ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಉಕ್ಕಿ ಹರಿಯುತ್ತಿದ್ದಾಳೆ ಗಂಗೆ
ನಿಮ್ಮದೇ ಪಾಪ ಕೂಪಗಳ ಕಳೆಯಲೆಂದು

ಹಸಿದ ಹೊಟ್ಟೆಗೆ ಅನ್ನ ನೀಡದ
ನಿಮ್ಮ ಬೆಳೆಯ ಕೊಳೆಯ
ತೊಳೆಯಲೆಂದು

ಸಾಕುವ ನಾಯಿಗೆ ಮಾಡುವ
ನಿಮ್ಮ ಖರ್ಚು ಹೆತ್ತ ತಂದೆ ತಾಯಿಯರಿಗಿರಲೆಂದು

ತುಳಿದ ನಿಮ್ಮ ಪಾಪದ
ಪಾದದ ಕೊಳೆ ತೊಳೆದು ಬಿಡಲೆಂದು

ಮೂಕರೋಧನ ಅನಾಥ
ವೃದ್ಧ ಬಾಲ ಬಾಲೆಯರ
ಮೇಲೆ ನಿಮ್ಮ ಕರುಣೆ
ಪ್ರೀತಿಯಿರಲೆಂದು

ಮತಿಯಿಂದ ಮತಗೆಟ್ಟು
ಮತಿಭ್ರಮಣೆಯಲಿ
ಮೆರೆವ ನಿಮ್ಮ ಅಹಂಮಿಕೆಯನು
ತೊಲಗಿಸಲೆಂದು

ಎಚ್ಚೆತ್ತು ಕೋ ಓ ಮನುಜ
ದಿಕ್ಕು ತಪ್ಪಿ ಸಂಚರಿಸುವ
ಪ್ರವಾಹ ನಿಮ್ಮ ಮನೆಗೂ
ಬಂದಿತ್ತೂ ಎಚ್ಚರ

ಎಚ್ಚೆತ್ತು ಕೊಳ್ಳಿ ದೀನ ದುರ್ಬಲ
ಅನಾಥ ರಕ್ಷಕ ಆ ಭಗವಂತ ನ
ನಾಮಸ್ಮರಣೆ ಮಾಡಿ

ಕಳೆಯುವುದು ಪಾಪ
ನಡೆದಂತೆ ನುಡಿಧು ನುಡಿದಂತೆ ನಡೆದು ತೋರಿದ ಶರಣಕುಲಕ್ಕೆ
ಶರಣು ಶರಣೆನ್ನಿ ..


About The Author

Leave a Reply

You cannot copy content of this page

Scroll to Top