ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಡಾ ಶಶಿಕಾಂತ ಪಟ್ಟಣ

ನೂರು ನಮನ

ಹೆಣ್ಣು ನಕ್ಕಾಗಲೆ ಅಲ್ಲವೇ
ಮೋಡ ಜಡೆ ಬಿಚ್ಚಿ
 ಹೊಯ್ಯುವುದು ಮಳೆ
ಅವಳ ಮುಗುಳು ನಗೆ
ಮುಖದಲ್ಲಿ ಕಂಡಾಗಲೆ
ಭಯ ಭೀತಿಯ ಮೊಗ್ಗು
ಸಂತಸದಿ ಅರಳಿ ಹೂವಾಗುವುದು
ಅವಳ ಒಲುಮೆಯೆ
ಶಿವನ ಪ್ರಕಾಶ
ಹುಟ್ಟುವವು ನೂರು ಕನಸು
ಅವಳ ಮೃದು ಮನಸ್ಸು
ಅಂತೆಯೇ ಶರಣರು
ಸಾರಿ ಸಾರಿ ಹೇಳಿದರು
ಹೆಣ್ಣು ಹೆಣ್ಣಲ್ಲ  ಹೆಣ್ಣು ಸ್ವತಃ
 ಕಪಿಲ ಸಿದ್ಧ ಮಲ್ಲಿಕಾರ್ಜುನ
ಜಗವೇ ಮಣಿಯುವುದು
ಹೇ ತಾಯೆ ನಿನಗೆ
ಹಸಿರು ಹುಲ್ಲಿನ ನೆಲದೇವಿ
ನೂರು ನಮನ ನಿನಗೆ ಭೂರಮೆ
_________
ಡಾ ಶಶಿಕಾಂತ ಪಟ್ಟಣ ರಾಮದುರ್ಗ

About The Author

3 thoughts on “ಡಾ ಶಶಿಕಾಂತ ಪಟ್ಟಣ ಅವರ ಕವಿತೆ-ನೂರು ನಮನ”

Leave a Reply

You cannot copy content of this page

Scroll to Top