ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮುಗಿಲಿನ ಮಡಿಲಿನಲಿ
ಮಗ್ಗುಲು ಬದಲಿಸಿದ ರವಿ
ಕಣ್ಣು ಚಿವುಟಿದ ಕತ್ತಲೆಗೆ
ಚಂದ್ರ ಚಿಗುರುವ ಚಿತ್ರ ಬರೆದ ಕವಿ

ಹಗಲಿನ ಹೆಜ್ಜೆಗೊಮ್ಮೆ ಕೈ ತಾಕಿಸುವ
ಇರುಳಿನ ಗೆಜ್ಜೆಯ ನಾದ
ಮೈ ಮನ ಮರೆಯಲು ಬೇರುರುವ ಉನ್ಮಾದ
ಕರ್ಣಗಳಿಗೂ ಕಂಪು ಸವಿ
ಕಂಗಳಿಗೂ ತಂಪು ಸೈ ಏನಿಸುವ ಛವಿ

ಇರುಳಿನ ಚುಕ್ಕಿಗಳು ಬಿತ್ತರಿಸಿ ಚಿಮ್ಮಿದ ಚಿತ್ತಾರ
ಹಗಲಿನ ಬೊಗಸೆಗೆ ಹಿಡಿದಿಟ್ಟರ
ತಾಸಿನಲ್ಲೇ ಊರೆಲ್ಲ ಉಕ್ಕಿದವು,
ಭಾವಗಳ ಬೆರಳ ತಾಕಿಸಿದ ಮೋಡಗಳು

ತುಟಿಯಂಚಿನಲಿ ನಕ್ಕಳು ಭುವಿ
ದಿಗಿಲೆದ್ದ ಹೆಕ್ಕಿ ಹೆಣೆದ ಕನಸುಗಳು
ಹೆಗಲನೇರಿ ಹಾದಿ ಹಿಡಿದವು
ನಿದ್ದೆಯೊಂದು ತೊಟ್ಟು ಕೂತಾಗ ಕಾವಿ.


About The Author

1 thought on “ಮೀನಾಕ್ಷಿ ಹನಮಂತ ಓಲೇಕಾರ…ಅವರ ಕವಿತೆ ‘ಚಂದ್ರ ಚಿಗುರಿದ ಚಿತ್ರ….’”

Leave a Reply

You cannot copy content of this page

Scroll to Top