ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನಾದಲೀಲೆಯ ಉಯ್ಯಾಲೆಯಲಿ
ಸಖಿ ಗೀತವ ನೀ ಹಾಡುತ್ತಾ
ಮೇಘದೂತನ ತೋರಿಸಿ
ಹೃದಯಸಮುದ್ರದಲಿ ನೀ ಮಿಂದು
ನಾಕು ತಂತಿಯ ಮೀಟುವೆ
ಜೀವ ಲಹರಿಯಲ್ಲಿ ಒಂದಾಗಿ

ಒಲವೇ ನಮ್ಮ ಬದುಕು ಎನ್ನುತ್ತಾ
ಮುಗಿಲ ಮಲ್ಲಿಗೆಯ ಪ್ರತಿಬಿಂಬದಲಿ
ಕಾವ್ಯವೈಖರಿಯ ಮೊಳಗಿಸುವೆ
ಮುಕ್ತಕಂಠದಿ ನಮನ ಸಲ್ಲಿಸುತ್ತಾ
ಸಖಿ ಗೀತ ಹಾಡುವೆ
ನಭೋವಾಣಿಯ ಗರಿಯಲಿ

ಬಾಲಬೋಧೇಯ ಬಿಂಬಿಸಿ
ಹಾಡಿ ಕುಣಿಯುವೆ
ಚೈತನ್ಯದ ಪೂಜೆಯಲಿ
ಸಂಚಯನ ಮೂಡಿಸುವೆ
ಎಲ್ಲರಲಿ
ಲೆಕ್ಕಣಿಕೆಯ ನೀ ಹಿಡಿದು
ಸಂಭ್ರಮಿಸುವೆ
ಮತ್ತೆ ಶ್ರಾವಣ ಬಂತೆಂದು

ಕಾಮಕಸ್ತೂರಿಯ ನೆಲೆಯಲ್ಲಿ
ಗಂಗಾವತರಣದ ಜೊತೆಗೆ
ಚೈತ್ಯಾಲಯದಲಿ ಒಂದಾಗುವೆ
ಕೃಷ್ಣಕುಮಾರನಾಗಿ
ಇದೆಲ್ಲವ ದಾಟಿ
ಅರಳು ಮರಳು ಮೀರಿ
ದತ್ತಣ್ಣನಿಂದ
ದ. ರಾ. ಬೇಂದ್ರೆ ಅಜ್ಜನಾಗಿ
ಹೊರಹೊಮ್ಮಿದ ನಿನಗೆ
ಇದೋ ನನ್ನ ನಮನ


About The Author

Leave a Reply

You cannot copy content of this page

Scroll to Top