ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗುಣದ ಗಣಿಯಾಗಿರಲು ಜಗವು
 ಹೊಗಳುವುದು ಗೆಳೆಯಾ
ಕಣ ಕಣದಿ ಚೇತನವ ತುಂಬಲು
 ಜೀವ ಬೆಳಗುವುದು ಗೆಳೆಯಾ

ಪಂಚಮದ ಕೋಗಿಲೆಯೊಂದು ಕಾಯ್ದು
ಕನವರಿಸುತ್ತಿದೆ ಕಂಡೆಯೇನು
ಇಂಚರವ ಆಲಿಸುತ ಕಮಲವೊoದು
ಬಿರಿದು ನಳನಳಿಸುವುದು ಗೆಳೆಯಾ

 ಬಾಳಿನ ಹಾದಿ ಬಲು ಸುಗಮವೆಂಬ
 ಭ್ರಮೆಯಲಿ ಬದುಕುತಿರುವೆವು
ತಾಳಿ ಬರುವ ಕಷ್ಟಗಳ ಸಹಿಸುವುದ
 ಕಾಲ ಕಲಿಸುವುದು ಗೆಳೆಯಾ

ಪರರ ಕಷ್ಟಕ್ಕೆ ಮಿಡಿಯುವ ಹೃದಯಕೆ
 ನೋವೇ ಹೆಚ್ಚಾಗಿರುವುದು
ಹರನ ಅನುಗ್ರಹವಿರಲು ಸಾಂತ್ವನವು
 ಸಹಜವಾಗಿ ಲಭಿಸುವುದು ಗೆಳೆಯಾ
 
ಲವಲೇಷವು ಬೇಧವಿರದ ಮನಸ್ಸಿಗೆ
ಘಾಸಿ ಮಾಡುವರು ಅಡಿಗಡಿಗೆ
ಸಮಭಾವದಿ ಸತ್ಕರಿಸುವ ಮಾಲಾಳಿಗೆ
ವಿಧಿ ಮುಗುಳ್ನಗುವುದು ಗೆಳೆಯಾ.

 ಮಾಲಾ ಚೆಲುವನಹಳ್ಳಿ

About The Author

1 thought on “ಮಾಲಾ ಚೆಲುವನಹಳ್ಳಿ ಅವರ ಹೊಸ ಕವಿತೆ”

Leave a Reply

You cannot copy content of this page

Scroll to Top