರ ಮುಕ್ತಕಗಳು ಎನ್ನುವದನ್ನು ಗಮನಿಸಬೇಕು. ಅಕ್ಷರಮಿತಿಕಾವ್ಯಕ್ಕೆ ಕುತ್ತು ಹಾಗಾಗಿನಾ ಲಂಘನ ಮಾಡಿದೆ (ನನ್ನ ರಚನೆ) ಎನ್ನುವದು ಅವರ ವಿಚಾರ. ಇಲ್ಲಿ ಮೂರು ಸಾಲಿವೆ ಅದರೆ ಅಕ್ಷರಗಳ ಮಿತಿಯಿಲ್ಲದ ರಚನೆಗಳು.      ಹಾಗೆ ನೋಡಿದರೆ ಈ ಬಗೆಯ ಹೈಕುಗಳನ್ನು ಪ್ರಯೋಗ ಮಡಿದ ಸಿ ರವೀಂದ್ರನಾಥ  ಮೊದಲಾದವರಿಗಿಂತ ಮುಂಚೆಯೇ ಹೈಕು ಬರೆದವರು ಶ್ರೀ ರಾಮಚಂದ್ರ ಕುಲಕರ್ಣಿಯವರು ೧೯೯೯ ರಲ್ಲಿಯೇ ಅಂದರೆ ಇಂದಿಗೆ ೨೫ ವರ್ಷಗಳ ಹಿಂದೆಯೇ   ಅವರ ಹೈಕು ಸಂಕಲಕನ ಬಂದಿದ್ದವು.  ಒಂದೆರಡು ಸಂಕಲನಗಳಂತೂ ಮೂರು ಮೂರು ಮುದ್ರಣ ಕಂಡಿದ್ದವು.  ಹಾಯ್ ಹಾಯ್ಕು ಸರಣಿಯಲ್ಲಿ ಐದು ಸಂಕಲನಗಳನ್ನು ಅವರು ತಯಾರಿಸಿದ್ದಾರೆ ಈಗಾಗಲೇ ಮೂರು ಪ್ರಕಟವಾಗಿದ್ದು ಇನ್ನೆರಡು ಪ್ರಕಟಣೆಯ ಹಂತದಲ್ಲಿವೆ. ಅವರೇ ಹೇಳಿಕೊಂಡಂತೆ ಸುಮರು ೨೫೦೦ ಹೈಕುಗಳನ್ನು ರಚಿಸಿದ ಹೈಕು ಕವಿ ಅವರಾಗಿದ್ದಾರೆ.        ಹಾಯ್ ಹಾಯಕು -೩  ಸಂಕಲನ ಈಗ ನನ್ನ ಕ್ಯಲಿದೆ. ಅವರ ಹಾಯ್ ಹಾಯಕು ಸೀರಿಸ್ ನಲ್ಲಿ ಇದು ಮೂರನೆಯ ಕೃತಿಯಾಗಿದೆ. ಇಲ್ಲಿ ಸುಮಾರು ೪೫೦ ರಷ್ಟು ಹೈಕುಗಳನ್ನು ಒಂಬತ್ತು ಭಾಗವಾಗಿಸಿದ್ದಾರೆ ಮೊದಲ ಭಾಗಕ್ಕೆ ಯಾವುದೆ ಹೆಸರು ಕೊಡದೆ ಇರುವ ಕವಿ ನಂತರದಲ್ಲಿ ಉಲ್ಕಾಪಾತ(೨೬ ಹೈಕು)ದಿನದರ್ಶಿಕೆ ( ೧೭) ಮೋಡಗಳು (೧೪ ಹೈಕು)ನಿದ್ರೆ ( ೪೦  ಹೈಕುಗಳು) ಗಾಳಿಪಟ ( ೧೬ ಹೈಕುಗಳು )ಗುಡ್ಡ (೧೬ ಹೈಕುಗಳು),ಮೀನು ಮಾರ್ಕೆಟ್ಟು ( ೨೯ ಹೈಕುಗಳು)ಆಕಾಶ (೮ ಹ್ಯಕುಗಳು) ಹೀಗೆ ಬೇರೆಬೇರೆ ಭಾಗವಾಗಿಸಿ ಸಮಕಲನದಲಕ್ಲಿ ನೀಡಿದ್ದಾರೆ.      ರಾಮಚಂದ್ರ ಕುಲಕರ್ಣೀಯವರು ಬರೀ ಹೈಕು ಕವಿಗಳಲ್ಲ, ಹೈಕು ಮೀಮಾಂಸಕರೂ ಹೌದು. ಅವರ ಸಂಕಲನಗ ಆರಂಭದ ಪ್ರಸ್ತಾವಣೆಯಲ್ಲಿ ಹೈಕು ಕಾವ್ಯ ರಚಿನೆ ಕುರಿತ ಚಿಮತನೆ ಮೂಡಿ ಬಂದಿರುವದು ಉಪಯುಕ್ತವಾಗಿದೆ. ಅವರ ಹುಕುಗಳಲ್ಲಿ ಝೆನ್ ತತ್ವಜ್ಞಾನ ಅವಲಂಬಿಸಿದ ಬುದ್ದನ ತತ್ವಗಳನ್ನು ಸಾರುವ ಹಾಗೆಯೇ ನಿಸರ್ಗದ ಅಂತಸತ್ವ ಹೊಂದಿದ ಹೈಕು ಕಾವ್ಯ ತುಂಬ ತಾಜಾ ಸರಸ ಸುಂದರವಾಗಿ ಅರಳಿವೆ. ಬದುಕಿನ ತಾತ್ವಿಕ ಚಿಂತನೆ ಮಡುವ ಅನುಭಾವ ಪೂರ್ಣ ಹ್ಯಕಿಗೆ ಉದಾಹರಣೆಯಾಗಿ ಎಲ್ಲರೂ ಸಾಯುತ್ತೇವೆ.ಒಬ್ಬರಿಗೂ ನೆನಪಿಲ್ಲ ‘ಹಃ’ಮರೆವು ಸಾವಿಗೆ ವರ ಎಂಥ ಸುಂದರ ಸತ್ಯ! ಮರೆತಿದ್ದೇವೆ ಎಂತಲೇ ನಾವು ಆರಾಮ ಇದ್ದೇವೆ.   ಗೊತ್ತೇ ಸಖಿ ? ಹಕ್ಕಿಪಕ್ಕಿನಮಗಿಂತ ಮೊದಲೇಎದ್ದಿವೆ! ಗೆದ್ದಿವೆ! ಎದ್ದಿವೆ ಎನ್ನುವದು ಮತ್ರವಲ್ಲ ನಮ್ಮ ಮೇಲೆ ನಿಸರ್ಗ ಮಡಿದ ವಿಜಯ ಗೆದ್ದಿವೆ ಕೂಡಾ! ಇದೇ ನಿಜವಾದ ಸತ್ಯ. ಎಷ್ಟೆಲ್ಲ ಹೊಸರೋಗ!ಏನೆಲ್ಲ ಔಷಧಿ!ಪಥ್ಯ !ನರಳಿಕೆಯೊಂದೇ ಸತ್ಯ ವಾಸ್ತವವನ್ನು ಹೇಳುವ ಹೈಕು ಇದು. ನಾವು ನಿಸರ್ಗಕ್ಕೆ ಮಡಿದ ಅಘಾತದಿಂದ ಇಂದು ಪ್ರಾಣಿ ಪಕ್ಷಿಗಳು ಮನುಷ್ಯನ ಹೆಜ್ಜೆ ಕಂಡರೂ ಸಹಿಸಿಲಾರವು ಅವು ನಮ್ಮನ್ನಗಲಿ ದೂರ ಹೋಗಿವೆ. ಅವಕ್ಕೆ ತಮ್ಮದೇ ಜಾಗ ಬೇಕಾಗಿದೆ ಎನ್ನುವ ಕವಿ ಗುಬ್ಬಿ ಗುಳೆ ಹೋಗಿವೆತಮ್ಮ ಎದೆ ಬಡಿತಕೇಳಿಸುವಲ್ಲಿ ! ಪ್ರಾಣಿ ಪಕ್ಷಿಗಳನ್ನು ನೆಮ್ಮದಿಯಿಂದ ಬದುಕದಂತೆ  ಮಾಡಿದ ಮನುಷ್ಯ ಅವು ಗಡಿಪಾರು ಅಗುವಂತೆ ಮಡಿದ್ದಾನೆ ಎನ್ನುವದನ್ನು ಈ ಹೈಕು ಸೂಚಿಸುತ್ತದೆ.  ಆದರೆ ನಿಸರ್ಗಕ್ಕೆ ಅಂತ್ಯವಿಲ್ಲ ಅದು ಮತ್ತೆ ಚಿಗುರುತ್ತದೆ ಎನ್ನುವದಕ್ಕೆ ಮೊನ್ನೆ ಉರುಳಿತು ಮರಇಂದು ಮೋಟು ನೆತ್ತಿಯ ಮೇಲೆಕುಸುರು ಕುಸುರು ಚಿಗುರ ಎಂಥ ಅದ್ಭುತ ಅಲ್ಲವೇ!  ಲೌಕಿಕದ ಸತ್ಯಗಳಣ್ನೂ ಕಾಣವು ಕವಿ ಪ್ರೀತಿ ಯ ಬಗ್ಗೆ ಸಾಲು ಗಳು ಎಷ್ಟು ಮಾರ್ಮಿಕ ವಾಗಿವೆ ನೋಡಿ. ಒಲವು ಮಹಾ ಕೊಲೆಗಾರಪ್ರಾಣ ಹೀರಿದೆ ಎಷ್ಟೋಕಾಣುವಂತೆ! ಕಾಣದಂತೆ!! ಕಾಣುವಂತೆ ಸತ್ತವು ಕೆಲವು ಜೀವಗಳಾದರೆ ಕಾಣದಂತೆ, ಮುಚ್ಚಿಟ್ಟು ಸತ್ತವು ಎಷ್ಟೋ ಏನೋ? ಎನ್ನುವ ಉದ್ಘಾರ ಕವಿಯದು. ಕಾಣು ಪದವನ್ನು ದುಡಿಸಿಕೊಂಡ ರೀತಿಯಲ್ಲಿಯೆ ಕವಿತೆ ಅಡಗಿರುವದು. ಮೀನು ಮಾಕೇಟ್ಟಿನಲ್ಲಿ ಸಾಲಾಗಿ ಸತ್ತು ಮಲಗಿದ ಮೀನು ಗಳನ್ನು ಕಂಡ ಕವಿ   ಸಾವಿನ ಕಂತೆಸಾಲಾಗಿ ಮಲಗಿದೆಸಾವಿಗೂ ಬೆಲೆಯಿದೆ , ಸಂತೆ! ಮಾರಾಟಕ್ಕಿಟ್ಟ ಮೀನಿನ ಗುಂಪು ಕವಿಯಲ್ಲಿ ಮೂಡಿಸುವ ಆಘಾತ ಕವಿತೆಯಾಗಿ ಹೊರಹೊಮ್ಮಿದೆ.  ಕೌಟುಂಬಿಕ ಪರಿಸರವನ್ನು ಚಿತ್ರಿಸುವ ಹೈಕುಗಳಲ್ಲಿ ಹೆಂಡತಿಯ ಮೌನವನ್ನು ಕುರಿತು ಅವರು ಬರೆದ ಹೈಕು ಹೀಗಿದೆ. ನೀ ಸುಮ್ಮನಿದ್ಧೀ ಎಂದರೆನನಗೇನೋ ಗುಮಾನಿ!ಏನೋ ಆಟ, ಏನೋ ಬೇಟ ನಾಳೆ ಈ ಹೊತ್ತಿಗೆ! ಪ್ರತಿಯೊಂದು ಭಾಗದ ಹೈಕುಗಳೂ ಅರ್ಥಪೂರ್ಣ ರಚನೆಗಳಾಗಿರುವದು ಅವರ ಕಾವ್ಯ ಸಂಕಲನದ ಮಹತ್ವ ಹೆಚ್ಚಿಸಿವೆ.  ಸುಮ್ಮನೇ ಹೆಸರಿಸುತ್ತ ಹೋಗುವದಾದರೆ ಉಲ್ಕಾಪಾತಕ್ಕೆ ಉರುಳಿದ ಉಲ್ಕೆಯಪತನಕ್ಕೆ ಉಳಿದ ತಾರೆಗಳುಪಾಪ ! ಎಂದವು ದಿನದರ್ಶಿಕೆ ಭಾಗದ ಒಂದು ಹೈಕು ಆಸೆಯನ್ನೆ ತೂಗು ಬಿಟ್ಟೆನನ್ನೆದೆಯ ಗೋಡೆ ಮೊಳೆಗೆಈ ವರ್ಷ ಕೂಡ ಬದುಕುವೆ ಎಷ್ಟೊಂದು ಧನಾತ್ಮಕವಾದ ಚಿಂತನೆ! ಇನ್ನೊಂದು ಇದೆಬಾಗದ ಹೈಕು ವರ್ಷಕ್ಕೊಂದು ಹೊಸ ಕ್ಯಾಲೆಂಡರ್ಗರಿಗರಿ ಮುಗುಚುತ್ತದೆದುರ್ಬಲ ಸೋತ ಕೈಗಳು ಹೀಗೆ ಇಲ್ಲಿ ಹೈಕುಗಳು ಅವರೇ ಹೇಳಿದಂತೆ ‘ಕಿರಿದರಲ್ಲಿ ಪಿರಿದರ್ಥ’ ನೀಡಿವೆ. ಅವರು “ಹೈಕು ತತ್ ಕ್ಷಣಕ್ಕೆ ಮಿಂಚಿ ಮರೆಯಾಗುವ ಕಾವ್ಯಪ್ರಕಾರ ಅಲ್ಲ. ಅಂತರಾಳಕ್ಕೆ ಹೋಗಿ ಆನಂದದ ಸೆಲೆಯಾಗಿ ಚಿಮ್ಮಿಸುವ ಸಾಧನವಾಗಿ ಬಳಕೆಯಾಗುತ್ತದೆ” ಎಂದು ಹೇಳುವ ಅವರು ತೋರುವ ವಿನಯ ದೊಡ್ಡದು. “ಇಲ್ಲಿನ ನನ್ನೆಲ್ಲ ಹೈಕುಗಳನ್ನು ಅಪ್ಪಟ ಹಾಯ್ಕು ಗಳೆನ್ನುವ ಹಕ್ಕು ಧೈರ್ಯ ನನಗಿಲ್ಲ .. ಅರಿವುದಕ್ಕೆ ಇನ್ನೂ ಇದೆ. ಆ ಮಾರ್ಗದ ನವಿರುಯ ಅನುಭವಗಳ ಸರಳ ಅಭಿವ್ಯಕ್ತಿಗಳೇ ಈ ನನ್ನ ಹಾಯ್ಕುಗಳು” ಎನ್ನುವ ಮಾತು ಮುಖ್ಯವಾಗಿ ಕಾಣಿಸುತ್ತದೆ.  ಡಾ ವೈ.ಎಂ.ಯಾಕೊಳ್ಳಿ

“ರಾಮಚಂದ್ರ ಕುಲಕರ್ಣಿಯವರ ಹಾಯ್ ಹಾಯ್ಕು -೩” ವೈ.ಎಂ.ಯಾಕೊಳ್ಳಿ Read Post »

ಕಾವ್ಯಯಾನ

ಕಲ್ಪನಾ ಎಸ್ ಅಣೆಪ್ಪನವರ (ಪಾಟೀಲ)”ಸ್ನೇಹ ದಿನಕ್ಕೊಂದಷ್ಟು ಸಾಲುಗಳು”

ಕಾವ್ಯ ಸಂಗಾತಿ ಕಲ್ಪನಾ ಎಸ್ ಅಣೆಪ್ಪನವರ (ಪಾಟೀಲ) “ಸ್ನೇಹ ದಿನಕ್ಕೊಂದಷ್ಟು ಸಾಲುಗಳು” ಸ್ನೇಹ ಅಂದ್ರೆ ಏನಂತಿರಾ?ಸ್ಕೂಲ್ ಬೆಲ್ ಹೊಡೆದ ತಕ್ಷಣ  “ಊಟ ತಂದ್ಯಾ?” ಅಂತ ಕೇಳೋದು. ಸ್ನೇಹ ಅಂದ್ರೆ ನೀನು ಫೇಲ್ ಆದಾಗ“ಪರವಾಗಿಲ್ಲ ಕಣೇ/ಣೋ” ಅಂತ  ನಿನಗಿಂತ ಜೋರಾಗಿ ಬೇಜಾರುಮಾಡಿಕೊಳ್ಳುವುದು.  ನೀನು ಪಾಸ್ ಆದಾಗ ನಿನಗಿಂತಜೋರಾಗಿ ಚಪ್ಪಾಳೆ ತಟ್ಟೋದು. ಸ್ನೇಹ ಅಂದ್ರೆ  ಅರ್ಧ ರಾತ್ರಿ “ನಿದ್ದೆ ಬರ್ತಿಲ್ಲ” ಅಂದ್ರೆ  ಎರಡು ಗಂಟೆ ಮಾತಾಡಿ “ಮಲ್ಕೊ” ಅಂತ ಹೇಳೋದು. ಜಗಳ ಆಡಿ, ಮತ್ತೆ ಐದುನಿಮಿಷದಲ್ಲಿ ತಪ್ಪಿರದಿದ್ದರೂ “ಸಾರಿ ಕಣೇ” ಅನ್ನೋದುಬೇಜಾರು ಮಾಡೋದೆ ಇರದು. ಅದು ರಕ್ತದ ಸಂಬಂಧ ಅಲ್ಲ,  ಆದ್ರೂ ರಕ್ತಕ್ಕಿಂತ ಗಟ್ಟಿ.  ಅದು ಮಾತಿನ ಒಪ್ಪಂದ ಅಲ್ಲ,  ಆದ್ರೂ ಮಾತಿಲ್ಲದೆ ಅರ್ಥ ಆಗೋ ಬಂಧ. ಸ್ನೇಹ ಇದ್ರೆ ಬದುಕು ಸುಲಭ.  ಬೀಳುವಾಗ ಹಿಡಿಯೋ ಕೈ,  ನಗುವಾಗ ಜೊತೆಗಿರುವ ನೆರಳು,  ಅಳುವಾಗ ಒರಗಲೊಂದು ಭುಜಕಣ್ಣೀರೊರೆಸುವ ನಿಷ್ಕಲ್ಮಶ ಹೃದಯಗಳು. ನಿನ್ನ ಬದುಕಲ್ಲಿ ಅಂತಹ ಒಬ್ಬ ಸ್ನೇಹಿತಇದ್ದಾನಾ?/ಳಾ?ಅವರಿಗೆ ಈಗಲೇ “ಥ್ಯಾಂಕ್ಸ್ ಕಣೆ/ಣೊ”ಅಂತ ಹೇಳ್ಬಿಡು ಮನಸಾರೆ ಶರಣೆಂದು ಬಿಡು.ಇಂದೊಂದಿನಕ್ಕೆ ಸೀಮಿತ ಅಲ್ಲ ಈ ಜನುಮ ಪ್ರತಿ ಜನುಮದಲ್ಲೂ ಜೊತೆಯಾದ ಸ್ನೇಹಕ್ಕೆ. ಕಲ್ಪನಾ ಎಸ್ ಅಣೆಪ್ಪನವರ (ಪಾಟೀಲ)

ಕಲ್ಪನಾ ಎಸ್ ಅಣೆಪ್ಪನವರ (ಪಾಟೀಲ)”ಸ್ನೇಹ ದಿನಕ್ಕೊಂದಷ್ಟು ಸಾಲುಗಳು” Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ ಸಂಗಾತಿ-128 ರುಕ್ಮಿಣಿ ನಾಯರ್ ಒಬ್ಬ ಅಮ್ಮನ ಕಥೆ ಹೆಚ್ಚಿನ ಚಿಕಿತ್ಸೆಗೆ ವೈದ್ಯರ ಶಿಫಾರಸ್ಸಿನ ಪತ್ರ ಆ ಹುಡುಗಿಯ ಕಸಿನ್ ತನ್ನ ಕುಟುಂಬದವರಿಗೆ ಸುಮತಿಯ ಅನಾರೋಗ್ಯದ ಬಗ್ಗೆ ತಿಳಿಸಿದನು. ಸುಮತಿಯ ಅನಾರೋಗ್ಯದ ಬಗ್ಗೆ ತಿಳಿದು ಕುಟುಂಬದ ಎಲ್ಲರಿಗೂ ಬಹಳ ದುಃಖವಾಯಿತು. ಸುಮತಿಯ ಮಗಳಿಗೆ ಊಟವನ್ನು ಬಡಿಸುವಂತೆ ಅತ್ತಿಗೆಗೆ ಹೇಳಿ ತಮ್ಮ ಹಿತ್ತಲ ತೆಂಗಿನ ಮರದಿಂದ ನಾಲ್ಕೈದು ಎಳನೀರನ್ನು ಕೆಲಸಗಾರರಿಗೆ ಹೇಳಿ ಕೊಯ್ಯಿಸಿ, ತಾನೂ ಊಟ ಮಾಡಿ…. “ಬಾ ಆಸ್ಪತ್ರೆಗೆ ಹೋಗೋಣ…. ಎಂದು ಆ ಹುಡುಗಿಗೆ ಹೇಳುತ್ತಾ,…. “ಅಮ್ಮಾ ….ನಾನು ಅತ್ತೆಯನ್ನು ನೋಡಲು ಹೋಗಿ ಬರುತ್ತೇನೆ”…. ಎಂದಾಗ ಬಾಗಿಲ ಬಳಿ ಬಂದ ಆತನ ಅತ್ತಿಗೆ…. “ಅತ್ತೆಗೆ ಹೇಳು, ನಾಳೆ ನಾನು ಅಣ್ಣ ಜೊತೆಗೆ ಆಸ್ಪತ್ರೆಗೆ ಅತ್ತೆಯನ್ನು ನೋಡಲು ಬರುತ್ತೇವೆ …. ಎಂದು ಹೇಳಿ ಅವರಿಬ್ಬರನ್ನೂ ಬೀಳ್ಕೊಟ್ಟರು. ದಾರಿಯುದ್ದಕ್ಕೂ ಮೌನವಾಗಿದ್ದ ಹುಡುಗಿಯನ್ನು ಆತ ಮಾತಿಗೆಳೆಯುತ್ತಲೇ ಇದ್ದ. ಅತ್ತೆಯ ಅನಾರೋಗ್ಯಕ್ಕೆ ಕಾರಣವೇನು ಎಂದು ಕೇಳಿದ. ಆತನ ಎಲ್ಲಾ ಪ್ರಶ್ನೆಗೂ ಚುಟುಕಾಗಿ ಉತ್ತರಿಸಿ ಆ ಹುಡುಗಿ ಸುಮ್ಮನಾಗುತ್ತಿದ್ದಳು. ಆಸ್ಪತ್ರೆಯನ್ನು ತಲುಪಿ ಇಬ್ಬರೂ ವಾರ್ಡ್ ಒಳಗೆ ಪ್ರವೇಶಿಸಿದಾಗ, ಸುಮತಿಯ ಹಿರಿಯ ಮಗಳು ತನ್ನ ಪುಟ್ಟ ಮಕ್ಕಳೊಂದಿಗೆ ವಾರ್ಡಿನಲ್ಲಿ ಸುಮತಿಯ ಬಳಿ ಕುಳಿತು ಮಾತನಾಡುತ್ತಿದ್ದಳು. ತನ್ನ ತಂಗಿಯ ಜೊತೆ ಕಸಿನ್ ಅನ್ನು ಕಂಡಾಗ ಈತ ಹೇಗೆ ಇಲ್ಲಿಗೆ ಬಂದ? ಎನ್ನುವಂತೆ ಅಕ್ಕ ತಂಗಿಯೆಡೆಗೆ ಪ್ರಶ್ನಾರ್ಥಕ ನೋಟ ಬೀರಿದಳು. ಅದಕ್ಕೆ ತಂಗಿ ಆಮೇಲೆ ಹೇಳುತ್ತೇನೆ ಎಂದು ಸನ್ನೆ ಮಾಡಿದಳು….”ಅಮ್ಮಾ ….ನೋಡು ಯಾರು ಬಂದಿದ್ದಾರೆ”…. ಎಂದು ತಾಯಿಯನ್ನು ಕೇಳಿದಳು. ಬಾಗಿಲ ಕಡೆಗೆ ಬೆನ್ನು ಹಾಕಿ ಕುಳಿತಿದ್ದ ಸುಮತಿ ಹಿಂದಕ್ಕೆ ತಿರುಗಿ ನೋಡಿದಳು. ಮಗಳ ಜೊತೆಗೆ ತನ್ನ ತಂದೆಯ ಅಕ್ಕನ ಮಗಳ ಎರಡನೇ ಮಗ ನಿಂತಿರುವುದು ಕಂಡಿತು. ಸುಮತಿಯ ಮುಖ ಖುಷಿಯಿಂದ ಅರಳಿತು…. “ಏನಪ್ಪಾ ಹೇಗಿದ್ದೀಯಾ? ಮನೆಯಲ್ಲಿ ಎಲ್ಲರೂ ಸೌಖ್ಯವೇ?”… ಎಂದು ಸುಮತಿ ಆತನನ್ನು ಕೇಳಿದಾಗ…. “ಎಲ್ಲರೂ ಸೌಖ್ಯ ಅತ್ತೆ…. ನೀವು ಹೇಗಿದ್ದೀರಿ?… ಬೆಳಗ್ಗೆ ಇವಳು ಕಾಲೇಜಿಗೆ ತಡವಾಗಿ ಬಂದದ್ದು ಏಕೆ ಎಂದು ಕೇಳಿದೆ… ಆಗ ನೀವು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವುದು ತಿಳಿಯಿತು…. ಹಾಗಾಗಿ ನಾನೂ ಜೊತೆಗೆ ಬರುತ್ತೇನೆ ಎಂದು ಹೇಳಿದೆ…. ಈಗ ನಿಮ್ಮ ಆರೋಗ್ಯ ಹೇಗಿದೆ?…. ಡಾಕ್ಟರ್ ಏನು ಹೇಳಿದರು?”…. ಎಂದು ಸುಮತಿಯನ್ನು ಕೇಳುತ್ತಾ, ಕೈಯಲ್ಲಿ ಹಿಡಿದಿದ್ದ ಎಳನೀರುಗಳ ಕಾಯಿಯನ್ನು ಮಂಚದ ಪಕ್ಕದಲ್ಲಿ ಇದ್ದ ಕಿಟಕಿಯ ಬಳಿ ಇಟ್ಟ…. “ಪರವಾಗಿಲ್ಲಪ್ಪಾ…. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗುವಂತೆ ಮಗಳಿಗೆ ಡಾಕ್ಟರ್ ತಿಳಿಸಿದ್ದಾರೆ”…. ಎಂದು ತನ್ನ ಎರಡನೇ ಮಗಳ ಮುಖವನ್ನು ನೋಡುತ್ತಾ ಸುಮತಿ ಹೇಳಿದಳು. ಅವಳು ‘ಹೌದು’ ಎನ್ನುವಂತೆ ತಲೆ ಆಡಿಸಿದಳು….. “ಹಾಗಾದರೆ ಬೆಂಗಳೂರಿಗೆ ಹೋಗಿ ಬನ್ನಿ ಅತ್ತೆ…. ಅಲ್ಲಿ ಒಳ್ಳೆಯ ಆಸ್ಪತ್ರೆಗಳು ಇವೆ…. ನಿಮಗೆ ಸರಿಯಾದ ಚಿಕಿತ್ಸೆಯೂ ದೊರಕುತ್ತದೆ”… ಎಂದು ಹೇಳಿ, ಸುಮತಿಯ ಹಿರಿಯ ಮಗಳನ್ನು ಉದ್ದೇಶಿಸಿ…. “ನೀನು ಯಾವಾಗ ಬಂದೆ?”…. ಎಂದು ಕೇಳುತ್ತಾ, ಅವಳ ಇಬ್ಬರು ಮುದ್ದಾದ ಮಕ್ಕಳ ತಲೆಯನ್ನು ನೇವರಿಸಿದ…. “ನಾನು ಬಂದು ಸ್ವಲ್ಪ ಹೊತ್ತಾಯ್ತು”… ಎಂದಳು.  ಉಭಯ ಕುಶಲೊಪರಿಯ ನಂತರ ಆತ ಹೊರಡಲನುವಾದ. ಹೊರಡುವ ಮುನ್ನ ನಾಳೆ ತನ್ನ ಅಣ್ಣ ಮತ್ತು ಅತ್ತಿಗೆ ಬರುವುದಾಗಿ ತಿಳಿಸಿದ್ದಾರೆ ಎಂಬುದನ್ನು ಹೇಳಲು ಆತ ಮರೆಯಲಿಲ್ಲ. ಸುಮತಿಯ ಎರಡನೇ ಮಗಳು ಆತನ ಜೊತೆಗೆ ವಾರ್ಡಿನಿಂದ ಹೊರಗೆ ಅಷ್ಟು ದೂರ ಬೀಳ್ಕೊಡಲು ಬಂದಳು. ತನ್ನ ಅಮ್ಮನನ್ನು ನೋಡಲು ಬಂದಿದ್ದಕ್ಕಾಗಿ ಮತ್ತು ಎಳನೀರುಗಳನ್ನು ತಂದಿದ್ದಕ್ಕಾಗಿ ಧನ್ಯವಾದಗಳನ್ನು ತಿಳಿಸಿದಳು. ಆತ ಮುಗುಳ್ನಗುತ್ತಾ…. “ಸರಿ ಹೊರಡುತ್ತೇನೆ…. ನೀನು ಹೆಚ್ಚು ಆಲೋಚನೆ ಮಾಡಬೇಡ…. ಅತ್ತೆಯ ಆರೋಗ್ಯ ಸರಿಯಾಗುತ್ತದೆ”… ಎಂದು ಹೇಳಿ ಮನೆಯ ಕಡೆಗೆ ನಡೆದನು. ಆ ಹುಡುಗಿ ವಾರ್ಡಿಗೆ ಹಿಂದಿರುಗಿದಳು. ವಾರ್ಡಿಗೆ ಹಿಂತಿರುಗಿದ ತಂಗಿಯನ್ನು ಉದ್ದೇಶಿಸಿ…. “ಅಮ್ಮನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಬೇಕಾ?…. ನೀನು ನನಗೆ ಈ ಬಗ್ಗೆ ತಿಳಿಸಲೇ ಇಲ್ಲ”… ಎಂದಳು….” ಹೌದು ಅಕ್ಕಾ”…. ಎಂದು ಉತ್ತರಿಸಿದಳು…. “ಬೆಂಗಳೂರಿಗೆ ಹೋಗಬೇಕಾದರೆ ಮತ್ತು ಅಲ್ಲೇ ಚಿಕಿತ್ಸೆಯನ್ನು ಪಡೆಯಬೇಕಾದರೆ ಹೆಚ್ಚಿನ ಹಣ ಖರ್ಚಾಗುತ್ತದೆ ಅಲ್ಲವೇ?…. ನಮ್ಮಲ್ಲಿ ಯಾರಲ್ಲೂ ಅಷ್ಟೊಂದು ಹಣವಿಲ್ಲ…. ಏನು ಮಾಡುವುದು?”… ಎಂದು ಚಿಂತಿತಳಾಗಿ ತಂಗಿಯನ್ನು ಕೇಳಿದಳು…. “ನೀನೇನೂ ಹೆಚ್ಚು ಆಲೋಚಿಸಬೇಡ ಅಕ್ಕಾ…. ನಾನಾಗಲೇ ನಮ್ಮ ಎಸ್ಟೇಟಿನ ಸಾಹುಕಾರರು ಹಾಗೂ ಅವರ ಪತ್ನಿಯ ಬಳಿ ಮಾತನಾಡಿದ್ದೇನೆ…. ಅಮ್ಮನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುವ ವ್ಯವಸ್ಥೆಯನ್ನು ಮಾಡುತ್ತೇನೆ ಎಂದು ಅವರು ಭರವಸೆ ನೀಡಿದ್ದಾರೆ”…. ಎಂದಳು. “ಒಬ್ಬಳೇ ಅಮ್ಮನನ್ನು ಕರೆದುಕೊಂಡು ಬೆಂಗಳೂರಿಗೆ ಹೇಗೆ ಹೋಗುತ್ತೀಯಾ?”…. ಎಂದು ಅಕ್ಕ ಕೇಳಿದಾಗ…. ಇಂದು ಸಂಜೆ ನಾನು ನಿಮ್ಮ ಮನೆಗೆ ಬಂದು ಈ ವಿಷಯವನ್ನು ತಿಳಿಸಿ, ನಮ್ಮ ಜೊತೆಗೆ ಬಾವನನ್ನು ಬೆಂಗಳೂರಿಗೆ ಬರುವಂತೆ ಕೇಳಿಕೊಳ್ಳಬೇಕೆಂದಿದ್ದೆ…. ಈಗ ನೀನೇ ಇಲ್ಲಿಗೆ ಬಂದಿದ್ದು ತುಂಬಾ ಒಳ್ಳೆಯದಾಯಿತು…. ದಯವಿಟ್ಟು ನಮ್ಮ ಜೊತೆ ಬಾವ ಬರುವಂತೆ ವಿನಂತಿಸು ಅಕ್ಕ”…. ಎಂದಾಗ…. “ಏನೇ ಹೀಗೆ ಹೇಳ್ತಾ ಇದ್ದೀಯಾ…. ಬಾವನೇನು ಹೊರಗಿನವರೇ?…. ಅಮ್ಮನ ಬಗ್ಗೆ ಅವರಿಗೂ ಕಾಳಜಿ ಇದೆ…. ನಿಮ್ಮಿಬ್ಬರನ್ನೇ ಅವರು ಬೆಂಗಳೂರಿಗೆ ಕಳುಹಿಸುತ್ತಾರೆಯೇ?…. ಖಂಡಿತಾ ಬಂದೇ ಬರುತ್ತಾರೆ…. ಸ್ವಲ್ಪ ಹೊತ್ತಿನಲ್ಲೇ ನಿನ್ನ ಬಾವನೂ ಇಲ್ಲಿಗೆ ಬರುತ್ತಾರೆ.”… ಎಂದಳು. ಅಕ್ಕ ಈಗ ಬಂದಿದ್ದು ಒಳ್ಳೆಯದಾಯಿತು ಎನಿಸಿತು ತಂಗಿಗೆ. ಸಂಜೆ ಬಾವ ಬಂದರೆ ಡಾಕ್ಟರನ್ನು ಭೇಟಿ ಮಾಡಿ ತಾಯಿಯನ್ನು ಇಲ್ಲಿಂದ ಡಿಸ್ಚಾರ್ಜ್ ಮಾಡಿಸಿಕೊಂಡು ಬೆಂಗಳೂರಿಗೆ ಕರೆದುಕೊಂಡು ಹೋಗುವ ಬಗ್ಗೆ ಮಾತನಾಡಬಹುದು ಎಂದು ಮನದಲ್ಲಿ ಅಂದುಕೊಂಡಳು. ತಾಯಿ ಮತ್ತು ಮಕ್ಕಳು ಮಾತನಾಡುತ್ತಾ ಕುಳಿತಿರುವಾಗಲೇ ಸುಮತಿಯ ಅಳಿಯ ಬಂದ. ಹಿರಿಯ ಮಗಳು ಎಲ್ಲ ವಿಷಯವನ್ನೂ ತನ್ನ ಗಂಡನಿಗೆ ತಿಳಿಸಿದಳು. ನಾನು ನಿಮ್ಮ ಜೊತೆ ಬೆಂಗಳೂರಿಗೆ ಬರುತ್ತೇನೆ ಎಂದು ಅಳಿಯ ಭರವಸೆ ನೀಡಿದನು. ಸಂಜೆ ಸುಮತಿಯ ಚಿಕಿತ್ಸೆ ಮಾಡುತ್ತಿರುವ ಫಿಜಿಷಿಯನ್ ರನ್ನು ಕಂಡು ಸುಮತಿಯನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದುಕೊಂಡು ಹೋಗುತ್ತೇವೆ ಎಂದು ಹೇಳಿದಾಗ, ಅವರಿಗೂ ಬಹಳ ಸಂತೋಷವಾಯಿತು. ಆದಷ್ಟು ಬೇಗ ಬೆಂಗಳೂರಿಗೆ ಕರೆದುಕೊಂಡು ಹೋಗಿ ಉತ್ತಮ ಚಿಕಿತ್ಸೆಯನ್ನು ಕೊಡಿಸಿ ಎಂದು ಹೇಳಿ, ಬೆಂಗಳೂರಿನ ಕಿಡ್ನಿ ಫೌಂಡೇಶನ್ ಆಸ್ಪತ್ರೆಯ ವೈದ್ಯರಿಗೆ ಒಂದು ಶಿಫಾರಸ್ಸಿನ ಪತ್ರವನ್ನು ಬರೆದು ತಮ್ಮ ಸಹಿ ಹಾಕಿ ಕೊಟ್ಟರು.

Read Post »

ಕಾವ್ಯಯಾನ

ಗಂಗಾ ಚಕ್ರಸಾಲಿ “ಗೆಳೆತನವೂ..ಲೆಕ್ಕವೇ…”

ಕಾವ್ಯ ಸಂಗಾತಿ ಗಂಗಾ ಚಕ್ರಸಾಲಿ “ಗೆಳೆತನವೂ..ಲೆಕ್ಕವೇ…” ಅಮ್ಮನ ಮಡಿಲ ಅಗಲಿಶಾಲೆಯಂಗಳದಿ ಕಾಲಿಟ್ಟಾಗನನ್ನಂತೆ ಅಳುವ ಅವನ ನೋಡಿಸಮಾನ ದುಃಖಿಗಳೆಂದು..ಗೆಳೆಯರನ್ನು ಕೂಡಿಸುತ್ತಾ ಹೋದೆವುಗೆಳೆತನದ ಅರ್ಥ ತಿಳಿದೆವು… ಶಾಲೆ.. ಕಾಲೇಜುಗಳಲ್ಲಿಪಾಠಗಳಿಗಿಂತಲೂ…ನಮ್ಮನ್ನು ಹಿಡಿದಿಟ್ಟಿದ್ದುಇದೇ ಬಾಂಧವ್ಯವಲ್ಲವೇ..ಅದನ್ನು ಗುಣಿಸಿ ಗುಣಿಸಿವಿಶಾಲಾರ್ಥವ ನೀಡಿದೆವು… ಅದೇಕೋ.. ಜವಾಬ್ದಾರಿಯಮೂಸೆಯೊಳಗೆ..ಒತ್ತಡ,ಸಮಯದಭಾವ ಪದಗಳ ನೂಕಿಸ್ನೇಹ ಬಂಧವನು ಕಳೆಯುತ್ತಾ..ಅದರ ಸೊಗಸನು ಮನದ ಮೂಲೆಗೆ ತಳ್ಳಿಬಿಟ್ಟೆವು… ಇಳಿವಯಸ್ಸಿನ ಸಂಜೆಯೊಳುಅದೇ ಬಾಲ್ಯಾವಸ್ಥೆಯ ಸ್ನೇಹದ ನೆನಪುಮನಸ್ಸಿಗೆ ರಂಗು ತುಂಬಲು ಹಾತೊರೆಯುತ್ತದೆ..ಆದರೆ ಭಾಗಾಕಾರದ ಲೆಕ್ಕದಲಿ..ನಾವು ಶೇಷವಾಗಿರುತ್ತೇವೆ ಅಷ್ಟೇ…ಸ್ನೇಹವೂ ಒಂದು ಲೆಕ್ಕ..ಅಲ್ಲವೇ… ಗಂಗಾ ಚಕ್ರಸಾಲಿ

ಗಂಗಾ ಚಕ್ರಸಾಲಿ “ಗೆಳೆತನವೂ..ಲೆಕ್ಕವೇ…” Read Post »

ಇತರೆ

“ಅನೇಕಮ್‌ ಶಾಲೆಯಮಕ್ಕಳು ಬರೆದ ಕನ್ನಡ ಬರಹಗಳು”ಡಾ. ಮಮತ, ಶಿಕ್ಷಕರು,ಅನೇಕಮ್‌ ಬೆಂಗಳೂರು

ಮಕ್ಕಳ ಸಂಗಾತಿ ಡಾ. ಮಮತ, ಶಿಕ್ಷಕರು, ಅನೇಕಮ್‌ ಬೆಂಗಳೂರು “ಅನೇಕಮ್‌ ಶಾಲೆಯ ಮಕ್ಕಳು ಬರೆದ ಕನ್ನಡ ಬರಹಗಳು” ಮರದ ಮಹತ್ವ ಒಂದು ಹಳ್ಳಿಯಲ್ಲಿ ಅನಿಕೇತ್ ಎಂಬ ಬಾಲಕನಿದ್ದನು. ಅವನು ಪ್ರತಿದಿನ ಶಾಲೆಗೆ ಹೋಗುವಾಗ ಒಂದು ದೊಡ್ಡ ಮಾವಿನ ಮರದ ಕೆಳಗೆ ಸ್ವಲ್ಪ ಸಮಯ ವಿಶ್ರಾಂತಿ ಪಡೆಯುತ್ತಿದ್ದನು. ಒಂದು ದಿನ ಆ ಮರದ ಕೆಳಗೆ ಒಂದು ಚಿಕ್ಕ ಗಿಡ ಒಣಗುತ್ತಿರುವುದನ್ನು ಅವನು ಗಮನಿಸಿದನು. ಅದನ್ನು ಕಂಡ ಅನಿಕೇತ್‌ಗೆ ತುಂಬಾ ಬೇಸರವಾಯಿತು. ಆ ದಿನದಿಂದ ಪ್ರತಿದಿನ ಶಾಲೆಗೆ ಹೋಗುವಾಗ ಮತ್ತು ಶಾಲೆಯಿಂದ ಹಿಂದಿರುಗುವಾಗ ಆ ಗಿಡಕ್ಕೆ ನೀರು ಹಾಕಿ ಪ್ರೀತಿಯಿಂದ ಆರೈಕೆ ಮಾಡುತ್ತಿದ್ದನು. ಕೆಲವು ವಾರಗಳ ನಂತರ ಆ ಗಿಡ ಹಸಿರಾಗಿ ಬೆಳೆದು ದೊಡ್ಡ ಮರವಾಯಿತು. ಅದರ ನೆರಳಿನಲ್ಲಿ ಪಕ್ಷಿಗಳು ಗೂಡು ಕಟ್ಟಿದವು. ದಾರಿಹೋಕರು ಅದರ ತಂಪಾದ ನೆರಳಿನಲ್ಲಿ ವಿಶ್ರಾಂತಿ ಪಡೆಯತೊಡಗಿದರು. ಒಂದು ದಿನ ಪಂಚಾಯಿತಿಯವರು ರಸ್ತೆ ವಿಸ್ತರಣೆಗಾಗಿ ಆ ಮರವನ್ನು ಕಡಿಯಲು ಬಂದರು. ಆಗ ಊರಿನ ಜನರು ಆ ಮರದ ಮಹತ್ವವನ್ನು ತಿಳಿಸಿ, ಅದನ್ನು ಕಡಿಯಬಾರದೆಂದು ಮನವಿ ಮಾಡಿದರು. ಜನರ ಮನವಿಯನ್ನು ಗೌರವಿಸಿದ ಪಂಚಾಯಿತಿಯವರು ಮರವನ್ನು ಉಳಿಸಲು ನಿರ್ಧರಿಸಿದರು. ಈ ವಿಷಯವನ್ನು ತಿಳಿದ ಅನಿಕೇತ್ ತುಂಬಾ ಸಂತೋಷಪಟ್ಟನು. ತಾನು ಪ್ರೀತಿಯಿಂದ ಬೆಳೆಸಿದ ಗಿಡ ಇಂದು ದೊಡ್ಡ ಮರವಾಗಿ ಅನೇಕರಿಗೆ ನೆರಳು, ಆಶ್ರಯ ಮತ್ತು ಸಂತೋಷ ನೀಡುತ್ತಿರುವುದನ್ನು ಕಂಡು ಹೆಮ್ಮೆಪಟ್ಟನು. ಆಗಿನಿಂದ ಅವನು ಇನ್ನೂ ಹೆಚ್ಚು ಮರಗಳನ್ನು ನೆಡುವ ಸಂಕಲ್ಪ ಮಾಡಿದರು. ನೀತಿ: ಒಂದು ಮರ ನೂರಾರು ಜೀವಗಳಿಗೆ ಆಸರೆಯಾಗುತ್ತದೆ. ಆದ್ದರಿಂದ ಮರಗಳನ್ನು ನೆಟ್ಟು, ಬೆಳೆಸಿ, ಕಾಪಾಡೋಣ .ಮೋನಿಶ್7 ನೇ ತರಗತಿಅನೇಕಮ್ ಶಾಲೆಬೆಂಗಳೂರು ಹಸಿರು ಲೋಕದ ಸಿರಿ ನನಗೆ ಪ್ರಕೃತಿ ತುಂಬಾ ಇಷ್ಟ. ಬೆಳಿಗ್ಗೆ ಪಕ್ಷಿಗಳ ಚಿಲಿಪಿಲಿ, ಹಸಿರು ಮರಗಳು, ಬಣ್ಣ ಬಣ್ಣದ ಹೂಗಳು ಮತ್ತು ತಂಪಾದ ಗಾಳಿ ನನಗೆ ತುಂಬಾ ಸಂತೋಷವನ್ನು ನೀಡುತ್ತವೆ. ಪ್ರಕೃತಿಯ ಸೌಂದರ್ಯ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಮರಗಳು ನಮಗೆ ಶುದ್ಧ ಗಾಳಿಯನ್ನು ನೀಡುತ್ತವೆ. ನದಿಗಳು, ಕೆರೆಗಳು ಮತ್ತು ಮಳೆಯ ನೀರು ನಮ್ಮ ಜೀವನಕ್ಕೆ ಆಧಾರವಾಗಿವೆ. ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ಔಷಧೀಯ ಸಸ್ಯಗಳು ಪ್ರಕೃತಿಯ ಅಮೂಲ್ಯ ಕೊಡುಗೆಗಳಾಗಿವೆ. ಪ್ರಕೃತಿ ನಮಗೆ ಶುದ್ಧ ಗಾಳಿ, ನೀರು ಮತ್ತು ಆಹಾರವನ್ನು ನೀಡುತ್ತದೆ. ಆದ್ದರಿಂದ ನಾವು ಪ್ರಕೃತಿಯನ್ನು ಕಾಪಾಡುವುದು ನಮ್ಮ ಕರ್ತವ್ಯವಾಗಿದೆ. ನಾನೂ ಮರಗಳನ್ನು ನೆಡುತ್ತೇನೆ. ನೀರನ್ನು ವ್ಯರ್ಥ ಮಾಡದೆ ಮಿತವಾಗಿ ಬಳಸುತ್ತೇನೆ. ನನ್ನ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುತ್ತೇನೆ. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತೇನೆ. ಇತರರಿಗೂ ಪರಿಸರ ಸಂರಕ್ಷಣೆಯ ಮಹತ್ವವನ್ನು ತಿಳಿಸುತ್ತೇನೆ. ಪ್ರಕೃತಿಯನ್ನು ಪ್ರೀತಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಪ್ರಕೃತಿ ಚೆನ್ನಾಗಿದ್ದರೆ ನಮ್ಮ ಜೀವನವೂ ಆರೋಗ್ಯಕರ, ಸುಂದರ ಮತ್ತು ಸಂತೋಷಕರವಾಗಿರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಪರಿಸರವನ್ನು ರಕ್ಷಿಸಿ, ಮುಂದಿನ ಪೀಳಿಗೆಗೆ ಹಸಿರು ಭೂಮಿಯನ್ನು ಉಳಿಸಬೇಕು. ನೀತಿ: ಪ್ರಕೃತಿಯನ್ನು ರಕ್ಷಿಸಿದರೆ, ಪ್ರಕೃತಿ ನಮ್ಮನ್ನು ರಕ್ಷಿಸುತ್ತದೆ. ಜೀವಿತ8 ನೇ ತರಗತಿಅನೇಕಮ್ ಶಾಲೆಬೆಂಗಳೂರು ಜವಾಬ್ದಾರಿಯ ಮಹತ್ವ ಶಾಂತಿನಗರ ಎಂಬ ಊರಿನಲ್ಲಿ ಒಂದು ಕುಟುಂಬ ವಾಸಿಸುತ್ತಿತ್ತು. ಆ ಕುಟುಂಬದಲ್ಲಿ ಒಬ್ಬ ಅಜ್ಜಿ ಮತ್ತು ಇಬ್ಬರು ಮೊಮ್ಮಕ್ಕಳು ಇದ್ದರು. ಆ ಇಬ್ಬರು ಮಕ್ಕಳ ಹೆಸರು ಪ್ರಿಯಾ ಮತ್ತು ಶ್ವೇತ. ಅವರು ಪ್ರತಿದಿನ ಬೆಳಿಗ್ಗೆ ಏಳು ಗಂಟೆಗೆ ಕೆಲಸಕ್ಕೆ ಹೋಗುತ್ತಿದ್ದರು. ಅಜ್ಜಿ ಮನೆ ಕೆಲಸದ ಜೊತೆಗೆ ಕೈತೋಟದ ಕೆಲಸವನ್ನೂ ಮಾಡುತ್ತಿದ್ದರು. ಒಂದು ದಿನ ಅಜ್ಜಿ ತಾನು ಸಂಪಾದಿಸಿದ ಹಣದಿಂದ ಮಕ್ಕಳೊಂದಿಗೆ ಸಂತೆಗೆ ಹೋದರು. ಅಜ್ಜಿ ಇಬ್ಬರಿಗೂ ತಲಾ ೫೦೦ ರೂಪಾಯಿ ನೀಡಿ, ಮನೆಯ ದಿನಸಿ ಸಾಮಾನುಗಳನ್ನು ತಂದುಕೊಡಲು ಹೇಳಿದರು. ಪ್ರಿಯಾ ಅಜ್ಜಿ ಹೇಳಿದಂತೆ ಬೇಕಾದ ಎಲ್ಲಾ ದಿನಸಿ ಸಾಮಾನುಗಳನ್ನು ಖರೀದಿಸಿ ಮನೆಗೆ ತಂದಳು. ಆದರೆ ಶ್ವೇತ ಅಜ್ಜಿ ಹೇಳಿದ ವಸ್ತುಗಳನ್ನು ತರದೆ, ತನ್ನ ಇಷ್ಟದ ವಸ್ತುಗಳನ್ನು ಖರೀದಿಸಿಕೊಂಡು ಬಂದಳು. ಇದನ್ನು ಕಂಡ ಅಜ್ಜಿಗೆ ತುಂಬಾ ದುಃಖವಾಯಿತು. ಆ ರಾತ್ರಿ ಅಜ್ಜಿ ಮತ್ತು ಪ್ರಿಯಾ ಸೇರಿ ಶ್ವೇತಳಿಗೆ ಹಣದ ಮೌಲ್ಯ ಹಾಗೂ ಜವಾಬ್ದಾರಿಯ ಮಹತ್ವವನ್ನು ತಿಳಿಸಿ ಬುದ್ಧಿ ಹೇಳಿದರು. ಮುಂದಿನ ಬಾರಿ ಸಂತೆಗೆ ಹೋದಾಗ ಅಜ್ಜಿ ಶ್ವೇತಳಿಗೆ ಸ್ವಲ್ಪ ಹಣ ನೀಡಿ ಅಗತ್ಯವಿರುವ ವಸ್ತುಗಳನ್ನು ಮಾತ್ರ ಖರೀದಿಸಲು ಹೇಳಿದರು. ಆಗ ಶ್ವೇತ ತನ್ನ ತಪ್ಪನ್ನು ಅರಿತುಕೊಂಡಳು. ಅಜ್ಜಿಯ ಬಳಿ ಕ್ಷಮೆ ಕೇಳಿ, ಇನ್ನು ಮುಂದೆ ಹಣವನ್ನು ಜಾಗರೂಕತೆಯಿಂದ ಬಳಸುವುದಾಗಿ ಮಾತು ಕೊಟ್ಟಳು. ನೀತಿ: ಹಣವನ್ನು ಜವಾಬ್ದಾರಿಯಿಂದ ಬಳಸಬೇಕು ಮತ್ತು ಹಿರಿಯರ ಮಾತನ್ನು ಗೌರವಿಸಬೇಕು. ಕವನ7 ನೇ ತರಗತಿಅನೇಕಮ್ ಶಾಲೆಬೆಂಗಳೂರು ನಮ್ಮೂರ ಕೆರೆ ಸುತ್ತಮುತ್ತಲಿನ ಊರುಗಳಲ್ಲಿ ಮುತ್ತಿನಂತಿರುವುದು ನಮ್ಮೂರಿನ ಕೆರೆ. ಕೆರೆಯ ಸುತ್ತಲೂ ಹಸಿರಿನಿಂದ ಕಂಗೊಳಿಸುವ ಮರಗಳ ಸಾಲು. ಒಂದೊಂದು ಮರದಲ್ಲಿ ಹತ್ತಾರು ಗೂಡುಗಳು, ಪ್ರತಿಯೊಂದು ಗೂಡಿನಲ್ಲಿ ನೂರಾರು ಹಕ್ಕಿಗಳ ಕಲರವ. ಬೆಳ್ಳಿಯ ತಟ್ಟೆಯಂತೆ ಹೊಳೆಯುವ ನೀರು, ಮಿಂಚಿನ ಬಳ್ಳಿಯಂತೆ ತಲತಲ ಹೊಳೆಯುವ ಮೀನುಗಳು, ಕಪ್ಪೆಗಳ ಟರ್ರ್-ಟರ್ರ್ ಧ್ವನಿ – ಇವೆಲ್ಲವೂ ಕೆರೆಯ ಸೌಂದರ್ಯವನ್ನು ಹೆಚ್ಚಿಸುತ್ತವೆ. ಕೆರೆಯ ಸುತ್ತ ಮೇವು, ಗಿಡಗಂಟಿಗಳು, ದನ-ಕರುಗಳಿಗೆ ಆಹಾರ, ಗಾಳಿಗೆ ತಲೆಯಾಡಿಸುವ ಹಸಿರು ಹುಲ್ಲು – ಇವೆಲ್ಲವೂ ಪ್ರಕೃತಿಯ ಸೊಬಗನ್ನು ಹೆಚ್ಚಿಸುತ್ತವೆ. ಆದರೆ ಕಾಲಕ್ರಮೇಣ ಕಾರ್ಖಾನೆಗಳ ತ್ಯಾಜ್ಯ, ಕೊಳಚೆ ನೀರು ಮತ್ತು ಪ್ಲಾಸ್ಟಿಕ್ ಕಸ ಕೆರೆಯಲ್ಲಿ ಸೇರಿ ನೀರು ಕಲುಷಿತವಾಯಿತು. ಕೆರೆ ಬತ್ತಿ, ಬಿರುಕು ಬಿಟ್ಟಿತು. ಇದನ್ನು ಕಂಡ ಊರಿನ ಜನರೆಲ್ಲ ಸಭೆ ಸೇರಿ ಕೆರೆಯನ್ನು ಉಳಿಸಲು ನಿರ್ಧರಿಸಿದರು. ಕಾರ್ಖಾನೆಗಳ ಕಲುಷಿತ ನೀರನ್ನು ಕೆರೆಗೆ ಬಿಡದಂತೆ ಕ್ರಮ ಕೈಗೊಂಡರು. ಪ್ಲಾಸ್ಟಿಕ್ ಬಳಕೆಗೆ ವಿದಾಯ ಹೇಳಿದರು. ಎಲ್ಲರೂ ಸೇರಿ ಕೆರೆಯನ್ನು ಸ್ವಚ್ಛಗೊಳಿಸಿ, ಮರಗಳನ್ನು ನೆಟ್ಟರು. ಕೆಲವೇ ದಿನಗಳಲ್ಲಿ ಕೆರೆ ಮತ್ತೆ ನೀರಿನಿಂದ ತುಂಬಿತು. ಹಸಿರು ಮರಗಳಲ್ಲಿ ಹಕ್ಕಿಗಳ ಹಾಡು ಮತ್ತೆ ಮೊಳಗತೊಡಗಿತು. ನೀತಿ:ನೀರು ಜೀವದ ಮೂಲ. ಪ್ರಕೃತಿಯನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ. ತಪ್ಪು ಮಾಡಿದವರು ನಾವೇ; ಅದನ್ನು ಸರಿಪಡಿಸುವ ಜವಾಬ್ದಾರಿಯೂ ನಮ್ಮದೇ. ತೇಜಸ್7ನೇ ತರಗತಿಅನೇಕಾಮ್ ಶಾಲೆಬೆಂಗಳೂರು. ಸ್ನೇಹದ ಪಯಣ ಆರನೇ ತರಗತಿಯಲ್ಲಿ ಅನು ಮತ್ತು ಮೀರಾ ಎಂಬ ಇಬ್ಬರು ಹುಡುಗಿಯರು ಮೊದಲ ಬಾರಿಗೆ ಭೇಟಿಯಾದರು. ಆರಂಭದಲ್ಲಿ ಅವರು ಒಬ್ಬರಿಗೊಬ್ಬರು ಪರಿಚಯವಿಲ್ಲದವರಾಗಿದ್ದರು. ಮೊದಲ ದಿನ ಸ್ವಲ್ಪ ನಾಚಿಕೆಪಟ್ಟು ಮಾತನಾಡಿದರೂ, ಕೆಲವೇ ದಿನಗಳಲ್ಲಿ ಉತ್ತಮ ಸ್ನೇಹಿತರಾದರು. ಅವರು ತರಗತಿಯಲ್ಲಿ ಓದಿನಲ್ಲಿ ಹಾಗೂ ಆಟಗಳಲ್ಲಿ ಆರೋಗ್ಯಕರ ಸ್ಪರ್ಧೆ ನಡೆಸುತ್ತಿದ್ದರು. ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥಮಾಡಿಕೊಂಡರು. ಕೆಲವೊಮ್ಮೆ ತಮಾಷೆ ಮಾಡುತ್ತಿದ್ದರು, ಶಿಕ್ಷಕರಿಂದ ಬೈಗುಳವೂ ತಿನ್ನುತ್ತಿದ್ದರು. ಅವರ ನಡುವಿನ ಸ್ಪರ್ಧೆ ಎಷ್ಟೇ ಗಟ್ಟಿಯಾಗಿದ್ದರೂ, ಅದರ ಹಿಂದೆ ಪ್ರೀತಿ ಮತ್ತು ಪರಸ್ಪರ ಗೌರವ ಅಡಗಿತ್ತು. ಶಾಲೆಯ ಅಂತಿಮ ವರ್ಷದ ವಾರ್ಷಿಕೋತ್ಸವದಲ್ಲಿ ಇಬ್ಬರೂ ಒಬ್ಬರ ಸಾಧನೆಯನ್ನು ಮತ್ತೊಬ್ಬರು ಹೃತ್ಪೂರ್ವಕವಾಗಿ ಸಂಭ್ರಮಿಸಿದರು. ಆ ಕ್ಷಣ ಅವರ ಸ್ನೇಹವನ್ನು ಇನ್ನಷ್ಟು ಗಟ್ಟಿಗೊಳಿಸಿತು. ಏಳನೇ ತರಗತಿಯಲ್ಲಿ ಅವರ ಸ್ನೇಹ ಮತ್ತಷ್ಟು ಗಾಢವಾಯಿತು. ತಮ್ಮ ಸಂತೋಷ, ದುಃಖ, ಕನಸುಗಳು ಹಾಗೂ ರಹಸ್ಯಗಳನ್ನೂ ಪರಸ್ಪರ ಹಂಚಿಕೊಳ್ಳುತ್ತಿದ್ದರು. ಅಗತ್ಯವಿದ್ದಾಗ ಒಬ್ಬರಿಗೊಬ್ಬರು ನೆರವಾಗುತ್ತಿದ್ದರು. ಆದರೆ ಎಂಟನೇ ತರಗತಿಗೆ ಬಂದಾಗ ಪರಿಸ್ಥಿತಿ ಬದಲಾಯಿತು. ಮೀರಾಗೆ ಶಾಲೆ ಬದಲಾಯಿಸಬೇಕಾದ ಕಾರಣ ಇಬ್ಬರೂ ಬೇರ್ಪಡಬೇಕಾಯಿತು. ಆ ದಿನ ಇಬ್ಬರ ಕಣ್ಣಲ್ಲೂ ಕಣ್ಣೀರು ತುಂಬಿತ್ತು. ಆದರೂ ಅವರ ಸ್ನೇಹ ಅಲ್ಲಿಗೆ ಕೊನೆಗೊಳ್ಳಲಿಲ್ಲ. ಪ್ರತಿದಿನ ಸಂದೇಶಗಳು ಮತ್ತು ಮಾತುಕತೆಗಳ ಮೂಲಕ ಅವರು ತಮ್ಮ ಸ್ನೇಹವನ್ನು ಮುಂದುವರಿಸಿದರು. ವಯಸ್ಕರಾದ ಮೇಲೂ ಅವರ ಸ್ನೇಹ ಇನ್ನಷ್ಟು ಗಟ್ಟಿಯಾಯಿತು. ಜೀವನದ ಪ್ರತಿಯೊಂದು ಸಂತೋಷ, ದುಃಖ, ಗೆಲುವು, ಸೋಲು—ಎಲ್ಲವನ್ನೂ ಪರಸ್ಪರ ಹಂಚಿಕೊಳ್ಳುತ್ತಿದ್ದರು. ಒಬ್ಬರಿಲ್ಲದೆ ಮತ್ತೊಬ್ಬರು ಇರಲಾರರು ಎಂಬಷ್ಟು ಆತ್ಮೀಯರಾಗಿದ್ದರು. ನೀತಿ:ನಿಜವಾದ ಸ್ನೇಹವು ಸ್ಪರ್ಧೆ, ದೂರ, ಕಾಲ ಮತ್ತು ಪರಿಸ್ಥಿತಿಗಳನ್ನೂ ಮೀರಿ ಸದಾ ಉಳಿಯುತ್ತದೆ. ಸತ್ಯ, ನಂಬಿಕೆ ಮತ್ತು ಪರಸ್ಪರ ಗೌರವದ ಮೇಲೆ ಕಟ್ಟಿದ ಸ್ನೇಹವೇ ಜೀವನದ ಅಮೂಲ್ಯ ಸಂಪತ್ತು. ಅರ್ಷಿಯಾ8ನೇ ತರಗತಿಅನೇಕಾಮ್ ಶಾಲೆಬೆಂಗಳೂರು ಅನೇಕಮ್‌ ಶಾಲೆ

“ಅನೇಕಮ್‌ ಶಾಲೆಯಮಕ್ಕಳು ಬರೆದ ಕನ್ನಡ ಬರಹಗಳು”ಡಾ. ಮಮತ, ಶಿಕ್ಷಕರು,ಅನೇಕಮ್‌ ಬೆಂಗಳೂರು Read Post »

ಕಾವ್ಯಯಾನ

ಟಿ.ಪಿ.ಉಮೇಶ್ ಕವಿತೆ “ಸ್ನೇಹದ ಹಬ್ಬ”

ಕಾವ್ಯ ಸಂಗಾತಿ ಟಿ.ಪಿ.ಉಮೇಶ್ “ಸ್ನೇಹದ ಹಬ್ಬ” ಅಮ್ಮನ ಪ್ರೀತಿ ಮಮತೆಯ ನೆರಳುಅಪ್ಪನು ಕೊಟ್ಟ ಧೈರ್ಯದ ಬೆಳಕುಶಾಲೆಯಿಂದಲೇ ಸಾವಿರಾರು ನೆನಪುಗೆಳೆಯರೇ ನೀವು ನಮ್ಮ ಸಂಪತ್ತುಶುಭಾಶಯ ಸ್ನೇಹ ದಿನದ ಶುಭಾಶಯಗೆಳೆಯರೇ ನಮ್ಮ ದಿನದ ಶುಭಾಶಯ ಬೆಂಚು ಹಂಚಿ ಕೂತ ದಿನಗಳುಪೆನ್ಸಿಲ್ ಕೊಟ್ಟು ಬರೆದ ಕ್ಷಣಗಳುಅಳುವಿನಲ್ಲೂ ನಗುವಿನಲ್ಲೂಜೊತೆಯಾಗಿ ನಿಂತ ಗೆಳೆಯರೇಶುಭಾಶಯ ಸ್ನೇಹ ದಿನದ ಶುಭಾಶಯಗೆಳೆಯರೇ ನಮ್ಮ ದಿನದ ಶುಭಾಶಯ ಆಟದ ಮೈದಾನದಿ ಓಡಿದವರುಸೋತಾಗಲೆಲ್ಲ ಕೈಹಿಡಿದವರುಗೆದ್ದಾಗಲೆಲ್ಲ ಚಪ್ಪಾಳೆ ತಟ್ಟಿದವರುಅಂತರಂಗದ ಮಿತ್ರರೆ ನೀವೆಲ್ಲರುಶುಭಾಶಯ ಸ್ನೇಹ ದಿನದ ಶುಭಾಶಯಗೆಳೆಯರೇ ನಮ್ಮ ದಿನದ ಶುಭಾಶಯ ಪುಸ್ತಕಗಳ ಪಾಠಗಳನ್ನೆಲ್ಲ ಕಲಿತುಜೀವನದಿ ಸರಿದಾರಿಯಲ್ಲಿ ನಡೆದುಒಳ್ಳೆಯ ಮಾತುಗಳನ್ನು ಕಲಿತುಒಡನಾಡಿಯಾಗಿ ನಾವು ಬೆಳೆದವರುಶುಭಾಶಯ ಸ್ನೇಹ ದಿನದ ಶುಭಾಶಯಗೆಳೆಯರೇ ನಮ್ಮ ದಿನದ ಶುಭಾಶಯ ಮಳೆ ಬಂದಾಗಲೆಲ್ಲ ಛತ್ರಿಯಾದೆಸುಡುಬಿಸಿಲ ಧಗೆಗೆಲ್ಲ ನೆರಳಾದೆಕತ್ತಲಿಗೆ ಬೆಳಗೊ ದೀಪವಾದನೀವೆಂದು ಬದುಕಿನ ಗೆಳೆಯರೇಶುಭಾಶಯ ಸ್ನೇಹ ದಿನದ ಶುಭಾಶಯಗೆಳೆಯರೇ ನಮ್ಮ ದಿನದ ಶುಭಾಶಯ ಕಷ್ಟ ಬಂದಾಗ ಧೈರ್ಯ ತುಂಬಿನೋವು ಬಂದರೆ ಭುಜವ ನೀಡಿಬೀಳುವ ಕ್ಷಣಗಳಲ್ಲಿ ಕೈಹಿಡಿದುಭುಜಕ್ಕೆ ಭುಜವಾದ ಮಿತ್ರರೇಶುಭಾಶಯ ಸ್ನೇಹ ದಿನದ ಶುಭಾಶಯಗೆಳೆಯರೇ ನಮ್ಮ ದಿನದ ಶುಭಾಶಯ ಜಾತಿ ಮತಗಳ ಗೋಡೆ ಮೀರಿಬೇಧ ಭಾವನೆಗಳ ದೂರ ಮಾಡಿಸ್ನೇಹ ಪ್ರೀತಿಯ ಸೇತುವೆ ಕಟ್ಟಿದಸೌಹಾರ್ದತೆ ಮೆರೆದ ಸ್ನೇಹಿತರೇಶುಭಾಶಯ ಸ್ನೇಹ ದಿನದ ಶುಭಾಶಯಗೆಳೆಯರೇ ನಮ್ಮ ದಿನದ ಶುಭಾಶಯ ಗಿಡಮರಗಳ ಬೆಳೆಸುವ ಕೈಗಳಾಗಿನೀರು ಉಳಿಸುವ ಮನಗಳಾಗಿನಮ್ಮ ಭೂಮಿ ಕಾವಲುಗಾರರಾಗಿಜೊತೆಗೂಡಿ ಕಲಿತಂತ ಗೆಳೆಯರೇಶುಭಾಶಯ ಸ್ನೇಹ ದಿನದ ಶುಭಾಶಯಗೆಳೆಯರೇ ನಮ್ಮ ದಿನದ ಶುಭಾಶಯ ಸುಳ್ಳು ಹೇಳದಂತ ಸತ್ಯದ ಹಾದಿದುಷ್ಟತನ ದೂರ ಮಾಡುವ ನೀತಿಒಳ್ಳೆಯ ಬದುಕು ಕಟ್ಟುವ ದಾರಿತೋರಿದಂತ ಆತ್ಮಬಂಧು ಮಿತ್ರರೇಶುಭಾಶಯ ಸ್ನೇಹ ದಿನದ ಶುಭಾಶಯಗೆಳೆಯರೇ ನಮ್ಮ ದಿನದ ಶುಭಾಶಯ ನಿಮ್ಮ ನಗುವೆ ನಮ್ಮ ಸಂತೋಷನಿಮ್ಮ ಗೆಲುವಿನಲ್ಲಿ ನಮ್ಮ ಹರ್ಷಜೀವನವೆಂಬ ನಿಲ್ಲದ ಪಯಣದಲ್ಲಿದಾರಿ ಮರೆಯದೆ ಜೊತೆಯಿರೋಣಶುಭಾಶಯ ಸ್ನೇಹ ದಿನದ ಶುಭಾಶಯಗೆಳೆಯರೇ ನಮ್ಮ ದಿನದ ಶುಭಾಶಯ ಕೈ ಕೈ ಹಿಡಿದುಕೊಂಡು ಸಾಗೋಣಹೊಸ ಕನಸುಗಳನ್ನು ಸಾಧಿಸೋಣಸ್ನೇಹವೆಂಬ ಅಮೃತಧಾರೆಯಲ್ಲಿಸುಂದರ ಸಮೃದ್ಧ ಲೋಕ ಕಟ್ಟೋಣಶುಭಾಶಯ ಸ್ನೇಹ ದಿನದ ಶುಭಾಶಯಗೆಳೆಯರೇ ನಮ್ಮ ದಿನದ ಶುಭಾಶಯ ಟಿ.ಪಿ.ಉಮೇಶ್

ಟಿ.ಪಿ.ಉಮೇಶ್ ಕವಿತೆ “ಸ್ನೇಹದ ಹಬ್ಬ” Read Post »

ಕಾವ್ಯಯಾನ

ಪರವಿನಬಾನು ಯಲಿಗಾರ ಅವರ ಕವಿತೆ “ಸ್ನೇಹವೆಂದರೆ”

ಕಾವ್ಯ ಸಂಗಾತಿ ಪರವಿನಬಾನು ಯಲಿಗಾರ “ಸ್ನೇಹವೆಂದರೆ” ಸ್ನೇಹವೆಂದರೆ ಅದುದೈವ ಬೆಸೆದ ಬಂಧ ,ಜಾತಿ , ಗೋತ್ರ , ಮತ ,ಪಂಥ ಕೇಳದ ಅನುಬಂಧ. ಕೃಷ್ಣ – ಸುಧಾಮ , ಕರ್ಣ – ದುರ್ಯೋದನಚಿರ ಸ್ನೇಹಕೆ ಹೆಸರಾದವರುಸ್ನೇಹ ಎನ್ನುವ ಆಮ್ಲಜನಕನಮ್ಮನ್ನು ಬದುಕುಳಿಸುತ್ತದೆಸುಮಾರು ಬಾರಿ. ಸ್ನೇಹದ ನೌಕೆ ತೇಲುತಿರಲುಬಾಳ ಸಾಗರದಿ,ತೀರ ಸೇರುವ ಭರವಸೆಇರುವುದು ಯಾವಾಗಲೂ. ಸ್ನೇಹ ಒಂದು ಭಾವದ ಕೊಳಲ ದನಿಸದಾ ಕೇಳುವುದು ಇಂಪಾದ ನಿನಾದಸ್ನೇಹ ವೀಣೆ ಮಿಡಿಯುತಿರೆಅಪಸ್ವರದ ಭಯವೆಲ್ಲಿ. ಯಾವ ರಕ್ತ ಸಂಭಂದ ಇರದಿದ್ದರುನೋವಿಗೆ ಮರುಗುವಕರುಳ ಬಂಧವೆ ಅಲ್ಲದೆ ಇದ್ದರುಕರುಣೆ ತೋರುವುದೆ ಸ್ನೇಹ….. ಪರವಿನಬಾನು ಯಲಿಗಾರ

ಪರವಿನಬಾನು ಯಲಿಗಾರ ಅವರ ಕವಿತೆ “ಸ್ನೇಹವೆಂದರೆ” Read Post »

ನಿಮ್ಮೊಂದಿಗೆ

“ಮಿಲನ” ಪದ್ಮಲತಾ ಮೋಹನ್ ಅವರ ಬರಹ

ವಿಶೇಷ ಸಂಗಾತಿ ಪದ್ಮಲತಾ ಮೋಹನ್ “ಮಿಲನ” ಮಿಲನ.ಮತ್ತೆ ಬರುವೆನೆಂದು ಮಾತು ಕೊಟ್ಟವನುಹೊತ್ತು ಮೀರಿದರು ಯಾಕೋ ಸುಳಿವಿಲ್ಲಹೊಸಿಲೊಳಗೆ ಇಟ್ಟ ಹೂವಿನಲಿ ಕಂಪಿಲ್ಲಹಗಲಿರುಳು ಬಯಕೆಯ ಕನವರಿಕೆಕಾದು ಕಾವೇರಿದೆ ತನು,  ಇಲ್ಲ ಚೇತರಿಕೆ.ನೋಟ ನೆಟ್ಟಿದೆ ಆ ದಿಗಂತದೆಡೆಗೆಶೂನ್ಯವೇ ಅಲ್ಲಿ ತೇಲಾಡಿದೆ,ಬರೀ ಬೆಳಕು ಶಬ್ದಗಳ ಆರ್ಭಟವೋಮರುಭೂಮಿಯಲಿ ಮರೀಚಿಕೆ ಕಂಡಂತೆ.ದೇಹವಿಡೀ ವ್ಯಾಪಿಸಿದ ವಿರಹ ಜ್ವಾಲೆಸುಡುತಿದೆ ಬೇಗೆ ತನ್ನೊಡಲನ್ನೇ!ಬತ್ತಿರುವ ಬೆಂಗಾಡು,  ಸುರಿಸಲಿಲ್ಲ ಹನಿ ಕಣ್ಣೀರು!ಗುಡಿಗೋಪುರದಲ್ಲಿ, ನಡೆಯಿತುನಿತ್ಯ, ಪೂಜೆ ಪುನಸ್ಕಾರ, ಅವನಿಗಾಗಿಅವಳ ಮೇಲಿನ ಕಾಳಜಿಗಾಗಿಅವರಿಬ್ಬರ ಮಿಲನ,  ಒಳಿತಿಗಾಗಿ.ಉಂಗುರ ನೋಡಿ ದುಷ್ಯಂತನಿಗೆ ನೆನಪು ಬಂದಿತ್ತುಇವನಿಗೂ ಹಾಗೆ ಏನೋ ನೆನಪಾಯಿತುತಡವಾಗಿಯಾದರು ಕೊನೆಗೂ ಬಂದಮೆತ್ತಗೆ  ಹಿತವಾಗಿ ರಮಿಸುತ್ತಿದ್ದವನುಯಾಕೋ  ಬದಲಾಗಿಬಿಟ್ಟಿದ್ದರಭಸದಿ,  ಸೆಳೆದು ಮುತ್ತುಗಳ ಮಳೆಸುರಿಸಿದ್ದ.ವಿರಹ ಬೇಗೆಗೆ ಮುತ್ತಿನ ಮಳೆಗೆ  ಭೂಮಿ(ಅವಳು) ಬಾಯಿ ತೆರೆದಿದ್ದುನಾಂದಿ ಹಾಡಿತು ಸರ್ವನಾಶಕ್ಕೆ.ಮಸಣವಾಯಿತು ಬದುಕುಅವರಿಬ್ಬರ ಮಿಲನಕ್ಕೆ! ಪದ್ಮಲತಾ ಮೋಹನ್. .

“ಮಿಲನ” ಪದ್ಮಲತಾ ಮೋಹನ್ ಅವರ ಬರಹ Read Post »

ಕಾವ್ಯಯಾನ, ಗಝಲ್

ಹಮೀದಾ ಬೇಗಂ ದೇಸಾಯಿ  ಅವರ ಗಜಲ್

ಕಾವ್ಯ ಸಂಗಾತಿ ಹಮೀದಾ ಬೇಗಂ ದೇಸಾಯಿ  ಗಜಲ್ ಹಣ್ಣಾಗಿ ಉದುರಿದೆಲೆಗಳು ಮತ್ತೆ ಚಿಗುರಿ ಹಸಿರಾಗಬಹುದೇ ಹೇಳುಮುಪ್ಪಾಗಿ ಬಾಗಿದ ಕಾಯ ಮರಳಿ ತರುಣವಾಗಬಹುದೇ ಹೇಳು ಕಳೆದು ಹೋದ ಸಮಯ ತಿರುಗಿ ಬಾರದು ಅಲ್ಲವೇಬೆಳೆದು ನಿಂತ ಮರ ಕೆಳಗೆ ಬಾಗಬಹುದೇ ಹೇಳು ಪಂಜರದ ಗಿಳಿಯು ರೆಕ್ಕೆ ಬಡಿಯುತ ಚಡಪಡಿಸಿದೆ ನೋಡುಬೀಸುವ ಗಾಳಿಯ ಅಲೆಗಳನು ಗಿರಿಶಿಖರ ತಡೆಯಬಹುದೇ ಹೇಳು ಅರಳಿದ ಹೂಗಳ ಪರಿಮಳ ಸುತ್ತ  ಆವರಿಸಿ ಘಮಘಮಿಸಿದೆಕೆರಳಿದ ಗಾಯಗಳ ನೋವು ಮನದಿಂದ ಬೇರೆಯಾಗಬಹುದೇ ಹೇಳು ದುಃಖಗಳ ಮೂಟೆ ಹೊತ್ತು ನಿಂತಿಹುದು ನೊಂದ ಜೀವಸವಿದಂಥ ಸುಖಗಳ ಬೇಗಂ ಎಂದಾದರೂ ಮರೆಯಬಹುದೇ ಹೇಳು. ಹಮೀದಾ ಬೇಗಂ ದೇಸಾಯಿ 

ಹಮೀದಾ ಬೇಗಂ ದೇಸಾಯಿ  ಅವರ ಗಜಲ್ Read Post »

You cannot copy content of this page

Scroll to Top