ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅನುವಾದ

ಜಿ.ಉಮಾ ಮಹೇಶ್ವರ್‌ ಅವರ ತೆಲುಗು ಕಥೆ “ಒಂದು ಆಧುನಿಕ ದೇವಾಲಯದ ಕಥೆ”ಕನ್ನಡಾನುವಾದ ರಂಗನಾಥ ರಾಮಚಂದ್ರ ರಾವು

ಅನುವಾದ ಸಂಗಾತಿ “ಒಂದು ಆಧುನಿಕ ದೇವಾಲಯದ ಕಥೆ” ಜಿ.ಉಮಾ ಮಹೇಶ್ವರ್‌ ಅವರ ತೆಲುಗು ಕಥೆ ಕನ್ನಡಾನುವಾದ ರಂಗನಾಥ ರಾಮಚಂದ್ರ ರಾವು ಅಕ್ಟೋಬರ್ 2, 2009. ರಾತ್ರಿ ಹನ್ನೊಂದುಗಂಟೆ. ರಿಟೈರ್ಡ್  ಚೀಫ್ ಇಂಜಿನಿಯಾರ್  ಗೋವಿಂದರೆಡ್ಡಿ, ಹೈದರಾಬಾದ್‌ನಲ್ಲಿರುವ ತಮ್ಮ ಮನೆಯಲ್ಲಿ ಟಿವಿ ಮುಂದೆ ಕುಳಿತು ಪ್ರವಾಹದ ಭೀಕರ ದೃಶ್ಯಗಳನ್ನು ನೋಡುತ್ತಿದ್ದಾರೆ. ಕೃಷ್ಣಾನದಿಗೆ ಬಂದಿರುವ ಪ್ರವಾಹದ ನೀರು ಯಾರ ಮಾತನ್ನೂ ಕೇಳದ ಹಠಮಾರಿ ಮಗುವಿನಂತೆ, ಸಿಟ್ಟಿಗೆದ್ದ ಯುವಕನ ಅಗ್ರಹದಂತೆ ತುಂಬಿ ಉಕ್ಕುತ್ತಾ, ಹೊಮ್ಮಿ ಬರುತ್ತಾ ನೀರಿನ ಮಟ್ಟವನ್ನು ಹೆಚ್ಚಿಸುತ್ತಿದೆ. ಆಗಲೇ ಟಿವಿಯಲ್ಲಿ ಹೇಳುತ್ತಿದ್ದರು – “ಶ್ರೀಶೈಲಂ ಡ್ಯಾಮ್   ಎತ್ತರ 884 ಅಡಿ. ಈಗ ನೀರಿನ ಮಟ್ಟ 880 ಅಡಿಗೆ ತಲುಪಿದೆ. ಇಡೀ ಹನ್ನೆರಡು ಗೇಟ್‌ಗಳನ್ನು ಎತ್ತಿದ ನಂತರವೂ ಪ್ರವಾಹದ ವೇಗ ಕಡಿಮೆಯಾಗಲಿಲ್ಲ. ಇನ್  ಫ್ಲೋ , ಅವುಟ್ ಫ್ಲೋ ಗಿಂತಲೂ ತುಂಬಾ ಜಾಸ್ತಿ ಇದ್ದುದರಿಂದ ಇನ್ನು ಸ್ವಲ್ಪ ಹೊತ್ತಿನಲ್ಲಿಯೇ ಸಂಪೂರ್ಣ ವಾಗಿ ಡ್ಯಾಮ್  ನೀರಿನ ಹರಿವಿನಲ್ಲಿ ಮುಳುಗಿಹೋಗ ಬಹುದೆಂದು, ಒಟ್ಟು ನೀರಿನ ಪ್ರವಾಹ ಡ್ಯಾಮ್ ತುಂಬಿ ಅದರ ಮೆಲಿಂದ  ಹರಿಯುವ ಸಾಧ್ಯತೆ ಇರುವುದೆಂದು ನಿಪುಣರ ವರ್ಗ  ಹೇಳುತ್ತಿತ್ತು. ಎಲ್ಲಾ ಗೇಟುಗಳನ್ನು ಎತ್ತಿದ ಸರ್ಕಾರಿ ಅಧಿಕಾರಿಗಳೂ ಏನೂ ಮಾಡಲಾಗದೇ ದೇವರಮೇಲೆ ಭಾರಹಾಕಿ, ಅವನೇ ಕಾಪಾಡಬೇಕೆಂದು ಹೇಳಿದರು’’ ಟಿವಿಯಲ್ಲಿ ಚರ್ಚೆನಡೆಯುತ್ತಿದೆ. “ಮೇಲಿಂದ ಬರುತ್ತಿರುವ ಪ್ರವಾಹವನ್ನು ಅಂದಾಜು ಹಾಕಿ ಮೊದಲೇ ಏಕೆ ಗೇಟ್‌ಗಳನ್ನು ತೆರೆಯಲಿಲ್ಲ”  ಎಂದು ಸರ್ಕಾರವನ್ನು ಪ್ರಶ್ನಿಸುತ್ತಿದ್ದಾರೆ. “ಇಷ್ಟೊಂದು ಪ್ರವಾಹ ಬರುತ್ತದೆಂದು  ಊಹಿಸಲಿಲ್ಲವೆಂದು,  ಜಲಾಶಯ ಭರ್ತಿಯಾದರೆ ನಾಲೆಗಳ ಮೂಲಕ ಹೊಲಗಳಿಗೆ ನೀರುಣಿಸ ಬಹುದು ಎಂದುನಿಲ್ಲಿಸಸಿದರೆಂದು” ಸರ್ಕಾರದ ಅನುಕೂಲರು ವಾದಿಸುತ್ತಿದ್ದಾರೆ. “ಇದು ಉದ್ದೇಶ ಪೂರ್ವಕವಾಗಿ ಮಾಡಿರುವುದೆಂದು, ಮಾನವ ತಪ್ಪಿದವೆಂದು” ಆಕ್ಷೇಪಣಗಳು. “ಸೀಮೆಗೆ ನೀರು ಕೂಡಿಡುವುದು ಹೇಗೆ ಸ್ವಾರ್ಥವಾಗುತ್ತದೆ ”   ಬೇಸಾಯಕ್ಕೆ ಬೇಕಾದ  ನೀರಿನ ಸಾಧನಾ ಸಮಿತಿ ಅವರ ಸಮರ್ಥನೆಗಳು , ಒಬ್ಬರಿಮೇಲೆ ಇನ್ನೊಬ್ಬರು, ಆರೋಪ –ಪ್ರತ್ಯಾರೋಪಗಳನ್ನು ಮುಂದುವರಿಯುಸುತ್ತಿದ್ದಾರೆ .    ಗೋವಿಂದರೆಡ್ಡಿ ಹಾಗೆ ನೋಡುತ್ತಾ ನೋಡುತ್ತಾ ನಲವತ್ತು ವರ್ಷ ಹಿಂದಕ್ಕೆ ಹೋದ. ಆಗಲೇ ಅನಂತಪೂರ್  ಇಂಜಿನಿಯರಿಂಗ್  ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಮುಗಿಸಿಕೊಂಡು ಪಬ್ಲಿಕ್ ಸರ್ವೀಸ್ ಕಮಿಷನ್   ಎಕ್ಸಾಮ್ ಬರೆದಮೇಲೆ   ಜೂನಿಯರ್ ಇಂಜನೀರಿಂಗ್ ಯಾಗಿ ಜಾಬ್ ಸಿಕ್ಕಿತು. ಮೊದಲೇನೆಯ ಪೋಸ್ಟಿಂಗ್ ಶ್ರೀಶೈಲಮ್  ಪ್ರಾಜೆಕ್ಟ್. ಶಿವರಾಮಿರೆಡ್ಡಿ ಅವರು  ಎಗ್ಜಿಕ್ಯುಟಿವ್ ಇಂಜನೀರ್ ಯಾಗಿ , ಸುಬ್ರಹ್ಮಣ್ಯಂ  ಸೂಪೆರಿಂಡೆಂಟ್ ಇಂಜನೀರ್ ಯಾಗಿ ಇದ್ದರು.  ಪ್ರಾಜೆಕ್ಟ್ ಕೆಲಸಗಲೆಲ್ಲಾ  ಕನ್ಸ್ಟ್ರಕ್ಷನ್  ಕಾರ್ಪೊರೇಷನ್  ಲಿಮಿಟೆಡ್ ಮೂಲಕ ನಡೆಯುತ್ತಿದ್ದವು. ಶಿವರಮಿರೆಡ್ಡಿ  ಅವರು ತನಗಿಂತಲೂ ಹದಿನೈದು ವರ್ಷ ದೊಡ್ಡವರು. ಆಗ ತನಗೆ ಇಪ್ಪತ್ತೈದುವರ್ಷ. ಯಾವ ಅನುಭವ ಜ್ಞಾನವೂ ಇಲ್ಲ. ಎಲ್ಲವೂ ಪುಸ್ತಕ ಜ್ಞಾನ. ಶಿವರಾಮಿರೆಡ್ಡಿ ಅವರಿಗೆ ತಾಳ್ಮೆಜಾಸ್ತಿ. ತನ್ನನ್ನು ಚೆನ್ನಾಗಿ ಗೈಡ್ ಮಾಡುತ್ತಿದ್ದರವರು. ಎಲ್ಲರನ್ನೂ ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು.  ಆಗಲೇ ಅಲ್ಲಿರುವ ಎಲ್ಲಾ ಇಂಜಿನಿಯರ್ಗಳಲ್ಲಿ ತಾನೇ ಕಿರಿಯವನು. ಅನೇಕರು ಡಿಪ್ಲೊಮಾ ಮೂಲಕ ಸೇರಿ, ಪ್ರಮೋಷನ್ ಮೇಲೆ ಆ ಮಟ್ಟಕ್ಕೆ  ಬಂದರು.   ಶಿವರಾಮಿರೆಡ್ಡಿ ಅವರು ನಾಗಾರ್ಜುನ ಸಾಗರ್   ಪ್ರಾಜೆಕ್ಟ್ ನಲ್ಲಿ ಕೆಲಸಮಾಡಿದ ಅನುಭವದಿಂದ  ಇಲ್ಲಿಗೆ ಬಂದಿದ್ದರು. ಪ್ರಾಜೆಕ್ಟ್ ಕೆಲಸಗಳೆಲ್ಲಾ ಎಸ್‌ಸಿ ಅವರ ಅಧೀನಯಲ್ಲಿ  ನಡೆಯುತ್ತಿದ್ದವು. ಸಂದರ್ಭಗಳನ್ನು ತಮಗೆ  ಅನುಕೂಲವಾಗಿ ಪರಿವರ್ತಿಸುವಲ್ಲಿ  ಎಸ್ ಇ ಅವರು ಬಹಳ ಪ್ರವೀಣರು. ಒಳ್ಳೆಯ ಚಾಕಚಕ್ಯತೆಯ ವ್ಯಕ್ತಿ. ಆಗ ಸಿ ಇ ಹೈದರಾಬಾದ್‌ನಲ್ಲಿ ಇರುತ್ತಿದ್ದರು.  ಹಲವು ಸಂದರ್ಭಗಳಲ್ಲಿ ಸುಬ್ರಹ್ಮಣ್ಯಂ ಅವರಜೊತೆ ಹೋಗಿ ಸಿ.ಇ. ಅವರನ್ನು  ಭೇಟಿಯಾದರು. ಒಮ್ಮೆ  ಡ್ಯಾಮ್ ಕೆಲಸಗಳಲ್ಲಿ  ಕಲ್ಲುಗಳನ್ನು ಹೊತ್ತುಕೊಂಡು ಹೋಗುವ ಕಾರ್ಮಿಕನು  ಕಾಲುಜಾರಿ ಕೆಳಗೆ ಬಿದ್ದಿದ್ದಾನೆ. ಆಗ ಸಪೋರ್ಟ್ ಯಾವುದೂ ಇಲ್ಲದರಿಂದ ಹಾಗೆ ಜಾರುತ್ತಾ ಬಹಳ ಅಳಕ್ಕೆ  ಬಿದ್ದು ಬಿಟ್ಟನು. ಪೆಟ್ಟುಗಳು ಬಲವಾಗಿ ತಾಕಿದವು. ರಕ್ತ ಸೋರುತ್ತಿದೆ.. ಮನುಷ್ಯನಿಗೆ ಪ್ರಜ್ಞೆಯೂ ಇಲ್ಲ. ತಕ್ಷಣ ಅಲ್ಲಿಯೇ ಪ್ರಥಮ ಚಿಕಿತ್ಸೆ ಮಾಡಿಸಿ ಪ್ರಾಜೆಕ್ಟ್ ಆಸ್ಪತ್ರೆಗೆ ಕರೆದೊಯ್ದರು. ಚೇತರಿಸಿಕೊಳ್ಳಲು ಹಲವು ದಿನಗಳು ಬೇಕೆಂದು ಹೇಳಿದರು. ಎಲ್ಲಾ ಕೆಲಸಗಾರರು ಜಮಾಯಿಸಿ ಕೆಲಸ ಮಾಡುವುದು ನಿಲ್ಲಿಸಿದರು. ಕೆಲಸ ನಿಂತುಹೋಯಿತು. ದೊಡ್ಡ ಜಗಳವೇ ನಡೆಯಿತು. ಕೆಲಸ  ಸ್ಥಗಿತಗೊಂಡಿತು. ಮೇಸ್ತ್ರಿಗಳು ಕೈಬಿಟ್ಟರು. ಯೂನಿಯನ್  ಮುಖಂಡರು ಎಸ್‌.ಸಿ. ಅವರನ್ನು ಭೇಟಿಮಾಡಿದರು. ಅವರು ಅವರನ್ನು ಸಮಾಧಾನಪಡಿಸಿ ಯಾವುದಾದರೂ ಕಾಂಪೆನ್ ಸೇಷನ್  ಕೊಡುತ್ತೇವಿ ಎಂದು ಒಪ್ಪಿಸಿದರು. ಆದರೆ ಇದು ಈ ಒಂದು ಸಲಕ್ಕೆ ನಿಂತುಹೋಗದು. ಇಷ್ಟು  ಪ್ರಾಜೆಕ್ಟ್ ಯಲ್ಲಿ  ಈ ರೀತಿಯ  ವಿಷಯಗಳು ನಡೆಯುತ್ತಲೇ ಇರುತ್ತವೆ.  ನಾಗಾರ್ಜುನ ಸಾಗರದಲ್ಲಿ ಸಾಕಷ್ಟು ಪ್ರಾಣಹಾನಿ ಸಂಭವಿಸಿದೆ. ಹಾಗಾಗಬಾರದೆಂದು ಕೊಂಡರೆ  ಅಪಾಯಕಾರಿಯ ಕೆಲಸಗಳು ಯಂತ್ರಗಳ ಸಹಾಯದಿಂದ ಮಾಡಿಸಬೇಕು.  ಯಂತ್ರಗಳನ್ನು  ಹೆಚ್ಚಾಗಿ  ಬಳಸಬೇಕು. ಇದೆ ವಿಷಯವನ್ನು ಕುರಿತು ಸಿ .ಇ. ಅವರೊಂದಿಗೆ ಚರ್ಚಿಸಿದರೆ, ‘‘ನಿಜವೇ ಆದರೂ , ಈ ಪ್ರಾಜೆಕ್ಟ್  ಮೂಲಕ ಜನರಿಗೆ ಒಂದಿಷ್ಟು ಜೀವನೋಪಾಧಿ ಸಿಗುತ್ತದಲ್ಲ. ಯಂತ್ರಗಳ ಬಳಕೆ ಯಾದರೆ  ಜನರ  ಉಪಾಧಿಗೆ ಧಕ್ಕೆ ಬೀಳುತ್ತದೆಂದು , ಅದಕ್ಕಾಗಿಯೇ ಸರ್ಕಾರು ಈ ಪ್ರತಿಪಾದನೆಗೆ ಅಂಗೀಕರಿಸುವುದಿಲ್ಲ ಎಂದು ಹೇಳುತ್ತಾ ಸಮಯಕ್ಕಾಗಿ ಕಾಯೋಣ” ಎಂದು ಸೂಚಿಸಿದರು. ಒಂದು ರಿವ್ಯೂ  ಮೀಟಿಂಗ್ ನಲ್ಲಿ ಮಂತ್ರಿ ಅವರು ಪ್ರಾಜೆಕ್ಟ್  ಕೆಲಸವನ್ನು ಪರಿಶೀಲಿಸಿ ಕೆಲಸ /ಕಾಮಗಾರಿ ವಿಳಂಬವಾಗುತ್ತಿದೆ  ಎಂದು ದೂರಿದರು. ರಾಜ್ಯದಲ್ಲಿ ವಿದ್ಯುತ್ತಿನ ಕೊರತೆ  ತೀವ್ರವಾಗಿದೆ ಎಂದು, ನಾವು ಇನ್ನೂ ಡ್ಯಾಮ್ ನಿರ್ಮಿಸುವ   ಕೆಲಸದಲ್ಲೇ ಇದ್ದೇವೆಂದು,  ವಿದ್ಯುತ್ ಯಾವಾಗಾ ಉತ್ಪಾದನೆ  ಮಾಡುತ್ತೇವೆ ಎಂದು ಸಿಟ್ಟಗೆದ್ದರು.  ಆಗ       ಎಸ್ . ಇ. ಅವರು ಆ ಅವಕಾಶವನ್ನು  ಸದುಪಯೋಗಪಡಿಸಿಕೊಂಡರು – ಯಂತ್ರಗಳ ಸಂಖ್ಯೆಯನ್ನು ಹೆಚ್ಚಿಸೋಣ ಎಂದು,  ಮತ್ತು ಜನರು ಹೊತ್ತುಕೊಂಡು ಹೋಗುವ ಅಗತ್ಯವಿಲ್ಲದೆ ರೋಪ್‌ ವೇ ಮೂಲಕ ಕೆಲವು  ಟನ್‌ಗಳಷ್ಟು  ಮೆಟೀರಿಯಲ್  ಎಲ್ಲಿಗೆ ಬೇಕಾದರೆ ಅಲ್ಲಿಗೆ ತೆಗೆದುಕೊಂಡು ಹೊಗ ಬಹುದೆಂದು ಅದರಿಂದ ಕೆಲಸಗಳನ್ನು ಬೇಗೆ ಬೇಗೆ ಮಾಡಬಹುದೆಂದು ಮಂತ್ರಿ ಅವರನ್ನು ಸಮಾಧಾನ ಮಾಡಿದರು.  ಕೂಡಲೇ ಮಂತ್ರಿ ಅವರು ಆದೇಶ ಹೊರಡಿಸಿದರು. ಅವರು ಯೋಚಿಸಿದಂತೆಯೇ, ಸಮಯಾನು ಕೂಲವಾಗಿ  ತನ್ನ ಆಲೋಚನೆಯನ್ನು ಸಮಯಕ್ಕೆ ಪೂರೈಸಿದನು.  ಅದರಿಂದ ಬಹುತೇಕ ಯಂತ್ರಗಳ ಸಹಾಯದಿಂದ ರೋಪ್ ವೇ ಬಳಸಿದ್ದರಿಂದ ನಿರ್ಮಾಣ ಹಂತದಲ್ಲಿಯೇ ಈ ಯೋಜನೆಯಲ್ಲಿ ಕನಿಷ್ಠ ಪ್ರಾಣಹಾನಿ ಸಂಭವಿಸಿದೆ. ಇಂತಹ ನಿರ್ಧಾರಗಳನ್ನು  ಸಮಯಸ್ಪೂರ್ತಿ ಯಿಂದ ತೆಗೆದುಕೊಳ್ಳುವಲ್ಲಿ ಅವರು ದಿಟ್ಟರು. “ನೀವು ಇನ್ನೂ ಏಕೆ ಮಲಗಲಿಲ್ಲ? ಒಂದು ಗಂಟೆ ಮೀರಿದೆ? ನಾವೇನು ಮಾಡಬಲ್ಲೆವು? ಹೀಗೆ ಬೆಳಗಾವ ವರೆಗೆ ಕೂತಿದ್ದರೂ  ಉಪಯೋಗವೇನು? ನಿದ್ದೆ ಕಾದದ್ದುದರಿಂದ ಉಯೋಗವೇನು? ಏನಾದರೂ ಮಾಡಬೇಕಾದರೆ, ನಾವಿಲ್ಲಿ, ಅವರು ಅಲ್ಲಿ ” ಎನ್ನುತ್ತಾ ಮಾಧವಿ ಪಡಶಾಲೆಗೆ ಬಂದಳು. ಅಲ್ಲಿ ಸೇರಿದ ಎರಡುವರ್ಷಗಳ ನಂತರ ಮಾಧವಿ  ತನ್ನ ಬದುಕನ್ನು ಪ್ರವೇಶಿಸಿದಳು. ಕರ್ನೂಲ್  ಟೌನ್ ನಲ್ಲಿ ಹುಟ್ಟಿ ಬೆಳೆದಳು ಅವಳು. ಎಲ್ಲಿಯೋ ನಲ್ಲಮಲ ಗುಡ್ಡಗಳಲ್ಲಿ, ಒಂದು ಚಿಕ್ಕ ಊರಲ್ಲಿ  ಇರುವುದಕ್ಕೆ ಅವಳು ಇಷ್ಟಪಡಲಿಲ್ಲ. ಆದರೆ ಅನಿವಾರ್ಯದ  ಪರಿಸ್ಥಿತಿಯಲ್ಲಿ ಕಾಲನೀಗೆ ಬಂದ ಅವಳು ಅವಳು ಅಲ್ಲಿನ  ವಾತಾವರಣಕ್ಕೆ ಸುಲಭವಾಗಿ ಹೊಂದಿಕೊಂಡಳು. ಆನಂತರ ಮೂವರು ಮಕ್ಕಳು ಅಲ್ಲೇ ಪ್ರಾಜೆಕ್ಟ್  ಹೈಸ್ಕೂಲಿನಲ್ಲಿ ಓದಿದರು. ಇಪ್ಪತ್ತುವರ್ಷಗಳ ಸುದೀರ್ಘ ಅವಧಿಯ ನಂತರ ಅನಂಪೂರ್ ಗೆ ಟ್ರಾನ್ಸಫರ್  ಆಯಿತು. “ಯಾವುದೂ ಶಾಶ್ವತವಲ್ಲ, ಅಲ್ಲವೇ.. ಯಾಕಿಷ್ಟು ವ್ಯಾಮೋಹ ಆ ಡ್ಯಾಮ್ ಅಂದರೆ? ” ಎಂದು ನಿರ್ಲಿಪ್ತ ಭಾವದಿಂದ ಕೇಳಿದಳು. ಅವಳನ್ನು  ತಡೆಯಲಿಲ್ಲ, ವಾದಿಸಲಿಲ್ಲ.  ಏನನ್ನೂ ಮಾತನಾಡದೇ ಕೂತಿದ್ದರಿಂದ  ಅವಳಿಗೆ ಬೇಸರವಾಗಿ ಮತ್ತೆ ಬೆಡ್ರೂಮಿಗೆ ಹೋದಳು. ನನಗೆ  ಇದ್ದಕ್ಕಿದ್ದಂತೆ  ಅಬ್ದುಲ್  ಬಷೀರ್‌ ಗೆ  ಫೋನ್ ಮಾಡಬೇಕೆಂದು ಅನಿಸಿತು. ಅವನು ಸದ್ಯಕ್ಕೆ ಚೀಫ್. ಇಂಜಿನಿಯರ್ ಆಗಿ ಇದ್ದಾನೆ. ಫೋನ್ ಮಾಡಿದ. “ಪರಿಸ್ಥಿತಿ ತುಂಬಾ ಕ್ರಿಟಿಕಲ್ ಆಗಿ ಇದೆ ಎಂದು,  ಬೆಳಗಾದರೇ ಹೊರೆತು ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು, ಸದ್ಯಕ್ಕೆ ನಮ್ಮ ಕೈಯಲ್ಲಿ ಏನೂಇಲ್ಲವೆಂದು, ತನಗೆ ಹತ್ತುನಿಮಿಷಕ್ಕೊಮ್ಮೆ ಸಿ.ಎಂ. ಕಚೇರಿಯಿಂದ ಕರೆಗಳು ಬರುತ್ತಿವೆ ಎಂದು, ಇವಲ್ಲದೆ  ಮಾಧ್ಯಮಗಳು  ತನ್ನನ್ನು ಉಸಿರುಗಟ್ಟಿಸುತ್ತಿವೆ ಎಂದು, ನಾಳೆ , ಇಲ್ಲದಿದ್ದರೆ ನಾಡೆದ್ದೋ  ಮತ್ತೆ ಬಿಡುವು  ಮಾಡಿಕೊಂಡು ಫೋನ್ ಮಾಡುತ್ತೇನೆ” ಎಂದು  ಗೌರವ ಪೂರ್ವಕವಾಗಿ ಹೇಳಿ ಫೋನ್ ಕಟ್ ಮಾಡಿದ. “ಇನ್ನು ಸ್ವಲ್ಪ ಹೊತ್ತಿನಲ್ಲಿ  ಡ್ಯಾಮ್ ಪೂರ್ತಿಯಾಗಿ ಮುಳುಗಲಿದೆ. ಮತ್ತು ಈ ಕಾಂಕ್ರೀ ಟ್ ಕಲ್ಲಿನ ಕಟ್ಟಡ, ಈ ಆಧುನಿಕ ದೇವಾಲಯವು  ಎಷ್ಟರ ಮಟ್ಟಕ್ಕೆ   ಪ್ರಕೃತಿಯ ದಾಳಿಯನ್ನು ತಡೆದುಕೊಳ್ಳುತ್ತದೆ ಎಂಬುದನ್ನು ನೋಡಬೇಕು. ಪ್ರಕೃತಿಯ ನಿಯಮಗಳಿಗೆ ವಿರುದ್ಧವಾಗಿ ನೀರನ್ನು ಸಂಗ್ರಹಿಸಿ, ನೀರಿನ  ದಾರಿಯನ್ನು  ಬದಿಲಿಸಿ  ಮನುಷ್ಯ ಮಾಡಿತ್ತಿರುವ  ಈ ಅಪುರೂಪದ  ಪ್ರಯೋಗಗಳು ಪ್ರಕೃತಿಯ ನಿಯಮಗಳನ್ನು ಉಲ್ಲಂಘಿಸಿದಂತೆ  ಅಥವಾ ಪ್ರಕೃತಿಯನ್ನು   ಮನುಷ್ಯನು ಆಕ್ರಮಿಸಿದಂತೆಯೇ? … ಈ ಪ್ರಶ್ನೆಗಳಿಗೆ ಉತ್ತರಗಳು ಸಿಗುತ್ತವೆ.   ಟಿವಿಯಲ್ಲಿ  ಯಾಂಕರ್  ಸುಮ್ಮನೆ ಬಡಬಡಾಯಿಸುತ್ತಿದ್ದಾನೆ .ಅವನಿಗೆ ಡ್ಯಾಮ್ ನಿಲ್ಲಬೇಕೆಂದು ಇದೆಯೋ ಅಥವಾ ಕೊಚ್ಚಿಕೊಂಡು ಹೋಗಬೇಕೆಂದಿದಿಯೋ, ಇಲ್ಲವೋ  ಅರ್ಥವಾಗುತ್ತಿಲ್ಲ.  ಕರೆಕ್ಟ್.  ರಿಪೋರ್ಟರ್ಸ್ ಗೆ ಆ ಡ್ಯಾಮ್ ಕೊಚ್ಚಿಕೊಂಡು ಹೋದರೂ ಸುದ್ದಿ, ನಿಂತರೂ ದೊಡ್ಡ ಸುದ್ದಿಯೇ . ಆದರೆ ಅವನಿಗೆ ತಿಳಿಯದ  ವಿಷಯ  ಆ ಡ್ಯಾಮ್  ಬಾಲಾರಿಷ್ಟದಿಂದ  ಆಲ್ರೆಡೀ  ಕೆಲವು ಸಲ ಕೊಚ್ಚಿಕೊಂಡು ಹೋಗಿದೆ ಎಂದು, ಈ ವಿಷಯವನ್ನು ಶಿವರಾಮಿರೆಡ್ಡಿ ಯವರೇ ಹೇಳಿದ್ದಾರೆ “. “ಅರವತ್ತಾರೋ, ಅರವತ್ತೇಳೋ, ನೆನಪಿಲ್ಲ,  ನವೆಂಬಾರ್ ನಲ್ಲಿ  ಕೆಲಸ ಶುರುಮಾಡಿ ಏಪ್ರಿಯಲ್ ವರೆಗೂ   ಮುಂದುವರೆಸೋಣ ಅಂದುಕೊಂಡೆವು. ನಾವು ದೊಡ್ಡ  ಸಂಖ್ಯಯಲ್ಲಿ  ಕೂಲೀಗಳನ್ನು, ಕಂಟ್ರಾಕ್ಟರ್ ಗಳನ್ನು ನಿಯೋಜಿಸಿದ್ದೇವೆ. ಈಗಾಗಲೇ ಕಾಫ ರ್ ಡ್ಯಾಮ್  ನಿರ್ಮಾಣ ಪೂರ್ಣಗೊಂಡಿದ್ದು, ನೀರನ್ನು ಹರಿಸುವ ಬಲಕಾಲುವೆ ನಿರ್ಮಾಣವೂ ಮುಗಿಸಿದ್ದರಿಂದ ಮಳೆ ಕಾಲವೆಲ್ಲಾ  ಸುರಿಯುವ ಮಳೆಯ ನೀರನ್ನೆಲ್ಲ ಬೇರೆಡೆಗೆ ತಿರುಗಿಸಿ  ಬೇಸಿನ್ ಖಾಳೀ ಮಾಡಿದೆವು. ಅಗೆಯುವ ಕೆಲಸ ನಡೆಯುತ್ತದೆ.  ಮರಳಿನ ಅಭಾವದಿಂದ ಸ್ವಲ್ಪ ತಡವಾದರೂ  ಬುನಾದಿ ಅಗೆದ ಮೇಲೆ  ಸುಮಾರು ನೂರು ಅಡಿಗಳ ವರೆಗೆ ಕಲ್ಲುಗಳನ್ನುಹಾಕಿ  ಕಟ್ಟೆಯನ್ನು ನಿರ್ಮಿಸಿದರು.   ಅದೇ ಉತ್ಸಾಹದಿಂದ , ಮತ್ತೆ ಮಳೆ ಬೀಳುವ ಮೊದಲೇ ನಾಲ್ಕು ನೂರು ಅಡಿಗಳು ನಿರ್ಮಾಣ ಮಾಡಬಹುದು.  ಸರಿಯಾಗಿ ಆಗಲೇ ಮಹಾ ಮುನಿಗಳ ಯಜ್ಞ-ಯಾಗಗಳನ್ನು  ವಿನಾಶ ಮಾಡಲು  ರಾಕ್ಷಸರು ಮಡಿಕೆಗಳಿಂದ  ನೀರನ್ನು ಹಾಕಿದಂತೆ…ದೊಡ್ಡ ಪ್ರಮಾಣದಲ್ಲಿ ..ರಭಸವಾಗಿ ಹರಿಯುವ ಪ್ರವಾಹ..ಎಲ್ಲೋ  ಬೇರೆ ಎಲ್ಲೋ  ಸುರಿಯುವ ಮಳೆಯಿಂದ  ಮುರಿದಿದ್ದ  ಕೆರೆಗಳು,  ಹರಿಯುವ ಹಳ್ಳಗಳು, ಆಶಿಸದ, ಊಹಿಸದ  ಎಡೆಬಿಡದಮಳೆ….ಆಗಾಗ ಅನ್ನಿಸುತ್ತದೆ – ಮಳೆ ಎಂದೂ ಹರ್ಷವನ್ನು ಕೊಡುತ್ತದೆಂದು ಹೇಳಲಾಗುವುದಿಲ್ಲ ಎಂದು. ಏನಾಗಿದೆ, ಎರಡೇ ಎರಡು ದಿನಗಳಲ್ಲಿ ನೂರು ಅಡಿಗಳ ಕಟ್ಟೆ ಬೇಸ್ ಮಟ್ಟಕ್ಕೆ  ಕುಸಿದುಕೊಂಡಿದೆ.  ಈಗಾಗಲೇ ಒಂದು ಸಲ ಎಲಿಮೆಂಟರಿ   ದಶಯಲ್ಲಿ ಹೀಗಾಯಿತು. ಅಶಗಳು ನಿರಾಶೆ ಯಾಗಿವೆ. ಅಂತ್ಯವಿಲ್ಲದ ಶ್ರಮ ವ್ಯರ್ಥವಾಯಿತು. ಆಗ ತಿಳಿಯಿತು – ಅಲ್ಲಿದ್ದ ಕಲ್ಲಿನ ಸ್ವರೂಪ. ಅದು ಮೇಲೆಕ್ಕೆ ಗಟ್ಟಿಯಾಗಿ ಕಾಣುತ್ತದೆ  ಆದರೆ, ಒಳ ಭಾಗ ದಲ್ಲಿ ಸ್ವಲ್ಪ ಟೊಳ್ಳಾಗಿದೆ. ಸೀಮೆಸುಣ್ಣದ ಶೇಕಡಾ ಹೆಚ್ಚು ಇರುತ್ತದೆ. ಇದನ್ನು ತಿಳಿದುಕೊಂಡನಂತರ, ಸಂಪೂರ್ಣ ಕಲ್ಲಿನ ನಿರ್ಮಾಣವು  ಒಳ್ಳೆಯದಲ್ಲ ಎಂದು,  ಎಂದಾದರೂ ಅಪಾಯಾಕಾರಿಯೇ ಎಂದು ಗ್ರಹಿಸಿ, ತಕ್ಷಣವೇ ಕಾಂಕ್ರೀಟ್  ನಿರ್ಮಾಣನಕ್ಕೆ ಬದಲಿಸಿದರು.   ಆಗಿನ ಅಧಿಕಾರಿಗಳಿಗೆ ಎಷ್ಟು ಮೇಲ್ವಿಚಾರ ಇರುತ್ತದೋ ಅಷ್ಟು ಜವಾಬ್ದಾರಿಯೂ ಇರುತ್ತಿತ್ತು. ಎಪ್ಪತ್ತರ  ದಶಕಗಳ ಕೊನೆಗೆ ಬರುವ ಸಮಯಕ್ಕೆ, ಕೆಲಸಗಳನ್ನು ವೇಗಗೊಳಿಸಬೇಕಾಗಿತ್ತು. ಬೆಳಗ್ಗೆ ಆರು ಅಥವಾ ಏಳು ಗಂಟಕ್ಕೆ ಶುರುವಾದ ಕೆಲಸಗಳು ಸಂಜೆಯ ಹೊತ್ತಿಗೆ ಮುಗಿಯುತ್ತಿದ್ದವು.  ಆಗಾಗಲೇ

ಜಿ.ಉಮಾ ಮಹೇಶ್ವರ್‌ ಅವರ ತೆಲುಗು ಕಥೆ “ಒಂದು ಆಧುನಿಕ ದೇವಾಲಯದ ಕಥೆ”ಕನ್ನಡಾನುವಾದ ರಂಗನಾಥ ರಾಮಚಂದ್ರ ರಾವು Read Post »

ಕಾವ್ಯಯಾನ

ದಾಕ್ಷಾಯಣಿ ಶಂಕರ ಹುಣಶ್ಯಾಳ “ಸಂಕ್ರಮಣ”

ಕಾವ್ಯ ಸಂಗಾತಿ ದಾಕ್ಷಾಯಣಿ ಶಂಕರ ಹುಣಶ್ಯಾಳ “ಸಂಕ್ರಮಣ” ಒಮ್ಮೆ ಎಳ್ಳು ಒಮ್ಮೆ ಬೆಲ್ಲಬದುಕಿದು ನೋವು ನಲಿವುಗಳ ಸಂಕ್ರಮಣ ಇಲ್ಲಿ ಬೇಲಿ ಅಲ್ಲಿ ಹಾದಿಬದುಕಿದು ಪಥ ಬದಲಿಸುವ ರಥಸಪ್ತಮಿ ನಿನ್ನೆ ಶಿಶಿರ ಎಂದು ವಸಂತಬದುಕಿದು ಹಲವು ಋತುಗಳಲ್ಲಿ ಪರಿಭ್ರಮಣ ಮುಳುಗುವ ಸೂರ್ಯ ಹೊತ್ತುವ ದೀಪಬದುಕಿದು ಕತ್ತಲೆ ಬೆಳಕಿನ ನಡುವಿನ ಆವರ್ತನ ಅಲ್ಪ ಸುಖ ಸಾಕಷ್ಟು ಕಷ್ಟಬದುಕಿದು ಸಮ್ಮಿಶ್ರ ನಗರ ಸಂಕಲನ   ಸಾಸಿವೆಯಷ್ಟು ನಗು ಸಾಗರದಷ್ಟು ಅಳು ಬದುಕಿದು ಪ್ರತಿಪಕ್ಷ  ಹೊಂದಾಣಿಕೆಯ ಹೂರಣ ಆ ಕಣಿವೆ ಈ ಬೆಟ್ಟಬದುಕಿದು ದಿನನಿತ್ಯ  ಇಳಿದೇರುವ ಚಾರಣ ಒಮ್ಮೆ ಜನನ ಒಮ್ಮೆ ಮರಣಬದುಕಿದು ವಿಧಿ ವಿಲಾಸದ ಸಂಕೀರ್ತನ ದಾಕ್ಷಾಯಣಿ ಶಂಕರ ಹುಣಶ್ಯಾಳ

ದಾಕ್ಷಾಯಣಿ ಶಂಕರ ಹುಣಶ್ಯಾಳ “ಸಂಕ್ರಮಣ” Read Post »

ಪುಸ್ತಕ ಸಂಗಾತಿ

ಗೊರೂರು ಅನಂತರಾಜು ಅವರ “ತಲಕಾಡು ಪಂಚಲಿಂಗ ದರ್ಶನ ಮತ್ತುಇತರೆ ಪ್ರವಾಸಿ ಲೇಖನಗಳು” ಅವಲೋಕನ ಮಧು ಮಾಲತಿ.

ಪುಸ್ತಕ ಸಂಗಾತಿ ಮಧು ಮಾಲತಿ. ಗೊರೂರು ಅನಂತರಾಜು ಅವರ “ತಲಕಾಡು ಪಂಚಲಿಂಗ ದರ್ಶನ ಮತ್ತುಇತರೆ ಪ್ರವಾಸಿ ಲೇಖನಗಳು” “ದೇಶ ಸುತ್ತು ಕೋಶ ಓದು”” ಎಂಬ ಜನಜನಿತ ನುಡಿಯಂತೆ ವಿವಿಧ ಪ್ರದೇಶಗಳನ್ನು ಸುತ್ತುವುದರಿಂದ ಅಲ್ಲಿಯ ಜನರ ನಡೆ-ನುಡಿ ˌಸಂಪ್ರದಾಯ ˌ ಆಚಾರ ವಿಚಾರಗಳೆಲ್ಲವನ್ನು ಅರಿತು ಅನುಭವಿಸಿ ರೂಢಿಸಿಕೊಳ್ಳುವಲ್ಲಿ ಈ ಪ್ರಯಾಣ ಯಶಸ್ವಿಯಾಗುತ್ತದೆ. ಅಂತೆಯೇ ದೇಶ ಸುತ್ತಲು ಅಸಾಧ್ಯವಾದವರೂ ಕೂಡ ಪ್ರವಾಸ ಕಥನಗಳನ್ನು ಓದಿ ದೇಶ ಸುತ್ತಿದಷ್ಟೇ ಅನುಭವವನ್ನು ರೋಮಾಂಚನವನ್ನು ಅನುಭವಿಸುವುದು ಖಂಡಿತ ಸಾಧ್ಯ .ಈ ನಿಟ್ಟಿನಲ್ಲಿ ಶ್ರೀ ಗೊರೂರು ಅನಂತರಾಜುರವರ ಈ ಕೃತಿ ಅಚ್ಚುಮೆಚ್ಚಿನದಾಗುತ್ತದೆ .ಅನೇಕ ಸಾಹಿತಿಗಳ ಪ್ರವಾಸ ಕಥನಗಳು ಸಹ ಸಾಹಿತ್ಯ ಲೋಕಕ್ಕೆ ಅವಿರತವಾಗಿ ಅರ್ಪಣೆಯಾಗುತ್ತಿವೆ. ಇವೆಲ್ಲವುಗಳ ಪೈಪೋಟಿಗಳ ನಡುವೆ ಅನುಭವಿ ˌಹಿರಿಯರು ˌ ಸಾಹಿತಿಗಳು ˌಅಂಕಣಕಾರರು ಆದ ಶ್ರೀ ಗೊರೂರು ಅನಂತರಾಜುರವರ ಈ ಕೃತಿ ಎಲ್ಲರ ಗಮನವನ್ನು ಹಿಡಿದಿಟ್ಟುಕೊಂಡು ಓದಿಸಿಕೊಂಡು ಹೋಗುತ್ತದೆ . ಇಲ್ಲಿ ಮೂಡಿ ಬಂದಿರುವ ಅನೇಕ  ಪ್ರಸಿದ್ಧ ಸ್ಥಳಗಳ ಬಗ್ಗೆ ಕೂಲಂಕುಶವಾಗಿ ಅಧ್ಯಯನಗೈದು ಓದುಗ ಪ್ರಭು ಅಲ್ಲಿಯೇ ಸ್ವತಹ ನಡೆದಾಡಿದಂತೆ ಭಾಸವಾಗುವಂತೆ ತಮ್ಮ ಅನುಭವಗಳನ್ನು ಇಲ್ಲಿ ಕಟ್ಟಿಕೊಡುವಲ್ಲಿ ಶ್ರೀಯುತರು ಯಶಸ್ವಿಯಾಗಿದ್ದಾರೆ. ಕಾವೇರಿ ತೀರದ ಅರ್ಕೇಶ್ವರನ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಾ ಕೆ. ಆರ್.ನಗರದ ಅರ್ಕೇಶ್ವರ ದೇವಾಲಯ ಜಗತ್ತಿನ ಎರಡನೇ ಸೂರ್ಯ ದೇವಾಲಯ. ಗಂಗ ˌ ಚೋಳˌ ಹೊಯ್ಸಳˌ ವಿಜಯನಗರ ಮುಂತಾದ ಅರಸರ ಆಡಳಿತಕ್ಕೆ ಒಳಪಟ್ಟ ಈ ಸ್ಥಳದಲ್ಲಿ ಅರ್ಕೇಶ್ವರ ಸ್ವಾಮಿ ಸೂರ್ಯದೇವನಿಂದ ಪ್ರತಿಷ್ಠಾಪಿಸಲ್ಪಟ್ಟು ಭತ್ತದ ನಾಡೆಂದೇ ಹೆಸರುವಾಸಿಯಾಗಿದೆ .ಶ್ರೀಯುತರು ಮುಂದುವರೆಯುತ್ತಾ ಮೂಗೂರು ತ್ರಿಪುರ ಸುಂದರಿ  ಮುಸ್ಲಿಂ ಪಾಳೇಗಾರ ನಿರ್ಮಿಸಿದ ಹಿಂದೂ ದೇವಾಲಯಕ್ಕೆ ಸದ್ದಿಲ್ಲದೆ ನಮ್ಮನ್ನು ಕರೆದೊಯ್ಯುತ್ತಾರೆ . ಆದಿಶಕ್ತಿ ಅವತಾರವಾದ ತ್ರಿಪುರ ಸುಂದರಿ ದೇವಿಯ ಕೃಪಾಕಟಾಕ್ಷಕ್ಕೆ ನಾವೆಲ್ಲರೂ ಒಳಗಾಗುವುದು ಖಚಿತ. ಎಲ್ಲೆಡೆ ಸುತ್ತಾಡಿ ತಲಕಾಡಿನ ಪಂಚಲಿಂಗೇಶ್ವರನ ದರ್ಶನ ಮಾಡಿಸದಿರುತ್ತಾರೆಯೇ ? ಪಂಚಲಿಂಗ ದೇವರ ಅದ್ಭುತ ಕಲಾಕೃತಿಗಳು ಶಿವನ ವಿಷ್ಣುವಿನ ಲೀಲೆಗಳ ವಿಗ್ರಹಗಳು ಎಲ್ಲರ ಮನ ಸೆಳೆಯುತ್ತವೆ . “ಕಾಶಿಗೆ ಹೋಗಿ ಪರಶಿವನ ಕಾಣದೆ ಬರಲಾದೀತೇ” ಅಂತೆಯೇ ತಲಕಾಡಿಗೆ ಹೋಗಿ ಪಂಚಲಿಂಗೇಶ್ವರನ ದರ್ಶನ ಮಾಡಿದರೆ  ಮುಕ್ತಿ ಎನ್ನುತ್ತಾರೆ.ಮುಂದುವರೆದು ಗುಂಜ ನರಸಿಂಹನನ್ನು ಕೂಡ ತಮ್ಮ ಕೃತಿಯಲ್ಲಿ ನಮಗೆ ದರ್ಶನ ಭಾಗ್ಯ ಕೊಡಿಸಿರುತ್ತಾರೆ. ಬಿಳಿಗಿರಿರಂಗನ ಬೆಟ್ಟದ ಸೌಂದರ್ಯವನ್ನೆಲ್ಲ ತಮ್ಮ ಅನುಭವದ ಈ ಕೃತಿಯಲ್ಲಿ ಹಿಡಿದಿಟ್ಟಿರುವುದು ಚಾರಣ ಪ್ರಿಯರಿಗೆ ರಸದೌತಣವನ್ನೇ ನೀಡುತ್ತದೆ .ಉದ್ಭವ ಗಂಗೆಯಿಂದೇ ಪ್ರಸಿದ್ಧಿ ಪಡೆದಿರುವ  ಹಾಲುರಾಮೇಶ್ವರ ಸನ್ನಿಧಾನದ ಗಂಗಾ ಕೊಳವೆಂದೇ ಪ್ರಸಿದ್ಧಿಯಾದ ಹಾಲು ರಾಮೇಶ್ವರ ಜನಸಾಮಾನ್ಯರಿಂದ ಹಿಡಿದು ಜನ ಪ್ರತಿನಿಧಿಗಳವರೆಗೂ ಇಲ್ಲಿನ  ಕೊಳದ ಪ್ರಸಾದವೇ ಬೇಡಿಕೆ ಈಡೇರಿಕೆಯ ಸಂಕೇತ. ಮುಂದೆ ತಮ್ಮ ಹುಟ್ಟೂರಾದ ಗೊರೂರಿನ ತ್ರಿಕೂಟೇಶ್ವರ ದೇವಾಲಯಕ್ಕೆ ನಮ್ಮನ್ನು ಸೆಳೆಯುತ್ತಾರೆ .ಹೊಯ್ಸಳರ ಕಾಲದ ಈ ತ್ರಿಕೂಟಲಿಂಗೇಶ್ವರ ದೇವಾಲಯ ಒಂದಷ್ಟು ಅಭಿವೃದ್ಧಿಯತ್ತ ಸಾಗಬೇಕಿದೆ. ಹೀಗೆ ಸಾಗುತ್ತಾ ಸಾಗುತ್ತಾ ಲೇಖಕರು  ಇತಿಹಾಸ ಪ್ರಸಿದ್ಧ ಚುಂಚನಕಟ್ಟೆಗೆ ಕರೆದೊಯ್ಯುತ್ತಾರೆ .ಚುಂಚ ಚುಂಚಿ ಎಂಬ ಬೇಡ ದಂಪತಿಗಳ ವಧೆಯಿಂದಾಗಿ ಬಂದ ಹೆಸರು ಚುಂಚಾರಣ್ಯವೆಂಬ ಐತಿಹಾಸ ಪಡೆದ ಇತಿಹಾಸವಿದೆ.  ತೇರು ಹರಿದಾವೋ ತಾನಕ್ಕೆ ನಿಂತಾವೋ ತಾರೋ ಚನ್ನಯ್ಯ ಜವನವಾ ತಾರೋ ಚೆನ್ನಯ್ಯ ಜವನವಾ ಬಾಳೆಹಣ್ಣುಬೇಡಿ ಕೊಳ್ಳೆ ಮಗಳೇ ಸೆರಗೊಡ್ಡಿ ಎನ್ನುತ್ತಾ ಗೊರೂರು ಶ್ರೀ ಯೋಗಾನರಸಿಂಹಸ್ವಾಮಿಯ ರಥೋತ್ಸವ ಅದ್ಧೂರಿಯಾಗಿ ಭಕ್ತಾದಿಗಳಿಂದ ತುಂಬಿ ತುಳುಕುತ್ತದೆ .ಹೀಗೆ ಲೇಖಕರು ಬಸವನಹಳ್ಳಿ ಆಂಜನೇಯˌ ಹೊಳೆನರಸೀಪುರದ ಬನಶಂಕರಿ  ಮುಂತಾದ ದೇವಾಲಯಗಳ ಇತಿಹಾಸಗಳನ್ನು ಓದುಗರೆದುರು ಆಳವಾಗಿ ತೆರೆದಿಡುತ್ತಾರೆ .ನಂತರ ಲೇಖಕರು ತಮ್ಮ ಪದಗಳ ಚಮತ್ಕಾರದಿಂದ ಅರಸಿಕಟ್ಟೆ ಅಮ್ಮನ ನಕ್ಷತ್ರವನ, ಕಪ್ಪಡಿ ಕ್ಷೇತ್ರ ˌಉಮಾ ಮಹೇಶ್ವರನ ಕ್ಷೇತ್ರ ಎಲ್ಲವನ್ನು ದರ್ಶನ ಮಾಡಿಸಿ ಮಂತ್ರಮುಗ್ದರನ್ನಾಗಿಸುತ್ತಾರೆ. ಜೊತೆ ಜೊತೆಗೆ ಸಂಕಲಾಪುರದ ಮಠ, ದಸರಿಘಟ್ಟ ಶ್ರೀ ಚೌಡೇಶ್ವರಿ ದೇವಸ್ಥಾನ, ಅಡಿ ಬೈಲು ರಂಗನಾಥ ಸ್ವಾಮಿ ಬೆಟ್ಟˌಗಳನ್ನು ಸುತ್ತಿಸುತ್ತ  ರಂಗನಾಥ ಸ್ವಾಮಿಯ ಮದುವೆಗೆ ಭೂಮಿ ಚಪ್ಪರ ಮಾಡಿದಾಳಿಂಬೆ ಹಣ್ಣು ಹಸೆ ಮಾಡಿ ರಂಗಯ್ಯಸ್ವಾಮಿ ನಿನ್ನ ಮದುವೆ ಶನಿವಾರಎಂದು ಹಾಡಿ ಹೊಗಳುತ್ತಾರೆ.  ರಂಗಾನ ತೇಜಿಗೆ ಹೊಂಬಾಳೆ ಒಡ್ಯಾಣದುಂಡು ಮಲ್ಲಿಗೆ ಮಕರಂದಬೇಟ್ಗಾರರಂಗನೇರ್ಯಾನೆ  ಹೊಸ ತೇರು  ಹೀಗೆ ಹೇಳುತ್ತಾ ಕೆಂಡಗಣ್ಣೇಶ್ವರˌ ಮಂಟೆರಾಯಸ್ವಾಮಿ ˌಗೌಡಗೆರೆ ಚಾಮುಂಡೇಶ್ವರಿˌ ಕೊಂಡಜ್ಜಿ ˌಪುರದಮ್ಮˌ ಹೇಮಾವತಿ ತೀರದ ಹೇಮಗಿರಿ  ಹೀಗೆ ಹಲವಾರು ಕ್ಷೇತ್ರಗಳನ್ನು ಸುತ್ತಿಸಿ 48 ಪುಣ್ಯಕ್ಷೇತ್ರಗಳ ಮಾಹಿತಿ ನೀಡುತ್ತಾ ನೀಡುತ್ತಾ ನಾವು ಅದರೊಳಗೊಂದಾಗಿ  ಬಿಟ್ಟು ಬಿಡದಂತೆ ಪ್ರವಾಸಕ್ಕೆ ಕರೆದೊಯ್ಯುತ್ತಾರೆ .ಓದುತ್ತಾ ಓದುತ್ತಾ ಓದುಗ ಪ್ರಭು ಪ್ರವಾಸವನ್ನು ಸ್ವತಃ ಅನುಭವಿಸಿ ಸಂತಸಗೊಳ್ಳುತ್ತಾನೆ .ಈ ನಿಟ್ಟಿನಲ್ಲಿ ಇಂದು ಸಮಾಜಕ್ಕೆ ಅತ್ಯವಶ್ಯಕವಾದ ಕೃತಿಯೊಂದನ್ನು ಸಾರಸ್ವತ ಲೋಕಕ್ಕೆ ಕೊಡುಗೆ ಇತ್ತ ಶ್ರೀ  ಗೊರೂರು ಅನಂತರಾಜುರವರ ಈ ಕೃತಿ  ಸಾರಸ್ಪತಲೋಕ  ಉಪಯೋಗಪಡಿಸಿಕೊಳ್ಳಲ್ಲಿ ಎಂದು ಆಶಿಸುವೆ.  ಮಧುಮಾಲತಿ ರುದ್ರೇಶ್

ಗೊರೂರು ಅನಂತರಾಜು ಅವರ “ತಲಕಾಡು ಪಂಚಲಿಂಗ ದರ್ಶನ ಮತ್ತುಇತರೆ ಪ್ರವಾಸಿ ಲೇಖನಗಳು” ಅವಲೋಕನ ಮಧು ಮಾಲತಿ. Read Post »

ಇತರೆ

“ಅವಮಾನದ ತಿರುವುಗಳು ಗೆಲುವಿನ ಮೈಲಿಗಲ್ಲುಗಳು” ಜಯಶ್ರೀ.ಜೆ. ಅಬ್ಬಿಗೇರಿ

ಜೀವನ ಸಂಗಾತಿ ಜಯಶ್ರೀ.ಜೆ. ಅಬ್ಬಿಗೇರಿ “ಅವಮಾನದ ತಿರುವುಗಳು ಗೆಲುವಿನ ಮೈಲಿಗಲ್ಲುಗಳು” ನಾನೀಗ ತಮ್ಮೊಂದಿಗೆ ಹಂಚಿಕೊಳ್ಳುತ್ತಿರುವುದು ಅವಮಾನದ ಒಂದು ಪ್ರಸಿದ್ಧ ಉದಾಹರಣೆ; ಪವಿತ್ರ ನರ್ಮದಾ ನದಿಯಲ್ಲಿ ಒಮ್ಮೆ ಸಂತ ಏಕನಾಥ ಸ್ನಾನ ಮಾಡಿ ಹೊರ ಬರುತ್ತಿದ್ದ.ಆಗ ಪಠಾಣನೊಬ್ಬ ಮನದಲ್ಲಿ ವಿಷ ತುಂಬಿಕೊAಡು ಸಂತನ ಮೇಲೆ ಉಗುಳಿದ. ಏಕನಾಥ ‘ಜೈ ವಿಠ್ಠಲ’ ಎನ್ನುತ್ತ ಮತ್ತೆ ನರ್ಮದೆಗಿಳಿದ. ಈ ರೀತಿ ಮುಂಜಾನೆಯಿoದ ಸಂಜೆಯವರೆಗೂ ಇಬ್ಬರ ನಡುವೆ ನಡೆಯಿತು ಯಾರು ಸೋಲುತ್ತಾರೆಂದು ನದಿ ತಟದಲ್ಲಿ ಜನ ನಿಂತು ನೋಡುತ್ತಿದ್ದರು. ಕೊನೆಗೆ ಪಠಾಣ, ಸಂತರನ್ನು ಉದ್ದೇಶಿಸಿ ನಾನು ಯಾವುದೇ ಕಾರಣವಿಲ್ಲದೇ ನಿಮ್ಮನ್ನು ಹೀಗೆ ಅವಮಾನಗೊಳಿಸುತ್ತಿದ್ದೇನೆ ಅಶುದ್ಧಿಗೊಳಿಸುತ್ತಿದ್ದೇನೆ.ಆದರೆ ನೀವು ನನ್ನ ಮೇಲೆ ಕೋಪಿಸಿಕೊಳ್ಳದೇ ನಗುತ್ತಲೇ ನನ್ನನ್ನು ಸ್ವೀಕರಿಸುತ್ತಿದ್ದೀರಿ ಇದು ಹೇಗೆ ಸಾಧ್ಯವೆಂದು ಕೇಳಿದ. ’ನೀನು ನನ್ನ ಪೋಷಕ.’ನಿನ್ನಿಂದಾಗಿ ಇಂದು ಪವಿತ್ರ ನರ್ಮದೆಯಲ್ಲಿ ಇಷ್ಟು ಬಾರಿ ಮಿಂದೆದ್ದೆ. ನನ್ನನ್ನು ಶುದ್ಧೀಕರಿಸಿಕೊಳ್ಳಲು ಒಂದು ಅವಕಾಶ ನೀಡಿದೆ ಎಂದನoತೆ. ಫೋರ್ಡ್ ಕಾರಿನ ಹೆನ್ರಿ ,ವಿಮಾನ ಸಂಶೋಧಿಸಿದ ರೈಟ್ ಬ್ರದರ್ಸ್, ಅಬ್ರಹಾಂ ಲಿಂಕನ್,ಇತಿಹಾಸ ಪ್ರಸಿದ್ಧ ಚಾಣಕ್ಯ, ಮಹಾತ್ಮ ಗಾಂಧಿ, ಹಿಂದಿ ಚಿತ್ರ ಲೋಕದ ದಿಗ್ಗಜ ಅಮಿತಾಬ್ ಬಚನ್, ಸಾವಿರ ಸಂಶೋಧನೆಗಳ ಸರದಾರ ಥಾಮಸ್ ಅಲ್ವಾ ಎಡಿಸನ್‌ನಂಥ ಸಾವಿರ ಗೆಲುವಿನ ಸರದಾರರು ಅವಮಾನದ ತಿರುವುಗಳನ್ನೇ ಗೆಲುವಿನ ಮೈಲಿಗಲ್ಲುಗಳನ್ನಾಗಿ ರೂಪಿಸಿಕೊಂಡಿದ್ದು ಈಗ ಇತಿಹಾಸ.  ಅವಮಾನವನ್ನು ಹೇಗೆ ಸ್ವೀಕರಿಸುತ್ತೇವೆ ಎನ್ನುವುದರ ಮೇಲೆ ಅವು ಮೈಲಿಗಲ್ಲುಗಳಾಗುವುದು ಅವಲಂಬಿತವಾಗುತ್ತದೆ.ಅವಮಾನವನ್ನು ಅನುಭವಿಸಿದವರು ಕೋಟಿ ಕೋಟಿ ಜನ ಆದರೆ ಅದನ್ನು ಗಂಭೀರವಾಗಿ ಕೈಗೆತ್ತಿಕೊಂಡವರ ಸಂಖ್ಯೆ   ಸಾವಿರ ಇಲ್ಲವೇ ಲಕ್ಷ ದಾಟುವುದಿಲ್ಲ. ಉಳಿದವರಿಗೆ ಸವಾಲಾಗದೇ ಕಾಡದೇ ಇದ್ದುದು ಎದುರಿಸಿ ನಿಲ್ಲಬೇಕೆನ್ನುವವರಿಗೆ ಸವಾಲಾಗಿ ಕಂಡಿದ್ದು ನಿಜ. ಅಳ್ಳೆದೆಯವರಿಗೆ ಅವಮಾನವೆಂಬ ಪದವೇ ದೂರ ಸರಿಯುವಂತೆ ಮಾಡುವುದೂ ಅಷ್ಟೇ ಸತ್ಯ. ದೂರು ಸರಿಯುವ ಬದಲು ಗಟ್ಟಿ ಧೈರ್ಯ ಮಾಡಿದರೆ ಅವಮಾನದೊಂದಿಗೆ  ಮುಖಾಮುಖಿಯಾಗಬಹುದು. ಹಾಗಾದರೆ ಅವಮಾನವೆಂದರೇನು? ಅದರ ಲಕ್ಷಣಗಳೇನು? ಪರಿಣಾಮಗಳು ಎಂಥವು? ಅದನ್ನು ನಿರ್ವಹಿಸುವ ಕಲೆ ಹೇಗೆ ಎಂಬುದನ್ನು ತಿಳಿಯೋಣ ಬನ್ನಿ. ಅವಮಾನವೆಂದರೆ. . . . ? ಯಾರಿಗೂ ಹೇಳಿಕೊಳ್ಳಲಾಗದ ಅನುಮಾನದ ನೋವುಗಳನ್ನು ಎದೆಯ ತೆಕ್ಕೆಯಲ್ಲಿ ಬಚ್ಚಿಟ್ಟುಕೊಂಡು ತಿರುಗುವ ನೋವು ನಮ್ಮ ಶತ್ರುಗಳಿಗೂ ಬೇಡ. ‘ “ನಮ್ಮ ಭೀಮ ಗಾತ್ರದ ಶಕ್ತಿಗಳನ್ನು ಲವಲೇಶಕ್ಕೂ ಬೆಲೆ ಇಲ್ಲದಂತೆ ಲಘುವಾಗಿಸುವ ಪ್ರಯತ್ನ ನಡೆಸುವುದೇ ಅವಮಾನ.” ಅವಮಾನಿಸಿಯೇ ನಮ್ಮ ಗಮನ ಸೆಳೆಯುವವರೂ ಕಾಣ ಸಿಗುತ್ತಾರೆ. ಅದಕ್ಕೆಲ್ಲ ಬೇಸರಿಸಿಕೊಳ್ಳುವ ಹಾಗಿಲ್ಲ. ಅವರ ಹೀಯಾಳಿಕೆಯನ್ನೇ ಹೆಗ್ಗಳಿಕೆಯಾಗಿಸಿಕೊಳ್ಳುವುದೇ ಜಾಣತನ. ಭಯ ಆತಂಕದಿoದಲೇ ಪಡೆಯಬೇಕಾದುದನ್ನು ಮನಸಾರೆ ಸ್ವೀಕರಿಸಿದರೂ ಅಗಾಧ ಬದಲಾವಣೆಯನ್ನು ತರುವ ಅಪಾರ ಶಕ್ತಿ ಅವಮಾನಕ್ಕೆ ಉಂಟು. ಅವಮಾನಿಸಿದವರ ಮುಂದೆ ತಲೆ ಎತ್ತಿ ಬದುಕಬೇಕೆಂದರೆ ಅವಮಾನವನ್ನೇ ಉತ್ಸಾಹವಾಗಿಸಿಕೊಳ್ಳಬೇಕು. ಅದೇ ಉತ್ಸಾಹ ನಮ್ಮನ್ನು ಉತ್ತೇಜಿಸುತ್ತದೆ. ಹೀಗೆ ದೊರೆತ ಉತ್ಸಾಹ ಬದಲಾಗುತ್ತ ಬೆಳೆಯುತ್ತ ಹೋಗುತ್ತದೆ. ಸನ್ಮಾನದತ್ತ ತಂದು ನಿಲ್ಲಿಸುತ್ತದೆ. ಲಕ್ಷಣ ಕಪಾಳಮೋಕ್ಷ,ಗುದ್ದುವುದು, ಅಪಹಾಸ್ಯದ ನಗು, ಮುಖದಲ್ಲಿಯ ಅಭಿವ್ಯಕ್ತಿ  ಹೀಗೆ ದೈಹಿಕವಾಗಿರಬಹುದು. ಇಲ್ಲವೇ ಸಾಮಾನ್ಯವಾಗಿ ವ್ಯಂಗ್ಯವಾಡುವುದು, ಅಣುಕಿಸುವುದು, ಅವಾಚ್ಯ ಶಬ್ದಗಳ ಬಳಕೆ ಅಸಂಬದ್ಧ ಟೀಕೆಗಳನ್ನು ಮಾಡುವುದಿರಬಹುದು. ಪರಿಣಾಮಗಳು ಅವಮಾನ ಮಾಡುವ ಅಡ್ಡ ಪರಿಣಾಮಗಳು ಒಂದೇ ಎರಡೇ? ಅದರ ಪಟ್ಟಿ ಮಾಡುತ್ತ ಸಾಗಿದರೆ ಹನುಮನ ಬಾಲದಂತೆ ಬೆಳೆಯುತ್ತಲೇ ಹೋಗುತ್ತದೆ. ಮೊದಲನೆಯದಾಗಿ ನಮ್ಮ ಸಂತೋಷವನ್ನೇ ಹಾಳು ಮಾಡುತ್ತದೆ. ಆತ್ಮವಿಶ್ವಾಸವನ್ನು ಸ್ವ ಗೌರವವನ್ನು ಒಮ್ಮಿಂದೊಮ್ಮೆಲೇ ಕೆಳಕ್ಕೆ ತಳ್ಳುತ್ತದೆ.ಏಕಾಂಗಿಯಾಗಿಸುತ್ತದೆ. ಸಿಟ್ಟು ತರಿಸುತ್ತದೆ. ಆತಂಕಕ್ಕೆ ಒಳಪಡಿಸುತ್ತದೆ. ಅಷ್ಟೇ ಅಲ್ಲ ಇನ್ನೂ ಮುಂದಕ್ಕೆ ಹೋಗಿ ಖಿನ್ನತೆಯೂ ಆವರಿಸುವಂತೆ ಮಾಡುತ್ತದೆ. ನಿರ್ವಹಿಸುವ ಬಗೆ ಹಲವು ಅವು ಇಲ್ಲಿವೆ ನೋಡಿ   ಸಿಟ್ಟು ಅವಮಾಕ್ಕೆ ಸಿಟ್ಟಿನಿಂದ ಉತ್ತರಿಸುವುದು ನಿಜಕ್ಕೂ ತುಂಬ ಅಶಕ್ತವೆನಿಸುತ್ತದೆ. ಅವಮಾನಿಸಿದವರನ್ನು ಮತ್ತು ಅವಮಾನವನ್ನು ಅತಿ ಗಂಭೀರವಾಗಿ ತೆಗೆದುಕೊಂಡಿದ್ದೇವೆ ಎನ್ನುವುದನ್ನು ಎತ್ತಿ ತೋರಿಸುತ್ತದೆ. ಅವಮಾನದಲ್ಲಿ ಸತ್ಯವಿದೆ ಎನಿಸುತ್ತದೆ. ಮನದ ಸ್ಥಿರತೆಯನ್ನು ತಗ್ಗಿಸುತ್ತದೆ. ಮತ್ತಷ್ಟು ಅವಮಾನಕ್ಕೆ ಎಡೆಮಾಡುತ್ತದೆ. ಹೀಗಾಗಿ ಅವಮಾನವನ್ನು ಸಿಟ್ಟಿನಿಂದ ಎದುರಿಸುವುದ ಅಷ್ಟು ಸೂಕ್ತವಲ್ಲ ಎನಿಸುತ್ತದೆ. ಸ್ವೀಕರಿಸುವಿಕೆ ಮೇಲ್ನೋಟಕ್ಕೆ ಅವಮಾನವನ್ನು ಸ್ವೀಕರಿಸುವುದು ಅಶಕ್ತವೆನಿಸಿದರೂ ಸಶಕ್ತ ವಿಧಾನವಾಗಿದೆ. ಅವಮಾನಿತಗೊಂಡಾಗ ಮೂರು ವಿಷಯಗಳನ್ನು ಪರಿಗಣಿಸಬೇಕು. ಅವಮಾನ ಸತ್ಯದ ಆಧಾರದ ಮೇಲಿದೆಯೇ? ಅವಮಾನಿಸಿದವರು ಯೋಗ್ಯರೇ? ಅವಮಾನ ಏಕೆ ಮಾಡಲ್ಪಟ್ಟಿತು? ಸತ್ಯವೆನಿಸಿದರೆ, ಯೋಗ್ಯರೆನಿಸಿದರೆ, (ಪಾಲಕರು, ಗುರುಗಳು, ಗೆಳೆಯರು) ಉದ್ದೇಶ ಒಳ್ಳೆಯದಿತ್ತು ಎನಿಸಿದರೆ ಅವಮಾನವ ಮಾಡಿದವರು ನೀವು ಗೌರವಿಸುವ ವ್ಯಕ್ತಿಯಾಗಿದ್ದರೆ ಆ ಅವಮಾನವನ್ನು ಉಡಾಫೆ ಮಾಡುವಂತಿಲ್ಲ. ಅದನ್ನು ಗಂಭೀರವಾಗಿ ಪರಿಗಣಿಸಬೇಕು. ಸತ್ಯಾಸತ್ಯತೆಯನ್ನು ಅರಿತು ಬದಲಾಗಲು ಸ್ವೀಕರಿಸಬೇಕು. ಮರಳಿಸುವಿಕೆ ಅವಮಾನವನ್ನು ಮರಳಿಸುವಿಕೆಯಲ್ಲಿ ಕೆಲವೊಂದಿಷ್ಟು ವಿಷಯಗಳು ಹುದುಗಿವೆ. ಆದ ಅವಮಾನ ಮರಳಿಸಲು ಯೋಗ್ಯವಾಗಿರಬೇಕು. ಸರಿಯಾದ ಸಮಯಕ್ಕೆ ಜಾಣತನದಿಂದ ಉತ್ತರಿಸುವಂತಿರಬೇಕು.’ಪರಿಪೂರ್ಣತೆಯನ್ನು ಕಡಿಮೆ ಮಾಡುವುದು ವಿರಳವಾಗಿ ಉತ್ತಮ ಪ್ರತಿಕ್ರಿಯೆ’ ಎಂದಿದ್ದಾನೆ ಆಸ್ಕರ್ ವೈಲ್ಡ್. ಆದರೆ ಹೀಗೆ ಕಡಿಮೆ ಮಾಡುವ ಪ್ರತಿಕ್ರಿಯೆಯ ಒಂದು ಮುಖ್ಯ ಸಮಸ್ಯೆ ಎಂದರೆ ಎಷ್ಟೇ ಜಾಣರಾಗಿದ್ದರೂ ಅದು ನಮ್ಮನ್ನು ಅವಮಾನಿಸಿದವರ ಮಟ್ಟಕ್ಕೆ ಇಳಿಸುತ್ತದೆ. ಹೀಗಾಗಿ ಇದು ಅಂದವಾದ ದುರ್ಬಲವಾದ ವಿಧಾನ. ಇದರಲ್ಲಿನ ಅವಮಾನಿಸಿದವರನ್ನು ಕೆರಳಿಸಿ ಮತ್ತಷ್ಟು ಆಕ್ರಮಣಗಳನ್ನು ಹೆಚ್ಚಿಸುವ ಸಾಧ್ಯತೆ ಹೆಚ್ಚು. ಆದರೆ ಈ ವಿಧಾನವನ್ನು ಹಾಸ್ಯಮಯವಾಗಿ ಗೆಳೆಯರೊಂದಿಗೆ ಸಮವಯಸ್ಕರೊಂದಿಗೆ ಬಳಸಬಹುದು. ಅಲಕ್ಷಿಸುವಿಕೆ ಹಾಸ್ಯ, ಶೋಚನೀಯವಾಗಿ ಮರಳಿಸುವಿಕೆಯ ಫಲಿತಾಂಶವನ್ನು ಪಡೆದಿದೆ. ನಿಮ್ಮ ಉತ್ತರ ಮೋಜಿನದಾಗಿರಬೇಕು. ಸರಿಯಾದ ಸಮಯಕ್ಕೆ ಸರಿಯಾದ ಭಾವದೊಂದಿಗೆ ಹೇಳುವಂತಿರಬೇಕು. ನಿಜದಲ್ಲಿ ಅವಮಾನವನ್ನು ಅಲಕ್ಷಿಸುವಿಕೆ ಬಹು ಸರಳ ಮತ್ತು ಹೆಚ್ಚು ಪರಿಣಾಮಕಾರಿ ವಿಧಾನ ಎನ್ನಬಹುದು. ಈ ವಿಧಾನವು ಅಪರಿಚಿತರೊಂದಿಗೆ ಸರಿಯಾಗುತ್ತದೆ. ಆದರೆ ಇದು ನಮ್ಮ ವೈಯಕ್ತಿಕ ವೃತ್ತಿಪರ ಸಂಬoಧಗಳೊoದಿಗೆ ಸರಿ ಹೊಂದುವುದಿಲ್ಲ.ಇoಥ ಸಂದರ್ಭದಲ್ಲಿ ಸರಿಯಾದ ಶಬ್ದವನ್ನು ಬಳಸುವುದು ಆಯ್ಕೆಗೆ ಅರ್ಹವಾದುದು.ಶಬ್ದ ಬಳಸುವಾಗ ನಮ್ಮ ಎಲ್ಲೆಗಳನ್ನು ಮೀರದಂತೆ ಪುನಃ ದೃಢಪಡಿಸಲು ಪ್ರಯತ್ನಿಸಬೇಕು. ವೈಯಕ್ತಿಕ ಮತ್ತು ವೃತ್ತಿಪರ ಆರೋಗ್ಯಕರ ಪರಿಸರ ನಿರ್ಮಿಸುವುದು ಒಂದು ಸವಾಲಿನ ಸಂಗತಿಯೇ ಸರಿ. ಇಲ್ಲಿ ಶಾರೀರಿಕ  ಎಲ್ಲೆಗಳನ್ನು ಎಷ್ಟರಮಟ್ಟಿಗೆ ನಿರ್ಧಿಷ್ಟವಾಗಿ ಕಾಪಾಡಿಕೊಳ್ಳುತ್ತೇವೆ ಎನ್ನುವುದು ಮುಖ್ಯವಾಗುತ್ತದೆ. ಇದೊಂದು ನಾಯಿ ಬಾಲವನ್ನು ನೆಟ್ಟಗಾಗಿಸಿದಂತೆ.ಪ್ರತಿ ಬಾರಿ ಅದನ್ನು ಪುನಃ ದೃಢಪಡಿಸುವಾಗಲು ಅದು ಬಿಡಿಸದಂತೆ ಡೊಂಕಾಗಿರುತ್ತದೆ. ಇದಕ್ಕೆ ಸಾಕಷ್ಟು ಪ್ರಯತ್ನ ಬೇಕು. ಕೆಲವು ಬಾರಿ ಧೈರ್ಯವೂ ಬೇಕಾಗುತ್ತದೆ. ಆದರೆ ಈ ವಿಧಾನವನ್ನು ಪ್ರಾರಂಭದಿoದಲೇ ರೂಢಿಸಿಕೊಂಡರೆ ಇದು ಬಹು ಪರಿಣಾಮಕಾರಿ ವಿಧಾನ. ಅವಮಾನ ಅಪರಾಧವಲ್ಲ ಅವಮಾನವನ್ನು ಅಪರಾಧವೆಂದು ಎಂದೂ ತಿಳಿಯಬಾರದು. ಅಪರಾಧವು ನಾವು ಅವಮಾನಕ್ಕೆ ಪ್ರತಿಕ್ರಿಯಿಸುವುದರಲ್ಲಿದೆ. ನಮ್ಮ ಪ್ರತಿಕ್ರಿಯೆಗಳು ನಮ್ಮ ಹತೋಟಿಯಲ್ಲಿರುತ್ತವೆ. ಒಬ್ಬ ಗಮಾರನನ್ನು ಗಮಾರನೆಂದು ನಿರೀಕ್ಷಿಸುವುದು ಅಸಮಂಜಸವಾಗಿದೆ. ಅವನ ಕೆಟ್ಟ ನಡುವಳಿಕೆಯಿಂದ ನಮ್ಮನ್ನು ಅಪರಾಧಿಗಳೆಂದುಕೊoಡರೆ ನಮ್ಮನ್ನು ನಾವು ದೂಷಿಸಿಕೊಳ್ಳಬೇಕಾಗುತ್ತದೆ. ಆಯ್ಕೆ ಆದ್ಯತೆಗಳೂ ಕಾರಣವಾಗುತ್ತವೆ. ಅದಕ್ಕಾಗಿಯೇ ಸುತ್ತಲಿನ ಲೋಕ ಚಾಲ್ತಿ ಪಡೆಯುತ್ತದೆ. ಮೇಲ್ನೋಟದಲ್ಲಿ ಅವಮಾನವೆನಿಸುವುದು ಅವಮಾನಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಅದು ನಮ್ಮೊಳಗಿನ ಚೇತನವನ್ನು ಬಡಿದೆಬ್ಬಿಸುವ ದೊಡ್ಡ ಕೆಲಸವನ್ನು ಮಾಡುವ ಮಾಯಾ ಶಕ್ತಿಯನ್ನು  ಹೊಂದಿರುತ್ತದೆ ಎಂಬುದನ್ನು ತಿಳಿದು ನಮ್ಮ ಶಕ್ತಿ ದೌರ್ಬಲ್ಯವನ್ನು ಅಳೆದು ತೂಗಿ ನೋಡಿ ಸಾಧಿಸಬೇಕಾದ ಗುರಿಗೆ ಗುರಿ ಇಡಬೇಕು. ಅನುಮತಿಯಿಲ್ಲದೇ ಅವಮಾನವಿಲ್ಲ ‘ನಿನ್ನ ಅನುಮತಿ ಇರಲಾರದೇ ನಿನ್ನನ್ನು ಯಾರೂ ಅನುಮಾನಿಸಲಾರರು.’ ಎಂಬುದು ಅನುಭವಿಕರ ನುಡಿ. ಅನುಮಾನದ ಭೀತಿ ಇರುವವರೆಗೂ ಅನುಮಾನಗಳು ನಮ್ಮನ್ನು ಸುತ್ತುವರೆಯುತ್ತವೆ. ಅನುಮಾನದ ಭೀತಿ ತೊರೆದ ಮೇಲೆ ನಮ್ಮನ್ನು ಬಿಟ್ಟು ತೊಲಗುತ್ತವೆ. ಅವಮಾನಕ್ಕೆ ಪ್ರತಿಕ್ರಿಯಿಸಿ ಮತ್ತೆ ಅವಮಾನಿಸಿಕೊಳ್ಳುವುದು ಮೂರ್ಖತನವೇ ಸರಿ.ಅವಮಾನಕ್ಕೆ ಪ್ರತಿಯಾಗಿ ಅಸಂಬದ್ಧ ರೀತಿಯಲ್ಲಿ ಪ್ರತಿಕ್ರಿಯಿಸುತ್ತ ಕುಳಿತರೆ ನಡೆಯುವ ದಾರಿ ತಪ್ಪಿ ಹೋಗುತ್ತದೆ. ಅವಮಾನ ಎದುರಿಸುವಾಗ ಎಚ್ಚರದಿಂದಿರು. ಅವಮಾನವೆಂಬ ಹೆಸರಿನಲ್ಲಿ ಜೀವನದ ಖಾತೆಗೆ  ನಷ್ಟ. ಜನರ ದೃಷ್ಟಿಯಲ್ಲಿ ಅವಮಾನ ಸಣ್ಣದಿರಲಿ ದೊಡ್ಡದಿರಲಿ ನಮ್ಮ ಪಾಲಿಗಂತೂ ಅದು ದೊಡ್ಡ ಕಹಿಯೇ ‘ಅವಮಾನ ಹೆಚ್ಚಿದಷ್ಟು ಹೆಚ್ಚು ಲಾಭ ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸಿದರೆ ಮಾತ್ರ..’ ಕೊನೆ ಹನಿ ಗೆಲುವಿನೆಡೆಗೆ ಪಯಣ ಬೆಳೆಸುವಾಗ ಅವಮಾನ ಕಟ್ಟಿಟ್ಟ ಬುತ್ತಿ. ಇಲ್ಲಿ ಅವಮಾನ ಯಾರಿಗಿಲ್ಲ ಹೇಳಿ.ಲೋಕದಲ್ಲಿ ಹುಟ್ಟಿದ ಎಲ್ಲರೂ ಅವಮಾನ ಅನುಭವಿಸಿದವರೆ. ಹೆಜ್ಜೆ ಹೆಜ್ಜೆಗೂ ಕಾಡುವ ಅವಮಾನ ಗೆಲುವಿನ ಏಣಿ ಏರಿ ಯಶಸ್ಸಿನ ಶಿಖರವನ್ನು ಮುಟ್ಟಲು ಕಾರಣವಾಗತ್ತದೆ.ಸಣ್ಣ ಪುಟ್ಟ ಘಟನೆಗಳ ಅವಮಾನವೂ ಗಮನ ಸೆಳೆಯುತ್ತದೆ. ಒಮ್ಮೊಮ್ಮೆಯಂತೂ ನಿರುತ್ಸಾಹ ಮೂಡಿಸಿ ಹಿಂಡಿ ಹಿಪ್ಪಿ ಮಾಡಿ ಬಿಡುತ್ತದೆ. ಅವಮಾನಗಳಿಗೆ ಹೆದರುವ ಅಗತ್ಯವಿಲ್ಲ. ಅನಗತ್ಯ ಅವಮಾನವಾಗಿದ್ದರೆಅದಕ್ಕೆ ತಲೆ ಕೆಡಿಸಿಕೊಳ್ಳುವ ಅಗತ್ಯತೆಯಿಲ್ಲ. ಎಲ್ಲರೂ ನಮ್ಮನ್ನು ಮೆಚ್ಚಿಕೊಂಡರೆ ನಾವು ಶುದ್ಧರಾಗುವುದಿಲ್ಲ. ಶುದ್ಧೀಕರಣ ಇತರರು ನಮ್ಮನ್ನು ಪರೀಕ್ಷೆಗೆ ಒಡ್ಡಿದಾಗ ಟೀಕಿಸಿದಾಗ ಉಂಟಾಗುತ್ತದೆ. ಅನುಮಾನವೆಂಬ ದೌರ್ಬಲ್ಯವನ್ನು ಮೆಟ್ಟಿ ನಿಲ್ಲಬೇಕು. ಅವಮಾನದ ಸಂದರ್ಭದಲ್ಲಿ ಗೆಳೆಯರು ಬಂಧುಗಳು ಕೈ ಬಿಟ್ಟರೂ ಸಂಗಾತಿಯಾಗಿ ನಿಲ್ಲುವುದೇ ಆತ್ಮವಿಶ್ವಾಸ.ಅವಮಾನದ ಪ್ರತಿ ತಿರುವನ್ನು ಸವಾಲಾಗಿ ಸ್ವೀಕರಿಸಿದರೆ ಒಂದೊoದು ಅವಮಾನದ ಪ್ರತಿ ತಿರುವೂ ನಿಮ್ಮ ಗೆಲುವಿನ ಮೈಲಿಗಲ್ಲುಗಳಾಗಿ ಜನರು ನಮ್ಮನ್ನು ಅಭಿಮಾನದಿಂದ ತಿರುಗಿ ನೋಡುವಂತೆ ಮಾಡುತ್ತವೆ.ಅವಮಾನಿಸಿದವರೇ ಸನ್ಮಾನಿಸುವಂತೆ ಬೆಳೆದು ತೋರಿಸುವುದೇ ಅವಮಾನಕ್ಕೆ ತಕ್ಕ ಉತ್ತರವಲ್ಲವೇ? ಜಯಶ್ರೀ ಜೆ ಅಬ್ಬಿಗೇರಿ

“ಅವಮಾನದ ತಿರುವುಗಳು ಗೆಲುವಿನ ಮೈಲಿಗಲ್ಲುಗಳು” ಜಯಶ್ರೀ.ಜೆ. ಅಬ್ಬಿಗೇರಿ Read Post »

ಕಾವ್ಯಯಾನ

ಡಾ  ಗೀತಾ ದಾನಶೆಟ್ಟಿ ಬಾಗಲಕೋಟೆ “ವಿಶ್ವಪಥ”

ಕಾವ್ಯಸಂಗಾತಿ ಡಾ  ಗೀತಾ ದಾನಶೆಟ್ಟಿ ವಿಶ್ವಪಥ ಉಡುವ ಬಟ್ಟೆನಡೆವ ಬದುಕುಹಲವು ಬಗೆರೀತಿಯಾದರೇನು ?ಮನುಜ ಮತ ಒಂದೇ ಇರಲುದ್ವೇಷ ಅಸೂಯೆಗಳೆತಕೆಭ್ರಾಂತಿ ಅಳಿದು,ಶಾಂತಿ ಉಳಿದುಸತ್ಯ ಸಮತೆಗೆ ಮಣಿದುಮತ್ತೆ ಬೆಳೆಯಲಿಮನುಜ ಮತನಿತ್ಯ ಸಾಗುವ  ವಿಶ್ವಪಥ ಡಾ  ಗೀತಾ ದಾನಶೆಟ್ಟಿ ಬಾಗಲಕೋಟೆ

ಡಾ  ಗೀತಾ ದಾನಶೆಟ್ಟಿ ಬಾಗಲಕೋಟೆ “ವಿಶ್ವಪಥ” Read Post »

ಇತರೆ

ಲೈಕು.ಕಮೆಂಟುಗಳಿಗಾಗಿ ಬಲಿಯಾದ ಒಂದುಜೀವ!ವಿಶೇಷ ಲೇಖನ, ಐಗೂರು ಮೋಹನ್ ದಾಸ್ ಜಿ.

ಜಾಲತಾಣ ಸಂಗಾತಿ ಐಗೂರು ಮೋಹನ್ ದಾಸ್ ಜಿ. ಲೈಕು.ಕಮೆಂಟುಗಳಿಗಾಗಿ ಬಲಿಯಾದ ಒಂದುಜೀವ! ಒಂದು ಮಾತು :ಕೆಲ ದಿನಗಳ ಹಿಂದೆ ದೇವರನಾಡು ಕೇರಳ ರಾಜ್ಯದಲ್ಲಿ,ಸಾಮಾಜಿಕ ಜಾಲತಾಣದ ಹುಚ್ಚು ಮೋಹದಿಂದ ಯುವತಿಯೊಬ್ಬಳ ಹುಚ್ಚಾಟಕ್ಕೆ, ಒಂದು ಮನೆಯ ‘ಬೆಳಕು’ವಾಗಿದ್ದ ‘ದೀಪಕ್’ ಎನ್ನುವ ಯುವಕ ‘ಆತ್ಮಹತ್ಯೆ’ ಮಾಡಿಕೊಂಡಿರುವ ವಿಚಾರ ನಿಮಗೂ ಗೊತ್ತಿರಬೇಕು.    ಈ ಯುವತಿಯ ಸುಳ್ಳು ಆರೋಪದಿಂದ ಒಂದು ಗಂಡು ಜೀವ ಹೋಗಿದೆ…. ಪ್ರಜ್ಞಾವಂತ ಜನತೆ ಈ ಯುವತಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಒತ್ತಾಯ ಮಾಡುತ್ತಿದ್ದಾರೆ.   ಇಂದು ಈ ಆತ್ಮಹತ್ಯೆ ಪ್ರಕರಣದಲ್ಲಿ ಯುವತಿಯ ‘ಬಂಧನ’ವಾಗಿದೆ.ಆದರೆ ದೇಶದ ಕಾನೂನು ವ್ಯವಸ್ಥೆ ಈ ತಪ್ಪಿಗೆ ಏನು ‘ಶಿಕ್ಷೆ’ ನೀಡುತ್ತದೆ ಎಂಬುವುದು ಗೊತ್ತಿಲ್ಲ…!ಯಾವುದೇ ತಪ್ಪು ಮಾಡದೇ ಸಮಾಜದಲ್ಲಿ ತಲೆ ತಗ್ಗಿಸಿ ನಿಲ್ಲುವಂತಹ ದಿನಗಳು ಬಂದರೇ, ಉತ್ತಮ ಗುಣ-ನಡತೆಯನ್ನು ಹೊಂದಿರುವ ದೀಪಕ ನಂತಹ ಒಳ್ಳೆಯ ಗುಣವಂತ ಮಂದಿ  ನಾಚಿಕೆಯಿಂದ ‘ಆತ್ಮಹತ್ಯೆ’ಯಂತಹ ಕೆಟ್ಟನಿಧಾ೯ರವನ್ನು ತೆಗೆದುಕೊಳ್ಳುತ್ತಾರೆ… ಜೊತೆಗೆ ಈಗ ಸಾಮಾಜಿಕ ಜಾಲತಾಣ ಗಳು  ಉರಿಯುವ ಬೆಂಕಿಗೆ ತುಪ್ಪ ಸುರಿದ ರೀತಿಯಾಗಿದೆ…!   ಒಂದು ಹೆಣ್ಣು’ ಜನಪ್ರಿಯತೆ’ ಹೊಂದಲು ಮಾಡಿದ ತಪ್ಪಿಯಿಂದ, ಒಂದು ಕುಟುಂಬವೇ ಕಣ್ಣೀರು ಸುರಿಸುತ್ತಿದೆ… ಎಲ್ಲಾಡೆ ಈ ಪಾಳು ಜನ್ಮದ ಹೆಣ್ಣಿನ ಮೇಲೆ ‘ಶಾಪ’ ದ ಮಳೆ ಸುರಿಸುತ್ತಿದೆ…!ಆದರಿಂದ ಈ ಪ್ರಕರಣವನ್ನು ಧೀಘ೯ವಾಗಿ ಎಳೆಯುವುದು ಇಲ್ಲ..! ಬದಲಾಗಿ ಈ ಪ್ರಕರಣದ ಸರ್ವ ದುರಂತಕತೆಯನ್ನು ಎರಡು ಗೆರೆಯ ಕವಿತೆಯೊಂದಿಗೆ ಮುಗಿಸುವೆ..!ಇದು ಮಲಯಾಳಂ ಕವಿಯೊಬ್ಬರು ಬರೆದ ಕವಿತೆಯ ‘ಅನುವಾದ ‘ವಾಗಿದೆ…! ದುರಂತ..!  ‘ಸ್ತನ’  ತಾಗಿಒರ್ವನ ಸಾವು…!!?.  ಐಗೂರು ಮೋಹನ್ ದಾಸ್ ಜಿ.

ಲೈಕು.ಕಮೆಂಟುಗಳಿಗಾಗಿ ಬಲಿಯಾದ ಒಂದುಜೀವ!ವಿಶೇಷ ಲೇಖನ, ಐಗೂರು ಮೋಹನ್ ದಾಸ್ ಜಿ. Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಸಾವಿಲ್ಲದ ಶರಣರು ಮಾಲಿಕೆ,”ಸಂಚಾರಿ ಸಂಗೀತ ಸಾಮ್ರಾಟ  ಶ್ರೀ  ಪಂಚಾಕ್ಷರಿ ಗವಾಯಿಗಳು” ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ

ಶರಣರ ಸಂಗಾತಿ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ಮಾಲಿಕೆ, ಸಂಚಾರಿ ಸಂಗೀತ ಸಾಮ್ರಾಟ  ಶ್ರೀ  ಪಂಚಾಕ್ಷರಿ ಗವಾಯಿಗಳು” ನನ್ನ ತಾಯಿಯ ತವರೂರು ಗದಗ ಜಿಲ್ಲೆಯ ಮುಳಗುಂದ .ಬಾಲಲೀಲಾ ಮಹಾಂತ ಸ್ವಾಮಿಗಳು ,ದಾವಲ ಮಲಿಕ್ ಶಿರಹಟ್ಟಿ ಫಕೀರೇಶ್ವರ ಹೀಗೆ ಬೇರೆ ಬೇರೆ ಮಹಾತ್ಮರ ಪರಿಸರದಲ್ಲಿ ನನ್ನ ತಾಯಿ ಲಿಂಗೈಕ್ಯ ಸರೋಜಾ ರುದ್ರಪ್ಪ ಪಟ್ಟಣ ಲಿಂಗೈಕ್ಯ ಶ್ರೀ ವೀರಭದ್ರಪ್ಪ ವಾಲಿ ಮತ್ತು ಲಿಂಗೈಕ್ಯ ಶ್ರೀಮತಿ ಚೆನ್ನವೀರವ್ವ ಅವರ ಉದರದಲ್ಲಿ ಜನಿಸಿದ ಹಿರಿಯ ಮಗಳು. ಐವತ್ತು ವರುಷದ ಹಿಂದೆ ನಾನು ಬಾಲಕನಾಗಿದ್ದಾಗ ನನ್ನ ಅಜ್ಜ ಲಿಂಗೈಕ್ಯ  ಶ್ರೀ ವೀರಭದ್ರಪ್ಪ ವಾಲಿ ಅವರು ನನಗೆ ನಿತ್ಯ ಸಂಜೆ  ರಾತ್ರಿ  ಕಥೆ ಹೇಳುತ್ತಿದ್ದರು ಅವರು ಹೇಳಿದ ಒಂದು ಸಹಜ ಪ್ರಕರಣದ ಭಾಗವನ್ನು ಇಲ್ಲಿ ಸ್ಮರಿಸುತ್ತೇನೆ. ಮುಳಗುಂದ ವ್ಯಾಪಾರಸ್ಥರು  ಒಮ್ಮೆ ಶ್ರೀ  ಪಂಚಾಕ್ಷರಿ ಗವಾಯಿಗಳನ್ನು   ಜಾತ್ರಾ ಮಹೋತ್ಸವಕ್ಕೆ ಮುಳಗುಂದಕ್ಕೆ ಕರೆಸಿದರಂತೆ ಕಾರ್ಯಕ್ರಮ ಮುಗಿದ ಮೇಲೆ ಶ್ರೀ   ಶ್ರೀ  ಪಂಚಾಕ್ಷರಿ ಗವಾಯಿಗಳು ತಾವು ತಂದ ಧೋತರ ಅಲ್ಲಿನವರು ಬೇರೆಯವರ ಧೋತರಗಳ ಜೊತೆಗೆ ಬೆರೆಸಿ ಇಟ್ಟಿದ್ದರಂತೆ ,ಇವರ ತೀಕ್ಷ್ಣತೆ ಪರೀಕ್ಷೆ ಮಾಡಲು, ಇಪ್ಪತ್ತು ದೋತುರಗಳಲ್ಲಿ ಶ್ರೀ  ಪಂಚಾಕ್ಷರಿ ಗವಾಯಿಗಳು ತಮ್ಮ ದೋತುರವನ್ನೇ ಆಯ್ಕೆ ಮಾಡಿಕೊಂಡರಂತೆ. ಅದೇ ರೀತಿ ಅವರ ಉಣ್ಣುವ ಗಂಗಾಳ ಮತ್ತು ಚರಿಗೆಯನ್ನು ಅವರು ಪತ್ತೆ ಹಚ್ಚಿ ಜನರಿಗೆ ಆಶ್ಚರ್ಯವನ್ನು   ಉಂಟು ಮಾಡುತ್ತಿದ್ದರಂತೆ ,ಇದನ್ನು ನನ್ನ ಅಜ್ಜ ಸ್ವತಹ ಕಣ್ಣಿಂದ  ಕಂಡ ದೃಶ್ಯವೆಂದರೆ ಶ್ರೀ  ಪಂಚಾಕ್ಷರಿ ಗವಾಯಿಗಳು ಎಷ್ಟು ತೀಕ್ಷ್ಣಮತಿಗಳಾಗಿದ್ದರು ಎಂದು ತಿಳಿಯುತ್ತದೆ. ಇಂತಹ ಅಪ್ರತಿಮ ಸಂಗೀತ ಸಾಮ್ರಾಟನ ಪರಿಚಯ ಮಾಡುವುದು ನನ್ನ ಸೌಭಾಗ್ಯವೆಂದೇ ಭಾವಿಸಿದ್ದೇನೆ.  ಕರ್ನಾಟಕವು ಅದರಲ್ಲೂ ಉತ್ತರ ಕರ್ನಾಟಕವು ಸಂಗೀತ ಸಾಹಿತ್ಯ ದಿಗ್ಗಜರನ್ನು ನಾಡಿಗೆ ಸಮರ್ಪಿಸಿದೆ .ಅಂತಹ ಸಾಧಕರಲ್ಲಿ ನಮ್ಮ ಪಂಚಾಕ್ಷರಿ ಗವಾಯಿಗಳು. ಶ್ರೀ ಪಂಚಾಕ್ಷರ ಗವಾಯಿಗಳು  ಗದುಗಿನಲ್ಲಿರುವ ಪ್ರಸಿದ್ಧ ಸಂಗೀತ ಆಶ್ರಮವಾದ “ಶ್ರೀ ವೀರೇಶ್ವರ ಪುಣ್ಯಾಶ್ರಮ”ದ ಸಂಸ್ಥಾಪಕರು. ಇವರು ಜನಿಸಿದ್ದು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕಾಡಶೆಟ್ಟಿಹಳ್ಳಿಯಲ್ಲಿ, ದಿನಾಂಕ: ೨, ಫೆಬ್ರುವರಿ ೧೮೯೨ರಂದು. ಇವರ ತಾಯಿ ನೀಲಮ್ಮ ಹಾಗು ತಂದೆ ಗುರುಪಾದಯ್ಯ ಚರಂತಿಮಠ. ಗದಿಗೆಯ್ಯ ಇವರ ಹುಟ್ಟು ಹೆಸರು. ಗದಿಗೆಯ್ಯ ಹಾಗು ಇವರ ಅಣ್ಣ ಗುರುಬಸಯ್ಯ ಇಬ್ಬರೂ ಹುಟ್ಟು ಕುರುಡರು. ಸ್ಥಳೀಯವಾಗಿ ಸಾಧ್ಯವಿದ್ದ ಸಂಗೀತ ಶಿಕ್ಷಣವನ್ನು ಪಡೆದಿದ್ದರು. ಒಮ್ಮೆ ಶ್ರೀ ಹಕ್ಕಲ ಬಸವೇಶ್ವರ ಜಾತ್ರೆಯಲ್ಲಿ ಹಾಡುತ್ತಿದ್ದ ಈ ಕುರುಡು ಬಾಲಕರ ಹಾಡು ಕೇಳಿದ ಪೂಜ್ಯ ಹಾನಗಲ್ ಕುಮಾರಸ್ವಾಮಿಯವರು ಈ ಎಳೆಯರನ್ನು ತಮ್ಮ ಉಡಿಯಲ್ಲಿ ಹಾಕಿಕೊಂಡರು.ಹಾನಗಲ್ ಕುಮಾರಸ್ವಾಮಿಗಳು ಇವರಿಗೆ ಸಂಗೀತ ಶಿಕ್ಷಣಕ್ಕೆ ಪ್ರೋತ್ಸಾಹಿಸಿದರು. ಸಂಗೀತ ಶಿಕ್ಷಣ ಅಣ್ಣತಮ್ಮಂದಿರಿಬ್ಬರಿಗೂ ಅನೇಕ ಗುರುಗಳಿಂದ ಸಂಗೀತ ಶಿಕ್ಷಣ ದೊರೆಯಿತು. ಶ್ರೀ ಕುಮಾರಸ್ವಾಮಿಗಳು ಹಳ್ಳಿಹಳ್ಳಿಗಳಲ್ಲಿ ಭಿಕ್ಷೆ ಎತ್ತಿ ನೆಲವಿಗಿಯಲ್ಲೊಂದು ಶಿವಯೋಗ ಮಂದಿರ ಸ್ಥಾಪಿಸಿದ್ದರು. ಅಲ್ಲಿ ಇತರ ಹುಡುಗರ ಜೊತೆಗೆ ಈ ಹುಡುಗರೂ ಸಹ ಸಂಗೀತಾಭ್ಯಾಸ ಮಾಡುತ್ತಿದ್ದಾಗ ಅಣ್ಣ ಗುರುಬಸಯ್ಯ ಕಾಲರಾ ರೋಗದಿಂದ ಮರಣವನ್ನಪ್ಪಿದ. ಗದಿಗೆಯ್ಯನಿಗೆ ಹದಿನೆಂಟು ವರ್ಷವಾದಾಗ ಮೈಸೂರಿನಲ್ಲಿ ಗೌರಿಶಂಕರ ಸ್ವಾಮಿಗಳಲ್ಲಿ ಕರ್ನಾಟಕ ಸಂಗೀತ ವಿದ್ಯಾಭ್ಯಾಸವಾಯಿತು. ನಾಲ್ಕು ವರ್ಷ ಮೈಸೂರಿನಲ್ಲಿ ಜೋಳಿಗೆ ಹಿಡಿದು ಹೊಟ್ಟೆ ತುಂಬಿಸಿಕೊಂಡ ಗದಿಗೆಯ್ಯನವರು, ಆ ಬಳಿಕ ಬಾಗಲುಕೋಟೆಯಲ್ಲಿ ನಡೆಯುತ್ತಿದ್ದ ಅಖಿಲ ಭಾರತ ವೀರಶೈವ ಮಹಾಸಭೆಯ ಅಧಿವೇಶನದಲ್ಲಿ ಶ್ರೀ ಕುಮಾರಸ್ವಾಮಿಗಳಿಂದ “ಪಂಚಾಕ್ಷರಿ ಗವಾಯಿ” ಎಂದು ಉದ್ಘೋಷಿತರಾದರು. ಆ ಬಳಿಕ ಸಹ ಮತ್ತೆ ನಾಲ್ಕು ವರ್ಷ ಹಿಂದುಸ್ತಾನಿ ಸಂಗೀತವನ್ನು ಅಭ್ಯಸಿಸಿ ಉಭಯ ಸಂಗೀತ ಪಂಡಿತರಾದರು. ಸಂಗೀತದ ಮೂಲಕವೆ ಸಮಾಜಸೇವೆ ಮಾಡಲು ಬಯಸಿದ್ದ ಪಂಚಾಕ್ಷರಿ ಗವಾಯಿಗಳು ಕಂಚಗಲ್ ಬಿದಿರೆ ಗ್ರಾಮದ ಪ್ರಭುಕುಮಾರ ಶಿವಾಚಾರ್ಯರಿಂದ ಶಿವದೀಕ್ಷೆ ಪಡೆದು ಆಧ್ಯಾತ್ಮಮಾರ್ಗದಲ್ಲೂ ಮುನ್ನಡೆದರು. *ಸಂಗೀತ ಪ್ರಚಾರ* _________________ ಪಂಚಾಕ್ಷರಿ ಗವಾಯಿಗಳು ನಾಡಿನಲ್ಲೆಲ್ಲ ಸಂಚರಿಸುತ್ತ ಒಂದು ಸಂಚಾರೀ ಪಾಠಶಾಲೆಯನ್ನು ಪ್ರಾರಂಭಿಸಿದರು. ೧೯೧೪ರಲ್ಲಿ ಗದಗ ಜಿಲ್ಲೆಯ ರೋಣ ತಾಲೂಕಿನ ನಿಡಗುಂದಿಕೊಪ್ಪದಲ್ಲಿ ಶಿವಯೋಗ ಮಂದಿರದಲ್ಲಿ ಹಾನಗಲ್ಲ ಕುಮಾರಸ್ವಾಮಿಗಳವರು ಬಸವ ಜಯ೦ತಿಯ೦ದು ಸ್ಥಾಪಿಸಿಕೊಟ್ಟರು. ಶಾಖೆಯಾಗಿ ಸಂಗೀತ ಶಾಲೆಯೊಂದನ್ನು ಪ್ರಾರಂಭಿಸಿದರು. ಈ ಸಂಗೀತಶಾಲೆಗಳಲ್ಲಿ ಕನ್ನಡ ಮತ್ತು ಸಂಸ್ಕೃತಗಳನ್ನು ಸಹ ಹೇಳಿಕೊಡಲಾಗುತ್ತಿತ್ತು. ಇವರ ಶಿಷ್ಯರಲ್ಲಿ ಇವರ ಉತ್ತರಾಧಿಕಾರಿಯಾಗಿ ದೊರೆತ, ಪ್ರಸಿದ್ಧ ಗವಾಯಿ ಪುಟ್ಟರಾಜರೂ ಸಹ ಕುರುಡರೇ! ಸಂಗೀತಶಾಲೆಗಳ ಖರ್ಚು ತೂಗಿಸಲು ನಾಟಕ ಕಂಪನಿಯೊಂದನ್ನು ಪ್ರಾರಂಭಿಸಿ ಕೈಸುಟ್ಟುಕೊಂಡದ್ದೂ ಆಯಿತು. ಈ ನಡುವೆ ೧೯೩೦ರಲ್ಲಿ ಪಂಚಾಕ್ಷರಿ ಗವಾಯಿಗಳ ರೂವಾರಿಯಾಗಿದ್ದ ಹಾನಗಲ್ ಕುಮಾರಸ್ವಾಮಿಗಳು ಲಿಂಗೈಕ್ಯರಾದರು. ಇದೇ ಸಮಯದಲ್ಲಿ ಬರಗಾಲ ಬಿದ್ದದ್ದರಿಂದ ಪಂಚಾಕ್ಷರಿ ಗವಾಯಿಗಳು ತಮ್ಮ ಶಿಷ್ಯರಿಗಾಗಿ ಪಟ್ಟ ಪಾಡು ಅಷ್ಟಿಷ್ಟಲ್ಲ. ಆಗ ಮುಂದೆ ಬಂದು ನೆರವು ನೀಡಿದವರು ಬಸರಿಗಿಡದ ವೀರಪ್ಪನವರು. ಇವರು ಗವಾಯಿಗಳಿಗಾಗಿ ಗದಗಿನಲ್ಲಿಯೇ ತಮ್ಮ ಜಾಗದಲ್ಲಿ ಒಂದು ತಗಡಿನ ಪಾಠಶಾಲೆ ಕಟ್ಟಿಸಿಕೊಟ್ಟು, ಧನ-ಧಾನ್ಯದ ಸಹಾಯವನ್ನು ಸಹ ನೀಡಿದರು. ಈ ಸಂಗೀತಶಾಲೆಗೆ ಗವಾಯಿಗಳು “ ಶ್ರೀ ವೀರೇಶ್ವರ ಪುಣ್ಯಾಶ್ರಮ” ಎಂದೇ ಹೆಸರಿಟ್ಟರು. *ಕನ್ನಡ ಪ್ರೇಮಿ ____________ ಎಚ್.ಎಮ್.ವಿ. ಕಂಪನಿಯವರು ಖ್ಯಾತ ಕಲಾವಿದರ ಗಾನಮುದ್ರಿಕೆಗಳನ್ನು ಹೊರತರುವ ಸಲುವಾಗಿ ಅನೇಕ ಕಲಾವಿದರನ್ನು ಮುಂಬಯಿಗೆ ಕರೆಸಿದ್ದರು. ಕನ್ನಡದಲ್ಲಿಯೇ ಗಾಯನ ಮಾಡುವದಾಗಿ ಹಟ ಮಾಡಿದ ಪಂಚಾಕ್ಷರಿ ಗವಾಯಿಗಳು ಕಾರ್ಯಕ್ರಮ ಬಹಿಷ್ಕರಿಸಿ ಹೊರನಡೆದಾಗ, ಕಂಪನಿಯವರು ಗವಾಯಿಗಳ ಆಗ್ರಹಕ್ಕೆ ಮಣಿಯಲೇ ಬೇಕಾಯಿತು. *ಸ್ವದೇಶಾಭಿಮಾನಿ ಗ್ರಾಮ್ಯ ಸಂಸ್ಕೃತಿ* —————————————— ಪಂಚಾಕ್ಷರಿ ಗವಾಯಿಗಳು ಖಾದಿಯನ್ನೇ ತೊಡುತ್ತಿದ್ದರು. ಉದರ ರೋಗದಿಂದ ಬಳಲುತ್ತಿರುವಾಗ ಆಯುರ್ವೇದದ ಹೊರತಾಗಿ, ಇಂಗ್ಲಿಷ್ ವೈದ್ಯಕೀಯಕ್ಕೆ ಗವಾಯಿಗಳು ಒಪ್ಪಿಕೊಳ್ಳಲಿಲ್ಲ. ಕೊನೆಗೂ ಇದೇ ರೋಗಕ್ಕೆ ಗವಾಯಿಗಳು ಬಲಿಯಾದರು. *ಲಿಂಗೈಕ್ಯ* ——————- ಸುಮಾರು ನಾಲ್ಕು ವರ್ಷಗಳವರೆಗೆ ಗವಾಯಿಗಳು ಉದರ ರೋಗದಿಂದ ಬಳಲಿದರು. ಕೊನೆಗೆ ದಿನಾಂಕ ೧೧, ಜೂನ್ ೧೯೪೪ರಂದು ಪಂಚಾಕ್ಷರ ಗವಾಯಿಗಳು ವಿಶ್ವಸಂಗೀತದಲ್ಲಿ ಲೀನರಾದರು ಮತ್ತು ನಿಧನರಾದರು. ತಮ್ಮ ಜೀವಿತ ಐವತ್ತೆರಡು ವರುಷಗಳಲ್ಲಿ ಸಂಗೀತ ಸಾಮ್ರಾಜ್ಯವನ್ನು ಕಟ್ಟಿದರು. ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಸಾವಿಲ್ಲದ ಶರಣರು ಮಾಲಿಕೆ,”ಸಂಚಾರಿ ಸಂಗೀತ ಸಾಮ್ರಾಟ  ಶ್ರೀ  ಪಂಚಾಕ್ಷರಿ ಗವಾಯಿಗಳು” ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ Read Post »

ಕಾವ್ಯಯಾನ

“ದಂಡೇಶು ದುರ್ಗಾ…” ಕವಿತೆ ಸುಮತಿ ನಿರಂಜನ

ಕಾವ್ಯ ಸಂಗಾತಿ ಸುಮತಿ ನಿರಂಜನ “ದಂಡೇಶು ದುರ್ಗಾ…” ಬಂದ್ಯಾ ನನ್ ಮಗ್ನೇ…ಈಟೊತ್ತಿಗ್ ನೆಪ್ಪಾಯ್ತ ನಿಂಗೆಮನಿ ಮಕ್ಳ್ ಮರಿ ?ನೆಟ್ಟಗ್ ನಿಲ್ಲಾಕು ಆಯ್ತ ಇಲ್ಲಅಷ್ಟ್ ಆಕವ್ನೆಬಡ್ಡೀಮಗನ್ ತಂದು !ಅಕ್ಕಿ ಡಬ್ಬದಾಗ್ ಕೈ ಆಕಿತೆಗ್ದವ್ನೆ ತಿಂಗಳ್ ರೊಕ್ಕಇವತ್ತ್ ನಿನ್ ಗ್ರಾಚಾರಬಿಡಸ್ತೀನ್ ನೋಡ್ಕ…ಗಡಂಗ್ನಾಗ್ ಕುಂತುಎಂಡ ಇಳಸ್ತಾನೆಎಂಡ್ತೀ ಒಡ್ವೆ ಮಾರಿಭಡವಾ ಬೇವಾರ್ಸಿಬೆಂಕಿ ಬೀಳಾ ನಿನ್ನನ್ಹಡದವ್ಳ ಹೊಟ್ಟೀಗೆ !ನಾಚ್ಕೀ ಆಗಾಕಿಲ್ಲ ? ನಂಗ್ ಬರಾ ಕೋಪಕ್ಕೆ…ನಿನ್ ಕಾಲ್ ಕಟ್ಟಿಬಟ್ಟಿ ಒಗ್ಯಾ ಬಂಡಿ ಮ್ಯಾಗ್ ಕುಕ್ಕಿಮಂಡಿ ಒಡ್ದ್ ಆಕ್ಬೇಕ್ ಅನ್ಸ್ ತ್ತೈತಿಆದ್ರ ಎನ್ ಮಾಡ್ಲಿನೀ ಗೊಟಕ್ ಅಂದ್ರನಾನ್ ತಾನೆ ಮುಂಡೆ ಆಗಾಕಿಇದ್ರೂ ನಷ್ಟ ಮಾಡಾಂವಸತ್ರೂ ಕಷ್ಟ ಕೊಡಾಂವ !ನಿನ್ ಮಖಕ್ಕಿಷ್ಟು ! ಸುಮತಿ ನಿರಂಜನ

“ದಂಡೇಶು ದುರ್ಗಾ…” ಕವಿತೆ ಸುಮತಿ ನಿರಂಜನ Read Post »

ಪುಸ್ತಕ ಸಂಗಾತಿ

ಡಾ.ಮಂಜುನಾಥ್‌ ಬಮ್ಮನಕಟ್ಟಿಯವರ ಶಾಯರಿ ಸಂಕಲನ “ಕತ್ತಲು ಬೆಳಕು” ಅವಲೋಕನ ಡಾ.ವೈ ಎಂ ಯಾಕೊಳ್ಳಿ

ಪುಸ್ತಕ ಸಂಗಾತಿ ಡಾ.ಮಂಜುನಾಥ್‌ ಬಮ್ಮನಕಟ್ಟಿಯವರ ಶಾಯರಿ ಸಂಕಲನ “ಕತ್ತಲು ಬೆಳಕು” ಅವಲೋಕನ ಡಾ.ವೈ ಎಂ ಯಾಕೊಳ್ಳಿ ಪ್ರೀತಿ‌ಪ್ರೇಮದಾಚೆ ಲಂಘನ‌ ಮಾಡುವ ಶಾಯಿರಿ‌ಲೋಕಪ್ರೀತಿ‌ಪ್ರೇಮದಾಚೆ ಲಂಘನ‌ ಮಾಡುವ ಶಾಯಿರಿ‌ಲೋಕಡಾ.ಮಂಜುನಾಥ .ಬಮ್ಮನಕಟ್ಟಿಯವರ ನೂರಾರು ಶಾಯಿರಿಗಳುಕನ್ನಡಕ್ಕೆ ಶಾಹಿರಿ ಪ್ರಕಾರವನ್ನು ಪರಿಚಯಿಸಿದವರು ಇಟಗಿಈರಣ್ಣನವರು‌.ಗಜಲ ನ ಹಾಗೆ ಉರ್ದು ಸಾಹಿತ್ಯದಿಂದ ಕನ್ನಡಕ್ಕೆ ಬಂದ ಈ‌ ಕಾವ್ಯ‌ ಪ್ರಕಾರವನ್ನು , ಪ್ರೊ  ಭಿಕ್ಷಾವರ್ತಿಮಠ , ಶ್ರೀ ಅಸಾದುಲ್ ಬೇಗ್ ಮೊದಲಾದವರು ಬೆಳೆಸಿದರು .೧೯೭೬ರಲ್ಲಿ ಇಟಗಿ ಈರಣ್ಣನವರ  ಕನ್ನಡ ಶಾಹಿರಿ ಸಂಕಲನ‌ ಪ್ರಕಟವಾಯಿತು. ತದನಂತರದಲ್ಲಿ ಅವರ ಸ್ನೇಹಿತರೇ ಆದ ಪ್ರೊ. ಎಚ್.ಎ.ಭಿಕ್ಷಾವರ್ತಿ‌ಮಠ ಅವರು ೧೯೮೧ ರಲ್ಲಿ ತಮ್ಮ ಕನ್ನಡ ಶಾಯಿರಿ‌ಲೋಕ ಎಂಬ ಸಂಕಲನ ಪ್ರಕಟಿಸುವ ಮೂಲಕ ಈತನ ಕಾವ್ಯ ಪ್ರಕಾರದ ಬೆಳವಣಿಗೆಗೆ ಕಾರಣರಾದರು. ಈಗ ಹಲವರು ಶಾಯಿರಿ ಗಳನ್ನು  ಬರೆಯುತ್ತಿದ್ದಾರೆ. ಗದಗ,ಮತ್ತು‌ಕೊಪ್ಪಳ ಭಾಗದಲಿ ಇದು ವಿಶೇಷವಾಗಿ ರಚನೆಯಾಗುತ್ತಿದ್ದು  ಪರಮೇಶ್ವರಪ್ಪ‌ ಕುದರಿ, ಮರುಳಸಿದ್ದಪ್ಪ ದೊಡಮನಿ.ಯಲ್ಲಪ್ಪ ಹರ್ನಾಳಗಿ, ಕೊಟ್ರೇಶ ಜವಳಿ ,ಕಸ್ತೂರಿ ಡಿ.ಪತ್ತಾರ, ಡಾ ಸಿದ್ರಾಮ ಹೊನ್ಕಲ್ ಮೊದಲಾದವರು ಶಾಹಿರಿಗಳನ್ನು ಬರೆಯುತ್ತಿದ್ದಾರೆ‌.ಎಲ್ಲರಿಗೂ  ಇಟಗಿ ಈರಣ್ಣನವರ  , ಪ್ರೊ. ಭಿಕ್ಷಾವರ್ತಿಮಠ  ಅವರ ಶಾಹಿರಿಗಳೇ ಪ್ರೇರಣೆ ಎಂಬ ಮಾತನ್ನು ಮರೆಯಲಾಗದು. ಪತ್ರಕರ್ತರೂ,ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯರಾಗಿ ಚಿಕ್ಕ ಮಗಳೂರಿನಲ್ಲಿ ಕೆಲಸ ಮಾಡುತ್ತಿರುವ ಡಾ. ಮಂಜುನಾಥ ಎಂ. ಬಮ್ಮನಕಟ್ಟಿ ಯವರು  ಪ್ರವೃತ್ತಿ ಯಿಂದ ಕವಿಗಳೂ ಪ್ರಬಂಧಕಾರರೂ, ಸಾಮಾಜಿಕ ಕ್ಷೇತ್ರ ದ ಸಂಶೋಧಕರೂ  ಆಗಿ ತುಂಬ ಚಟುವಟಿಕೆಯಿಂದ ಕೂಡಿರುವ ಬರಹಗಾರರು ಈವರೆಗೆ ಹನಿಗವನ, ಕವಿತೆ,  ಜೀವನ ಚರಿತ್ರೆ, ಪ್ರಬಂಧ ಸಂಕಲನ, ಮತ್ತು ಸಂಶೋಧನ ಕೃತಿಗಳು ಸೇರಿದಙತೆ ೧೮   ಕೃತಿಗಳನ್ನುರಚಿಸಿದ್ದಾರೆ. ಬಹಳ ವಿಶೇಷವಾದದ್ದು ಕರ್ನಾಟಕ ದ ಮಹಿಳಾ ಪೋಲಿಸ್  ಇಲಾಖೆಯ ಮೇಲೆ ಸಂಶೋಧನೆ ಮಾಡಿ ಅವರು ಬರೆದ ಕೃತಿ. ಹಾಗೆಯೆ ಬಹಳ ವಿಶಿಷ್ಟವಾದ ” ಗೋಕಾಕ ಚಳುವಳಿ ಮತ್ತು ಕನ್ನಡ ಅಭಿವೃದ್ದಿ” ಎಂಬ ಅಧ್ಯನ ಕೈಕೊಂಡು‌ ಪಿಎಚ್. ಡಿ‌ ಪದವಿ‌ ಪಡೆದ ಪ್ರತಿಭಾವಂತರು ಅವರು. ಈಗ  “ಕತ್ತಲು  ಬೆಳಕು” ಎಂಬ ನೂರಾರು ಶಾಯಿರಿಗಳ ಚಂದದ ಸಂಕಲನವನ್ನು ಪ್ರಕಟಿಸುವ ಮೂಲಕ ಮತ್ತೊಂದು ಮೈಲುಗಲ್ಲು ನೆಟ್ಟಿದ್ದಾರೆ. ಇದಕ್ಕೆ ಹಿರಿಯರಾದ ಪ್ರೊ‌ಭಿಕ್ಷಾವರ್ತಿಮಠ ಅವರ ಮುನ್ನುಡಿ ,ಇನ್ನೋರ್ವ ಖ್ಯಾತ‌, ಕವಿ  ,  ಕಾದಂಬರಿಕಾರ , ಪತ್ರಕರ್ತರಾದ ಡಾ . ಸರಜೂ ಕಾಟ್ಕರ್ ಅವರ ನಲ್ನುಡಿ ಇವೆ. ಶಾಯಿರಿ ಕ್ಷಣವೊಂದರ ಸ್ಮಾರಕ.ಹನಿಗವನ, ಚುಟುಕು, ತನಗ, ಹಾಯಕು ಇವುಗಳ ಹಾಗೆ ಓದಿದೊಡನೆ ಮನಸ್ಸು ಪ್ರಪುಲ್ಲಿತವಾಗಿ ವಾವ್ ಎಂಬ ಬೆರಗು ಹೊರಡಿಸಿವ ಚತುರತೆ ಅದರ ಗುಣ.ಈ ಕಾವ್ಯದ ಲಕ್ಷಣಗಳನ್ನು ನಲ್ನುಡಿಯಲ್ಲಿ ಹಿರಿಯರಾದ ಡಾ ಕಾಟ್ಕರ್ ಅವರು ವಿವರಿಸುತ್ತ ” ಶಾಯಿರಿಯ ಮುಖ್ಯ ಲಕ್ಷಣ ಕೆಲವೇ ಕೆಲವು ಸಾಲುಗಳಲ್ಲಿ ಬ್ರಹ್ಮಾಂಡವನ್ನು ಹೇಳುವದು.ನೋಡಿದ, ಕೇಳಿದ ಅನುಭವಿಸಿದ ಪ್ರಸಂಗಗಳಿಗೆ  ಕವಿಯಾದವನು ಕಾವ್ಯದ ಅಮರತ್ವವನ್ನು ನೀಡಬೇಕಾಗುತ್ತದೆ.ಆ ಶಬ್ದಗಳ ಜಾಲವು ಓದುಗನನ್ನು ಕೊನೆಯಲ್ಲಿ  ಥಕ್ಕಾಗಿಸುವಂತೆ ಮಾಡಿದರೆ  ಆ ಕಾವ್ಯವು ಸಾರ್ಥಕತೆಯನ್ನು ಪಡೆಯುತ್ತದೆ”  ಎನ್ನುತ್ತಾರೆ. ಅದು ಸಾಮಾನ್ಯವಾಗಿ ಪ್ರೇಮದ ಮುಗುಳು ಚಿಗುರಿಸುವ ಹೂವಿನ  ತೋಟ. ಶಾಯಿರಿ ರಚಿಸುವಾಗ ಪ್ರೇಮ ,ವಿರಹದಾಚೆಗೆ ಬಹಳ ಜನ ಕವಿಗಳು ದಾಟುವುದೆ ಇಲ್ಲ.ಆದರೆ ಡಾ ಬೊಮ್ಮನಕಟ್ಟಿಯವರ. ಓದಿನ ಮತ್ತು ಸೇವೆಯ ಹರಿವು ವಿಸ್ತಾರವಾದ್ದರಿಂದ ಬದುಕಿನ ಬೇರ ಬೇರೆ ಸಂಗತಿಗಳು ಇಲ್ಲಿ ಶಾಯಿರಿಗಳಾಗಿವೆ. ಡಾ ಸರಜೂ ಕಾಟ್ಕರ್ ಸರ್ ಹೇಳಿದಂತೆ ಇಲ್ಲಿನ ಶಾಯಿರಿಗಳಿಗೆ ಅಮರತ್ವದ ಗುಣ ಪ್ರಾಪ್ತವಾಗಿದೆ. ಶಾಯಿರಿಗಳೂ ಕೂಡ ತನಗ ಹೈಕು ಗಜಲ್ ಗಳ ಹಾಗೆ ಶೀರ್ಷಿಕೆಯಿಲ್ಲದ ಹೆಸರೊಲ್ಲದ ಚಿತ್ರಗಳೇ ಆಗಿವೆಇಲ್ಲಿನ ನೂರಾರು (೧೦೬) ಶಾಯಿರಿಗಳಲ್ಲಿ ಬದುಕಿನ ತಾತ್ವಿಕ ಚಿಂತನೆ ಪ್ರೀತಿ ಪ್ರೇಮಗಳ ಅನಂತ ನೋಟ ಎಲ್ಲವೂ ಇವೆ. ಮೊದಲ ಶಾಯಿರಿಯಲ್ಲಿಯೆ ಅದು ಕಾಣುತ್ತದೆ. ಮನುಷ್ಯ ಇರುವದರೊಳಗೆ ನಾಲ್ಕು ಮಂದಿಗೆ ಬೇಕಾಗುವಂಗ ಬದುಕಬೇಕು  ಎನ್ನುವದನ್ನು ಸಂಖ್ಯೆಗಳ ಚಮತ್ಕಾರದಲ್ಲಿ ಹಿಡಿದಿಡುವ ರೀತಿ ವಿಶಿಷ್ಟವಾಗಿದೆ . ಒಂದು ಎರಡು ಬಂದ ಬರತೈತಿಮೂರು ಆರುನಾಕ ಜನಕ್ಕ ಬೇಕ ಬೇಕು.ಅಷ್ಟರೋಳಗ ಈ ಬದುಕಬೆಳಗಬೇಕು ಬೆಳಗಸಬೇಕುಹತ್ತರ ಕೂಟ ಹನ್ನೊಂದು ಯಾಕ‌ ಆಗಬೇಕುಮನುಷ್ಯರಾಗಿ ಸುಮ್ಮನೆ ಬಂದವರಲ್ಲ, ಸಾಯುವದರೊಳಗೇ ಏನಾದರೂ  ಸಾಧಿಸದೆ ಇದ್ರೆ ಬದುಕಿ ಏನು‌ ಲಾಭ ? ಇದು ಕವಿಯ ಪ್ರಶ್ನೆ! ‘ಮೂರು ಆರು’ ಅಡಿ ಜಾಗ ಅಂತಿಮವಾಗಿ ಎಲ್ಲರಿಗೂ ಬೇಕೇ ಬೇಕು‌.ಮತ್ತು ಕೊನೆಯಲ್ಲಿ ಹೊತ್ತ ಒಯ್ಯಲು ನಾಲ್ಕು ಜನರ ಅಗತ್ಯನೂ ಇದೆ. ಇದಂತೂ ಪರಮ  ಸತ್ಯ.ಅಷ್ಟರೊಳಗೆ ನಮ್ಮ ಬದುಕು ಬೆಳಗಬೇಕು ,ಇತರರ ಬದುಕನ್ನು ಬೆಳಗಿಸಬೇಕು ಎನ್ನುವದನ್ನು ಶಾಯಿರಿ ಸಾರುತ್ತದೆ. ಜೀವನದ ತಾತ್ವಿಕತೆಯನ್ನು ಚಿಂತಿಸು ವ ಶಾಯಿರಿಗಳು ಗಮನ ಸೆಳೆಯುತ್ತವೆ. ಬದುಕನ್ನು‌ಬೇರೆ ಬೇರೆ ಮಾತುಗಳಲ್ಲಿ ವತ್ಣಿಸುವದಕ್ಕಿಂತ ,  ಬದುಕಿನ ನಿಜವಾದ ಅರ್ಥ ಎಂದರೆ ಅದನ್ನು ಸರಿಯಾಗಿ‌ ಬದುಕಿ ತೋರಿಸುವುದೆ ಆಗಿದೆ. ಅದನ್ನೇ ಬೊಮ್ಮನಕಟ್ಟಿಯವರ ಶಾಯಿರಿ ಬದುಕಂದ್ರಹಂಗಲ್ಲ, ಹಿಂಗಲ್ಲಬದುಕೊದಂದರ ಸಾಮಾನ್ಯ ಅಲ್ಲಬದುಕು ಬಳ ದೊಡ್ಡದುಅದಕ$ ನೀ ಬದುಕುಈ ಬದುಕು ಬದುಕು ಎನ್ನುವ ಪದ ಮತ್ತೆ ಮತ್ತೆ ಬಂದು‌ ಕೊಡುವ ಅರ್ಥ ವಿಶೇಷವಾದದ್ದು.ಈ ಬದುಕಿನಲ್ಲಿ ಕಪ್ಪೂ ಇದೆ . ಬಿಳಿಯೂ ಇದೆ.ಅಂದರೆ ಪಾಸಿಟಿವ್ ,ನೆಗೆಟಿವ್ ಎರಡೂ ಇವೆ. ಛಾಯಾಚಿತ್ರದ ರೂಪಕವನ್ನು ಬಳಸುವ ಕವಿ “ಪೊಸಿಟಿವ್, ನೆಗೆಟಿವ್   ಎರಡೂ ಸೇರಿದ್ರನ ಪೋಟೊ ಆಗತೈತಿ” ಎನ್ಜುವದು ಸರಿಯಾಗಿಯೆ ಇದೆ.ಅದನ್ನೆ ಒಂದು ಶಾಯಿರಿಯ ಭಾಗ ವಿವರಿಸುತ್ತಾ ಬೆಳಕು ಕತ್ತಲು ಹಗಲ ರಾತ್ರಿ ಇದ್ದಂಗಜೀವನದಾಗ ಸುಖ ದುಃಖ ಬಂದಾಂಗಇವು ಬ್ಯಾರೆ ಬ್ಯಾರೆ ಅಲ್ಲಒಂದಕ್ಕೊಂದು ಬಿಟ್ಟ ಇರೊದು ಹೆಂಗಎನ್ನುತ್ತಾರೆ. ಕತ್ತಲು ಬೆಳಕು ಎರಡೂ ಸೇರಿಯೇ ಬದುಕಾಗುತ್ತದೆ ಎನ್ನುವದನ್ನು ಅವರ ಶಾಯಿರಿ ಸಾರುತ್ತವೆ.ಈ ಮನಸ್ಸು ಬೇಲಿ ಹಾಕದಿದ್ದರೆ ಅದುವೆತ್ತ ಬೇಕು ಅತ್ತ ಓಡುತ್ತದೆ.ಅದಕ್ಕೆ ಬೇಲಿಹಾಕಬೇಕು ಎನ್ನುವ ಕವಿ ಕಾವಲು ಇರದೆ ಮನಸ್ಸು ಓಡಾಡಿದರೆ ಕಷ್ಟ ಎನ್ನುತ್ತಾರೆ.ಮನುಷ್ಯನ ಎದೆಎನ್ನುವದು ಬೆಳಗುವ ದೀಪವೂ ಹೌದು.ನಿಗಿ ನಿಗಿ ಉರಿವ ಕುಲಮೆಯೂ ಹೌದು‌‌. ಅದರಿಂದ ದೀಪವನ್ನು ಹಚ್ಚಬಹುದು.ಎದೆಯನ್ನು ಸುಡಬಹುದು . ಎರಡೂ ನಮ್ಮ‌ ಕೈಯಲ್ಲಿವೆ.ವಿವೇಚನೆ ಅಗತ್ಯ ಎಂದು ಒಂದು ಶಾಯಿರಿ ಸಾರುತ್ತದೆ. ಈ ಜಗತ್ತಿನಲ್ಲಿ ಎಲ್ಲವೂ ನನ್ನದೆ ಎಂದು ಸಾರಿದವರಾರೂ ಉಳಿದೆ ಇಲ್ಲ.  ಭೂಮಿಯನ್ನು ಗೆದ್ದು ಭೂಮಿಪ ಎನಿಸಿಕೊಂಡ ಅರಸರೆಲ್ಲ ಸತ್ತಿದ್ದಾರೆ.ಭೂಮಿ‌ ಮಾತ್ರ ಶಾಸ್ವತ ಎನ್ನುತ್ತಾನೆ ಕವಿ ಕುಮಾರವ್ಯಾಸ.ಕವಿ‌ಪಂಪನಲ್ಲಿ  ಜಗತ್ತು ಗೆದ್ದೆನೆಂದು ಮೆರೆವ ಭರತ ಚಕ್ರಿಯ ಅಹಂಕಾರ ರಸ ಕೊಳೆಗೊಂಡು ಸೋರುತ್ತದೆ ಎಂಬ‌ ಮಾತು ಬರುತ್ತದೆ.ಯಾವಬಕಾಲದ ಕಾವ್ಯ ವಾಗಲಿ ಸಾರುವದು ಇದನ್ನೇ .ಶಾಯಿರಿಯಂಥ ಸದ್ಯಕಾಲದಲ್ಲಿ ಬದುಕುವ ವರ್ತಮಾನದ ಕವಿತೆ ಕೂಡ ಸಾರ್ವತ್ರಿಕ ವಾದುದನ್ನು ಸಾರುತ್ತದೆ ಎನ್ನುವದಕ್ಕೆ ಸಾಕ್ಷಿ ಈ‌ ಮೂರೇ  ಸಾಲಿನ ಶಾಯಿರಿ.ಕವಿ ನಂದು ನಂದೂನಾನು‌ ನಾನೂಅಂದವರು ಯಾರೂ  ಉಳದೇ ಇಲ್ಲ ಎನ್ನುತ್ತಾನೆ.ಇಷ್ಟೇ ಕವಿತೆ .ಹೆಚ್ಚಿಗೆ ಹೇಳುವದಿಲ್ಲ. ಅದರಲ್ಲಿಯೆ ನೂರು ಸಾಲಿನ ಅರ್ಥ ಅಡಗಿದೆ. ಇಂಥ‌ ಪದ್ಯಗಳೇ ಈ ಕವಿಯ  ಸಂಕಲನವನ್ನು  ಬಹುಕಾಲ ನಿಲ್ಲಿಸುತ್ತವೆ. ಜಾತಿ ಇಲ್ಲವಾಗಿದೆ ಎಂಬ‌ ಮಾತನ್ನು‌ ಕೆಲವರು ವೇದಿಕೆಯ‌ ಮೇಲಿಂದ ಮುತ್ತಿನಂತೆ ಉದುರಿಸುತ್ತಾರೆ.ಆದರೆ ನಿಜವಾಗಿಯೂ ಜಾತಿ ವ್ಯವಸ್ತೆ ಹೋಗಿದೆಯೇ? ಎಂದು ಪ್ರಶ್ನಿಸುವ ಕವಿ  ನಿಜಕ್ಕೂ ಜಾತಿ ವ್ಯವಸ್ಥೆ ಇಲ್ಲವಾಗಿದೆ ಎಂಬುದನ್ನು ಒಪ್ಪುವದಿಲ್ಲ‌. ಏಕೆಂದರೆ‌ ಇಂದು‌ ಬದುಕಿನ ರೀತಿ ಅದಕ್ಕೆ ಪೂರಕವಾಗಿಲ್ಲ.ನಾವು ಜಾತಿ ಎಂಬ ಪಿಡುಗನ್ನು ವ್ಯವಸ್ಥಿತವಾಗಿ ಕಾಪಾಡಿಕೊಂಡೇ ಬಂದಿದ್ದೇವೆ ಈ ಸತ್ಯವನ್ನು ಅವರ ಶಾಯಿರಿ ಸಾರುತ್ತದೆ. ಜಾತಿ ಇಲ್ಲದಂಗಾತು ಅಂತ ಕೇಳಿಎದಿಯಾಗಿನ ಬೆಂಕಿ ದೀಪ  ಆತುದೀಪ ಬೆಳ ಚಲ್ಲುದರೊಳಗಹುಟ್ಟಿದ ಈ ಜಾತಿ ಸಾಯೊವಲ್ಕದುಅಂತ ಮೈಯೆಲ್ಲ ಧಗಧಗ ಹೊತ್ತಿ ಉರಿತುಕಡೆಯ ಸಾಲೇ ಸತ್ಯವಾಗಿ ಪ್ರಾಮಾಣಿಕ‌ ಪ್ರಜ್ಞಾವಂತರ ಎದೆ ಹೊತ್ತಿ ಉರಿಯುವ ಸ್ಥಿತಿ ಬಂದಿರುವದನ್ನು ಕವಿತೆ ಸಾರುತ್ತದೆ. ಇಡೀ ಸಂಕಲನವೇ ಬೆಳಕು‌ ಕತ್ತಲೆಯ ನಡುವಿನ ಜಿಜ್ಞಾಸೆ ನಡೆಸುತ್ತದೆ.ಇಲ್ಲಿ ಬೆಳಕು ಮತ್ತು ಕತ್ತಲೆ ಮತ್ತೆ ಮತ್ತೆ ಮುಖಾಮುಖಿಯಾಗುತ್ತವೆ..ಆದರೆ ಕವಿ ಯಾವುದೆ ಒಂದರ ಪರ ನಿಲ್ಲುವದಿಲ್ಲ ಕತ್ತಲೆ ಮತ್ತು ಬೆಳಕಿನ ಹಿತವಾದ ಹೊಂದಿಕೊಳ್ಳುವದರಲ್ಲಿಯೆ ನಿಜವಾದ ಬದುಕಿದೆ ಎಂಬುದು‌ ಕವಿಗೆ ಗೊತ್ತಿದೆ. ಕತ್ತಲೆ ಬೆಳಕು ಇಲ್ಲಾಂದ್ರೆಬದುಕು ಇರಾಂಗಿಲ್ಲ ಎಂದು ಒಂದು ಶಾಯಿರಿ ಹೇಳಿದರೆ ಇನ್ನೊಂದು ಶಾಯಿರಿ ಬೆಳಕಿಗೆ ಅದರ ಕೂಡಹಿಟ್ಟಿದ ಕತ್ತಲುಶಡ್ಡು ಹೊಡದೈತಿನನ್ನ‌ ಜನಕ ನೀನ ..ನೀನ ಅಂತಎನ್ನುತ್ತದೆ .ಆದರೆ ಇಲ್ಲಿ ಬೆಳಕು ಮತ್ತು‌ ಕತ್ತಲೆ ಒಂದರ ಕೂಡ ಒಂದು ಹುಟ್ಟಿದರೂ ಅವುಗಳ‌ ನಡುವೆ ಸ್ಪರ್ದೆ ಇರುವದನ್ನು ಹೇಳುವ ಕವಿ ಅವು ತಂದೆ‌ ಮಗನ‌ ಸಂಬಂಧ ಹೊಂದಿದವು ಎನ್ನುವಂತೆ ಚಿತ್ರಿಸುತ್ತಾನೆ.ಅಂದರೆ ಬೆಳಕಿನಲ್ಲಿ ಕತ್ತಲೆ ಹುಟ್ಟಿದೆ ಎನ್ನುವಲ್ಲಿ ಹೊಂದಾಣಿಕೆ ಇರಬೇಕಾಗಿತ್ತು .ಆದರೆ ಶಡ್ಡು ಹೊಡೆದಿದೆ ಎನ್ನುವ ನುಡಿಗಟ್ಟು ಯಾಕೊ ಅಷ್ಟು ಸರಿಯಲ್ಲವೇನೋ ಎಂದು ಅನಿಸುತ್ತದೆ. ಇದು ಜಿಜ್ಞಾಸೆಯ ವಿಷಯ. ಕವಿ ಲೌಕಿಕದಲ್ಲಿ  ಚಿಂತಿಸುತ್ತಲೇ ಅಲೌಕಿಕದತ್ತ ,ಅನುಭವ ದಿಂದ ಅನುಭಾವದತ್ತ ಸಾಗುವ‌ ಪರಿ ಅನನ್ಯವಾದುದು.ಉದಾಹರಣೆಗೆ ಆಕಿ ಎರಡಕ್ಕ ಕರಿತಾಳಬಲದಿಂದ ಆವರಿಸಿಕೊಳ್ಳಾಕಆಕಿ ಕರದಾಗೆಲ್ಲಈ ಬಲಾ ಎಡಕಾಡತಾವುಇವುಗಳದ್ದೂ ಬಿಡದ ಹಟಸಾಮಾನ್ಯರಿಗೆ ತಿಳಿಯದ ಗಂಟು  ಇಲ್ಲಿ ಬಳಸಿದ ನುಡಿಗಟ್ಟುಗಳು ಸಾಮಾನ್ಯ ಬದುಕಿನವೇ ಆದರೆ ಕಡೆಯಲ್ಲಿ ಧ್ವನಿಸುವ ಅರ್ಥ ಮಾತ್ರ ಕೈ ಗೆಟುಕದ್ದು. ಹೀಗೆ‌ ಲೌಕಿಕದ ಈ‌ ಕಾವ್ಯ ಅಲೌಕಿಕದ ಚಿಂತನೆ ಮಾಡುವದು ವಿಶೇಷವಾಗಿದೆ. ಕವಿ ಸಂಕಲನಕ್ಕೆ “ಕತ್ತಲು ಬೆಳಕು” ಎಂಬ ಹೆಸರಿರಿಸಿದ್ದಾರೆ. ಜೀವನವೇ ಕತ್ತಲು ಬೆಳಕಿನ ಸಂಗಮ ಒಂದಾದ‌ ಮೇಲೊಂದು ,ಒಂದರೊಳಗೊಂದು ಸೇರಿಕೊಂಡು ಬದುಕಿಗೆ ಅರ್ಥ ಕಲ್ಪಿಸುವ ಕಾರ್ಯ‌ಮಾಡುತ್ತವೆ. ಅವರಿಗೆ ಅವಳ ಪ್ರೀತಿ ಅಂದರೇನೆ ಬೆಳಕು,ಅವರಡೂ ನೇರೆ ಬೇರೆ ಅಲ್ಲವೇ ಅಲ್ಲ ಅದನ್ನೇ  ಶಾಯಿರಿ ೯೬ ರಲ್ಲಿ ಕತ್ತಲ ಬೆಳಕಿನ ಒಡಕ ಬ್ಯಾಡಈ ಒಂದ ಬದುಕಿಗೆ ಎರಡೂ ಬೇಕಎಂದರೆ೯೫ ರಲ್ಲಿ ಬೆಳಕಿನೊಳಗ ಕತ್ತಲುಕತ್ತಲಿನೊಳಗ ಬೆಳಕುತಮ್ಮ ತಮ್ಮ ಹೊಳಪು ತೋರಸ್ತಾವಎನ್ನುವ ಸಾಲಿವೆ . ಶಾಹಿರಿ ೮೮ ರಲ್ಲಿ ಬೆಳಕು ಬರಿ‌ಬೆಳಕಲ್ಲಕತ್ತಲು ಹೊತ್ತು ತರೋ ವ್ಯಾಪಾರಿಕತ್ತಲು ಬರಿ‌ಕತ್ತಲಲ್ಲಬೆಳಕಿಗೆ ಬೆಲೆ ತರೋ ಸರಕು  ಎನ್ನುತ್ತಾರೆ. ಇಂಥ ಸಾಲುಗಳು‌ ಇಲ್ಲಿ‌ ಮತ್ತೆ ಮತ್ತೆ ಎದುರಾಗುತ್ತವೆ.ಕವಿಗೆ ಅವರ ಪ್ರೀತಿ‌ ಕೂಡ ಕತ್ತಲ ಬೆಳಕಿನ ಆಟವೇ..ಬೆಳಕು ಕತ್ತಲಿನೊಡನೆ ತಮ್ಮ ಪ್ರೇಮ ಸಮೀಕರಣ ಮಾಡುವ ಕವಿ ಬೆಳಕ ನೋಡಿಕತ್ತಲು ಯಾವತ್ತೂ ಸಿಟ್ಟಾಗಿಲ್ಲಕತ್ತಲ ನೋಡಿಬೆಳಕು ಯಾವತ್ತೂ ಸಿಟ್ಟ ಮಾಡಿಕೊಂಡಿಲ್ಲನಾನು-ನೀನು ಹೀಂಗ ಇದ್ದರನಮ್ಮ ಪ್ರೀತಿ ಹಾಲು ಬೆಲ್ಲ ಎಂದು ಎರಡಕ್ಕೂ ಹೊಂದಾಣಿಕೆ ಇರುವದನ್ನು ಸಾರುತ್ತಾರೆ.ಈ  ಸಾಲು ಬರೆದ ಕವಿಯೆ ಇನ್ನೊಂದು ಕಡೆ ಕತ್ತಲೆ ಬೆಳಕಿನ ನಡುವೆ ಸವತಿ ಮಾತ್ಸರ್ಯ ಇದೆ ಎನ್ನುವದು ಅಷ್ಟೇನೂ ಹಿತಕರವಾಗಿ ಕಾಣಿಸುವದಿಲ್ಲ  (ಶಾಯಿರಿ ೮೯) ಎನ್ನಿಸದೆ ಇರದು. ಇಲ್ಲಿನ ಒಂದೆರಡು ಶಾಯಿರಿ ಗಳು ಬಹಳ ವಿಶೇಷ ವಸ್ತುವನ್ನು ಒಳಗೊಂಡಿವೆ ಎನಿಸುತ್ತದೆ.ಅವೆಂದರೆ ಕನ್ನಡದ ಸ್ವಾಮಿಜಿಗಳೆಂದೇ ಹೆಸರಾದ ಲಿಂ.ತೋಟದ ಸಿದ್ದಲಿಂಗ ಮಹಾಸ್ವಾಮಿಗಳವರ ಕುರಿತಾದ ಶಾಯಿರಿಗಳು. ಒಂದು ಶಾಯಿರಿ ಅವರು “ನಡೆದದ್ದೆಲ್ಲಾ ಬೆಳಕು”  ಎಂದು ಅವರನ್ನು ಬಹಳ ಸುಂದರವಾಗಿ‌ ಬಣ್ಣಿಸಿದೆ.ಶಾಯಿರಿ ಎಂದರೆ ಬಹುತೇಕ ಗಂಡು ಹೆಣ್ಣಿನ ನಡುವಿನ‌ ಪ್ರೇಮದ ಮಧುರ ಭಾವಗಳನ್ನೊ ,ಅವರು ಅಗಲಿದ ವಿರಹದ ನೋವನ್ನೋ ವ್ಯಕ್ತ‌ ಮಾಡುವ ಕಾವ್ಯ ಎಂಬುದು ಸಾಮಾನ್ಯ ಸಂಗತಿ ಯಾಗಿತ್ತು. ಆದರೆ ಡಾ. ಬಮ್ಮನಕಟ್ಟಿಯವರ  ಶಾಯಿರಿ ಕತ್ತಲೆ ಬೆಳಕಿನ ಸಂದರ್ಭವನ್ನು ಪೂಜ್ಯರ ವ್ಯಕ್ತಿತ್ವ ಕಟ್ಟಿಕೊಡಲು ಬಳಸಿಕೊಂಡಿರುವದು  ವಿಶೇಷವಾಗಿದೆ. ದೀಪದ ಬುಡಕ ಕತ್ತಲುದೀಪದ ಬುಡದಾಗ‌ ಕತ್ತಲು ಅನ್ನೋದುಅಜ್ಜಾ ನಿನ್ನ‌ ನೋಡಿದಾಗsಮರೆತುs ಹೋಗಿತ್ತುಆದರ ಅಜ್ಜಾ ನೀ ಹೋದ ಮ್ಯಾಲೆಈ ಕತ್ತಲು ಮತ್ ಮತ್ ಕಾಡೇತಿ ಬೆಳಕೇ ತಾವಾಗಿದ್ದ  ಪೂಜ್ಯರು ಹೋದ ಮೇಲೆ ಇಲ್ಲೀಗ ಕತ್ತಲು ಮತ್ತೆ ಮತ್ತೆ ಕಾಡುವದು ಕವಿಯನ್ನು

ಡಾ.ಮಂಜುನಾಥ್‌ ಬಮ್ಮನಕಟ್ಟಿಯವರ ಶಾಯರಿ ಸಂಕಲನ “ಕತ್ತಲು ಬೆಳಕು” ಅವಲೋಕನ ಡಾ.ವೈ ಎಂ ಯಾಕೊಳ್ಳಿ Read Post »

You cannot copy content of this page

Scroll to Top