ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಋತುಚಕ್ರ ತಿರುಗಿ
ಬಂತು ಮುಂಗಾರು ಮಳೆ
ಬೀಜ ಬಿತ್ತುವುದಕೆ
ಹದಗೊಳಿಸಲಿಳೆ.

ಹಾತೊರೆದ ಭೂಮಿಯ
ಒಡಲಾಯ್ತು ಹಸಿಯು
ನಾಟಿಯನು ಮಾಡಲು
ಸರಿಯಾದ ತತಿಯು.

ಹದವಾದ ಭೂಮೀಲಿ
ಕೂರಿಗೆಯ ನೀ ಹೂಡು
ಮನಸಿಂದ ಕಸವ
ಕಳೆ ಕಿತ್ತಿ ಬಿಸಾಡು.

ಸಾಕಷ್ಟು ಕುದಿಯಲ್ಲೂ
ರೈತ ದಂಪತಿ ಮಾತು
ರಭಸದ ಮಳೆಯು
ಬೆಳೆಗೆ ಛೊಲೋ ಆತು.

ಕಚ ಪಚ ರಾಡೀಲಿ
ಹದವಾಗಿದೆ ಗದ್ದೆ
ಪೈರಿನ ಸಸಿಯನು
ನಾಟಿದವನೇ ಗೆದ್ದ.

ಸುಸಮಯದಿ ಮಳೆ
ಬಿತ್ತನೆಯಾದ ಇಳೆ
ಮೂರು ತಿಂಗಳ ಬೆಳೆ
ರಮಣಿಸುವ ಕಳೆ.

ಮಾಗಿದ ಫಲ ನೋಡಿ
ಬುತ್ತಿ ರೊಟ್ಟಿಯ ಮಾಡಿ
ಚರಗಾವ ಚೆಲ್ಲೋಣ
ಫಸಲಿಗೆ ಕಾಯೋಣ

—————————–

About The Author

Leave a Reply

You cannot copy content of this page

Scroll to Top